ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ವಿಶ್ವವಾಣಿ ವಿಶೇಷ

Vishwavani TV: ಎಲ್‌ಪಿಜಿ ಗ್ರಾಹಕರಿಗೆ ಗ್ಯಾಸ್‌ ವಿತರಕನ ಅಭಯ; 1 ಕೋಟಿ ವೀವ್ಸ್‌ ಕಂಡ ವೈರಲ್‌ ವಿಡಿಯೋ ಇಲ್ಲಿದೆ

1 ಕೋಟಿ ವೀಕ್ಷಣೆ ಗಳಿಸಿದ Vishwavani TV ವಿಡಿಯೊ

ದೇಶಾದ್ಯಂತ ಎಲ್‌ಪಿಜಿ ಕೊರತೆಯಾಗಿಲ್ಲವಾದರೂ ಕೂಡ ಜನರು ಗೊಂದಲಕ್ಕೆ ಒಳಗಾಗಿದ್ದಾರೆ. ಕಾರಣ ಬುಕ್ಕಿಂಗ್ ಮತ್ತು ಪೂರೈಕೆಯಲ್ಲಿ ಆಗುತ್ತಿರುವ ವಿಳಂಬ. ಈ ಕುರಿತು ಪದೇ ಪದೇ ಕೇಂದ್ರ ಸರ್ಕಾರ ಸ್ಪಷ್ಟನೆಯನ್ನು ನೀಡುತ್ತಿದ್ದರೂ ಜನರು ಅಡುಗೆ ಅನಿಲ ಪಡೆಯಲು ಮುಗಿ ಬೀಳುತ್ತಿದ್ದಾರೆ. ಈ ಕುರಿತು ಈಗ ವಿಶ್ವವನಿಗೆ ಗ್ಯಾಸ್ ವಿತರಕರೊಬ್ಬರು ನೀಡಿರುವ ಹೇಳಿಕೆ ವಿಡಿಯೊ ಇಲ್ಲಿದೆ. ಈ ವಿಡಿಯೊವನ್ನು 1 ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿರುವುದು ಈಗ ದಾಖಲೆಯಾಗಿದೆ.

Lokayukta : ದಾಳಿಗೆ ಮಾತ್ರ ಲೋಕಾ ಸೀಮಿತ, ಯಾರೊಬ್ಬರಿಗೂ ಶಿಕ್ಷೆ ವಿಧಿಸಿಲ್ಲ

ದಾಳಿಗೆ ಮಾತ್ರ ಲೋಕಾ ಸೀಮಿತ, ಯಾರೊಬ್ಬರಿಗೂ ಶಿಕ್ಷೆ ವಿಧಿಸಿಲ್ಲ

ಭ್ರಷ್ಟಾಚಾರ ವಿರುದ್ಧ ಸಮರ ಸಾರುವ ಲೋಕಾಯುಕ್ತ ಸಂಸ್ಥೆಯು ಕಳೆದ ಐದು ವರ್ಷದಲ್ಲಿ ಐಎಎಸ್, ಐಪಿಎಸ್ ಸೇರಿದಂತೆ 195 ಹಿರಿಯ ಅಧಿಕಾರಿಗಳ ದಾಳಿ ಮಾಡಿ ಪ್ರಕರಣ ದಾಖಲಿಸಿ ಕೊಂಡಿದೆ. ಆದರೆ ಈವರೆಗಿನ ತನಿಖೆಯಲ್ಲಿ ಒಬ್ಬ ಅಧಿಕಾರಿಯೂ ತಪ್ಪಿತಸ್ಥ ಎಂದು ಸಾಬೀತಾಗ ದಿರುವುದು ವಿಪರ್ಯಾಸ.

