ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vijay Mallya: ನಾನು ಕಳ್ಳ ಅಲ್ಲ... ಆರೋಪಗಳಿಗೆ ಪಾಡ್‌ಕಾಸ್ಟ್‌ನಲ್ಲಿ ವಿಜಯ್‌ ಮಲ್ಯ ಉತ್ತರ

Vijay Mallya Podcaste: ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್‌ ಮಲ್ಯ ಇದೀಗ ಮೊದಲ ಬಾರಿಗೆ ಪಾಡ್‌ಕಾಸ್ಟ್‌ನಲ್ಲಿ ಭಾಗಿಯಾಗಿದ್ದಾರೆ. ಇತ್ತೀಚಿಗೆ ಉದ್ಯಮಿ ರಾಜ್ ಶಾಮ್‌ ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ, ತನ್ನ ವಿರುದ್ಧದ ಆರೋಪಗಳು, ಭಾರತದಿಂದ ಪರಾರಿ, ಕಾನೂನು ಹೋರಾಟ ಮತ್ತು ಕಿಂಗ್‌ಫಿಶರ್ ಏರ್ಲೈನ್ಸ್ ನಷ್ಟದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತಕ್ಕೆ ವಾಪಸಾಗ್ತಾರಾ ವಿಜಯ್‌ ಮಲ್ಯ?

Profile Rakshita Karkera Jun 6, 2025 1:51 PM

ಲಂಡನ್: ಭಾರತೀಯ ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ಪಂಗನಾಮ ಹಾಕಿ ವಿದೇಶಕ್ಕೆ ಎಸ್ಕೇಪ್‌ ಆಗಿರುವ ಉದ್ಯಮಿ ವಿಜಯ್‌ ಮಲ್ಯ(Vijay Mallya) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಭಾರತದಿಂದ ಎಸ್ಕೇಪ್‌ ಆಗಿ ಭೂಗತರಾಗಿದ್ದ ಮಲ್ಯ ಇದೀಗ ಮೊದಲ ಬಾರಿ ಪಾಡ್‌ಕಾಸ್ಟ್‌ ಕಾರ್ಯಕ್ರಮವೊಂದಲ್ಲಿ ಭಾಗಿಯಾಗಿದ್ದಾರೆ. ಉದ್ಯಮಿ ರಾಜ್ ಶಾಮ್‌ ಪಾಡ್‌ಕಾಸ್ಟ್‌ಗೆ ನೀಡಿದ ಸಂದರ್ಶನವೊಂದರಲ್ಲಿ, ತನ್ನ ವಿರುದ್ಧದ ಆರೋಪಗಳು, ಭಾರತದಿಂದ ಪರಾರಿ, ಕಾನೂನು ಹೋರಾಟ ಮತ್ತು ಕಿಂಗ್‌ಫಿಶರ್ ಏರ್ಲೈನ್ಸ್ ನಷ್ಟದ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ಭಾರತದ ಹಣಕಾಸಿನ ವ್ಯವಹಾರಗಳಲ್ಲಿ ಆರೋಪಿಯಾಗಿರುವ ವಿಜಯ್‌ ಮಲ್ಯ ಮಾರ್ಚ್ 2016 ರಲ್ಲಿ ಭಾರತದಿಂದ ವಿದೇಶಕ್ಕೆ ಪರಾರಿಯಾಗಿದ್ದರು. ಇದಾದ ನಂತರ ಮಲ್ಯ ಭಾರತಕ್ಕೆ ಹಿಂದಿರುಗಲಿಲ್ಲ. ಈ ಕುರಿತು ಮಾತನಾಡಿರುವ ಮಲ್ಯ ಮೊದಲೇ ನಿರ್ಧರಿಸಿದ್ದ ಕೆಲವೊಂದು ಕಾರ್ಯಕ್ರಮಗಳು ಇದ್ದ ಕಾರಣ ನಾನು ವಿದೇಶಕ್ಕೆ ತೆರಳಿದ್ದೆ. ಈಗ ಪುನಃ ಭಾರತಕ್ಕೆ ನಾನು ಹಿಂದಿರುಗದಿರುವುದಕ್ಕೆ ನನ್ನದೇ ಆದ ಕಾರಣಗಳಿವೆ. ಆದರೆ ನನ್ನನ್ನು ʻಕಳ್ಳʼ ಅಂತ ಯಾಕೆ ಕರೆಯುತ್ತಾರೆ? ನಾನು ಕೇವಲ ಆರ್ಥಿಕ ಅಪರಾಧಿ ಅಷ್ಟೇ.. ಕಳ್ಳ ಅಲ್ಲ... ನಾನೇನು ಕಳ್ಳತನ ಮಾಡಿದ್ದೇನೆ ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ.

