ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಚಿಕ್ಕಬಳ್ಳಾಪುರ

Chinthamani News: ಶುದ್ಧ ಕುಡಿಯುವ ನೀರಿಗಾಗಿ ತಾಲೂಕು ಕಚೇರಿ ಮುಂಭಾಗ ವಿನೂತನ ಪ್ರತಿಭಟನೆ!

ಗಂಗಾಜಲದ ಬಿಂದಿಗೆಯೊಂದಿಗೆ ಮೌನ ಪ್ರತಿಭಟನೆ

ಮೂಲಸೌಕರ್ಯಗಳ ಕೊರತೆ ನೀಗಿಸಬೇಕು. ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳ ಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಯನ್ನು ಸಲ್ಲಿಸಿದರು. ಒಂದು ವೇಳೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಪೂರೈಕೆಯಲ್ಲಿ ಸುಧಾರಣೆ ಯಾಗದಿದ್ದರೆ, ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಭಾಸ್ಕರ್ ಎಚ್ಚರಿಸಿದ್ದಾರೆ.

Chikkaballapur News: ಚಿಮುಲ್ ನಿರ್ದೇಶಕ ಹುಜುಗೂರು ರಾಮಣ್ಣ ವಿರುದ್ಧ, ಭರಣಿ ವೆಂಕಟೇಶ್ ಮೋಹನ್‌ ರೆಡ್ಡಿ ತೀವ್ರ ವಾಗ್ದಾಳಿ

ಜೆಡಿಎಸ್ ಶಾಸಕ ಸಂಸದರ ನಡುವೆ ನಮ್ಮನ್ನು ಎಳೆದು ತಂದರೆ ಗೌರವ ಉಳಿಯುವುದಿಲ್ಲ

ರಾಮಣ್ಣ ಅವರೇ ಯಲುವಹಳ್ಳಿ ರಮೇಶ್ ಅವರ ಬಸ್ಸಿನಲ್ಲಿ ಯರ‍್ಯಾರು ಬಂದು ಇಳಿದರು ಅಂತ ನಿಮಗೆ ಗೊತ್ತಿಲ್ಲವೇ? ನಿಮ್ಮ ಜೆಡಿಎಸ್ ಅಭ್ಯರ್ಥಿಗಳು,  ಮುಖಂಡರೇ ಬಂದು ಇಳಿದರು. ಹಾಗಾದರೆ ನಿಮ್ಮ ಪಕ್ಷದ ಅಸ್ತಿತ್ವ ಎಲ್ಲಿಗೋಯಿತು? ಹಾಗದರೆ ನಿಮ್ಮ ಅಭ್ಯರ್ಥಿಯನ್ನು ವಾಪಸ್ಸು ಪಡೆದು ಒಳಗೊಳಗೇ ಒಳ ಒಪ್ಪಂದ ಮಾಡಿಕೊಂಡಿರೇನು?

Shidlaghatta News: ಬೆನ್ನುಹುರಿ ಅಂಗವಿಕಲರಿಗೆ ವಿಶೇಷ ಕ್ರೀಡಾಕೂಟ – ಆತ್ಮವಿಶ್ವಾಸ ವೃದ್ಧಿಗೆ ಒತ್ತು

ಬೆನ್ನುಹುರಿ ಅಂಗವಿಕಲರಿಗೆ ವಿಶೇಷ ಕ್ರೀಡಾಕೂಟ

ನಗರದ ನೆಹರೂ ಕ್ರೀಡಾಂಗಣದಲ್ಲಿ ಬೆನ್ನುಹುರಿ ಅಪಘಾತಕ್ಕೆ ಒಳಗಾದವರಿಗಾಗಿ ನವಜೀವನ ಸೇವಾ ಸಂಘ, ಚಿಕ್ಕಬಳ್ಳಾಪುರ, ಮಾರ್ಗದರ್ಶಿ ವಿಕಲಚೇತನರ ಸ್ವಯಂಸೇವಾ ಸಂಸ್ಥೆ, ಬೆಂಗಳೂರು ಹಾಗೂ ಸ್ಟೇಟ್ ಸಂಸ್ಥೆಯ ಸ್ವಯಂಸೇವಕರ ಸಹಯೋಗದಲ್ಲಿ ವಿಶೇಷ ಕ್ರೀಡಾ ಚಟುವಟಿಕೆ ಆಯೋಜಿಸ ಲಾಯಿತು.

