ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

Ashok Nayak

Senior Sub Editor

ashoknayak@vishwavani.news

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
ನಿರಾಗ್‌ ಫುಡ್ಸ್‌ ಬೆಳೆದು ಬಂದ ದಾರಿ ಗೊತ್ತೆ? ಇಲ್ಲಿದೆ ಸಂಸ್ಥಾಪಕರ ಆಸಕ್ತಿದಾಯಕ ವಿವರ

ನಿರಾಗ್‌ ಫುಡ್ಸ್‌ ಬೆಳೆದು ಬಂದ ದಾರಿ ಗೊತ್ತೆ? ಇಲ್ಲಿದೆ ವಿವರ

ಕಾರ್ಪೊರೇಟ್ ಜಗತ್ತಿನಲ್ಲಿ ಹಲವಾರು ವರ್ಷಗಳನ್ನು ಕಳೆದ ನಂತರ, ನಾನು ಹೆಚ್ಚು ವೈಯಕ್ತಿಕ ಮತ್ತು ಅರ್ಥಪೂರ್ಣವಾದದ್ದನ್ನು ಮಾಡಲು ಬಯಸುವ ಹಂತವನ್ನು ತಲುಪಿದೆ. ಬೆಳೆದ ನಂತರ, ಆಹಾರವು ಯಾವಾಗಲೂ ನನ್ನ ಜೀವನದಲ್ಲಿ ಕೇಂದ್ರವಾಗಿತ್ತು, ವಿಶೇಷವಾಗಿ ನನ್ನ ಅಜ್ಜಿಯ ಅಡುಗೆಮನೆಯಲ್ಲಿ ಬೇಯಿಸಿದ ಸರಳ, ಆರೋಗ್ಯಕರ ಆಹಾರ. ಆ ಸುವಾಸನೆ, ಮತ್ತು ಎಲ್ಲವನ್ನೂ ತಯಾರಿಸುವ ಕಾಳಜಿ ನನ್ನೊಂದಿಗೆ ಉಳಿದುಕೊಂಡಿತು.

Karnataka Madara Mahasabha: ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಕೊತ್ತನೂರು ಮುನಿಯಪ್ಪ ನೇಮಕ : ಪಟ್ರೇನಹಳ್ಳಿ ಕೃಷ್ಣಪ್ಪ ಹೇಳಿಕೆ

ಕರ್ನಾಟಕ ಮಾದರ ಮಹಾಸಭಾ ತಾಲೂಕು ಅಧ್ಯಕ್ಷರಾಗಿ ಕೊತ್ತನೂರು ಮುನಿಯಪ್ಪ ನೇಮಕ

ಕರ್ನಾಟಕ ಮಾದಾರ ಮಹಾಸಭಾದ ತಾಲೂಕು ಅಧ್ಯಕ್ಷರಾಗಿ ಕೊತ್ತನೂರು ಮುನಿಯಪ್ಪ ಅವರನ್ನು ನೇಮಕ ಮಾಡಲಾಗಿದೆ ಎಂದು ಜಿಲ್ಲಾಧ್ಯಕ್ಷ ಪಟ್ರೇನಹಳ್ಳಿ ಕೃಷ್ಣಪ್ಪ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯಲ್ಲಿ ಕರ್ನಾಟಕ ಮಾದರ ಮಹಾಸಭಾದ ತಾಲೂಕು ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆಗೊಳಿಸಿ ಮಾತನಾಡಿದರು

Chikkaballapur News: ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದಾಗಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ : ಟಿ.ಜಿ.ಶಿವಶಂಕರೇಗೌಡ

ಹೆಣ್ಣು ಮಕ್ಕಳಿಗೆ ಅವಕಾಶ ನೀಡಿದಾಗಲೇ ಮುಖ್ಯವಾಹಿನಿಗೆ ಬರಲು ಸಾಧ್ಯ

ಹೆಣ್ಣು ಮಕ್ಕಳಿಗೆ ಅವಕಾಶಗಳನ್ನು ನೀಡಿದಾಗ ಅವರು ಸಮಾಜದ ಮುಖ್ಯ ವಾಹಿನಿಗೆ ಬರಲು ಸಾಧ್ಯ ವಾಗಲಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಮತ್ತು ಸ್ನಾತಕೋತ್ತರ ಪದವಿ, ಸಿಇಟಿ ಸೇರಿದಂತೆ ವಿವಿಧ ಹಂತದ ಕೋರ್ಸುಗಳಲ್ಲಿ ಹೆಣ್ಣುಮಕ್ಕಳೇ ಮೊದಲ ರ‍್ಯಾಂಕ್‌ಗಳನ್ನು ಪಡೆಯು ತ್ತಿರುವುದು ಒಳ್ಳೆಯ ಬೆಳವಣಿಗೆ

Chimul Election: ಚಿಮುಲ್ ಚುನಾವಣೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ, ಭರಣಿ ವೆಂಕಟೇಶ್ ಅವರ ಖಾಲಿ ಡಬ್ಬಾ ಹೇಳಿಕೆಗೆ ತೀವ್ರ ಖಂಡನೆ: ಕ್ಷಮೆ ಕೋರಲು ಆಗ್ರಹ

