ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Heart Attack: ಕೋವಿಡ್‌ ಬಂದು ಹೋದವರಲ್ಲಿ ಹೃದಯಾಘಾತ ಸಾಧ್ಯತೆ: ತಜ್ಞರ ಸಮಿತಿ ವರದಿಯಲ್ಲಿದೆ ಆಘಾತಕರ ಅಂಶ!

Heart Attack: ಸಮಿತಿ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿ ಹಲವು ಮಹತ್ವದ ವಿಚಾರಗಳು ಅಡಕವಾಗಿವೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದವರಿಗೆ ಕೊಂಚ ಹೃದಯ ಸಮಸ್ಯೆ ಕಾಡುತ್ತಿದೆ. ಹೃದಯಾಘಾತಕ್ಕೆ ಕೊರೋನಾ ಲಸಿಕೆ ಕಾರಣವಲ್ಲ. ಆದರೆ, ಕೊರೋನಾ ವೈರಸ್ ಕೊಂಚ ಪ್ರಮಾಣದಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ ಎಂದು ವರದಿಯಲ್ಲಿದೆ.

ಕೋವಿಡ್‌ ಬಂದು ಹೋದವರಲ್ಲಿ ಹೃದಯಾಘಾತ ಸಾಧ್ಯತೆ: ತಜ್ಞರ ಸಮಿತಿ ವರದಿ

ಹರೀಶ್‌ ಕೇರ ಹರೀಶ್‌ ಕೇರ Jul 4, 2025 10:41 PM

ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತದಿಂದ (Heart Attack) ಸರಣಿ ಸಾವು ಸಂಭವಿಸುತ್ತಿರುವುದರ ಹಿಂದೆ ಕೋವಿಡ್‌ ಎಫೆಕ್ಟ್‌ (Covid effect) ಕೂಡ ಇದೆ ಎಂದು ತಜ್ಞರು ಅಧ್ಯಯನ ನಡೆಸಿ ಸಿದ್ದಪಡಿಸಿರುವ ವರದಿಯಲ್ಲಿ ತಿಳಿಸಲಾಗಿದೆ ಎಂದು ಗೊತ್ತಾಗಿದೆ. ರಾಜ್ಯ ಹಾಗೂ ಹಾಸನದಲ್ಲಿ (Hassan) ಸಂಭವಿಸುತ್ತಿರುವ ಸರಣಿ ಹೃದಯಸ್ತಂಭನ (Heart Failure) ಪ್ರಕರಣಗಳ ಅಧ್ಯಯನಕ್ಕೆ ಕರ್ನಾಟಕ ಸರ್ಕಾರ (Karnataka government) ಎರಡು ಪ್ರತ್ಯೇಕ ತಾಂತ್ರಿಕ ಸಮಿತಿ ರಚಿಸಿದೆ. ರಾಜ್ಯದಲ್ಲಿ ಸಂಭವಿಸುತ್ತಿರುವ ಹೃದಯಾಘಾತಗಳಿಗೆ ಕಾರಣವೇನು ಎಂಬುದು ತಜ್ಞರು ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿ ಅಡಕವಾಗಿದೆ.

ಶುಕ್ರವಾರ (ಜುಲೈ 4) ತಾಂತ್ರಿಕ ಸಲಹಾ ಸಮಿತಿ ಸಭೆ ನಡೆದಿದ್ದು, ಹಲವು ವಿಚಾರಗಳು ಚರ್ಚೆಯಾಗಿವೆ. ಸಮಿತಿ ಅಧ್ಯಯನ ನಡೆಸಿ ಸಿದ್ಧಪಡಿಸಿರುವ ವರದಿಯಲ್ಲಿ ಹಲವು ಮಹತ್ವದ ವಿಚಾರಗಳು ಅಡಕವಾಗಿವೆ. ಕೋವಿಡ್‌ ಸೋಂಕಿನಿಂದ ಗುಣಮುಖರಾದವರಿಗೆ ಕೊಂಚ ಹೃದಯ ಸಮಸ್ಯೆ ಕಾಡುತ್ತಿದೆ. ಹೃದಯಾಘಾತಕ್ಕೆ ಕೊರೋನಾ ಲಸಿಕೆ ಕಾರಣವಲ್ಲ. ಆದರೆ, ಕೊರೋನಾ ವೈರಸ್ ಕೊಂಚ ಪ್ರಮಾಣದಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ ಎಂದು ವರದಿಯಲ್ಲಿದೆ.

ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಹೃದಯಾಘಾತದ ತಾಂತ್ರಿಕ ಸಲಹಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಹೃದಯಾಘಾತದ ಕುರಿತ ವರದಿಯ ಬಗ್ಗೆ ತಾಂತ್ರಿಕ ಸಮಿತಿ ಸದಸ್ಯರು ಚರ್ಚಿಸಿದರು. ಅಂತಿಮ ವರದಿಯಲ್ಲಿನ ಸಾಧಕ- ಬಾಧಕಗಳ ಕುರಿತು ಚರ್ಚಿಸಲಾಯಿತು. ತಜ್ಞರು ವರದಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಏಕಾಏಕಿ ಹೃದಯಾಘಾತ ಹೆಚ್ಚಳಕ್ಕೆ ಕಾರಣಗಳೇನು ಎಂಬುದನ್ನು ತಜ್ಞರು ಪತ್ತೆ ಮಾಡಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳಿಗೆ ವರದಿ ನೀಡಲು ಮುಂದಾಗಿದ್ದಾರೆ. ಎರಡು ದಿನಗಳಲ್ಲಿ ತಜ್ಞರು ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ.

ವರದಿಯಲ್ಲಿ ಹೃದಯದ ಕಾರ್ಯಕ್ಷಮತೆ ಕಡಿಮೆಯಾಗಿರುವ ಬಗ್ಗೆಯೂ ಉಲ್ಲೇಖ ಮಾಡಲು ತಜ್ಞರು ಮುಂದಾಗಿದ್ದಾರೆ. ಕೊರೋನಾ ಬಂದು ಹೋದ ಮೂರು ವರ್ಷದ ಬಳಿಕ ಹೃದಯ ಸಮಸ್ಯೆ ಕಂಡುಬರುತ್ತಿದೆ. ಅಲ್ಲದೆ, ಕೊರೋನಾ ರೋಗದಿಂದ ಗುಣಮುಖರಾದವರಿಗೆ ನಿದ್ರಾಹೀನತೆ, ಸುಸ್ತು, ಉಸಿರಾಟದ ಸಮಸ್ಯೆ, ಅತಿಯಾದ ಬೊಜ್ಜು ಕಂಡು ಬರುತ್ತಿದ್ದು, ತಜ್ಞರು ಸರ್ಕಾರಕ್ಕೆ ಕೆಲವು ಸಲಹೆಗಳನ್ನು ನೀಡಲು ಮುಂದಾಗಿದ್ದಾರೆ.

ತಜ್ಞರು ನೀಡಲಿರುವ ಸಲಹೆಗಳು

ಆಹಾರದಲ್ಲಿ ಸಕ್ಕರೆ ಹಾಗು ಉಪ್ಪಿನ ಪ್ರಮಾಣ ಕಡಿಮೆ ಮಾಡಬೇಕು

ಕನಿಷ್ಠ 6 ಗಂಟೆ ನಿದ್ದೆ ಮಾಡಬೇಕು

ಮಕ್ಕಳ ಸ್ಕ್ರೀನಿಂಗ್ ಟೈಮ್ ಕಡಿಮೆ ಮಾಡಬೇಕು

ರಾಜ್ಯದಲ್ಲಿ ಆಗುವ ಪ್ರತಿ ಯುವಕರ ಹಠಾತ್ ಸಾವು ನೋಂದಣಿಯಾಗಬೇಕು

ಹೃದಯಾಘಾತದ ಮರಣೋತ್ತರ ಪರೀಕ್ಷೆ ಆಗಬೇಕು

ಒತ್ತಡ ಕಡಿಮೆ ಮಾಡಬೇಕು

ದೈಹಿಕ ಚಟುವಟಿಕೆಗಳನ್ನು ಹೆಚ್ಚಿಸಬೇಕು

ಧೂಮಪಾನ ಕಡ್ಡಾಯವಾಗಿ ಕೈಬಿಡಬೇಕು

18 ವರ್ಷ ಒಳಗಿನವರಿಗೆ ಸಿಗರೇಟ್, ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು.

ಅಪಾಯಕಾರಿ ಪೇನ್​ ಕಿಲ್ಲರ್ ಔಷಧಿಗೆ ಕಡಿವಾಣ ಹಾಕಬೇಕು.

CPR ತರಬೇತಿ ನೀಡುವ ಯೋಜನೆ ಜಾರಿ ಹಾಗೂ ಜಾಗೃತಿ ಮೂಡಿಸಬೇಕು

ಸ್ಟೆಮಿ ಯೋಜನೆಯನ್ನು ಎಲ್ಲ ತಾಲೂಕುಗಳಿಗೆ ವಿಸ್ತರಣೆ ಮಾಡಬೇಕು.

ECG, TMT, ECHO, Lipid Profile ಚಿಕಿತ್ಸಾ ಸೌಲಭ್ಯ

ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ CT Angiogram ಟೆಸ್ಟ್ ವ್ಯವಸ್ಥೆ

ಸಾರ್ವಜನಿಕ ಪ್ರದೇಶಗಳಲ್ಲಿ ಹೃದಯಾಘಾತದ ಬಗ್ಗೆ ಜಾಗೃತಿ ಮೂಡಿಸುವುದು

ಇದನ್ನೂ ಓದಿ: Heart Attack Deaths: ಹೃದಯಾಘಾತದಿಂದ ಹೆಚ್ಚಾದ ಸಾವು; ನಮ್ಮ ಲಸಿಕೆ ಸೇಫ್ ಎಂದ ಕೋವಿಶೀಲ್ಡ್ ತಯಾರಕರು