ಬೆಸ್ಟ್ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನದ ಸಂಭ್ರಮ : ಕಳೆಗಟ್ಟಿದ ವಿದ್ಯಾರ್ಥಿಗಳ ಕಲರವ

ಬೆಸ್ಟ್ ಕಾಲೇಜಿನಲ್ಲಿ ಸಾಂಪ್ರದಾಯಿಕ ದಿನದ ಸಂಭ್ರಮ

ಬೋಧಕ ವರ್ಗವು ಸದಾ ಕಾಲ ವಿದ್ಯಾರ್ಥಿಗಳ ಪಾಲಿಗೆ ಮಾರ್ಗದರ್ಶಕರೇ ಆಗಿರುತ್ತಾರೆ. ಪ್ರತಿ ತರಗತಿ ಯಲ್ಲಿಯೂ ಬೋಧನೆ ಸಂಧರ್ಭದಲ್ಲಿ ವಿದ್ಯಾರ್ಥಿಗಳತ್ತ ನೋಡುವಾಗ ಕೇವಲ ಗುರುವಾಗಿಯೇ ಅಲ್ಲ, ಬದುಕಿನ ದಾರಿ ತೋರಿಸುವ ಮಾರ್ಗದರ್ಶಕರಾಗಿಯೇ ಮಾತಾಡುತ್ತಾರೆ. ಅವರಿಗೆ ದಾರಿದೀಪವಾಗುತ್ತಾರೆ ಎಂಬ ನಂಬಿಕೆ ನನಗಿದೆ

Gauribidanur News: ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯಗಳು ಅಗತ್ಯ

Gauribidanur News: ಶಿಕ್ಷಣದ ಜೊತೆಗೆ ಬದುಕಿನ ಮೌಲ್ಯಗಳು ಅಗತ್ಯ

ಪ್ರಕೃತಿಯು ಮನುಕುಲದ ನೆಮ್ಮದಿಯ ಬದುಕಿಗೆ ಅಗತ್ಯವಿರುವ ಪ್ರತಿಯೊಂದು ಅವಶ್ಯಕತೆಗಳನ್ನು ನೀಡುತ್ತಿದೆ. ಆದರೆ ನಾವುಗಳು ನಿತ್ಯದ ಬದುಕಿನಲ್ಲಿ ಗಾಳಿ, ನೀರು ಮತ್ತು ಮಣ್ಣು ಸೇರಿದಂತೆ ಮುಂದಿನ ಪೀಳಿಗೆಗೆ ಅಗತ್ಯವಿರುವ ‌ನೆರೆಯ ಪರಿಸರ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ವಾಣಿಜ್ಯ ವಿಭಾಗದಲ್ಲಿ ಮಿಂಚಿದ ಅಕ್ಷರ ಪಿಯು ವಿದ್ಯಾರ್ಥಿಗಳು – ಭರ್ಜರಿ ಸನ್ಮಾನ

ವಾಣಿಜ್ಯ ವಿಭಾಗ: ಮಿಂಚಿದ ಅಕ್ಷರ ಪಿಯು ವಿದ್ಯಾರ್ಥಿಗಳು, ಭರ್ಜರಿ ಸನ್ಮಾನ

ನಗರದ ಶ್ರೀ ಅಕ್ಷರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಕಾಲೇಜು ಆಡಳಿತ ವತಿಯಿಂದ ಭರ್ಜರಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸ ಲಾಯಿತು. ಬಳಿಕ ಮಾತನಾಡಿದ ವಿದ್ಯಾರ್ಥಿಗಳ ಈ ಸಾಧನೆ ಕಾಲೇಜಿಗೆ ಹೆಮ್ಮೆಯ ವಿಷಯ ವಾಗಿದ್ದು ಇತರ ವಿದ್ಯಾರ್ಥಿ ಗಳಿಗೆ ಪ್ರೇರಣೆಯಾಗಿದೆ

Gudibande News: ಬೆಳೆ ವಿಮೆ ತಿರಸ್ಕೃತಗೊಂಡ 531 ರೈತರಿಗೆ ಆಕ್ಷೇಪಣೆ ಸಲ್ಲಿಸಲು ಏ.30 ಕೊನೆಯ ದಿನ

ಬೆಳೆ ವಿಮೆ ತಿರಸ್ಕೃತ: ಆಕ್ಷೇಪಣೆ ಸಲ್ಲಿಸಲು ಏ.30 ಕೊನೆಯ ದಿನ

ಒಂದು ವೇಳೆ ಸಮೀಕ್ಷೆಯಲ್ಲಿ ವ್ಯತ್ಯಾಸವಿದ್ದು, ರೈತರು ನಿಜವಾಗಿಯೂ ವಿಮೆ ಮಾಡಿದ ಬೆಳೆಯನ್ನೇ ಬೆಳೆದಿದ್ದಲ್ಲಿ, ಅಗತ್ಯ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ. ರೈತರು ತಮ್ಮ ಮನವಿಯನ್ನು ಏಪ್ರಿಲ್ 30 ರೊಳಗೆ ಸಂಬಂಧಪಟ್ಟ ಹೋಬಳಿಯ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.

Chikkaballapur News: ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿದ್ದ ವಿದ್ಯಾರ್ಥಿನಿ ಉತ್ತಮ ಸಾಧನೆ

ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿದ್ದ ವಿದ್ಯಾರ್ಥಿನಿ ಉತ್ತಮ ಸಾಧನೆ

ಕೊರೋನ ವೇಳೆಯಲ್ಲಿ ತಾಯಿಯನ್ನು ಕಳೆದುಕೊಂಡು ಅನಾಥವಾಗಿದ್ದ 12 ವಯಸ್ಸಿನ ವಿದ್ಯಾರ್ಥಿನಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸೇರಿದ್ದಳು. ಇಲ್ಲಿಂದಲೇ ವಿಶ್ವವಿವೇಕ ಕಾಲೇಜಿನಲ್ಲಿ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಳು. ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ಶೇ.90ರಷ್ಟು ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ.

Gauribidanur News: ಭಕ್ತರ ಮನಸೆಳೆಯುತ್ತಿದೆ ಅಯೋಧ್ಯ ಶ್ರೀ ರಾಮ ಮಂದಿರ ಪ್ರದರ್ಶನ

ಭಕ್ತರ ಮನಸೆಳೆಯುತ್ತಿದೆ ಅಯೋಧ್ಯ ಶ್ರೀ ರಾಮ ಮಂದಿರ ಪ್ರದರ್ಶನ

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಬೀದರ ಗ್ರಾಮದ ವಿನಯ ರಾಮ ಅವರು ಸಂಕಲ್ಪ ಮಾಡಿ ಅಯೋಧ್ಯ ಶ್ರೀ ರಾಮ ಮಂದಿರ ಮಾದರಿಯನ್ನು ಈಗಾಗಲೇ ರಾಷ್ಟ್ರ ಹಾಗೂ ರಾಜ್ಯದ 101 ಕಡೆ ನಡೆಸಲಾಗಿದೆ. ಈಗ  ಕರ್ನಾಟಕದ 18 ಜಿಲ್ಲೆಗಳಲ್ಲಿ ಪ್ರದರ್ಶನ ಏರ್ಪಡಿಸಿದ್ದು, ಗೌರಿಬಿದನೂರಿ ನಲ್ಲಿ ಗುರುವಾರದಿಂದ 102ನೇ ಪ್ರದರ್ಶನ ನಡೆಸಲಾಗುತ್ತಿದೆ.

Chikkaballapur News: ಸಂಸದ ಸುಧಾಕರ್ ವಿರುದ್ಧದ ಆರೋಪಗಳಿಗೆ ಬಿಜೆಪಿ ಮುಖಂಡರು ತಿರುಗೇಟು

ಭಿನ್ನಾಭಿಪ್ರಾಯ ಇದ್ದರೆ ಹೈಕಮಾಂಡ್ ಮಟ್ಟದಲ್ಲಿ ಪರಿಹಾರ ಕಂಡುಕೊಳ್ಳಬೇಕು

ಸಂಸದ ಸುಧಾಕರ್ ಅವರಿಗೆ ಅಡ್ಜೆಸ್ಟ್ಮೆಂಟ್ ರಾಜಕಾರಣವೇ ತಿಳಿದಿಲ್ಲ. ಡಿಸಿಸಿ ಬ್ಯಾಂಕ್ ಚುನಾವಣೆ ಯ ವೇಳೆ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ಅವರು ಶ್ರಮಪಟ್ಟಿದ್ದರು. ಯಾರಾದರೂ ಸೋತರೆ ಅದಕ್ಕೆ ಸುಧಾಕರ್ ಅವರನ್ನು ಕಾರಣವೆಂದು ಹೇಳುವುದು ಸರಿಯಲ್ಲ. ಇನ್ನೂ ಚೀಮುಲ್ ಚುನಾವಣೆಯಲ್ಲಿ ಬೇರೆ ಪಕ್ಷದ ಅಭ್ಯರ್ಥಿ ಪರ ಇದ್ದರು ಎನ್ನುವುದು ಶುದ್ಧ ಸುಳ್ಳು . ಶಿಡ್ಲಘಟ್ಟ ಜೆಡಿಎಸ್ ಮುಖಂಡರು ಮಾಡಿರುವ ಆರೋಪಗಳಲ್ಲಿ ಯಾವುದೇ ಸತ್ಯವೂ ಇಲ್ಲ

Dr. M.C. Sudhakar: ಸುಸಜ್ಜಿತ ನಗರ ನಿರ್ಮಾಣಕ್ಕೆ “ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರ” ಸಹಾಯಕಾರಿ: ಉನ್ನತ ಶಿಕ್ಷಣ ಸಚಿವ ಡಾ. ಸುಧಾಕರ್

ಸುಸಜ್ಜಿತ ನಗರ ನಿರ್ಮಾಣಕ್ಕೆ “ಚಿಂತಾಮಣಿ ನಗರಾಭಿವೃದ್ಧಿ ಪ್ರಾಧಿಕಾರ”

ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಹಾಗೂ ನಮ್ಮ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ  ಹೆಚ್ಚಿನ ಜನರು ಚಿಂತಾಮಣಿ ನಗರದ ಕಡೆ ಒಲವು ತೋರಿ ಇಲ್ಲಿ ವಾಸಿಸಲು ಬರುತ್ತಿದ್ದಾರೆ. ಕಾರಣ ಇಲ್ಲಿ ದೊರೆಯುವ ಮೂಲಭೂತ ಸೌಕರ್ಯಗಳೇ ಆಗಿದೆ. ಆದ್ದರಿಂದ ಚಿಂತಾಮಣಿ ನಗರವು ವೇಗವಾಗಿ ಬೆಳೆಯುತ್ತಿದ್ದು ಈ ಬೆಳವಣಿಗೆಗೆ ತಕ್ಕಂತೆ ನಗರೀಕರಣ ನಡೆಯಬೇಕಿದೆ

ವಿಜೃಂಭಣೆಯಿಂದ ನಡೆದ ಧರ್ಮರಾಯಸ್ವಾಮಿ ಹಸಿ ಕರಗ

ವಿಜೃಂಭಣೆಯಿಂದ ನಡೆದ ಧರ್ಮರಾಯಸ್ವಾಮಿ ಹಸಿ ಕರಗ

ಮೇಲೂರಿನ ಕರಗದ ಪೂಜಾರಿ ಧರ್ಮೇಂದ್ರ ಅವರು ಹಸಿ ಕರಗ ಹೊತ್ತಿದ್ದರು. ವೀರ ಕುಮಾರರು ಅಲಗು ಸೇವೆ ಮಾಡಿದರು. ಹಲಗೆ, ತಮಟೆ ವಾದ್ಯಗಳೊಂದಿಗೆ ಕರಗ ನಗರದ ಬಿಬಿ.ರಸ್ತೆ, ಬಜಾರ್ ರಸ್ತೆ ಮೂಲಕ ಗಂಗಮ್ಮನಗುಡಿ ರಸ್ತೆಗೆ ಬಂದು ಜಾಲಾರಿ ಗಂಗಮ್ಮ ದೇವಾಲಯ ಪ್ರವೇ ಶಿಸುವ ಮೊದಲು ದೇವಾಲ ಯದ ಪ್ರದಕ್ಷಿಣೆ ಮಾಡಿ ನರ್ತಿಸಿ, ನೆರದ ಭಕ್ತರ ಮನ ಸೂರೆಗೊಂಡಿತು.

JP Academy controversy: ಜೆಪಿ ಅಕಾಡೆಮಿ ಹೆಸರಿನ ಗಲಾಟೆ : ಬೈರವೇಶ್ವರ ಕಾಲೇಜಿಗೆ ಹಿನ್ನಡೆ : ಗೋಪಿನಾಥ್‌ಗೆ ಮುನ್ನಡೆ

ಜೆಪಿ ಅಕಾಡೆಮಿ ಹೆಸರಿನ ಗಲಾಟೆ : ಬೈರವೇಶ್ವರ ಕಾಲೇಜಿಗೆ ಹಿನ್ನಡೆ

ಕೈವಾರ ಕ್ರಾಸ್‌ನ ಶ್ರೀ ಭೈರವೇಶ್ವರ ಪಿಯು ಕಾಲೇಜಿನಲ್ಲಿ ಜೆಪಿ ಅಕಾಡೆಮಿಯನ್ನು ಸ್ಥಾಪಿಸಿದ್ದೇ ನಾನು. ಕಾರಣಾಂತರಗಳಿಂದ ಅಲ್ಲಿಂದ ಹೊರಬಂದ ಮೇಲೆ ಕಾನೂನು ಬದ್ಧವಾಗಿಯೇ ಶಿಕ್ಷಣ ಸಂಸ್ಥೆ ನಡೆಸು ತ್ತಿದ್ದೇನೆ. ಭೈರವೇಶ್ವರ ಕಾಲೇಜಿನವರು ಹೊರಗಿನವರೆಂದು ಬಿಂಬಿಸಿ, ನಕಲಿ ಕಾಲೇಜು ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂತಹ ನಡವಳಿಕೆಗಳಿಂದ ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಗೊಂದಲ ಮೂಡಿಸುತ್ತಿರುವುದು ಸರಿಯಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು

Chikkaballapur News: ಶಿಡ್ಲಘಟ್ಟ ಜೆಡಿಎಸ್ ಶಾಸಕ ರವಿಕುಮಾರ್ ಬೆಂಬಲಿಗರಿಂದ ಸಂಸದ ಡಾ.ಕೆ.ಸುಧಾಕರ್ ಟೀಕೆಗೆ ತೀವ್ರ ಆಕ್ಷೇಪ ದಾಖಲು

ಸಂಸದ ಡಾ.ಕೆ.ಸುಧಾಕರ್ ಟೀಕೆಗೆ ತೀವ್ರ ಆಕ್ಷೇಪ ದಾಖಲು

ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿ ವ್ಯಾಪ್ತಿಯ ಗ್ರಾಮಗಳ ಕೃಷಿ ಭೂಮಿಯನ್ನು ಕೈಗಾರಿಕೆಗಾಗಿ ಸ್ವಾಧೀನಪಡಿಸಿಕೊಳ್ಳುವ ವಿಚಾರದಲ್ಲಿ ಶಾಸಕರು ರೈತರ ಪರವಾಗಿ ನಿಂತು, ನೀರಾವರಿ ಜಮೀನು ಉಳಿಸಲು ಕ್ರಮ ಕೈಗೊಂಡಿದ್ದಾರೆ.ರೈತರು ಶಾಸಕರನ್ನು ಭೇಟಿ ಮಾಡಿದಾಗ ಅವರಿಗೆ ಬೆಂಬಲ ನೀಡಿದ್ದಾರೆ. ಆದರೆ, ಸಂಸದ ಡಾ.ಕೆ.ಸುಧಾಕರ್ ನಮ್ಮ ಶಾಸಕರ ಬಗ್ಗೆ ಹಗುರವಾಗಿ ಟೀಕೆ ಮಾಡಿರುವುದು ಸರಿಯಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು

PU Results: ಶಾಂತಿನಿಕೇತನ್ಸ್ ಪಿ.ಯು. ಕಾಲೇಜಿಗೆ ಶೇ 95.89% ಫಲಿತಾಂಶ: ಸತತ 16 ವರ್ಷದಿಂದ ಅತ್ಯುತ್ತಮ ಫಲಿತಾಂಶ ಪಡೆದ ಹೆಗ್ಗಳಿಕೆ

ಶಾಂತಿನಿಕೇತನ್ಸ್ ಪಿ.ಯು. ಕಾಲೇಜಿಗೆ ಶೇ 95.89% ಫಲಿತಾಂಶ

ಕಾಲೇಜಿನಲ್ಲಿ ಒಟ್ಟು 341 ವಿದ್ಯಾಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 327 ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಒಟ್ಟು ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ 119 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ಉಳಿದ 189 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, ಹಾಗೂ ೧೯ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣ ರಾಗಿರುತ್ತಾರೆ.

ಪಿಯುಸಿ ಫಲಿತಾಂಶ ಜಿಲ್ಲೆಯ ಅಮೋಘ ಸಾಧನೆ : ಶೇ.90.24 ರೊಂದಿಗೆ 11 ರಿಂದ 8 ಸ್ಥಾನಕ್ಕೆ ಜಿಗಿದ ಜಿಲ್ಲೆ

ಪಿಯುಸಿ ಫಲಿತಾಂಶ ಜಿಲ್ಲೆಯ ಅಮೋಘ ಸಾಧನೆ

ಬಾಲಕಿಯರು ಶೇ 86.89ರಷ್ಟು ಫಲಿತಾಂಶ ದಾಖಲಿಸಿದರೆ ಬಾಲಕರು ಶೇ 83.97 ಫಲಿತಾಂಶ ದಾಖಲಿಸಿದ್ದಾರೆ. 2026ರ ಫಲಿತಾಂಶದಲ್ಲಿಯೂ ಕೂಡ ಬಾಲಕಿಯರೇ ಮೇಲುಗೈ ಸಾಧಿಸಿರುವುದು ಮಹಿಳಾ ಶಕ್ತಿಯನ್ನು ಅನಾವರಣಗೊಳಿಸಿದೆ. 2024-25ನೇ ಸಾಲಿನಲ್ಲಿ ಜಿಲ್ಲೆಯು 11ನೇ ಸ್ಥಾನ ದಲ್ಲಿತ್ತು. ಆದರೆ ಈಬಾರಿ ಉತ್ತಮ ಸಾಧನೆಯೊಂದಿಗೆ 8ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

Jain Mission Hospital: ಏ.12ಕ್ಕೆ 3 ಜೈನ್ ಮಿಷನ್ ಆಸ್ಪತ್ರೆಯ ಹೊಸ ಬ್ಲಾಕ್‌ಗಳ ಲೋಕಾರ್ಪಣೆ : ಸಂತೋಷ್ ಹೆಗ್ಡೆ ಭಾಗಿ

ಏ.12ಕ್ಕೆ 3 ಜೈನ್ ಮಿಷನ್ ಆಸ್ಪತ್ರೆಯ ಹೊಸ ಬ್ಲಾಕ್‌ಗಳ ಲೋಕಾರ್ಪಣೆ

ನಗರ ಹೊರವಲಯದ ಜೈನ್ ಮಿಷನ್ ಆಸ್ಪತ್ರೆ(Jain Mission Hospital)ಯ 3 ಹೊಸ ಬ್ಲಾಕ್‌ಗಳ ಲೋಕಾರ್ಪಣೆ ಕಾರ್ಯಕ್ರಮ ಏ.12ರಂದು ಭಾನುವಾರ ಜೈನ್ ಮಿಷನ್ ಆಸ್ಪತ್ರೆ ಆವರಣದಲ್ಲಿ ನಡೆಯ ಲಿದ್ದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ(Retired Lokayukta Santosh Hegde) ಭಾಗಿಯಾಗಲಿದ್ದಾರೆ ಎಂದು ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ರಾಕೇಶ್ ಜೈನ್ ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ

ಚಿಕ್ಕಬಳ್ಳಾಪುರ ತಾಲ್ಲೂಕು ಕಚೇರಿಗೆ ಜಿಲ್ಲಾಧಿಕಾರಿ ಜಿ.ಪ್ರಭು ಭೇಟಿ

ಇಲ್ಲಿನ ತಾಲ್ಲೂಕು ಕಚೇರಿ ಹಾಗೂ ಉಪವಿಭಾಗಾಧಿಕಾರಿ ಕಚೇರಿಗೆ ಜಿಲ್ಲಾಧಿಕಾರಿ ಜಿ.ಪ್ರಭು(Deputy Commissioner G.Prabhu) ಅವರು ಆಕಸ್ಮಿಕ ಭೇಟಿ ನೀಡಿದ್ದು ಕಡತ ವಿಲೇವಾರಿ ಪ್ರಕ್ರಿಯೆ, ಅರ್ಜಿ ಸ್ವೀಕರಣ ವ್ಯವಸ್ಥೆ ಮತ್ತು ಅಭಿಲೇಖಾಲಯದ ನಿರ್ವಹಣೆಯ ಕುರಿತು ಪರಿಶೀಲನೆ ನಡೆಸಿದರು.

Gauribidanur News: ಗೊಟಕಣಾಪುರ ಗ್ರಾಮದಲ್ಲಿ ಗ್ರಾಮದೇವತೆಗಳ ಪೂಜೆ

ಗೊಟಕಣಾಪುರ ಗ್ರಾಮದಲ್ಲಿ ಗ್ರಾಮದೇವತೆಗಳ ಪೂಜೆ

ವಿಜೃಂಭಣೆಯಿಂದ ನಡೆದ ಊರಹಬ್ಬವನ್ನು ಕುರಿತು ಗ್ರಾಮದ ಮುಖಂಡ ಹಾಗು ಜಿ.ಪಂ.ಮಾಜಿ ಉಪಾಧ್ಯಕ್ಷ ಜಿಕೆ ರಮೇಶ್ ಮಾತನಾಡಿ, ಊರಹಬ್ಬ ಮಾಡಿ ಸುಮಾರು ಏಳು ವರ್ಷವಾಗಿತ್ತು ಆದ್ದರಿಂದ ಗ್ರಾಮದ ಹಿರಿಯರು, ಗೌಡರು, ಶ್ಯಾನುಭೋಗರು, ಪೂಜಾರಿಗಳು, ತಳವಾರಿ ಹಾಗೂ ಆಯಗಾರರು ಮೊದಲಾದ ಗ್ರಾಮ ಮುಖಂಡರು ಸಭೆ ಸೇರಿ ಊರಹಬ್ಬ ಆಚರಿಸುವ ದಿನಾಂಕ ವನ್ನು ಒಮ್ಮತದಿಂದ ನಿಗದಿಪಡಿಸಿದರು.

Chinthamani News: ರಾಜೀವ್‌ ನಗರದಲ್ಲಿ ಮಧ್ಯರಾತ್ರಿ ಮಾರಕಾಯುಧಧಾರಿ ಕಳ್ಳರ ಅಟ್ಟಹಾಸ: ಭೀತಿಯ ನೆರಳಿನಲ್ಲಿ ಬಡಾವಣೆಯ ನಿವಾಸಿಗಳು

ರಾಜೀವ್‌ ನಗರದಲ್ಲಿ ಮಧ್ಯರಾತ್ರಿ ಕಳ್ಳರ ಅಟ್ಟಹಾಸ

ಮುಖಕ್ಕೆ ಮಾಸ್ಕ್ ಧರಿಸಿ ಕೈಯಲ್ಲಿ ಮಾರಕಾಯುಧಗಳನ್ನು ಹಿಡಿದುಕೊಂಡು ರಾಜಾರೋಷವಾಗಿ ಓಡಾಡುತ್ತಿರುವ ಕಳ್ಳರ ಗುಂಪು ಇಡೀ ಬಡಾವಣೆಯನ್ನು ಭಯದ ಕೂಪಕ್ಕೆ ದೂಡಿದೆ. ಪ್ರಸ್ತುತ ಈ ಕಳ್ಳರು ಮಧ್ಯರಾತ್ರಿ ಮಾರಕಾಯುಧಗಳನ್ನು ಹಿಡಿದು ಬೀದಿಗಳಲ್ಲಿ ಸಂಚರಿಸುತ್ತಿರುವ ದೃಶ್ಯಗಳು ಸ್ಥಳೀಯ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುವ ಮೂಲಕ ಜನಸಾಮಾನ್ಯರ ಎದೆಯಲ್ಲಿ ನಡುಕ ಹುಟ್ಟಿಸಿವೆ.

H.N.Valley: 3ನೇ ಹಂತದ ಶುದ್ಧೀಕರಣ, ಶುದ್ಧ ನೀರಿಗೆ ಆಗ್ರಹಿಸಿ ಖಾಲಿ ಕೊಡ ಹಿಡಿದು ಬೀದಿಗಿಳಿದ ಜನತೆ

ಜೀವಜಲ ವೇದಿಕೆ ಸದಸ್ಯರಿಂದ ಆಯೋಜಿಸಿದ್ದ ಬೃಹತ್ ಪಾದಯಾತ್ರೆಗೆ ಅದ್ಧೂರಿ ಬೆಂಬಲ

ರೇಷ್ಮೆ, ಹಾಲು ಹಣ್ಣು, ಹೂವು, ತರಕಾರಿ ದವಸ ಧಾನ್ಯಗಳನ್ನು ಬೆಂಗಳೂರು ಸೇರಿದಂತೆ ನೆರೆ ಹೊರೆ ರಾಜ್ಯ ದೇಶಗಳಿಗೆ ಸರಬರಾಜು ಮಾಡುವ ಮಹತ್ತರ ಕಾರ್ಯವನ್ನು ನೂರಾರು ವರ್ಷಗಳಿಂದ ಮಾಡಿ ಕೊಂಡು ಬಂದಿರುವ ಜಿಲ್ಲೆಯ ಜನತೆಗೆ, ಬಳುವಳಿಯಾಗಿ ಹೆಚ್.ಎನ್.ವ್ಯಾಲಿ ಕೊಳಚೆ ನೀರನ್ನು ಎರಡು ಹಂತದಲ್ಲಿ ಶುದ್ಧೀಕರಿಸಿ ಹರಿಸುತ್ತಿರುವುದು ಸರಿಯಲ್ಲ

JDU: ಯುವಕರ ಬೆಂಬಲಕ್ಕೆ ಕರೆ: ಪದವೀಧರರ ಕ್ಷೇತ್ರದಲ್ಲಿ ನಾಗರಾಜು ಸಕ್ರಿಯ ಪ್ರಚಾರ

ಯುವಕರ ಬೆಂಬಲಕ್ಕೆ ಕರೆ: ಪದವೀಧರರ ಕ್ಷೇತ್ರದಲ್ಲಿ ನಾಗರಾಜು ಸಕ್ರಿಯ ಪ್ರಚಾರ

ಜೆಡಿಯು ಪಕ್ಷದ ತತ್ವಗಳು, ಅಭಿವೃದ್ಧಿ ಪರ ಕಾರ್ಯಕ್ರಮಗಳು ಹಾಗೂ ಪದವೀಧರರ ಕಲ್ಯಾಣ ಕ್ಕಾಗಿ ರೂಪಿಸಲಾದ ಯೋಜನೆಗಳನ್ನು ಮನೆಮಾತಾಗಿಸುವ ಉದ್ದೇಶದಿಂದ ಕ್ಷೇತ್ರದಾದ್ಯಂತ ತೀವ್ರ ಮತ ಯಾಚನೆ ನಡೆಸಲಾಗುತ್ತಿದೆ. ಪ್ರತಿ ಭಾಗದಲ್ಲೂ ಜನರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುತ್ತದೆ

Mobile canteen: ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಮೊಬೈಲ್ ಕ್ಯಾಂಟೀನ್ ನಡೆಸಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನ

ಅರ್ಜಿದಾರರು ಯಾವ ಜಿಲ್ಲೆಯ ನಿವಾಸಿಯಾಗಿರುತ್ತಾರೋ ಅದೇ ಜಿಲ್ಲೆಯಲ್ಲಿ ಅರ್ಜಿ ಸಲ್ಲಿಸಬೇಕು. ಆಧಾರ್ ಕಾರ್ಡ ಪ್ರತಿಯನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿರುವ ಬಗ್ಗೆ ತಹಶೀಲ್ದಾರ್‌ರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಜಾತಿ ಪ್ರಮಾಣ ಪತ್ರದ ಪ್ರತಿ. ತಹಶೀಲ್ದಾರ್‌ರಿಂದ ಪಡೆದುಕೊಂಡಿರುವ ಚಾಲ್ತಿಯಲ್ಲಿರುವ ಆದಾಯದ ಪ್ರಮಾಣ ಪತ್ರದ ಪ್ರತಿ. ಎಸ್.ಎಸ್.ಎಲ್.ಸಿ ಯಲ್ಲಿ ಉತ್ತೀರ್ಣರಾಗಿರುವ ಅಂಕಪಟ್ಟಿಯ ಜೆರಾಕ್ಸ್ ಪ್ರತಿ ಲಗತ್ತಿಸಬೇಕು.

Yettinahole drinking water project: ಜಿಲ್ಲಾಧಿಕಾರಿಗಳಿಂದ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಪ್ರಗತಿ ಪರಿಶೀಲನೆ

ಜಿಲ್ಲಾಧಿಕಾರಿಗಳಿಂದ ಎತ್ತಿನಹೊಳೆ ಯೋಜನೆಯ ಭೂಸ್ವಾಧೀನದ ಪ್ರಗತಿ ಪರಿಶೀಲನೆ

ಜಿಲ್ಲೆಗೆ ಶಾಶ್ವತ ಕುಡಿಯುವ ನೀರಿನ ಪೂರೈಕೆಗಾಗಿ ಸರ್ಕಾರ ಕೈಗೊಂಡಿರುವ ಎತ್ತಿನಹೊಳೆ ಮಹತ್ವಾ ಕಾಂಕ್ಷಿ ಯೋಜನೆಯ ಕಾಮಗಾರಿಗಳು ಜಿಲ್ಲೆಯಲ್ಲಿ ಭರದಿಂದ ಸಾಗುತ್ತಿವೆ. ಗೌರಿ ಬಿದನೂರು ಗುರುತ್ವ ಫೀಡರ್ ಪೈಪ್ ಲೈನ್ ಕಾಮಗಾರಿಯ ಎತ್ತಿನಹೊಳೆ ಮುಖ್ಯ ಗುರುತ್ವ ಕಾಲುವೆಯ ಸರಪಳಿ 257.57 ಕಿ.ಮೀ ನಲ್ಲಿ ಕವಲೊಡೆದು ಸು. 81.6 ಕಿ.ಮೀ ಉದ್ದದ ಪೈಪ್ ಲೈನ್ ಕಾಮಗಾರಿಗಳು ಭೌತಿಕವಾಗಿ ಪೂರ್ಣಗೊಂಡಿವೆ

Loading...