ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UP Couple missing: ಇಂದೋರ್‌ ಕೇಸ್‌ ಬೆನ್ನಲ್ಲೇ ಹನಿಮೂನ್‌ಗೆ ಹೋಗಿದ್ದ ಮತ್ತೊಂದು ಜೋಡಿ ಮಿಸ್ಸಿಂಗ್‌! ಏನಿದು ಘಟನೆ?

ಮೇಘಾಲಯದಲ್ಲಿ ಇಂದೋರ್‌ ದಂಪತಿ ಮಿಸ್ಸಿಂಗ್‌ ಕೇಸ್‌ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ನಡುವೆಯೇ ಇದೀಗ ಮತ್ತೊಂದು ಹನಿಮೂನ್‌ ಜೋಡಿ ನಿಗೂಢವಾಗಿ ಕಣ್ಮರೆಯಾಗಿರುವ ಘಟನೆ ವರದಿಯಾಗಿದೆ. ಸಿಕ್ಕಿಂಗೆ ಹನಿಮೂನ್‌ಗೆಂದು ತೆರಳಿದ್ದ ಉತ್ತರ ಪ್ರದೇಶದ ದಂಪತಿ ಭಾರೀ ಅಪಘಾತದ ನಂತರ ಕಣ್ಮರೆಯಾಗಿದ್ದಾರೆ ಎನ್ನಲಾಗಿದೆ.

ಹನಿಮೂನ್‌ಗೆಂದು ಹೋಗಿದ್ದ ಯುಪಿ ದಂಪತಿಯೂ ಮಿಸ್ಸಿಂಗ್‌!

Profile Rakshita Karkera Jun 9, 2025 11:29 AM

ಸಿಕ್ಕಿಂ: ಉತ್ತರ ಪ್ರದೇಶದ ಪ್ರತಾಪಗಢ ಮೂಲದ ದಂಪತಿ ಹನಿಮೂನ್‌ಗಾಗಿ ಸಿಕ್ಕಿಂಗೆ ಹೋಗಿ ಕಾಣೆಯಾಗಿರುವ ಘಟನೆ(UP Couple missing) ವರದಿಯಾಗಿದೆ. ಭಾರಿ ಮಳೆಯ ಪರಿಣಾಮ ಪರ್ವತದ ರಸ್ತೆಯಲ್ಲಿ ಚಲಿಸುತ್ತಿದ್ದ ದಂಪತಿಯ ವಾಹನ ನಿಯಂತ್ರಣ ತಪ್ಪಿ ಟೀಸ್ಟಾ ನದಿಗೆ ಬಿದ್ದಿರುವ ದುರಂತ ಘಟನೆ ವರದಿಯಾಗಿದೆ. ಮೇ 5 ರಂದು ಮದುವೆಯಾಗಿದ್ದ ಕೌಶಲೇಂದ್ರ ಪ್ರತಾಪ್ ಸಿಂಗ್ ಮತ್ತು ಅಂಕಿತಾ ಸಿಂಗ್ ದಂಪತಿ, ಮೇ 24 ರಂದು ಸಿಕ್ಕಿಂಗೆ ಪ್ರಯಾಣ ಬೆಳೆಸಿದ್ದರು. ಮೇ 29ರ ರಾತ್ರಿ ಮಂಗನ್ ಜಿಲ್ಲೆಯ ಲ್ಯಾಂಡ್‌ಸ್ಲೈಡ್‌ ಪರ್ವತದಲ್ಲಿ ಪ್ರಯಾಣಿಸುತ್ತಿದ್ದ ದಂಪತಿಯ ವಾಹನ ಟೀಸ್ಟಾ ನದಿಗೆ ಬಿದ್ದಿದೆ. ಚುಂಗ್ಥಾಂಗ್‌ನಿಂದ ಗ್ಯಾಂಗ್ಟಾಕ್‌ಗೆ ಹೋಗುತ್ತಿದ್ದ ವೇಳೆ ಲಾಚೆನ್-ಲಾಚುಂಗ್ ಹೆದ್ದಾರಿಯ ಮುನ್ಸಿಥಾಂಗ್ ಬಳಿ ಈ ಘಟನೆ ಸಂಭವಿಸಿದೆ. ಇನ್ನು ಕಣ್ಮರೆಯಾಗಿರುವ ದಂಪತಿಯನ್ನು ಕೌಶಲೇಂದ್ರ ಹಾಗೂ ಅಂಕಿತಾ ಎಂದು ಗುರುತಿಸಲಾಗಿದೆ.

