ಜಾತಿ ಸಮೀಕ್ಷೆಯಲ್ಲಿ ತಪ್ಪದೇ ಮಾದಿಗ ಎಂದು ನಮೂದಿಸಿ: ಮಾಜಿ ಸಚಿವ ಎಚ್.ಆಂಜನೇಯ
ಮಾದಿಗ ಸಮುದಾಯ ಅತ್ಯಂತ ಹಿಂದುಳಿದಿದ್ದು, ಎಲ್ಲ ರೀತಿಯಲ್ಲಿಯೂ ಸಂಕಷ್ಟ ಎದುರಿಸಿದೆ. ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಸಮುದಾಯಕ್ಕೆ ನ್ಯಾಯವಾಗಿ ದೊರೆಯಬೇಕಾದ ಮೀಸ ಲಾತಿ ಸೌಲಭ್ಯ ದೊರೆಯುತ್ತಿಲ್ಲ. ಹಾಗಾಗಿ ಒಳಮೀಸಲಾತಿ ಕಲ್ಪಿಸಿಕೊಡಲು ಸರ್ಕಾರಕ್ಕೆ ಮನವಿ ಮಾಡಲಾ ಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಲಿದ್ದಾರೆ

ಮಾದಿಗ ಸಮುದಾಯ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲ ರೀತಿಯಲ್ಲಿ ಅಭಿವೃದ್ಧಿಯಾಗಲು ಒಳಮೀಸಲಾತಿಯೊಂದೇ ದಾರಿಯಾಗಿದ್ದು, ಹಿಂದುಳಿದ ವರ್ಗಗಳ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.

ಚಿಕ್ಕಬಳ್ಳಾಪುರ : ಮಾದಿಗ ಸಮುದಾಯ ಆರ್ಥಿಕ, ಸಾಮಾಜಿಕ ಸೇರಿದಂತೆ ಎಲ್ಲ ರೀತಿಯಲ್ಲಿ ಅಭಿವೃದ್ಧಿಯಾಗಲು ಒಳಮೀಸಲಾತಿಯೊಂದೇ ದಾರಿಯಾಗಿದ್ದು, ಹಿಂದುಳಿದ ವರ್ಗಗಳ ಹರಿಕಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡುವ ವಿಶ್ವಾಸವಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮಾದಿಗ ಸಮುದಾಯ ಅತ್ಯಂತ ಹಿಂದುಳಿದಿದ್ದು, ಎಲ್ಲ ರೀತಿಯಲ್ಲಿಯೂ ಸಂಕಷ್ಟ ಎದುರಿಸಿದೆ. ರಾಜ್ಯದಲ್ಲಿ ಕಳೆದ ೩೫ ವರ್ಷಗಳಿಂದ ಸಮುದಾಯಕ್ಕೆ ನ್ಯಾಯವಾಗಿ ದೊರೆಯಬೇಕಾದ ಮೀಸ ಲಾತಿ ಸೌಲಭ್ಯ ದೊರೆಯುತ್ತಿಲ್ಲ. ಹಾಗಾಗಿ ಒಳಮೀಸಲಾತಿ ಕಲ್ಪಿಸಿಕೊಡಲು ಸರ್ಕಾರಕ್ಕೆ ಮನವಿ ಮಾಡಲಾಗಿದ್ದು, ಜನಸಂಖ್ಯೆಗೆ ಅನುಗುಣವಾಗಿ ವರ್ಗೀಕರಣ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಲವು ಕಾನೂನು ತೊಡಕುಗಳಿದ್ದ ಕಾರಣ ರಾಜ್ಯದಲ್ಲಿ ಒಳಮೀಸಲಾತಿ ಜಾರಿಯಾಗಲಿಲ್ಲ, ಆಂಧ್ರಪ್ರದೇಶದಲ್ಲಿ ಮಂದಕೃಷ್ಣ ಮಾದಿಗ ಅವರು ಒಳ ಮೀಸಲಾತಿಯ ಜನಕರಾಗಿದ್ದು, ಅವರ ಹೋರಾಟದಿಂದ ಇಂದು ಒಳ ಮೀಸಲಾತಿ ಸಿಗುತ್ತಿದೆ. ಸುಪ್ರೀಂ ಆದೇಶ ಬಂದ ನಂತರ ಸಮೀಕ್ಷೆ ಯತ್ತ ಗಮನ ಹರಿಸಲು ನಿರ್ಧರಿಸಲಾಗಿತ್ತು,. ಉದ್ಯೋಗ ಬಡ್ತಿಯಲ್ಲಿ ಮೀಸಲಾತಿ ನೀಡುತ್ತಿಲ್ಲ, ಆದರೂ ತೊಂದರೆಯಿಲ್ಲ, ಆದರೆ ಪ್ರಸ್ತುತ ಉದ್ಯೋಗ ಸಿಗಬೇಕಾದವರಿಗೆ ಸಿಗಲೇಬೇಕು ಎಂಬ ಕಾರಣಕ್ಕೆ ಒಳ ಮೀಸಲಾತಿ ಜಾರಿಯಾಗಬೇಕು ಎಂದರು.
ಪ್ರಸ್ತುತ ನಡೆಯುತ್ತಿರುವ ಜಾತಿ ಸಮೀಕ್ಷೆಯಲ್ಲಿ ಮಾದಿಗ ಎಂದೇ ನಮೂದಿಸಲು ಸಮುದಾಯಕ್ಕೆ ಅರಿವು ಮೂಡಿಸಲಾಗಿದೆ. ಈಗಾಗಲೇ ಹರ್ಯಾಣದಲ್ಲಿ ಒಳ ಮೀಸಲಾತಿ ನೀಡಿದ್ದಾರೆ, ಪಂಜಾಬ್ ನಲ್ಲಿ ಗೊಂದಲ ಸೃಷ್ಟಿಯಾಗಿರುವ ಕಾರಣ ಇನ್ನೂ ಆಗಿಲ್ಲ, ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ನೀಡುವಲ್ಲಿ, ಎಲ್ಲ ಪಕ್ಷಗಳೂ ಮಾದಿಗರ ಪರ ಇವೆ. ಒಳ ಮೀಸಲಾತಿ ಜಾರಿಗೆ ತರಬೇಕಾದ ಜವಾಬ್ದಾರಿ ಮುಖ್ಯಮಂತ್ರಿಗಳ ಮೇಲಿದೆ, ಸಾಮಾಜಿಕ ನ್ಯಾಯ ಎತ್ತಿಹಿಡಿಯುವ ಬದ್ಧತೆ ಇರುವ ಸಿದ್ದರಾಮಯ್ಯ ಅವರು ಯಾವುದೇ ಸಮುದಾಯಕ್ಕೆ ಅನ್ಯಾಯ ಆಗದ ರೀತಿಯಲ್ಲಿ ನಮಗೆ ನ್ಯಾಯ ಕೊಡಿಸಲು ಮನವಿ ಮಾಡುವುದಾಗಿ ಹೇಳಿದರು.
ವಿಧಾನಸಭೆಯ ವಿಶೇಷ ಅಧಿವೇಶನ ನಡೆಸಿ, ಒಳ ಮೀಸಲಾತಿ ಜಾರಿಗೆ ತರಲು ಒತ್ತಾಯಿಸಲಾಗಿದೆ. ರಾಜ್ಯಾದ್ಯಂತ ಪ್ರವಾಸ ಮಾಡಲಾಗಿದೆ, ಒಬ್ಬ ಸದಸ್ಯನೂ ಸಮೀಕ್ಷೆಯಿಂದ ಹೊರಗುಳಿಯಬಾರದು. ಬೆಂಗಳೂರಿನಲ್ಲಿ ಶಿP??Àಕರ ಕೊರತೆ ಇರುವ ಕಾರಣ ಅಲ್ಲಿ ಸಮೀಕ್ಷೆ ತಡವಾಗುತ್ತಿದೆ. ಒಳ ಮೀಸಲಾತಿ ಜಾರಿಯಾದ ನಂತರವೇ ಬ್ಯಾಕ್ಲಾಗ್ ಹುದ್ದೆಗಳನ್ನು ತುಂಬಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಹಾಗಾಗಿ ಸರ್ಕಾರ ಯಾವುದೇ ಹುದ್ದೆಗಳನ್ನು ತುಂಬಲು ಮುಂದಾಗಿಲ್ಲ ಎಂದರು.
ಎಲ್ಲ ಹುದ್ದೆಗಳನ್ನು ತಡೆಹಿಡಿದು, ಒಳ ಮೀಸಲಾತಿ ನಂತರ ತುಂಬಬೇಕು, ಜುಲೈ ಒಳಗೆ ಒಳ ಮೀಸಲಾತಿ ಜಾರಿಯಾಗಲಿದೆ ಎಂಬ ವಿಶ್ವಾಸವಿದೆ. ಸಿದ್ದರಾಮಯ್ಯನವರು ಜಾರಿಗೆ ತರಲಿದ್ದಾರೆ ಎಂಬ ಗ್ಯಾರೆಂಟಿಗೆ ಯಾವುದೇ ಹುದ್ದೆ ತುಂಬದಿರುವುದೇ ನಿದರ್ಶನ, ಜಾತಿ ಗಣತಿ ಏನೇ ಆಗಲೀ, ಒಳಮೀಸಲಾತಿ ಜಾರಿಯಾಗಲೇಬೇಕು, ಹುದ್ದೆಗಳ ನೇಮಕಾತಿ ತಡ ಮಾಡಿದ ಕಾರಣ ಅರ್ಜಿದಾರರ ವಯಸ್ಸು ಸಡಿಲ ಮಾಡಬೇಕು ಎಂದು ಒತ್ತಾಯಿಸಲಾಗಿದೆ. ಒಳ ಮೀಸಲಾತಿ ದೊರೆತರೆ ಎಲ್ಲ ಸೌಲಭ್ಯ ಸಮುದಾಯಕ್ಕೆ ಸಿಗಲಿದೆ, ಸದಾಶಿವ ಆಯೋಗದ ವರದಿ ಇತ್ತು, ತಕರಾರು ಬಂದ ಕಾರಣ ತಡವಾಯಿತು. ಆದಿಕರ್ನಾಟಕ, ಆದಿದ್ರಾವಿಡ ನಮ್ಮ ಸಮುದಾಯಕ್ಕೆ ಮಾರಕ ಎಂದು ಹೇಳಿದರು.
ಮಾಜಿ ಶಾಸಕರಾದ ಎಸ್.ಎಂ.ಮುನಿಯಪ್ಪ, ಕೆ.ವಿ.ಅನಸೂಯಮ್ಮ, ಮುಖಂಡ ಬಾಲಕುಂಟಹಳ್ಳಿ ಗಂಗಾಧರ್, ದೇವರಾಜ್, ತಿರುಮಳಪ್ಪ, ಕುಂದಲಗುರ್ಕಿ ಮುನೀಂದ್ರ, ಪಟ್ರೇನಹಳ್ಳಿ ಕೃಷ್ಣ, ಆನಂದ್, ಅಣ್ಣಮ್ಮ ಇದ್ದರು.