ಇನ್ನು 2016 ರಿಂದ ಯುಕೆನಲ್ಲಿ ನೆಲೆಸಿರುವ ಮಲ್ಯ, ವಿದೇಶದಲ್ಲಿ ನೆಲೆಸಿರುವುದರಿಂದ ತಮಗೆ ಕಾನೂನಿನ ಸಂಕಷ್ಟಗಳನ್ನು ಎದುರಿಸುವ ಪರಿಸ್ಥಿತಿ ಎದುರಾಯಿತೆ ಎನ್ನುವ ಪ್ರಶ್ನೆಗೆ ಉತ್ತರಿಸಿ, "ನನಗೆ ನ್ಯಾಯಾಲಯದ ವಿಚಾರಣೆ ಮತ್ತು ಬದುಕಿನ ಮೇಲೆ ಭರವಸೆ ಇಲ್ಲ," ಎಂದಿದ್ದಾರೆ.

ಭಾರತಕ್ಕೆ ಮಲ್ಯ ಮರಳಿ ಬರಲಿದ್ದರಾ?

ಭಾರತಕ್ಕೆ ಹಿಂದಿರುಗುವ ಬಗ್ಗೆ ರಾಜ್ ಶಾಮ್‌ ಪ್ರಶ್ನೆಗೆ ಉತ್ತರಿಸಿದ ಮಲ್ಯ " ಅಂತಹ ಸಮಯ ಸಂದರ್ಭ ಬಂದರೆ ಯೋಚಿಸಿ ನಿರ್ಧರಿಸುತ್ತೇನೆ " ಎಂದು ಹೇಳಿದ್ದಾರೆ. ನನ್ನ ವಿರುದ್ಧಇಂಗ್ಲೆಂಡಿನ ಹೈಕೋರ್ಟ್‌ನಲ್ಲಿ ಇನ್ನೊಂದು ಪ್ರಕರಣ ದಾಖಲಾಗಿದ್ದು, ಅದು ವಿಚಾರಣೆ ಹಂತದಲ್ಲಿದೆ. ಇನ್ನು ಇದೇ ವೇಳೆ ಅವರು ಭಾರತೀಯ ಜೈಲು ನಿಯಮಗಳು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯಾಗಿವೆ ಎಂಬ ತೀರ್ಪನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸಿದ್ದಾರೆ.

