ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

Ashok Nayak

Senior Sub Editor

ashoknayak@vishwavani.news

ಮಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ ಪದವಿ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯದಲ್ಲಿ ಎಂ.ಎ. ಸಿಕ್ಕಿಂ ಮಣಿಪಾಲ ಯೂನಿವರ್ಸಿಟಿಯಿಂದ ಎಂಬಿಎ ಪದವಿ ಗಳಿಸಿರುತ್ತಾರೆ. ಉಡುಪಿ ಜಿಲ್ಲೆಯ ಮಣಿಪಾಲದಲ್ಲಿ ಶಿಕ್ಷಣ ಪೂರೈಕೆ... ಆರಂಭದಲ್ಲಿ ನಾಲ್ಕು ವರ್ಷಗಳ ಕಾಲ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ಉದಯವಾಣಿಯ ಡಿಜಿಟಲ್‌ ವಿಭಾಗದಲ್ಲಿ ಪತ್ರಿಕೋದ್ಯಮ ವೃತ್ತಿ ಆರಂಭ. ಮಂಗಳೂರಿನ ವಿಜಯವಾಣಿಯಲ್ಲಿ ಒಂದು ವರ್ಷ ಡೆಸ್ಕ್‌ ನಲ್ಲಿ ಉಪಸಂಪಾದಕನಾಗಿ ಕಾರ್ಯನಿರ್ವಹಣೆ. ಬೆಂಗಳೂರಿನಲ್ಲಿ ಉದಯಕಾಲದಲ್ಲಿ ಡಿಜಿಟಲ್‌ ವಿಭಾಗದಲ್ಲಿ ವೃತ್ತಿ ನಿರ್ವಹಣೆ, ಎಸ್‌ ನ್ಯೂಸ್‌ ಚಾನೆಲ್‌ ನಲ್ಲಿ ಕಂಟೆಂಟ್‌ ರೈಟರ್‌ ಆಗಿ ಕೆಲಸ ಮಾಡಿದ ಅನುಭವ. ಈಗ, ವಿಶ್ವೇಶ್ವರ ಭಟ್‌ ಸಾರಥ್ಯದ ವಿಶ್ವವಾಣಿ ಕನ್ನಡ ದಿನಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಹಿರಿಯ ಉಪಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ..

Articles
ಮುಡಾ ಅಕ್ರಮ ತನಿಖಾ ನಡೆ ಬಿಜೆಪಿ ಕಡೆ

ಮುಡಾ ಅಕ್ರಮ ತನಿಖಾ ನಡೆ ಬಿಜೆಪಿ ಕಡೆ

ಇಡಿ (ಜಾರಿ ನಿರ್ದೇಶನಾಲಯ) ನೀಡಿರುವ ಮಧ್ಯಂತರ ತನಿಖಾ ವರದಿಯಲ್ಲಿ ಕೂಡ ಹಿಂದಿನ ಬಿಜೆಪಿ ಅವಧಿಯಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳು ಮಾಡಿರುವ ಅಕ್ರಮಗಳನ್ನು ಒತ್ತಿ ಹೇಳಲಾಗಿದೆ. ಇದನ್ನು ಸರಕಾರ ಈಗ ಗಂಭೀರವಾಗಿ ಪರಿಗಣಿಸಿದ್ದು ಇಡೀ ವರದಿಯನ್ನೇ ಆಧರಿಸಿ ಹಿಂದಿನ ಬಿಜೆಪಿ ಸರಕಾರದ ಕಾಲದಲ್ಲಿದ್ದ ಅಧಿಕಾರಿಗಳು ಮತ್ತು ಅಂದಿನ ಅಧ್ಯಕ್ಷರ ವಿರುದ್ಧ ಕ್ರಮಕ್ಕೆ ಮುಂದಾಗುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ.

ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ನಿಂದ ಸುಸ್ಥಿರತೆಯ ಗುರಿಯ ಗ್ರೀನ್ ಫೀಲ್ಡ್ ಇಂಟಿಗ್ರೇಟೆಡ್ ಘಟಕಕ್ಕೆ ಚಾಲನೆ

ಮುಕಂದ್ ಸುಮಿ ಸ್ಪೆಷಲ್ ಸ್ಟೀಲ್ ನಿಂದ ಸುಸ್ಥಿರತೆಯ ಗುರಿ

ಈ ಪ್ರಮುಖ ವಿಸ್ತರಣೆಯು ಎಂ.ಎಸ್.ಎಸ್.ಎಸ್.ಎಲ್.ಗೆ ಹೆಚ್ಚುತ್ತಿರುವ ಬೇಡಿಕೆಎ ಪೂರೈಸಲು, ಹಸಿರು ಉಕ್ಕು ಆವಿಷ್ಕಾರ ಉತ್ತೇಜಿಸಲು ಮತ್ತು ಭಾರತದ ಸ್ವಾವಲಂಬನೆಯ ಉದ್ದೇಶಗಳನ್ನು ಸುಧಾರಿಸಲು ನೆರವಾಗಲಿದೆ. ₹2,345 ಕೋಟಿ ಹೂಡಿಕೆಯು ಮುಕಂದ್ ಸುಮಿಯ ಹೊಸ ಏಕೀಕೃತ ಉಕ್ಕು ಘಟಕವನ್ನು ಮುನ್ನಡೆಸಲಿದೆ

