International Day of Yoga 2025: ನಟ ವಿದ್ಯುತ್ ಜಮ್ವಾಲ್ ಅದ್ಭುತ ಯೋಗ ಪ್ರದರ್ಶನ; ಮೈ ನವಿರೇಳಿಸೋ ಫೋಟೊಗಳು ವೈರಲ್!
ಬಾಲಿವುಡ್ ನಟ, ಕಳರಿಪಯಟ್ಟು (Kalaripayattu) ಕಲೆಯಲ್ಲಿ ಸಿದ್ಧಹಸ್ತರಾದ ಆಕ್ಷನ್ ತಾರೆ ವಿದ್ಯುತ್ ಜಮ್ವಾಲ್ (Vidyut Jammwal), ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ ತಮ್ಮ ಯೋಗ ಭಂಗಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಯೋಗವೇ ತಮ್ಮ ಜೀವನಕ್ಕೆ ಸಮತೋಲನ ತಂದಿದೆ ಎಂದಿದ್ದಾರೆ.


ಮುಂಬೈ: ಕಳರಿಪಯಟ್ಟು (Kalaripayattu) ಕಲೆಯಲ್ಲಿ ಸಿದ್ಧಹಸ್ತರಾದ ಆಕ್ಷನ್ ತಾರೆ ವಿದ್ಯುತ್ ಜಮ್ವಾಲ್ (Vidyut Jammwal), ಅಂತಾರಾಷ್ಟ್ರೀಯ ಯೋಗ ದಿನದಂದು (International Day of Yoga) ಯೋಗವೇ ತಮ್ಮ ಜೀವನಕ್ಕೆ ಸಮತೋಲನ ತಂದಿದೆ ಎಂದು ಹೇಳಿದ್ದಾರೆ. “ನಾನು ಕಳರಿಪಯಟ್ಟು ಕಲಾವಿದ. ಆದರೆ, ಇದನ್ನು ಸಂಪೂರ್ಣವಾಗಿ ಕರಗತ ಮಾಡಿಕೊಳ್ಳಲು ಆತ್ಮಾವಲೋಕನದ ಯಾತ್ರೆ ಅಗತ್ಯ. ಅಲ್ಲಿ ಯೋಗವೇ ಮಾರ್ಗದರ್ಶಿಯಾಗಿದೆ. ಇದು ದೇಹ-ಮನಸ್ಸಿನ ಸಮತೋಲನದ ಕಲೆಯನ್ನು ಕಲಿಸುತ್ತದೆ” ಎಂದಿದ್ದಾರೆ. ವಿದ್ಯುತ್ ಜಮ್ವಾಲ್ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಯೋಗ ಭಂಗಿಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಯೋಗ ವಿಜ್ಞಾನದ ಆಳವನ್ನು ವಿವರಿಸಿದ ಅವರು, “ಯೋಧನಿಗೆ ಯಾವಾಗ ಹೋರಾಡಬಾರದು, ಶಾಂತನಾಗಿರಬೇಕು ಎಂಬ ಜ್ಞಾನ ಮುಖ್ಯ. ಯೋಗ ಈ ಸಮತೋಲನವನ್ನು ಒದಗಿಸುತ್ತದೆ. ಇಂದು ದೃಢವಾದ ದೇಹವಿದ್ದರೂ ಖಿನ್ನತೆಯಿಂದ ಬಳಲುವವರಿದ್ದಾರೆ. ಕಾರಣ, ಯೋಗ ಅವರ ಜೀವನವನ್ನು ಮುಟ್ಟಿಲ್ಲ. ದೇಹ-ಮನಸ್ಸಿನ ಒಗ್ಗಟ್ಟನ್ನು ಯೋಗದಿಂದಲೇ ಸಾಧಿಸಬಹುದು. ಉಸಿರಾಟ, ಸಂತೋಷ, ಶಾಂತಿ ಎಲ್ಲವೂ ಇಲ್ಲಿಂದ ಆರಂಭ” ಎಂದರು.
ವರ್ಷಗಳಿಂದ ಯೋಗದೊಂದಿಗಿನ ಅವರ ಸಂಬಂಧ ಗಾಢವಾಗಿದೆ. ಪದ್ಮಶ್ರೀ ಡಾ.ಎಚ್.ಆರ್. ನಾಗೇಂದ್ರ ಅವರ ಭೇಟಿಯೇ ತಿರುವಿನ ಕ್ಷಣ. “ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನದಲ್ಲಿ ನನ್ನ ಹೃದಯ ಬಡಿತ ನಿಯಂತ್ರಣ ಶಕ್ತಿಯನ್ನು ಪರೀಕ್ಷಿಸಿದರು. ಪುರಾತನ ಗ್ರಂಥಗಳ ಬಗ್ಗೆ ನನ್ನ ದೃಷ್ಟಿಕೋನ ಬದಲಾಯಿತು. ಉಸಿರಾಟ ನಿಯಂತ್ರಣದಿಂದ ಹಿಮದಲ್ಲಿ ಗಂಟೆಗಟ್ಟಲೆ ಕುಳಿತಿದ್ದೇನೆ, ತೀವ್ರತೆಯನ್ನು ಸಹಿಸಿದ್ದೇನೆ. ಎಲ್ಲವೂ ಉಸಿರಿನ ಆಟ!” ಎಂದು ಉತ್ಸಾಹದಿಂದ ಹೇಳಿದರು. ಕಳರಿಪಯಟ್ಟನ್ನು ಪದವೆಂದರೆ, ಯೋಗವು ಅಕ್ಷರಮಾಲೆ ಎಂದ ವಿದ್ಯುತ್ಸಂಪೂರ್ಣ ಸಮತೋಲನವನ್ನು ಯೋಗದಿಂದಲೇ ಪಡೆಯಬಹುದು,” ಎಂದರು.
ಈ ಸುದ್ದಿಯನ್ನೂ ಓದಿ: International Day of Yoga: 20,000 ಅಡಿ ಎತ್ತರದ ಯುದ್ಧಭೂಮಿಯಲ್ಲಿ ಯೋಗ ದಿನಾಚರಣೆ; ಸಿಯಾಚಿನ್ನಲ್ಲಿ ಯೋಗ ಮಾಡಿದ ಸೈನಿಕರು
ವಿಶ್ವದಾದ್ಯಂತ ಕಳರಿಪಯಟ್ಟು ಪ್ರತಿನಿಧಿಯಾಗಿ ಭಾರತವನ್ನು ಯೋಗದ ತವರು ಎಂದೇ ವಿದೇಶಿಯರು ಗುರುತಿಸುತ್ತಾರೆ. “ಆದರೆ, ಎಲ್ಲ ಭಾರತೀಯರೂ ಯೋಗಾಭ್ಯಾಸಿಗಳಲ್ಲ ಎಂಬುದು ದುರಾದೃಷ್ಟ” ಎಂದು ಬೇಸರ ವ್ಯಕ್ತಪಡಿಸಿದರು. “ಗುರೂಜಿಯ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಮಾತನಾಡಿದೆ. ತಪ್ಪಾದರೂ ಪ್ರಯತ್ನಿಸಿದೆ. ಆರಂಭಿಕರು ಇದೇ ಸಲಹೆ ಪ್ರಯತ್ನಿಸಿ. ಮೊದಲ ಬಾರಿಗೆ ಸರಿಯಾಗದಿರಬಹುದು, ಆದರೆ ಪ್ರಯತ್ನವೇ ಯಾತ್ರೆಯ ಆರಂಭ,” ಎಂದರು.
ಶಂಖದ ಬಗ್ಗೆ ಆಕರ್ಷಣೆಯನ್ನು ಹಂಚಿಕೊಂಡ ಅವರು, “ಕಳೆದ ಒಂದು ವರ್ಷದಿಂದ ಶಂಖದ ಅಧ್ಯಯನದಲ್ಲಿದ್ದೇನೆ. ಗುರೂಜಿಯ ಮಾರ್ಗದರ್ಶನದಲ್ಲಿ ಶಂಖ ಪ್ರಾಣಾಯಾಮ ಪದ್ಧತಿಯನ್ನು ರೂಪಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.