ವಾಲ್ಮೀಕಿ ನಿಗಮದಂತೆ ಜಿಲ್ಲೆಯ ಭೋವಿ ನಿಗಮದಲ್ಲೂ ಹಗರಣ: ಸಂಸದ ಡಾ.ಕೆ.ಸುಧಾಕರ್
ಪರಿಶಿಷ್ಟರಾದ ಅವರು ನಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸುತ್ತಾರೆ. ನಾವು ನೀರಾವರಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬಹುದು ಎಂದು ಕನಸು ಕಂಡಿದ್ದರ ಕನಸು ಕನಸಾಗಿಯೇ ಉಳಿಯಬೇಕೆ? ನಮ್ಮ ಕಾಲದಲ್ಲಿ ಸರಿಯಾಗಿ ಮಾರ್ಗಸೂಚಿ ಅನುಸರಿಸಿ, ನಿಯಮ ಗಳನ್ನು ಪಾಲಿಸಿ ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೆವು.


ಚಿಕ್ಕಬಳ್ಳಾಪುರ: ದೇಶ ಕಂಡಂತೆ ರಾಜ್ಯದ ವಾಲ್ಮೀಕಿ ನಿಗಮದಲ್ಲಿ ದೊಡ್ಡ ಭ್ರಷ್ಟಾಚಾರವಾಗಿ ಜೈಲು ,ಕೋರ್ಟ್ ಎಲ್ಲಾ ಆಗಿದೆ. ಆದರೆ ವಾಲ್ಮೀಕಿ ನಿಗಮದಂತೆ ಭೋವಿ ನಿಗಮದಲ್ಲೂ ದೊಡ್ಡ ಹಗರಣವಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ರಾಜ್ಯ ಸರ್ಕಾರದ ವಿರುದ್ದ ಆರೋಪಿಸಿದರು.
ನಗರ ಹೊರವಲಯದ ಜಿಲ್ಲಾಡಳಿತ ಭವನದಲ್ಲಿರುವ ಸಂಸದರ ಕಚೇರಿಯಲ್ಲಿ ಸೋಮವಾರ ಜನತಾ ದರ್ಶನ ಕಾರ್ಯಕ್ರಮ ನಡೆಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ನಂತರ ಮಾತನಾಡಿ, ಕಳೆದ ಮೂರು ವರ್ಷಗಳ ಹಿಂದೆ 2021,2022, 2023 ನೇ ಸಾಲಿನಲ್ಲಿ ಆಯ್ಕೆಯಾಗಿದ್ದ ಗಂಗಾ ಕಲ್ಯಾಣ ಫಲಾನುಭವಿಗಳ ಆಯ್ಕೆ ರದ್ದು ಮಾಡಿ, ಹೊಸದಾಗಿ ಫಲಾನುಭವಿಗಳ ಆಯ್ಕೆ ಮಾಡುತ್ತಾ ರಂತೆ. ಈ ಹಿಂದಿನ ಸರ್ಕಾರ ಮೂರು ವರ್ಷಗಳು ಆಯ್ಕೆ ಮಾಡಿರುವ ಫಲಾನುಭವಿಗಳ ಗತಿಯೇನು ಎಂದು ಪ್ರಶ್ನಿಸಿದರು.
ಪರಿಶಿಷ್ಟರಾದ ಅವರು ನಮ್ಮ ಜಮೀನಿನಲ್ಲಿ ಬೋರ್ ವೆಲ್ ಕೊರೆಸುತ್ತಾರೆ. ನಾವು ನೀರಾವರಿ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬಹುದು ಎಂದು ಕನಸು ಕಂಡಿದ್ದರ ಕನಸು ಕನಸಾಗಿಯೇ ಉಳಿಯಬೇಕೆ? ನಮ್ಮ ಕಾಲದಲ್ಲಿ ಸರಿಯಾಗಿ ಮಾರ್ಗಸೂಚಿ ಅನುಸರಿಸಿ, ನಿಯಮ ಗಳನ್ನು ಪಾಲಿಸಿ ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದೆವು. ಅವರಿಗೆ ನೀವು ಬೋರ್ ವೆಲ್ ಕೊರೆಸಬೇಕು. ಅದು ಬಿಟ್ಟು ನೀವು ಹೊಸದಾಗಿ ಆಯ್ಕೆ ಮಾಡುತ್ತೀವಿ ಎಂದರೆ ಇದು ತುಘಲಕ್ ರೀತಿಯಲ್ಲಿ ಆಡಳಿತಾರೂಢ ಸರ್ಕಾರ ನಿರ್ಣಯಗಳನ್ನು ತೆಗೆದು ಕೊಳ್ಳುತ್ತಿರುವುದು ಅಪಹಾಸ್ಯಕ್ಕೆ ಗುರಿಯಾಗುತ್ತಿದೆ.ಇದು ಬಡವರಿಗೆ ಬಲಹೀನರಿಗೆ ಇದು ಮಾರಕವಾಗಿದೆ. ಈ ತರಹದ ನಡವಳಿಕೆಗಳನ್ನು ಬದಲಾಯಿಸಿಕೊಳ್ಳ ಬೇಕು. ಕಾನೂನು ರೀತಿ ಈ ಹಿಂದೆ ನಾವು ಆಯ್ಕೆ ಮಾಡಿ ರುವ ಫಲಾನುಭವಿಗಳಿಗೆ ಬೋರ್ ವೆಲ್ ಕೊರೆಸಬೇಕು ಎಂದು ರಾಜ್ಯ ಸರ್ಕಾರವನ್ನು ಆಗ್ರಹಿಸಿ ದರು.