Bagepally News: ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಮಾಡಿ

ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕ ದುರಸ್ತಿ ಮಾಡಿ

ಪಟ್ಟಣದ ಸಂತೇ ಮೈದಾನದಲ್ಲಿರುವ ನೀರಿನ ಶುದ್ಧೀಕರಣ ಘಟಕಕ್ಕೆ ಭಾನುವಾರ ಭೇಟಿ ನೀಡಿದ ಸಿಪಿಐಎಂ ನಗರದ ಘಟಕ ನಿಯೋಗವು, ಘಟಕದ ಕಾರ್ಯದ ಬಗ್ಗೆ ಪರಿಶೀಲಿಸಿದರು. ಈ ವೇಳೆ ಮಾತನಾಡಿದ ಅವರು, ಇಲ್ಲಿನ ನೀರನ್ನು ಶುದ್ಧೀಕರಣ ಮಾಡಬೇಕಾದ ಯಂತ್ರಗಳು ಸ್ಥಗಿತಗೊಂಡು ಹಲವಾರು ತಿಂಗಳುಗಳೇ ಆಗಿವೆ. ಜೊತೆಗೆ ನೀರಿನ ಶುದ್ಧೀಕರಣ ಘಟಕದಲ್ಲಿ ಆಲಂ ಬಳಸುತ್ತಿಲ್ಲ, ಕಲ್ಮಶಗಳನ್ನು ತೆಗೆಯುವ ಯಾವೊಂದು ವಿಧಾನವನ್ನೂ ಅನುಸರಿಸುತ್ತಿಲ್ಲ

ಪರಿಣಾಮಕಾರಿತ್ವದ ಥೆರಪಿಗಳು: ಮಲ್ಟಿಪಲ್ ಸ್ಲೆರೋಸಿಸ್ ಆರೈಕೆಯಲ್ಲಿ ಕ್ರಾಂತಿ

ಮಲ್ಟಿಪಲ್ ಸ್ಲೆರೋಸಿಸ್ ಆರೈಕೆಯಲ್ಲಿ ಕ್ರಾಂತಿ

ಪ್ರಸ್ತುತ ದೇಶದಲ್ಲಿ ಮಲ್ಟಿಪಲ್ ಸ್ಲೆರೋಸಿಸ್ (ಎಂ.ಎಸ್.) ಕುರಿತು ಸೀಮಿತ ಜ್ಞಾನವಿದೆ ಮತ್ತು ರೋಗ ಲಕ್ಷಣಗಳು ಅಗೋಚರವಾಗಿರುತ್ತವೆ, ಇದರಿಂದ ರೋಗ ಪರೀಕ್ಷೆ ತಡವಾಗುತ್ತದೆ. ಅಲ್ಲದೆ ಇದು ಕೇಂದ್ರ ನರವ್ಯವಸ್ಥೆಯ ರೋಗವಾಗಿದ್ದು ಇದು ತಡವಾಗಿ ರೋಗ ಪರೀಕ್ಷೆ ಹಾಗೂ ದುರ್ಬಲ ಚಿಕಿತ್ಸೆಯ ಆಯ್ಕೆಗಳಿಂದ ರೋಗ ಪ್ರಗತಿ ಸಾಧಿಸುವ ಮೂಲಕ ದೀರ್ಘಾವಧಿಯಲ್ಲಿ ಅಂಗವೈಕಲ್ಯ ಉಂಟು ಮಾಡುತ್ತದೆ. ರೋಗ ಪತ್ತೆಯಾದರೂ ಕೆಲವರು ಚಿಕಿತ್ಸೆ ಮುಂದುವರಿಸುವುದಿಲ್ಲ

Bagepally News: ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೆಂಕಟರೆಡ್ಡಿಗೆ ಸನ್ಮಾನ

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೆಂಕಟರೆಡ್ಡಿಗೆ ಸನ್ಮಾನ

ಚಿಕ್ಕಬಳ್ಳಾಪುರ ಜಿಲ್ಲೆಯ ಕನ್ನಡ ಭವನದಲ್ಲಿ ೨೦೨೫-೨೬ ಸಾಲಿನ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಜನ್ಮದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ವೆಂಕಟರೆಡ್ಡಿ ಅವರ ಮನೆಯಲ್ಲಿ  ಮುಖ್ಯ ಶಿಕ್ಷಕರ ಹಿರಿಯ ಪ್ರಾಥಮಿಕ ಶಾಲೆ ಸಂಘದ ವತಿಯಿಂದ ಸನ್ಮಾನ ಮಾಡಿ ಮಾತನಾಡಿದರು

Chinthamani News: ಮಂಗಳಮುಖಿಯರಿಂದ ದರ್ಗಾ ಗಂಧೋತ್ಸವ

ಮಂಗಳಮುಖಿಯರಿಂದ ದರ್ಗಾ ಗಂಧೋತ್ಸವ

ತಾಲ್ಲೂಕಿನ ಹಿಂದೂ ಮುಸ್ಲಿಮರ ಪವಿತ್ರ ಯಾತ್ರಾಸ್ಥಳ   ವಾದ ಮುರುಗಮಲ್ಲ ಗ್ರಾಮದ ಹಜರತ್ ಅಮ್ಮಜಾನ್ ಬಾವಾಜಾನ್ ದರ್ಗಾದ ಉರುಸ್ ನಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ ಮಂಗಳಮುಖಿ ಯರ ತಂಡ ಮಂಗಳಮುಖಿಯರ ಮುಖ್ಯಸ್ಥೆ ಮುಂಬೈ ಗುಲಾಂ ಮೊಯಿನುದ್ದಿನ್ ಅಮ್ಮಾಜಿ  ರವರ ನೇತೃತ್ವದಲ್ಲಿ ದರ್ಗಾ ಗೆ ಆಗಮಿಸಿ ವಿಶೇಷ ಚದರ್ ಹೊದಿಸಿ ಗಂಧರ್ಪಣೆ ಮಾಡಿದರು.

Gauribidanur News: ಜಿಎಸ್‌ಟಿ ಇಳಿಕೆ ಆರ್ಥಿಕತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ : ಮಾರ್ಕೆಟ್ ಮೋಹನ್

ಜಿಎಸ್‌ಟಿ ಇಳಿಕೆ ಆರ್ಥಿಕತೆಯಲ್ಲಿ ಕ್ರಾಂತಿಕಾರಿ ಹೆಜ್ಜೆ

ಜನಸಾಮಾನ್ಯರ ಬದುಕಿಗೆ ನೆಮ್ಮದಿ ತರುವ ನಿಟ್ಟಿನಲ್ಲಿ, ಹಣದುಬ್ಬರ ನಿಯಂತ್ರಿಸುವ ದೃಷ್ಟಿಯಲ್ಲಿ ಜಿ ಎಸ್ ಟಿ ಸ್ಲಾಬ್ ಬದಲಾವಣೆ ಅಭೂತಪೂರ್ವ ಪರಿವರ್ತನೆ ಆಗಿದೆ ಎಂದು ಅವರು ಮದ್ಯಮ ವರ್ಗ ಮತ್ತು ಬಡವರ್ಗದವರ ಬದುಕಿಗೆ ನೆರವು ನೀಡುವ ನಿಟ್ಟಿನಲ್ಲಿ, ದಿನಬಳಕೆಯ ವಸ್ತುಗಳ ತೆರಿಗೆ ದರವನ್ನು ತಗ್ಗಿಸುವ ನಿಟ್ಟಿನಲ್ಲಿ ಇದೊಂದು ಶ್ಲಾಘನಾರ್ಹ ಆರ್ಥಿಕ ಸುಧಾರಣಾ ಕ್ರಮ

Gauribidanur News: ತಹಸೀಲ್ದಾರ್ ಕೆ.ಎಂ.ಅರವಿಂದ್ ಅಂಗನವಾಡಿಗಳಿಗೆ ಅನಿರೀಕ್ಷಿತ ಭೇಟಿ ಪರಿಶೀಲನೆ

ಅಂಗನವಾಡಿಗಳಿಗೆ ತಹಸೀಲ್ದಾರ್ ಅನಿರೀಕ್ಷಿತ ಭೇಟಿ ಪರಿಶೀಲನೆ

ಅಂಗನವಾಡಿ ಕಾರ್ಯಕರ್ತರ ಜೊತೆ ಮಾತನಾಡುತ್ತಾ ಅಂಗನವಾಡಿ ಕೇಂದ್ರವನ್ನು ಯಾವಾಗಲೂ ಸ್ವಚ್ಛವಾಗಿರಿಸಿಕೊಳ್ಳಬೇಕು.ಅವಧಿ ಮೀರಿದ ಆಹಾರ ಪದಾರ್ಥಗಳನ್ನು ಬಳಸಬಾರದು, ಪೊಟ್ಟಣ ಗಳಲ್ಲಿ ಸರಬರಾಜು ಆಗುವ ಆಹಾರ ಪದಾರ್ಥಗಳ ಮೇಲೆ ಮುದ್ರಿತವಾಗಿರುವ ಉತ್ಪಾದನಾ ದಿನಾಂಕ ಮತ್ತು ಬಳಕೆಯ ದಿನಾಂಕವನ್ನು ಪರಿಶೀಲಿಸಿ ಬಳಕೆ ಮಾಡಬೇಕು,

