ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿಶ್ವವಾಣಿ ವಿಶೇಷ
B Kenchappa Gowda Interview: ನಮ್ಮನ್ನು ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ

ನಮ್ಮನ್ನು ಒಡೆಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ

ಒಕ್ಕಲಿಗರನ್ನು ನೇರವಾಗಿ ವಿರೋಧಿಸಿದರೆ ಸಮಸ್ಯೆಯಾಗುತ್ತದೆ ಎನ್ನುವ ಕಾರಣಕ್ಕೆ, ಒಡೆದು ಆಳುವ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ. ಕೆಂಚ್ಚಪ್ಪಗೌಡ ಆಗ್ರಹಿಸಿದ್ದಾರೆ. ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಸಂಬಂಧಿಸಿದಂತೆ ವಿಶ್ವವಾಣಿಯೊಂದಿಗೆ ಮಾತನಾಡಿರುವ ಅವರು, ಜಾತಿ ಗಣತಿಗೆ ವಿರೋಧಿಸುತ್ತಿರುವುದಕ್ಕೆ ಕಾರಣ, ಉಪಜಾತಿಗಳ ಲೆಕ್ಕಾಚಾರ, ಜನಸಂಖ್ಯೆಯಲ್ಲಿನ ವ್ಯತ್ಯಾಸ ಸೇರಿದಂತೆ ಹಲವು ವಿಷಯದ ಬಗ್ಗೆ ಮಾತ ನಾಡಿದ್ದಾರೆ.

S Raghunath Interview: ವೈಜ್ಞಾನಿಕ ಸಮೀಕ್ಷೆ ನಡೆಸಲಿ

ವೈಜ್ಞಾನಿಕ ಸಮೀಕ್ಷೆ ನಡೆಸಲಿ

ಜಾತಿ ಗಣತಿಗೆ ಸಂಬಂಧಿಸಿದಂತೆ ಊಹಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಮಾತಾಡುವು ದಕ್ಕಿಂತ, ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಅಭಿಪ್ರಾಯಪಟ್ಟಿದ್ದಾರೆ.

Giridhar Kaje Intervew: ಜಾತಿ ಗಣತಿಯನ್ನು ತಿರಸ್ಕರಿಸಲಿ

ಜಾತಿ ಗಣತಿಯನ್ನು ತಿರಸ್ಕರಿಸಲಿ

ಸಮಾಜದಲ್ಲಿ ಜಾತಿ ಪದ್ಧತಿ ಮೊದಲಿನಿಂದಲೂ ಬಂದಿದೆ. ಆದರೆ ಅದನ್ನು ಪ್ರತ್ಯೇಕವಾಗಿ ಒಂದೊಂದು ಜಾತಿಯಲ್ಲಿ ಎಷ್ಟೆಷ್ಟು ಜನರಿದ್ದಾರೆ ಎಂದು ಆ ಸಂಖ್ಯೆಯನ್ನು ನಿರ್ಧಾರ ಮಾಡುವ ವಿಚಾರ ಜಾತ್ಯತೀತ ತತ್ವಕ್ಕೆ ವಿರುದ್ಧವಾದದ್ದು. ಈಗ ಮಾಡಿರುವ ಗಣತಿಯಲ್ಲಿ ಬ್ರಾಹ್ಮಣರು ಎನ್ನುವ ಕಾಲಂ, ಇನ್ನೊಂದು ಕಡೆ ಹವ್ಯಕರು ಎಂದು ಇತ್ತು. ಹವ್ಯಕರು ಬ್ರಾಹ್ಮಣರೂ ಹೌದು, ಹವ್ಯಕರೂ ಹೌದು

T A Sharavana Interview: ಆಯಸ್ಸಿನ ರೀತಿಯೇ, ಬಂಗಾರದ ಬೆಲೆಯೂ ಕಡಿಮೆಯಾಗಲ್ಲ

ಆಯಸ್ಸಿನ ರೀತಿಯೇ, ಬಂಗಾರದ ಬೆಲೆಯೂ ಕಡಿಮೆಯಾಗಲ್ಲ

ಮನುಷ್ಯ ಆಯುಷ್ಯ ಹೇಗೆ ಕಡಿಮೆಯಾಗುವುದಿಲ್ಲವೋ, ಅದೇ ರೀತಿ ಬಂಗಾರದ ಮೌಲ್ಯವೂ ಕುಸಿಯುವು‌ ದಿಲ್ಲ. ಕುಸಿದರೂ 200ರಿಂದ 300 ರುಪಾಯಿ ಮಾತ್ರ ಕುಸಿಯಬಹುದು. ಆದರೆ ಭವಿಷ್ಯದ ಆಲೋಚನೆ ಹಾಗೂ ಸಂಕಷ್ಟದ ಸಮಯಕ್ಕೆ ಅನುಕೂಲವಾಗಲು ಬಂಗಾರ ಖರೀದಿಸಿರಬೇಕು. ಈ ವಿಷಯದಲ್ಲಿ ಜನರು ಹಿಂಜರಿಯಬಾರದು