ಮನಿ ಇಲ್ಲ ಅಂದ್ರೆ ಮನೆಯಿಲ್ಲ, ಹಣ ಇಲ್ಲ ಅಂದ್ರೆ ಕೆಲಸವಿಲ್ಲ.ಇದು ರಾಜ್ಯ ಸರ್ಕಾರದ ಹೊಸ ಘೋಷ ವ್ಯಾಕ್ಯವಾಗಿದೆ. ಸರ್ಕಾರ ಕೆಲಸ ದೇವರ ಕೆಲಸ ಅಂತಾ ವಿಧಾನ ಸೌಧ ಮೇಲೆ ಹಾಕಿದ್ದಾರೆ. ಅದನ್ನು ತೆಗೆದು ಹಾಕಿ ಹಣ ಕೊಟ್ರೆ ಕೆಲಸ, ಹಣವಿಲ್ಲ ಅಂದರೇ ಬರಬೇಡಿ ಅಂತ ಹಾಕಲಿ. ಕಾಂಗ್ರೆಸ್ ಶಾಸಕರೇ ಸರ್ಕಾರದ ವೈಖರಿ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಸಿಎಂ ಅವರ ಆರ್ಥಿಕ ಸಲಹೆಗಾರರು, ರಾಜಕೀಯ ಕಾರ್ಯದರ್ಶಿ, ಹಿರಿಯ ಶಾಸಕರೇ ಹೇಳಿದ್ದಾರೆ ಸರ್ಕಾರದ ಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ ಅಂತ. ಕೂಡಲೇ ಸಿಎಂ ಈ ಬಗ್ಗೆ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಆದೇಶಿಸಲಿ. ಹಿಂದಿನ ಸರ್ಕಾರದ ಬಗ್ಗೆ ತನಿಖೆ ಮಾಡಿಸಿದ ಹಾಗೇ ಈಗಲು ಮಾಡಲಿ. ಸರ್ಕಾರ ವಿರುದ್ಧ ವಿಪಕ್ಷವಾಗಿ ನಾವು ಪ್ರತಿಭಟನೆ ಮಾಡುತ್ತೇವೆ. ಜನರಿಗೆ ಈ ಬಗ್ಗೆ ಅರ್ಥವಾಗಲಿ, ಆಗ ಜನರೇ ಸ್ವಯಂಪ್ರೇರಿತವಾಗಿ ಪ್ರತಿಭಟನೆಗೆ ಇಳಿಯುತ್ತಾರೆ.
ಜಿಲ್ಲೆಯಲ್ಲಿ ಎರಡು ವರ್ಷಗಳಿಂದ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದಕ್ಕೆ ಸ್ಪಷ್ಟ ಉದಾ ಹರಣೆಯಾಗಿ ಬಾಗೆಪಲ್ಲಿ ಸಹಾಯಕ ಕೃಷಿ ನಿರ್ದೇಶಕ ಜಂಟಿ ಕೃಷಿ ನಿರ್ದೇಶಕರ ಕಚೇರಿಯಲ್ಲಿ 2 ಲಕ್ಷ ಲಂಚ ಸ್ವೀಕರಿಸುವಾಗ ಲೋಕಾಯುಕ್ತಕ್ಕೆ ಸಿಕ್ಕಿ ಬಿದ್ದಿರುವ ಘಟನೆಯೇ ಸಾಕ್ಷಿಯಾಗಿದೆ. ಅದೇ ರೀತಿ ಚಿಕ್ಕಬಳ್ಳಾಪುರ ನಗರಾಭಿವೃದ್ದಿ ಕಚೇರಿಯಲ್ಲಿ ಅಧ್ಯಕ್ಷರಿಗೆ ಒಂದು ಎಕರೆ ಭೂಮಿ ಪರಿವರ್ತ ನೆಗೆ 25 ಲಕ್ಷ ರೂಪಾಯಿಗಳ ಲಂಚ ನೀಡ ಬೇಕಾಗಿದೆ. ಇದೇ ರೀತಿ ಜಿಲ್ಲೆಯ ಎಲ್ಲಾ ಕಚೇರಿಗಳಲ್ಲೂ ಭ್ರಷ್ಟಾಚಾರ ತಾಂಡವ ವಾಡುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ತಾವು ಶುದ್ದ ಹಸ್ತರು ಎಂದು ಹೇಳುತ್ತಾರೆ. ಆದರೆ ಅವರು ಇತ್ತ ಗಮನಹರಿಸಲಿ. ಜಿಲ್ಲೆಯ ಎಲ್ಲಾ ಕ್ರಷರ್ ಗಳಿಂದಲೂ ಪ್ರತಿ ತಿಂಗಳು ಮಾಮೂಲಿ ಹೋಗುತ್ತಿದ್ದು ಕ್ರಷರ್ ಮಾಲಿಕರು ಬಹಳ ತೊಂದರೆಗೊಳಗಾಗಿದ್ದಾರೆ ಎಂದು ಆರೋಪಿಸಿದರು.
ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಬರುತ್ತಿರುವ ಅಹವಾಲುಗಳಲ್ಲಿ ಶೇ 90 ರಷ್ಟು ಅಹವಾಲುಗಳನ್ನು ತಾಲ್ಲೂಕು ಮಟ್ಟದ ಅಧಿಕಾರಿಗಳು ಪರಿಹರಿಸಬೇಕಾದ ಸಮಸ್ಯೆಗಳೇ ಆಗಿವೆ. ಇನ್ನು ಉಳಿದವನ್ನು ಜಿಲ್ಲಾ ಮಟ್ಟದ ಅಧಿಕಾರಿಗಳು ಪರಿಹರಿಸುವಂತಹವಾಗಿವೆ. ಜಮೀನು ಹದ್ದು ಬಸ್ತು, ಅಳತೆ, ಸೂರಿಲ್ಲದವರಿಗೆ ಸೂರು ಸೇರಿದಂತೆ ಜನತೆಯ ಮೂಲ ಭೂತ ಸೌಕರ್ಯ ಗಳಿಗೆ ಸಂಬಂಧಿಸಿದವಾಗಿವೆ. ಈ ನಿಟ್ಟಿನಲ್ಲಿ ಜಿಲ್ಲೆಯ ಜಿಲ್ಲಾಡಳಿತ ಸಾರ್ವಜನಿಕರ ಕೆಲಸ ಮಾಡುವಲ್ಲಿ ಮತ್ತಷ್ಟು ಚುರುಕಾಗಬೇಕು ಎಂದು ತಿಳಿಸಿದರು.
ಸಂಸತ್ ಅಧಿವೇಶನ ಅಥವಾ ಇನ್ನಿತರ ಯಾವುದೇ ಪೂರ್ವನಿಯೋಜಿತ ಕಾರ್ಯಕ್ರಮಗಳಿಲ್ಲದಿದ್ದರೆ ಪ್ರತಿ ಸೋಮವಾರ ನಾನೇ ಖುದ್ದಾಗಿ ಸಾರ್ವಜನಿಕರನ್ನು ಭೇಟಿ ಮಾಡುತ್ತೇನೆ. ನಾನು ಕ್ಷೇತ್ರದಲ್ಲಿ ಇಲ್ಲದ ಸಂದರ್ಭದಲ್ಲಿ ಸಾರ್ವಜನಿಕರು ನನ್ನ ಕಚೇರಿ ಸಿಬ್ಬಂದಿಗಳಿಗೆ ತಮ್ಮ ಅಹವಾಲುಗಳನ್ನು ನೀಡಬೇಕೆಂದು ಮನವಿ ಮಾಡಿದರು.
ಇಂದು ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಸುಮಾರು 45 ಅರ್ಜಿಗಳು ಸಂಸದರಿಗೆ ಸಲ್ಲಿಕೆ ಯಾಗಿದ್ದು, ಕೆಲವೊಂದು ಅರ್ಜಿಗಳನ್ನು ಸಂಬಂಧಿಸಿದ ಅಧಿಕಾರಿಗಳೊಂದಿಗೆ ದೂರವಾಣಿ ಮುಖೇನ ಚರ್ಚಿಸಿದ ಸಂಸದರು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿದರು. ಉಳಿಕೆ ಅರ್ಜಿಗಳಿಗೆ ಸಂಬಂದಿಸಿದಂತೆ ಪತ್ರದ ಮುಖೇನ ಸಂಬಂಧಿಸಿದ ಇಲಾಖಾ ಸಚಿವರು ಹಾಗೂ ಅಧಿಕಾರಿಗಳ ಗಮನಕ್ಕೆ ತಂದು ಇತ್ಯರ್ಥಗೊಳಿಸಲಾಗುವುದು ಎಂದು ತಿಳಿಸಿರುತ್ತಾರೆ.
ಈ ವೇಳೆ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ರಾಜಶೇಖರ್, ಬಿಜೆಪಿ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು.ಸಾರ್ವಜನಿಕರು ಇದ್ದರು.