ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kuberaa First Review: ರಿಲೀಸ್‌ಗೂ ಮುನ್ನವೇ ʼಕುಬೇರʼ ರಿವ್ಯೂ ಔಟ್‌; ಧನುಷ್‌-ರಶ್ಮಿಕಾ ಮಂದಣ್ಣ ಚಿತ್ರ ಹೇಗಿದೆ?

Kubera Movie: ಈ ವರ್ಷದ ಬಹುನಿರೀಕ್ಷಿತ ʼಕುಬೇರʼ ಚಿತ್ರ ಜೂ. 20ರಂದು ತೆರೆಗೆ ಬರಲಿದೆ. ಧನುಷ್‌-ನಾಗಾರ್ಜುನ-ರಶ್ಮಿಕಾ ಮಂದಣ್ಣ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿರುವ ಈ ಥ್ರಿಲ್ಲರ್‌ ಈಗಾಗಾಗಲೇ ಟ್ರೈಲರ್‌ ಮೂಲಕವೇ ಗಮನ ಸೆಳೆದಿದೆ. ಇದೀಗ ಚಿತ್ರ ತೆರೆಗೆ ಬರುವ ಮುನ್ನವೇ ವಿಮರ್ಶೆ ಹೊರ ಬಿದ್ದಿದೆ. ಹಾಗಾದರೆ ಹೇಗಿದೆ ಆಧುನಿಕ ಕುಬೇರನ ಕಥೆ?

ರಿಲೀಸ್‌ಗೂ ಮುನ್ನ ʼಕುಬೇರʼ ಚಿತ್ರದ ರಿವ್ಯೂ ಔಟ್‌

ʼಕುಬೇರʼ ಚಿತ್ರದ ಪೋಸ್ಟರ್‌.

Profile Ramesh B Jun 18, 2025 10:49 PM

ಹೈದರಾಬಾದ್‌: ಈ ವರ್ಷದ ಬಹು ನಿರೀಕ್ಷಿತ ಚಿತ್ರ ʼಕುಬೇರʼ (Kubera Movie). ತಮಿಳು-ಹಿಂದಿ-ತೆಲುಗಿನಲ್ಲಿ ನಿರ್ಮಾಣವಾದ ಈ ಸಿನಿಮಾದಲ್ಲಿ ಕಾಲಿವುಡ್‌ ಸೂಪರ್‌ ಸ್ಟಾರ್‌ ಧನುಷ್‌ (Dhanush), ಟಾಲಿವುಡ್‌ ಹಿರಿಯ ನಟ ನಾಗಾರ್ಜುನ (Nagarjuna Akkineni) ಜತೆ ರಶ್ಮಿಕಾ ಮಂದಣ್ಣ (Rashmika Mandanna) ಮೊದಲ ಬಾರಿ ತೆರೆ ಹಂಚಿಕೊಂಡಿದ್ದಾರೆ. ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ನಿರ್ದೇಶಕ ಶೇಖರ್‌ ಕಮ್ಮುಲ (Sekhar Kammula) ಈ ಚಿತ್ರದಲ್ಲಿ ಸಮಾಜದಲ್ಲಿ ನಡೆಯುವ ಬಡವ-ಶ್ರೀಮಂತರ ಸಂಘರ್ಷದಂತಹ ಸಂಕೀರ್ಣ ವಿಚಾರವನ್ನು ಥ್ರಿಲ್ಲಿಂಗ್‌ ಆಗಿ ತೆರೆಮೇಲೆ ತಂದಿದ್ದಾರೆ. ಜೂ. 20ರಂದು ವಿಶ್ವಾದ್ಯಂತ ತೆರೆಗೆ ಬರಲಿರುವ ಈ ಸಿನಿಮಾದ ಫಸ್ಟ್‌ ರಿವ್ಯೂ (Kuberaa First Review) ಇದೀಗ ಹೊರ ಬಿದ್ದಿದೆ.

ನಟ ಮತ್ತು ವಿಮರ್ಶಕ ಕುಲದೀಪ್ ಗಧ್ವಿ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಮರ್ಶೆ ಹಂಚಿಕೊಂಡಿದ್ದಾರೆ. ಸೆನ್ಸಾರ್ ಸ್ಕ್ರೀನಿಂಗ್ ವೇಳೆ ಸಿನಿಮಾ ವೀಕ್ಷಿಸಿದ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಧನುಷ್ ಅಭಿನಯದ ಚಿತ್ರವನ್ನು ರೋಮಾಂಚಕಾರಿ ಎಂದು ಕರೆದಿದ್ದಾರೆ. ಜತೆಗೆ ಬ್ಲಾಕ್‌ ಬಸ್ಟರ್‌ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಆ ಮೂಲಕ ಚಿತ್ರದ ಬಗ್ಗೆ ಮೂಡಿದ್ದ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.

ʼಕುಬೇರʼ ಚಿತ್ರದ ವಿಮರ್ಶೆ:

ಈ ಸುದ್ದಿಯನ್ನೂ ಓದಿ: Trance Of Kuberaa: ಧನುಷ್‌-ರಶ್ಮಿಕಾ ಜೋಡಿಯ ʼಕುಬೇರʼ ಟೀಸರ್‌ ಔಟ್‌; ಪ್ರತಿಷ್ಠೆಯ ಹೋರಾಟದಲ್ಲಿ ಗೆಲುವು ಯಾರಿಗೆ?

