Daily Horoscope: ದ್ವಾದಶಿ ತಿಥಿಯ ಈ ದಿನ ಯಾವ ರಾಶಿಗೆ ಶುಭ ಫಲವಾಗಲಿದೆ?
ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ ಉತ್ತರಾಷಾಢ ನಕ್ಷತ್ರದ ಸೆಪ್ಟೆಂಬರ್ 4ರಂದು ದಿನ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದು ಹೀಗೆ.

Daily Horoscope -

ಬೆಂಗಳೂರು: ವಿಶ್ವ ವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಭಾದ್ರಪದ ಮಾಸದ ಶುಕ್ಲ ಪಕ್ಷದ ಉತ್ತರಾಷಾಢ ನಕ್ಷತ್ರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ (Daily Horoscope) ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಉತ್ತಾರಾಷಾಡ ನಕ್ಷತ್ರ ಇದ್ದು, ಇದರ ಅಧಿಪತಿ ಶನಿ ಆಗಿದ್ದಾನೆ. ಮೇಷ ರಾಶಿಯವರಿಗೆ ಇಂದು ಅತ್ಯುತ್ತಮ ದಿನ ಆಗಲಿದೆ. ಕಾರ್ಯ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ಆದರೂ ಕೂಡ ಮನೆ ಮತ್ತು ಕಾರ್ಯ ಕ್ಷೇತ್ರ ಎರಡನ್ನು ಸಮತೋಲನದಲ್ಲಿ ನಿಭಾಯಿಸಬೇಕಾಗುತ್ತದೆ.
ವೃಷಭ ರಾಶಿ: ಇಂದು ವೃಷಭ ರಾಶಿಯವರಿಗೆ ಭಾಗ್ಯೋದಯದ ದಿನವಾಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಇದಕ್ಕೆ ಹಿರಿಯರ- ಭಗವಂತನ ಆಶೀರ್ವಾದ ಮುಖ್ಯ.
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಸ್ವಲ್ಪ ಕಷ್ಟದ ದಿನವಾಗಲಿದೆ. ಮನಸ್ಸಿಗೆ ಸ್ವಲ್ಪ ಕ್ಷೇಷ ಇರಲಿದ್ದು ಮುಖ್ಯವಾದ ವಿಚಾರಗಳ ನಿರ್ಧಾರ ಇಂದು ಬೇಡ. ಯಾವುದೇ ಮುಖ್ಯ ಕೆಲಸಗಳನ್ನು ಇಂದು ಮಾಡಲು ಹೋಗಬೇಡಿ. ಪ್ರೇಮ ಪ್ರೀತಿ ವಿಚಾರಗಳಲ್ಲಿ ಕಷ್ಟವಾಗಲಿದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಬೆಳಗ್ಗೆ ಎದ್ದ ಕೂಡಲೇ ಶುಭ ಸುದ್ದಿ ಕೇಳಲಿದ್ದೀರಿ. ಈ ದಿನ ಬಹಳಷ್ಟು ಖುಷಿಯಿಂದ ದಿನವನ್ನು ಕಳೆಯಲಿದ್ದೀರಿ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ಬೆಳಗ್ಗೆ ಎದ್ದ ತಕ್ಷಣ ಮನಸ್ಸಿಗೆ ಕಿರಿ ಕಿರಿ ಇರಬಹುದು. ಆದರೆ ದಿನ ಕಳೆದಂತೆ ನಿಮಗೆ ನೆಮ್ಮದಿ ಪ್ರಾಪ್ತಿಯಾಗಬಹುದು. ಆರೋಗ್ಯದಲ್ಲಿ ಸುಧಾರಣೆ ಜತೆಗೆ ಮನಸ್ಥಿತಿಯಲ್ಲೂ ಸುಧಾರಣೆ ಕಾಣುತ್ತೀರಿ.
ಕನ್ಯಾ ರಾಶಿ: ಕನ್ಯಾ ರಾಶಿಯಲ್ಲಿರುವ ವ್ಯವಹಾರಸ್ಥರಿಗೆ ಕಷ್ಟದ ದಿನ ಆಗಲಿದೆ. ದಾಂಪತ್ಯದಲ್ಲಿ ಸವಾಲು ಎದುರಾಗಲಿದೆ. ಕನ್ಯಾ ರಾಶಿಯ ಅಧಿಪತಿ ಬುಧ ಆಗಿರುವುದರಿಂದ ನಿಮ್ಮ ಬುದ್ದಿ ಕ್ರಿಯಾಶೀಲತೆಯಿಂದ ಜಯವನ್ನು ಗಳಿಸುತ್ತೀರಿ.
ತುಲಾ ರಾಶಿ: ತುಲಾ ರಾಶಿಯವರಿಗೆ ಇಂದು ನಾನಾ ವಿಚಾರಗಳಲ್ಲಿ ಯೋಚನೆ ಇರಲಿದೆ. ಸ್ವಲ್ಪ ಕಷ್ಟದ ದಿನ ನಿಮಗೆ ಆಗಲಿದೆ. ತಾಯಿಯ ಆರೋಗ್ಯದ ಬಗ್ಗೆಯೂ ಯೋಚನೆ ಇರುತ್ತದೆ.
ಇದನ್ನು ಓದಿ:Daily Horoscope: ಶನಿವಾರದ ಈ ದಿನ ಸಪ್ತಮಿ ತಿಥಿಯಂದು ಯಾವ ರಾಶಿಗೆ ಶುಭ ಫಲವಾಗಲಿದೆ?
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ನೆಮ್ಮದಿಯ ಜತೆಗೆ ನಿಮ್ಮ ಪರಾಕ್ರಮದಲ್ಲಿ ಚಂದ್ರ ಇರುವುದರಿಂದ ಬಹಳ ಒಳ್ಳೆಯ ಕೆಲಸ ಕಾರ್ಯಗಳನ್ನು ಮಾಡಲಿದ್ದೀರಿ. ಬಾಕಿ ಇದ್ದ ಎಲ್ಲ ಕೆಲಸಗಳು ಕೂಡ ಇಂದು ಸಂಪೂರ್ಣವಾಗಲಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು, ಪತ್ರಿಕೋದ್ಯಮದಲ್ಲಿರುವವರಿಗೆ ಅತ್ಯುತ್ತಮ ದಿನವಾಗಲಿದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರು ಮನೆ, ಕುಟುಂಬದ ಬಗ್ಗೆ ಹೆಚ್ಚಿನ ಜವಾಬ್ದಾರಿ ಹೊರಬೇಕಾಗುತ್ತದೆ. ಹಣಕಾಸಿನ ವ್ಯವಹಾರ ಸುಭದ್ರತೆಯ ಬಗ್ಗೆ ಗಮನ ವಹಿಸಬೇಕಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಉತ್ತಮ ದಿನ ಆಗಲಿದೆ. ನಿಮ್ಮ ರಾಶಿಯಲ್ಲಿ ಚಂದ್ರ ಇರುವುದರಿಂದ ನೀವು ಬಹಳಷ್ಟು ಒಳ್ಳೆಯ ಫಲವನ್ನು ಕಾಣುತ್ತೀರಿ. ಎರಡು ಮೂರು ದಿನಗಳ ಹಿಂದೆ ಇದ್ದ ಸಮಸ್ಯೆಗಳು ಬಗೆಹರಿಯಲಿದೆ.
ಕುಂಭರಾಶಿ: ಕುಂಭ ರಾಶಿಯವರಿಗೆ ಇಂದು ಸ್ವಲ್ಪ ಕಷ್ಟದ ದಿನ ಆಗಲಿದೆ. ಯಾವುದೇ ಇಂದು ಮುಖ್ಯ ನಿರ್ಧಾರಗಳು ಬೇಡ. ಯಾರು ನಿಮ್ಮ ಸಹಾಯಕ್ಕೆ ಇಂದು ಬರುವುದಿಲ್ಲ. ನಿಮ್ಮ ಪ್ರೀತಿ ಪಾತ್ರರೇ ಇಂದು ನಿಮ್ಮ ಸಹಾಯಕ್ಕೆ ಬರುವುದಿಲ್ಲ. ಹಾಗಾಗಿ ಏಕಾಂಗಿ ಎನ್ನುವ ಭಾವನೆ ನಿಮ್ಮನ್ನು ಕಾಡಬಹುದು. ಧ್ಯಾನ ಮಾಡುವ ಮೂಲಕ ಸಮಯ ಕಳೆಯಿರಿ.
ಮೀನ ರಾಶಿ: ಮೀನ ರಾಶಿ ಅವರಿಗೆ ಅತ್ಯುತ್ತಮ ದಿನ ಆಗಲಿದ್ದು ಮನಸ್ಸಿಗೆ ನೆಮ್ಮದಿ ಸಿಗಲಿದೆ. ಮಿತ್ರರಿಂದ ನೆಮ್ಮದಿ ಹಾಗೂ ಧನಾಗಮನದ ಸೂಚನೆಗಳು ಇವೆ. ಗುಂಪು ಕೆಲಸಗಳಿಂದ ಯಶಸ್ಸು ಪಡೆಯಬಹುದು. ಇಂದು ಭಗವಂತನ ಆರಾಧನೆ, ಧ್ಯಾನ ಮಾಡುವ ಮೂಲಕ ಉತ್ತಮ ಫಲ ನೀವು ಪಡೆಯಬಹುದು. ಎಲ್ಲ ರಾಶಿಯವರು ನಿತ್ಯ ಶ್ಲೋಕ ಪಠಣ ಅಭ್ಯಾಸ ಮಾಡುವ ಮೂಲಕ ಶುಭದಾಯಕ ದಿನವನ್ನು ಕಳೆಯಬಹುದು.