Sadguru Jaggi Vasudev: ಕ್ರೀಡೆಗಳನ್ನು ಹಳ್ಳಿಗಳಿಗೆ ಮರಳಿ ತರುವುದೇ ಈಶ ಗ್ರಾಮೀಣ ಕ್ರೀಡೋತ್ಸವದ ಉದ್ದೇಶವಾಗಿದೆ : ಸದ್ಗುರು ಜಗ್ಗಿ ವಾಸುದೇವ್ ಅಭಿಮತ

ಕ್ರೀಡೆಗಳ ಹಳ್ಳಿಗಳಿಗೆ ಮರಳುವಿಕೆ: ಈಶ ಗ್ರಾಮೀಣ ಕ್ರೀಡೋತ್ಸವದ ಉದ್ದೇಶ

“ನಾವು ಗ್ರಾಮಗಳಲ್ಲಿ ಕ್ರೀಡೆಯನ್ನು ಮರಳಿ ತರುವ ಮೂಲಕ ಗ್ರಾಮಸ್ಥರನ್ನು ಕ್ರೀಡಾ ಮನೋಭಾವ ವುಳ್ಳವರನ್ನಾಗಿಸಲು, ಮತ್ತು ಅವರ ಜೀವನದ ಹೊರೆಯನ್ನು ನಿರಾಳವಾಗಿಸಲು  ಬಯಸುತ್ತೇವೆ”, ಎಂದು ಸದ್ಗುರು ಜಗ್ಗಿವಾಸುದೇವ್  ಭಾನುವಾರ ಸದ್ಗುರು ಸನ್ನಿಧಿ, ಚಿಕ್ಕಬಳ್ಳಾಪುರದಲ್ಲಿ ನಡೆದ ಕ್ರೀಡೋ ತ್ಸವ ಭಾರತದ ಅತಿ ದೊಡ್ಡ ಗ್ರಾಮೀಣ ಕ್ರೀಡಾ ಉತ್ಸವವಾಗಿದೆ

Chikkaballapur News: ಛಾಯಾಗ್ರಾಹಕರ ಅಕಾಡೆಮಿ ಸ್ಥಾಪಿಸುವಂತೆ ಸರಕಾರಕ್ಕೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹ

ಅಕಾಡೆಮಿ ಸ್ಥಾಪಿಸುವಂತೆ ಸರಕಾರಕ್ಕೆ ಜಿಲ್ಲಾಧ್ಯಕ್ಷ ಶ್ರೀನಿವಾಸ್ ಆಗ್ರಹ

ಛಾಯಾಗ್ರಾಹಕರು ಇಂದು ತೀವ್ರವಾದ ಸಂಕಷ್ಟದಲ್ಲಿದ್ದಾರೆ.ಸರಕಾರ ಛಾಯಾಗ್ರಹಣ ಅಕಾಡೆಮಿ ಸ್ಥಾಪಿಸಿ ಅದರ ಮುಖೇನ, ಛಾಯಾಗ್ರಾಹಕರಿಗೆ ತಮ್ಮ ವೃತ್ತಿಯಲ್ಲಿ ಹೆಚ್ಚಿನ ಕೌಶಲ್ಯ ಬೆಳೆಸಿಕೊಳ್ಳಲು ನೆರವಾಗಬೇಕು. ಇದಾದಲ್ಲಿ ಛಾಯಾಗ್ರಾಹಕ ಸಮುದಾಯಕ್ಕೆ ಸರಕಾರದಿಂದ ಬರಬೇಕಾದ ಎಲ್ಲಾ ಸೌಲತ್ತುಗಳನ್ನು ಒದಗಿಸಲು ಸಾಧ್ಯವಾಗಲಿದೆ

Chinthamani News: ಮುರುಗಮಲ್ಲ ಮೊದಲನೇ ದಿನದ ಉರುಸ್ ಕಾರ್ಯಕ್ರಮ ಶಾಂತಿಯುತವಾಗಿ ಆಚರಣೆ

ಗ್ರಾಮಸ್ಥರಿಂದ ರಾತ್ರಿ ಸಡಗರ ಸಂಭ್ರಮದಿಂದ ಗಂಧೋತ್ಸವ ಆಚರಣೆ

ಹಜರತ್ ರವರ ಅನುಯಾಯಿಗಳು ವಿವಿಧ ರೀತಿಯ ಪಾವಡಗಳನ್ನ ಪ್ರದರ್ಶಿಸಿ ಜನರ ಗಮನ ಸೆಳೆದರು. ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಹೊತ್ತ ಭಕ್ತರು, ದರ್ಗಾಕ್ಕೆ ಗಂಧ ಹಚ್ಚಿ ಛಾದರ್ ಸಮರ್ಪಿಸಿ ದರು. ಮೊದಲನೇ ದಿನ ಉರುಸ್ ಪ್ರಯುಕ್ತ ವಕ್ಫ್ ಬೋರ್ಡ್ ಕಡೆಯಿಂದ ಭಕ್ತಾಧಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.

