ಚರ್ಮರೋಗ ಚಿಕಿತ್ಸೆಯಲ್ಲಿ ನಕಲಿ ವೈದ್ಯರ ಹಾವಳಿ: ಎಚ್ಚರ ವಹಿಸುವಂತೆ ಐಎಡಿವಿಎಲ್ ಕರ್ನಾಟಕ ಘಟಕ ಮನವಿ
ದಂತ ವೈದ್ಯರು, ಬ್ಯೂಟಿಷಿಯನ್ಗಳು, ಬ್ಯೂಟಿ ಪಾರ್ಲರ್ಗಳು, ನಕಲಿ ಕಾಸ್ಮೆಟಾಲಜಿಸ್ಟ್ಗಳು, ತರಬೇತಿ ಇಲ್ಲದ ತಂತ್ರಜ್ಞರು ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯಲ್ಲದ ಕೆಲವು ವೈದ್ಯರು ಕೂದಲು ಕಸಿ [ಕೂದಲು ಪ್ರತಿರೋಪಣ] ಲೇಸರ್ ಚಿಕಿತ್ಸೆ, ಇಂಜೆಕ್ಷನ್ಗಳು ಹಾಗೂ ಇತರ ಸೌಂದರ್ಯ ಚರ್ಮ ಚಿಕಿತ್ಸೆಗಳಂತಹ ಸಂಕೀರ್ಣ ವಿಧಾನಗಳನ್ನು ಸೂಕ್ತ ವೈದ್ಯಕೀಯ ತರಬೇತಿ ಇಲ್ಲದೇ ಮಾಡುತ್ತಿರುವುದು ಹೆಚ್ಚುತ್ತಿದೆ
-
ಬೆಂಗಳೂರು; ಭಾರತೀಯ ಚರ್ಮರೋಗ ತಜ್ಞರು, ಲೈಂಗಿಕ ರೋಗ ತಜ್ಞರು ಮತ್ತು ಕುಷ್ಟ ರೋಗ ತಜ್ಞರ ಸಂಘ – ಕರ್ನಾಟಕ ಐಎಡಿವಿಎಲ್ ಇಂದು ಚರ್ಮರೋಗ ಚಿಕಿತ್ಸೆ, ಕೂದಲು ಕಸಿ ಹಾಗೂ ಸೌಂದರ್ಯ ಚಿಕಿತ್ಸೆಗಳ ಕ್ಷೇತ್ರದಲ್ಲಿ ವೇಗವಾಗಿ ಹೆಚ್ಚುತ್ತಿರುವ ನಕಲಿ ವೈದ್ಯರು ಹೆಚ್ಚುತ್ತಿರುವ ಬಗ್ಗೆ ಗಂಭೀರ ಆತಂಕ ವ್ಯಕ್ತಪಡಿಸಿದೆ. ಇದು ರೋಗಿಗಳ ಸುರಕ್ಷತೆಗೆ ದೊಡ್ಡ ಅಪಾಯವಾಗುತ್ತಿದೆ ಎಂದು ಸಂಘ ಎಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷೆ ಡಾ.ಸವಿತಾ ಎ.ಎಸ್., ಮಾಜಿ ಅಧ್ಯಕ್ಷರಾದ ಡಾ. ವೆಂಕರಾಮ್ ಮೈಸೂರು ಮತ್ತು ಡಾ. ಬಿ.ಎಸ್. ಚಂದ್ರಶೇಖರ್, ಅಧ್ಯಕ್ಷರಾಗಿ ಆಯ್ಕೆಯಾದ ಡಾ. ಜಗದೀಶ್ ಪಿ, ಕಾನೂನು ಸಮಿತಿ ಅಧ್ಯಕ್ಷ ಡಾ. ಅಕ್ಷಯ್ ಸಮಾಗಾಣಿ, ಹಿರಿಯ ಚರ್ಮರೋಗ ತಜ್ಞ ಡಾ.ಎಂ.ಎಸ್.ಗಿರೀಶ್ ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ: Doctors Strike: ನಾಳೆಯಿಂದ ರಾಜ್ಯಾದ್ಯಂತ ವೈದ್ಯರ ಮುಷ್ಕರ, ಸರ್ಕಾರಿ ಆಸ್ಪತ್ರೆಗಳ ಒಪಿಡಿ ಬಂದ್
ಸರ್ಕಾರಿ ವೈದ್ಯಕೀಯ ಸಿಬ್ಬಂದಿಗಳ ಹೋರಾಟಕ್ಕೆ ಐಎಡಿವಿಎಲ್ ನೈತಿಕ ಬೆಂಬಲ ಸೂಚಿಸಿದರು.
