ರಂಗತರಬೇತಿ, ಇತಿಹಾಸಗಳ ಮೂಲಕ ಮಕ್ಕಳ ವ್ಯಕ್ತಿತ್ವ ವಿಕಸನ- 'ಹಿಸ್ಟರಿ ಮೇಕರ್ಸ್'!
'ಪರಮ್ ಹಿಸ್ಟರಿ ಸೆಂಟರ್' ಆಯೋಜಿಸಿರುವ "ಹಿಸ್ಟರಿ ಮೇಕರ್ಸ್" ಎಂಬ ರಂಗಭೂಮಿ ಕಾರ್ಯಾ ಗಾರವು ಕೇವಲ ಪಾಠಕ್ಕೆ ಸೀಮಿತವಾಗದೆ, ಇತಿಹಾಸದ ಸ್ವ ಅನುಭವನ್ನು ಪಡೆದುಕೊಳ್ಳುವ ಮತ್ತು ಅದನ್ನು ಪ್ರದರ್ಶನ ರೂಪದಲ್ಲಿ ತೋರಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಲು ಸಿದ್ಧವಾಗಿದೆ.
-
Ashok Nayak
Oct 26, 2025 5:49 PM
- 'ಪರಮ್ ಹಿಸ್ಟರಿ ಸೆಂಟರ್'ನಿಂದ ಭಾರತದ ಭವ್ಯ ಇತಿಹಾಸದ ಅರಿವಿನೊಂದಿಗೆ ಮಕ್ಕಳ ವ್ಯಕ್ತಿತ್ವ ವಿಕಸನ ರೂಪಿಸುವ ವಿಶಿಷ್ಟ ವಾರಾಂತ್ಯ ಶಿಬಿರ. - 8 ವಾರಾಂತ್ಯಗಳ ಕಲಿಕೆಯಲ್ಲಿ ಸಂಪೂರ್ಣ ರಂಗ ತರಬೇತಿ - 8 ರಿಂದ 16 ವರ್ಷದೊಳಗಿನ ಮಕ್ಕಳಿಗಾಗಿ ರಂಗಭೂಮಿ ಕಾರ್ಯಾಗಾರ - ನವೆಂಬರ್ 1 ರಿಂದ ಡಿಸೆಂಬರ್ 21 ರವರೆಗೆ ಬೆಂಗಳೂರಿನ ಜಯನಗರದ 'ಮೇಕರ್ಸ್ ಅಡ್ಡಾ'ದಲ್ಲಿ ಕಾರ್ಯಾಗಾರ - ಭಗತ್ ಸಿಂಗ್, ಶಿವಾಜಿ ಮಹಾರಾಜ್ ಪಾತ್ರಗಳ ಸ್ವ ಅನುಭವಕ್ಕೆ ಸಾಕ್ಷಿಯಾಗಲಿರುವ 'ಹಿಸ್ಟರಿ ಮೇಕರ್ಸ್' - ರಂಗಪರಿಕರಗಳಾದ ಈಟಿ/ಕತ್ತಿ ತಯಾರಿಕೆ ಕೌಶಲಕಗ ಕಲಿಕೆ
ಬೆಂಗಳೂರು: ಶಾಲಾ ಪಠ್ಯಪುಸ್ತಕಗಳಲ್ಲಿನ ಇತಿಹಾಸವನ್ನು ನೀರಸವೆಂದು ಭಾವಿಸುವ ಮಕ್ಕಳಿಗೆ ಈಗ ಸುವರ್ಣಾವಕಾಶ. ಭಾರತದ ಶ್ರೀಮಂತ ಚರಿತ್ರೆಯ ಒಳಹೊಕ್ಕು, ಅದರೊಂದಿಗೆ ಬೆರೆತು ಜ್ಞಾನ ಸಂಪಾದಿಸಲು ಇದೀಗ ಅತ್ಯಾಕರ್ಷಕ ವೇದಿಕೆಯೊಂದು ಸಜ್ಜಾಗಿದೆ. ಇತಿಹಾಸವನ್ನು ವ್ಯಕ್ತಿತ್ವ ವಿಕಸನದೊಂದಿಗೆ ಸಮೀಕರಿಸಿ ನಡೆಸುತ್ತಿರುವ ವಿಶಿಷ್ಟ ಶಿಬಿರ ಇದು.
ಮಾತುಗಾರಿಕೆ, ವೇದಿಕೆಯಲ್ಲಿ ಹಿಂಜರಿಕೆಯಿಲ್ಲದೇ ಮಾತನಾಡುವುದು, ಕಥನ ಕಲೆಯೊಂದಿಗೆ ವಿಷಯ ಪ್ರಸ್ತುತಿ, ಇತರರೊಂದಿಗೆ ಪರಿಣಾಮಕಾರಿ ಸಂವಹನ ಇವೆಲ್ಲ ಮಗುವು ಭವಿಷ್ಯದಲ್ಲಿ ಯಾವುದೇ ವೃತ್ತಿರಂಗಕ್ಕೆ ಹೋದರೂ ಬೇಕಾಗುವ ಕೌಶಲಗಳು. ಇತಿಹಾಸದ ವಿಷಯಗಳನ್ನು ಬಳಸಿಕೊಂಡು ಈ ಎಲ್ಲ ಕೌಶಲಗಳನ್ನು ಮಕ್ಕಳಲ್ಲಿ ತುಂಬುವ ನಿಟ್ಟಿನಲ್ಲಿ ಈ ಶಿಬಿರ ವಿನ್ಯಾಸಗೊಂಡಿದೆ.
'ಪರಮ್ ಹಿಸ್ಟರಿ ಸೆಂಟರ್' ಆಯೋಜಿಸಿರುವ "ಹಿಸ್ಟರಿ ಮೇಕರ್ಸ್" ಎಂಬ ರಂಗಭೂಮಿ ಕಾರ್ಯಾ ಗಾರವು ಕೇವಲ ಪಾಠಕ್ಕೆ ಸೀಮಿತವಾಗದೆ, ಇತಿಹಾಸದ ಸ್ವ ಅನುಭವನ್ನು ಪಡೆದುಕೊಳ್ಳುವ ಮತ್ತು ಅದನ್ನು ಪ್ರದರ್ಶನ ರೂಪದಲ್ಲಿ ತೋರಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮೂಡಿಸಲು ಸಿದ್ಧವಾಗಿದೆ. ರಂಗಭೂಮಿಯ ಮೂಲಕ ಇತಿಹಾಸದ ಅನಾವರಣ: 8 ರಿಂದ 16 ವರ್ಷ ವಯಸ್ಸಿನ ಮಕ್ಕಳಿಗೆಂದೇ 8 ವಾರಾಂತ್ಯಗಳ ಕಾರ್ಯಾಗಾರವನ್ನು ವಿಶೇಷವಾಗಿ ರೂಪಿಸ ಲಾಗಿದೆ.
ಇಲ್ಲಿ ಮಕ್ಕಳು ನಾಟಕದ ಮೂಲಕ ಭಾರತದ ಇತಿಹಾಸದ ಬಗ್ಗೆ ಆಳವಾಗಿ ಜ್ಞಾನವನ್ನು ಹೊಂದ ಲಿದ್ದಾರೆ. ಈ ಕಾರ್ಯಾಗಾರದಲ್ಲಿ ಕಥೆ ಹೇಳುವಿಕೆ ಮತ್ತು ಸ್ಕ್ರಿಪ್ಟ್ ಸಿದ್ಧತೆಯಿಂದ ಹಿಡಿದು, ವೇಷ ಭೂಷಣಗಳ ಅಭ್ಯಾಸ ಮತ್ತು ಫೈನಲ್ (ಗ್ರಾಂಡ್ ಫಿನಾಲೆ) ಪ್ರದರ್ಶನದವರೆಗೆ ತಜ್ಞ ಮಾರ್ಗ ದರ್ಶಕರು ಮಕ್ಕಳನ್ನು ಮುನ್ನಡೆಸುತ್ತಾರೆ. ಪ್ರತಿ ವಾರಾಂತ್ಯದಲ್ಲಿ (ಶನಿವಾರ: ಸಂಜೆ 5:30 ರಿಂದ 7 ಗಂಟೆ ಹಾಗೂ ಭಾನುವಾರ ಬೆಳಗ್ಗೆ 10:30 ರಿಂದ 12:00) ವಿನೂತನ ಕಲಿಕೆಯ ಪ್ರಮುಖಾಂಶಗಳು: ಐತಿಹಾಸಿಕ ಪಾತ್ರಾಭಿನಯ: ಮಕ್ಕಳು ಕೇವಲ ಭಗತ್ ಸಿಂಗ್, ಸಾವರ್ಕರ್ ಅಥವಾ ಶಿವಾಜಿ ಮಹಾರಾಜ್ ಬಗ್ಗೆ ಓದುವುದಿಲ್ಲ, ಬದಲಿಗೆ ಪಾತ್ರಾಭಿನಯದ ಮೂಲಕ ಅವರ ಮನೋಭಾವನೆ ಯನ್ನು ಅರ್ಥೈಸಿಕೊಂಡು ಆ ಪಾತ್ರಕ್ಕಿಲ್ಲಿ ಜೀವ ತುಂಬುತ್ತಾರೆ.