No Gas Trouble: ಪರ್ಯಾಯ ಅನಿಲ; ನಿತ್ಯ ದಾಸೋಹಿಗಳಿಗಿಲ್ಲ ಟೆನ್ಶನ್

ಪರ್ಯಾಯ ಅನಿಲ; ನಿತ್ಯ ದಾಸೋಹಿಗಳಿಗಿಲ್ಲ ಟೆನ್ಶನ್

ಬೆಂಗಳೂರಿನ ಅದಮ್ಯಚೇತನ, ಇಸ್ಕಾನ್‌ನ ಅಕ್ಷ ಯಪಾತ್ರ, ಸಿದ್ದಗಂಗಾ ಮಠ, ಧರ್ಮಸ್ಥಳ ದಂತಹ ಕ್ಷೇತ್ರದಲ್ಲಿ ನಿತ್ಯ ಲಕ್ಷಾಂತರ ಜನರಿಗೆ ಅನ್ನಪ್ರಸಾದ ವನ್ನು ಸಿದ್ಧಪಡಿಸಲಾಗುತ್ತದೆ. ಆದರೆ ಈ ಎಲ್ಲ ಕಡೆ ಸೋಲಾರ್, ಹಬೆಯಾಧಾರಿತ ಆಹಾರ ತಯಾರಿಕಾ ಕ್ರಮ ಅಥವಾ ಸೋಲಾರ್ ಬಳಸುವುದರಿಂದ ವಾಣಿಜ್ಯ ಸಿಲಿಂಡರ್‌ಗಳ ಕೊರತೆ ಯಾದರೂ ಚಿಂತಿಸುತ್ತಿಲ್ಲ.

D K Shivakumar Column: ಅಚಲ ವಿಶ್ವಾಸದಲ್ಲಿ ಸಾಗಿದ ಆರು ವರ್ಷ, ಕರ್ನಾಟಕದಲ್ಲಿ ಪ್ರಗತಿ ಪರ್ವದ ಹರ್ಷ

ವಿಶ್ವಾಸದಲ್ಲಿ ಸಾಗಿದ ಆರು ವರ್ಷ, ಕರ್ನಾಟಕದಲ್ಲಿ ಪ್ರಗತಿ ಪರ್ವದ ಹರ್ಷ

ಭಾವನೆಗಳ ಮೇಲೆ ರಾಜಕೀಯ ಮಾಡುವ ಸಂಪ್ರದಾಯಕ್ಕೆ ಸೆಡ್ಡು ಹೊಡೆದು, ಜನರ ಬದುಕಿನ ಸಬಲೀಕರಣವನ್ನೇ ಮುನ್ನೆಲೆಗೆ ತಂದಿದ್ದು ಕೆಪಿಸಿಸಿಯ ಐತಿಹಾಸಿಕ ಸಾಧನೆ. 2023ರಲ್ಲಿ ರಾಷ್ಟ್ರ ರಾಜಕಾರಣಕ್ಕೇ ಹೊಸ ದಿಕ್ಸೂಚಿ ತೋರಿದ ಈ ಕೆಪಿಸಿಸಿ ಕುಟುಂಬದ ಸಾರಥಿಯಾಗಿ ನಾನು ಆರು ವರ್ಷಗಳನ್ನು ಪೂರೈಸಿದ್ದೇನೆ. ಈ ಆರು ವರ್ಷಗಳು ನನ್ನ ರಾಜಕೀಯ ಬದುಕಿನಲ್ಲಿ ಸಾಲು ಸಾಲು ಸಾಧನೆಗಳನ್ನು ತಂದುಕೊಟ್ಟ ಸಾರ್ಥಕ ವರ್ಷ ಗಳು. ಈ ಪಯಣದ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ.

Karnataka Budget: ಕೇಂದ್ರ ಹಣ ಕೊಡದಿದ್ದರೆ ಕೊರತೆ ಬಜೆಟ್

ಕೇಂದ್ರ ಹಣ ಕೊಡದಿದ್ದರೆ ಕೊರತೆ ಬಜೆಟ್

ಒಂದು ವೇಳೆ ಕೇಂದ್ರದಿಂದ ಸೂಕ್ತ ಅನುದಾನ ಹಂಚಿಕೆಯಾಗದಿದ್ದರೆ, ರಾಜ್ಯ ಸರಕಾರ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಕೇಂದ್ರ ಸರಕಾರ ಕೈಗೊಂಡಿ ರುವ ಜಿಎಸ್‌ಟಿ ಇಳಿಕೆಯಿಂದ ಸರಕಾರಕ್ಕೆ ಬರಬೇಕಿದ್ದ ಅನುದಾನದಲ್ಲಿ ಸುಮಾರು 9000 ಕೋಟಿ ರು. ಖೋತಾ ಆಗಲಿದೆ.

Tough Law: ಜಾತಿ ಸಂಕೋಲೆಗೆ ಬ್ರೇಕ್‌, ಮರ್ಯಾದೆಗೇಡು ಹತ್ಯೆಗೆ ಕಠಿಣ ಕಾನೂನು

ಜಾತಿ ಸಂಕೋಲೆಗೆ ಬ್ರೇಕ್‌, ಮರ್ಯಾದೆಗೇಡು ಹತ್ಯೆಗೆ ಕಠಿಣ ಕಾನೂನು

ಪ್ರಸ್ತಾವಿತ ವಿಧೇಯಕದಲ್ಲಿ ಯಾವುದೇ ಇಬ್ಬರು ವಯಸ್ಕರು ತಮ್ಮ ಆಯ್ಕೆಯ ಸಂಗಾತಿ ಯನ್ನು ಮದುವೆಯಾಗಲು ಪೋಷಕರು, ಕುಟುಂಬ, ಜಾತಿಯ ಒಪ್ಪಿಗೆ ಕಡ್ಡಾಯವಲ್ಲ. ಜತೆಗೆ ಬೆದರಿಕೆ ಎದುರಿಸುತ್ತಿರುವ ದಂಪತಿಗಳಿಗೆ ರಕ್ಷಣೆಗೆ ಸೇಫ್‌ ಹೌಸ್‌ಗಳನ್ನು ನಿರ್ಮಿಸಲು ಅವಕಾಶ ಮಾಡಿ ಕೊಳ್ಳಲಾಗಿದೆ.

Virajpet MLA A S Ponnanna Interview: ನಾಯಕತ್ವದ ಬಗ್ಗೆ ಸಿಎಂ-ಡಿಸಿಎಂ ಮಧ್ಯೆ  ಚರ್ಚೆಯಾಗಿದೆ

ನಾಯಕತ್ವದ ಬಗ್ಗೆ ಸಿಎಂ-ಡಿಸಿಎಂ ಮಧ್ಯೆ ಚರ್ಚೆಯಾಗಿದೆ

ಕಾವೇರಿ, ಕೃಷ್ಣಾ, ಮುಡಾ, ವಾಲ್ಮೀಕಿ ಸೇರಿದಂತೆ ಅನೇಕ ಕಾನೂನು ಸಮಸ್ಯೆಗಳನ್ನು ಸುಲಭ ವಾಗಿ ಪರಿಹರಿಸಬೇಕು. ಕಠಿಣ ಮಾಡಬಾರದು. ಸಮಸ್ಯೆಗಳನ್ನು ಜನರ ಹಿತದೃಷ್ಟಿಯಿಂದ ಕಾನೂನಾತ್ಮಕಾಗಿ ನೋಡಬೇಕು. ಇದರಿಂದ ಯಾವುದೇ ಟ್ರಬಲ್ ಶೂಟ್ ಮಾಡಬಹುದು. ಆದ್ದರಿಂದ ಎಲ್ಲವನ್ನೂ ರಾಜಕೀಯವಾಗಿ ಯೋಚಿಸಬಾರದು.