Vishwavani Special: ಪಿಎನ್‌ಬಿಗೆ ಚೋಕ್‌ ನೀಡಿದ ಚೋಕ್ಸಿ

ಪಿಎನ್‌ಬಿಗೆ ಚೋಕ್‌ ನೀಡಿದ ಚೋಕ್ಸಿ

2024ರ ಜುಲೈನಲ್ಲಿ ಚೋಕ್ಸಿ ಚಿಕಿತ್ಸೆಗಾಗಿ ಆಂಟ್‌ವೆರ್ಪ್‌ಗೆ ತೆರಳಿರುವುದನ್ನು ‘ಜಿಒಸಿ’ ಕಂಡುಕೊಂಡಿತು. ಆಂಟಿಗುವಾ ದೇಶದ ಜತೆಗೆ ಭಾರತ, ಅಪರಾಧಿಗಳ ಹಸ್ತಾಂತರ ಒಪ್ಪಂದ ಮಾಡಿಕೊಂಡಿಲ್ಲವಾದ ಕಾರಣ ಚೋಕ್ಸಿಯನ್ನು ಡೊಮೆನಿಕಾ ದಿಂದ ಎಳೆದು ತರುವುದು ಸಿಬಿಐಗೆ ಅಸಾಧ್ಯವಾಗಿತ್ತು. ಹಾಗಾಗಿ ಚೋಕ್ಸಿಯನ್ನು ಡೊಮೆನಿಕಾದಿಂದ ಹೊರಬರುವವರೆಗೂ ಕಾಯುವುದು ಅನಿವಾರ್ಯವಾಯಿತು.

Yagati Raghu Naadig Column: 3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

3 ತಿಂಗಳ ಸುಂಕ ವಿರಾಮ: ಇದು ಕಾಮಾ ಅಷ್ಟೇ, ಫುಲ್‌ ಸ್ಟಾಪ್‌ ಅಲ್ಲ!

ಡೊನಾಲ್ಡ್ ಟ್ರಂಪ್ ಎಂಬ ‘ಸುಂಕದ ಸರದಾರ’ ಕಳೆದ ಕೆಲ ದಿನಗಳಿಂದ ಹೆಚ್ಚು ಸುದ್ದಿಯಲ್ಲಿದ್ದಾರೆ. ಅಮೆರಿಕದಿಂದ ಅತಿರೇಕದ ಸುಂಕ ಹೇರಿಕೆಯ ಪ್ರಸ್ತಾವ ಹೊರಬೀಳುತ್ತಲೇ ಜಗತ್ತು ತಲ್ಲಣಗೊಂಡಿತು. ನಂತರದಲ್ಲಿ ಭಾರತ ಸೇರಿದಂತೆ ವಿಶ್ವದ ವಿವಿಧೆಡೆಯ ಷೇರು ಮಾರುಕಟ್ಟೆಗಳು ಕುಸಿದಿದ್ದೂ ಆಯಿತು, ಸರಕು ಮಾರುಕಟ್ಟೆಗಳಲ್ಲೂ ಅನಿಶ್ಚಿತತೆ ತಲೆದೋರುವಂತಾಯಿತು.

Vishwavani Special: ಫಲಿತಾಂಶ ಕುಸಿಯಲು ಗೊಂದಲವೇ ಕಾರಣ !

ಫಲಿತಾಂಶ ಕುಸಿಯಲು ಗೊಂದಲವೇ ಕಾರಣ !

ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ ಭಾರಿ ಪ್ರಮಾಣದಲ್ಲಿ ಕುಸಿತವಾಗಿರುವ ಬೆನ್ನಲ್ಲೇ, ಕುಸಿತಕ್ಕೆ ‘ಪಾರದರ್ಶಕ’ ಪರೀಕ್ಷೆಗೆ ಕಾರಣವೆಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಮರ್ಥಿಸಿಕೊಂಡಿದೆ. ಆದರೆ ಈ ಪ್ರಮಾಣದ ಕುಸಿತಕ್ಕೆ ಕಾರಣ ಕೊನೆ ಕ್ಷಣದ ಬದಲಾವಣೆಗಳೇ ಕಾರಣ ಎನ್ನುವುದು ಹಲವು ಉಪನ್ಯಾಸಕರ ಆರೋಪವಾಗಿದೆ.

Vishwavani Special: ಸಿಎಂ ವಿರುದ್ದ ರಣವ್ಯೂಹಕ್ಕೆ ರಾಜಭವನ ದುರ್ಬಳಕೆ ?

ಸಿಎಂ ವಿರುದ್ದ ರಣವ್ಯೂಹಕ್ಕೆ ರಾಜಭವನ ದುರ್ಬಳಕೆ ?

ರಾಜ್ಯದ ಹಿತದೃಷ್ಟಿಯಿಂದ ಉಭಯ ಸದನದಲ್ಲಿ ಜಾರಿಗೊಳಿಸಿರುವ ಹತ್ತಾರು ವಿಧೇಯಕಗಳನ್ನು ಸಹಿ ಮಾಡದೇ ತನ್ನ ಬಳಿ ಇಟ್ಟುಕೊಂಡಿರುವ, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ವಿರುದ್ಧ ಪಾಸಿಕ್ಯೂಷನ್‌ ಗೆ ಅನುಮತಿ ನೀಡಲು ವರ್ಷಗಳಿಂದ ಮೀನಮೇಷ ಎಣಿಸುತ್ತಿರುವ ರಾಜ್ಯಪಾಲರು, ಮುಖ್ಯಮಂತ್ರಿಗಳ ವಿಷಯದಲ್ಲಿ ಮಾತ್ರ ಮಿಂಚಿನ ವೇಗದಲ್ಲಿ ಕಾರ್ಯತತ್ಪರರಾಗುತ್ತಿರುವುದು ಅನೇಕ ಅನುಮಾನಗಳಿಗೆ ಆಸ್ಪದ ಮಾಡಿಕೊಟ್ಟಿದೆ.

ಪುಸ್ತಕೋದ್ಯಮ ಸಮುದ್ರವಿದ್ದಂತೆ, ಅದೆಂದು ಬತ್ತುವುದಿಲ್ಲ

ಪುಸ್ತಕೋದ್ಯಮ ಸಮುದ್ರವಿದ್ದಂತೆ, ಅದೆಂದು ಬತ್ತುವುದಿಲ್ಲ

ಕರ್ನಾಟಕದಲ್ಲಿ ಓದುಗರ ಸಂಖ್ಯೆಗೆ ಕೊರತೆಯಿಲ್ಲ. ಆದರೆ ಓದುಗರಿಗೆ ಹೊಸ ಪುಸ್ತಕ ಬಂದಿದೆ ಎನ್ನುವುದನ್ನು ಹಾಗೂ ತಲುಪಿಸುವುದನ್ನು ಪ್ರಕಾಶನ ಸಂಸ್ಥೆಗಳು ಮಾಡಬೇಕಿದೆ. ಪುಸ್ತಕೋ ದ್ಯಮ ಎನ್ನುವ ವಿಶಾಲ ಸಮುದ್ರ ಎಂದಿಗೂ ಬತ್ತುವುದಿಲ್ಲ ಎನ್ನುವುದು ನನ್ನ ವಿಶ್ವಾಸ ಎಂದು ವೀರಲೋಕ ಪ್ರಕಾಶನ ಸಂಸ್ಥೆಯ ಮುಖ್ಯಸ್ಥ ವೀರಕಪುತ್ರ ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ದಾರೆ. ಪ್ರಕಾಶನ ಕ್ಷೇತ್ರದಲ್ಲಿಯೇ ಮೊದಲ ಬಾರಿಗೆ ವಾರ್ಷಿಕ ಆದಾಯ ವನ್ನು ಬಿಡುಗಡೆ ಗೊಳಿಸಿರುವ ವೀರಕಪುತ್ರ ಶ್ರೀನಿವಾಸ್ ಅವರು, ಕನ್ನಡ ಪುಸ್ತಕೋದ್ಯ ಮದ ಅವಕಾಶ, ಕೊಂಡು ಓದುವವರ ಸಂಖ್ಯೆ, ಸರಕಾರದಿಂದ ಆಗಬೇಕಿರುವ ಸಹಾಯ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಮಾತ ನಾಡಿದ್ದಾರೆ

ಸದ್ಯದಲ್ಲೇ ಎಣ್ಣೆ ದರ ಹೆಚ್ಚಳ: ರಾಜ್ಯದಲ್ಲಿ ಮದ್ಯ ಕೊರತೆ, ಬೇಡಿಕೆಯಷ್ಟು ಪೂರೈಕೆಯಿಲ್ಲ

ಸದ್ಯದಲ್ಲೇ ಎಣ್ಣೆ ದರ ಹೆಚ್ಚಳ

ರಾಜ್ಯದಲ್ಲಿ 3988 ವೈನ್‌ಶಾಪ್ (ಸಿಎಲ್2), 279 ಕ್ಲಬ್(ಸಿಎಲ್4), 78 ಸ್ಟಾರ್ ಹೋಟೆಲ್ (ಸಿಎಲ್6ಎ), 2382 ಹೋಟೆಲ್‌ ಮತ್ತು ವಸತಿ ಗೃಹ (ಸಿಎಲ್7), 68 ಮಿಲಿಟರಿ ಕ್ಯಾಂಟಿನ್ ಮಳಿಗೆ (ಸಿಎಲ್೮), 3634 ಬಾರ್ ಆಂಡ್ ರೆಸ್ಟೋರೆಂಟ್ (ಸಿಎಲ್9), 1041 ಎಂಎಸ್‌ ಐಎಲ್ (ಸಿಎಲ್11ಸಿ) ಮತ್ತು 745 ಆರ್‌ವಿಬಿ ಸೇರಿ ಒಟ್ಟು 12618 ಮದ್ಯ ದಂಗಡಿಗಳಿವೆ

ಭ್ರಷ್ಟರಿಗೆ ಪ್ರಾಮಾಣಿಕ ಅಧಿಕಾರಿಗಳೇ ಟಾರ್ಗೆಟ್‌, ಮಂಗಳೂರಿನಲ್ಲಿ ಹೆಚ್ಚುತ್ತಿದೆ ಭ್ರಷ್ಟಾಚಾರಿಗಳ ಲಾಬಿ

ಭ್ರಷ್ಟಾಚಾರ- ವಾಮಾಚಾರ ಅಬ್ಬರ

ಮಂಗಳೂರಿನಲ್ಲಿ ಪ್ರಾಮಾಣಿಕರ ಮೇಲೆ ವಾಮಾಚಾರ ಮಾಡುವ ಭ್ರಷ್ಟಾ ಚಾರಿಗಳು ಹೆಚ್ಚತೊಡಗಿ ದ್ದಾರೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ಉರ್ವಾ ಕಚೇರಿಯಲ್ಲಿ ಬ್ರೋಕರುಗಳ ಆಟಾಟೋಪ ಮಿತಿ ಮೀರಿದ್ದು ಮುಡಾ ಕಮಿಷನರ್ ಅವರನ್ನೇ ಬ್ಲಾಕ್ ಮೇಲ್ ಮಾಡುವ ಹಂತಕ್ಕಿಳಿ ದಿದ್ದಾರೆ. ಇದರಿಂದ ನೊಂದ ಮುಡಾ ಕಮಿಷನರ್ ನೂರ್ ಝಹರಾ ಖಾನಂ ಅವರು ಇಬ್ಬರು ಬ್ರೋಕರ್ ವಿರುದ್ಧ ಉರ್ವಾ ಠಾಣೆಗೆ ದೂರು ನೀಡಿದ್ದು ಎಫ್‌ ಐಆರ್ ದಾಖಲಾಗಿದೆ.

Yagati Raghu Naadig Column: ಸುದ್ದಿವಾಹಿನಿಯಲ್ಲಿ ಒಂದು ಸುತ್ತು

ಸುದ್ದಿವಾಹಿನಿಯಲ್ಲಿ ಒಂದು ಸುತ್ತು

ಭಾರತದಲ್ಲಿಂದು 400ಕ್ಕೂ ಹೆಚ್ಚಿನ ಸುದ್ದಿ ವಾಹಿನಿಗಳಿವೆ. ಸಾಕಷ್ಟು ಅವಧಿ ಯವರೆಗೆ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳಬೇಕಾದ ‘ಅನಿ ವಾರ್ಯತೆಯ ಶಿಶು’ಗಳಾದ ಈ ವಾಹಿನಿಗಳು ‘ಸುದ್ದಿಗೆ ರೋಚಕತೆಯ ಲೇಪ ಕೊಡಲೇಬೇಕು’ ಎಂದು ಕಟ್ಟುಬೀಳುವಷ್ಟರ ಮಟ್ಟಿಗೆ ಸುದ್ದಿ ಪ್ರಸ್ತುತಿಯ ಪರಿಕಲ್ಪನೆ ಬದಲಾಗಿದೆ.

Dr K S Chaithra Column: ಡಬ್ಬಾ ಕಾರ್ಟೆಲ್‌ !

ಡಬ್ಬಾ ಕಾರ್ಟೆಲ್‌ !

