Chikkanayakanahalli (Tumkur) News: ಜೂ.19ರಂದು ಚಿ.ನಾ.ಹಳ್ಳಿ ವಿಧಾನಸಭಾ ಕ್ಷೇತ್ರದ ಗರ್ಭಿಣಿಯರಿಗೆ ತವರಿನ ಮಡಿಲು ಕಾರ್ಯಕ್ರಮದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮ
ಅಣ್ಣತಂಗಿಯರ ಬಾಂಧವ್ಯ ಬೆಸೆಯುವ ತವರಿನ ಮಡಿಲು ಕಾರ್ಯಕ್ರಮ ದಲ್ಲಿ ನಮ್ಮ ವಿಧಾನ ಸಭಾ ಕ್ಷೇತ್ರದಲ್ಲಿರುವ ಎಲ್ಲಾ ಗರ್ಭಿಣಿಯರಿಗೆ ಸಮೂಹಿಕ ಸೀಮಂತ ಕಾರ್ಯ ಕ್ರಮವನ್ನು ಜೂ.19ರ ಗುರುವಾರದಂದು ಆಯೋಜಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿ ಕಾರಿ ಡಾ.ಚೇತನ್ ತಿಳಿಸಿದ್ದಾರೆ


ಚಿಕ್ಕನಾಯಕನಹಳ್ಳಿ: ಅಣ್ಣತಂಗಿಯರ ಬಾಂಧವ್ಯ ಬೆಸೆಯುವ ತವರಿನ ಮಡಿಲು ಕಾರ್ಯಕ್ರಮ ದಲ್ಲಿ ನಮ್ಮ ವಿಧಾನ ಸಭಾ ಕ್ಷೇತ್ರದಲ್ಲಿರುವ ಎಲ್ಲಾ ಗರ್ಭಿಣಿಯರಿಗೆ ಸಮೂಹಿಕ ಸೀಮಂತ ಕಾರ್ಯ ಕ್ರಮವನ್ನು ಜೂ.19ರ ಗುರುವಾರದಂದು ಆಯೋಜಿಸಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿ ಕಾರಿ ಡಾ.ಚೇತನ್ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿದ ಅವರು ಪಟ್ಟಣದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಎಸ್.ಬಿ. ಚಾರಿಟಬಲ್ ಟ್ರಸ್ಟ್ ವತಿಯಿಂದ ತಾಲ್ಲೂಕು ಆಡಳಿತ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಇವರ ಸಹಯೋಗದಲ್ಲಿ ಕ್ಷೇತ್ರದ ಎಲ್ಲಾ ಗರ್ಭಿಣಿಯರಿಗೆ ತವರಿನ ಮಡಿಲು ಕಾರ್ಯಕ್ರಮದಲ್ಲಿ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವಂತಹ ಈ ಕಾರ್ಯಕ್ರಮದಲ್ಲಿ ಶಾಸಕ ಸಿ.ಬಿ.ಸುರೇಶ್ಬಾಬು ಘನ ಉಪಸ್ಥಿತಿ ವಹಿಸಲಿದ್ದು, ಅಧ್ಯಕ್ಷತೆಯನ್ನು ತುಮಕೂರಿನ ದೊಡ್ಡಮನೆ ನರ್ಸಿಂಗ್ ಹೋಂ ನ ಹಿರಿಯ ಪ್ರಸೂತಿ ಹಾಗೂ ಸ್ತೀರೋಗ ತಜ್ಞರಾದ ಡಾ.ಹನುಮಕ್ಕ ವಹಿಸಲಿದ್ದಾರೆ.
ಇದನ್ನೂ ಓದಿ: Chikkanayakanahalli (Tumkur) News: ಬಸ್ ಸೌಲಭ್ಯಕ್ಕೆ ಒತ್ತಾಯ
ಕಾರ್ಯಕ್ರಮದ ಉದ್ಘಾಟನೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮಾ ಹೆಚ್ ನೆರೆವೆರಿಸಲಿದ್ದು, ಸೀಮಂತ ಕಾರ್ಯಕ್ರಮಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸೋನಿಯ ವರ್ನೇಕರ್ ಚಾಲನೆ ನೀಡಲಿದ್ದು ಈ ಸಂದರ್ಭದಲ್ಲಿ ತುಮಕೂರಿನ ಜಿಲ್ಲಾ ತರಬೇತಿಕೇಂದ್ರದ ಮಕ್ಕಳ ತಜ್ಞರು ಪ್ರಾಂಶುಪಾಲರು ಆದ ಡಾ.ಮುಕ್ತಾಂಭ ಆರೋಗ್ಯದ ಮಾಹಿತಿ ತಿಳಿಸಲಿದ್ದು, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿ ಡಾ.ಚಂದ್ರಶೇಖರ್ , ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ ಬಿ.ಕೆ ಉಪಸ್ಥಿತರಿದ್ದು, ಪುರಸಭಾಧ್ಯಕ್ಷ ದಯಾನಂದ್, ಉಪಾದ್ಯಕ್ಷ ರಾಜಶೇಖರ್, ತಹಸೀಲ್ದಾರ್ ಪುರಂದರ ಕೆ, ಶಿರಾ ತಹಸೀಲ್ದಾರ್ ಸಚ್ಚಿದಾನಂದ್ ಕುಚನೂರು, ಇಒ ದೊಡ್ಡಸಿದ್ದಯ್ಯ, ತಾಲ್ಲೂಕು ವೈದ್ಯಾಧಿಕಾರಿ ಡಾ.ಚೇತನ್, ಶಿರಾ ತಾಲ್ಲೂಕು ವೈದ್ಯಾಧಿಕಾರಿ ಡಾ.ಸಿದ್ದೇಶ್ವರ, ಆಡಳಿತ ವೈದ್ಯಾಧಿಕಾರಿ ಡಾ.ನಟರಾಜ್, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ನಟರಾಜ್, ಸಿಡಿಪಿಒ ಹೊನ್ನಪ್ಪ, ಶಿರಾ ಸಿಡಿಪಿಒ ಶಶಿಧರ್, ಆಶಾ ಮೆಂಟರ್ಗಳಾದ ಜಯಂತಿ, ಹೇಮಾ ಇವರುಗಳು ಭಾಗವಹಿಸಲಿದ್ದು ಈ ಸಂದರ್ಭದಲ್ಲಿ ಬೆಳಗ್ಗೆ ೧೦ಗಂಟೆಯಿಂದ ಮಧು ಸೂಧನ್ ಸಾಯಿ ಇನ್ಸಿಟ್ಯೂಟ್, ಆಪ್ ಮೆಡಿಕಲ್ ಸೈನ್ಸ್ ಆಂಡ್ ರಿಸರ್ಚ್ ಇವರಿಂದ ಆರೋಗ್ಯ ತಪಸಣಾ ಕಾರ್ಯವನ್ನು ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ವಿವಿಧ ವಾದ್ಯ ಗೋಷ್ಠಿಯಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.