Ujjwal Nikam: ಸಂಜಯ್ ದತ್ ಮಾಹಿತಿ ಕೊಟ್ಟಿದ್ರೆ ಮುಂಬೈ ಬಾಂಬ್ ಬ್ಲಾಸ್ಟ್ ತಪ್ಪುತ್ತಿತ್ತು; ಉಜ್ವಲ್ ನಿಕಂ ಶಾಕಿಂಗ್ ಹೇಳಿಕೆ
Mumbai Blast: ಸುಮಾರು 32 ವರ್ಷಗಳ ಹಿಂದೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಮುಂಬೈ ಸರಣಿ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಉಜ್ವಲ್ ನಿಕಂ ಹಲವು ಶಾಕಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಖಾಸಗಿ ಮಾಧ್ಯಮಕ್ಕೆ ಅವರು ನೀಡಿದ ಸಂದರ್ಶನವದಲ್ಲಿ ಏನಿದೆ ಎಂಬುದನ್ನು ನೋಡೋಣ.


ಮುಂಬೈ: ಬರೋಬ್ಬರಿ 267ಜನರನ್ನು ಬಲಿ ಪಡೆದ 1993ರಲ್ಲಿ ಸಂಭವಿಸಿದ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಹಿರಿಯ ವಕೀಲ, ರಾಜ್ಯಸಭೆ ನಾಮ ನಿರ್ದೇಶನಗೊಂಡಿರುವ ಉಜ್ವಲ್ ನಿಕಂ(Ujjwal Nikam) ಹಲವು ಅಚ್ಚರಿಯ ಸಂಗತಿಗಳನ್ನು ಹೊರಹಾಕಿದ್ದಾರೆ. ಖಾಸಗಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ನಟ ಸಂಜಯ್ ದತ್ ಮನಸ್ಸು ಮಾಡಿದ್ದರೆ ಮುಂಬೈ ದಾಳಿಯನ್ನು(1993 blasts in Mumbai) ತಪ್ಪಿಸಬಹುದಿತ್ತು. ಅವರು AK-47 ಬಂದೂಕು ಎತ್ತಿಕೊಂಡ ಶಸ್ತ್ರಾಸ್ತ್ರ ತುಂಬಿದ ವಾಹನದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರೆ 267 ಪ್ರಾಣ ಉಳಿಯುತ್ತಿತ್ತು ಎಂದು ಅವರು ಹೇಳಿದ್ದಾರೆ.
ಭಯೋತ್ಪಾದನಾ ಮತ್ತು ವಿಧ್ವಂಸಕ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (TADA) ಕಾನೂನಿನ ಅಡಿಯಲ್ಲಿ ಭಯೋತ್ಪಾದಕ ಎಂಬ ಆರೋಪದಿಂದ ಕೋರ್ಟ್ ಸಂಜಯ್ ದರ್ ಅವರನ್ನು ಖುಲಾಸೆಗೊಳಿಸಿತ್ತು. ಆದರೆ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಅವರನ್ನು ದೋಷಿ ಎಂದು ಘೋಷಿಸಿತ್ತು. ನಂತರ, ಸುಪ್ರೀಂ ಕೋರ್ಟ್ ಅವರ ಆರು ವರ್ಷಗಳ ಶಿಕ್ಷೆಯನ್ನು ಐದು ವರ್ಷಗಳಿಗೆ ಇಳಿಸಿತು. ದತ್ ಪುಣೆಯ ಯೆರವಾಡ ಜೈಲಿನಲ್ಲಿ ಈ ಶಿಕ್ಷೆಯನ್ನು ಪೂರ್ಣಗೊಳಿಸಿದ್ದರು.
