ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ಕರ್ನಾಟಕ
Theft Case: ಬೆಂಗಳೂರಿನ ಟೆಕ್ಕಿ ಮನೆಯಲ್ಲಿ 1 ಕೆಜಿ ಚಿನ್ನ, 4 ಲಕ್ಷ ಹಣ ಕಳ್ಳತನ; ದೂರು ದಾಖಲು

ಬೆಂಗಳೂರಿನ ಟೆಕ್ಕಿ ಮನೆಯಲ್ಲಿ 1 ಕೆಜಿ ಚಿನ್ನ, 4 ಲಕ್ಷ ಹಣ ಕಳ್ಳತನ!

Bengaluru News: ಬೆಂಗಳೂರು ನಗರದ ಜ್ಞಾನಭಾರತಿಯ ಮಲ್ಲತ್ತಹಳ್ಳಿಯಲ್ಲಿ ಕಳ್ಳತನ ನಡೆದಿದೆ. ಟೆಕ್ಕಿಯೊಬ್ಬರ ಮನೆಯಲ್ಲಿ 1 ಕೆಜಿ ಚಿನ್ನ, 4 ಲಕ್ಷ ರೂ. ನಗದು ಕಳ್ಳರು ಕದ್ದಿದ್ದಾರೆ. ಈ ಸಂಬಂಧ ಟೆಕ್ಕಿ, ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

CM Siddaramaiah: ಬಿಜೆಪಿ ಸರ್ಕಾರ ಮದ್ದೂರಿನಲ್ಲಿ ಏನು ಮಾಡಿದೆ ಎನ್ನುವುದನ್ನು ಜನತೆಗೆ ತೋರಿಸಿ: ಸಿಎಂ ಸವಾಲು

ರಾಜ್ಯದ ಪಾಲಿನ ಗೊಬ್ಬರವನ್ನೂ ಕೇಂದ್ರ ಕೊಡುತ್ತಿಲ್ಲ: ಸಿಎಂ

CM Siddaramaiah: ರಾಜ್ಯಕ್ಕೆ ಕೊಡಬೇಕಾದಷ್ಟು ಗೊಬ್ಬರ ಕೊಡದೆ ಕೇಂದ್ರ ಸರ್ಕಾರ ರಾಜ್ಯದ ರೈತರ ವಿರೋಧಿಯಾಗಿದೆ. ನಮ್ಮ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಅಗತ್ಯ ಗೊಬ್ಬರ ಸರಬರಾಜು ಮಾಡುವಂತೆ ಒತ್ತಾಯಿಸಿ ಒಂದು ವಾರ ಕಳೆದರೂ ಇದುವರೆಗೂ ಕೊಟ್ಟಿಲ್ಲ. ಬಿಜೆಪಿ ಸಂಸದರು ಮತ್ತು ರಾಜ್ಯ ಪ್ರತಿನಿಧಿಸುವ ಕೇಂದ್ರ ಸಚಿವರು ಕೇಂದ್ರದ ಜತೆ ಮಾತನಾಡಿ ಗೊಬ್ಬರ ಕೊಡಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

Vokkaliga Yuva Brigade: ನಂಜೇಗೌಡ ನಂಜುಂಡ ಒಕ್ಕಲಿಗ ಸಮುದಾಯದ ಆಸ್ತಿಯಾಗಿದ್ದಾರೆ: ಡಾ.ನಿಶ್ಚಲಾನಂದ ಸ್ವಾಮೀಜಿ

