ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada Serial TRP: ಟಿಆರ್​ಪಿಯಲ್ಲಿ ಮತ್ತೆ ಕಿಂಗ್ ಆದ ಕರ್ಣ: ಈ ಬಾರಿಯೂ ಬಂತು ಡಬಲ್ ಡಿಜಿಟ್

ಮೊದಲ ವಾರ ಕರ್ಣ ಧಾರಾವಾಹಿಗೆ ಅರ್ಬನ್‌ + ರೂರಲ್‌ನಲ್ಲಿ 10.2 ಟಿವಿಆರ್‌, ರೂರಲ್‌ನಲ್ಲಿ 11.5 ಟಿವಿಆರ್‌ ಹಾಗೂ ಅರ್ಬನ್‌ನಲ್ಲಿ 8.9 ಟಿವಿಆರ್‌ ಲಭಿಸಿತ್ತು. ಇದೀಗ ಎರಡನೇ ವಾರ ಕರ್ಣ ಸೀರಿಯಲ್‌ ಅರ್ಬನ್‌ + ರೂರಲ್‌ನಲ್ಲಿ 10.4 ಟಿವಿಆರ್‌, ರೂರಲ್ ಮಾರ್ಕೆಟ್‌ನಲ್ಲಿ 11.9 ಟಿವಿಆರ್‌ ಹಾಗೂ ಅರ್ಬನ್‌ನಲ್ಲಿ 8.9 ಟಿವಿಆರ್‌ ದಾಖಲಿಸಿದೆ.

ಟಿಆರ್​ಪಿಯಲ್ಲಿ ಮತ್ತೆ ಕಿಂಗ್ ಆದ ಕರ್ಣ

Karna Serial

Profile Vinay Bhat Jul 18, 2025 7:26 AM

ಕನ್ನಡ ಕಿರುತೆರೆಯಲ್ಲಿ (Kannada Serial) ಸೀರಿಯಲ್​ಗಳ ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್​​ಪಿ ಮೂಲಕ ತಿಳಿಯಲಿದೆ. ಇದೀಗ 27ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಈ ವಾರದ ವಿಶೇಷ ಎಂದರೆ, ಝೀ ಕನ್ನಡದಲ್ಲಿ ಇತ್ತೀಚೆಗಷ್ಟೆ ಪ್ರಾರಂಭವಾದ ಕರ್ಣ ಧಾರಾವಾಹಿ ಕಿರುತೆರೆ ಲೋಕದಲ್ಲಿ ಸತತ ಎರಡನೇ ವಾರವೂ ನಂಬರ್ ಒನ್ ಆಗಿ ಹೊರಹೊಮ್ಮಿದೆ.

ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿ ಜೂನ್ 16 ಸೋಮವಾರದಿಂದ ರಾತ್ರಿ 8 ಗಂಟೆಯಿಂದ ಪ್ರಸಾರ ಕಾಣಬೇಕಿತ್ತು. ಆದರೆ, ಅದೇ ದಿನ ಪ್ರಸಾರಕ್ಕೆ ಸ್ಟೇ ಆರ್ಡರ್‌ ಬಂತು. ಬಳಿಕ ತನ್ನೆಲ್ಲ ಲೀಗಲ್‌ ಸಮಸ್ಯೆಯನ್ನ ಬಗೆಹರಿಸಿಕೊಂಡು ಜುಲೈ 3ನೇ ತಾರೀಖಿನಿಂದ ಅಂದರೆ ಗುರುವಾರದಿಂದಲೇ ಪ್ರಸಾರ ಆರಂಭಿಸಿತು. ಸಾಮಾನ್ಯವಾಗಿ ಹೊಸ ಧಾರಾವಾಹಿಗಳು ಸೋಮವಾರದಿಂದ ಶುರುವಾಗುತ್ತವೆ. ಆದರೆ, ಕರ್ಣ ಲೇಟ್ ಆದರೂ ಲೇಟೆಸ್ಟ್ ಆಗಿ ಎಂಟ್ರಿ ಕೊಟ್ಟ.. ಜೊತೆಗೆ ಮೊದಲ ವಾರವೇ ಟಿಆರ್​ಪಿಯಲ್ಲಿ ದಾಖಲೆಯನ್ನೂ ಬರೆದ.

ಮೊದಲ ವಾರ ಕರ್ಣ ಧಾರಾವಾಹಿಗೆ ಅರ್ಬನ್‌ + ರೂರಲ್‌ನಲ್ಲಿ 10.2 ಟಿವಿಆರ್‌, ರೂರಲ್‌ನಲ್ಲಿ 11.5 ಟಿವಿಆರ್‌ ಹಾಗೂ ಅರ್ಬನ್‌ನಲ್ಲಿ 8.9 ಟಿವಿಆರ್‌ ಲಭಿಸಿತ್ತು. ಇದೀಗ ಎರಡನೇ ವಾರ ಕರ್ಣ ಸೀರಿಯಲ್‌ ಅರ್ಬನ್‌ + ರೂರಲ್‌ನಲ್ಲಿ 10.4 ಟಿವಿಆರ್‌, ರೂರಲ್ ಮಾರ್ಕೆಟ್‌ನಲ್ಲಿ 11.9 ಟಿವಿಆರ್‌ ಹಾಗೂ ಅರ್ಬನ್‌ನಲ್ಲಿ 8.9 ಟಿವಿಆರ್‌ ದಾಖಲಿಸಿದೆ. ಆ ಮೂಲಕ ಕರ್ನಾಟಕದಲ್ಲಿ ಮತ್ತೊಮ್ಮೆ ಕರ್ಣ ನಂಬರ್ 1 ಪಟ್ಟ ಪಡೆದಿದ್ದಾನೆ. ಧಾರಾವಾಹಿಗಳು ಎರಡಂಕಿ ಟಿಆರ್‌ಪಿ ಪಡೆಯೋದು ಬಹಳ ಅಪರೂಪ. ಅಂಥದ್ರಲ್ಲಿ ಕರ್ಣ ಸತತ ಎರಡು ವಾರ ಡಬಲ್ ಡಿಜಿಟ್ ದಾಟಿರುವುದು ಸಾಧನೆಯೇ ಎನ್ನಬಹುದು.

Bhagya Lakshmi Serial: ಕೊನೆಗೂ ನಿಂತೇ ಹೋಯಿತು ಪೂಜಾ-ಕಿಶನ್ ಮದುವೆ: ನಿಲ್ಲಿಸಿದ್ದು ಸ್ವತಃ ಭಾಗ್ಯ

ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಯಲ್ಲಿ ಈಗಾಗಲೇ ದೊಡ್ಡ ತಾರೆಯರ ದಂಡೇ ಇದೆ. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್‌ ನಟಿಸುತ್ತಿದ್ದಾರೆ.