ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಾಲಕ-ನಿರ್ವಾಹಕರು ಎಲ್ಲದಕ್ಕೂ ಹೊಣೆಯಲ್ಲ

ಟಿಕೆಟ್ ಕೊಡುವ/ಪಡೆಯುವ ಪ್ರಕ್ರಿಯೆ ತಡವಾದಲ್ಲಿ, ಮುಂದಿನ ಸ್ಟೇಜ್‌ನಲ್ಲಿ ಚೆಕಿಂಗ್ ಸ್ಕ್ವಾಡ್ ಬಂದಾಗ, ನಿರ್ವಾಹಕರು ಮೆಮೋ ಪಡೆಯಬೇಕಾಗುತ್ತದೆ ಅಥವಾ ದಂಡವನ್ನು ಪೀಕಬೇಕಾಗುತ್ತದೆ. ಇದನ್ನು ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ, ಟಿಕೆಟ್ ಪಡೆದ ಉದ್ದೇಶಿತ ನಿಲ್ದಾಣಗಳಲ್ಲಿ ಇಳಿಯದೇ, ತಮ್ಮ ಅನುಕೂಲಕ್ಕೆ ಇನ್ನೆಲ್ಲೋ ಇಳಿಯುತ್ತಾರೆ. ಕೇಳಿದರೆ, ‘ಫ್ರೀ ತಾನೇ? ನಿಮಗೇನು ಕಷ್ಟ? ನಾವು ಎಲ್ಲಾದರೂ ಇಳಿಯಬಹುದು’ ಎಂಬ ಉಡಾಫೆಯ ಉತ್ತರ ಬರುತ್ತದೆ. ಅವರಿಗೆ ಅರ್ಥಮಾಡಿಸಲು ನಿರ್ವಾಹಕರು ಹೆಣಗುತ್ತಿರುತ್ತಾರೆ.

ಚಾಲಕ-ನಿರ್ವಾಹಕರು ಎಲ್ಲದಕ್ಕೂ ಹೊಣೆಯಲ್ಲ

-

Ashok Nayak Ashok Nayak Sep 6, 2025 11:27 AM

ಪ್ರತಿಸ್ಪಂದನ

ಸುಜಯ ಆರ್‌.ಕಣ್ಣೂರ್

ಬಿಎಂಟಿಸಿ ವಿರುದ್ಧ 10 ಸಾವಿರ ದೂರು’ ಮುಖಪುಟ ವರದಿಯನ್ನು (ಸೆ.5) ಓದಿದ ನಂತರ, ಒಂದಷ್ಟು ಕಹಿವಾಸ್ತವವನ್ನು ತಿಳಿಸುವ ಸಲುವಾಗಿ ಈ ಬರಹ. ನಾನು ಬಿಂಎಂಟಿಸಿ ಬಸ್‌ನಲ್ಲಿ 35 ವರ್ಷಗಳಿಂದ ಪ್ರಯಾಣಿಸುತ್ತಿದ್ದೇನೆ. ಇದರಲ್ಲಿ ಯಾರದು ತಪ್ಪು, ಯಾರದು ಸರಿ ಎಂಬುದನ್ನು ಖಚಿತವಾಗಿ ವಿಶ್ಲೇಷಿಸುವಷ್ಟು ವಿಷಯಗಳು ನನ್ನಲ್ಲಿವೆ.

ಈಗ ಹೆಣ್ಣು ಮಕ್ಕಳಿಗೆ ಉಚಿತ ಪ್ರಯಾಣದ ಸೌಲಭ್ಯ ಇರುವುದರಿಂದ ಬಸ್ಸುಗಳಲ್ಲಿ ಅವರ ಸಂಖ್ಯೆ ವಿಪರೀತ ಹೆಚ್ಚಾಗಿದೆ. ಇದರಿಂದಾಗಿ ನಿರ್ವಾಹಕರಿಗೆ ‘ಶೂನ್ಯ ಟಿಕೆಟ್’ ಕೊಡಲು ಸಮಯ ಸಾಲು ತ್ತಿಲ್ಲ. ಅಷ್ಟರಲ್ಲಿ ಇನ್ನೊಂದು ಸ್ಟೇಜ್ ಬಂದು ಬಿಡುತ್ತದೆ. ಕೆಲ ಹೆಣ್ಣು ಮಕ್ಕಳೂ ಆಧಾರ್‌ ಕಾರ್ಡ್ ಅಥವಾ ಮತದಾರರ ಚೀಟಿ ತೋರಿಸುವ ತಮ್ಮ ಹೊಣೆಗಾರಿಕೆಯ ನಿರ್ವಹಣೆಯನ್ನು ನಿರ್ಲಕ್ಷ್ಯ ಮಾಡುತ್ತಾರೆ, ಕೆಲವೊಮ್ಮೆ ಮೊಬೈಲ್‌ನಲ್ಲೇ ಮುಳುಗಿರುತ್ತಾರೆ.

