ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಬಳ್ಳಾಪುರ

ಅವಳಿ ಜಿಲ್ಲೆಗೆ ಸಚಿವ ಸ್ಥಾನ ಕೈತಪ್ಪಿದ ನಿರಾಸೆ; ಅಭಿವೃದ್ಧಿ ಕನಸಿಗೂ ಹಿನ್ನಡೆಯ ಆತಂಕ

'ಕೈʼ ನ ಏಳು ಶಾಸಕರಿದ್ದರೂ ಸಂಪುಟದಲ್ಲಿ ಪ್ರಾತಿನಿಧ್ಯ ಇಲ್ಲ: ಪ್ರತಿಭಟನೆ

ಇನ್ನು ಕೋಲಾರ ಜಿಲ್ಲೆಯ ಬಂಗಾರಪೇಟೆ ಶಾಸಕ ಎಸ್.ಎನ್. ನಾರಾಯಣಸ್ವಾಮಿ ಅವರು ಸಚಿವ ಸ್ಥಾನ ಕೈತಪ್ಪಿದ ಬಗ್ಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿ, ಪಕ್ಷದ ಹಿರಿಯ ನಾಯಕರ ವಿರುದ್ಧವೇ ಆರೋಪ ಮಾಡಿದ್ದಾರೆ. ಇದರಿಂದ ಕಾಂಗ್ರೆಸ್‌ನ ಆಂತರಿಕ ಅಸಮಾಧಾನವೂ ಬಹಿರಂಗ ಗೊಂಡಿದೆ.

Chikkaballapur News: 50 ದಿನ ಪೂರೈಸಿದ ಸಿಂಗಾಡಿ ಕದಿರೇನಹಳ್ಳಿ ಭೂ ಹೋರಾಟ: ಅರಣ್ಯ ಇಲಾಖೆಗೆ ಮುಂಭಾಗ ಸಂತ್ರಸ್ಥರ ಆಕ್ರೋಶ

50 ದಿನ ಪೂರೈಸಿದ ಸಿಂಗಾಡಿ ಕದಿರೇನಹಳ್ಳಿ ಭೂ ಹೋರಾಟ

ನಗರ ಹೊರವಲಯ ಸೂಲಾಲಪ್ಪನ ದಿನ್ನೆಯ ಬಳಿಯಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿ ಕಾರಿಗಳ ಕಚೇರಿ ಎದುರು ಕಳೆದ 50 ದಿನಗಳಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸುತ್ತಿರುವ ಅನಿರ್ಧಿಷ್ಠಾವಧಿ ಹೋರಾಟವು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಗೆ ತೆರಳದಂತೆ ಬಾಗಿಲಿಗೆ ಅಡ್ಡಕುಳಿತು ತೀವ್ರ ಆಕ್ರೋಶ ಹೊರಹಾಕಿದರು.

Chikkaballapur News: ಹಿರಿಯರು ಸಮಾಜದ ಅನುಭವದ ಸಂಪತ್ತು; ಗೌರವವೇ ಭಾರತೀಯ ಸಂಸ್ಕೃತಿಯ ಜೀವಾಳ: ನ್ಯಾ. ಟಿ.ಪಿ. ರಾಮಲಿಂಗೇಗೌಡ

ಹಿರಿಯರು ಸಮಾಜದ ಅನುಭವದ ಸಂಪತ್ತು

ಭಾರತೀಯ ಸಂಸ್ಕೃತಿಯ ಮೂಲ ಮೌಲ್ಯಗಳನ್ನು ಉಲ್ಲೇಖಿಸಿದ ಅವರು, "ಮಾತೃದೇವೋಭವ, ಪಿತೃದೇವೋಭವ, ಆಚಾರ್ಯದೇವೋಭವ" ಎಂಬ ಸಂದೇಶಗಳು ಕೇವಲ ಉಲ್ಲೇಖಗಳಲ್ಲ; ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನ ಮೌಲ್ಯಗಳಾಗಿವೆ ಎಂದು ಹೇಳಿದರು. ಹಿರಿಯರ ಅನುಭವ, ಜ್ಞಾನ ಮತ್ತು ಮಾರ್ಗದರ್ಶನದಿಂದ ಸಮಾಜ ಸದೃಢವಾಗಿ ಬೆಳೆಯುತ್ತದೆ. ಆದ್ದರಿಂದ ಅವರನ್ನು ಗೌರವದಿಂದ ಕಾಣುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ

Chikkaballapur News: ಉದ್ಯೋಗ, ಶಿಕ್ಷಣದ ಹೆಸರಿನ ವಂಚನೆಗೆ ಎಚ್ಚರ; ಮಾನವ ಕಳ್ಳಸಾಗಣಿಕೆ ತಡೆಗೆ ಸಮೂಹ ಜಾಗೃತಿ ಅಗತ್ಯ

ವಿದ್ಯಾರ್ಥಿಗಳು ಅನುಮಾನಾಸ್ಪದ ಚಟುವಟಿಕೆಗಳ ಬಗ್ಗೆ ತಕ್ಷಣ ಮಾಹಿತಿ ನೀಡಬೇಕು

ವಿಶ್ವ ಮಾನವ ಕಳ್ಳಸಾಗಣಿಕೆ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಜಿಲ್ಲಾ ವಕೀಲರ ಸಂಘದ ಸಂಯುಕ್ತ ಆಶ್ರಯ ದಲ್ಲಿ ನಗರದ ಎಸ್‌ಜೆಸಿಐಟಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Chikkaballapur News: ಕರ್ತವ್ಯಕ್ಕೆ ವಿದಾಯ ಸೇವೆಗೆ ನಮನ

ಕರ್ತವ್ಯಕ್ಕೆ ವಿದಾಯ ಸೇವೆಗೆ ನಮನ

ಪೊಲೀಸ್ ಸೇವೆ ಎಂದರೆ ಕೇವಲ ಒಂದು ಉದ್ಯೋಗವಲ್ಲ, ಸಮಾಜದ ನೆಮ್ಮದಿಗಾಗಿ ತನ್ನ ವೈಯ ಕ್ತಿಕ ಸುಖ-ದುಃಖಗಳನ್ನು ಬದಿಗೊತ್ತಿ ಸಲ್ಲಿಸುವ ತ್ಯಾಗದ ಬದುಕು. ಆ ಬದುಕಿನ ಪಯಣವನ್ನು ಯಶಸ್ವಿ ಯಾಗಿ ಪೂರ್ಣಗೊಳಿಸಿರುವ ಎಂ. ವೇಣುಗೋಪಾಲ ಅವರ ಸೇವೆ ಸಹೋದ್ಯೋಗಿಗಳಿಗೆ ಸದಾ ಮಾದರಿ ಯಾಗಿರಲಿದೆ.

Bangalore News: ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ: ಡಾ.ಟಿ.ಎಸ್.ಸತ್ಯವತಿ ಅವರಿಗೆ ಸನ್ಮಾನ ಹಾಗೂ ಕೈಲಾಸ ಮಾನಸ ಸರೋವರ ದರ್ಶನ

ಶ್ರೀ ಪ್ರಸನ್ನ ವೀರಾಂಜನೇಯ ಯೋಗ ಕೇಂದ್ರದಲ್ಲಿ ಅದ್ದೂರಿ ಕಾರ್ಯಕ್ರಮ

ಕಾರ್ಯಕ್ರಮದ ಆರಂಭದಲ್ಲಿ "ದೀಪಂ ಜ್ಯೋತಿ ಪರಬ್ರಹ್ಮ" ಎಂಬ ಮಂಗಳಗೀತೆಯ ನಡುವೆ ಸಂಗೀತ ವಿದ್ವಾಂಸರಾದ ಡಾ.ಟಿ.ಎಸ್.ಸತ್ಯವತಿ ಹಾಗೂ ಹಿರಿಯ ಆಡಳಿತಾಧಿಕಾರಿ ಶ್ರೀ ಸಿ.ವಿ.ಗೋಪಿನಾಥ್ ಅವರು ಸಾಂಪ್ರದಾಯಿಕವಾಗಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪಸ್ಥಿತರಿದ್ದ ಗಣ್ಯರು ಹಾಗೂ ಯೋಗಸಾಧಕರು ಈ ಶುಭ ಕ್ಷಣಕ್ಕೆ ಸಾಕ್ಷಿಯಾದರು.

