ಪಶ್ಚಿಮ ಬಂಗಾಳದ ನಂದಿಗ್ರಾಮ ಉಪಚುನಾವಣೆ: ಸಿಎಂ ಸುವೇಂದು ಅಧಿಕಾರಿ ಭೇಟಿ ಬೆನ್ನಲ್ಲೇ ನಾಮಪತ್ರ ಹಿಂತೆಗೆದುಕೊಂಡ ಮಮತಾ ಬ್ಯಾನರ್ಜಿ ಬಣದ ಅಭ್ಯರ್ಥಿ
West Bengal Politics: ಮಮತಾ ಬ್ಯಾನರ್ಜಿ ಬಣದಿಂದ ನಂದಿಗ್ರಾಮ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದ ಸಾಂಚಿತಾ ಪ್ರಧಾನ್ ಡೇ ಅವರು ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಸಿಎಂ ಭೇಟಿಯಾದ ಬಳಿಕ ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು. ಇದರಿಂದಾಗಿ ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಗೆ ನಂದಿಗ್ರಾಮದಲ್ಲಿ ಅಭ್ಯರ್ಥಿಯಿಲ್ಲದೆ ಹೋಯಿತು.
ನಾಮಪತ್ರ ಹಿಂತೆಗೆದುಕೊಂಡ ಮಮತಾ ಬ್ಯಾನರ್ಜಿ ಬಣದ ಅಭ್ಯರ್ಥಿ -
ಕೋಲ್ಕತ್ತಾ, ಸೆ.18: ಮಮತಾ ಬ್ಯಾನರ್ಜಿ (Mamata Banerjee) ಬಣದಿಂದ ನಂದಿಗ್ರಾಮ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದ ಸಾಂಚಿತಾ ಪ್ರಧಾನ್ ಡೇ ಅವರು ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡಿದ್ದಾರೆ. ಟಿಎಂಸಿ ಒಳಗಿನ ಬಣಗಳ ನಡುವಿನ ಸಂಘರ್ಷದ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಶಿಕ್ಷಕಿ ಸಾಂಚಿತಾ ಪ್ರಧಾನ್ ಡೇ ಅವರು, ಶುಕ್ರವಾರ (ಸೆ.18) ಮಧ್ಯಾಹ್ನ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಅವರನ್ನು ರಾಜ್ಯ ಸಚಿವಾಲಯದ ನಬನ್ನಾದಲ್ಲಿ ಭೇಟಿಯಾದರು. ಈ ವೇಳೆ ಅವರ ಪತಿ ಸತ್ಯಜಿತ್ ಜೊತೆಗಿದ್ದರು.
ಸಿಎಂ ಭೇಟಿಯಾದ ಬಳಿಕ ಅವರು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡರು. ಇದರಿಂದಾಗಿ ಮಮತಾ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ಗೆ ನಂದಿಗ್ರಾಮದಲ್ಲಿ ಅಭ್ಯರ್ಥಿಯಿಲ್ಲದೆ ಹೋಯಿತು. ಅಕ್ಟೋಬರ್ 6 ರಂದು ನಡೆಯಲಿರುವ ಉಪಚುನಾವಣೆಗೆ, ಚುನಾವಣಾ ಆಯೋಗವು ಮಮತಾ ಬ್ಯಾನರ್ಜಿ ನೇತೃತ್ವದ ಬಣಕ್ಕೆ ಹೊಸ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನಿಗದಿಪಡಿಸಿದ ಕೆಲವೇ ಗಂಟೆಗಳ ನಂತರ ನಾಮಪತ್ರ ಹಿಂತೆಗೆದುಕೊಳ್ಳಲಾಗಿದೆ.
ಇಲ್ಲಿದೆ ವಿಡಿಯೊ:
#WATCH | West Bengal | Mamata Banerjee-led faction candidate from Nandigram Sanchita Pradhan (Dey) has withdrawn her nomination for the Nandigram Assembly constituency by-election.
— ANI (@ANI) September 18, 2026
(Video and pic: West Bengal CMO) https://t.co/trquddnraK pic.twitter.com/32HxXCY62y
ಮಮತಾ ಬ್ಯಾನರ್ಜಿ ಬಣದಿಂದ ಹೊಸ ಪಕ್ಷದ ಹೆಸರು ಪ್ರಸ್ತಾಪ
ಮಮತಾ ಬ್ಯಾನರ್ಜಿ ನೇತೃತ್ವದ ಬಣವು ಮೂರು ಪರ್ಯಾಯ ಹೆಸರುಗಳು ಮತ್ತು ಎರಡು ಹೊಸ ಚಿಹ್ನೆಗಳ ಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿದೆ. ಚುನಾವಣಾ ಆಯೋಗವು ನೀಡಿದ್ದ ಶುಕ್ರವಾರ ಬೆಳಗ್ಗೆ 11 ಗಂಟೆಯ ಗಡುವಿಗಿಂತ ಮುಂಚಿತವಾಗಿ, ಅಂದರೆ ಗುರುವಾರ ರಾತ್ರಿ 11:36ರ ಸುಮಾರಿಗೆ ಮಮತಾ ಬ್ಯಾನರ್ಜಿ ಬಣವು ತನ್ನ ಹೊಸ ಆಯ್ಕೆಗಳನ್ನು ಆಯೋಗಕ್ಕೆ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಮಮತಾ ಬ್ಯಾನರ್ಜಿ ನೇತೃತ್ವದ ಬಣವು ಭಾರತೀಯ ಚುನಾವಣಾ ಆಯೋಗಕ್ಕೆ (ECI) ಮೂರು ಹೆಸರುಗಳು ಮತ್ತು ಎರಡು ಚಿಹ್ನೆಗಳ ಆಯ್ಕೆಗಳನ್ನು ಪ್ರಸ್ತಾಪಿಸಿದೆ. ಅವುಗಳಲ್ಲಿ ಮಮತಾ ಆಲ್ ಇಂಡಿಯಾ ತೃಣಮೂಲ ಕಾಂಗ್ರೆಸ್ ಎಂಬ ಹೆಸರನ್ನು ಅಧಿಕೃತವಾಗಿ ದೃಢೀಕರಿಸಲಾಗಿದೆ. ಚಿಹ್ನೆಗಳ ವಿಷಯಕ್ಕೆ ಬಂದರೆ, ಈ ಬಣದ ಮೊದಲ ಆದ್ಯತೆಯ ಚಿಹ್ನೆ ಫುಟ್ಬಾಲ್ಗೆ ಸಂಬಂಧಿಸಿದ್ದಾಗಿದೆ. ಅವರ ಎರಡನೇ ಚಿಹ್ನೆಯ ಆಯ್ಕೆಯು ಸಹ ಕ್ರೀಡೆಗೆ ಸಂಬಂಧಿಸಿದ ಮತ್ತೊಂದು ಗುರುತಾಗಿದೆ ಎನ್ನಲಾಗಿದೆ.
ಬಹಳ ದಿನಗಳ ಬಳಿಕ ಮಮತಾ ಬ್ಯಾನರ್ಜಿಗೆ ತುಸು ರಿಲೀಫ್; ಘರ್ ವಾಪಸಿ ಘೋಷಿಸಿದ ತೃಣಮೂಲ ಕಾಂಗ್ರೆಸ್ನ ಬಂಡಾಯ ಶಾಸಕ
ಇನ್ನೊಂದೆಡೆ, ಪಶ್ಚಿಮ ಬಂಗಾಳದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಿತಬ್ರತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಭಿನ್ನಮತೀಯ ಬಣವು ತನ್ನ ಹೊಸ ಪಕ್ಷದ ಹೆಸರಿಗಾಗಿ ಡೆಮೋಕ್ರಾಟಿಕ್ ತೃಣಮೂಲ ಕಾಂಗ್ರೆಸ್ ಮತ್ತು ನ್ಯಾಷನಲಿಸ್ಟ್ ತೃಣಮೂಲ ಕಾಂಗ್ರೆಸ್ ಎಂಬ ಆಯ್ಕೆಗಳನ್ನು ಮೂರು ಚಿಹ್ನೆಗಳೊಂದಿಗೆ ಪ್ರಸ್ತಾಪಿಸಿದೆ.