ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
ವಿಶ್ವವಾಣಿ ವಿಶೇಷ
Vishwavani Pustaka: ವಿಶ್ವೇಶ್ವರ ಭಟ್ಟರ 100ನೇ ಕೃತಿ ಸೇರಿದಂತೆ ವಿಶ್ವವಾಣಿ ಪುಸ್ತಕದ 8 ಕೃತಿಗಳು ಇಂದು ಬಿಡುಗಡೆ

ವಿಶ್ವೇಶ್ವರ ಭಟ್ಟರ 100ನೇ ಕೃತಿ ಸೇರಿ 8 ಕೃತಿಗಳು ಇಂದು ಬಿಡುಗಡೆ

Book Release: ಜುಲೈ 26ರಂದು ಶನಿವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಮೈಸೂರ್ ಬ್ಯಾಂಕ್ ಸರ್ಕಲ್‌‌ನಲ್ಲಿರುವ ಎಫ್‌‌ಕೆಸಿಸಿಐ ಸಭಾಂಗಣದಲ್ಲಿ 8 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಲಿದೆ. ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯಸಭಾ ಸದಸ್ಯರಾದ ಡಾ. ಡಿ ವೀರೇಂದ್ರ ಹೆಗ್ಗಡೆ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

AndhraPradesh DCM Pawan kalyan Interview: ಇತಿಹಾಸದ ಬಗ್ಗೆ ನಮ್ಮೆಲ್ಲರಲ್ಲೂ ಅರಿವಿರಬೇಕು: ಪವರ್‌ ಫುಲ್‌ ಪವನ್

ಇತಿಹಾಸದ ಬಗ್ಗೆ ನಮ್ಮೆಲ್ಲರಲ್ಲೂ ಅರಿವಿರಬೇಕು

ಕನ್ನಡ ಮತ್ತು ತೆಲುಗು ಭಾಷೆಯ ಲಿಪಿಗಳು ಒಂದಕ್ಕೊಂದು ಬಹಳಷ್ಟು ಸಾಮ್ಯತೆ ಹೊಂದಿವೆ. ಸಾಂಸ್ಕೃತಿಕವಾಗಿ ವಿಜಯನಗರ ಸಾಮ್ರಾಜ್ಯವು ಆಂಧ್ರಪ್ರದೇಶಕ್ಕೂ ವ್ಯಾಪಿಸಿತ್ತು. ಹೀಗಾಗಿ ಎರಡೂ ರಾಜ್ಯಗಳ ಮಧ್ಯೆ ಬಹಳಷ್ಟು ಸಾಂಸ್ಕೃತಿಕವಾಗಿ ನಂಟಿದೆ. ನಾನು ಸಿನಿಮಾ ಮೂಲಕ ಎಲ್ಲ ಜನರನ್ನೂ ತಲುಪಲು ಸಾಧ್ಯವಾಗಿರಲಿಲ್ಲ. ಹೀಗಾಗಿ ನನಗೆ ರಾಜಕೀಯ ಪ್ರವೇಶ ಮಾಡುವುದು ಒದಗಿ ಬಂದ ಅವಕಾಶ.

Solar Eclipse: ನೂರು ವರ್ಷಗಳ ಬಳಿಕ ನಡೆಯಲಿದೆ ಅಪರೂಪದ ಸೂರ್ಯಗ್ರಹಣ

ಅಪರೂಪದ ಸೂರ್ಯಗ್ರಹಣಕ್ಕೆ ಸಾಕ್ಷಿಯಾಗಲಿದೆ ಜಗತ್ತು

ಅಪರೂಪದ ಸೂರ್ಯಗ್ರಹಣವೊಂದು (Solar Eclipse) ಶೀಘ್ರದಲ್ಲೇ ಸಂಭವಿಸಲಿದೆ. ಇದು ನೂರು ವರ್ಷಗಳ ಬಳಿಕ ನಭೋ ಮಂಡಲದಲ್ಲಿ ನಡೆಯಲಿರುವ ಒಂದು ವಿಸ್ಮಯ. ಅತೀ ಉದ್ದದ ಸೂರ್ಯಗ್ರಹಣ (Longest Solar Eclipse) ಸುಮಾರು ನೂರು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ 2027ರಲ್ಲಿ ಸಂಭವಿಸಲಿದೆ. ಇದು ವಿಶ್ವದ ಹತ್ತು ದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸಲಿದೆ.

ವೈದ್ಯಕೀಯ ಅಧ್ಯಯನಕ್ಕೆ ಮೃತದೇಹಗಳ ಬರ !

ವೈದ್ಯಕೀಯ ಅಧ್ಯಯನಕ್ಕೆ ಮೃತದೇಹಗಳ ಬರ !

ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಅಂಗರಚನಾಶಾಸ್ತ್ರದ ಅಧ್ಯಯನ ಬಹಳ ಮಹತ್ವದ್ದಾಗಿದೆ. ಭಾರತೀಯ ವೈದ್ಯಕೀಯ ಮಂಡಳಿಯ ನಿಯಮಗಳ ಪ್ರಕಾರ, 1.4ರ ಪ್ರಮಾಣದಲ್ಲಿ ಎಂಬಿಬಿಎಸ್ ವಿದ್ಯಾರ್ಥಿಗಳಿಗೆ ಮೃತ ದೇಹಗಳ ಅಗತ್ಯ ಇದೆ. 10 ವಿದ್ಯಾರ್ಥಿಗಳಿಗೆ ಅಧ್ಯಯನ, ಸಂಶೋಧನೆ ಉದ್ದೇಶಕ್ಕೆ ಕನಿಷ್ಠ ಒಂದು ಮೃತದೇಹ ಬೇಕು. ಆದರೆ, ಹಲವು ವೈದ್ಯಕೀಯ ಕಾಲೇಜುಗಳಲ್ಲಿ ಈ ಪ್ರಮಾಣದಲ್ಲಿ ಲಭ್ಯವಾಗುತ್ತಿಲ್ಲ.

22, 328 Cases in Lokayukta Pending: ಲೋಕಾಯುಕ್ತ: 22, 328 ಪ್ರಕರಣಗಳ ವಿಚಾರಣೆ ಬಾಕಿ

ಲೋಕಾಯುಕ್ತ: 22, 328 ಪ್ರಕರಣಗಳ ವಿಚಾರಣೆ ಬಾಕಿ

ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರ ಬಳಿ 6 ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿ ಇವೆ. 2023ರ ಏಪ್ರಿಲ್ 1ಕ್ಕೂ ಮೊದಲು 4048 ಪ್ರಕರಣಗಳು ಬಾಕಿ ಇದ್ದವು. ನಂತರ 6997 ಹೊಸ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 184 ಪ್ರಕರಣಗಳು ವಿಲೇವಾರಿಯಾಗಿ, ಪ್ರಸ್ತುತ 6997 ಪ್ರಕರಣಗಳು ಬಾಕಿ ಇವೆ.

ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಇನ್ನಷ್ಟು ಜಟಿಲ

ವರಿಷ್ಠರನ್ನು ಇಕ್ಕಟ್ಟಿಗೆ ಸಿಲುಕಿಸಿದ ಪಕ್ಕದಲ್ಲಿನ ಆಂತರಿಕ ಕಚ್ಚಾಟ

ಶಿಸ್ತಿನ ಪಕ್ಷ ಎಂದೇ ತನ್ನನ್ನು ಗುರುತಿಸಿಕೊಂಡ ಬಿಜೆಪಿಯಲ್ಲಿ ಶಿಸ್ತು ಪದೇ ಪದೆ ಶಿಸ್ತು ಉಲ್ಲಂಘನೆ ಯಾಗುತ್ತಿದೆ ಎಂಬುದು ನೊಂದ ಕಾರ್ಯಕರ್ತರ ಅಳಲಾಗಿದೆ. ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿ ಹೈಕಮಾಂಡ್ ಅಷ್ಟೊಂದು ಪ್ರಬಲವಾಗಿದ್ದರೂ ನಾಯಕರು ಕರ್ನಾಟಕದ ಕುರಿತಾಗಿ ನಿರ್ಧಾರ ಕೈಗೊಳ್ಳಲು ಯಾಕೆ ಹಿಂದೇಟು ಹಾಕುತ್ತಿದ್ದಾರೆ ಎಂಬುದು ಕೂಡ ಕಗ್ಗಂಟಾಗಿ ಉಳಿದಿದೆ.

ಯುವಜನತೆಯ ಸದ್ಬಳಕೆ ದೇಶದ ಅಭಿವೃದ್ಧಿಗೆ ರಹದಾರಿ

ಯುವಜನತೆಯ ಸದ್ಬಳಕೆ ದೇಶದ ಅಭಿವೃದ್ಧಿಗೆ ರಹದಾರಿ

ಆಧುನಿಕ ಉದ್ಯೋಗಗಳಿಗೆ ಯುವಕರನ್ನು ಸಿದ್ಧಪಡಿಸುವುದು ಬಹಳ ಕ್ಲಿಷ್ಟಕರವಾದ ವಿಷಯ. ಆದರೆ ಅದು ಇಂದಿನ ಅಗತ್ಯವೂ ಆಗಿದೆ. ಇದಕ್ಕೆ ಪೂರಕವಾಗಿ ಕರ್ನಾಟಕದಲ್ಲಿ ಹಲವು ಕೌಶಲ್ಯ ಅಭಿವೃದ್ಧಿ ತರಬೇತಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗಿದೆ. ಆ ಮೂಲಕ ದೇಶ ದಲ್ಲಿ ಮಾದರಿ ರಾಜ್ಯವಾಗಿ ಹೊರಹೊಮ್ಮಿದೆ.

ಮೈಸೂರು ಮಾಧ್ಯಮ ಕ್ಷೇತ್ರದ ಸ್ಟಾರ್‌ ಅಸ್ತಂಗತ

ಮೈಸೂರು ಮಾಧ್ಯಮ ಕ್ಷೇತ್ರದ ಸ್ಟಾರ್‌ ಅಸ್ತಂಗತ

ಕೆಬಿಜಿ ಅವರು ನಡೆದು ಬಂದ ಹಾದಿ ಸುಲಭದಲ್ಲಾಗಿರ ಲಿಲ್ಲ. ಆರಂಭದಲ್ಲಿ ಹಲವು ಸವಾಲು ಕಷ್ಟ-ನಷ್ಟ ಅನುಭವಿಸಿ, ಅದನ್ನು ಮೆಟ್ಟಿ ನಿಂತು ಸ್ಥಳೀಯ ಪತ್ರಿಕೆಯ ಮೂಲಕ ಪ್ರಭಾವಿ ಓದುಗರ ವಲಯವನ್ನು ಬಹುವಾಗಿ ವಿಸ್ತರಿಸ ಬಹುದು ಎಂಬುದನ್ನು ಅವರು ತೋರಿಸಿ ಕೊಟ್ಟರು.

ಪತ್ರಿಕೋದ್ಯಮವೇ ಉಸಿರು

ಪತ್ರಿಕೋದ್ಯಮವೇ ಉಸಿರು

ಕೊಡಗಿನ ಮೂಲದ, ಸ್ಥಿತಿವಂತ ಕುಟುಂಬದ ಗಣಪತಿ ಅವರು ಪದವಿ ಮುಗಿಸಿ ಸೇನೆಗೆ ತೆರಳಿದ್ದರೆ ದೊಡ್ಡ ಹುದ್ದೆಯಲ್ಲಿ ಇರೋರು. ಅವರನ್ನು ಸೆಳೆದದ್ದು ಪತ್ರಿಕೋದ್ಯಮ. ಇಂಡಿ ಯನ್ ಎಕ್ಸ್‌ಪ್ರೆಸ್ ಮೂಲಕ ವೃತ್ತಿ ಜೀವನ ಆರಂಭಿಸಿ ಆನಂತರ ಮೈಸೂರಿಗೆ ಬಂದು ಸ್ಟಾರ್ ಆಫ್ ಮೈಸೂರು, ಮೈಸೂರು ಮಿತ್ರ ಆರಂಭಿಸಿದವರು ಗಣಪತಿ. ‌

ಕೆಜಿಬಿ ಎಂಬ ಜಾದೂಗಾರ !

ಕೆಜಿಬಿ ಎಂಬ ಜಾದೂಗಾರ !

ಯಾವುದೇ ಗಿಮಿಕ್ಕಿಲ್ಲದ, ಶುದ್ಧ ವ್ಯಾವಹಾರಿಕ ಪ್ರಜ್ಞೆಯ ಪತ್ರಕರ್ತ ಕೆಬಿಜಿ. ತಮ್ಮ ‘ Abrakadabra’ ಮತ್ತು ಛೂ ಮಂತ್ರ’ ಜನಪ್ರಿಯ ಅಂಕಣದಲ್ಲಿ ತಮ್ಮ ಹರಿತವಾದ ಬರವಣಿಗೆಯ ಮೂಲಕ ಮ್ಯಾಜಿಕ್ ಮಾಡಿದ ಜಾದುಗಾರ, ಅಜಾತ ಶತ್ರು. ನಿಸ್ಸಂದೇಹವಾಗಿ ಅವರೊಬ್ಬ ‘ಜಂಟಲ್ ಮ್ಯಾನ್ ಟು ದಿ ಕೋರ್’.

ಬಿಎಂಸಿಆರ್‌ಐ: ಆಡಳಿತ ಯಂತ್ರ ಕುಸಿತ !

ಬಿಎಂಸಿಆರ್‌ಐ: ಆಡಳಿತ ಯಂತ್ರ ಕುಸಿತ !

ಬಿಎಂಸಿಆರ್‌ಐನಲ್ಲಿ ಕಳೆದ ಮೂರು ವರ್ಷಗಳಿಂದ ನಿರ್ದೇಶಕರ ಹುದ್ದೆಯನ್ನು ಪ್ರಭಾರದಲ್ಲೇ ನಿರ್ವಹಿಸಲಾಗುತ್ತಿದೆ. ನಿಯಮದ ಪ್ರಕಾರ ಪ್ರಭಾರಿ ಹುದ್ದೆಗಳನ್ನು ಕೇವಲ 6 ತಿಂಗಳ ಅವಧಿಗೆ ನೀಡಲಾಗುತ್ತದೆ. ಆದರೆ ಬಿಎಂಸಿಆರ್‌ಐ ಸೇರಿ ಕೆಲ ಸಂಸ್ಥೆಗಳಲ್ಲಿ 2-3 ವರ್ಷಗಳಿಗೂ ಹೆಚ್ಚು ಅವಧಿಗೆ ಪ್ರಭಾರಿಗಳನ್ನೆ ಮುಂದುವರಿಸಿಕೊಂಡು ಬರುತ್ತಿರುವ ಸರಕಾರ ನಿರ್ದಿಷ್ಟ ಅವಧಿಗೆ ಸೂಕ್ತ ಹಾಗೂ ಅರ್ಹ ನಿರ್ದೇಶಕರನ್ನು ನೇಮಕ ಮಾಡುವಲ್ಲಿ ವಿಫಲವಾಗಿದೆ.

Kapurthala Maharaja: ಈ ರಾಜ ತನ್ನ ರಾಣಿಯನ್ನು ಪುರುಷನನ್ನಾಗಿ ಬದಲಾಯಿಸಿದ್ದು ಏಕೆ ಗೊತ್ತೇ?

ಈ ರಾಜ ತನ್ನ ರಾಣಿಯನ್ನು ಪುರುಷನನ್ನಾಗಿ ಬದಲಾಯಿಸಿದ್ದು ಏಕೆ ಗೊತ್ತೇ?

ಭಾರತೀಯರ ವಿದೇಶಿ ಪ್ರವಾಸಕ್ಕೆ ನಿಷೇಧ ಹೇರಿದ್ದ ಬ್ರಿಟಿಷರ ನಿಯಮಗಳನ್ನು ಉಲ್ಲಂಘಿಸಿ ಕಪುರ್ತಲದ ಮಹಾರಾಜನು ತನ್ನ ರಾಣಿಯನ್ನು ಯುರೋಪ್‌ಗೆ ಹೋಗಲು ಅವಕಾಶ ಮಾಡಿಕೊಟ್ಟ. ಇದಕ್ಕಾಗಿ ಆತ ತನ್ನ ರಾಣಿಯನ್ನು ಪುರುಷನನ್ನಾಗಿ ಮಾಡಿದನು. ಈ ಮೂಲಕ ಬ್ರಿಟಿಷರನ್ನು ವಂಚಿಸಿದನು. ಈ ಪ್ರಯಾಣ ಹೇಗಿತ್ತು, ಇದರ ಹಿಂದಿನ ಕಥೆ ಏನು ಇಲ್ಲಿದೆ ಸಂಪೂರ್ಣ ಮಾಹಿತಿ.

ʻಎಐ 171ʼ ಸಿಬ್ಬಂದಿಯ ಅಮೂಲ್ಯ ನೆನಪುಗಳು: ಸಹೋದ್ಯೋಗಿಗಳಿಗಿಂತ ಹೆಚ್ಚಾಗಿ, ಕುಟುಂಬವಾಗಿದ್ದರು

ʻಎಐ 171ʼ ಸಿಬ್ಬಂದಿಯ ಅಮೂಲ್ಯ ನೆನಪುಗಳು

ಸಿಬ್ಬಂದಿಯ ಬಗ್ಗೆ ಆಡಿದ ಗೌರವಗಳು ನುಡಿಗಳು, ʻಎಐ 171’ ಸಿಬ್ಬಂದಿಯ ಆಳವಾದ ಸಮರ್ಪಣೆ ಮತ್ತು ಅನನ್ಯ ವ್ಯಕ್ತಿತ್ವಗಳನ್ನು ಬಹಿರಂಗಪಡಿಸಿದವು. ಶ್ರದ್ಧಾ ಧವನ್ ಅವರ ಮಂದಹಾಸ ಮತ್ತು ಅವರ ಅಚಲ ವೃತ್ತಿಪರತೆಯನ್ನು ಸ್ನೇಹಿತರು ನೆನಪಿಸಿಕೊಂಡರು; ವಿಮಾನದ ನಂತರ ಅವರು ಎಷ್ಟೇ ದಣಿದಿದ್ದರೂ, ಅವರು ಯಾವಾಗಲೂ ಮುಂದಿನ ದಿನಕ್ಕೆ ತಮ್ಮ ಸಮವಸ್ತ್ರವನ್ನು ನಿಖರ ವಾಗಿ ಇಸ್ತ್ರಿ ಮಾಡುತ್ತಿದ್ದರು, ಕರ್ತವ್ಯಕ್ಕೆ ಸಿದ್ಧರಾಗುತ್ತಿದ್ದರು ಎಂದು ಆಪ್ತರು ಸ್ಮರಿಸಿದರು.

Vishwavani Special: ವಾರಕ್ಕೆ ಮೂರು ದಿನ ಕಾವೇರಿ ಆರತಿ

ವಾರಕ್ಕೆ ಮೂರು ದಿನ ಕಾವೇರಿ ಆರತಿ

ಆಗಮ ಶಾಸ್ತ್ರದಲ್ಲಿ ಈಗಾಗಲೇ ಪರಣತಿ ಹೊಂದಿರುವವರನ್ನು ಆಯ್ಕೆ ಮಾಡಿ ಅವರಿಗೆ ತರಬೇತಿ ನೀಡುವ ಕಾರ್ಯವಾಗುತ್ತಿದೆ. ಸಂಸ್ಕೃತ ಪೀಠದಲ್ಲಿ ನೀಡುತ್ತಿರುವ ತರಬೇತಿ ಮೇಲ್ವಿಚಾರಣೆಯನ್ನು ಧಾರ್ಮಿಕ ದತ್ತಿ ಇಲಾಖೆ ಮಾಡುತ್ತಿದೆ ಎನ್ನಲಾಗಿದೆ. ಈಗಾಗಲೇ ಈ ಎರಡು ಕೇಂದ್ರದಲ್ಲಿ ಆರತಿಯ ಬಗ್ಗೆ ತರಬೇತಿ ನೀಡಲಾಗುತ್ತಿದೆ.

ಇಸ್ರೇಲ್ – ಇರಾನ್ ಸಂಘರ್ಷ : ಶಾಂತಿ ಸ್ಥಾಪನೆಯೊಂದೇ ನಮಗಿರುವ ಮಾರ್ಗ

ಇಸ್ರೇಲ್ – ಇರಾನ್ ಸಂಘರ್ಷ : ಶಾಂತಿ ಸ್ಥಾಪನೆಯೊಂದೇ ನಮಗಿರುವ ಮಾರ್ಗ

ಎರಡು ರಾಷ್ಟ್ರಗಳ ನಡುವಿನ ಸಂಘರ್ಷದಲ್ಲಿ ಅಮೆರಿಕ ಮೂಗು ತೂರಿಸಿರುವ ಬೆಳವಣಿಗೆಯ ನಡುವೆ ಯೂ ನಾನು ಕನಸು ಕಾಣಲು ಧೈರ್ಯ ಮಾಡುತ್ತೇನೆ. ಏಕೆಂದರೆ ಶಾಂತಿ ಭ್ರಮೆಯಲ್ಲ. ಆದರೆ ಒಂದು ಉದ್ದೇಶವಾಗಿರುವ ಪ್ರಪಂಚದ ಬಗ್ಗೆ ನಾನು ಕನಸು ಕಾಣುತ್ತೇನೆ. ಭರವಸೆ ಇರುವುದು ದ್ವೇಷದಲ್ಲಿ ಅಲ್ಲ. ಶಾಂತಿಯಲ್ಲಿ. ರಾಜತಾಂತ್ರಿಕತೆ ಎಂಬುದು ವಿನಾಶಕ್ಕಿಂತ ಬಲವಾಗಿರುತ್ತದೆ.