ಟಿಕೆಟ್ ಕೊಡುವ/ಪಡೆಯುವ ಪ್ರಕ್ರಿಯೆ ತಡವಾದಲ್ಲಿ, ಮುಂದಿನ ಸ್ಟೇಜ್‌ನಲ್ಲಿ ಚೆಕಿಂಗ್ ಸ್ಕ್ವಾಡ್ ಬಂದಾಗ, ನಿರ್ವಾಹಕರು ಮೆಮೋ ಪಡೆಯಬೇಕಾಗುತ್ತದೆ ಅಥವಾ ದಂಡವನ್ನು ಪೀಕಬೇಕಾಗುತ್ತದೆ. ಇದನ್ನು ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ, ಟಿಕೆಟ್ ಪಡೆದ ಉದ್ದೇಶಿತ ನಿಲ್ದಾಣಗಳಲ್ಲಿ ಇಳಿಯದೇ, ತಮ್ಮ ಅನುಕೂಲಕ್ಕೆ ಇನ್ನೆಲ್ಲೋ ಇಳಿಯುತ್ತಾರೆ. ಕೇಳಿದರೆ, ‘ಫ್ರೀ ತಾನೇ? ನಿಮಗೇನು ಕಷ್ಟ? ನಾವು ಎಲ್ಲಾದರೂ ಇಳಿಯಬಹುದು’ ಎಂಬ ಉಡಾಫೆಯ ಉತ್ತರ ಬರುತ್ತದೆ. ಅವರಿಗೆ ಅರ್ಥಮಾಡಿಸಲು ನಿರ್ವಾಹಕರು ಹೆಣಗುತ್ತಿರುತ್ತಾರೆ. ಇದನ್ನು ಚೆಕಿಂಗ್ ಅಧಿಕಾರಿಗಳೂ ಅರ್ಥಮಾಡಿಕೊಳ್ಳಬೇಕು, ಪ್ರತಿಬಾರಿಯೂ ನಿರ್ವಾಹಕರದ್ದೇ ತಪ್ಪಿರುವು ದಿಲ್ಲ. ‘ಶಕ್ತಿ’ ಯೋಜನೆಯಿಂದಾಗಿ ಬಸಿ ಬಸ್ಸಿನಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಹೆಚ್ಚಾಗಿ, ಎಲ್ಲಾ ಆಸನ ಗಳನ್ನೂ ಆಕ್ರಮಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Mohan Vishwa Column: ಭಾರತದ ಸದೃಢ ಆರ್ಥಿಕತೆಯ ಮುನ್ನೋಟ

ಇದರಿಂದಾಗಿ ಗಂಡಸರು ನಿಂತು ಪಯಣಿಸುವಂತಾಗಿದೆ ಹಾಗೂ ಬಸ್ಸುಗಳಲ್ಲಿ ಜಗಳ ಹೆಚ್ಚಾಗಿದೆ. ಇದನ್ನು ಸುಧಾರಿಸುವ ಹೊಣೆಯೂ ನಿರ್ವಾಹಕರ ಮೇಲೆಯೇ. ಎಷ್ಟೋ ಕಡೆ ಬಹಳ ಹಳೆಯ ಬಸ್ ಗಳಿವೆ, ಅದರಲ್ಲಿನ ಸಮಸ್ಯೆಗಳನ್ನೆಲ್ಲಾ ಸುಧಾರಿಸಿಕೊಂಡು ಚಾಲಕರು ಕಾರ್ಯನಿರ್ವಹಿಸುತ್ತಾರೆ. ಸಂಚಾರ ದಟ್ಟಣೆಯಿಂದಾಗಿ ಎಷ್ಟೋ ಬಾರಿ ಚಾಲಕ-ನಿರ್ವಾಹಕರಿಗೆ ಸಮಯಕ್ಕೆ ಸರಿಯಾಗಿ ಊಟ ಮಾಡಲೂ ಆಗುವುದಿಲ್ಲ.

ಏಕೆಂದರೆ, ಸಕಾಲಕ್ಕೆ ನಿರ್ದಿಷ್ಟ ನಿಲ್ದಾಣ ವನ್ನು ತಲುಪದಿದ್ದರೆ ಅದಕ್ಕೂ ಪ್ರಯಾಣಿಕರು ದೂರು ಕೊಡುತ್ತಾರಲ್ಲಾ! ಹೀಗೆ ಚಾಲಕರು-ನಿರ್ವಾಹಕರ ಕಷ್ಟಗಳನ್ನೂ ನಾವು ಅರ್ಥಮಾಡಿಕೊಳ್ಳಬೇಕು. ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು, ಅದನ್ನು ತಪ್ಪಿಸಲು ಇದ್ದಕ್ಕಿದ್ದಂತೆ ಪಕ್ಕಕ್ಕೆ ಸರಿಯುತ್ತಾರೆ. ಆಗ ಹಿಂದೆ ಬರುತ್ತಿರುವ ಬಸ್ಸುಗಳ ಚಾಲಕರಿಗೆ ಕಂಟ್ರೋಲ್ ಮಾಡುವುದು ಕಷ್ಟವಾಗುತ್ತದೆ, ಅಪಘಾತಗಳಾಗುತ್ತವೆ.

ಹೀಗಾಗಿ ಮೊದಲು ರಸ್ತೆಗಳು ಸರಿಯಾಗಬೇಕು. ಇನ್ನು, ರಾತ್ರಿ ವೇಳೆ ಬಸ್ಸುಗಳಲ್ಲಿ ಮಲಗುವ ಚಾಲಕ-ನಿರ್ವಾಹಕರಿಗೆ ಸರಿಯಾದ ವ್ಯವಸ್ಥೆಯಾಗಲೀ ಭದ್ರತೆಯಾಗಲೀ ಇರುವುದಿಲ್ಲ. ತಮಗಿರುವ ಕೆಲಸದ ಒತ್ತಡ ದಿಂದಾಗಿ ಇಂಥ ಎಷ್ಟೋ ಸಿಬ್ಬಂದಿ ಆರೋಗ್ಯ ಸಮಸ್ಯೆಗಳಿಗೆ ಬಲಿಯಾಗಿದ್ದಾರೆ. ಕೆಲವು ಸೂಕ್ಷ್ಮ ವಿಷಯಗಳು ಎಲ್ಲರಿಗೂ ಅರ್ಥವಾಗುವುದಿಲ್ಲ. ಹೀಗಾಗಿ, ಯಾರೇ ಆಗಲಿ ಸಾರಿಗೆ ಸಿಬ್ಬಂದಿಯ ಮೇಲೆ ದೂರು ನೀಡುವ ಮೊದಲು ಸ್ವಲ್ಪ ಯೋಚಿಸಬೇಕು. ಕೈಯಲ್ಲಿ ಮೊಬೈಲಿದೆ, ನಂಬರ್ ಸಿಗುತ್ತದೆ ಎಂಬ ಘಮಂಡಿತನದಲ್ಲಿ ದೂರು ನೀಡುವುದು ತರವೇ? ಮೇಲೆ ಉಲ್ಲೇಖಿಸಿದ ವ್ಯವಸ್ಥೆ ಗಳು ಮೊದಲು ಸರಿಯಾಗಬೇಕು. ಯಾರೇ ದೂರು ನೀಡಿದರೂ, ಅಧಿಕಾರಿಗಳು ಅದನ್ನು ಸರಿಯಾದ ರೀತಿಯಲ್ಲಿ ವಿವೇಚಿಸಿ, ತನಿಖೆ ಮಾಡಿ ಯಥೋಚಿತ ಕ್ರಮ ಕೈಗೊಳ್ಳಬೇಕೇ ಹೊರತು, ಎಲ್ಲಾ ದೂರು ಗಳಿಗೂ ಚಾಲಕ- ನಿರ್ವಾಹಕರನ್ನು ಹೊಣೆ ಮಾಡುವುದು ಸರಿಯಲ್ಲ.

(ಲೇಖಕಿ ಹವ್ಯಾಸಿ ಬರಹಗಾರ್ತಿ)