ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Self Harming: "ಸ್ವಾರಿ ಪಪ್ಪ" ತಾಯಿ ಹುಟ್ಟು ಹಬ್ಬದಂದೇ ಲೆಟರ್‌ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ ; ಓದಿದವರ ಮನಕಲಕುತ್ತೆ ಈ ಸ್ಟೋರಿ

ಇತ್ತೀಚಿಗಂತೂ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಸಿಲುಕಿ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ ಶರಣಾಗುವ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತ ಇರುತ್ತವೆ. ಇದೀಗ ಇಂತಹದ್ದೇ ಒಂದು ಪ್ರಕರಣ ಲಕ್ನೋದಲ್ಲಿ ವರದಿಯಾಗಿದ್ದು, ವಿದ್ಯಾರ್ಥಿಯೊಬ್ಬ "ಸ್ವಾರಿ ಪಪ್ಪ" ಎಂದು ಲೆಟರ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ತಾಯಿ ಹುಟ್ಟಿದ ಹಬ್ಬದಂದೇ  ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ

Profile Vishakha Bhat Jun 11, 2025 12:12 PM

ಲಖನೌ: ಇತ್ತೀಚಿಗಂತೂ ವಿದ್ಯಾರ್ಥಿಗಳು ಮಾನಸಿಕ ಒತ್ತಡಕ್ಕೆ ಸಿಲುಕಿ ಖಿನ್ನತೆಗೊಳಗಾಗಿ ಆತ್ಮಹತ್ಯೆಗೆ (Self Harming) ಶರಣಾಗುವ ಸುದ್ದಿಗಳು ಆಗಾಗ್ಗೆ ವರದಿಯಾಗುತ್ತ ಇರುತ್ತವೆ. ಇದೀಗ ಇಂತಹದ್ದೇ ಒಂದು ಪ್ರಕರಣ ಉತ್ತರ ಪ್ರದೇಶದ ಲಖನೌದಲ್ಲಿ ವರದಿಯಾಗಿದ್ದು, ವಿದ್ಯಾರ್ಥಿಯೊಬ್ಬ "ಸ್ವಾರಿ ಪಪ್ಪ" ಎಂದು ಲೆಟರ್‌ ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇನ್ನು ಮೃತ ವಿದ್ಯಾರ್ಥಿಯನ್ನು ವಾಸ್‌ದೇವ್‌ ಎಂದು ಗುರುತಿಸಲಾಗಿದ್ದು, ಗೋಮತಿ ನಗರದ ಬಿಬಿಡಿ ವಿಶ್ವವಿದ್ಯಾಲಯದ ಬಿಬಿಎ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕುಟುಂಬಸ್ಥರು ಹುಡುಗ ಮಾನಸಿಕವಾಗಿ ಖಿನ್ನತೆಗೊಳಗಾಗಿದ್ದ ಎಂದು ಹೇಳಿದ್ದಾರೆ.

ತನ್ನ ತಾಯಿಯ ಹುಟ್ಟಿದ ಹಬ್ಬವನ್ನು ಮುಗಿಸಿ ನಂತರ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಯ ಬಗ್ಗೆ ಸ್ಥಳೀಯ ಪೋಲಿಸರು ಮಾಹಿತಿ ನೀಡಿದ್ದು, ಮೃತ ವಿದ್ಯಾರ್ಥಿ ವಾಸುದೇವ್‌ ತಂದೆ ಚಂದನ್ ಮಲಿಕ್ ಪತ್ರಕರ್‌ಪುರಂ ನಿವಾಸಿಯಾಗಿದ್ದರೆ. ಅವರು ರಾಯ್‌ಬರೇಲಿ ರಸ್ತೆಯಲ್ಲಿ ಅನ್ನಪೂರ್ಣ ಕ್ರೀಡಾ ಅಕಾಡೆಮಿಯನ್ನು ನಡೆಸುತ್ತಿದ್ದಾರೆ. ಈ ಹಿಂದೆ ವಾಸುದೇವ್‌ಗೆ ಶಸ್ತ್ರ ಚಿಕಿತ್ಸೆಗೆ ಒಳಪಡಿಸಲಾಗಿತ್ತು. ಇದರಿಂದ ಚೇತರಿಸಿಕೊಳ್ಳದ ವಾಸುದೇವ್‌ ಖಿನ್ನತೆಗೆ ಒಳಗಾಗಿ ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಭಾನುವಾರ ವಾಸುದೇವ್‌ ತಾಯಿ ದೀಪ್ತಿಯವರ ಬರ್ತ್‌ ಡೇ ಇತ್ತು. ರಾತ್ರಿ 12 ಗಂಟೆಗೆ ವಾಸುದೇವ್‌ ತಾಯಿಯ ಬರ್ತ್‌ ಡೇಯಲ್ಲಿ ಭಾಗಿಯಾಗಿದ್ದ. ನಂತರ ಈ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ: Mass Shooting: ಆಸ್ಟ್ರಿಯನ್ ಶಾಲೆಯಲ್ಲಿ ಸಾಮೂಹಿಕ ಗುಂಡಿನ ದಾಳಿ: 10 ಮಂದಿ ಸಾವು, ಶೂಟರ್ ಆತ್ಮಹತ್ಯೆ

ಸೋಮವಾರ ವಾಸುದೇವ್‌ ತಂದೆ ಕೆಲಸಕ್ಕೆ ಹೋಗಿದ್ದರು. ತಾಯಿ ಇನ್ನೊಬ್ಬ ಮಗನ ಜೊತೆ ಹೊರಗೆ ಹೋಗಿದ್ದ ವೇಳೆ ಮನೆಯಲ್ಲಿ ವಾಸುದೇವ್‌ ಮನೆಯಲ್ಲಿ ಒಬ್ಬರೇ ಇದ್ದರು. ಸಂಜೆ ತಾಯಿ ಮನೆಗೆ ವಾಪಸ್‌ ಮರಳಿದಾಗ ಮನೆಯ ಡೋರ್‌ ಒಳಗಿನಿಂದ ಲಾಕ್‌ ಆಗಿದ್ದು, ಹಲವು ಬಾರಿ ಕೂಗಿದರು ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಆಗ ಅವರು ಪತಿ ಚಂದನ್‌ಗೆ ಫೋನ್‌ ಮಾಡಿ ವಿಷಯ ತಿಳಿಸಿದ್ದಾರೆ. ನಂತರ ಡೋರ್‌ ಲಾಕ್‌ ಮುರಿದು ಒಳಗೆ ಹೋಗಿ ನೋಡಿದಾಗ ವಾಸುದೇವ್‌ ಸೀಲಿಂಗ್‌ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡುಬಂದಿದೆ. ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಆದರೆ ಅದಕ್ಕೂ ಮುನ್ನ ಅವರು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇನ್ನು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಾಸುದೇವ್‌ ಸಾವಿನ ಬಳಿಕ ಆತನ ಮನೆಯಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.