ಉದಾಹರಣೆಗೆ, "ಲಾಲ್ ಬಾಲ್ ಪಾಲ್ ಅವರು ಇಂದಿನ ಯುಗದಲ್ಲಿದ್ದರೆ ಏನು ಮಾಡುತ್ತಿದ್ದರು?" ಎಂಬಂತಹ ಸೃಜನಾತ್ಮಕ ಚಿಂತನೆಯನ್ನು ಇಲ್ಲಿ ಮಕ್ಕಳು ಅಭಿನಯದ ಮೂಲಕ ಕಣ್ಣಿಗೆ ಕಟ್ಟಿ ಕೊಡುತ್ತಾರೆ. ಸ್ವತಃ ರಂಗಪರಿಕರಗಳ ತಯಾರಿಕೆ: ಇಲ್ಲಿ ಮಕ್ಕಳು ಕೇವಲ ರಂಗಾಭಿನಯ ವನ್ನು ಮಾತ್ರ ಕಲಿಯುವುದಿಲ್ಲ.
ಬದಲಾಗಿ ರಂಗಭೂಮಿಯ ಒಟ್ಟಾರೆ ಜ್ಞಾನವನ್ನೂ ಗಳಿಸುತ್ತಾರೆ. ಅಂದರೆ, ಮಕ್ಕಳು ಈಟಿ ಅಥವಾ ಕತ್ತಿಯಂತಹ ಐತಿಹಾಸಿಕ ರಂಗಪರಿಕರಗಳನ್ನು ತಮ್ಮ ಕೈಯಾರೆ ಇಲ್ಲಿ ತಯಾರಿಸುತ್ತಾರೆ. ಇದು ತಾವು ಅಭಿನಯಿಸುವ ಪಾತ್ರಗಳೊಂದಿಗೆ ಅವರ ಒಳಗೊಳ್ಳುವಿಕೆಯನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.
ಅಂತಿಮ ಪ್ರದರ್ಶನದಲ್ಲಿ ಫಲಿತಾಂಶ: ಎಂಟನೇ ವಾರಾಂತ್ಯದಲ್ಲಿ ನಡೆಯುವ ಅಂತಿಮ 'ಡಿ-ಡೇ' ಲೈವ್ ಪ್ರದರ್ಶನವು ಕಾರ್ಯಾಗಾರದ ಮುಖ್ಯ ಫಲಿತಾಂಶದ ದಿನವಾಗಿದೆ. ಮಕ್ಕಳು ವೇಷಭೂಷಣ ಮತ್ತು ಸ್ವಂತ ಸ್ಕ್ರಿಪ್ಟ್ ತಯಾರಿಕೆಯ ಮೂಲಕ ಆಯ್ದ ಐತಿಹಾಸಿಕ ಘಟನೆಯ ಕಿರುನಾಟಕವನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಾರೆ.
ಬೆಂಗಳೂರಿನಲ್ಲಿ ಆಯೋಜನೆ: ಬೆಂಗಳೂರಿನ ಜಯನಗರ 7ನೇ ಬ್ಲಾಕ್ನ 32ನೇ ಕ್ರಾಸ್ನಲ್ಲಿರುವ ಮೇಕರ್ಸ್ ಅಡ್ಡಾದಲ್ಲಿ ನವೆಂಬರ್ 1 ರಿಂದ ಡಿಸೆಂಬರ್ 21 ರವರೆಗೆ ಈ ತರಬೇತಿ ನಡೆಯಲಿದ್ದು, ರಂಗಭೂಮಿಯ ವೃತ್ತಿಪರರು ನಡೆಸಿಕೊಡಲಿದ್ದಾರೆ. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ- 90350 34728 ಹಾಗೂ ಇ-ಮೇಲ್: events@paramexp.org ಗೆ ಮೆಸೇಜ್ ಮಾಡಿ.