Chikkanayakanahalli (Tumkur) news: ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಹೇಮಾವತಿ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಶಾಸಕರ ನಿರಂತರ ಪ್ರಯತ್ನ
ಹೇಮಾವತಿ ಮುಖ್ಯ ನಾಲೆ ಯಿಂದ ಶೆಟ್ಟಿಕೆರೆ ಭಾಗಕ್ಕೆ ನೀರು ಹರಿಸುವ ಚಾನಲ್ನಲ್ಲಿ ದೀರ್ಘಕಾಲ ದಿಂದ ಹೂಳು ತುಂಬಿಕೊಂಡಿತ್ತು. ಇದರಿಂದಾಗಿ ನೀರು ಸರಾಗವಾಗಿ ಹರಿಯದೆ ರೈತರಿಗೆ ತೊಂದರೆ ಯಾಗಿತ್ತು. ಈ ಸಮಸ್ಯೆಯನ್ನು ಮನಗಂಡ ಶಾಸಕರು, 28 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಸುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಕೈಗೊಂಡಿದ್ದಾರೆ.


ಚಿಕ್ಕನಾಯಕನಹಳ್ಳಿ: ತಾಲೂಕಿಗೆ ಹಂಚಿಕೆಯಾಗಿರುವ ಹೇಮಾವತಿ ನಾಲಾ ನೀರನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಲು ಶಾಸಕ ಸಿ.ಬಿ.ಸುರೇಶ್ ಬಾಬು ಅವರು ವ್ಯಾಪಕ ಪ್ರಯತ್ನಗಳನ್ನು ಕೈಗೊಂಡಿದ್ದಾರೆ. ಪ್ರಸ್ತುತ, ಕಾಲುವೆಗಳಲ್ಲಿ ತುಂಬಿರುವ ಹೂಳನ್ನು ತೆಗೆದುಹಾಕುವುದು ಮತ್ತು ನಾಲಾ ಕಾಮಗಾರಿಯನ್ನು ಪೂರ್ಣಗೊಳಿಸುವುದರ ಕಡೆಗೆ ಗಮನ ಹರಿಸಿದ್ದಾರೆ.
ಹೇಮಾವತಿ ಮುಖ್ಯ ನಾಲೆ ಯಿಂದ ಶೆಟ್ಟಿಕೆರೆ ಭಾಗಕ್ಕೆ ನೀರು ಹರಿಸುವ ಚಾನಲ್ನಲ್ಲಿ ದೀರ್ಘಕಾಲ ದಿಂದ ಹೂಳು ತುಂಬಿಕೊಂಡಿತ್ತು. ಇದರಿಂದಾಗಿ ನೀರು ಸರಾಗವಾಗಿ ಹರಿಯದೆ ರೈತರಿಗೆ ತೊಂದರೆ ಯಾಗಿತ್ತು. ಈ ಸಮಸ್ಯೆಯನ್ನು ಮನಗಂಡ ಶಾಸಕರು, 28 ಲಕ್ಷ ರೂ. ವೆಚ್ಚದಲ್ಲಿ ಹೂಳು ತೆಗೆಸುವ ಕಾರ್ಯವನ್ನು ಯುದ್ಧೋಪಾದಿಯಲ್ಲಿ ಕೈಗೊಂಡಿದ್ದಾರೆ.
ಇದನ್ನೂ ಓದಿ: Chikkanayakanahalli (Tumkur) News: ಬಸ್ ಸೌಲಭ್ಯಕ್ಕೆ ಒತ್ತಾಯ
ಈ ಕಾರ್ಯ ಪೂರ್ಣಗೊಂಡ ನಂತರ, ನೀರು ಯಾವುದೇ ಅಡೆತಡೆಯಿಲ್ಲದೆ ಪೆಮ್ಮಲದೇವರಹಳ್ಳಿ ಕೆರೆ, ಶೆಟ್ಟಿಕೆರೆ ಕೆರೆ, ಅಂಕಸಂದ್ರದ ಅಣೆಕಟ್ಟೆ ಮೂಲಕ ತಿಮ್ಮಲಾಪುರದಿಂದ ಹುಳಿಯಾರಿಗೆ ಸರಾಗ ವಾಗಿ ಹರಿಯುವ ವಿಶ್ವಾಸವಿದೆ. ಇದರಿಂದ ಈ ಭಾಗದ ರೈತರಿಗೆ ಹೆಚ್ಚಿನ ಅನುಕೂಲ ವಾಗಲಿದೆ. ಶಾಸಕ ಸಿ.ಬಿ. ಸುರೇಶ್ ಬಾಬು ಅವರ ಈ ದಿಟ್ಟ ಕ್ರಮಗಳು ಮತ್ತು ರೈತಮುಖಿ ಪ್ರಯತ್ನಗಳು ಚಿಕ್ಕನಾಯಕನಹಳ್ಳಿ ತಾಲೂಕಿನ ರೈತರಿಗೆ ಹೇಮಾವತಿ ನಾಲಾ ನೀರಿನ ಸಮರ್ಪಕ ಬಳಕೆಗೆ ದಾರಿ ಮಾಡಿಕೊಡಲಿವೆ. ಅವರ ದೂರದೃಷ್ಟಿ ಮತ್ತು ಕಾರ್ಯತತ್ಪರತೆ ಈ ಪ್ರದೇಶದ ಕೃಷಿ ಸಮೃದ್ಧಿಗೆ ಭದ್ರ ಬುನಾದಿ ಹಾಕಲಿದೆ.
ರೈತರ ಸಹಕಾರಕ್ಕೆ ಮನವಿ
ಚಿಕ್ಕನಾಯಕನಹಳ್ಳಿ ಭಾಗದಲ್ಲಿ ಹೇಮಾವತಿ ನಾಲಾ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ. ಈ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ರೈತರ ಸಹಕಾರ ಅತಿ ಮುಖ್ಯ ಎಂದು ಶಾಸಕ ಸುರೇಶ್ ಬಾಬು ಮನವಿ ಮಾಡಿದ್ದಾರೆ. ರೈತರು ತಮ್ಮ ಜಮೀನುಗಳನ್ನು ಕಾಲುವೆ ನಿರ್ಮಾಣಕ್ಕಾಗಿ ಬಿಟ್ಟುಕೊಟ್ಟರೆ, ಮುಂದಿನ ವರ್ಷವೇ ಹೇಮಾವತಿ ನಾಲಾ ಕಾಮಗಾರಿ ಸಂಪೂರ್ಣವಾಗಿ ಮುಗಿಯ ಲಿದೆ ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ, ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿರುವ ಮತ್ತು ಅಗತ್ಯ ದಾಖಲೆಗಳನ್ನು ಒದಗಿಸಿ ರುವ ರೈತರಿಗೆ, ಮುಂದಿನ ಒಂದೆರಡು ದಿನಗಳಲ್ಲಿ ಭೂಸ್ವಾಧೀನ ಪರಿಹಾರದ ಚೆಕ್ಗಳನ್ನು ವಿತರಿಸ ಲಾಗುವುದು ಎಂಬ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ.