Chinthamani News: ಭಕ್ತಿಯಿಂದ ಅಂತರಂಗದ ಶುದ್ಧಿ ಸಾಧ್ಯ: ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಮತ
ಕಣ್ಣಿನ ಗುಡ್ಡೆಗಳನ್ನು ಕಣ್ಣರೆಪ್ಪೆಯು ಹೇಗೆ ರಕ್ಷಿಸುತ್ತದೋ ಆ ರೀತಿಯಲ್ಲಿ ಪರಮಾತ್ಮನ ನಾಮಸ್ಮರಣೆ ಯು ನಮ್ಮನ್ನು ರಕ್ಷಿಸುತ್ತದೆ. ಕೈವಾರ ತಾತಯ್ಯನವರು ರಾಮನಾಮ ಪಠಣೆಗೆ ಒತ್ತನ್ನು ನೀಡಿದ್ದಾರೆ. ಮಾನವರ ಪೂರ್ವ ಕರ್ಮ ಗಳ ನಾಶಕ್ಕಾಗಿ ರಾಮನಾಮವನ್ನು ಪಠಿಸಬೇಕೆಂದು ಸದ್ಗುರುಗಳಾದ ಕೈವಾರ ತಾತಯ್ಯ ನವರು ಹೇಳಿದ್ದಾರೆ. ಇದನ್ನು ಮನಗಂಡು ಧರ್ಮಾಧಿಕಾರಿಗಳು ಶ್ರೀರಾಮಕೋಟಿ ಯನ್ನು ಆಯೋಜಿಸಿದ್ದಾರೆ. ಪ್ರತಿ ಮಾಸದಲ್ಲಿಯೂ ಈ ಕಾರ್ಯಕ್ರಮ ಮಾಡುವ ಚಿಂತನೆಯಿದೆ

ಮಾನವ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಭಕ್ತಿಯಿಂದ ಅಂತರಂಗದ ಶುದ್ಧಿಯನ್ನು ಮಾಡಿಕೊಳ್ಳಬೇಕು. ಅಂತರAಗದ ಶುದ್ಧಿಯೇ ಶ್ರೇಷ್ಠ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಚಿಂತಾಮಣಿ: ಮಾನವ ಜನ್ಮದ ಶ್ರೇಷ್ಠತೆಯನ್ನು ಅರಿತುಕೊಂಡು ಭಕ್ತಿಯಿಂದ ಅಂತರಂಗದ ಶುದ್ಧಿ ಯನ್ನು ಮಾಡಿಕೊಳ್ಳಬೇಕು. ಅಂತರಂಗದ ಶುದ್ಧಿಯೇ ಶ್ರೇಷ್ಠ ಎಂದು ಕೈವಾರ ಕ್ಷೇತ್ರದ ಧರ್ಮಾಧಿ ಕಾರಿ ಡಾ||ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.
ಶ್ರೀಕ್ಷೇತ್ರ ಕೈವಾರದ ಗವಿಯ ಬಳಿಯ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಶ್ರೀರಾಮಭವತಾರಕ ಮಂತ್ರದ ಶ್ರೀರಾಮಕೋಟಿ ಜಪಯಜ್ಞವನ್ನು ಉದ್ಘಾಟಿಸಿ ಮಾತನಾಡಿದರು.
ಸದ್ಗುರು ಕೈವಾರ ತಾತಯ್ಯನವರು ಯೋಗಿವರ್ಯರಾಗಿ ಶ್ರೀರಾಮಭವತಾರಕ ಮಂತ್ರವನ್ನು ಮಾನವರ ಉದ್ಧಾರಕ್ಕಾಗಿ ನೀಡಿದ್ದಾರೆ. ಮಾನಸಿಕ ಶಾಂತಿ, ನೆಮ್ಮದಿಯನ್ನು ಪಡೆಯಲು ಈ ಮಂತ್ರವನ್ನು ಭಕ್ತಿಯಿಂದ ಪಠಿಸಬೇಕು. ಪರಸ್ಪರ ಪ್ರೀತಿ, ಸೌಹಾರ್ದತೆ ಬೆಳೆಯುತ್ತದೆ. ಮಾನವರಲ್ಲಿ ಆತ್ಮಸಾಮರಸ್ಯ ಮತ್ತು ಸಮಭಾವನೆ ಬಹಳ ಮುಖ್ಯವಾದುದು ಎಂದರು.
ಇದನ್ನೂ ಓದಿ: Chikkaballapur News: ಈ ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಿಕ್ಷಣ ಕೊಡಿಸಿ ಬಾಳು ಬೆಳಗಿ: ನ್ಯಾ.ಬಿ.ಶಿಲ್ಪ
ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್ ರವರು ಪ್ರಸ್ತಾವಿಕವಾಗಿ ಮಾತನಾಡಿ, ಕಣ್ಣಿನ ಗುಡ್ಡೆಗಳನ್ನು ಕಣ್ಣರೆಪ್ಪೆ ಯು ಹೇಗೆ ರಕ್ಷಿಸುತ್ತದೋ ಆ ರೀತಿಯಲ್ಲಿ ಪರಮಾತ್ಮನ ನಾಮಸ್ಮರಣೆಯು ನಮ್ಮನ್ನು ರಕ್ಷಿಸುತ್ತದೆ. ಕೈವಾರ ತಾತಯ್ಯನವರು ರಾಮನಾಮ ಪಠಣೆಗೆ ಒತ್ತನ್ನು ನೀಡಿದ್ದಾರೆ. ಮಾನವರ ಪೂರ್ವ ಕರ್ಮ ಗಳ ನಾಶಕ್ಕಾಗಿ ರಾಮನಾಮವನ್ನು ಪಠಿಸಬೇಕೆಂದು ಸದ್ಗುರುಗಳಾದ ಕೈವಾರ ತಾತಯ್ಯ ನವರು ಹೇಳಿದ್ದಾರೆ. ಇದನ್ನು ಮನಗಂಡು ಧರ್ಮಾಧಿಕಾರಿಗಳು ಶ್ರೀರಾಮಕೋಟಿಯನ್ನು ಆಯೋಜಿಸಿ ದ್ದಾರೆ. ಪ್ರತಿ ಮಾಸದಲ್ಲಿಯೂ ಈ ಕಾರ್ಯಕ್ರಮವನ್ನು ಮಾಡುವ ಚಿಂತನೆಯಿದೆ ಎಂದರು.
ಮೊದಲಿಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಶ್ರೀಯೋಗಿನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ನಂತರ ಗವಿಯ ಬಳಿಗೆ ಭಕ್ತರು ಬಂದರು. ಗವಿ ಯಾಗಶಾಲೆಯಲ್ಲಿರುವ ಶ್ರೀಗಣಪತಿ, ಮಹಾಲಕ್ಷ್ಮೀ, ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿ ನಾರೇ ಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಶ್ರೀರಾಮಕೋಟಿ ನಡೆಯುವ ಸ್ಥಳದಲ್ಲಿ ವಿಶೇಷ ವೇದಿಕೆಯನ್ನು ಹಾಕಲಾಗಿತ್ತು. ಆ ವೇದಿಕೆಯಲ್ಲಿ ಶ್ರೀರಾಮರ ಹಾಗೂ ಕೈವಾರ ತಾತಯ್ಯನವರ ಭಾವಚಿತ್ರಗಳನ್ನು ಹಾಗೂ ಮಧ್ಯದಲ್ಲಿ ದೀಪಸ್ತಂಭ ವನ್ನು ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿಗಳು ದೀಪವನ್ನು ಬೆಳಗುವುದರ ಮೂಲಕ ರಾಮ ಕೋಟಿ ಜಪಯಜ್ಞಕ್ಕೆ ಚಾಲನೆಯನ್ನು ನೀಡಿದರು.
ರಾಮಕೋಟಿಯನ್ನು ಅಖಂಡ ೨೪ ಗಂಟೆಗಳ ಕಾಲ ನಿರಂತರವಾಗಿ ಮಾಡಲಾಯಿತು.
ಶ್ರೀಯೋಗಾನರಸಿಂಹಸ್ವಾಮಿ ತಂಡ, ಶ್ರೀಅಮರನಾರೇಯಣಸ್ವಾಮಿ ತಂಡ, ಶ್ರೀಮಹಾಲಕ್ಷ್ಮೀ ತಂಡಗಳೆಂದು ಮೂರು ತಂಡಗಳನ್ನು ಮಾಡಲಾಗಿತ್ತು. ಒಂದು ಗಂಟೆಗೆ ಒಂದು ತಂಡವು “ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವಾ, ರಾಮ ದಶರಥ ತನಯ ದೇವಾ ರಾಮಶ್ರೀ ನಾರೇಯಣ” ಎಂಬ ಶ್ರೀರಾಮಭವತಾರಕ ಮಂತ್ರವನ್ನು ಪಠಿಸುತ್ತಾ, ತಾಳ ಹಾಕುತ್ತಾ, ಶ್ರೀರಾಮರ ವೇದಿಕೆಯ ಸುತ್ತಲೂ ಹೆಜ್ಜೆ ಹಾಕುತ್ತಾ ಭಕ್ತಿಯಿಂದ ಪಠಿಸುತ್ತಿದ್ದರು.
ಕಾರ್ಯಕ್ರಮದಲ್ಲಿ ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಗಳಾದ ಆರ್.ಪಿ.ಎಂ.ಸತ್ಯನಾರಾಯಣ್, ಟ್ರಸ್ಟಿಗಳಾದ ಕೆ.ನರಸಿಂಹಪ್ಪ, ಸುರೇಶ್ ಹಾಗೂ ವಿವಿಧ ಭಾಗಗಳಿಂದ ಬಂದ ಭಕ್ತರು ಭಾಗವಹಿಸಿದ್ದರು.