ನಂಜೇಗೌಡ ನಂಜುಂಡ ಒಕ್ಕಲಿಗ ಸಮುದಾಯದ ಆಸ್ತಿಯಾಗಿದ್ದಾರೆ

Vokkaliga Yuva Brigade: ನಂಜೇಗೌಡ ನಂಜುಂಡ ಅವರು ಕೂಡ ತಮ್ಮ ಸಾಮಾಜಿಕ ಸೇವೆಗಳ ಮೂಲಕ ಈ ಸಮುದಾಯದ ಆಸ್ತಿಯಾಗಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ವಿದ್ಯಾವಂತ, ಪ್ರತಿಭಾವಂತ ವಿದ್ಯಾರ್ಥಿಗಳ ಬಗ್ಗೆ ಚಿಂತಿಸುತ್ತಿದ್ದಾರೆ ಎಂದು ಡಾ.ನಿಶ್ಚಲಾನಂದನಾಥ ಮಹಾಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Fire Accident: ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ; 15ಕ್ಕೂ ಹೆಚ್ಚು ಬೈಕ್​ಗಳು ಬೆಂಕಿಗಾಹುತಿ

ಭಾರೀ ಅಗ್ನಿ ಅವಘಡ; 15ಕ್ಕೂ ಹೆಚ್ಚು ಬೈಕ್​ಗಳು ಬೆಂಕಿಗಾಹುತಿ

ಹಲಸೂರು ಮಾರ್ಕೆಟ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, (Fire Accident) ಬೈಕ್​ ಅಂಗಡಿಗಳು ಸುಟ್ಟು ಕರಕಲಾಗಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಬೆಂಕಿ ಅವಘಡ ಸಂಭವಿಸಿದೆ. ಸ್ಥಳೀಯ ನಿವಾಸಿಗಳು ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ 15 ಬೈಕ್‌ ಬೆಂಕಿಗಾಹುತಿಯಾಗಿದೆ.

Landslide: ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಭೂ ಕುಸಿತ; ಗಂಟೆಗಟ್ಟಲೇ ಸಂಚಾರ ಬಂದ್‌

ಮಂಗಳೂರು- ಬೆಂಗಳೂರು ಹೆದ್ದಾರಿಯಲ್ಲಿ ಭೂ ಕುಸಿತ; ಸಂಚಾರ ಬಂದ್‌

ಕಳೆದೊಂದು ವಾರದಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಹಲವೆಡೆ ಭೂ ಕುಸಿತ ಸಂಭವಿಸಿದ್ದು, ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ನಂ 75 ರ ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಎಂಬಲ್ಲಿ, ಗುಡ್ಡ ಕುಸಿದಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Gold Price Today: ಸ್ವರ್ಣಪ್ರಿಯರಿಗೆ ಕೊಂಚ ನಿರಾಳ; ಚಿನ್ನದ ದರದಲ್ಲಿ ಯಥಾಸ್ಥಿತಿ

ಇಂದು ಚಿನ್ನದ ದರ ಎಷ್ಟಿದೆ? ಇಲ್ಲಿ ಚೆಕ್‌ ಮಾಡಿ

Gold Price Today on 28th July 2025: ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ ಇಳಿಕೆ ಕಂಡು ಬಂದಿತ್ತು. ಆ ಮೂಲಕ ಆ ಮೂಲಕ 22 ಕ್ಯಾರಟ್‌ 1 ಗ್ರಾಂ ಚಿನ್ನದ ದರ 9,160 ರೂ ಗೆ ಬಂದು ನಿಂತಿತ್ತು. 24 ಕ್ಯಾರಟ್‌ 1 ಗ್ರಾಂ ಚಿನ್ನ 55 ರೂ ಇಳಿಕೆ ಕಂಡಿದ್ದು, 9,993 ರೂ. ಆಗಿತ್ತು.

Mallikarjun Kharge: AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪುತ್ರನ  ಆರೋಗ್ಯ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ ಮಿಲಿಂದ್‌ ಆರೋಗ್ಯ ಸ್ಥಿತಿ ಗಂಭೀರ

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕಿರಿಯ ಪುತ್ರ ಮಿಲಿಂದ್ ಖರ್ಗೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನಲಾಗುತ್ತಿದೆ. ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ. ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ಮಿಲಿಂದ ಖರ್ಗೆಯವರು ಕಳೆದ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.