ಮಲ್ಯ ಪಾಡ್‌ಕಾಸ್ಟ್‌ ವಿಡಿಯೊ ಇಲ್ಲಿದೆ



ಕಿಂಗ್‌ಫಿಶರ್ ಏರ್ಲೈನ್ಸ್‌ ಅಧಃಪತನ

2008ರಲ್ಲಿ ಉಂಟಾದ ಜಾಗತಿಕ ಆರ್ಥಿಕ ಬಿಕ್ಕಟ್ಟು ಕಿಂಗ್‌ಫಿಶರ್ ಏರ್ಲೈನ್ಸ್‌ನ ಸೋಲಿಗೆ ಪ್ರಮುಖ ಕಾರಣ ಎಂದು ಮಲ್ಯ ಹೇಳಿದ್ದು, "ಲೇಹ್‌ಮಾನ್ ಬ್ರದರ್ಸ್‌ ಬಗ್ಗೆ ಕೇಳಿದ್ದೀರಾ? ಆ ಬಿಕ್ಕಟ್ಟು ಭಾರತವನ್ನು ಹೊಡೆಯಲಿಲ್ಲವೇ? ಅದರಿಂದ ಎಲ್ಲಾ ಕ್ಷೇತ್ರಗಳಿಗೂ ಹೊಡೆತವಾಯಿತು, ಒಂದು ರೂಪಾಯಿಗೆ ಇದ್ದ ಮೌಲ್ಯ ಕುಸಿಯಿತು. ಅಂದಿನ ಹಣಕಾಸು ಸಚಿವ ಪ್ರಣಬ್ ಮುಖರ್ಜಿಯವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದೆ. ನಾನು ವಿಮಾನಗಳ ಸಂಖ್ಯೆ ಕಡಿಮೆ ಮಾಡಿ, ನೌಕರರ ಸಂಖ್ಯೆಯೂ ಕಡಿಮೆಯಾಗುತ್ತದೆ ಎಂದು ಅಭಿಪ್ರಾಯಪಟ್ಟೆ, ಆದರೆ ಅವರು ಬೇಡ ಬ್ಯಾಂಕ್‌ಗಳು ನಿಮಗೆ ಬೆಂಬಲ ನೀಡುತ್ತವೆ ಎಂದು ಹೇಳಿದ್ದರು ಎಂದು ತಿಳಿಸಿದರು.

ಈ ಸುದ್ದಿಯನ್ನೂ ಓದಿ: Vijay Mallya: ನಾನು ಆರ್‌ಸಿಬಿ ಸ್ಥಾಪಿಸಿದಾಗ; ಭಾವುಕ ಪೋಸ್ಟ್‌ ಹಂಚಿಕೊಂಡ ವಿಜಯ್‌ ಮಲ್ಯ

ಮಲ್ಯ ಕಾನೂನು ಹೋರಾಟ:

ಭಾರತೀಯ ಬ್ಯಾಂಕ್‌ಗಳಲ್ಲಿ ಬರೋಬ್ಬರಿ 11,101 ಕೋಟಿ ಸಾಲ ಪಡೆದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಲ್ಯ ಇತ್ತೀಚೆಗ ಲಂಡನ್‌ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಕೋರ್ಟ್‌ ಅವರ ವಿರುದ್ಧ ತೀರ್ಪು ಪ್ರಕಟಿಸಿತ್ತು. ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಮಲ್ಯಾ, "ಬ್ಯಾಂಕ್‌ಗಳು ಈಗಾಗಲೇ ನನ್ನ 14,000 ಕೋಟಿ ಮೌಲ್ಯದ ಆಸ್ತಿಗಳನ್ನು ವಶಪಡಿಸಿಕೊಂಡಿವೆ. ಮೂಲ ಸಾಲವು 6,200 ಕೋಟಿ ಮಾತ್ರ ಬಾಕಿ ಇದೆ" ಎಂದು ಹೇಳಿದ್ದರು. ಈ ಕುರಿತು ನ್ಯಾಯಮೂರ್ತಿ ಆರ್. ದೇವದಾಸ್ ನೇತೃತ್ವದ ಪೀಠವು ಸಂಬಂಧಿತ ಬ್ಯಾಂಕುಗಳಿಗೆ ಹಾಗೂ ಹಣ ವಸೂಲಿ ಅಧಿಕಾರಿಗಳಿಗೆ ನೋಟಿಸ್ ನೀಡಿದೆ. ಇವೆಲ್ಲದರ ನಡುವೆಯೂ, ಭಾರತ ಸರ್ಕಾರ ವಿಜಯ್ ಮಲ್ಯರನ್ನು ಭಾರತಕ್ಕೆ ತರುವ ಕಾರ್ಯವನ್ನು ಮುಂದುವರೆಸಿದೆ.