Old pension Scheme: ಹಳೆಯ ಪಿಂಚಣಿ ಯೋಜನೆ ಬಯಸುವ ನೌಕರರಿಗೆ ಸಿಹಿ ಸುದ್ದಿ, ಒಪಿಎಸ್ ಪರಿಶೀಲನೆಗೆ ಮೂರು ತಂಡ ರಚನೆ
ಕೇಂದ್ರ ಸರ್ಕಾರಿ ನೌಕರರು ಮತ್ತು ಅನೇಕ ರಾಜ್ಯ ಸರ್ಕಾರಿ ನೌಕರರು ಇತ್ತೀಚಿನ ದಿನಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು (old pension scheme) ಮರು ಜಾರಿಗೆ ತರಲು ಹೋರಾಟ ನಡೆಸುತ್ತಿದ್ದಾರೆ. ಪ್ರಸ್ತಾವನೆ ಪರಿಶೀಲಿಸಲು ರಾಜ್ಯ ಸರ್ಕಾರವು 3 ತಂಡಗಳ ರಚನೆ ಮಾಡಿ ಆದೇಶ ಹೊರಡಿಸಿದೆ.


ಬೆಂಗಳೂರು : ಹಳೆ ಪಿಂಚಣಿ (Old pension Scheme) ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸರಕಾರ (Karnataka Government) ಸಿಹಿಸುದ್ದಿಯೊಂದನ್ನು ನೀಡಿದ್ದು, ಒಪಿಎಸ್ (OPS) ಪ್ರಸ್ತಾವನೆ ಪರಿಶೀಲಿಸಲು ರಾಜ್ಯ ಸರ್ಕಾರವು 3 ತಂಡಗಳ ರಚನೆ ಮಾಡಿ ಆದೇಶ ಹೊರಡಿಸಿದೆ. ಹಳೆಯ ಪಿಂಚಣಿ ಯೋಜನೆ ಮರು ಜಾರಿಗೆ ತರಬೇಕು ಎಂಬುದು ಸರಕಾರಿ ನೌಕರರ ಬಹುದಿನಗಳ ಒತ್ತಾಯವಾಗಿದೆ. ಈ ಕುರಿತು ಹಲವು ಭರವಸೆಗಳನ್ನು ರಾಜ್ಯ ರಾಜಕೀಯ ನಾಯರು ನೀಡುತ್ತಲೇ ಬಂದಿದ್ದಾರೆ.
ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ತಲಾ ಮೂವರು ಅಧಿಕಾರಿ/ನೌಕರರನ್ನೊಳಗೊಂಡಂತೆ ಮೂರು ತಂಡಗಳನ್ನು ರಚಿಸಿ ಕಾರ್ಯ ಹಂಚಿಕೆ ಮಾಡಿದೆ. ಸದರಿ ಅಧಿಕಾರಿ / ನೌಕರರು ಪ್ರತಿ ದಿನ ಅಪರಾಹ್ನ ಕಡ್ಡಾಯವಾಗಿ ಹಾಜರಾಗಿ ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ಗೆ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ಸೂಚನೆ ಆದೇಶಿಸಿದೆ.
ಕೇಂದ್ರ ಸರ್ಕಾರಿ ನೌಕರರು ಮತ್ತು ಅನೇಕ ರಾಜ್ಯ ಸರ್ಕಾರಿ ನೌಕರರು ಇತ್ತೀಚಿನ ದಿನಗಳಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಲು ಹೋರಾಟ ನಡೆಸುತ್ತಿದ್ದಾರೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಹೊಸ ಪಿಂಚಣಿ ಯೋಜನೆಯು ಹಲವಾರು ಪ್ರಯೋಜನಗಳನ್ನು ಹೊಂದಿದ್ದರೂ, ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರು ಪರಿಚಯಿಸಲು ಒತ್ತಾಯಿಸುತ್ತಿದ್ದಾರೆ.
ರಾಷ್ಟ್ರೀಯ ಪಿಂಚಣಿ ಯೋಜನೆ ಅಡಿಯಲ್ಲಿ ಹೊಸ ಪಿಂಚಣಿ ಯೋಜನೆಯು ಹಲವಾರು ಪ್ರಯೋಜನಗಳನ್ನು ಹೊಂದಿದ್ದರೂ, ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮತ್ತೆ ಜಾರಿಗೆ ತರಬೇಕು ಎನ್ನುವ ಒತ್ತಾಯ ಸರ್ಕಾರಿ ನೌಕರರಿಂದ ಕೇಳಿ ಬರುತ್ತಲೇ ಇದೆ. ಎರಡೂ ಯೋಜನೆಗಳು ಸರ್ಕಾರಿ ನೌಕರರಿಗೆ ಮಾಸಿಕ ಪಿಂಚಣಿ ನೀಡುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ. ರಾಜಸ್ಥಾನ, ಹಿಮಾಚಲ ಪ್ರದೇಶ, ಜಾರ್ಖಂಡ್, ಛತ್ತೀಸ್ಗಢ ಮತ್ತು ಪಂಜಾಬ್ ಸೇರಿದಂತೆ ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಿವೆ.
ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಗಿಂತ ಹಳೆಯ ಪಿಂಚಣಿ ಯೋಜನೆ ನಿಜವಾಗಿಯೂ ಉತ್ತಮವಾಗಿದೆ ಎನ್ನುವುದು ನೌಕರರ ವಾದ. ಈ ಕಾರಣದಿಂದಲೇ ಒಪಿಎಸ್ ಮರು ಜಾರಿಗೆ ಒತ್ತಾಯ ಕೇಳಿ ಬರುತ್ತಿದೆ. ಒಪಿಎಸ್ ಮರು ಜಾರಿಯಾದರೆ ಮಾಸಿಕ ಪಿಂಚಣಿ ರೂಪದಲ್ಲಿ ಜೀವನದುದ್ದಕ್ಕೂ ನಿರಂತರ ಆದಾಯವನ್ನು ಖಚಿತಪಡಿಸುತ್ತದೆ. ಇದಕ್ಕಾಗಿ ವೇತನದಿಂದ ಯಾವುದೇ ರೀತಿಯಲ್ಲಿಯೂ ಹಣವನ್ನು ಕಡಿತಗೊಳಿ ಸುವುದಿಲ್ಲ. ಇದರಿಂದಾಗಿ ಉದ್ಯೋಗಿಗಳ ಮೇಲಿನ ಹೊರೆ ಇರುವುದಿಲ್ಲ. OPS ಅಡಿಯಲ್ಲಿ ಪಿಂಚಣಿ ಆದಾಯದ ಮೇಲೆ ತೆರಿಗೆ ವಿಧಿಸಲಾಗುವುದಿಲ್ಲ.ನಿವೃತ್ತಿಯ ನಂತರ ಪಡೆದ ಆದಾಯಕ್ಕೆ ತೆರಿಗೆ ವಿನಾಯಿತಿ ಇದೆ.
ಇದನ್ನೂ ಓದಿ: Government Employees: ಒಪಿಎಸ್ ಜಾರಿಗಾಗಿ ಹೋರಾಟಕ್ಕೆ ಸಿದ್ಧ: ಸಿ.ಎಸ್. ಷಡಾಕ್ಷರಿ