Bangaluru Weather: ಬೆಂಗಳೂರಿನ ವೆದರ್‌ ಫುಲ್‌ ಕೂಲ್‌, ಕೂಲ್‌; ರೋಗಕ್ಕೆ ತುತ್ತಾಗುತ್ತಿರುವ ಜನ

ಬೆಂಗಳೂರಿನ ವೆದರ್‌ ಫುಲ್‌ ಕೂಲ್‌, ಕೂಲ್‌; ವೈರಾಣುಗಳ ಆತಂಕ

ಕಳೆದೊಂದು ವಾರದಿಂದ ಬೆಂಗಳೂರಿನ ವಾತಾವರಣದಲ್ಲಿ ಬದಲಾವಣೆಯಾಗಿದೆ. ಸಂಪೂರ್ಣ ಕೂಲ್‌ ವೆದರ್‌ ಆಗಿದ್ದು, ಸಂಜೆಯಾದರೆ ಮಳೆ, ಚಳಿ ಹೀಗೆ ಹವಾಮಾನ ವೈಪರಿತ್ಯದಿಂದ ಜನರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ವಾರದಲ್ಲಿ 173 ಜನರು ಉಸಿರಾಟದ ಸೋಂಕಿಗೆ, 53 ಜನರು ಮಲೇರಿಯಾ ಹಾಗೂ 32 ಜನರು ಚಿಕನ್ ಗುನ್ಯಾ ರೋಗದಿಂದ ಬಳಲುತ್ತಿದ್ದಾರೆ.

Karnataka Rain Update: ಗಮನಿಸಿ; ಬೆಂಗಳೂರು, ಕರಾವಳಿ ಸೇರಿದಂತೆ ಈ ಜಿಲ್ಲೆಗಳಲ್ಲಿ ಇಂದು ಸುರಿಯಲಿದೆ ಭಾರಿ ಮಳೆ

ಬೆಂಗಳೂರು, ಕರಾವಳಿ ಸೇರಿದಂತೆ ಈ ಜಿಲ್ಲೆಗಳಲ್ಲಿ ಸುರಿಯಲಿದೆ ಭಾರಿ ಮಳೆ

Karnataka weather: ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಬೆಂಗಳೂರು (ನಗರ ಮತ್ತು ಗ್ರಾಮಾಂತರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ವಿಜಯನಗರ, ಶಿವಮೊಗ್ಗ ಜಿಲ್ಲೆಗಳಲ್ಲಿ ಸೋಮವಾರ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Chikkaballapur News: ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು: ಪೆರೆಸಂದ್ರ ಎಂ.ವೆಂಕಟೇಶ್

ಪರಿಶ್ರಮ ಮತ್ತು ತಾಳ್ಮೆಯಿಂದ ಮಾತ್ರ ಯಶಸ್ಸು

ಇಂದಿನ ಆಧುನಿಕ ಜಗತ್ತು ಪ್ರತಿಭೆಗೆ ಮನ್ನಣೆ ನೀಡುವುದರಿಂದ ಪರಿಶ್ರಮ ಅಗತ್ಯವಾಗಿ ಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಅಭ್ಯರ್ಥಿಗಳು ನಿರಂತರವಾಗಿ ಓದಿನ ಕಡೆ ಗಮನ ಹರಿಸ ಬೇಕು. ಈ ಸಂಸ್ಥೆಯು ನೀಡುವ ತರಬೇತಿಯನ್ನು ಶ್ರದ್ಧೆಯಿಂದ ಪಡೆದು ಬದುಕಿನಲ್ಲಿ ಯಶಸ್ವಿಯಾಗ ಬೇಕೆಂದು ತಿಳಿಸಿದರು

Chikkaballapur News: ಭಾಗ್ಯನಗರ ಪಟ್ಟಣದ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿ : ಸಚಿವ ಬೈರತಿ ಸುರೇಶ್

ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿ

ನಾನು ಮತ್ತು ಶಾಸಕ ಎಸ್.ಎನ್ ಸುಬ್ಬಾರೆಡ್ಡಿಯವರ ನಿರಂತರ ಪರಿಶ್ರಮದಿಂದ ಗಂಟಲಮಲ್ಲಮ್ಮ ಡ್ಯಾಂ ಗೆ 189 ಕೋಟಿ ಯೋಜನೆಗೆ ಅನುಮೋದನೆ ಸಿಕ್ಕಿದೆ. ಹಾಗೇಯೆ ಶಾಸಕರು, ಬಾಗೇಪಲ್ಲಿಗೆ ಭಾಗ್ಯ ನಗರವೆಂದು ಮರುನಾಮಕರಣ ಮಾಡಲು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಇನ್ನು ಈ ಭಾಗಕ್ಕೆ ಕೈಗಾರಿಕೆ ಗಳು ಶೀಘ್ರದಲ್ಲಿ  ಬರಲಿದ್ದು ೬೦೦ ಎಕರೆ ಪ್ರದೇಶದಲ್ಲಿ ಆರಂಭಿಸಲು ಅಂತಿಮವಾಗಲಿದ್ದು, ಇನ್ನೂ 500 ಎಕರೆ ಭೂಮಿಗೆ ಪ್ರಾಥಮಿಕ ಅನುಮೋಧನೆಯೂ ಸಿಕ್ಕಿದೆ

Dharna: ರಸ್ತೆಗಾಗಿ ಬೀದಿಗಿಳಿದ ಜನತೆ : ಮುಷ್ಟೂರು ಗ್ರಾಮದಲ್ಲಿ ಅಹೋರಾತ್ರಿ ಧರಣಿ

ರಸ್ತೆಗಾಗಿ ಬೀದಿಗಿಳಿದ ಜನತೆ : ಮುಷ್ಟೂರು ಗ್ರಾಮದಲ್ಲಿ ಅಹೋರಾತ್ರಿ ಧರಣಿ

ಚಿಕ್ಕಬಳ್ಳಾಪುರ ನಗರದಿಂದ ಈಶಾ ಧ್ಯಾನಕೇಂದ್ರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಿಗೆ ಪ್ರಮುಖ ಸಂಪರ್ಕ ಸೇತುವೆಯಗಿರುವ ಈ ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಾಣ ಮಾಡಲು ಮಾರ್ಚ್ ತಿಂಗಳಲ್ಲಿ ಶಾಸಕ ಪ್ರದೀಪ್ ಈಶ್ವರ್ ಭೂಮಿಪೂಜೆ ನೆರವೇರಿಸಿದ್ದರು.ಇದಾಗಿ ತಿಂಗಳ ಹಿಮದೆ ಗುತ್ತಿಗೆ ದಾರ ರಸ್ತೆಯನ್ನು ಪೂರ್ಣ ವಾಗಿ ಕಿತ್ತಿದ್ದಾರೆ. ನಂತರ ಯಾವುದೇ ಕೆಲಸ ಮಾಡಿಲ್ಲ.ಇದರಿಂದಾಗಿ ಈ ರಸ್ತೆಯಲ್ಲಿ ಓಡಾ ಡಲು ಕಷ್ಟವಾಗುತ್ತಿದೆ.

ಜು.29ರಂದು ರೈತರಿಗೆ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ

ಜು.29ರಂದು ರೈತರಿಗೆ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ

ಭಾರತೀಯ ಕಿಸಾನ್ ಸಂಘದ ವತಿಯಿಂದ ನಗರದ ಉಡುವಲೋಡು ದಿನ್ನೆಯಲ್ಲಿರುವ ಶ್ರೀ ಸಾಯಿ ಬಾಬ ಮಂದಿರದ ಆವರಣದಲ್ಲಿ ತಾಲೂಕಿನ ರೈತರಿಗಾಗಿ ಒಂದು ದಿನದ ನೈಸರ್ಗಿಕ ಕೃಷಿ ಕಾರ್ಯಾಗಾರ ವನ್ನು ಜು.29ರಂದು ಮಂಗಳವಾರ ಏರ್ಪಡಿಸಲಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ್ ತಿಳಿಸಿದ್ದಾರೆ.