ESI Hospital: ಹಣ ನೀಡದ ಕಾರ್ಮಿಕ ಇಲಾಖೆ, ಚಿಕಿತ್ಸೆ ನೀಡದ ಇಎಸ್‌ʼಐ ಆಸ್ಪತ್ರೆ

ಹಣ ನೀಡದ ಕಾರ್ಮಿಕ ಇಲಾಖೆ, ಚಿಕಿತ್ಸೆ ನೀಡದ ಇಎಸ್‌ʼಐ ಆಸ್ಪತ್ರೆ

ರಾಜ್ಯದಲ್ಲಿ 8 ಇಎಸ್‌ಐ, 140ಕ್ಕೂ ಅಧಿಕ ಡಿಸ್ಪೆನ್ಸರಿಗಳಿವೆ. ನವಜಾತ ಶಿಶುಗಳಿಗೆ ಬರುವ ಸೂಕ್ಷ್ಮ ಕಾಯಿಲೆಗಳಿಂದ ಹಿಡಿದು ಎಲ್ಲ ತರಹದ ಚಿಕಿತ್ಸೆಗಳು ಕಾರ್ಮಿಕರಿಗೆ ಮತ್ತು ಅವರ ಅವಲಂಬಿ ತರ ಕುಟುಂಬಗಳಿಗೆ ಈ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔಷಧ ಖರೀದಿ ಪ್ರಕ್ರಿಯೆ ಕುಂಟುತ್ತಾ ಸಾಗುತ್ತಿದ್ದು, ಸಮರ್ಪಕ ವಾಗಿ ಅನುದಾನವೂ ಸದ್ಬಳಕೆಯಾಗುತ್ತಿಲ್ಲ.

Vishwavani Impact: ಇಂದಿನಿಂದ ಹಂತ ಹಂತವಾಗಿ ಸರಾಗ ಸಫಾರಿ

Vishwavani Impact: ಇಂದಿನಿಂದ ಹಂತ ಹಂತವಾಗಿ ಸರಾಗ ಸಫಾರಿ

‘ವಿಶ್ವವಾಣಿ’ ಯ ನಿರಂತರ ವರದಿಗೆ ಎಚ್ಚೆತ್ತಿರುವ ಅರಣ್ಯ ಇಲಾಖೆ ರಚಿಸಿದ್ದ ತಾಂತ್ರಿಕ ಸಮಿತಿ ಯ ಮಧ್ಯಂತರ ವರದಿಯ ಆಧಾರದ ಮೇಲೆ, ಸಫಾರಿ ಪುನರ್ ಪ್ರಾರಂಭಕ್ಕೆ ಬೇಡಿಕೆ ಇರುವು ದನ್ನು ಒಪ್ಪಿಕೊಂಡಿದೆ. ಹೀಗಾಗಿ ಶೇ.50ರಷ್ಟು ಸಫಾರಿ ಪುನರಾರಂಭಕ್ಕೆ ತೀರ್ಮಾನಿಸಲಾಗಿದೆ. ಪೂರ್ತಿ ವರದಿ ಬಂದ ಬಳಿಕ ಸಂಪೂರ್ಣ ಅನುಮತಿ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Safari Begins today: ಇಂದಿನಿಂದಲೇ ಸಫಾರಿ ಶುರು

ಇಂದಿನಿಂದಲೇ ಸಫಾರಿ ಶುರು

ಗುರುವಾರದಿಂದ ಹಂತ-ಹಂತವಾಗಿ ಸಫಾರಿ ಆರಂಭಿಸುವುದಾಗಿ ಘೋಷಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಫಾರಿಯಿಂದ ಸಂದಾಯವಾಗುವ ಆದಾಯದ ಒಂದು ಭಾಗವನ್ನು ಸ್ಥಳೀಯ ಅಭಿ ವೃದ್ಧಿಗೆ ಬಳಸಲಾಗುವುದು ಎಂದು ಹೇಳುವ ಮೂಲಕ ಸ್ಥಳೀಯರನ್ನು ‘ಸಂತೈಸುವ’ ಕಾರ್ಯ ಮಾಡಿದೆ.

Safari begins: ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿ ಪುನರಾರಂಭಿಸುವಂತೆ ಸೂಚನೆ ನೀಡಿ ತಿಂಗಳು ಕಳೆದರೂ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಸುಳಿವನ್ನು ನೀಡಿಲ್ಲ. ತಾಂತ್ರಿಕ ಸಮಿತಿ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಈಶ್ವರ್ ಖಂಡ್ರೆ ಹೇಳಿದ್ದರು.