ದಂತ ವೈದ್ಯರು, ಬ್ಯೂಟಿಷಿಯನ್ಗಳು, ಬ್ಯೂಟಿ ಪಾರ್ಲರ್ಗಳು, ನಕಲಿ ಕಾಸ್ಮೆಟಾಲಜಿಸ್ಟ್ಗಳು, ತರಬೇತಿ ಇಲ್ಲದ ತಂತ್ರಜ್ಞರು ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯಲ್ಲದ ಕೆಲವು ವೈದ್ಯರು ಕೂದಲು ಕಸಿ [ಕೂದಲು ಪ್ರತಿರೋಪಣ] ಲೇಸರ್ ಚಿಕಿತ್ಸೆ, ಇಂಜೆಕ್ಷನ್ಗಳು ಹಾಗೂ ಇತರ ಸೌಂದರ್ಯ ಚರ್ಮ ಚಿಕಿತ್ಸೆಗಳಂತಹ ಸಂಕೀರ್ಣ ವಿಧಾನಗಳನ್ನು ಸೂಕ್ತ ವೈದ್ಯಕೀಯ ತರಬೇತಿ ಇಲ್ಲದೇ ಮಾಡುತ್ತಿರುವುದು ಹೆಚ್ಚುತ್ತಿದೆ ಎಂದು ಆತಂಕ ವ್ಯಕ್ತಪಡಿಸಿ ದರು.
ಇಂತಹ ನಕಲಿ ವೈದ್ಯರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಂಡಿಲ್ಲ. ಓವರ್-ದಿ-ಕೌಂಟರ್ ಔಷಧಿಗಳ ಅನಿಯಂತ್ರಿತ ಬಳಕೆ ಹಾಗೂ ಔಷಧಿಗಳ ಆನ್ಲೈನ್ ಮಾರಾಟವು ಸಮಾಜದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಿದರು.
ಇತ್ತೀಚೆಗೆ ಮಾಧ್ಯಮಗಳಲ್ಲಿ ವರದಿಯಾದ ದುರ್ಘಟನೆಗಳ ಕುರಿತು ಸಂಘ ಗಂಭೀರ ಕಳವಳ ವ್ಯಕ್ತಪಡಿಸಿದೆ. ದಂತ ವೈದ್ಯರು ನಡೆಸಿದರೆಂದು ಹೇಳಲಾಗುತ್ತಿರುವ ಕೂದಲು ಪ್ರತಿರೋಪಣ ಶಸ್ತ್ರಚಿಕಿತ್ಸೆಯ ನಂತರ ಇಬ್ಬರು ಎಂಜಿನಿಯರ್ಗಳು ಮೃತಪಟ್ಟ ಘಟನೆಗಳು ಅನಧಿಕೃತ ಚಿಕಿತ್ಸೆಯಿಂದ ಉಂಟಾಗುವ ಜೀವಾಪಾಯದ ಅಪಾಯವನ್ನು ತೋರಿಸುತ್ತವೆ ಎಂದು ಹೇಳಿದರು.
ಕೂದಲು ಕಸಿ ಮತ್ತು ಸೌಂದರ್ಯ ಚರ್ಮ ಚಿಕಿತ್ಸೆಗಳು ಆಧುನಿಕ ವೈದ್ಯಕೀಯದಲ್ಲಿ ಹಾಗೂ ಚರ್ಮ ಶಸ್ತ್ರಚಿಕಿತ್ಸೆಯಲ್ಲಿ ವಿಶಿಷ್ಟ ತರಬೇತಿ ಅಗತ್ಯವಾಗಿದೆ. ಆದ್ದರಿಂದ ಇಂತಹ ಚಿಕಿತ್ಸೆಯನ್ನು ಕೇವಲ ಅರ್ಹತೆ ಹೊಂದಿದ ಹಾಗೂ ನೋಂದಾಯಿತ ವೈದ್ಯರು—ಚರ್ಮ ರೋಗ ತಜ್ಞರು ಮತ್ತು ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಕರು—ಮಾತ್ರ ಮಾಡಬೇಕು ಎಂದು ಹೇಳಿದೆ.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಸಾರ್ವಜನಿಕ ಪ್ರಕಟಣೆ ಹೊರಡಿಸಿ ಓರಲ್ ಮತ್ತು ಮ್ಯಾಕ್ಸಿಲೋಫೇಷಿಯಲ್ ಶಸ್ತ್ರಚಿಕಿತ್ಸಕರಿಗೆ ಕೂದಲು ಪ್ರತಿರೋಪಣ ಮತ್ತು ಕೆಲವು ಸೌಂದರ್ಯ ಚಿಕಿತ್ಸೆಗಳು ಮಾಡಲು ಅವಕಾಶ ನೀಡಿರುವುದು ಸರಿಯಲ್ಲ. ಚರ್ಮರೋಗ ತಜ್ಞರ ಸಂಘಟನೆಗಳ ಅಭಿಪ್ರಾಯದಲ್ಲಿ ಇದು ಅವರ ಶಿಕ್ಷಣ ವ್ಯಾಪ್ತಿಗೂ ಹಾಗೂ ಕಾನೂನು ಅಧಿಕಾರಕ್ಕೂ ಮೀರಿದೆ. ಈ ಹಿನ್ನೆಲೆಯಲ್ಲಿ ಚರ್ಮರೋಗ ತಜ್ಞರು ಮದ್ರಾಸ್ ಹಾಗೂ ಬಾಂಬೆ ಉಚ್ಚ ನ್ಯಾಯಾಲಯಗಳಲ್ಲಿ ಈ ತೀರ್ಮಾನವನ್ನು ಪ್ರಶ್ನಿಸಿದ್ದೇವೆ ಎಂದರು.