Chikkaballapur News: ಮಾದಕ ವ್ಯಸನದಿಂದ ಹೊರ ಬರುವಂತೆ ಸಾರ್ವಜನಿಕರಲ್ಲಿ ಮನವಿ: ಇ.ಒ ಎಂ. ನಾಗಮಣಿ

ಮಾದಕ ವ್ಯಸನದಿಂದ ಹೊರ ಬರುವಂತೆ ಸಾರ್ವಜನಿಕರಲ್ಲಿ ಮನವಿ

ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನ”ವನ್ನು ತಾಲ್ಲೂಕಿನ ಮಹಿಳಾ ಸ್ವ-ಸಹಾಯ ಗುಂಪುಗಳು ಮತ್ತು ಇತರೆ ಸಮುದಾಯದೊಂದಿಗೆ ಮಾದಕ ದ್ರವ್ಯ ಬಳಕೆ ಮತ್ತು ವ್ಯಸನದಿಂದ ಉಂಟಾಗುವ ಹಿಂಸೆ, ದೌರ್ಜನ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸ ಲಾಗುತ್ತದೆ.

Bagepally News: ನಾಗರೀಕತೆಯ ಅಭಿವೃದ್ಧಿಯಲ್ಲಿ ರಸ್ತೆಗಳ ಪಾತ್ರಕ್ಕೆ ಹೆಚ್ಚಿನ ಮಹತ್ವವಿದೆ  :ಎಸ್.ಎನ್.ಸುಬ್ಬಾರೆಡ್ಡಿ

ರಸ್ತೆ ಮತ್ತು ಶಾಲಾ ಕಟ್ಟಡಗಳಿಗೆ ಶಾಸಕರಿಂದ ಚಾಲನೆ

ಕಲ್ಲಿಪಲ್ಲಿ ಗ್ರಾಮದಿಂದ ಬಿಳ್ಳೂರು ರಸ್ತೆಯನ್ನು ಸುಮಾರು 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸ ಲಾಗುತ್ತಿದೆ. ನೆನೆಗುದಿಗೆ ಬಿದ್ದಿದ್ದ ಬಿಳ್ಳೂರು ರಸ್ತೆಯಿಂದ ಆಗಟಮಡಕ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು 60 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ ಹಾಗು ಚೇಳೂರು ಮುಖ್ಯ ರಸ್ತೆಯಿಂದ ಬೈರೇಗೊಲ್ಲಪಲ್ಲಿ ಗ್ರಾಮಕ್ಕೆ ಸುಮಾರು 60 ಲಕ್ಷ ವೆಚ್ಚದಲ್ಲಿ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

Narendra Parekat Column: 80ರ ಹೊಸ್ತಿಲಲ್ಲಿ ಬಿ.ಆರ್‌.ಎಲ್

ಕನ್ನಡದ ಪ್ರೇಮಕವಿ, ಸಾಹಿತ್ಯ ಜಗತ್ತಿನ ಜಾಲಿ ಕವಿ ಎಂದೇ ಖ್ಯಾತರಾದ ಬಿ.ಆರ್.ಲಕ್ಷ್ಮಣ ರಾವ್ ಅವರು ಕನ್ನಡ ಕಾವ್ಯ ಪ್ರಪಂಚದ ಭಾವಗೀತೆಗಳ ಸರದಾರ. ಗಾಢ ಪ್ರೇಮ, ವಿರಹ, ವಿಷಾದ, ಜೀವನತತ್ವ ಹೀಗೆ ಹಲವು ವಿಷಯ ವಸ್ತುಗಳ ಕವನಗಳನ್ನು ವೈವಿಧ್ಯಮಯವಾಗಿ ನಿರೂಪಿಸಿ ಸಾಹಿತ್ಯ ಜಗತ್ತಿಗೆ ಉತ್ತಮ ಕೃತಿಗಳನ್ನು ಕೈಗಿತ್ತ ಖ್ಯಾತಿ ಅವರದ್ದಾಗಿದೆ. ಚಿರಯವ್ವನಿಗ ಬಿಆರ್‌ಎಲ್ ಇದೇ ಮಂಗಳವಾರ (ಸೆ.9) 80ಕ್ಕೆ ಕಾಲಿಡುತ್ತಿದ್ದಾರೆ

Dasara 2025: ದಸರಾ: ಹತ್ತು ದಿನ ಯುವಪಡೆಗೆ ಸಾಂಸ್ಕೃತಿಕ ಹಬ್ಬ

ದಸರಾ: ಹತ್ತು ದಿನ ಯುವಪಡೆಗೆ ಸಾಂಸ್ಕೃತಿಕ ಹಬ್ಬ

ರಾಜ್ಯದ ೨೦ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳ ತಂಡಗಳು, ಪಿಯು, ಐಟಿಐ, ವೈದ್ಯಕೀಯ, ಇಂಜಿ ನಿಯರಿಂಗ್, ನಸಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಯುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಎಲ್ಲ ವಿಶ್ವವಿದ್ಯಾಲಯಗಳು ತಲಾ ಒಂದೊಂದು ತಂಡವನ್ನು ಆಯ್ಕೆ ಮಾಡಿ ಕಳಿಸಿಕೊಡಲಿವೆ.

Chikkaballapur News: ವಿದ್ಯಾರ್ಥಿಗಳ ಬದುಕಿಗೆ ದಾರಿ ತೋರುವ ಗುರುಗಳು ಸದಾ ಅಭಿನಂದನೆಗೆ ಅರ್ಹರಾಗಿರುತ್ತಾರೆ : ಉಪನ್ಯಾಸಕ ಅರಿಕೆರೆ ಎಂ. ಮುನಿರಾಜು ಅಭಿಮತ

ಬಾಳಿಗೆ ಬೆಳಕಾಗುವ ಶಿಕ್ಷಕರು ಸಮಾಜದಿಂದ ಸದಾ ಅಭಿನಂದನೆಗೆ ಅರ್ಹರು

ಉತ್ತಮ ಶಿಕ್ಷಕರು ಯುವ ಸಮೂಹದ ಮೂಲಕ ಆರೋಗ್ಯವಂತ ಸಮಾಜ ಕಟ್ಟಲು ಅಡಿಪಾಯ ಹಾಕು ತ್ತಾರೆ. ಬೋಧನೆಗಿಂತ ಬದುಕು ಕಟ್ಟಲು ಮುಂದಾಗುತ್ತಾರೆ. ಹೀಗಾಗಿ ಇಂತಹ ಶಿಕ್ಷಕರನ್ನು ವಿದ್ಯಾರ್ಥಿಗಳು ಸದಾ ಗೌರವಿಸುತ್ತಾರೆ.ಶಿಕ್ಷಕರ ದಿನಾಚರಣೆಯನ್ನು ಯಾಂತ್ರಿಕವಾಗಿ ಆಚರಿಸುವುದಕ್ಕಿಂತ ಅರ್ಥ ಪೂರ್ಣವಾಗಿ ಆಚರಿಸಿದರೆ ಮಾತ್ರ ಕಾರ್ಯಕ್ರಮಕ್ಕೆ ಬೆಲೆ ಬರಲಿದೆ

Chikkaballapur News: ಸಂಕಷ್ಟಕ್ಕೆ ಹಿಮ್ಮೆಟ್ಟದೆ ಒಗ್ಗೂಡಿ ಶ್ರಮಿಸೋಣ : ಮಧ್ಯಪ್ರಾಚ್ಯದ ಸಂಕಟಕ್ಕೆ ಮಿಡಿದ ಸದ್ಗುರು ಶ್ರೀ ಮಧುಸೂದನ ಸಾಯಿ

'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ'

ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಜನರಿಗೆ ಜೀವನವು ಸುಲಭವಾಗಿಲ್ಲ. ನಾಳೆ ನೋಡುತ್ತೇವೆಯೇ ಎನ್ನುವುದೇ ಅವರಿಗೆ ಪ್ರಶ್ನೆ. ಮುಂದಿನ ಊಟ, ಔಷಧಿ ಸಿಗುತ್ತದೆಯೇ ಎಂಬುದರ ಖಾತರಿ ಇರುವು ದಿಲ್ಲ. ಮತ್ತೆ ಮಕ್ಕಳು ಶಾಲೆಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರವೇ ಸಿಗದ ಪರಿಸ್ಥಿತಿಯಲ್ಲಿ ಅಲ್ಲಿ ಬದುಕು ಸಾಗುತ್ತಿದೆ

Chikkaballapur News: ಮಕ್ಕಳ ಭವಿಷ್ಯ ರೂಪಿಸುವ ಪ್ರಯತ್ನ ವ್ಯರ್ಥವಲ್ಲ: ಸಾಯಿ ಶ್ಯೂರ್ ಬೆಂಬಲಿಸುವ ಸರ್ಕಾರದ ನಿರ್ಧಾರಕ್ಕೆ ಸದ್ಗುರು ಶ್ರೀ ಮಧುಸೂದನ ಸಾಯಿ ಶ್ಲಾಘನೆ

ಮಕ್ಕಳ ಭವಿಷ್ಯ ರೂಪಿಸುವ ಪ್ರಯತ್ನ ವ್ಯರ್ಥವಲ್ಲ

'ಸಾಯಿ ಶ್ಯೂರ್ ಪೋಷಕಾಂಶ ಮಿಶ್ರಣ ಪುಡಿಯ ಉತ್ಪಾದನೆ ಮತ್ತು ಸಾಗಣೆ ವೆಚ್ಚದ ಕಾಲು ಭಾಗವನ್ನು ಕರ್ನಾಟಕ ಸರ್ಕಾರವು ವಹಿಸಿಕೊಂಡಿದೆ. ಈ ಯೋಜನೆ ಆರಂಭವಾಗಿ ೧೦ ವರ್ಷಗಳಾದ ನಂತರ ನಡೆದಿರುವ ಬೆಳವಣಿಗೆ ಇದು. ಸರ್ಕಾರದ ಈ ಉಪಕ್ರಮಕ್ಕಾಗಿ ವೇದಿಕೆಯ ಮೇಲಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಸೇರಿ ಹಲವರನ್ನು ಅಭಿನಂದಿಸಬೇಕಿದೆ'

CM Siddaramaiah: ಕೃಷ್ಣೆಗೆ ಆರನೇ ಬಾರಿ ಬಾಗಿನ ಅರ್ಪಿಸಿದ ಸಿದ್ಧರಾಮಯ್ಯ

ಕೃಷ್ಣೆಗೆ ಆರನೇ ಬಾರಿ ಬಾಗಿನ ಅರ್ಪಿಸಿದ ಸಿದ್ಧರಾಮಯ್ಯ

ಜಲಸಂಪನ್ಮೂಲ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ ಗುಪ್ತಾ, ಕಾರ್ಯದರ್ಶಿ ಕೆ.ಬಿ. ಕುಲಕರ್ಣಿ, ಕೆಬಿಜೆಎನ್ಎಲ್ ಎಂಡಿ ಕೆ.ಪಿ. ಮೋಹನರಾಜ್, ಸಿಇ ಡಿ. ಬಸವರಾಜ, ಬೆಳಗಾವಿ ಪ್ರಾದೇಶಿಕ ಆಯುಕ್ತೆ ಜಾನಕಿ, ಜಿಲ್ಲಾಧಿಕಾರಿಗಳಾದ ಕೆ. ಆನಂದ, ಸಂಗಪ್ಪ, ಸಿಇಓ ರಿಷಿ ಆನಂದ ಮತ್ತಿತರರು ಇದ್ದರು. ಬಾಗಿನ ಕಾರ್ಯಕ್ರಮದಲ್ಲಿ ಅವಳಿ ಜಿಲ್ಲೆಯ ಶಾಸಕರು, ಸಂಸದರ ಹೆಸರನ್ನು ಆಮಂತ್ರಣ ಪತ್ರಿಕೆಯಲ್ಲಿ ಹಾಕಲಾಗಿತ್ತು.

Chikkanayakanahalli News: ಮನೆ ಬಾಗಿಲಿಗೆ-ಮನೆ ಮಗ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಲಿ

ಮನೆ ಬಾಗಿಲಿಗೆ-ಮನೆ ಮಗ ಯಶಸ್ಸಿಗೆ ಅಧಿಕಾರಿಗಳು ಶ್ರಮಿಸಲಿ

ಕಸ ವಿಲೇವಾರಿ ಮಾಡುವ ಸಲುವಾಗಿ ತಂದ ಟಾಟಾ ಎಸಿ ವಾಹನ ಮತ್ತು ತಳ್ಳುವ ಗಾಡಿಗಳು ಬಳಕೆ ಯಾಗದೆ ನಿಂತಲ್ಲೇ ತುಕ್ಕು ಹಿಡಿದು ಹಾಳಾಗಿ ಹೋಗಿದೆ. ರಿಪೇರಿ ಮಾಡಿಸಿ ಇಲ್ಲವೆ ಅನುಪ ಯುಕ್ತ ವಸ್ತು ಗಳನ್ನು ಹರಾಜು ಹಾಕಿ ಎಂದು ಸಲಹೆ ಕೇಳಿಬಂದಿತು. ಸಿದ್ದರಾಮಯ್ಯ ಎಂಬ ವ್ಯಕ್ತಿ ರಸ್ತೆ ಜಾಗವನ್ನು ಒತ್ತುವರಿ ಮಾಡಿ ಶೆಡ್ ನಿರ್ಮಿಸಿದ್ದಾರೆ.

ಯರಗಟ್ಟಿ ಕ್ಷೇತ್ರಕ್ಕೆ ಶಾಸಕ ವಿಶ್ವಾಸ ವೈದ್ಯ, ಸವದತ್ತಿ ಕ್ಷೇತ್ರಕ್ಕೆ ವಿರೂಪಾಕ್ಷ ಮಾಮನಿ ಫೈನಲ್

ಯರಗಟ್ಟಿ ಕ್ಷೇತ್ರಕ್ಕೆ ಶಾಸಕ ವಿಶ್ವಾಸ, ಸವದತ್ತಿ ಕ್ಷೇತ್ರಕ್ಕೆ ಮಾಮನಿ ಫೈನಲ್

ಯರಗಟ್ಟಿಯ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶನಿವಾರ ಯರಗಟ್ಟಿ ಭಾಗದ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿಯವರು ವೈದ್ಯ ಮತ್ತು ಅಜೀತ ದೇಸಾಯಿ ಬಣಗಳ ಮಧ್ಯ ನಡೆಯುತ್ತಿದ್ದ ಜಿದ್ದಾ ಜಿದ್ದಿನ ಹೋರಾಟಕ್ಕೆ ಬ್ರೆಕ್ ಹಾಕಿದ್ದು, ವಿಶ್ವಾಸ ವೈದ್ಯ ಅವರು ನಮ್ಮಗುಂಪಿನ ಅಭ್ಯರ್ಥಿಯಾಗಿದ್ದು, ಇದಕ್ಕೆ ಅಜೀತ ದೇಸಾಯಿಯವರು ಸಂಪೂರ್ಣ ಸಹಮತ ಸೂಚಿಸಿದ್ದಾರೆ

