ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fraud case: ಮಗುವಿಗೆ ಜ್ವರ; ದೆವ್ವದ ಕಥೆ ಹೇಳಿ ಮಹಿಳೆಗೆ 17 ಲಕ್ಷ ವಂಚಿಸಿದ ಜ್ಯೋತಿಷಿ!

Bagalkot News: ಮಗುವಿಗೆ ಜ್ವರ ಬರಲು ದೆವ್ವ ಕಾರಣ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಜ್ಯೋತಿಷಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಈ ಬಗ್ಗೆ ಮೋಸ ಹೋದ ಮಹಿಳೆ, ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮಗುವಿಗೆ ಜ್ವರ; ದೆವ್ವದ ಕಥೆ ಹೇಳಿ ಮಹಿಳೆಗೆ 17 ಲಕ್ಷ ವಂಚಿಸಿದ ಜ್ಯೋತಿಷಿ!

Profile Prabhakara R Jun 14, 2025 10:21 PM

ಬಾಗಲಕೋಟೆ: ಮಗುವಿಗೆ ಜ್ವರ ಬರಲು ದೆವ್ವ ಕಾರಣ ಎಂದು ನಂಬಿಸಿ ಮಹಿಳೆಯೊಬ್ಬರಿಗೆ ಜ್ಯೋತಿಷಿ ಲಕ್ಷಾಂತರ ರೂಪಾಯಿ ವಂಚಿಸಿರುವುದು ಜಿಲ್ಲೆಯಲ್ಲಿ ನಡೆದಿದೆ. ಮಗುವಿಗೆ ಆಗಾಗ ಜ್ವರ ಕಾಡುತ್ತಿದ್ದರಿಂದ ತಾಯಿಯು, ಜ್ಯೋತಿಷಿ ಮೊರೆ ಹೋಗಿದ್ದರು. ಪೂಜೆ ಮಾಡಿಸಿದರೆ, ಜ್ವರ ಕಡಿಮೆಯಾಗುವುದಾಗಿ ನಂಬಿಸಿದ್ದ ಜ್ಯೋತಿಷಿ 17 ಲಕ್ಷ ರೂ. ಪಡೆದು ವಂಚಿಸಿದ್ದಾನೆ. ಜಿಲ್ಲೆಯ ಮಹಿಳೆ ವಂಚನೆಗೊಳಗಾಗಿದ್ದು(Fraud case), ನ್ಯಾಯಕ್ಕಾಗಿ ಬಾಗಲಕೋಟೆಯ ಸೈಬರ್ ಕೈಂ ಠಾಣೆಗೆ ದೂರು ನೀಡಿದ್ದಾರೆ.

ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿರುವ 28 ವರ್ಷದ ಮಹಿಳೆಗೆ 2 ವರ್ಷದ ಮಗುವಿದೆ. ಮಗುವಿಗೆ ಆಗಾಗ ಜ್ವರ ಕಾಣಿಸಿಕೊಳ್ಳುತ್ತಿತ್ತು. ವೈದ್ಯರ ಬಳಿ ಚಿಕಿತ್ಸೆ ಕೊಡಿಸಿದರೂ ಜ್ವರ ಕಡಿಮೆಯಾಗಿರಲಿಲ್ಲ. ಈ ಬಗ್ಗೆ ಮಹಿಳೆ ತನ್ನ ಸ್ನೇಹಿತೆಗೆ ತಿಳಿಸಿದ್ದರು. ಆಗ ಸ್ನೇಹಿತೆ, ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮಹಿಳಾ ಜ್ಯೋತಿಷಿಯೊಬ್ಬರು ಇದ್ದಾರೆ. ಅವರ ಮೈಯಲ್ಲಿ ದೇವರು ಬರುತ್ತಾರೆ. ಅವರನ್ನು ಸಂಪರ್ಕಿಸಿದರೆ ಜ್ವರ ಕಡಿಮೆಯಾಗುತ್ತದೆ ಎಂದು ಸಲಹೆ ನೀಡಿದ್ದಾರೆ.

ಮಗುವಿನ ತಾಯಿ ಮೊಬೈಲ್ ಮೂಲಕ ಜ್ಯೋತಿಷಿಯನ್ನು ಸಂಪರ್ಕಿಸಿದ್ದಾರೆ. ಈ ವೇಳೆ ನಿಮ್ಮ ಕುಟುಂಬದವರೊಬ್ಬರು ದೆವ್ವವಾಗಿದ್ದಾರೆ. ನಿನ್ನ ಮಗು ಹಾಗೂ ಕುಟುಂಬದವರಿಗೆ 2 ವರ್ಷ ಕಾಡುತ್ತಾರೆ. ದೆವ್ವ ಓಡಿಸಲು ವಿಶೇಷ ಪೂಜೆ ಮಾಡಬೇಕು ಎಂದು ಜ್ಯೋತಿಷಿ ಹೇಳಿದ್ದಾರೆ. ಜ್ಯೋತಿಷಿ ಮಾತು ನಂಬಿದ ಮಹಿಳೆ ಮೊದಲು 1 ಲಕ್ಷ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಪ್ರತಿ ದಿನ ಕರೆ ಮಾಡುತ್ತಿದ್ದ ಜ್ಯೋತಿಷಿ, ಜ್ವರ ಕಡಿಮೆಯಾಯಿತಾ ಎಂದು ಪ್ರಶ್ನಿಸಿದ್ದಾರೆ. ಬೆಳಗ್ಗೆ ಕಾಣಿಸಿಕೊಳ್ಳುತ್ತಿದ್ದ ಜ್ವರ ಸಂಜೆ ಕಡಿಮೆಯಾಗುತ್ತಿತ್ತು. ಹೀಗಾಗಿ ಮಹಿಳೆ ಜ್ವರ ಕಡಿಮೆಯಾಗಿದೆ ಎಂದಿದ್ದಾರೆ.

ಮತ್ತಷ್ಟು ಹಣ ಹಾಕಿದರೆ ಪೂಜೆ ಮಾಡುತ್ತೇನೆ ಎಂದ ಜ್ಯೋತಿಷಿ ಹೇಳಿ ಆಗಾಗ ಹಣಹಾಕಿಸಿಕೊಂಡಿದ್ದಾರೆ. ಇತ್ತ ಮಗು ಹುಷಾರಾಗದಿದ್ದಾಗ ಮಹಿಳೆಗೆ ಅನುಮಾನ ಬಂದು ವಿಚಾರಿಸಿದಾಗ ಸಮರ್ಪಕ ಉತ್ತರ ದೊರೆತಿಲ್ಲ. ಆಗ ಮಹಿಳೆ ಬಾಗಲಕೋಟೆಯ ಸೈಬರ್ ಕೈಂ ಠಾಣೆಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಜ್ಯೋತಿಷಿಗಾಗಿ ಶೋಧನೆ ಆರಂಭಿಸಿದ್ದಾರೆ.

ವಿಚಿತ್ರವೆಂದರೆ ಮೋಸ ಹೋದ ಮಹಿಳೆ ಈವರೆಗೂ ಜ್ಯೋತಿಷಿಯನ್ನು ಭೇಟಿ ಮಾಡಿಲ್ಲ. ಕೇವಲ ಮೊಬೈಲ್‌ನಲ್ಲಿ ಮಾತನಾಡಿ, ಮೋಸ ಹೋಗಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ರಾಜ್ಯದಲ್ಲಿ ಮತ್ತೆ ಗೋವಿನ ಮೇಲೆ ಕಿಡಿಗೇಡಿತನ, ಕೆಚ್ಚಲು ಕೊಯ್ದು ವಿಕೃತಿ

ಬಾಗಲಕೋಟೆ: ರಾಜ್ಯದಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ (shocking News) ನಡೆದಿದ್ದು, ಮಲಗಿದ್ದ ಹಸುವಿನ ಕೆಚ್ಚಲು (Udder) ಕೊಯ್ದು ಕಿಡಿಗೇಡಿಗಳು ವಿಕೃತಿ (Crime news) ಮೆರೆದ ಘಟನೆ ನಡೆದಿದೆ. ಬಾಗಲಕೋಟೆಯ (Bagalakote news) ಕುಳಗೇರಿ ಕ್ರಾಸ್ ಎಂಬಲ್ಲಿ ಈ ಘಟನೆ ನಡೆದಿದ್ದು, ಕುಳಗೇರಿ ಗ್ರಾಮದ ಭರಮಪ್ಪ ಕುರಿ ಎಂಬವರು ಸಾಕಿದ ಹಸುವಿನ (cow) ಕೆಚ್ಚಲು ಕೊಯ್ದು ಕಿಡಿಗೇಡಿಗಳು ವಿಕೃತಿ ಮೆರೆದಿದ್ದಾರೆ. ಹಸುವಿಗೆ ಚಿಕಿತ್ಸೆ ಕೊಡಿಸಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಈ ಸುದ್ದಿಯನ್ನೂ ಓದಿ | Mobile Addiction: ರಾಜ್ಯದಲ್ಲಿ 99% ಮಕ್ಕಳಲ್ಲಿ ಮೊಬೈಲ್‌ ಗೀಳು, 42% ಮಕ್ಕಳಿಗೆ ಆನ್‌ಲೈನ್‌ ಲೈಂಗಿಕ ದೌರ್ಜನ್ಯ

ಹಸುವಿನ ಕೆಚ್ಚಲಿನಿಂದ ರಕ್ತಸ್ರಾವ ಆಗುತ್ತಿರುವುದನ್ನು ಗಮನಿಸಿದ ಭರಮಪ್ಪ ಅವರು ತಕ್ಷಣವೇ ಹಸುವನ್ನು ಪಶು ಆಸ್ಪತ್ರೆಗೆ ಸಾಗಿಸಿದ್ದಾರೆ. ಘಟನೆ ನಡೆದ ವ್ಯಾಪ್ತಿಯ ಕುಳಗೇರಿ ಉಪಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಈ ಹಿಂದೆಯೂ ರಾಜ್ಯದಲ್ಲಿ ಹಲವು ಕಡೆ ಇದೇ ರೀತಿ ಹಸುವಿನ ಕೆಚ್ಚಲನ್ನು ಕೊಯ್ದ, ವಿನಾಕಾರಣ ಗಾಯಗೊಳಿಸಿದ ವಿಕೃತಿಗಳು ನಡೆದಿವೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಇಂಥ ಘಟನೆ ನಡೆದು ರಾಜ್ಯಾದ್ಯಂತ ಸುದ್ದಿಯಾಗಿತ್ತು.