ಐಎಡಿವಿಎಲ್-ಕೆಎನ್ ಕಳೆದ ವರ್ಷ ನಡೆಸಿದ “ನಕಲಿ ವೈದ್ಯ ಮುಕ್ತ ಭಾರತ” ಅಭಿಯಾನದ ಫಲಿತಾಂಶಗಳನ್ನೂ ಉಲ್ಲೇಖಿಸಿದೆ. ಈ ಅಭಿಯಾನದಲ್ಲಿ ಕರ್ನಾಟಕದಾದ್ಯಂತ ಜಿಲ್ಲಾಧಿ ಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ 450ಕ್ಕೂ ಹೆಚ್ಚು ದೂರುಗಳನ್ನು ಸಲ್ಲಿಸಲಾಗಿದ್ದು, ಅನಧಿಕೃತ ಕ್ಲಿನಿಕ್ಗಳ ಮೇಲೆ ಹಲವಾರು ದಾಳಿ ಕಾರ್ಯಾಚರಣೆಗಳು ನಡೆದಿವೆ. ಆದರೆ ಕೆಲವು ಕೇಂದ್ರಗಳು ಮೇಲ್ವಿಚಾರಣೆ ಮಾಡುವ ವೈದ್ಯರ ಅನುಮಾನಾ ಸ್ಪದ “ಘೋಸ್ಟ್” ಪ್ರಮಾಣಪತ್ರಗಳನ್ನು ಬಳಸಿ ಮತ್ತೆ ಕಾರ್ಯಾಚರಣೆ ಆರಂಭಿಸಿರುವುದಾಗಿ ತಿಳಿದು ಬಂದಿದೆ ಎಂದರು.
ಈ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಅರ್ಹ ಚರ್ಮರೋಗ ತಜ್ಞರನ್ನು ಗುರುತಿಸಲು ಒಂದು ಕ್ಯೂಆರ್ ಕೋಡ್ ಕೂಡ ಬಿಡುಗಡೆ ಮಾಡಲಾಗಿದೆ. ಸಂಘವು ಮುಖ್ಯವಾಗಿ ಸರ್ಕಾರಿ ವೈದ್ಯರ ವಿಷಯವನ್ನೂ ಬೆಂಬಲಿಸುತ್ತದೆ ಎಂದು ತಿಳಿಸಿದೆ.
ಐಎಡಿವಿಎಲ್-ಕೆಎನ್ ಸರ್ಕಾರವನ್ನು ಅನಧಿಕೃತ ಸೌಂದರ್ಯ ಕ್ಲಿನಿಕ್ಗಳ ವಿರುದ್ಧ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದು, ಯಾವುದೇ ಚರ್ಮರೋಗ ಅಥವಾ ಸೌಂದರ್ಯ ಚಿಕಿತ್ಸೆಗೆ ಮೊದಲು ವೈದ್ಯರ ಅರ್ಹತೆ ಮತ್ತು ಮೆಡಿಕಲ್ ಕೌನ್ಸಿಲ್ ನೋಂದಣಿ ಪರಿಶೀಲಿಸುವಂತೆ ಸಾರ್ವಜನಿಕರಿಗೆ ಸಲಹೆ ನೀಡಿದೆ.
IADVL-KN ಸರ್ಕಾರವನ್ನು ಅನಧಿಕೃತ ಕಾಸ್ಮೆಟಿಕ್ ಕ್ಲಿನಿಕ್ಗಳ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಂತೆ ಮನವಿ ಮಾಡಿದ್ದು, ಸಾರ್ವಜನಿಕರು ಯಾವುದೇ ಚರ್ಮ ಅಥವಾ ಅಲಂಕಾ ರಿಕ ಚಿಕಿತ್ಸೆ ಪಡೆಯುವ ಮೊದಲು ವೈದ್ಯರ ಅರ್ಹತೆ ಮತ್ತು ರಾಜ್ಯ ವೈದ್ಯಕೀಯ ಮಂಡಳಿಯ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದೆ.