ಹಲವರ ಭವಿಷ್ಯ ಬರೆಯಲಿರುವ ಬಿಹಾರ ಕದನ
35 ವರ್ಷಗಳಿಂದ ಬಿಹಾರ ಮತದಾರನ ಅವಗಣನೆಗೆ ಒಳಗಾಗಿರುವ ಕಾಂಗ್ರೆಸ್, ಇಲ್ಲಿ ನಿರೀಕ್ಷೆಗೂ ಮೀರಿದ ಫಲಿತಾಂಶ ಕಂಡುಕೊಂಡರೆ, ರಾಷ್ಟ್ರಮಟ್ಟದಲ್ಲಿ ಇಂಡಿ ಒಕ್ಕೂಟದ ನಾಯಕತ್ವ ವಹಿಸಿ ಕೊಳ್ಳಲು ಪ್ರಾದೇಶಿಕ ಪಕ್ಷಗಳೊಂದಿಗೆ ಚೌಕಾಸಿ ಮಾಡಬಹುದು. ಚುನಾವಣಾ ರಣನೀತಿಕಾರನನ್ನು ರಾಜಕಾರಣಿಯಾಗಿ ಬಿಹಾರದ ಜನ ಸ್ವೀಕರಿಸಿದರೆ, ಹೊಸ ಜನ ಸುರಾಜ್ ಪಕ್ಷದ ನಾಯಕ ಪ್ರಶಾಂತ್ ಕಿಶೋರ್ ತಮ್ಮ ಪಕ್ಷದ ಬಾಹುಗಳನ್ನು ಬೇರೆಡೆಗೆ ವಿಸ್ತರಿಸಲು ಇದು ನಾಂದಿ ಹಾಡಬಹುದು.