Robbery Drama: ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ

ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ

ಉದ್ಯಮಿಗೆ 35 ಕೋಟಿ ರು. ಪಂಗನಾಮ ಹಾಕಲು 400 ಕೋಟಿ ರು. ದರೋಡೆ ಕಥೆ ಕಟ್ಟಲಾಗಿತ್ತು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ತೀವ್ರ ಕುತೂಹಲ ಮೂಡಿಸಿದ್ದ 400 ಕೋಟಿ ರು. ಇದೆ ಎನ್ನಲಾಗಿದ್ದ ಕಂಟೇನರ್ ದರೋಡೆ ಪ್ರಕರಣವೇ ಒಂದು ಕಟ್ಟುಕಥೆ ಎಂಬುದನ್ನು ಮಹಾ ರಾಷ್ಟ್ರದ ವಿಶೇಷ ತನಿಖಾ ತಂಡ ಸ್ಪಷ್ಟಪಡಿಸಿದೆ.

Robbery Drama: ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ

ರು. 35 ಕೋಟಿ ವಂಚಿಸಲು 400 ಕೋಟಿ ದರೋಡೆ ಪಂಗನಾಮ

ಉದ್ಯಮಿಗೆ 35 ಕೋಟಿ ರು. ಪಂಗನಾಮ ಹಾಕಲು 400 ಕೋಟಿ ರು. ದರೋಡೆ ಕಥೆ ಕಟ್ಟಲಾಗಿತ್ತು ಎಂಬ ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ತೀವ್ರ ಕುತೂಹಲ ಮೂಡಿಸಿದ್ದ 400 ಕೋಟಿ ರು. ಇದೆ ಎನ್ನಲಾಗಿದ್ದ ಕಂಟೇನರ್ ದರೋಡೆ ಪ್ರಕರಣವೇ ಒಂದು ಕಟ್ಟುಕಥೆ ಎಂಬುದನ್ನು ಮಹಾ ರಾಷ್ಟ್ರದ ವಿಶೇಷ ತನಿಖಾ ತಂಡ ಸ್ಪಷ್ಟಪಡಿಸಿದೆ.

Tamanna as Ambassador: ನಮ್ಮವ್ರನ್ನಾ ಬಿಟ್ಟು ತಮನ್ನಾ ಆಯ್ಕೆ ಮಾಡಿದ್ದೇಕೆ ?

ನಮ್ಮವ್ರನ್ನಾ ಬಿಟ್ಟು ತಮನ್ನಾ ಆಯ್ಕೆ ಮಾಡಿದ್ದೇಕೆ ?

ತಮನ್ನಾ ಭಾಟಿಯಾ ಅವರನ್ನು ಆಯ್ಕೆ ಮಾಡಲಾಗಿದೆ. ಜನಪ್ರಿಯತೆ, ಸಾಮಾಜಿಕ ಮಾಧ್ಯಮ ಗಳಲ್ಲಿ ಹೊಂದಿರುವ ಅಭಿಮಾನಿಗಳ ಸಂಖ್ಯೆ, ನಂಬಿಕೆ, ರಚನಾತ್ಮಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವು ದರೊಂದಿಗೆ ಬ್ರಾಂಡ್‌ನ ಜತೆ ಸಹಜವಾಗಿ ಹೊಂದಾಣಿಕೆಯಾಗುವ ಗುಣಗಳನ್ನು ಆಧರಿಸಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ ಎನ್ನುವುದು ಕೆಎಸ್‌ಡಿಎಲ್ ನಿಲುವಾಗಿದೆ.

Actress Tamanna as Ambassador: ಮೈಸೂರು ಸ್ಯಾಂಡಲ್‌ʼಗೆ ತಮನ್ನಾ ರಾಯಭಾರಿ: ತಪ್ಪೇನು ?

ಮೈಸೂರು ಸ್ಯಾಂಡಲ್‌ʼಗೆ ತಮನ್ನಾ ರಾಯಭಾರಿ: ತಪ್ಪೇನು ?