2025ರ ಫೆಬ್ರವರಿ ೨೮ರಿಂದ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗಿರುವ ಹಿತೇಶ್ ಭಾಟಿಯಾ ನಿರ್ದೇಶಿಸಿ ರುವ ಏಳು ಸಂಚಿಕೆಗಳ ವೆಬ್ ಸರಣಿ ಡಬ್ಬಾ ಕಾರ್ಟೆಲ್! ಮುಖ್ಯ ಪಾತ್ರದಲ್ಲಿ ಶಬಾನ ಆಜ್ಮಿ ಜ್ಯೋತಿಕಾ, ಶಾಲಿನಿ ಪಾಂಡೆ, ಗಜರಾಜ್ ರಾವ್ ಮುಂತಾದವರಿದ್ದಾರೆ. ಮಾದಕ ವಸ್ತು ಕಳ್ಳ ಸಾಗಣೆ ಸಮಸ್ಯೆಯನ್ನು ತೋರಿಸುವ ವಿಭಿನ್ನ ಕಥಾವಸು; ಮುಂಬೈನ ಡಬ್ಬಾ ವ್ಯವಸ್ಥೆ ಪ್ರಸಿದ್ಧವಾದದ್ದು. ಬೆಳಿಗ್ಗೆ ಬೇಗನೆದ್ದು ದೂರದೂರದ ಆಫೀಸು- ಕಾಲೇಜುಗಳಿಗೆ ತೆರಳುವ ಉದ್ಯೋಗಿ/ ವಿದ್ಯಾರ್ಥಿಗಳು ಹೊತ್ತಿಗೆ ಸರಿಯಾಗಿ ಬಿಸಿಬಿಸಿಯಾಗಿ ಊಟವನ್ನು ಮಾಡಲು ಡಬ್ಬಾಗಳ ಮೊರೆ ಹೋಗುವುದು ಸಾಮಾನ್ಯ.

Sandhya Hegde Column: ಪಾದುಕಾ ಪುರಾಣ !

ಪಾದುಕಾ ಪುರಾಣ !

ಒಂದು ‘ಪಾದುಕಾ ಪುರಾಣ’ ಜೀವನದ ಯಾವೆಲ್ಲ ಸ್ಥರಗಳಲ್ಲಿ ಏನೇನನ್ನು ತಿಳಿಯುವಂತೆ ಅಂದು ಅಮ್ಮ, ನಮ್ಮ ಎರಡೂ ಜನ ಮಕ್ಕಳಿಗೂ ಶಾಲೆಗೆ ರಜೆ ಹಾಕಿಸಿ ಎಲ್ಲಿಗೋ ಕರೆದುಕೊಂಡು ಹೋಗು ತ್ತೇನೆಂದು ಘೋಷಿಸಿದ್ದರು. ಅಮ್ಮ ಬೆಳಿಗ್ಗೆ ಎಷ್ಟು ಗಂಟೆಗೆ ಎದ್ದಿದ್ದರೋ ಗೊತ್ತಿಲ್ಲ. ಇವತ್ತಂತೂ ನಮ್ಮನ್ನು 6.00 ಗಂಟೆಗೆಲ್ಲ ಎಬ್ಬಿಸಿದ್ದರು. ಇನ್ನೂ ನಸುಕು ಹರಿದಿರಲಿಲ್ಲ. ಬಚ್ಚಲು ಮನೆ ಹಂಡೆಯಲ್ಲಿ ಬಿಸಿನೀರು ಕಾಯುತ್ತಿತ್ತು. ಅಂತೂ ನಮ್ಮ ಮೈ ಬಿಸಿ ನೀರಿನ ಹಿತವನ್ನು ಅನುಭವಿಸಲು ಸಾಧ್ಯ ವಾಗುವುದಕ್ಕೆ ಮುನ್ನ ಸ್ನಾನವೇ ಮುಗಿದು ಹೋಗಿತ್ತು.

ರೈತರ ಸಹಭಾಗಿತ್ವ ದೊಂದಿಗೆ ಕೆರೆಗಳಲ್ಲಿನ ಹೂಳು ತೆಗೆದು ಪುನರುಜ್ಜೀವನ ಕಾರ್ಯ

ಮನು ವಿಕಾಸದ ಜನ ಸಾಧನೆ

ಮನುವಿಕಾಸ ಸಂಸ್ಥೆಯು ರಾಜ್ಯದ ವಿವಿಧ ಜಿಲ್ಲೆಗಳ ಆಯ್ದ ತಾಲೂಕುಗಳಲ್ಲಿ 1000 ಕೆರೆಗಳನ್ನು ಹೂಳೆತ್ತಿ ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದ್ದು, ಕೆರೆಯಲ್ಲಿನ ಹೂಳು ತುಂಬಿದ ಮಣ್ಣನ್ನು ರೈತರ ಜಮೀನಿಗೆ ಹಾಕುವುದರಿಂದ ಫಲವತ್ತತೆ ಹೆಚ್ಚಿ ಸಾವಯವ ಕೃಷಿ ಪದ್ದತಿಗೆ ವಾಲುತ್ತಿದೆ. ಇದರ ಜೊತೆ ಜೊತೆಯಲಿ 10,000ಕ್ಕೂ ಅಧಿಕ ಕೃಷಿ ಹೊಂಡ ಗಳನ್ನು ನಿರ್ಮಾಣ ಮಾಡಿ ನೆರವಾಗುವ ಸಂಕಲ್ಪವನ್ನು ತೊಟ್ಟಿದೆ.

Surendra Pai Column: ಓದುಗರ ಮನಗೆದ್ದ ಪುಸ್ತಕ ಸಂತೆಗಳು

ಓದುಗರ ಮನ ಗೆದ್ದ ಪುಸ್ತಕ ಸಂತೆಗಳು

ಮೊದಲೆಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಮಾತ್ರ ಆಯೋಜಿಸುತ್ತಿದ್ದ ಪುಸ್ತಕ ಮೇಳಗಳು ಒಂದು ಸಿಮೀತ ವ್ಯಾಪ್ತಿಗೆ ಒಳಪಟ್ಟಿವು. ಆದರೆ ಇಂದು ಹಲವು ಉತ್ಸಾಹಿ ಪ್ರಕಾಶನ ದವರು ಲಾಭ ನಷ್ಟದ ಬಗ್ಗೆ ಹೆಚ್ಚಾಗಿ ಲೆಕ್ಕಾಚಾರ ಹಾಕದೇ ಓದುಗರಿಗೆ ಹೊಸ ಹೊಸ ವಿಷಯ ಗಳನ್ನು ಹೊತ್ತಿರುವ ಹೊತ್ತಿಗೆಯನ್ನು ಪರಿಚಯಿಸುವುದರ ಮೂಲಕ ‘ಒಳ್ಳೆಯ ಪುಸ್ತಕ ಓದುವು ದರಿಂದ ನಮ್ಮ ಬಾಳು ಬೆಳಗುವುದು’ ಎಂದು ತೋರಿಸಿಕೊಟ್ಟರು.

Veena Bhat Column: ಬೆಂಗಳೂರಿನ ರಸ್ತೆಗಳಲ್ಲಿ ಬಣ್ಣ ಚೆಲ್ಲುವವರು

ಬೆಂಗಳೂರಿನ ರಸ್ತೆಗಳಲ್ಲಿ ಬಣ್ಣ ಚೆಲ್ಲುವವರು

ಇದು ಮೂಲತಃ ಪೆರು ದೇಶದ ಹೂವು. ಈ ಗುಲಾಬಿ ಬಣ್ಣದ ಹೂಗಳು ಕಾಲಕ್ಕನುಗುಣವಾಗಿ ಅರಳುತ್ತವೆ.ಈ ಜಾತಿಯ ಮರಗಳು ದಕ್ಷಿಣ ಮೆಕ್ಸಿಕೋ, ವೆನೆಜುವೆಲಾ ಮತ್ತು ಈಕ್ವೆಡಾರ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಹೂವನ್ನು ಎಲ್-ಸಾಲ್ವೆಡಾರ್ ದೇಶ ತನ್ನ ರಾಷ್ಟ್ರೀಯ ಹೂ ವಾಗಿ ಘೋಷಿಸಿದೆ. ಈ ಮರವನ್ನು ಹೆಚ್ಚಾಗಿ ಅಲಂಕಾರಿಕ ಮರವಾಗಿ ಬೆಂಗಳೂರಿನ ಕೆಲವು ಬೀದಿಗಳುದ್ದಕ್ಕೂ ಪಿಂಕ್ ಬಣ್ಣದ ಹೊಳೆಯೇ ಹರಿದಿದೆ!

Bhavana Belagere Interview:'ರಾಜ್ ಲೀಲಾ ವಿನೋದ' ಬುಕ್ ಬಗ್ಗೆ ಶಿವಣ್ಣ ಏನಂದಿದ್ರು ಗೊತ್ತಾ...?

'ರಾಜ್ ಲೀಲಾ ವಿನೋದ' ಬಗ್ಗೆ ಶಿವಣ್ಣ ಹೇಳಿದ್ದೇನು?