ʼಕುಬೇರʼ ಚಿತ್ರದ ವಿಮರ್ಶೆ ಇಲ್ಲಿದೆ

ʼʼಚಿತ್ರದ ಕಥೆ ವೇಗವಾಗಿ ಸಾಗುತ್ತದೆ. ಮೇಕಿಂಗ್‌ ಅದ್ಭುತವಾಗಿದ್ದು, ಥ್ರಿಲ್ಲಿಂಗ್‌ನಿಂದ ಕೂಡಿದೆ. ಬಡತನದಲ್ಲೇ ಹುಟ್ಟಿ ಬೆಳೆದು ಚಾಣಾಕ್ಷತನದಿಂದಲೇ ಅನ್ಯಾಯವನ್ನು ಮೆಟ್ಟಿ ನಿಲ್ಲುವ ದೇವ ಪಾತ್ರದಲ್ಲಿ ಧನುಷ್‌ ಕಾಣಿಸಿಕೊಂಡಿದ್ದಾರೆ. ಶ್ರೀಮಂತ ಮತ್ತು ಕುತಂತ್ರಿ ಚಾರ್ಟರ್ಡ್ ಅಕೌಂಟೆಂಟ್ ಪಾತ್ರದಲ್ಲಿ ನಾಗಾರ್ಜುನ ಮಿಂಚಿದ್ದಾರೆ. ಇನ್ನು ಡಿಗ್ಲಾಮರ್‌ ಅವತಾರದಲ್ಲಿ ರಶ್ಮಿಕಾ ಮಂದಣ್ಣ ಅಭಿನಯಿಸಿದ್ದು, ಅವರ ಪಾತ್ರವು ಕಥೆಗೆ ಭಾವನಾತ್ಮಕ ಸ್ಪರ್ಶ ನೀಡುತ್ತದೆ. ಜತಗೆ ಅವರ ಅಭಿನಯ ಗಮನ ಸೆಳೆಯುತ್ತದೆ. ಶೇಖರ್‌ ಕಮ್ಮುಲ ಅವರ ಚಿತ್ರವು ತಾಂತ್ರಿಕವಾಗಿ ಮಾತ್ರವಲ್ಲ ಭಾವನಾತ್ಮಕವಾಗಿಯೂ ಶ್ರೀಮಂತವಾಗಿದೆʼʼ ಎಂದು ಕುಲದೀಪ್ ಬರೆದುಕೊಂಡಿದ್ದಾರೆ.

ʼʼಇನ್ನು ಸಿನಿಮಾಟೋಗ್ರಫಿ ಚಿತ್ರದ ಮತ್ತೊಂದು ಪ್ಲಸ್‌ ಪಾಯಿಂಟ್‌. ದೇವಿಶ್ರೀ ಪ್ರಸಾದ್‌ ಸಂಗೀತ ಕಾಡುತ್ತದೆ. ಸಂಭಾಷಣೆ, ಚಿತ್ರಕಥೆ ಪರಿಣಾಮಕಾರಿಯಾಗಿದ್ದು, ದಲಿಪ್‌ ತಹಿಲ್‌, ಪ್ರಿಯಾ ಭವಾನಿ ಶಂಕರ್‌, ಸತ್ಯ ಅಕ್ಕಲ, ಸಂಪತ್‌ ರಾಜ್‌ ಮತ್ತಿತರರ ಅಭಿನಯವೂ ಉತ್ತಮವಾಗಿದೆ. ಈ ಕ್ರೈಂ ಥ್ರಿಲ್ಲರ್‌ 3 ಗಂಟೆ ಅವಧಿ ಹೊಂದಿದೆʼʼ ಎಂದು ತಿಳಿಸಿದ್ದಾರೆ.

ಗೆಲುವಿನ ಹಳಿಗೆ ಮರಳುತ್ತಾರಾ ರಶ್ಮಿಕಾ?

ಈಗಾಗಲೇ ವಿವಿಧ ಚಿತ್ರರಂಗಗಳ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ನಟಿಸುತ್ತಿರುವ ರಶ್ಮಿಕಾ ಅವರಿಗೆ ಇದು ಮತ್ತೊಮ್ಮೆ ಬಹುದೊಡ್ಡ ಗೆಲುವು ತಂದು ಕೊಡಲಿದೆ ಎನ್ನಲಾಗಿದೆ. ʼಅನಿಮಲ್‌ʼ, ʼಪುಷ್ಪ 2ʼ, ʼಛಾವಾʼ ಚಿತ್ರಗಳ ಮೂಲಕ ಹ್ಯಾಟ್ರಿಕ್‌ ಗೆಲುವು ಕಂಡಿದ್ದ ಕೊಡಗಿನ ಬೆಡಗಿ ರಶ್ಮಿಕಾ ಬಾಲಿವುಡ್‌ನ ʼಸಿಕಂದರ್‌ʼ ಮೂಲಕ ಸೋಲಿನ ರುಚಿ ನೋಡಿದ್ದರು. ಸಾಕಷ್ಟು ನಿರೀಕ್ಷೆಯೊಂದಿಗೆ ತೆರೆಮೇಲೆ ಬಂದಿದ್ದ ʼಸಿಕಂದರ್‌ʼ ಬಾಕ್ಸ್‌ ಆಫೀಸ್‌ನಲ್ಲಿ ಮುಗ್ಗರಿಸಿತ್ತು. ಹೀಗಾಗಿ ʼಕುಬೇರʼ ಮೂಲಕ ಅವರು ಗೆಲುವಿನ ಹಳಿಗೆ ಮರಳುತ್ತಾರೆ ಎನ್ನುವ ಲೆಕ್ಕಾಚಾರ ಜೋರಾಗಿದೆ.