Jayashree Kalkundri Column: ಯೋಗಕ್ಕೀಗ ಸುಯೋಗ

ಯೋಗಕ್ಕೀಗ ಸುಯೋಗ

ವಿಶ್ವಸಂಸ್ಥೆಯು ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲು ಘೋಷಣೆ ಮಾಡಿದ ದಿನದಿಂದ ಭಾರತ ಮಾತ್ರವಲ್ಲ, ವಿಶ್ವದೆಡೆ ಯೋಗದ ಕಂಪು ಪಸರಿಸಿದೆ. ವಿಶ್ವದ ಪ್ರಮುಖ ನಗರಗಳಲ್ಲಿ ಯೋಗ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಇಷ್ಟು ಮಾತ್ರವಲ್ಲ, ಯೋಗದಿಂದ ಜನತೆಯನ್ನು ನಿರೋಗಿಗಳಾಗುವ ದಿಶೆಯಲ್ಲಿ, ಕೇಂದ್ರದ ಆಯುಷ್ ಮಂತ್ರಾಲಯವು ಕಾರ್ಯೋನ್ಮುಖ ವಾಗಿದೆ.

ಉಂಡೆ ಕೊಬ್ಬರಿಗೆ ಭರ್ಜರಿ ಬೆಲೆ

ಉಂಡೆ ಕೊಬ್ಬರಿಗೆ ಭರ್ಜರಿ ಬೆಲೆ

ಕಳೆದ ಎರಡು-ಮೂರು ವರ್ಷಗಳಿಂದಲೂ ಕುಸಿತ ಕಂಡಿದ್ದ ಉಂಡೆ ಕೊಬ್ಬರಿ ಕ್ವಿಂಟಾಲ್‌ಗೆ 8 ಸಾವಿರ ರೂ.ಗಳಿಗೆ ತಲುಪಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತ್ತು. ತದ ನಂತರ ೨೦೨೪ರ ಮಧ್ಯ ಭಾಗದಿಂದ ಸ್ವಲ್ಪ ಚೇತರಿಕೆ ಕಂಡಿದ್ದ ಕೊಬ್ಬರಿ ಬೆಲೆ ಕಳೆದ ಗುರುವಾರ ಕ್ವಿಂಟಾಲ್‌ಗೆ ೧೯,೫೬೬ ರೂ.ಗಳಿಗೆ ಟೆಂಡರ್ ಆಗುವ ಮೂಲಕ ತೆಂಗು ಬೆಳೆಗಾರರ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿದೆ.

'ಟೈಂ' ಚೆನ್ನಾಗಿದ್ದರೆ ಮುಳುಗಿದರೂ ಗೊತ್ತಾಗುತ್ತೆ ?

ಜಲಗಂಡಾಂತರಕ್ಕೆ ಶೀಘ್ರದಲ್ಲೇ ಮದ್ದು: ಜೀವ ರಕ್ಷಕ ಗಡಿಯಾರ

ಜಲಗಂಡಾಂತರಕ್ಕೆ ಸಿಕ್ಕಿ ಆಗುವ ಜೀವಹಾನಿಯನ್ನು ತಡೆಗಟ್ಟಲು ವಾರಾಣಸಿಯ ಬನಾರಸ್ ಹಿಂದು ವಿಶ್ವವಿದ್ಯಾಲಯ ಹೊಸ ಆವಿಷ್ಕಾರ ಮಾಡಿದೆ. ಕಂಪ್ಯೂಟರ್ ಸೈನ್ಸ್ ಮತ್ತು ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಪ್ರಸೆಂಜಿತ್ ಚಾಣಕ್ ನೇತೃತ್ವದ ತಂಡ ಎಐ ಆಧಾರಿತ ಪೋರ್ಟಬಲ್ ಮಾನಿಟರಿಂಗ್ ಸಾಧನವನ್ನು ಅಭಿವೃದ್ಧಿಪಡಿಸಿದೆ.

Narendra Parekat Column: ಬೈಕ್‌ ಆಟೋ ತಾಕಲಾಟ, ಪ್ರಯಾಣಿಕರಿಗೆ ಪೀಕಲಾಟ

ಬೈಕ್‌ ಆಟೋ ತಾಕಲಾಟ, ಪ್ರಯಾಣಿಕರಿಗೆ ಪೀಕಲಾಟ

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ನಿಷೇಧ ಸೋಮವಾರದಿಂದ ಅಧಿಕೃತವಾಗಿ ಜಾರಿಯಾಗಿದೆ. ಬೈಕ್ ಟ್ಯಾಕ್ಸಿ ಸೇವೆ ನೀಡಲು ಗೈಡ್ ಲೈನ್ಸ್ ಜಾರಿಯಾಗುವವರೆಗೂ ಸೇವೆಗಳನ್ನು ಸ್ಥಗಿತಗೊಳಿಸುವ ರಾಜ್ಯ ಸರಕಾರದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿದೆ. ಬೈಕ್ ಟ್ಯಾಕ್ಸಿ ಕಂಪನಿಗಳು ಕೋರಿದ್ದ ಆರು ವಾರಗಳ ಕಾಲಾವಕಾಶ ಭಾನುವಾರದಂದು ಮುಕ್ತಾಯಗೊಂಡಿದ್ದು, ಸೇವೆ ಮುಂದುವರಿಸುವ ಕುರಿತು ನ್ಯಾಯಾಲಯವು ಮಧ್ಯಂತರ ಅನುಮತಿಯನ್ನೂ ನಿರಾಕರಿಸಿದೆ.

ಬಡವರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುವುದೇ ಇಸ್ರೋ ವಿಜ್ಞಾನಿಯ ಸಮಾಜ ಸೇವೆ

ಉಚಿತ ಶಿಕ್ಷಣ ನೀಡುವುದೇ ಇಸ್ರೋ ವಿಜ್ಞಾನಿಯ ಸಮಾಜ ಸೇವೆ

ಸ್ಕೂಲ್‍ನಲ್ಲಿ ಎಲ್ಲಾ ಬಗೆಯ ಸೌಕರ್ಯಗಳಿದ್ದು ವಿಜ್ಞಾನ ಪ್ರಯೋಗಾ ಲಯಗಳು, ಗಣಿತ ಪ್ರಯೋಗಾಲಯ, ಗಣಕಯಂತ್ರ ವಿಭಾಗ, ಶ್ರವಣ, ದೃಶ್ಯ ವಿಭಾಗಗಳು ಸುಸಜ್ಜಿತ ವಾಗಿವೆ. ಪ್ರಾಜೆಕ್ಟ್ ಮಾಡಿಸುವುದು, ಪ್ರಾತ್ಯಕ್ಷಿಕೆ, ಸಂವಾದ, ಅಭಿನಯ ಹಾಗೂ ರಸಪ್ರಶ್ನೆಗಳಂತಹ ಚಟುವಟಿಕೆ ಕೊಟ್ಟು ಮಕ್ಕಳೆಲ್ಲ ಸ್ವಯಂ ಕ್ರಿಯಾಶೀಲರಾಗಲು ಪ್ರೆರೇಪಿಸುವ ವ್ಯವಸ್ಥೆ ಈ ಶಾಲೆ ಯಲ್ಲಿದೆ. ಮಕ್ಕಳನ್ನು ಆಟದಲ್ಲಿ ತೊಡಗಿಸಲು ವಿಶಾಲವಾದ ಮೈದಾನವಿದೆ

P M Narendraswamy Interview: ಮಾಲಿನ್ಯ ನಿಯಂತ್ರಣಕ್ಕೆ ಕಾನೂನಿಗಿಂತ ಜಾಗೃತಿ ಅಗತ್ಯ

ಮಾಲಿನ್ಯ ನಿಯಂತ್ರಣಕ್ಕೆ ಕಾನೂನಿಗಿಂತ ಜಾಗೃತಿ ಅಗತ್ಯ

ರಾಜ್ಯವನ್ನು ಕಾಡುತ್ತಿರುವ ವಿವಿಧ ಮಾದರಿಯ ಮಾಲಿನ್ಯ ನಿಯಂತ್ರಿಸಲು ಸರಕಾರ ಹತ್ತಾರು ಕಾನೂನು ತರಬಹುದು. ಆದರೆ ಈ ಎಲ್ಲ ಕಾನೂನು ಮೀರಿ, ಜನರಲ್ಲಿ ಮಾಲಿನ್ಯ ನಿಯಂತ್ರಿಸುವ ಅರಿವು ಮೂಡಿಸಿ ದಾಗ ಮಾತ್ರ ಮಾಲಿನ್ಯ ನಿಯಂತ್ರಿಸುವಲ್ಲಿ ಯಶಸ್ಸು ಸಾಧ್ಯ. ಆದ್ದರಿಂದ ಮುಂದಿನ ಮೂರು ತಿಂಗಳುಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

D K Shivakumar Column: ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ: ಮಾದರಿ ಆಡಳಿತದ ಮೇಲ್ಪಂಕ್ತಿ

ಮಹಿಳಾ ಸಬಲೀಕರಣಕ್ಕೆ ಹೊಸ ಶಕ್ತಿ: ಮಾದರಿ ಆಡಳಿತದ ಮೇಲ್ಪಂಕ್ತಿ

ಪ್ರತಿ ಸರಕಾರಗಳು ಮಹಿಳಾ ಸಬಲೀಕರಣಕ್ಕಾಗಿ ಯೋಜನೆಗಳನ್ನು ತರುತ್ತವೆ. ಒಂದೋ ಅವು ಬದ್ಧತೆ ಇಲ್ಲದೆ ಬಿದ್ದುಹೋಗುತ್ತವೆ. ಅಥವಾ ಸರಿಯಾದ ಅನುಷ್ಠಾನ ಇಲ್ಲದೆ ಮೂಲೆ ಸೇರುತ್ತವೆ. ಆದರೆ ಕಾಂಗ್ರೆಸ್ ಸರಕಾರ ತಂದ ಪಂಚ ಗ್ಯಾರಂಟಿಗಳಲ್ಲಿ ಪ್ರಮುಖವಾದ ಶಕ್ತಿ ಯೋಜನೆ ಇಂದಿಗೂ ಅತಿ ಜನಪ್ರಿಯ ಯೋಜನೆಯಾಗಿ ಸ್ಥಾಪನೆಯಾಗಿದೆ.

ನಾಗರೀಕ ವಿಮಾನಯಾನ ದುರಂತ ಸರಪಣಿ

ನಾಗರೀಕ ವಿಮಾನಯಾನ ದುರಂತ ಸರಪಣಿ

2020ರ ಆಗಸ್ಟ್ 7ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ಏರ್ ಇಂಡಿಯ ಎಕ್ಸ್‌ಪ್ರೆಸ್ 9-1344 ವಿಮಾನ ಅವಘಡಕ್ಕೀಡಾಗಿದ್ದರಿಂದ 21 ಜನರು ಸಾವಿಗೀಡಾದರು, 100 ಮಂದಿ ಗಾಯಗೊಂಡರು. ವಂದೇಭಾರತ್ ಮಿಷನ್‌ನಡಿ ದುಬೈಗೆ ತೆರಳಿ ಬಳಿಕ ವಾಪಸಾಗುತ್ತಿದ್ದ ಎಐ ಎಕ್ಸ್‌ ಪ್ರೆಸ್ ವಿಮಾನ ದಲ್ಲಿ ಪ್ರಯಾಣಿಕರು-ಸಿಬ್ಬಂದಿ ಸೇರಿದಂತೆ ಒಟ್ಟು 190 ಜನರಿದ್ದರು.

Yagati Raghu Naadig : ನೋಡಿಲ್ಲಿ ಕೊಂಚ..ಇದೇ ನೋಡು ಪ್ರವಾಸಿ ಪ್ರಪಂಚ

ಇದು ಕಾಲಿಗೆ ಚಕ್ರ ಕಟ್ಟಿಕೊಂಡಿರುವವರ ಭಗವದ್ಗೀತೆ

ಇದು ಒಬ್ಬಿಬ್ಬರ ಮಾತಲ್ಲ, ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಕೂತ ಕಡೆ ಕೂರದೆ, ನಿಂತ ಕಡೆ ನಿಲ್ಲದೆ, ಗೋಲಿ ಗಾತ್ರದ ಕಂಗಳಲ್ಲಿ ಜಗವನ್ನೇ ತುಂಬಿಕೊಂಡು ಬೆರಗಾಗಲು ಹಾತೊರೆಯುವವರ ನಿತ್ಯ ಸ್ಲೋಗನ್ನು. ಇಂಥ ‘ಪರ್ಯಟನಾ-ಪ್ರಿಯ’ ಪಂಟರುಗಳ ತವಕ, ಕುತೂಹಲ, ಆಸಕ್ತಿಗಳನ್ನು ತಣಿಸಲೆಂದೇ ಇತ್ತೀಚೆಗೆ ಬಿಡುಗಡೆಯಾಗಿದೆ ‘ಪ್ರವಾಸಿ ಪ್ರಪಂಚ’ ವಾರ ಪತ್ರಿಕೆ. ಇದು ‘ವಿಶ್ವವಾಣಿ’ ಪತ್ರಿಕಾ ಬಳಗದ ಮತ್ತೊಂದು ಸಾಹಸ ಎಂಬುದು ನಿಮ್ಮ ಗಮನಕ್ಕೆ.

Loading...