Self Harming: ಮದುವೆಯಾಗಿದ್ದರೂ ಪರಪುರುಷನ ಜತೆ ದೈಹಿಕ ಸಂಬಂಧ ಬೆಳೆಸಿದ ಮಹಿಳೆ; ಆತ ಮದುವೆಗೆ ನಿರಾಕರಿಸಿದಾಗ ಆತ್ಮಹತ್ಯೆ

ಅನೈತಿಕ ಸಂಬಂಧಕ್ಕೆ ಮತ್ತೊಂದು ಗೃಹಿಣಿ ಬಲಿ

Vijayanagar News: ಮದುವೆಯಾಗಿದ್ದರೂ ಪರಪುರುಷನ ಜತೆ ದೈಹಿಕ ಸಂಬಂಧ ಬೆಳೆಸಿಕೊಂಡಿದ್ದ ಮಹಿಳೆ ಆತ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತ ಮಹಿಳೆಯನ್ನು ವಿಜಯನಗರ ಜಿಲ್ಲೆಯ ಹಡಗಲಿ ತಾಲೂಕಿನ ಮದಲಗಟ್ಟಿ ಗ್ರಾಮದ ಜ್ಯೋತಿ ಎಂದು ಗುರುತಿಸಲಾಗಿದೆ.

Bengaluru News: ಪತ್ನಿಯ ವಿರುದ್ಧವೇ ಪತಿಯ ಸಂಚು; ಮನೆಯಿಂದ ಹೊರಹಾಕಿ ಮಕ್ಕಳನ್ನು ದೂರ ಮಾಡಿದ ಪಾಪಿ

ಪತ್ನಿಯನ್ನು ಮನೆಯಿಂದ ಹೊರಹಾಕಿದ ಪಾಪಿ ಪತಿ

ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಅಮಾನುಷ ಘಟನೆಯೊಂದು ನಡೆದಿದ್ದು, ಪತಿಯೇ ಪತ್ನಿಯನ್ನು ಮನೆಯಿಂದ ಹೊರ ಹಶಾಕಿದ್ದಾನೆ. ಅಲ್ಲದೆ ಪತ್ನಿಯನ್ನು ಮಕ್ಕಳಿಂದ ದೂರ ಮಾಡಿದ್ದಾನೆ. ಸಂತ್ರಸ್ತೆಯನ್ನು ಸುಗುಣ ಮತ್ತು ಆಕೆಯ ಪತಿಯನ್ನು ಗೋಪಾಲಕೃಷ್ಣ ಎಂದು ಗುರುತಿಸಲಾಗಿದೆ.

Bomb Threat: ಬೆಂಗಳೂರು ವಿಮಾನ ನಿಲ್ದಾಣ, ಡಿಕೆಶಿ ಕಚೇರಿಗೆ ಬಾಂಬ್‌ ಬೆದರಿಕೆ

ಬೆಂಗಳೂರು ವಿಮಾನ ನಿಲ್ದಾಣ, ಡಿಕೆಶಿ ಕಚೇರಿಗೆ ಬಾಂಬ್‌ ಬೆದರಿಕೆ

ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕಚೇರಿಯಲ್ಲಿ ಬಾಂಬ್ ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿಯಿಂದ ಇ ಮೇಲ್ ಸಂದೇಶ ಬಂದಿದೆ.ಕೊನೆಗೆ ಇದೊಂದು ಹುಸಿ ಬೆದರಿಕೆ ಸಂದೇಶ ಎನ್ನುವುದು ಗೊತ್ತಾಗಿದೆ.

Ex Soldier Hunger strike: ಕಾರ್ಗಿಲ್ ವಿಜಯೋತ್ಸವದ ದಿವಸಾ ಜಮೀನಿಗಾಗಿ ಉಪವಾಸ ಸತ್ಯಾಗ್ರಹ ಕುಳಿತ ಮಾಜಿ ಸೈನಿಕ

26 ವರ್ಷಗಳಿಂದ ಜಮೀನಿಗಾಗಿ ಹೋರಾಟ ಮಾಡುತ್ತಿರುವ ಮಾಜಿ ಸೈನಿಕ

ಸೇನೆಯಿಂದ ನಿವೃತ್ತರಾಗಿ ಸುಮಾರು 26 ವರ್ಷಗಳು ಕಳೆದರೂ ಜಿಲ್ಲಾಡಳಿತ ಇವರಿಗೆ ಭೂಮಿ ನೀಡಿಲ್ಲ. ಜಮೀನಿಗಾಗಿ 26 ವರ್ಷಗಳಿಂದ ಹೋರಾಟ ಮಾಡುತ್ತಿರುವ ತಾಲೂಕಿನ ಅಂಬಾಜಿ ದುರ್ಗಾ ಹೋಬಳಿಯ ರಾಯಪಲ್ಲಿ ಗ್ರಾಮದ ಶಿವಾನಂದ ರೆಡ್ಡಿ ಎಂಬತಾ ತನ್ನ ಪತ್ನಿ ಸಮೇತ ನ್ಯಾಯಕ್ಕಾಗಿ ಈಗ  ಉಪವಾಸ ಸತ್ಯಾಗ್ರಹ ಮಾಡುತ್ತಾ ಕುಳಿತಿದ್ದಾರೆ.

ಕಾರ್ಗಿಲ್ ವಿಜಯೋತ್ಸವ ದಿನ: ಹೆತ್ತ ನೆಲಕ್ಕಾಗಿ ನೆತ್ತರು ಚೆಲ್ಲಿದ ವೀರ ಯೋಧರಿಗೆ ನಮನ

ಹೆತ್ತ ನೆಲಕ್ಕಾಗಿ ನೆತ್ತರು ಚೆಲ್ಲಿದ ವೀರ ಯೋಧರಿಗೆ ನಮನ

ಅಪ್ರತಿಮ ಶೌರ್ಯ, ದೇಶಭಕ್ತಿಯ ‌ಸ್ಫೂರ್ತಿಯೊಂದಿಗೆ ದೇಶದ ಶತ್ರುಗಳನ್ನು ಸದೆಬಡಿದು, ಭಾರತಾಂಬೆ ಯ ಘನತೆ, ಗೌರವವನ್ನು ಮುಗಿಲೆತ್ತರಕ್ಕೆ ಹಾರಿಸಿ ಅಮರರಾದ ಕಾರ್ಗಿಲ್‌ ಯುದ್ಧದ ವೀರ ಹುತಾತ್ಮ ಯೋಧರಿಗೆ "ಕಾರ್ಗಿಲ್‌ ವಿಜಯ ದಿನ" ದಂದು ಗೌರವ ನಮನಗಳೊಂದಿಗೆ ಆಚರಿಸುತ್ತಿದ್ದವೆ

Chikkaballapur News: ಪ್ರತಿ ತಿಂಗಳಿಗೊಮ್ಮೆ ಓವರ್‌ ಹೆಡ್‌ ಟ್ಯಾಂಕ್‌ ಸ್ವಚ್ಛತೆ ಕಡ್ಡಾಯ: ಸಿಇಒ ಡಾ.ನವೀನ್ ಭಟ್‌.ವೈ

ಪ್ರತಿ ತಿಂಗಳಿಗೊಮ್ಮೆ ಓವರ್‌ ಹೆಡ್‌ ಟ್ಯಾಂಕ್‌ ಸ್ವಚ್ಛತೆ ಕಡ್ಡಾಯ

ಗ್ರಾಮ ಪಂಚಾಯಿತಿಗಳಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳ ಸಭೆಯನ್ನು ಕರೆದು ಗ್ರಾಮದ ನೀರು ಮತ್ತು ನೈರ್ಮಲ್ಯ ಬಗ್ಗೆ ಚರ್ಚಿಸಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕು, ಆ ಮೂಲಕ ಪ್ರತಿ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರನ್ನು ಪೂರೈಕೆ ಮಾಡ ಬೇಕು. ಪ್ರತಿ ಮೂರು ತಿಂಗಳಿ ಗೊಮ್ಮೆ ಕಡ್ಡಾಯವಾಗಿ ಏಫ್‌ಟಿಕೆ ಮೂಲಕ ನೀರು ಪರೀಕ್ಷೆ ಮಾಡಿಸಬೇಕು