ಚಿಮುಲ್ ಚುನಾವಣೆ: ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಆಕ್ರೋಶ

ಚುನಾವಣೆಯಲ್ಲಿ ನನ್ನ ಸೋಲಿಗೆ ನಾನೇ ಕಾರಣ. ಚುನಾವಣಾ ಪೂರ್ವ ತಯಾರಿಗೆ ಸಮಯದ ಅಭಾವ ವಿತ್ತು. ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಇದು ನನ್ನ ಮೊದಲ ಅನುಭವ. ಗೋಪಾಲಕರ ಸೇವೆ ಮಾಡುವ ಉದ್ದೇಶದಿಂದ ಸ್ಪರ್ಧಿಸಿ ಆತುರದ ನಿರ್ಧಾರದ ಕಾರಣ ಸೋಲು ಕಂಡೆ. ಇನ್ನೂ ಗೆದ್ದ ಸಂತೋಷದಲ್ಲಿ ಭರಣಿ ವೆಂಕಟೇಶ್ ಅವರು ನನ್ನ ಹಿಂದೆ ಇದ್ದವರು ಖಾಲಿ ಡಬ್ಬಾಗಳು ಎಂದು ಹೇಳಿರುವುದು ಘನತೆಗೆ ತಕ್ಕದಲ್ಲ.ನಾವು ಖಾಲಿ ಡಬ್ಬಾಗಳೆ ಆಗಿರಲಿ.

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ವ್ಯಾಪಾರ ದಲ್ಲಿ ಸ್ಥಿರತೆ ತರಲು ಒಂದು ಹೊಸ ವ್ಯವಸ್ಥೆಯ ಅಗತ್ಯವಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್‌ರ ದೂರದೃಷ್ಟಿಯ ಫಲವಾಗಿ, ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಹಳಿಗೆ ತರಲು ಚಾಣಾಕ್ಷ ಹೆಜ್ಜೆಯೊಂದನ್ನು ಇಡಲಾಯಿತು. 1944ರ ಜುಲೈ 22ರಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಬ್ರೆಟನ್‌ವುಡ್ಸ್‌ನಲ್ಲಿ ವಿಶ್ವದ 44 ರಾಷ್ಟ್ರ ಗಳ ಪ್ರತಿನಿಧಿಗಳನ್ನು ಸೇರಿಸಿ, ಅಲ್ಲಿಯವರೆಗೆ ಆಳಿದ್ದ ಬ್ರಿಟಷ್ ಪೌಂಡ್‌ನ ಬದಲು ಡಾಲರನ್ನು ವ್ಯಾಪಾರದ ವಿನಿಮಯ ಜಗತ್ತಿನ ಅಧಿಪತ್ಯಕ್ಕೆ ಏರಿಸಲಾಯಿತು. ಇದೇ ‘ಬ್ರೆಟನ್‌ವುಡ್ಸ್ ಒಪ್ಪಂದ’.

Vishwavani Editorial: ಪುಸ್ತಕಗಳ ಓದು ಹೆಚ್ಚಾಗಲಿ

Vishwavani Editorial: ಪುಸ್ತಕಗಳ ಓದು ಹೆಚ್ಚಾಗಲಿ

ಇದೂ ಒಪ್ಪುವಂಥ ಮಾತೇ. ಆದರೆ ಪುಸ್ತಕವೊಂದನ್ನು ಕೈಯಲ್ಲಿ ಹಿಡಿದು, ಅದರ ಸಾಲುಗಳಿಗೆ ಪ್ರತ್ಯಕ್ಷ ಒಡ್ಡಿಕೊಂಡು, ಅಕ್ಷರದ ರಸಾಸ್ವಾದನೆಯನ್ನು ಮಾಡುವುದಿದೆಯಲ್ಲಾ, ಅದು ಪ್ರಾಯಶಃ ಡಿಜಿಟಲ್ ಸ್ವರೂಪದಲ್ಲಿ ದಕ್ಕುವುದಿಲ್ಲ. ಜತೆಗೆ, ಪುಸ್ತಕದ ಆ ಸಾಲುಗಳಲ್ಲಿರುವ ಭಾವನೆಗೆ ನಮ್ಮ ಮನವನ್ನು ಸರಿ ಹೊಂದಿಸಿಕೊಳ್ಳುತ್ತಾ ಸ್ವೀಕರಿಸುತ್ತಾ ಹೋದಂತೆ, ನಮಗೇ ಅರಿವಿಲ್ಲದಂತೆ ನಮ್ಮ ಕಲ್ಪನಾಶಕ್ತಿಯೂ ಗಣನೀಯವಾಗಿ ಗಾಢವಾಗುವುದಿದೆ.