Bhavana Belagere Interview: ವಿಶ್ವವಾಣಿ ಯೂಟ್ಯೂಬ್ ತಂಡ ನಡೆಸಿದ ಸಂದರ್ಶನದಲ್ಲಿ ರವಿ ಬೆಳೆಗೆರೆ ಜೀವನ - ಬರಹ ಇತ್ಯಾದಿ ಕುರಿತು ಮಾತಾನಾಡಿದ್ದ ಭಾವನಾ ತಂದೆ ಬರೆದಿದ್ದ ರಾಜ್ ಲೀಲಾ ವಿನೋದ ಪುಸ್ತಕದ ಬಗ್ಗೆಯೂ ಮಾತಾನಾಡಿದ್ದು, ಪುಸ್ತಕ ಬಿಡುಗಡೆಗೊಂಡಾಗ ಶಿವಣ್ಣ ಪ್ರತಿಕ್ರಿಯೆ ಹೇಗಿತ್ತು ಎಂಬ ವಿಷಯವನ್ನು ಹೇಳಿದ್ದಾರೆ.

Bhavana Belagere Interview: ಅಮ್ಮನ ಜೊತೆಯೇ ಎಕ್ಸಾಂ ಬರೆದಿದ್ದ ರವಿ ಬೆಳಗೆರೆ; SSLC ಫೇಲ್‌ ಆಗಿದ್ದೇ ಬದುಕಿನ ಟರ್ನಿಂಗ್‌ ಪಾಯಿಂಟ್!

ರವಿ ಬೆಳಗೆರೆ ಕೂಡ 10ನೇ ತರಗತಿ ಫೇಲ್ ಆಗಿದ್ದರಂತೆ..!

Bhavana Belagere Interview: ನಾಡು ಕಂಡ ಅತ್ಯದ್ಬುತ ಬರಹಗಾರ, ಪತ್ರಕರ್ತ ಅಕ್ಷರ ಬ್ರಹ್ಮ ರವಿ ಬೆಳಗೆರೆ ಅವರ ಬಗ್ಗೆ ಅವರು ಪುತ್ರಿ ಭಾವನಾ ಬೆಳಗೆರೆ ನಮಗೆ ನಿಮಗರಿಯದ ಹತ್ತು ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ವಿಶ್ವವಾಣಿ ಟಿವಿಗೆ ನೀಡಿದ ವಿಶೇಷ ಸಂದರ್ಶನಕ್ಕೆ ಕುರಿತ ಡಿಟೇಲ್‌ ವರದಿ ಇಲ್ಲಿದೆ.

Vishweshwar Hegde Kageri Interview: ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇಯಾದ ಇತಿಹಾಸವಿದೆ. ಇಡೀ ವಿಶ್ವಕ್ಕೆ ಸಂಸತ್ ಅನ್ನು ಮೊದ ಲು ಪರಿಚಯಿಸಿದ್ದು ಬಸವಣ್ಣನವರ ಅನುಭವ ಮಂಟಪ. ಈಗಿನ ವಿಧಾನ ಪರಿಷತ್ ಅನ್ನು ಆರಂಭಿಸಿ ದ್ದು ಮೈಸೂರು ಒಡೆಯರ್ ಅವರು. ಅವರ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಯ ಮೂಲಕ ಇಡೀ ದೇಶಕ್ಕೆ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಇನ್ನು ಈ ಕರ್ನಾಟಕದ ಮಾದರಿ ಸಂಸದೀಯ ವ್ಯವಸ್ಥೆಗೆ ಅನೇಕರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ

MLA Pradeep Eshwar Interview: ಬಿಜೆಪಿಯವರ ಷಡ್ಯಂತ್ರಕ್ಕೆ ಬಗ್ಗಲ್ಲ: ಪ್ರದೀಪ್‌ ಈಶ್ವರ್

ಬಿಜೆಪಿಯವರ ಷಡ್ಯಂತ್ರಕ್ಕೆ ಬಗ್ಗಲ್ಲ: ಪ್ರದೀಪ್‌ ಈಶ್ವರ್

ಶಾಸಕನಾಗಿ ಆಯ್ಕೆಯಾದ ಒಂದೂವರೆ ವರ್ಷ ಕಳೆಯುವುದರೊಳಗೆ ನಾನು ಬಲಿಜ ಸಮು ದಾಯ ನಾಯಕನಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದೇನೆ. ಇದನ್ನು ಅರಗಿಸಿ ಕೊಳ್ಳಲು ಆಗದೆ, ಬಿಜೆಪಿಯವರು ಷಡ್ಯಂತ್ರ ರೂಪಿಸಿದ್ದಾರೆ. ಬಿಜೆಪಿಯ ಯಾವುದೇ ನಾಯಕ ಷಡ್ಯಂತ್ರ ರೂಪಿಸಿದರೂ, ನಾನು ಬಗ್ಗುವುದಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾರೆ.

