ಮುಂಗಾರು ಬೆಳೆಗೆ ಭದ್ರೆ ಹರಿದು ಬರುವಳೇ?
ಭತ್ತದ ಬೆಳೆಗೆ ನೀರು ಕೊಟ್ಟರೆ ಬೇಸಿಗೆಗೆ ತೊಂದರೆಯಾಗುತ್ತದೆ. ಅಲ್ಲದೆ, ಈಗಾಗಲೇ ನಾಟಿ ಮಾಡುವ ಸಮಯದಲ್ಲಿ ವಿಳಂಬವಾಗಿದೆ. ಹಾಗಾಗಿ, ನೀರು ಹರಿಸುವುದು ಬೇಡ. ಜತೆಗೆ, ಮಳೆಯ ಕೊರತೆ ಮುಂದುವರಿದು, ಜಲಾಶಯಕ್ಕೆ ಸಾಕಷ್ಟು ಒಳ ಹರಿವು ಬರದೇ ಇದ್ದರೆ ಬೇಸಿಗೆಗೆ ಹನಿ ನೀರಿಗೂ ತಾತ್ವರ ವಾಗಲಿದೆ. ಆದ್ದರಿಂದ ನೀರು ಹರಿಸಬಾರದು ಎಂದು ಕೆಲ ರೈತ ಮುಖಂಡರು ಒತ್ತಾಯಿಸುತ್ತಿದ್ದಾರೆ.