G Prathap Kodancha Column: ಮುಕ್ತ ವ್ಯಾಪಾರ ಒಪ್ಪಂದದ ಸುತ್ತಮುತ್ತ

G Prathap Kodancha Column: ಮುಕ್ತ ವ್ಯಾಪಾರ ಒಪ್ಪಂದದ ಸುತ್ತಮುತ್ತ

ಆಂಟೋನಿಯೋ ಕೋಸ್ಟಾ ಅವರಂತೂ, ಮಾತಿನ ನಡುವೆ ಕೋಟಿನ ಒಳಜೇಬಿನಿಂದ ತಮ್ಮ OCI (ಓವರ್‌ಸೀಸ್ ಸಿಟಿಜನ್ ಆಫ್ ಇಂಡಿಯಾ) ಕಾರ್ಡ್ ತೋರಿಸಿ, ‘ನಾನು ನಿಮ್ಮವನು, ನಿಮ್ಮ ಮನೆ ಮಗನು!’ ಎಂದಿದ್ದು ಮನಮುಟ್ಟುವಂತಿತ್ತು. ಭಾರತ ಮತ್ತು ಐರೋಪ್ಯ ಒಕ್ಕೂಟ ಮಾಡಿ‌ ಕೊಂಡ ವಾಣಿಜ್ಯ-ವ್ಯವಹಾರಗಳ ಒಪ್ಪಂದಕ್ಕೆ ಉರ್ಸುಲಾ ಲೆಯೆನ್ ಅವರು ‘ಮದರ್ ಆಫ್ ಆಲ್ ಡೀಲ್ಸ್’ ಎಂಬ ಹಣೆಪಟ್ಟಿ ಲಗತ್ತಿಸಿದ್ದು ಭಾರತೀಯರನ್ನು ಹಿರಿಹಿರಿ ಹಿಗ್ಗಿಸಿದೆ.

Prakash Shesharaghavachar Column: ಯುಜಿಸಿ ಮಾಡಿರುವ ಎಡವಟ್ಟು

Prakash Shesharaghavachar Column: ಯುಜಿಸಿ ಮಾಡಿರುವ ಎಡವಟ್ಟು

ಕಾಲೇಜುಗಳ ಆಡಳಿತ ಮಂಡಳಿಯು ಪ್ರವೇಶ ಪ್ರಕ್ರಿಯೆ, ಮೌಲ್ಯಮಾಪನ, ಹಾಸ್ಟೆಲ್ ಹಂಚಿಕೆ ಮತ್ತು ಸ್ಕಾಲರ್‌ಶಿಪ್ ನೀಡುವಲ್ಲಿ ಯಾವುದೇ ತಾರತಮ್ಯವನ್ನು ಮಾಡುವಂತಿರುವುದಿಲ್ಲ; ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯೂ ತನ್ನ ಆವರಣದಲ್ಲಿ ‘ಸಮಾನ ಅವಕಾಶಗಳ ಕೇಂದ್ರ’ವನ್ನು ಸ್ಥಾಪಿಸುವುದು ಕಡ್ಡಾಯವಾಗಿರುತ್ತದೆ. ಈ ಕೇಂದ್ರವು ಹಿಂದುಳಿದ ವರ್ಗಗಳ ಮತ್ತು ಅಂಗವಿಕಲ ವಿದ್ಯಾರ್ಥಿಗಳ ಹಿತರಕ್ಷಣೆಯ, ಅವರಿಗೆ ಶೈಕ್ಷಣಿಕ ಮತ್ತು ಆರ್ಥಿಕ ಮಾರ್ಗದರ್ಶನ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತದೆ.

ಬಂಗಾರಕ್ಕಾಗಿ ಹೆಲಿಕಾಪ್ಟರ್ ಸರ್ವೆ: ಗುಡಿಬಂಡೆ ಸುತ್ತಮುತ್ತ ಜಮೀನು ದರ ಏರಿಕೆ ನಿರೀಕ್ಷೆ.

ಬಂಗಾರಕ್ಕಾಗಿ ಹೆಲಿಕಾಪ್ಟರ್ ಸರ್ವೆ

ಕರ್ನಾಟಕದಲ್ಲಿ ಒಂದು ಕಾಲಕ್ಕೆ ಕೋಲಾರದ ಚಿನ್ನದ ಗಣಿ ಖ್ಯಾತಿ ಪಡೆದಿತ್ತು. ನಂತರ ಈ ಸಾಲಿಗೆ ಹಟ್ಟಿ ಚಿನ್ನದ ಗಣಿ ಸೇರ್ಪಡೆಯಾಗಿ ನಿನ್ನೆ ಮೊನ್ನೆಯವರೆಗ ಚಿನ್ನವನ್ನು ಇಲ್ಲಿಂದ ಪಡೆಯಲಾಗುತ್ತಿತ್ತು. ಆದರೆ ಸುಮಾರು ಒಂದುವರೆ ದಶಕಗಳ ಹಿಂದಯೇ ಕೋಲಾರದ ಚಿನ್ನದ ಗಣಿ ಮುಚ್ಚಲ್ಪಟ್ಟಿದ್ದು ಪ್ರಸ್ತುತ ಚಿನ್ನದ ದರ ದಿನೇ ದಿನೇ ಏರಿಕೆಯಾಗುತ್ತಿರುವುದರಿಂದ ಕೆ.ಜಿ.ಎಫ್ ಗಣಿಯನ್ನು ಪುನಾರಂಭ ಮಾಡಲು ಕೇಂದ್ರ ಸರ್ಕಾರ ಮರು ಚಿಂತನೆ ನಡೆಸುತ್ತಿರುವ ಹೊತ್ತಿನಲ್ಲಿ ಯೇ, ಮತ್ತೊಂದು ಚಿನ್ನದ ನಿಕ್ಷೇಪ ಗುಡಿಬಂಡೆಯ  ಸಮೀಪ ಇರುವ ಬಗ್ಗೆ ಸೆರ್ವೆ ಕಾರ್ಯದಲ್ಲಿ ಬೆಳಕಿಗೆ ಬಂದಿದೆ