ನಿಜವಾಗಿಯೂ ಸಂಜಯ್ ದತ್ ಈ ಪ್ರಕರಣದಲ್ಲಿ ಅಮಾಯಕ. ಅವರು ಗನ್ಗಳ ಬಗ್ಗೆ ಆಸಕ್ತಿ ಹೊಂದಿದ್ದ ಕಾರಣ ಅದನ್ನು ಇಟ್ಟುಕೊಂಡಿದ್ದರು. ನನಗೆ ಒಂದೇ ಒಂದು ವಿಷಯ ಹೇಳಬೇಕು. ಮಾರ್ಚ್ 12 ರಂದು ಸ್ಫೋಟ ಸಂಭವಿಸಿದೆ, ಅದಕ್ಕೂ ಕೆಲವು ದಿನಗಳ ಮೊದಲು ಅವರ (ಸಂಜಯ್ ದತ್) ಮನೆಗೆ ವ್ಯಾನ್ ಬಂದಿತು. ಅದು ಶಸ್ತ್ರಾಸ್ತ್ರಗಳಿಂದ ತುಂಬಿತ್ತು. ಹ್ಯಾಂಡ್ ಗ್ರೆನೇಡ್ಗಳು, ಎಕೆ 47 ಗಳು ಅದರಲ್ಲಿದ್ದವು. ಅಬು ಸಲೇಂ (ದರೋಡೆಕೋರ ದಾವೂದ್ ಇಬ್ರಾಹಿಂನ ಸಹಾಯಕ) ಅದನ್ನು ತಂದಿದ್ದ. ಸಂಜಯ್ ಕೆಲವು ಹ್ಯಾಂಡ್ ಗ್ರೆನೇಡ್ಗಳು ಮತ್ತು ಬಂದೂಕುಗಳನ್ನು ಆರಿಸಿಕೊಂಡರು. ನಂತರ ಅವನು ಅದನ್ನೆಲ್ಲಾ ಹಿಂತಿರುಗಿಸಿ ಒಂದು ಎಕೆ 47 ಅನ್ನು ಮಾತ್ರ ಇಟ್ಟುಕೊಂಡರು. ಆ ಸಮಯದಲ್ಲಿ ಅವನು ಪೊಲೀಸರಿಗೆ ತಿಳಿಸಿದ್ದರೆ, ಪೊಲೀಸರು ತನಿಖೆ ನಡೆಸುತ್ತಿದ್ದರು ಮತ್ತು ಮುಂಬೈ ಸ್ಫೋಟಗಳು ಎಂದಿಗೂ ಸಂಭವಿಸುತ್ತಿರಲಿಲ್ಲ ಎಂದು ನಿಕಂ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ:Bomb Threat: 24 ಗಂಟೆಯೊಳಗೆ ಭಟ್ಕಳ ಪಟ್ಟಣ ಸ್ಫೋಟಿಸುತ್ತೇವೆ: ಪೊಲೀಸ್ ಠಾಣೆಗೆ ಬಾಂಬ್ ಬೆದರಿಕೆ ಸಂದೇಶ
ಅವರ ಬಲಿ ಇದ್ದ ಎಕೆ 47ಬಂದೂಕಿನಿಂದ ಯಾವುದೇ ಗುಂಡು ಹಾರಿರಲಿಲ್ಲ. ಆದರೆ ಅವರು ಪೊಲೀಸರಿಗೆ ಮಾಹಿತಿ ನೀಡದಿರುವುದು ಅನೇಕ ಜನರನ್ನು ಬಲಿತೆಗೆದುಕೊಂಡ ಸ್ಫೋಟಗಳಿಗೆ ಕಾರಣವಾಯಿತು. ಇನ್ನು ಸಂಜಯ್ ದತ್ಗೆ ಶಿಕ್ಷೆ ಪ್ರಕಟಗೊಂಡಾಗ ಅವರು ಸಂಪೂರ್ಣವಾಗಿ ನಿಯಂತ್ರಣ ಕಳೆದುಕೊಂಡು ಬಿಟ್ಟಿದ್ದರು. ಆಗ ನಾನು ಅವರಿಗೆ ಹೇಳಿದ್ದೆ, ʻಸಂಜಯ್ ಹೀಗೆ ಮಾಡಬೇಡ. ಮಾಧ್ಯಮಗಳು ನಿನ್ನನ್ನು ಗಮನಿಸುತ್ತಿವೆ. ನೀನು ಒಬ್ಬ ನಟ. ಶಿಕ್ಷೆಯಿಂದ ನೀನು ಭಯಭೀತನಾದಂತೆ ಕಾಣುತ್ತಿದ್ದರೆ, ಜನರು ನಿನ್ನನ್ನು ತಪ್ಪಿತಸ್ಥನೆಂದು ಪರಿಗಣಿಸುತ್ತಾರೆ. ನಿನಗೆ ಮೇಲ್ಮನವಿ ಸಲ್ಲಿಸಲು ಅವಕಾಶವಿದೆʼ ಎಂದು
ಅಜ್ಮಲ್ ಕಸಬ್ಗೆ ಬಿರಿಯಾನಿ ನೀಡಲಾಗ್ತಿತ್ತಾ?
ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬ್ನನ್ನು ಗಲ್ಲಿಗೇರಿಸಿದ 26/11 ಮುಂಬೈ ದಾಳಿಯ ಪ್ರಾಸಿಕ್ಯೂಟರ್ ಕೂಡ ನಿಕಂ ಆಗಿದ್ದರು. ಅಜ್ಮಲ್ ಕಸಬ್ ಜೈಲಿನಲ್ಲಿ ಬಿರಿಯಾನಿ ನೀಡಲಾಗುತ್ತಿದೆ ಎಂಬಆರೋಪದ ಬಗ್ಗೆ ಕೇಳಿದಾಗ, ಭಯೋತ್ಪಾದಕ ನಿಜವಾಗಿಯೂ ಬಿರಿಯಾನಿಗಾಗಿ ಬೇಡಿಕೆ ಇಟ್ಟಿದ್ದ . ಆದರೆ ಆ ಹೇಳಿಕೆಯನ್ನು ರಾಜಕೀಯ ನಾಯಕರು ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಬಳಸಿಕೊಂಡರು ಎಂದು ತಿಳಿಸಿದರು.