ಕರ್ನಾಟಕ ಸರಕಾರಿ ಸ್ವಾಮ್ಯದ ಕೆಎಸ್‌ಡಿಎಲ್ ತಮ್ಮ ವ್ಯಾಪಾರವನ್ನು ವಿಸ್ತರಿಸಿಕೊಳ್ಳುವ, 2030ರ ವೇಳೆಗೆ 5000 ಕೋಟಿ ರು. ಮಾರುಕಟ್ಟೆ ಮಾಡಬೇಕೆಂಬ ಉದ್ದೇಶದಿಂದ ತಮನ್ನಾ ಅವರನ್ನು ರಾಯಭಾರಿಯನ್ನಾಗಿ ನೇಮಿಸಿ ಕೊಂಡಿದೆ. ಆದರೆ ತಮನ್ನಾ ಬದಲಿಗೆ ಕರ್ನಾಟಕದ ‘ಬೆಡಗಿ’ಯರನ್ನು ರಾಯಭಾರಿಯನ್ನಾಗಿ ಮಾಡಿಕೊಳ್ಳಬೇಕಿತ್ತು. ಕರ್ನಾಟಕದಲ್ಲಿ ತಮನ್ನಾಗಿಂತ ಸುಂದರಿಯರು ಇಲ್ಲವೇ ಎನ್ನುವ ಕೊಂಕನ್ನು ರಾಜ್ಯದ ಕೆಲವರು ಎತ್ತಿದ್ದಾರೆ.

Use Safari: ʼಸಫಾರಿ ಬಳಸಿʼ ಅರಣ್ಯ ಉಳಿಸಿ

Use Safari: ʼಸಫಾರಿ ಬಳಸಿʼ ಅರಣ್ಯ ಉಳಿಸಿ

ಕರ್ನಾಟಕಕ್ಕೆ ಹೋಲಿಸಿದರೆ, ದೇಶದ ಇತರೆ ಭಾಗದಲ್ಲಿ ಇಲ್ಲಿಗಿಂತ ಹೆಚ್ಚು ಪ್ರಮಾಣದಲ್ಲಿ ದಾಳಿಗಳಾಗು ತ್ತಿವೆ. ಆದರೆ ಅಲ್ಲೆಲ್ಲಿಯೂ ಸ್ಥಗಿತವಾಗದ ಸಫಾರಿ, ಬಂಡೀಪುರ ಹಾಗೂ ನಾಗರಹೊಳೆ ಯಲ್ಲಿ ಮಾತ್ರ ಏಕಾಗಿದೆ? ಸಂಘರ್ಷ ತಡೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕಂಡುಕೊಳ್ಳ ಬೇಕಿದೆಯೇ ಹೊರತು, ಸಫಾರಿ ಸ್ಥಗಿತಗೊಳಿಸುವುದು ಪರಿಹಾರವಲ್ಲ.

Safari restrictions: ಸಫಾರಿ ನಿರ್ಬಂಧ: ಎತ್ತಿಗೆ ಜ್ವರ, ಎಮ್ಮೆಗೆ ಬರೆ !

Safari restrictions: ಸಫಾರಿ ನಿರ್ಬಂಧ: ಎತ್ತಿಗೆ ಜ್ವರ, ಎಮ್ಮೆಗೆ ಬರೆ !

ಸಫಾರಿಯನ್ನೇ ನಿಲ್ಲಿಸಿರುವುರಿಂದ ಬಹುತೇಕ ಪ್ರವಾಸಿಗರು ಬರುತ್ತಿಲ್ಲ ಎನ್ನಲಾಗುತ್ತಿದೆ. ಇದರಿಂದ ಭಾರಿ ಪ್ರಮಾಣದ ನಷ್ಟ ಅನುಭವಿಸುವಂತಾಗಿದೆ ಎನ್ನುವ ಆರೋಪವನ್ನು ರೆಸಾರ್ಟ್ ಮಾಲೀಕರು ಮಾಡು ತ್ತಿದ್ದಾರೆ. ಸಫಾರಿ ನಿರ್ಬಂಧದಿಂದ ಈ ಭಾಗದಲ್ಲಿ ಆಗುತ್ತಿರುವ ನಷ್ಟದ ಬಗ್ಗೆ ಹಲವು ದೂರುಗಳು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಕೆಯಾಗಿದೆ.

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

ಇದು ಪ್ರವಾಸೋದ್ಯಮ ಪರಿಸರ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ, ಉದ್ಯೋಗ ಸೃಷ್ಟಿ, ಈ ಮೂರು ಅಂಶಗಳ ಸಮತೋಲನದ ಮಾದರಿ. ಕೃಷಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿದ್ದು, ಇದರಿಂದ ರೈತರಿಗೆ ಬೆಳೆಗಳ ಹೊರತಾದ ಆದಾಯದ ಹೊಸ ಮಾರ್ಗಗಳನ್ನು ತೆರೆದು, ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಇದು ಅತ್ಯಂತ ಪ್ರಾಸಂಗಿಕ.

Union Budget 2026-27: ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ ಎಂದರೆ ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾದ ವಿಷಯವಲ್ಲ. ಅದು ಜೀವನೋಪಾಯ, ನವೋದ್ಯಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶಕ್ತಿಯಾದ ಸಾಧನವಾಗಿತ್ತು. ಪಿಇಎಸ್ ಸ್ಥಾಪನೆಯಾದ ದಿನದಿಂದಲೂ ಈ ನಿಟ್ಟಿನಲ್ಲಿಯೇ ಆಲೋಚನೆ ಮಾಡುವುದಷ್ಟೇ ಅಲ್ಲದೇ, ಶಿಕ್ಷಣ- ಉದ್ಯೋಗ-ಉದ್ಯಮ ಅಂಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ನಿರಂತರವಾಗಿ ರೂಪಿಸಿಕೊಂಡಿದೆ.

Union Budget 2026-27: ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ದೃಷ್ಟಿಯಿಂದ ದೊಡ್ಡ ಅಸಮಾಧಾನ ಮೂಲಸೌಕರ್ಯ ಹೂಡಿಕೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹೈಸ್ಪೀಡ್ ರೈಲು ಯೋಜನೆಗಳು ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅತ್ಯಂತ ಮುಖ್ಯವಾಗಿರುವ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ಮಾರ್ಗಗಳು ಸಂಪೂರ್ಣವಾಗಿ ನಿರ್ಲಕ್ಷಿತವಾಗಿವೆ.

77th Republic Day: ದೇಶವು ಪ್ರಜಾಸತ್ತಾತ್ಮಕ ಗಣರಾಜ್ಯ

ದೇಶವು ಪ್ರಜಾಸತ್ತಾತ್ಮಕ ಗಣರಾಜ್ಯ

ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಮತ್ತು ದೇಶಭಕ್ತಿ ಯಿಂದ ಆಚರಿಸುತ್ತಿದೆ. 1950 ಜ.26ರಂದು ಭಾರತದ ಸಂವಿಧಾನವು ಜಾರಿಗೆ ಬಂದು, ನಮ್ಮ ದೇಶವು ಸಾರ್ವಭೌಮ, ಪ್ರಜಾಸತ್ತಾತ್ಮಕ ಗಣರಾಜ್ಯವಾಗಿ ಹೊರಹೊಮ್ಮಿದೆ. ಈ ಐತಿಹಾಸಿಕ ದಿನದ ನೆನಪಿನಲ್ಲಿ ನಾಡಿನಾದ್ಯಂತ ಸಂಭ್ರಮ ಮನೆ ಮಾಡಿದೆ.