Chikkaballapur News: ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ನಂದಿಗಿರಿ ಪ್ರದಕ್ಷಿಣೆ : ಭಕ್ತಿಭಾವದಿಂದ ಪಾಲ್ಗೊಂಡ ಸಾವಿರಾರು ಭಕ್ತರು

ಸಂಸದ ಡಾ.ಕೆ.ಸುಧಾಕರ್ ನೇತೃತ್ವದಲ್ಲಿ ನಡೆದ ನಂದಿಗಿರಿ ಪ್ರದಕ್ಷಿಣೆ

ಗಿರಿ ಪ್ರದಕ್ಷಿಣೆಗೆ ಜಿಲ್ಲೆಯ ಭಜನಾ ತಂಡಗಳೊಟ್ಟಿಗೆ ಬೆಂಗಳೂರು ಗ್ರಾಮಾಂತರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಘಟನೆಗಳು ಕೂಡ ಸಕ್ರಿಯವಾಗಿ ಭಾಗವಹಿಸಿದ್ದವು. 14 ಕಿ.ಮೀ. ಸುತ್ತಳತೆಯ ಪಾದ ಯಾತ್ರೆಯು 5 ಗಂಟೆಗೆ ಭೋಗನಂದೀಶ್ವರ ದೇವಾಲಯದಿಂದ ಪ್ರಾರಂಭವಾಗಿ ರಾತ್ರಿ 9.30ಕ್ಕೆ ಮುಕ್ತಾಯ ವಾಯಿತು. ನಂದಿ ಗಿರಿಧಾಮ ಸುತ್ತ ನಡೆದ ಪ್ರದಕ್ಷಿಣೆಯಲ್ಲಿ ಸಾವಿರಾರು ಭಕ್ತರು, ಮುಖಂಡರು ಭೋಗ ನಂದೀಶ್ವರ ಸ್ವಾಮಿಯ ಆರಾಧನೆಯೊಂದಿಗೆ ಗಿರಿಧಾಮಕ್ಕೆ ಪ್ರದಕ್ಷಿಣೆ ಬಂದರು.

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಬೇಡಿ: ಡಿ ವೈ ಎಸ್ ಪಿ ಮುರುಳಿಧರ್

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸಬೇಡಿ: ಡಿ ವೈ ಎಸ್ ಪಿ ಮುರುಳಿಧರ್

ಚಿಂತಾಮಣಿ ನಗರ ಭಾಗದಲ್ಲಿರುವ ಟ್ರಾಫಿಕ್ ಸಿಗ್ನಲ್ಸ್ ಅನ್ನು ಬಹಳಷ್ಟು ಮಂದಿ ಪಾಲನೆ ಮಾಡುತ್ತಿಲ್ಲ ಜೀಬ್ರಾ ಕ್ರಾಸಿಂಗ್ ಬಿಟ್ಟು ಮುಂದೆ ವಾಹನಗಳನ್ನು ನಿಲ್ಲಿಸುತ್ತಾರೆ, ಪೊಲೀಸರು ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತಿದ್ದಾರೆ ಮಾತ್ರ ಕಾನೂನನ್ನು ಪಾಲನೆ ಮಾಡುತ್ತಾರೆ,ಪೊಲೀಸರ ಭಯ ಬಿಟ್ಟು ತಾವು ಖುದ್ದಾಗಿ ಕಾನೂನನ್ನು ಪಾಲನೆ ಮಾಡಬೇಕಾಗಿದೆ

Veteran actor Ramakrishna: ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಸಾಹಿತಿ ಮತ್ತು ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ: ಹಿರಿಯ ನಟ ರಾಮಕೃಷ್ಣ ಬೇಸರ

