Murder Case: ಹಳೇ ದ್ವೇಷಕ್ಕೆ ಒಂದೇ ಕುಟುಂಬದ ಆರು ಮಂದಿಯನ್ನು ಕೊಂದ ಪಾಪಿ; ಮರಣದಂಡನೆ ವಿಧಿಸಿದ ಕೋರ್ಟ್
ಒಂದೇ ಕುಟುಂಬದ ಆರು ಜನರ ಹತ್ಯೆ ಮಾಡಿದ್ದ ವ್ಯಕ್ತಿಯನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಶುಕ್ರವಾರ 50 ವರ್ಷದ ವ್ಯಕ್ತಿಗೆ ಮರಣದಂಡನೆ ವಿಧಿಸಿದೆ. ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಏಪ್ರಿಲ್ 15, 2021 ರಂದು ಈ ಕೊಲೆ ನಡೆದಿತ್ತು.


ಹೈದರಾಬಾದ್: ಒಂದೇ ಕುಟುಂಬದ ಆರು ಜನರ ಹತ್ಯೆ ಮಾಡಿದ್ದ ವ್ಯಕ್ತಿಯನ್ನು (Murder Case) ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯವು ಶುಕ್ರವಾರ 50 ವರ್ಷದ ವ್ಯಕ್ತಿಗೆ ಮರಣದಂಡನೆ ವಿಧಿಸಿದೆ. ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಏಪ್ರಿಲ್ 15, 2021 ರಂದು ಈ ಕೊಲೆ ನಡೆದಿತ್ತು. ಪೆಂಡುರ್ತಿ ಮಂಡಲದ ಜೂಥಡ ಗ್ರಾಮದ ಬೊಮ್ಮಿಡಿ ರಮಣ ಎಂಬವರ ಮನೆಗೆ ನುಗ್ಗಿದ ಬತ್ತಿನ ಅಪ್ಪಲರಾಜು, ಎರಡು ಕುಟುಂಬಗಳ ನಡುವಿನ ದೀರ್ಘಕಾಲದ ಭೂ ವಿವಾದದ ಹಿನ್ನೆಲೆಯಲ್ಲಿ ಅವರ ಕುಟುಂಬದ ಆರು ಸದಸ್ಯರನ್ನು ಕಡಿದು ಕೊಲೆ ಮಾಡಿದ್ದ. ಮೃತರಲ್ಲಿ ಬೊಮ್ಮಿಡಿ ರಮಣ (63), ಉಷಾರಾಣಿ (35), ಅಲ್ಲೂರಿ ರಮಾದೇವಿ (53), ನಕ್ಕೆಲ್ಲ ಅರುಣ (37), ಆರು ತಿಂಗಳ ಹಸುಳೆ ಹಾಗೂ ಎರಡು ವರ್ಷದ ಮಗು ಸೇರಿದ್ದಾರೆ.
ಕೊಲೆಗಳನ್ನು ಮಾಡಿದ ನಂತರ, ಅಪ್ಪಲರಾಜು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದನು. ಈ ಕೊಲೆಯನ್ನು ಅತ್ಯಂತ ಕ್ರೂರ ಎಂದು ಕರೆದಿದ್ದ ನ್ಯಾಯಾಲಯ, ಇಬ್ಬರು ಮಕ್ಕಳು ಸೇರಿದಂತೆ ಆರು ಜೀವಗಳನ್ನು ಬಲಿ ಪಡೆದಿದ್ದಕ್ಕಾಗಿ ಆತನಿಗೆ ಮರಣದಂಡನೆಯನ್ನು ವಿಧಿಸಿದೆ. ವಿವಿಧ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಏಳು ವರ್ಷಗಳವರೆಗೆ ಕಠಿಣ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಿತು.
ಪ್ರತ್ಯೇಕ ಪ್ರಕರಣದಲ್ಲಿ ಪತ್ನಿಯನ್ನು ಕೊಲೆ ಮಾಡಿ ಗೋಣಿ ಚೀಲದಲ್ಲಿ ತುಂಬಿದ್ದಲ್ಲದೇ ಸಾರಿಗೆ ವಾಹನದಲ್ಲಿ ಸಾಗಿಸಿ ಸಾಕ್ಷಿ ನಾಶಕ್ಕೆ ಯತ್ನಿಸಿ ಕಳೆದ 20 ವರ್ಷದಿಂದ ನಾಪತ್ತೆಯಾಗಿದ್ದ ಕೊಪ್ಪಳದ ಗಂಗಾವತಿಯ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿ ತೀರ್ಪು ನೀಡಿದೆ. ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ ಸದಾನಂದ ನಾಗಪ್ಪ ನಾಯಕ್, ಮಾನ್ವಿ ತಾಲೂಕಿನ ಅಲ್ದಾಳ್ ಗ್ರಾಮದ ನಿವಾಸಿ ಹಾಗೂ ಆರೋಗ್ಯ ಇಲಾಖೆಯ ನಿವೃತ್ತ ನೌಕರ 75 ವರ್ಷದ ಹನುಮಂತ ಹುಸೇನಪ್ಪಗೆ ಶಿಕ್ಷೆ ಪ್ರಕಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Physical Abuse: ಅಣ್ಣಾ ವಿಶ್ವವಿದ್ಯಾಲಯದ ಲೈಂಗಿಕ ದೌರ್ಜನ್ಯ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ ಪ್ರಕಟ
2002ರಲ್ಲಿ ಹನುಮಂತ ಹುಸೇನಪ್ಪ ತನ್ನ ಪತ್ನಿ ರೇಣುಕಮ್ಮರನ್ನು ಕೊಲೆ ಮಾಡಿ ಮೃತದೇಹ ತುಂಡರಿಸಿ ಗೋಣಿ ಚೀಲದಲ್ಲಿ ತುಂಬಿ ಸಾರಿಗೆ ಬಸ್ನಲ್ಲಿ ಹಾಕಿ ಕಳಿಸಿದ್ದ. ಈ ಪ್ರಕರಣ ಸಂಬಂಧ ಕೊಪ್ಪಳದ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆದು 2006ರಲ್ಲಿ ತೀರ್ಪು ಪ್ರಕಟವಾಗುವ ಸಂದರ್ಭದಲ್ಲಿ ಆರೋಪಿ ಹನುಮಂತ ಹುಸೇನಪ್ಪ ನಾಪತ್ತೆಯಾಗಿದ್ದ.