Madhugiri News: ಕೊಡಿಗೇನಹಳ್ಳಿಯಲ್ಲಿ ಈದ್ ಮಿಲಾದ್ ಸಂಭ್ರಮ

Madhugiri News: ಕೊಡಿಗೇನಹಳ್ಳಿಯಲ್ಲಿ ಈದ್ ಮಿಲಾದ್ ಸಂಭ್ರಮ

ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿ ಗ್ರಾಮದ ಅಹಲೇ ಸುನ್ನತುಲ್ ಜಮಾತ್ ಜಾಮಿಯಾ ಮಸೀದಿ ಕಮಿಟಿ ವತಿಯಿಂದ ಜಶ್ನೆ ಈದ್ ಮಿಲಾದ್ ಉನ್ ನಬಿ ಸ್ವ.ಅ.ರವರ ಹಬ್ಬವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಾಗಿ ಸಡಗರದಿಂದ ಅಲ್ಲಾಹುನ ನಾಮ ಜಪ ಮಾಡುತ್ತಾ ಸಾಗಿದರು.

Asia Cup 2025: ಏಷ್ಯಾ ಕಪ್:‌ ಯಂಗ್‌ ಇಂಡಿಯಾ ಫೇವರಿಟ್

ಏಷ್ಯಾ ಕಪ್:‌ ಯಂಗ್‌ ಇಂಡಿಯಾ ಫೇವರಿಟ್

ಮೊದಲ ಆವೃತ್ತಿಯ ಏಷ್ಯಾಕಪ್ ಅನ್ನು ಯುಎಇ ಆಯೋಜಿಸಿತ್ತು. 1983ರ ಐಸಿಸಿ ವಿಶ್ವಕಪ್ ಕ್ರಿಕೆಟ್ ವಿಜೇತ ತಂಡವಾದ ಭಾರತವು ಮೊದಲ ಏಷ್ಯಾ ಕಪ್‌ನಲ್ಲಿ ಭಾಗವಹಿಸಿದ್ದರಿಂದ ಆ ಪಂದ್ಯಾವಳಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಆದರೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶ್ವಕಪ್ ವಿಜೇತ ಸಂಪೂರ್ಣ ತಂಡವನ್ನು 1984ರಲ್ಲಿ ನಡೆದಿದ್ದ ಚೊಚ್ಚಲ ಏಷ್ಯಾ ಕಪ್ ಪಂದ್ಯಾವಳಿಗೆ ಕಳುಹಿಸಿರಲಿಲ್ಲ.

ಚಾಲಕ-ನಿರ್ವಾಹಕರು ಎಲ್ಲದಕ್ಕೂ ಹೊಣೆಯಲ್ಲ

ಚಾಲಕ-ನಿರ್ವಾಹಕರು ಎಲ್ಲದಕ್ಕೂ ಹೊಣೆಯಲ್ಲ

ಟಿಕೆಟ್ ಕೊಡುವ/ಪಡೆಯುವ ಪ್ರಕ್ರಿಯೆ ತಡವಾದಲ್ಲಿ, ಮುಂದಿನ ಸ್ಟೇಜ್‌ನಲ್ಲಿ ಚೆಕಿಂಗ್ ಸ್ಕ್ವಾಡ್ ಬಂದಾಗ, ನಿರ್ವಾಹಕರು ಮೆಮೋ ಪಡೆಯಬೇಕಾಗುತ್ತದೆ ಅಥವಾ ದಂಡವನ್ನು ಪೀಕಬೇಕಾಗುತ್ತದೆ. ಇದನ್ನು ಹೆಣ್ಣುಮಕ್ಕಳು ಅರ್ಥಮಾಡಿಕೊಳ್ಳುವುದಿಲ್ಲ. ಕೆಲವೊಮ್ಮೆ, ಟಿಕೆಟ್ ಪಡೆದ ಉದ್ದೇಶಿತ ನಿಲ್ದಾಣಗಳಲ್ಲಿ ಇಳಿಯದೇ, ತಮ್ಮ ಅನುಕೂಲಕ್ಕೆ ಇನ್ನೆಲ್ಲೋ ಇಳಿಯುತ್ತಾರೆ. ಕೇಳಿದರೆ, ‘ಫ್ರೀ ತಾನೇ? ನಿಮಗೇನು ಕಷ್ಟ? ನಾವು ಎಲ್ಲಾದರೂ ಇಳಿಯಬಹುದು’ ಎಂಬ ಉಡಾಫೆಯ ಉತ್ತರ ಬರುತ್ತದೆ. ಅವರಿಗೆ ಅರ್ಥಮಾಡಿಸಲು ನಿರ್ವಾಹಕರು ಹೆಣಗುತ್ತಿರುತ್ತಾರೆ.

Loading...