ಚಿತ್ರರಂಗದಲ್ಲಿ ಸಾಹಿತಿ, ಸಾಹಿತ್ಯವನ್ನು ಕಡೆಗಣಿಸುತ್ತಿರುವುದು ಸರಿಯಲ್ಲ

ನಾನು ಸಾಹಿತ್ಯವನ್ನಾಗಲಿ ಪುಸ್ತಕಗಳನ್ನಾಗಲಿ ಅರೆದು ಕುಡಿದವನಲ್ಲ. 40 ವರ್ಷಗಳ ವೃತ್ತಿ ಜೀವನದಲ್ಲಿ ಸಿಕ್ಕಿರುವ ಅತ್ಯುತ್ತಮ ಬರಹಗಾರರಾದ ಕೆಲವರಿಂದ ಅದು ತರಾಸು ಅವರಿಂದ ತ್ರಿವೇಣಿ ಆಗಿರಬಹುದು ಅನಕೃ ಅವರಿಂದ ಬೀಚಿಯವರಾಗಿರಬಹುದು. ಇವರೆಲ್ಲರಿಂದ ಎರಕ ಹೊಯ್ದಂತಿದ್ದ ಪುಟ್ಟಣ್ಣ ಕಣಗಾಲ್ ಇರಬಹುದು.ಇವರ ಬಳಿ ಸಂಭಾಷಣೆಯನ್ನು ಒಪ್ಪಿಸಿ, ಒಪ್ಪಿಸಿ ಕೆನ್ನೆಗೆ ಏಟು ತಿಂದು ಇಷ್ಟರ ಮಟ್ಟಿಗಿನ ಭಾಷಾ ಶುದ್ಧತೆ ನಮಗೆ ಬಂದಿದೆ

ಎದೆಯೊಳಗೆ ಹೊಕ್ಕ ಕಬ್ಬಿಣದ ರಾಡ್‌ - 11 ವರ್ಷದ ಬಾಲಕಿಯ ಪ್ರಾಣ ರಕ್ಷಿಸಿದ ಕೆಎಂಸಿ ಆಸ್ಪತ್ರೆ

ಎದೆಯೊಳಗೆ ಹೊಕ್ಕ ಕಬ್ಬಿಣದ ರಾಡ್‌ - 11 ವರ್ಷದ ಬಾಲಕಿಯ ಪ್ರಾಣ ರಕ್ಷಣೆ

ಬಾಲಕಿಗೆ ಥೊರಾಕೊಟೊಮಿ ಎಂಬ ಸಂಕೀರ್ಣ ಶಸ್ತ್ರಚಿಕಿತ್ಸೆಯನ್ನ ನಡೆಸಲಾಗಿದ್ದು ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞ ಡಾ.ಸದಾಶಿವ್‌ ರಾವ್‌, ಅರವಳಿಕೆ ತಜ್ಞ ಡಾ.ಸುನೀಲ್‌ ಮತ್ತು ಡಾ.ಫ್ರೀಡಾ ಕುಟಿನ್ಹಾ ಅವರ ಜೊತೆ ಸೇರಿ ಬಾಲಕಿಯ ಎದೆಗೆ ಹೊಕ್ಕಿದ್ದ ಕಬ್ಬಿಣದ ರಾಡ್‌ನ್ನು ಸುರಕ್ಷಿತವಾಗಿ ಹೊರ ತೆಗೆದಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಬಾಲಕಿಯನ್ನು ಪಿಡಿಯಾಟ್ರಿಕ್‌ ಇಂಟೆನ್ಸಿವ್‌ ಕೇರ್‍‌ ಗೆ ವರ್ಗಾಯಿಸಿ ತೀವ್ರ ನಿಗಾದಲ್ಲಿ ಇರಿಸಲಾಗಿತ್ತು

ತಾಂತ್ರಿಕ ಸಾಮರ್ಥ್ಯ ಮತ್ತು ಸೇವಾ ಶ್ರೇಷ್ಠತೆ ಹೆಚ್ಚಿಸಲು ಕ್ಲಾಸಿಕ್ ಲೆಜೆಂಡ್ಸ್ ರಾಷ್ಟ್ರೀಯ ತರಬೇತಿ ಕೇಂದ್ರ ಉದ್ಘಾಟನೆ

ಕ್ಲಾಸಿಕ್ ಲೆಜೆಂಡ್ಸ್ ರಾಷ್ಟ್ರೀಯ ತರಬೇತಿ ಕೇಂದ್ರ ಉದ್ಘಾಟನೆ

ಯೋಗಿಕ ಮತ್ತು ಕೌಶಲ್ಯ-ಆಧಾರಿತ ತಾಂತ್ರಿಕ ತರಬೇತಿಯನ್ನು ನೀಡಲು ಕಾರ್ಯತಂತ್ರವಾಗಿ ಅಭಿವೃದ್ಧಿಪಡಿಸಲಾದ ರಾಷ್ಟ್ರೀಯ ತರಬೇತಿ ಕೇಂದ್ರವು ರೋಗನಿರ್ಣಯ, ನಿಖರ ದುರಸ್ತಿ ಅಭ್ಯಾಸಗಳು ಮತ್ತು ರಚನಾತ್ಮಕ ಕೌಶಲ್ಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಡೀಲರ್‌ಶಿಪ್‌ಗಳಾದ್ಯಂತ ತಂತ್ರಜ್ಞರು ಮತ್ತು ಸೇವಾ ವೃತ್ತಿಪರರನ್ನು ಬೆಂಬಲಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ.

ಕೇಂದ್ರದ ಬಜೆಟ್‌ ಆರೋಗ್ಯ ಕ್ಷೇತ್ರಕ್ಕೆ ಏನೇನು ಕೊಡುಗೆ? ಆರೋಗ್ಯ ಕ್ಷೇತ್ರದ ಗಣ್ಯರಿಂದ ಅಭಿಪ್ರಾಯ

ಕೇಂದ್ರದ ಬಜೆಟ್‌ ಆರೋಗ್ಯ ಕ್ಷೇತ್ರಕ್ಕೆ ಏನೇನು ಕೊಡುಗೆ?

ಹ್ಯಾಪಿಯೆಸ್ಟ್ ಹೆಲ್ತ್‌ನಲ್ಲಿ, ದೀರ್ಘಕಾಲದ ಮತ್ತು ಜೀವನಶೈಲಿ ಸಂಬಂಧಿತ ಪರಿಸ್ಥಿತಿಗಳನ್ನು ಪರಿಹರಿ ಸಲು ಸಕಾಲಿಕ ರೋಗನಿರ್ಣಯ, ಕ್ಲಿನಿಕಲ್ ಆರೈಕೆ ಮತ್ತು ಆಯುರ್ವೇದ ಮತ್ತು ಯೋಗದಂತಹ ಪುರಾವೆ ಆಧಾರಿತ ಸ್ವಾಸ್ಥ್ಯ ಅಭ್ಯಾಸಗಳನ್ನು ಸಂಯೋಜಿಸುವ ಸಮಗ್ರ ವಿಧಾನದ ಅಗತ್ಯವಿದೆ ಎಂದು ನಾವು ನಂಬುತ್ತೇವೆ.

'Textile' festival: ಬೆಂಗಳೂರಿನಲ್ಲಿ ಫೆ.6 ರಿಂದ ಮೂರು ದಿನ ‘ಜವಳಿ’ ಹಬ್ಬ! ಎಫ್&ಎ ಶೋ ಮತ್ತು ಸಿದ್ಧ ಉಡುಪುಗಳ ಮೇಳಕ್ಕೆ ವೇದಿಕೆ ಸಿದ್ಧ!

ಬೆಂಗಳೂರಿನಲ್ಲಿ ಫೆ.6 ರಿಂದ ಮೂರು ದಿನ ‘ಜವಳಿ’ ಹಬ್ಬ

ಭಾರತ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯ ಪಾಲುದಾರರು, ಉದ್ಯಮಿಗಳು ಇಲ್ಲಿ ನಿಯಮಿತ ವಾಗಿ ಭೇಟಿಯಾಗಿ, ಕಚ್ಚಾ ವಸ್ತುಗಳ ಬಗ್ಗೆ, ಹೊಸ ಟ್ರೇಂಡ್‌ಗಳ ಅನ್ವೇಷಣೆ, ಪಾಲುದಾರಿಕೆಗಳ ಸ್ಥಾಪನೆ ಮತ್ತು ಜಾಗತಿಕ ಫ್ಯಾಷನ್‌ ಉದ್ಯಮದಲ್ಲಿ ಮುಂದೆ ಬರುವ ಅವಕಾಶಗಳನ್ನು ಚರ್ಚಿಸಲು ಹಾಗೂ ಪಡೆಯಲು ಈ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾರೆ.

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

Union Budget 2026-27: ಪ್ರವಾಸೋದ್ಯಮ ವಿಕಸಿತ ಭಾರತದ ಆರ್ಥಿಕ ಶಕ್ತಿ

ಇದು ಪ್ರವಾಸೋದ್ಯಮ ಪರಿಸರ ಸಂರಕ್ಷಣೆ, ಸ್ಥಳೀಯರ ಜೀವನೋಪಾಯ, ಉದ್ಯೋಗ ಸೃಷ್ಟಿ, ಈ ಮೂರು ಅಂಶಗಳ ಸಮತೋಲನದ ಮಾದರಿ. ಕೃಷಿ ಪ್ರವಾಸೋದ್ಯಮಕ್ಕೂ ಉತ್ತೇಜನ ನೀಡಲಾಗಿದ್ದು, ಇದರಿಂದ ರೈತರಿಗೆ ಬೆಳೆಗಳ ಹೊರತಾದ ಆದಾಯದ ಹೊಸ ಮಾರ್ಗಗಳನ್ನು ತೆರೆದು, ಗ್ರಾಮೀಣ ಯುವಕರಿಗೆ ಉದ್ಯೋಗ ಸೃಷ್ಟಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಿಗೆ ಇದು ಅತ್ಯಂತ ಪ್ರಾಸಂಗಿಕ.

Union Budget 2026-27: ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ, ಉದ್ಯೋಗ, ಉದ್ಯಮ ಒಗ್ಗೂಡಿಸುವತ್ತ ಬಜೆಟ್ ದೃಷ್ಟಿ

ಶಿಕ್ಷಣ ಎಂದರೆ ಕೇವಲ ಪಾಠ ಪುಸ್ತಕಗಳಿಗೆ ಸೀಮಿತವಾದ ವಿಷಯವಲ್ಲ. ಅದು ಜೀವನೋಪಾಯ, ನವೋದ್ಯಮ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಶಕ್ತಿಯಾದ ಸಾಧನವಾಗಿತ್ತು. ಪಿಇಎಸ್ ಸ್ಥಾಪನೆಯಾದ ದಿನದಿಂದಲೂ ಈ ನಿಟ್ಟಿನಲ್ಲಿಯೇ ಆಲೋಚನೆ ಮಾಡುವುದಷ್ಟೇ ಅಲ್ಲದೇ, ಶಿಕ್ಷಣ- ಉದ್ಯೋಗ-ಉದ್ಯಮ ಅಂಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ನಿರಂತರವಾಗಿ ರೂಪಿಸಿಕೊಂಡಿದೆ.

Union Budget 2026-27: ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ಪಾಲಿಗೆ ಚೊಂಬು ನೀಡಿದ ಕೇಂದ್ರ

ಕರ್ನಾಟಕದ ದೃಷ್ಟಿಯಿಂದ ದೊಡ್ಡ ಅಸಮಾಧಾನ ಮೂಲಸೌಕರ್ಯ ಹೂಡಿಕೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಹೈಸ್ಪೀಡ್ ರೈಲು ಯೋಜನೆಗಳು ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಮಾರ್ಗಗಳಿಗೆ ಮಾತ್ರ ಸೀಮಿತವಾಗಿವೆ. ಆದರೆ ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಚಟುವಟಿಕೆಗಳಿಗೆ ಅತ್ಯಂತ ಮುಖ್ಯವಾಗಿರುವ ಬೆಂಗಳೂರು-ಮುಂಬೈ, ಬೆಂಗಳೂರು-ಮಂಗಳೂರು, ಬೆಂಗಳೂರು-ಪುಣೆ ಮಾರ್ಗಗಳು ಸಂಪೂರ್ಣವಾಗಿ ನಿರ್ಲಕ್ಷಿತವಾಗಿವೆ.

Koratagere News: ಕೊರಟಗೆರೆ ಎಸ್ ಎಸ್ ಸರ್ಕಲ್ ನಲ್ಲಿ ರಾಜನ ಪತ್ರಿಮೆಗೆ ಪುಷ್ಪಾರ್ಚನೆ: ಕುರಂಗನನ್ನು ಅನುಸರಿಸಲು ಕರೆ

ಮಾದಿಗರ ಕೆಚ್ಚೆದೆಯ ರಾಜ ಅರಸು ಕುರಂಗರಾಯನ 278ನೇ ಪಟ್ಟಾಭಿಷೇಕೋತ್ಸವ

ದನ ಕಾಯುವ ಚಾಕರಿ ಕೆಲಸ ಮಾಡುವ ನಮ್ಮ ಸಮುದಾಯಕ್ಕೆ ಒಬ್ಬ ರಾಜನಿದ್ದ ಎಂಬುದೇ ಹೆಮ್ಮೆಯ ವಿಚಾರ ಇಂದಿಗೂ ಈ ಸಮುದಾಯ ಗಟ್ಟಿಮುಟ್ಟಾಗಿ ರಾಜರಂತೆಯೇ ಬದುಕುತ್ತಿದ್ದೇವೆ ಸವರ್ಣಿಯರಂತೆ ನಾವು ಯಾರನ್ನು ದೌರ್ಜನ್ಯ ಮಾಡುತ್ತಿಲ್ಲ ಆದರೆ ನಮ್ಮ ಸಮುದಾಯ ದುಡಿದ ಶ್ರಮವನ್ನ ಮೇಲ್ಜಾತಿ ಯವರು ಪಡೆಯುತ್ತಿದ್ದಾರೆ.

Chimul Election: ಬಿಳಿ ತಲೆಯ ಖಾಲಿ ಡಬ್ಬಗಳು ಸೋತಿದ್ದು, ಕೂಲಿ ಪಡೆದ ತೃಪ್ತಿಯಿದೆ: ಭರಣಿ ವೆಂಕಟೇಶ್

ಬಿಳಿ ತಲೆಯ ಖಾಲಿ ಡಬ್ಬಗಳು ಸೋತಿದ್ದು, ಕೂಲಿ ಪಡೆದ ತೃಪ್ತಿಯಿದೆ

ನನ್ನ ಗೆಲುವಿನಲ್ಲಿ ಪಕ್ಷಾತೀತವಾಗಿ ಅನೇಕರು ಶ್ರಮಿಸಿದ್ದಾರೆ. ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ( Former MLA KP Bachegowda) ಆರೋಗ್ಯ ಸರಿಯಿಲ್ಲದಿದ್ದರೂ ಕೂಡ ನನ್ನ ಪರವಾಗಿ ಒಂದು ದಿನ ಬಹಿರಂಗ ಪ್ರಚಾರಕ್ಕೆ ಬಂದಿದ್ದಲ್ಲದೆ ಮನೆಯಲ್ಲಿದ್ದುಕೊಂಡೇ ನನ್ನ ಪರವಾಗಿ ಕೆಲಸ ಮಾಡಿದ್ದಾರೆ. ನುಗಿತಹಳ್ಳಿ ರವಿ 10 ದಿನಗಳ ಕಾಲ ನನ್ನ  ಜತೆಗಿದ್ದು ಎಲ್ಲಾ ರೀತಿಯ ಸಹಾಯ ಮಾಡಿದ್ದಾರೆ.

