ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Robbery Case: ಬೆಂಗಳೂರಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ 2 ಕೋಟಿ ರೂ. ದರೋಡೆ

Robbery Case: ತಮ್ಮ ಹೊಸ ಕಂಪನಿಗೆ ಯಂತ್ರ ಖರೀದಿಗೆಂದು ಭಾರಿ ಮೊತ್ತದ ಹಣವನ್ನು ವಿದೇಶಕ್ಕೆ ಕಳಿಸಲು ಡಾಲರ್‌ಗೆ ಕನ್‌ವರ್ಟ್‌ ಮಾಡಲು ಬಂದಿದ್ದಾಗ ಖದೀಮರು ಚಾಕು ತೋರಿಸಿ ನಗದನ್ನು ದೋಚಿದ್ದಾರೆ. ಕೆಂಗೇರಿ ನಿವಾಸಿ ಶ್ರೀಹರ್ಷ ಎಂಬವರು ಎರಡು ಕೋಟಿ ರೂಪಾಯಿ ಹಣ ಕಳೆದುಕೊಂಡ ವ್ಯಕ್ತಿ.

ಬೆಂಗಳೂರಿನಲ್ಲಿ ವ್ಯಕ್ತಿಗೆ ಚಾಕುವಿನಿಂದ ಚುಚ್ಚಿ 2 ಕೋಟಿ ರೂ. ದರೋಡೆ

ಸಾಂದರ್ಭಿಕ ಚಿತ್ರ

ಹರೀಶ್‌ ಕೇರ ಹರೀಶ್‌ ಕೇರ Jun 27, 2025 10:37 AM

ಬೆಂಗಳೂರು: ಬೆಂಗಳೂರಿನಲ್ಲಿ ಹಾಡಹಗಲೇ ವ್ಯಕ್ತಿಯ ಕುತ್ತಿಗೆಗೆ ಚಾಕುವಿನಿಂದ ಇರಿಯುವ ಭಯ ಹುಟ್ಟಿಸಿ ಎರಡು ಕೋಟಿ ರೂಪಾಯಿ ದರೋಡೆ (Bengaluru Crime news) ಮಾಡಿರುವ ಘಟನೆ ಜೂನ್ 25ರಂದು ನಡೆದಿದೆ. ಬೆಂಗಳೂರಿನ ವಿದ್ಯಾರಣ್ಯಪುರಂನ ಎಂಎಸ್ ಪಾಳ್ಯದಲ್ಲಿ ಈ ಘಟನೆ ನಡೆದಿದೆ. USDTಗೆ ಹಣ ಕನ್ವರ್ಟ್ ಮಾಡಿಸಿಕೊಳ್ಳಲು ಬಂದಾಗ ಖದೀಮರು ಎರಡು ಕೋಟಿ ರೂಪಾಯಿ (Robbery case) ದೋಚಿದ್ದಾರೆ. ಕೆಂಗೇರಿ ನಿವಾಸಿ ಶ್ರೀಹರ್ಷ ಎಂಬವರು ಎರಡು ಕೋಟಿ ರೂಪಾಯಿ ಹಣ ಕಳೆದುಕೊಂಡ ವ್ಯಕ್ತಿ.

ಶ್ರೀಹರ್ಷ ಅವರ ಹೊಸ ಕಂಪನಿಗೆ ಜಪಾನ್‌ನಿಂದ ಒಂದು ಯಂತ್ರ ತರಿಸಿಕೊಳ್ಳಲು ಇತ್ತು. ಹೀಗಾಗಿ ಯುಎಸ್‌ಡಿಟಿಗೆ ಹಣ ಕನ್ವರ್ಟ್ ಮಾಡಿಸಲು ಶ್ರೀ ಹರ್ಷ ಮುಂದಾಗಿದ್ದರು. ಈ ವೇಳೆ ಸ್ನೇಹಿತರ ಮೂಲಕ ಬೆಂಜಮಿನ್ ಎಂಬಾತ ಪರಿಚಯ ಆಗಿದ್ದಾನೆ. ಜೂನ್ 25ರ ಮಧ್ಯಾಹ್ನ 3 ಗಂಟೆಗೆ ಶ್ರೀಹರ್ಷನನ್ನು ಬೆಂಜಮಿನ್ ಭೇಟಿ ಆಗಿದ್ದ. ಎ.ಕೆ ಎಂಟರ್ಪ್ರೈಸಸ್ ಶಾಪ್‌ನಲ್ಲಿ ಶ್ರೀಹರ್ಷ ಮತ್ತು ಬೆಂಜಮಿನ್ ಭೇಟಿಯಾಗಿದ್ದರು. ಬಳಿಕ ಬೆಂಜಮಿನ್ ಮತ್ತು ಇಬ್ಬರು ಸ್ನೇಹಿತರು ಹಣ ಎಣಿಕೆ ಮಾಡುತ್ತಿದ್ದರು.

ಈ ವೇಳೆ 6-7 ಅಪರಿಚಿತರ ಗುಂಪು ಏಕಾಏಕಿ ಶಾಪ್‌ಗೆ ನುಗ್ಗಿದೆ. ಚಾಕುವಿನಿಂದ ಶ್ರೀಹರ್ಷ ಮೇಲೆ ಹಲ್ಲೆ ನಡೆಸಿದ್ದಾರೆ. ಶ್ರೀಹರ್ಷ ಕುತ್ತಿಗೆಗೆ ಚಾಕು ಇಟ್ಟು ಬೆದರಿಸಿ ಎರಡು ಕೋಟಿ ಹಣ ದರೋಡೆ ಮಾಡಿದ್ದಾರೆ. ಎರಡು ಕೋಟಿ ರೂ. ನಗದು ಹಣವನ್ನು ಚೀಲದಲ್ಲಿ ತುಂಬಿಕೊಂಡು ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಶಾಪ್‌ನಲ್ಲಿದ್ದ ಶ್ರೀಹರ್ಷ ಮತ್ತು ಬೆಂಜಮಿನ್ ಹಾಗೂ ಅವರ ಸ್ನೇಹಿತರನ್ನು ಕೂಡಿಹಾಕಿ ಪರಾರಿಯಾಗಿದ್ದಾರೆ. ಶಾಪ್‌ನಿಂದ ಹೊರಬಂದ ಬಳಿಕ ಬೆಂಜಮೀನ್ ಮತ್ತು ಸ್ನೇಹಿತರು ಕೂಡ ನಾಪತ್ತೆಯಾಗಿದ್ದಾರೆ.

ಈ ಕುರಿತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆಗೆ ಶ್ರೀಹರ್ಷ ದೂರು ನೀಡಿದ್ದಾರೆ. ದರೋಡೆ ಕುರಿತಂತೆ ಬೆಂಜಮಿನ್ ಮತ್ತು ಸ್ನೇಹಿತರ ಕೈವಾಡವನ್ನು ಶಂಕಿಸಲಾಗಿದೆ. ಇವರ ವಿರುದ್ಧ ದೂರು ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: Police Firing: ದಿವ್ಯಾಂಗ ಮಹಿಳೆಗೆ ಲೈಂಗಿಕ ದೌರ್ಜನ್ಯ, ದರೋಡೆ: ಆರೋಪಿಯ ಕಾಲಿಗೆ ಗುಂಡು