Piyush Goyal Column: ಭಾರತವು ಈಗ ಜಾಗತಿಕ ಆಕರ್ಷಣೆಯ ಕೇಂದ್ರಬಿಂದು

ಭಾರತವು ಈಗ ಜಾಗತಿಕ ಆಕರ್ಷಣೆಯ ಕೇಂದ್ರಬಿಂದು

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನಿರ್ಣಾಯಕ ನಾಯಕತ್ವದಲ್ಲಿ 2014 ರಿಂದ ಭಾರತವು ಸಾಗುತ್ತಿರುವ ಪರಿವರ್ತನಾತ್ಮಕ ಪ್ರಯಾಣದಲ್ಲಿ 2025 ಒಂದು ಹೆಗ್ಗುರುತಿನ ವರ್ಷವಾಗಿದೆ. ದಿಟ್ಟ ನಿರ್ಧಾರಗಳು ಮತ್ತು ಕ್ರಾಂತಿಕಾರಿ ಸುಧಾರಣೆಗಳ ಮೂಲಕ, ನಮ್ಮ ಸರಕಾರವು ವ್ಯಾಪಾರ ವಾತಾವರಣವನ್ನು ಮರು ರೂಪಿಸಿದೆ.

Vishwavani celebrates 11th Year: ಪತ್ರಿಕೋದ್ಯಮಕ್ಕೆ ʼವಿಶ್ವವಾಣಿʼ ಸಮೂಹದಿಂದ ಹೊಸ ಭಾಷ್ಯ

ಪತ್ರಿಕೋದ್ಯಮಕ್ಕೆ ʼವಿಶ್ವವಾಣಿʼ ಸಮೂಹದಿಂದ ಹೊಸ ಭಾಷ್ಯ

ಕರ್ನಾಟಕದ ಮಾಧ್ಯಮ ಕ್ಷೇತ್ರದಲ್ಲಿ ವಿಶ್ವೇಶ್ವರ ಭಟ್ ಅವರಿಗೆ ತಮ್ಮದೇ ಆದ ವಿಶಿಷ್ಟ ಸ್ಥಾನವಿದೆ. ಅವರ ರೀತಿಯ ಇವರ ಸಂಪಾದಕತ್ವದ ‘ವಿಶ್ವವಾಣಿ’ ಸಮೂಹದ ಪತ್ರಿಕೆಗಳು ತನ್ನದೇ ಆದ ವೈಶಿಷ್ಟ್ಯ ಉಳಿಸಿ ಕೊಂಡಿವೆ. ಕಳೆದ ವಾರವಷ್ಟೆ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವೇಶ್ವರ ಭಟ್ ಅವರ ಪತ್ರಿಕಾ ಸಾಹಸವನ್ನು ಮೆಚ್ಚಿ ಮಾತನಾಡಿದ್ದೆ.

Navabrindavana: ನವಬೃಂದಾವನ ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗಬೇಕು ?

ನಿಜವಾದ ಅರ್ಥದಲ್ಲಿ ಧರ್ಮಕ್ಷೇತ್ರವಾಗಬೇಕೆಂದರೆ ಏನಾಗಬೇಕು ?

ಶ್ರೀ ರಾಮಜನ್ಮಭೂಮಿ ವಿವಾದವನೊಳ್ಳಗೊಂಡಂತೆ ಹಲವು ವಿಷಯಗಳು ಕಾನೂನಾತ್ಮಕವಾಗಿ ಅಥವಾ ರಾಜಿ /ಹೊಂದಾಣಿಕೆಗಳ ಮೂಲಕ ತಾರ್ಕಿಕ ಅಂತ್ಯ ಕಾಣುವ ಹಂತದಲ್ಲಿರುವುದು ಕಾಲದ ವಿಶೇಷ. ಇದೇ ಸಾಲಿನಲ್ಲಿ ನಿಲ್ಲುವ ಮತ್ತೊಂದು ವಿವಾದವೇ ಹಂಪಿ/ಆನೆಗೊಂದಿ ಪರಿಸರದಲ್ಲಿ ಮಧ್ವ ಪರಂಪರೆಗೆ ಸೇರಿದ ಮೂಲ ಯತಿಗಳು ಬೃಂದಾವನಸ್ಥರಾಗಿ ನೆಲೆಸಿರುವ ನವಬೃಂದಾವನ ಕ್ಷೇತ್ರದ ವಿವಾದ.

Loading...