Chikkaballapur News: ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ, ಶಿಸ್ತು ಮುಖ್ಯ: ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ್

ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಸಮಯ ಪಾಲನೆ ಶಿಸ್ತು ಮುಖ್ಯ

ವಿದ್ಯಾಭ್ಯಾಸದ ಅವಧಿಯಲ್ಲಿ ಓದಿನತ್ತ ತೋರಿಸುವ ಉದಾಸೀನತೆ ಭವಿಷ್ಯದಲ್ಲಿ ಭಾರೀ ತೊಂದರೆಗಳಿಗೆ ಕಾರಣವಾಗಬಹುದು. ಈ ದಿನಗಳಲ್ಲಿ ಒಂದು ನಿಮಿಷವೂ ಬಹಳ ಅಮೂಲ್ಯ.ಪರೀಕ್ಷೆಗಳಿಗೆ ಪೂರ್ವ ಸಿದ್ಧತೆ ಅತ್ಯಂತ ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವು ದರಿಂದ ವಿದ್ಯಾರ್ಥಿಗಳು ಇನ್ನಷ್ಟು ಕಷ್ಟಪಟ್ಟು ಓದಬೇಕು ಎಂದು ಸಲಹೆ ನೀಡಿದರು. ಜನ್ಮ ನೀಡಿದ ತಂದೆ-ತಾಯಿ, ವಿದ್ಯೆ ಕಲಿಸಿದ ಗುರುಗಳು ಹಾಗೂ ಕಷ್ಟಕಾಲದಲ್ಲಿ ನೆರವಾದ ಸ್ನೇಹಿತರನ್ನು ಯಾವತ್ತೂ ಮರೆಯಬಾರದು

Bagepally News: ಹಿಂದೂಗಳು ಸಂಘಟಿತರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ: ಎಂ.ಅರ್.ಜಯರಾಂ

ಹಿಂದೂಗಳು ಸಂಘಟಿತರಾದಾಗ ಅಖಂಡ ಭಾರತ ನಿರ್ಮಾಣ ಸಾಧ್ಯ

ಜಾಗೃತಿ ಕೊರತೆಯಿಂದ ಹಿಂದೂ ಧರ್ಮದ ರಕ್ಷಣೆಗೆ ಹಿನ್ನಡೆಯಾಗಿದ್ದು, ಪ್ರತಿ ಮನೆಯಲ್ಲಿಯೂ ಹಿಂದೂಗಳು ಸಂಘಟಿತರಾಗಬೇಕು. ಪ್ರತಿ ಗ್ರಾಮ, ಹೃದಯಕ್ಕೂ ಹಿಂದೂಗಳ ಸಂದೇಶ ಸಾರುವ ಮೂಲ ಉದ್ದೇಶದಿಂದ ಹಿಂದೂ ಸಮ್ಮೇಳನದ ಕಾರ್ಯಕ್ರಮ ಆಯೋಜಿಸಿದ್ದು, ನಾವೆಲ್ಲ ಹಿಂದೂ ನಾವೆಲ್ಲ ಒಂದು ಎಂಬ ಸಂಕಲ್ಪದೊಂದಿಗೆ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಸಂಘಟಿತರಾಗಬೇಕು

Congress into power in Chimul: ಕುಬೇರರ ಚುನಾವಣೆಗೆ ಸವಾಲು ಹಾಕುವಂತೆ ನಡೆದ ಹಾಲು ಉತ್ಪಾದಕರ ಸಹಕಾರಿ ಸಂಘದ ಚುನಾವಣೆ

ಚಿಮುಲ್‌: ಪ್ರಥಮ ಚುನಾವಣೆಯಲ್ಲಿಯೇ ಗೆದ್ದು ಬೀಗಿದ ʼಕೈʼ ಅಭ್ಯರ್ಥಿಗಳು

ಚಿಮುಲ್ ಚುನಾವಣೆಯಲ್ಲಿ ಉಡುಗೊರೆಗಳದ್ದೆ ದೊಡ್ಡ ಸದ್ದು ಮಾಡಿದ್ದು ಸುಳ್ಳಲ್ಲ. ಚುನಾವಣೆ ಪ್ರಕಟ ವಾದ ಬೆನ್ನಲ್ಲೇ ಡೆಲಿಗೇಟ್ಸ್ಗಳ ಮನೆ ಬಾಗಿಲಿಗೆ ಅಭ್ಯರ್ಥಿಗಳು ಎಡತಾಕುತ್ತಿದ್ದ ದೃಶ್ಯಗಳು ಸಾಮಾನ್ಯ ವಾಗಿದ್ದವು. ಸಾಲದ್ದಕ್ಕೆ ದೇವರ ಪ್ರಸಾದ, ಆಣೆ ಪ್ರಮಾಣ, ಹಣ ಉಡುಗೊರೆಗಳ ಭರಾಟೆ ಜೋರಾಗಿತ್ತು.

Loading...