Chikkaballapur News: ನಿಸ್ವಾರ್ಥ ಪ್ರೇಮವೇ ಧರ್ಮ; ಹಸಿವು-ಬಡತನ ನಿರ್ಮೂಲನೆಗೆ ಸೇವೆಯೇ ಮಾರ್ಗ: ಸದ್ಗುರು ಮಧುಸೂದನ ಸಾಯಿ

ನಿಸ್ವಾರ್ಥ ಪ್ರೇಮವೇ ಧರ್ಮ; ಹಸಿವು-ಬಡತನ ನಿರ್ಮೂಲನೆಗೆ ಸೇವೆಯೇ ಮಾರ್ಗ

ಪ್ರಪಂಚ ಇಂದು ವಿಜ್ಞಾನದಲ್ಲಿ ಚಂದ್ರಲೋಕ ತಲುಪಿದರೂ ಹಸಿವು ಮತ್ತು ಬಡತನವನ್ನು ಸಂಪೂರ್ಣವಾಗಿ ನಿವಾರಿಸಲು ಸಾಧ್ಯವಾಗದಿರುವುದು ವಿಷಾದನೀಯ. ಈ ನಿಟ್ಟಿನಲ್ಲಿ ಶ್ರೀಮಂತರ ಮನೋಭಾವ ಪರಿವರ್ತನೆಗೊಳಿಸಿ ನಿರ್ಗತಿಕರಿಗೆ ನೆರವಾಗುವ ಉದ್ದೇಶದಿಂದ 'ಫೀಡ್ ದ ವರ್ಲ್ಡ್' ಕಾರ್ಯಕ್ರಮ ಆರಂಭಿಸಲಾಗಿದೆ

Chikkaballapur News: ಅಂಬೇಡ್ಕರ್ ವಿಚಾರಗಳ ಅನುಷ್ಠಾನವೇ ದೇಶದ ಪ್ರಗತಿಗೆ ಮಾರ್ಗ: ಯಶ್ವಂತ್ ಅಂಬೇಡ್ಕರ್

ಅಂಬೇಡ್ಕರ್ ವಿಚಾರಗಳ ಅನುಷ್ಠಾನವೇ ದೇಶದ ಪ್ರಗತಿಗೆ ಮಾರ್ಗ

ಡಾ. ಅಂಬೇಡ್ಕರ್ ಅವರ ಕನಸು ಕೇವಲ ಸಂವಿಧಾನ ರಚನೆಯಷ್ಟೇ ಅಲ್ಲ; ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಮಾನವ ಘನತೆಯನ್ನು ಪ್ರತಿಯೊಬ್ಬ ನಾಗರಿಕನಿಗೂ ತಲುಪಿಸುವುದಾಗಿತ್ತು. ಇಂದಿನ ಯುವಜನತೆ ಶಿಕ್ಷಣವನ್ನು ಶಕ್ತಿಯನ್ನಾಗಿ ಮಾಡಿಕೊಂಡು ವೈಜ್ಞಾನಿಕ ಮನೋಭಾವ, ಪ್ರಶ್ನಿಸುವ ಗುಣ ಮತ್ತು ಸಂವಿಧಾನದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

Chikkaballapur News: ಟಿಕೆಟ್‌ಗಾಗಿ ಅಲ್ಲ, ಜನಸೇವೆಯೇ ನನ್ನ ಸಂಕಲ್ಪ: ಸಂದೀಪ್ ಬಿ. ರೆಡ್ಡಿ

ಟಿಕೆಟ್‌ಗಾಗಿ ಅಲ್ಲ, ಜನಸೇವೆಯೇ ನನ್ನ ಸಂಕಲ್ಪ: ಸಂದೀಪ್ ಬಿ. ರೆಡ್ಡಿ

ಪಕ್ಷದಲ್ಲಿ ಅನೇಕ ಹಿರಿಯ ನಾಯಕರು ಇದ್ದಾರೆ. ಕೆಲವೊಮ್ಮೆ ಹೆಸರು ಪ್ರಸ್ತಾಪವಾಗದಿದ್ದರೂ ಅದನ್ನು ದೊಡ್ಡ ವಿಷಯವಾಗಿ ಪರಿಗಣಿಸುವುದಿಲ್ಲ. ಸೂಕ್ತ ಸಮಯ ಬಂದಾಗ ಪಕ್ಷದ ವರಿಷ್ಠರು ಯಾರಿಗೆ ಅವಕಾಶ ನೀಡಬೇಕೆಂದು ತೀರ್ಮಾನಿಸುತ್ತಾರೆ. ಅದನ್ನು ಎಲ್ಲರೂ ಗೌರವಿಸಬೇಕು ಎಂದು ಹೇಳಿದರು.

Chikkaballapur News: ಗ್ರಾಮೀಣರ ಆರೋಗ್ಯವೇ ಮೊದಲ ಆದ್ಯತೆ, ರಾಜಕಾರಣಕ್ಕೆ ಎರಡನೇ ಸ್ಥಾನ

ಉಚಿತ ಆರೋಗ್ಯ ತಪಾಸಣೆಗೆ ಜನಸಾಗರ; ಗ್ರಾಮೀಣರ ಆರೋಗ್ಯ ಕಾಳಜಿಗೆ ಹೊಸ ಹೆಜ್ಜೆ

ಶಿಬಿರದಲ್ಲಿ ಸಾಮಾನ್ಯ ವೈದ್ಯಕೀಯ, ನೇತ್ರ, ದಂತ, ಹೃದಯ, ಮೂಳೆ ಮತ್ತು ಕೀಲು, ಮಧುಮೇಹ, ರಕ್ತದೊತ್ತಡ, ರ್ಚಂರೋಗ ಸೇರಿದಂತೆ ವಿವಿಧ ವಿಭಾಗಗಳ ತಜ್ಞ ವೈದ್ಯರು ಸಾರ್ವಜನಿಕರನ್ನು ಪರೀಕ್ಷಿಸಿ, ಮುಂದಿನ ಚಿಕಿತ್ಸೆಗೆ ಅಗತ್ಯ ಸಲಹೆಗಳನ್ನು ನೀಡಿದರು. ಆರೋಗ್ಯ ಜಾಗೃತಿ ಮೂಡಿಸುವ ಸಲುವಾಗಿ ಜೀವನಶೈಲಿ ಬದಲಾವಣೆ, ಪೌಷ್ಟಿಕ ಆಹಾರ ಹಾಗೂ ಕಾಯಿಲೆ ತಡೆ ಕುರಿತು ಅರಿವು ಮೂಡಿಸಲಾಯಿತು.

Chikkaballapur News: ಆ.2ರಂದು 9 ಕೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್‌ʼಸ್ಟೇಬಲ್‌ ಪರೀಕ್ಷೆ: ಅಕ್ರಮಕ್ಕೆ 12 ವರ್ಷ ಜೈಲು, 15 ಲಕ್ಷ ದಂಡ: ಜಿಲ್ಲಾಧಿಕಾರಿ ಎಚ್ಚರಿಕೆ

ಆ.2ರಂದು 9 ಕೇಂದ್ರಗಳಲ್ಲಿ ಸಿವಿಲ್ ಪೊಲೀಸ್ ಕಾನ್‌ʼಸ್ಟೇಬಲ್‌ ಪರೀಕ್ಷೆ

ಜಿಲ್ಲೆಯಲ್ಲಿ ಒಟ್ಟು 4526 ಅಭ್ಯರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಬೆಳಗ್ಗೆ 10.30 ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಕಡ್ಡಾಯವಾಗಿ ಬೆಳಗ್ಗೆ 8 ಗಂಟೆ ಯೊಳಗೆ ಪರೀಕ್ಷಾ ಕೇಂದ್ರ ತಲುಪಬೇಕು. ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶ ನೀಡಲಾಗುತ್ತದೆ

Chikkaballapur News: ವ್ಯಸನ ಮುಕ್ತ ಸಮಾಜಕ್ಕಾಗಿ ಆರೋಗ್ಯಕರ ಬದುಕು ಅಳವಡಿಸಿಕೊಳ್ಳಿ: ಎಸ್‌ಪಿ ಕುಶಲ್ ಚೌಕ್ಸೆ ಅಭಿಮತ

ವ್ಯಸನ ಮುಕ್ತ ಸಮಾಜಕ್ಕಾಗಿ ಆರೋಗ್ಯಕರ ಬದುಕು ಅಳವಡಿಸಿಕೊಳ್ಳಿ

ಚಿಕ್ಕಬಳ್ಳಾಪುರ ತಾಲ್ಲೂಕಿನ ಗುವ್ವಲಕಾನಹಳ್ಳಿಯ ಸೇಟ್ ದಿನ್ನೆ ಸಮೀಪದ ಶ್ರೀನಿವಾಸ್ ಸಪ್ಲೈ ಚೈನ್ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ನಡೆದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

Chikkaballapur News: ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಲ್ಲ ಇಲಾಖೆಗಳ ಸಮನ್ವಯ ಅಗತ್ಯ : ಎಸ್‌ಪಿ ಕುಶಲ್ ಚೌಕ್ಸೆ

ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಎಲ್ಲ ಇಲಾಖೆಗಳ ಸಮನ್ವಯ ಅಗತ್ಯ

ಮಕ್ಕಳ ಮೇಲಿನ ಅಪರಾಧ ಕೃತ್ಯಗಳನ್ನು ತಡೆಗಟ್ಟುವುದು ಕೇವಲ ಒಂದು ಇಲಾಖೆಯ ಜವಾಬ್ದಾರಿ ಯಲ್ಲ; ಪೊಲೀಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಪಂಚಾಯತ್ ರಾಜ್ ಸೇರಿದಂತೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ ಗ್ರಾಮ ಮಟ್ಟದಲ್ಲಿಯೇ ಅಪಾಯದಲ್ಲಿರುವ ಮಕ್ಕಳನ್ನು ಗುರುತಿಸಿ ರಕ್ಷಣೆ ನೀಡಬೇಕು

Chikkaballlapur News: ಆಷಾಢ ಶುಕ್ರವಾರ: ಮಿಣಕನಗುರ್ಗಿ ಶ್ರೀ ಮಹೇಶ್ವರಿ ಅಮ್ಮನವರಿಗೆ ವಿಶೇಷ ದೀಪಾರಾಧನೆ

ಮಿಣಕನಗುರ್ಗಿ ಶ್ರೀ ಮಹೇಶ್ವರಿ ಅಮ್ಮನವರಿಗೆ ವಿಶೇಷ ದೀಪಾರಾಧನೆ

ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಬೈಯಪ್ಪ, ಕಾರ್ತಿಕ್, ಉಮಾ, ಹರೀಶ್, ಮಹೇಶ್ ಸೇರಿದಂತೆ ದೇವಾಲಯದ ಸೇವಾ ಕಾರ್ಯಕರ್ತರು ಹಾಗೂ ಪುರೋಹಿತರು ಸಹಕರಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಮಹೇಶ್ವರಿ ಅಮ್ಮನವರಿಗೆ ಆಕರ್ಷಕ ದೀಪಾಲಂಕಾರ ಹಾಗೂ ಉಯ್ಯಾಲೆ ಸೇವೆಯನ್ನು ಸಹ ಭಕ್ತಿಭಾವದಿಂದ ನೆರವೇರಿಸಲಾಯಿತು.

Gauribidanur News: ಗುರುಪೂರ್ಣಿಮೆಯ ಅಂಗವಾಗಿ ಆಚಾರ್ಯ ಶಾಲೆಯಲ್ಲಿ ಅರ್ಥಪೂರ್ಣ ಅಕ್ಷರಾಭ್ಯಾಸ, ಗುರುವಂದನೆ

ಶಾಲೆಯಲ್ಲಿ ಅರ್ಥಪೂರ್ಣ ಅಕ್ಷರಾಭ್ಯಾಸ, ಗುರುವಂದನೆ

ಗುರುಪೂರ್ಣಿಮೆಯನ್ನು ವ್ಯಾಸಪೂರ್ಣಿಮೆ ಎಂದೂ ಕರೆಯಲಾಗುತ್ತದೆ. ಮಹರ್ಷಿವ್ಯಾಸರು ಮಹಾ ಭಾರತ ಸೇರಿದಂತೆ ಅನೇಕ ಅಮೂಲ್ಯ ಗ್ರಂಥಗಳ ಮೂಲಕ ಸಮಾಜಕ್ಕೆ ಜ್ಞಾನ ಮತ್ತು ಮಾರ್ಗದರ್ಶನ ನೀಡಿದ್ದು, ಅವರ ಆದರ್ಶಗಳು ಇಂದಿಗೂ ಎಲ್ಲರಿಗೂ ದಾರಿದೀಪವಾಗಿವೆ. ಇಂತಹ ಪವಿತ್ರ ದಿನದಂದು ಮಕ್ಕಳಿಗೆ ಶಾಸ್ತ್ರೋಕ್ತವಾಗಿ ಅಕ್ಷರಾಭ್ಯಾಸ ಮಾಡಿಸಿರುವುದು ಸಂತಸದ ಸಂಗತಿಯಾಗಿದೆ.

Chikkaballapur News: ನೂತನ ಅಪರಾಧ ಕಾನೂನುಗಳ ಕುರಿತು ಜಿಲ್ಲಾ ಪೊಲೀಸ್ ಸಿಬ್ಬಂದಿಗೆ ಕಾರ್ಯಾಗಾರ

ನೂತನ ಅಪರಾಧ ಕಾನೂನುಗಳ ಕುರಿತು ಜಿಲ್ಲಾ ಪೊಲೀಸ್ ಸಿಬ್ಬಂದಿಗೆ ಕಾರ್ಯಾಗಾರ

ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ವಕೀಲ ಶ್ರೀ ಮುನೇಗೌಡ ಅವರು ನೂತನ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS)ಯ ಪ್ರಮುಖ ಅಂಶಗಳು, ತನಿಖಾ ವಿಧಾನದಲ್ಲಿನ ಬದಲಾವಣೆ ಗಳು, ನ್ಯಾಯಾಂಗ ಪ್ರಕ್ರಿಯೆಯಲ್ಲಿ ಪೊಲೀಸ್ ಅಧಿಕಾರಿಗಳ ಜವಾಬ್ದಾರಿಗಳು ಹಾಗೂ ಕಾನೂನು ಅನುಷ್ಠಾನ ಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ವಿವರವಾದ ಮಾಹಿತಿ ನೀಡಿದರು.

Chikkaballapur News: ಶಿಕ್ಷಕರ ಸೇವೆ ಸಮಾಜದ ಶಾಶ್ವತ ಸಂಪತ್ತು: ಹರೀಶ್ ಕೆ.ರೆಡ್ಡಿ

ಶಿಕ್ಷಕರ ಸೇವೆ ಸಮಾಜದ ಶಾಶ್ವತ ಸಂಪತ್ತು: ಹರೀಶ್ ಕೆ.ರೆಡ್ಡಿ

ಮೂರು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಹೆಚ್. ನಾಗರಾಜ್ ಅವರು ಸಲ್ಲಿಸಿರುವ ಸೇವೆ ಅನುಕರಣೀಯವಾಗಿದೆ. ಅವರ ಶಿಸ್ತು, ಬದ್ಧತೆ ಹಾಗೂ ಶಿಕ್ಷಣದ ಮೇಲಿನ ಪ್ರೀತಿ ಮುಂದಿನ ಪೀಳಿಗೆಯ ಶಿಕ್ಷಕರಿಗೂ ಪ್ರೇರಣೆಯಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Chikkaballapur News: ತೋಟಗಾರಿಕೆ ಯೋಜನೆಗಳ ಪ್ರಗತಿ ಪರಿಶೀಲನೆ: ಗುರಿ ಸಾಧನೆಗೆ ಸಿಇಒ ಸೂಚನೆ

ತೋಟಗಾರಿಕೆ ಯೋಜನೆಗಳ ಪ್ರಗತಿ ಪರಿಶೀಲನೆ

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮಾವು ಪುನಶ್ಚೇತನ, ದ್ರಾಕ್ಷಿ, ಹೂವು ಸೇರಿದಂತೆ ವಿವಿಧ ತೋಟಗಾರಿಕೆ ಬೆಳೆಗಳ ಪ್ರಗತಿ, ರೈತರಿಗೆ ಸಹಾಯಧನ ವಿತರಣೆ, ಪಕ್ಷಿ ನಿಯಂತ್ರಣ ಹೊದಿಕೆ, ಈರುಳ್ಳಿ ಶೇಖರಣ ಘಟಕ, ಪ್ಯಾಕ್ ಹೌಸ್ ನಿರ್ಮಾಣ ಸೇರಿದಂತೆ ವಿವಿಧ ಯೋಜನೆಗಳ ಅನುಷ್ಠಾನದ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಯಿತು.

ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗಿಲ್ಲ ಶೂ, ಸಾಕ್ಸ್, ನೋಟ್‌ಬುಕ್ಸ್‌; ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗಿಲ್ಲ ಶೂ, ಸಾಕ್ಸ್, ನೋಟ್‌ಬುಕ್ಸ್‌!

Chikkaballapur News: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ನೋಟ್‌ಬುಕ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ) ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಚಿಕ್ಕಬಳ್ಳಾಪುರ ರೈಲು ನಿಲ್ದಾಣದ ಸಮೀಪ ಯುವಕನ ಶವ ಪತ್ತೆ; ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಶಂಕೆ

ಚಿಕ್ಕಬಳ್ಳಾಪುರ ರೈಲು ನಿಲ್ದಾಣದ ಸಮೀಪ ಯುವಕನ ಶವ ಪತ್ತೆ

Chikkaballapur News: ಚಿಕ್ಕಬಳ್ಳಾಪುರ ನಗರದ ರೈಲು ನಿಲ್ದಾಣದ ಸಮೀಪ ಯುವಕನೊಬ್ಬನ ಶವ ಪತ್ತೆಯಾಗಿದ್ದು, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈದಿರುವ ಶಂಕೆ ವ್ಯಕ್ತವಾಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಹತ್ಯೆಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

Kaiwara News: ಗುರುಪೂಜಾ ಸಂಗೀತೋತ್ಸವಕ್ಕೆ ವಿದ್ಯುಕ್ತ ತೆರೆ

ಗುರುಪೂಜಾ ಸಂಗೀತೋತ್ಸವಕ್ಕೆ ವಿದ್ಯುಕ್ತ ತೆರೆ

ಗುರುಪೂರ್ಣಿಮೆಯ ಅಂಗವಾಗಿ ಆಯೋಜಿಸಿದ್ದ ಸಂಗೀತೋತ್ಸವದಲ್ಲಿ ರಾಜ್ಯದ ವಿವಿಧ ಭಾಗ ಗಳಿಂದ ಆಗಮಿಸಿದ್ದ ಖ್ಯಾತ ಸಂಗೀತ ವಿದ್ವಾಂಸರು ಹಾಗೂ ನೂರಾರು ಭಜನಾ ತಂಡಗಳು ನಿರಂತರವಾಗಿ ಸಂಗೀತ ಸೇವೆ ಸಲ್ಲಿಸಿದವು. ಮೂರು ದಿನಗಳ ಕಾಲ ಸಾವಿರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗುರುಪೂಜೆ, ಸಂಗೀತ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು

Chikkaballapur News: ಶಿಕ್ಷಣದ ಜೊತೆಗೆ ಸ್ವಂತತನ ಬೆಳೆದಾಗಲೇ ಹಿಂಸೆ ದೂರವಾಗುತ್ತದೆ: ಜಾನಪದ ಅಕಾಡೆಮಿ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್

ಶಿಕ್ಷಣದ ಜೊತೆಗೆ ಸ್ವಂತತನ ಬೆಳೆದಾಗಲೇ ಹಿಂಸೆ ದೂರವಾಗುತ್ತದೆ

ನಗರದ ಹೊರವಲಯದ ಸಿ.ವಿ.ವಿ. ಕ್ಯಾಂಪಸ್‌ನ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಶ್ರೀ ಕೆ.ವಿ. ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ೩೦ನೇ ದತ್ತಿ ದಿನಾಚರಣೆ ಹಾಗೂ ಶಿಕ್ಷಣ ತಜ್ಞ, ಮಾಜಿ ನಗರಸಭೆ ಅಧ್ಯಕ್ಷ ದಿವಂಗತ ಸಿ.ವಿ. ವೆಂಕಟರಾಯಪ್ಪ ಅವರ 111ನೇ ಜನ್ಮಜಯಂತಿ ಕಾರ್ಯ ಕ್ರಮದಲ್ಲಿ ದತ್ತಿ ಪುರಸ್ಕಾರ ಸ್ವೀಕರಿಸಿ ಮಾತನಾಡಿದರು.

Gauribidanur News: ರಾಜಕೀಯ ಪಕ್ಷಗಳಿಗೆ ಮತದಾರರ ಪಟ್ಟಿಗಳ ವಿತರಣೆ; ಹೆಸರು ಕೈಬಿಟ್ಟಿದ್ದರೆ ಮಾಹಿತಿ ನೀಡುವಂತೆ ಮನವಿ

ಗೌರಿಬಿದನೂರಿನಲ್ಲಿ ಶೇ.90.61ರಷ್ಟು ಎಸ್‌ಐಆರ್ ಪ್ರಕ್ರಿಯೆ ಪೂರ್ಣ

ನಗರದ ತಾಲೂಕು ಕಚೇರಿಯಲ್ಲಿ ಗುರುವಾರ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತಗಟ್ಟೆ ಅಧಿಕಾರಿಗಳು ಸಂಗ್ರಹಿಸಿದ ಮತದಾರರ ಪಟ್ಟಿಗಳನ್ನು ವಿತರಿಸಿ ಅವರು ಮಾತನಾಡಿದರು. 20 ವರ್ಷಗಳ ಬಳಿಕ ಎಸ್‌ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಜೂನ್ 16, 2026ರ ಮತದಾರರ ಪಟ್ಟಿ ಯಂತೆ ಕ್ಷೇತ್ರದಲ್ಲಿ 2,14,210 ಮತದಾರರಿದ್ದಾರೆ. ಎಲ್ಲರಿಗೂ ಗಣತಿ ನಮೂನೆ ವಿತರಿಸ ಲಾಗಿದ್ದು, ಈ ಪೈಕಿ 2,07,660 (ಶೇ.96.94) ಮತದಾರರ ಮ್ಯಾಪಿಂಗ್ ಪೂರ್ಣಗೊಂಡಿದೆ

Gudibande News: ಮೂಲಸೌಕರ್ಯ ಪರಿಶೀಲನೆಗೆ ಪುಲಸಾನಿವೊಡ್ಡು, ನಲ್ಲಗೊಂಡಯ್ಯಗಾರಹಳ್ಳಿ ಗ್ರಾಮಗಳಿಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಭೇಟಿ

ಹೈಕೋರ್ಟ್ ನಿರ್ದೇಶನದಂತೆ ಸ್ಥಳ ಪರಿಶೀಲನೆ; ಸಮಗ್ರ ವರದಿ ಸಲ್ಲಿಕೆಗೆ ಸಿದ್ಧತೆ

ಗ್ರಾಮಗಳಲ್ಲಿ ಸ್ವಚ್ಛತೆ ಕೊರತೆಯಿರುವುದು ಗಮನಕ್ಕೆ ಬಂದಿದ್ದು, ಮನೆಗಳ ಮುಂದೆ ಕಸ ಸಂಗ್ರಹ ವಾಗಿರುವುದರಿಂದ ಚರಂಡಿಗಳು ಮುಚ್ಚಿ ಸೊಳ್ಳೆಗಳ ಉತ್ಪತ್ತಿ ಹೆಚ್ಚುವ ಸಾಧ್ಯತೆ ಇದೆ. ಇದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆ ತಡೆಯಲು ಸಾರ್ವಜನಿಕರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು

Loading...