Kalaburgi News: ಕಲಬುರ್ಗಿಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಬಲಿ; ಕುಟುಂಸ್ಥರ ಆಕ್ರೋಶ

ಕಲಬುರ್ಗಿಯಲ್ಲಿ ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಬಲಿ

ರಾಜ್ಯದಲ್ಲಿ ಈ ಹಿಂದೆ ಬಳ್ಳಾರಿ ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಸರಣಿ ಬಾಣಂತಿಯರ ಸಾವು ಪ್ರಕರಣ ಭಾರಿ ಸದ್ದು ಮಾಡಿತ್ತು. ಇದೀಗ ಕಲಬುರ್ಗಿಯಲ್ಲಿ ಮಗು ಜನಿಸಿದ ಕೆಲವೇ ಕ್ಷಣಗಳಲ್ಲಿ ತಾಯಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.

Chikkaballapur News: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಕ್ಕೆ ಕಾನೂನಿನ ಅರಿವು ಅಗತ್ಯ

ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯಕ್ಕೆ ಕಾನೂನಿನ ಅರಿವು ಅಗತ್ಯ

ಪಿಟಿಸಿಎಲ್ ಕಾಯಿದೆ ಭೂಮಿ ಕಳೆದುಕೊಂಡ ದಲಿತರಿಗೆ ಮರಳಿ ಕೃಷಿ ಭೂಮಿ ನೀಡಿ ಬದುಕು ಕಟ್ಟಿಕೊಡುವ ಕಾಯಿದೆ ಸರಿಯಾಗಿ ಬಳಕೆ ಆಗಬೇಕಿದೆ. ಪರಿಣಾಮಕಾರಿ ಜಾರಿಗೆ ಸರ್ಕಾರಗಳು ಬೆಂಬಲ ಸೂಚಿಸಿಲ್ಲ. ನ್ಯಾಯಾಲಯ ಮೆಟ್ಟಿಲೇರಿರುವ ಈ ಕಾಯಿದೆ ದಲಿತರಿಗೆ ಮರು ಜೀವ ತರಲು ಜಾರಿಗೆ ಒತ್ತಡ ತರಲು ಮೊದಲು ಕಾಯಿದೆ ಬಗ್ಗೆ ತಿಳಿಯಬೇಕು ಮತ್ತು ಗ್ರಾಮ ಮಟ್ಟದಲ್ಲಿ ಕಾರ್ಯಗಾರಗಳು ನಡೆಯ ಬೇಕಿದೆ

Minister Byrati Suresh: ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಬೇಡ: ಸಚಿವ ಬೈರತಿ ಸುರೇಶ್

ಕುಡಿಯುವ ನೀರಿನ ವಿಚಾರದಲ್ಲಿ ರಾಜಕೀಯ ಬೇಡ: ಸಚಿವ ಬೈರತಿ ಸುರೇಶ್

ವಾಟದ ಹೊಸಹಳ್ಳಿ ಕೆರೆಯ ಭಾಗದ ರೈತರಿಗೆ ಒಂದು ತಪ್ಪು ಕಲ್ಪನೆಯನ್ನು ಬಿತ್ತಲಾಗಿದೆ, ಈ ಯೋಜನೆ ಯಡಿ ನಾವುಗಳು ಕೆರೆಯಲ್ಲಿನ ಶೇಕಡಾ 40℅ ನೀರನ್ನು ಮಾತ್ರ ತೆಗೆಯುತ್ತೇವೆ, ಮತ್ತು ಕೆರೆಯಲ್ಲಿ ತುಂಬಿರುವ ಹೂಳನ್ನು ತೆಗೆದು,ಕೆರೆ ಕಟ್ಟೆಯನ್ನು ಭದ್ರ ಪಡಿಸಿ, ನಗರ ಸೇರಿದಂತೆ ಒಟ್ಟು ಎಂಟು ಹಳ್ಳಿಗಳ ವ್ಯಾಪ್ತಿಯ ಸುಮಾರು 83 ಸಾವಿರ ಜನರಿಗೆ ಕುಡಿಯುವ ನೀರನ್ನು ಒದಗಿಸುತ್ತೇವೆ

Chikkaballapur News: ಗೌರಿಬಿದನೂರು ನಗರಕ್ಕೆ ಕುಡಿಯುವ ನೀರು ಪೂರೈಸುವ 66 ಕೋಟಿ ರೂ ಯೋಜನೆಯ ಕಾಮಗಾರಿಗೆ ಭೂಮಿಪೂಜೆ

66 ಕೋಟಿ ರೂ ಯೋಜನೆಯ ಕಾಮಗಾರಿಗೆ ಭೂಮಿಪೂಜೆ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅಮೃತ್ 2 ಯೋಜನೆಯಡಿ 313 ಕೋಟಿ ರೂಪಾಯಿಗಳ ಯೋಜನೆ ಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಜಿಲ್ಲೆಯ ಚಿಕ್ಕಬಳ್ಳಾಪುರ, ಗುಡಿಬಂಡೆ,ಗೌರಿಬಿದನೂರು, ಬಾಗೇಪಲ್ಲಿ ಪಟ್ಟಣಗಳ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಅಮೃತ್ 2 ಯೋಜನೆ ಸಹಕಾರಿ ಯಾಗಲಿದೆ. ರಾಜ್ಯ ಸರ್ಕಾರಕ್ಕೆ ಕುಡಿಯುವ ನೀರು ಬವಣೆಯ ಬಗ್ಗೆ ಅರಿವಿದೆ. ಕುಡಿಯುವ ನೀರಿನ ಕಾಮಗಾರಿಗಳನ್ನು ಮೊದಲ ಆದ್ಯತೆಯನ್ನಾಗಿ ರಾಜ್ಯ ಸರ್ಕಾರ ಪರಿಗಣಿಸಿದೆ.

Indi News:ವಚನಗಳಿಂದ ಬುದ್ದಿ ಶಕ್ತಿ ಹೆಚ್ಚುತ್ತದೆ: ಉಪನ್ಯಾಸಕ ಸದಾನಂದ ಈರನಕೇರಿ

ವಚನಗಳಿಂದ ಬುದ್ದಿ ಶಕ್ತಿ ಹೆಚ್ಚುತ್ತದೆ

ಮಕ್ಕಳು ದೇವರ ಸಮಾನರು ವಿಭಿನ್ನ ಕುಟುಂಬಗಳಿಂದ, ವಿಭಿನ್ನ ಸಮುದಾಯಗಳಿಂದ ಕಾಲೇಜಿಗೆ ಬಂದಿ ರುವ ಮಕ್ಕಳಲ್ಲಿ ವಿಭಿನ್ನ ಸಾಹಿತ್ಯ ಅಡಗಿರುತ್ತದೆ. ಸಾಹಿತ್ಯ ಎಂಬುದು ಪುಸ್ತಕದಿಂದ ಮಾತ್ರ ವಲ್ಲದೆ ಬಾಯಿಂದ ಬಾಯಿಗೆ ಹರಿದು ಬಂದು ಪುಸ್ತಕ ರೂಪದಲ್ಲಿ ರಚನೆಯಾಗುತ್ತದೆ. ವಚನ ಕಂಠ ಪಾಠ ಮಾಡುವದರಿಂದ ಮಕ್ಕಳಲ್ಲಿ ಜ್ಞಾನ ವೃದ್ದಿಯಾಗುತ್ತದೆ ನೆನಪಿನ ಶಕ್ತಿ ಮತ್ತಷ್ಟು ಹೆಚ್ಚಿಸುತ್ತದೆ.

Loading...