ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

PM Narendra Modi: ಹೃದಯ ಶಸ್ತ್ರ ಚಿಕಿತ್ಸೆ ಪಡೆದ ಮಕ್ಕಳ ಅತಿದೊಡ್ಡ ಸಮಾವೇಶ; ನರೇಂದ್ರ ಮೋದಿ ಸಂವಾದ

ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆದಿರುವ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಕ್ಕಳ ಅತಿದೊಡ್ಡ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂವಾದ ನಡೆಸಿದ್ದಾರೆ. ಉಚಿತವಾಗಿ ಜೀವ ಉಳಿಸುವ ಹೃದಯ ಶಸ್ತ್ರಚಿಕಿತ್ಸೆಗಳನ್ನು ಪಡೆದ ವಿವಿಧ ವಯೋಮಾನದ 2,500 ಮಕ್ಕಳು ಸಂವಾದದಲ್ಲಿ ಭಾಗವಹಿಸಿದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ʼʼನಾವು 2047ರ ವೇಳೆಗೆ 'ವಿಕಸಿತ ಭಾರತ' ರೂಪಿಸಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಎಲ್ಲ ರಾಜ್ಯಗಳೂ ಆ ದಿಕ್ಕಿನಲ್ಲಿ ಸಾಗುತ್ತಿವೆ. ನಮ್ಮ ಭವಿಷ್ಯ ಎನಿಸಿರುವ ನಮ್ಮ ಯುವ ಪೀಳಿಗೆ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆʼʼ ಎಂದು ತಿಳಿಸಿದರು.

ಹೃದಯ ಶಸ್ತ್ರ ಚಿಕಿತ್ಸೆ ಪಡೆದ ಮಕ್ಕಳ ಅತಿದೊಡ್ಡ ಸಮಾವೇಶ

-

Profile Siddalinga Swamy Nov 1, 2025 10:47 PM

ರಾಯ್‌ಪುರ: ಛತ್ತೀಸ್‌ಗಢದ ನವ ರಾಯ್‌ಪುರದಲ್ಲಿ ಗಿನ್ನೆಸ್ ವಿಶ್ವ ದಾಖಲೆ ಬರೆದಿರುವ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಕ್ಕಳ ಅತಿದೊಡ್ಡ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಂವಾದ ನಡೆಸಿದ್ದಾರೆ. ಉಚಿತವಾಗಿ ಜೀವ ಉಳಿಸುವ ಹೃದಯ ಶಸ್ತ್ರಚಿಕಿತ್ಸೆಗಳನ್ನು ಪಡೆದ ವಿವಿಧ ವಯೋಮಾನದ 2,500 ಮಕ್ಕಳು ಸಂವಾದದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ʼʼನಾವು 2047ರ ವೇಳೆಗೆ 'ವಿಕಸಿತ ಭಾರತ' ರೂಪಿಸಬೇಕೆನ್ನುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಿವೆ. ಎಲ್ಲ ರಾಜ್ಯಗಳೂ ಆ ದಿಕ್ಕಿನಲ್ಲಿ ಸಾಗುತ್ತಿವೆ. ನಮ್ಮ ಭವಿಷ್ಯ ಎನಿಸಿರುವ ನಮ್ಮ ಯುವ ಪೀಳಿಗೆ ಆರೋಗ್ಯವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಗಳನ್ನು ಮಾಡಲಾಗುತ್ತಿದೆʼʼ ಎಂದು ಹೇಳಿದರು.

PM Narendra Modi 1

ಶ್ರೀ ಸತ್ಯ ಸಾಯಿ ಸಂಜೀವಿನಿ ಮಕ್ಕಳ ಹೃದಯ ಆರೈಕೆ ಕೇಂದ್ರಗಳ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದರು. ಬಳಿಕ ಮಾತನಾಡಿದ ಸದ್ಗುರು, ʼʼಪುಟ್ಟ ಹೃದಯಗಳ ಲಯವನ್ನು ಪುನಃಸ್ಥಾಪಿಸಲು ಸಹಾನುಭೂತಿಯೇ ಏಕೈಕ ಮಾರ್ಗʼ ಎಂದು ಹೇಳಿದರು. ನಿಜವಾದ ದೃಷ್ಟಿಕೋನವು ರಾಷ್ಟ್ರದ ನಿರ್ಣಾಯಕ ಸ್ತಂಭಗಳನ್ನು ