ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kolhar (vijayapura) News: ನಾಡಿಗೆ ವೀರಶೈವ ಲಿಂಗಾಯತ ಧರ್ಮದ ಕೊಡುಗೆ ಅಪಾರ: ಉಜ್ಜಯಿನಿ ಜಗದ್ಗುರು ಡಾ.ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು

ನಮ್ಮ ಬದುಕಿನಲ್ಲಿ ನಾಲ್ಕು ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳ ಬೇಕು ಪ್ರಥಮವಾಗಿ ಎಲ್ಲಾ ಕಡೆಯಲ್ಲೂ ದೇವರಿದ್ದಾನೆ ಎಂದು ತಿಳಿದು ಕೆಟ್ಟ ಕೆಲಸ ಮಾಡ ಬಾರದು, ಎಲ್ಲರಿಗೂ ಸಾವು ಇದೆ ಎಂಬುದನ್ನು ದಿನಬೆಳಗಾದರೆ ನೆನಪಿಸಬೇಕು, ಮರೆಯುವ ಎರಡು ಮಾತುಗಳು ದಾನ ಮಾಡಿದ್ದು ಮತ್ತು ನಿಮಗೆ ಕೆಡು ಮಾಡಿದವರನ್ನು ಮರೆಯಬೇಕು ಎಂದು ತಿಳಿದರೆ ನಿಮ್ಮ ಬದುಕು ಬಂಗಾರ ವಾಗುತ್ತದೆ

ನಾಡಿಗೆ ವೀರಶೈವ ಲಿಂಗಾಯತ ಧರ್ಮದ ಕೊಡುಗೆ ಅಪಾರ

Profile Ashok Nayak May 26, 2025 1:20 PM

ಕೊಲ್ಹಾರ: ಸಮಾಜದಲ್ಲಿ ಸ‌ಮತಾಭಾವ, ಶಿಕ್ಷಣ, ಸಂಸ್ಕಾರ ಬೆಳೆಸುವಲ್ಲಿ ವೀರಶೈವ ಲಿಂಗಾಯತ ಧರ್ಮದ ಕೊಡುಗೆ ಅಪಾರವಾಗಿದೆ ಎಂದು ಉಜ್ಜಯಿನಿ ಜಗದ್ಗುರು ಡಾ.ಸಿದ್ಧಲಿಂಗ ರಾಜ ದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಅಭಿಪ್ರಾಯ ವ್ಯಕ್ತಪಡಿಸಿದರು. ಪಟ್ಟಣದಲ್ಲಿ ಶ್ರೀ ಪಟ್ಟದೇವರು ಹಿರೇಮಠದ ನೂತನ ಕಟ್ಟಡ ಉದ್ಘಾಟನೆ ಮತ್ತು ಸದ್ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು ನಾಡಿನ ಭಕ್ತ ಸಮೂಹಕ್ಕೆ ಅದರಲ್ಲಿ ವಿದ್ಯಾರ್ಥಿ ಗಳು ಮತ್ತು ಹೆಣ್ಣು ಮಕ್ಕಳಿಗೆ ಉಪದೇಶ ನೀಡಿದ ಶ್ರೀಗಳು ನಮ್ಮ ದೇಶದ ಸಂಸ್ಕೃತಿ ಮೇಲೆ ದಾಳಿ ನಡೆಯುತ್ತಿದೆ ಆದ್ದರಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದು ನಮ್ಮ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿಯನ್ನು ಹೊರಬೇಕಿದೆ ಎಂದರು.

ಇದನ್ನೂ ಓದಿ: Kolar News: ಮುಡಿ ಕೊಡುತ್ತೇನೆ, ಪ್ರದೀಪ ನಾನು ಬೇಗ ಒಂದಾಗಬೇಕು... ಚಿಕ್ಕ ತಿರುಪತಿ ಹುಂಡಿಯಲ್ಲಿ ಸಿಕ್ತು ಲವ್‌ಲೆಟರ್‌!

ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಆರ್ಶೀವಚನ ನೀಡುತ್ತಾ ನಮ್ಮ ಬದುಕಿನಲ್ಲಿ ನಾಲ್ಕು ಮಾತುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳ ಬೇಕು ಪ್ರಥಮವಾಗಿ ಎಲ್ಲಾ ಕಡೆಯಲ್ಲೂ ದೇವರಿದ್ದಾನೆ ಎಂದು ತಿಳಿದು ಕೆಟ್ಟ ಕೆಲಸ ಮಾಡ ಬಾರದು, ಎಲ್ಲರಿಗೂ ಸಾವು ಇದೆ ಎಂಬುದನ್ನು ದಿನಬೆಳಗಾದರೆ ನೆನಪಿಸಬೇಕು, ಮರೆಯುವ ಎರಡು ಮಾತುಗಳು ದಾನ ಮಾಡಿದ್ದು ಮತ್ತು ನಿಮಗೆ ಕೆಡು ಮಾಡಿದವರನ್ನು ಮರೆಯಬೇಕು ಎಂದು ತಿಳಿದರೆ ನಿಮ್ಮ ಬದುಕು ಬಂಗಾರವಾಗುತ್ತದೆ ಎಂದರು. ಮುಂದುವರೆದು ಈ ನಾಡಿನಲ್ಲಿ ತ್ರಿವಿಧ ದಾಸೋಹ ಮಾಡಿ ನಾಡು ಕಟ್ಟುವಲ್ಲಿ ಈ ವೀರಶೈವ ಲಿಂಗಾಯತ ಧರ್ಮದ ಕೊಡುಗೆ ಅಪಾರ ಎಂದರು.

ಸಾನಿಧ್ಯ ವಹಿಸಿದ್ದ ಕಾಶೀ ಜಗದ್ಗುರು ಡಾ.ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾ ದರು ಆರ್ಶಿವಚನ ನೀಡಿದರು. ಸಚಿವ ಶಿವಾನಂದ ಎಸ್ ಪಾಟೀಲ‌ ಅಧ್ಯಕ್ಷತೆ ವಹಿಸಿದ್ದರು, ಪಟ್ಟ ದೇವರು ಹಿರೇಮಠದ ಶ್ರೀ ಪ್ರಭು ಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸಿದ್ದರು,

ಕೊಡೆಕಲ್ ವಿರಕ್ತ ಮಠದ ಶ್ರೀ ಶಿವಕುಮಾರ ಮಹಾಸ್ವಾಮಿಗಳು, ಮನಗೂಳಿ ಹಿರೇಮಠದ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಯರನಾಳ ಶ್ರೀ ಸಂಗನಬಸವ ಮಹಾಸ್ವಾಮಿ ಗಳು, ಮಸೂತಿಯ ಶ್ರೀ ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ಅತಿಥಿಗಳಾಗಿ ಸೋಮನಗೌಡ ಪಾಟೀಲ, ಕಲ್ಲು ದೇಸಾಯಿ, ವಿನೀತ ದೇಸಾಯಿ, ಬಿ.ಯು ಗಿಡ್ಡಪ್ಪ ಗೋಳ, ಶ್ರೀಶೈಲ ಪತಂಗಿ, ಆರ್.ಬಿ ಪಕಾಲಿ, ಟಿ ಟಿ ಹಗೇದಾಳ, ಸಿ ಎಸ್ ಗಿಡ್ಡಪ್ಪಗೋಳ, ಶಶಿಧರ ದೇಸಾಯಿ, ಸಿ ಎಂ ಗಣಕುಮಾರ, ಶ್ರೀಶೈಲ ಮುಳವಾಡ ಉಪಸ್ಥಿತರಿದ್ದರು.