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕ್‌ಗೆ ಮಗ್ಗುಲ ಮುಳ್ಳಾದ ಬಲೂಚಿಸ್ಥಾನ

ಪಾಕಿಸ್ತಾನದಲ್ಲಿ ಪ್ರತ್ಯೇಕ ಬಲೂಚಿಸ್ತಾನದ ಬೇಡಿಕೆ ಇಂದು ನಿನ್ನೆಯದಲ್ಲ, ಅದು ದಶಕಗಳಷ್ಟು ಹಳೆಯ ವಿಷಯ. ಬಲೂಚ್ ಲಿಬರೇಷನ್ ಆರ್ಮಿ (ಬಿಎಲ್‌ಎ) ಇತ್ತೀಚಿನ ವರ್ಷಗಳಲ್ಲಿ ತನ್ನ ಬಲವೃದ್ಧಿ ಮಾಡಿಕೊಂಡಿದ್ದು, ಹಿಂಸಾ ಹೋರಾಟ ತೀವ್ರಗೊಳಿಸಿದೆ. ಪಾಕ್ ಸೇನೆ, ಆಡಳಿತದ ವಿರುದ್ಧ ತನ್ನ ದಾಳಿ ಮುಂದುವರಿಸು ತ್ತಲೇ ಬಂದಿದೆ

Muniraju M Arikere Column: ಆದಿಯೋಗಿ ನೆಲೆ, ಭೂಮಿಗೆ ಚಿನ್ನದ ಬೆಲೆ

ಆದಿಯೋಗಿ ನೆಲೆ, ಭೂಮಿಗೆ ಚಿನ್ನದ ಬೆಲೆ

ಈಶಾ ಆದಿಯೋಗಿ ಧ್ಯಾನಕೇಂದ್ರ ಪ್ರಾರಂಭವಾದ ಬಳಿಕ ಚಿಕ್ಕಬಳ್ಳಾಪುರ ಪ್ರವಾಸಿ ತಾಣವಾಗಿ ಬದಲಾಗಿದೆ. ಸ್ಥಳೀಯರಿಗೆ ಉದ್ಯೋಗ ಸಿಕ್ಕಿದೆ. ಹೋಟೆಲ್ ಉದ್ಯಮ ಚೇತರಿಸಿ ಕೊಂಡಿದೆ. ಸಾರಿಗೆ ಸಂಚಾರದ ಆದಾಯವೂ ದುಪ್ಪಟ್ಪಾಗಿದೆ. ರಸ್ತೆ ಸಂಪರ್ಕ ಸುಧಾರಿಸಿದೆ. ಸ್ಥಳೀಯ ಸಂಸ್ಥೆಗಳ ಹೊಣೆ ಹೆಚ್ಚಿದೆ. ಭೂಮಿಯ ಬೆಲೆ ಗನನಕ್ಕೇರಿದೆ! ಹೀಗೆ ಆದಿಯೋಗಿಯ ದಿವ್ಯದರ್ಶನ, ಧ್ಯಾನ, ಭಕ್ತಿ, ಮುಕ್ತಿಗೆ ಮಾತ್ರ ಸೀಮಿತವಾಗದೆ ಸ್ಥಳೀಯರ ಬದುಕಿಗೆ ಅದು ಶಕ್ತಿಯನ್ನು ಧಾರೆಯೆರೆದಿದ್ದಾರೆ.

Yagati Raghu Naadig Column: ಸುನೀತಾ ವಿಲಿಯಮ್ಸ್‌ ಸ್ವಾಗತಕ್ಕೆ ಮುಹೂರ್ತ ನಿಗದಿ

ಬಾನಲ್ಲು ನೀನೇ, ಭುವಿಯನ್ನು ನೀನೇ...

2024ರ ಜೂನ್ 5ರಂದು ಸುನಿತಾ ಬಾಹ್ಯಾಕಾಶ ನಿಲ್ದಾಣಕ್ಕೆ ತೆರಳಲು ಸಜ್ಜಾದಾಗ, ಇದು ಕೇವಲ 8 ದಿನಗಳ ಕಾರ್ಯಾಚರಣೆ ಎಂಬ ಗ್ರಹಿಕೆಯೇ ಅವರಲ್ಲಿ ಕೆನೆಗಟ್ಟಿತ್ತು. ಆದರೆ ತಾಂತ್ರಿಕ ಸಮಸ್ಯೆ ಗಳಿಂದಾಗಿ ಭೂಮಿಗೆ ಮರಳಿಕೆ ಸಾಧ್ಯವಾಗದಿದ್ದಾಗ ಮತ್ತು ದಿನಗಳೆದಂತೆ ಅದು ವಿಳಂಬ ವಾಗುತ್ತಲೇ ಹೋದಾಗ ಸಹಜವಾಗಿ ಅವರ ಕುಟುಂಬಿಕರನ್ನು ಆತಂಕ ಆವರಿಸಿದ್ದುಂಟು