ಇನ್ನು ಈ ಬಗ್ಗೆ ಪೋಲಿಸರು ಮಾಹಿತಿ ಹಂಚಿಕೊಂಡಿದ್ದು, ವಾಹನದಲ್ಲಿ ಚಾಲಕ ಸೇರಿದಂತೆ ಒಟ್ಟು 12 ಜನರಿದ್ದರು. ವಾಹನ ಚಾಲಕ ಸ್ಥಳದಲ್ಲೇ ಸಾವೀಗೀಡಾಗಿದ್ದು, ಕೌಶಲೇಂದ್ರ ಹಾಗೂ ಅಂಕಿತಾ, ಬಿಜೆಪಿಯ ಒಡಿಶಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಇತಿಶ್ರೀ ಜೇನಾ ಸೇರಿದಂತೆ ಒಟ್ಟು ಎಂಟು ಜನ ಕಾಣೆಯಾಗಿದ್ದಾರೆ. ಇನ್ನುಳಿದ ಮೂವರು ಘಟನೆಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್‌ ಮೊರೆ ಹೋದ ಕುಟುಂಬಸ್ಥರು:

ವಿಷಯ ತಿಳಿದ ಕೂಡಲೇ ಕೌಶಲೇಂದ್ರನ ತಂದೆ ಶೇರ್ ಬಹದುರ್ ಸಿಂಗ್ ಮತ್ತು ಆರು ಮಂದಿ ಕುಟುಂಬಸ್ಥರು ಸಿಕ್ಕಿಂಗೆ ತೆರಳಿದ್ದು, ಸ್ಥಳೀಯ ಪೊಲೀಸರು, ಸೇನೆ ಮತ್ತು ರಕ್ಷಣಾ ಸಿಬ್ಬಂದಿಯೊಂದಿಗೆ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ವಿಡಿಯೊ ಹಂಚಿಕೊಂಡಿರುವ ಬಹದುರ್ ಸಿಂಗ್ ನನ್ನ ಮಗ ಮತ್ತು ಸೊಸೆ ಸಿಕ್ಕಿಂನಲ್ಲಿ ಕಾಣೆಯಾಗಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಸಿಕ್ಕಿಂ ಮುಖ್ಯಮಂತ್ರಿ ಬಳಿ ಹುಡುಕಾಟ ಕಾರ್ಯವನ್ನು ವೇಗವಾಗಿ ನಡೆಸಲು ಸೂಚನೆ ನೀಡುವಂತೆ ವಿನಂತಿಸುತ್ತೇನೆ, ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂಓದಿ: Indore Couple missing: ಇಂದೋರ್‌ ಜೋಡಿ ಮಿಸ್ಸಿಂಗ್‌ ಕೇಸ್‌ನಲ್ಲಿ ಮಹತ್ವದ ಸುಳಿವು; ಆ ದಿನ ಅವರ ಜೊತೆಗಿದ್ದ ಆ ಮೂವರು ಯಾರು?

ಸಿಕ್ಕಿಂ ಎಸ್‌ಪಿ ಸೋನಂ ಡೆಚು ಭುಟಿಯಾ ಈ ಬಗ್ಗೆ ಮಾಹಿತಿ ನೀಡಿದ್ದು, ವಾಹನ ಇನ್ನೂ ನದಿಯ ಮಣ್ಣನಲ್ಲಿಯೇ ಸಿಕ್ಕಿಹಾಕಿಕೊಂಡಿದೆ. ಪ್ರತಿಕೂಲ ವಾತಾವರಣ ಕಾರ್ಯಾಚರಣೆಗೆ ಅಡ್ಡಿಯನ್ನುಂಟು ಮಾಡಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಅರಣ್ಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಟಿಎಎಎಸ್ ಮತ್ತು ಪೊಲೀಸ್ ಸಿಬ್ಬಂದಿಯಿಂದ ಕಾರ್ಯಾಚರಣೆ ಮುಂದುವರೆದಿದೆ ಎಂದಿದ್ದಾರೆ.

ಇಂದೋರ್‌ ಮೂಲದ ದಂಪತಿ ಪ್ರಕರಣದಲ್ಲಿ ಬಿಗ್‌ ಟ್ವಿಸ್ಟ್‌

ಇನ್ನು ಈ ಹಿಂದೆ ಮೇಘಾಲಯದಲ್ಲಿ ಹನಿಮೂನ್‌ಗೆಂದು ಹೋಗಿ ಮೇ 23 ಕಾಣೆಯಾಗಿದ್ದ ಇಂದೋರ್‌ ಮೂಲದ ದಂಪತಿಯ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಜೂನ್ 2ರಂದು ವೈಸಾಡೋಂಗ್ ಜಲಪಾತದ ಬಳಿ ರಾಜ ರಘುವಂಶಿಯ ಶವ ಪತ್ತೆಯಾಗಿತ್ತು. ಪತ್ನಿ ಸೋನಂ ಹುಡಕಾಟಕ್ಕೆ ಖಾಕಿ ಪಡೆ ಕಾರ್ಯಚರಣೆ ಮುಂದುವರೆಸಿತ್ತು. ಇದೀಗ ಪ್ರಕರಣದಲ್ಲಿ ಮತ್ತೊಂದು ತಿರುವು ಕಂಡುಬಂದಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಪೊಲೀಸರು, ರಾಜ ರಘುವಂಶಿಯನ್ನು ಸ್ವತಃ ಪತ್ನಿ ಸೋನಂ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಳು ಎಂದು ತಿಳಿದುಬಂದಿದೆ. ಸದ್ಯ ಹಂತಕರನ್ನು ಅರೆಸ್ಟ್‌ ಮಾಡಲಾಗಿದೆ.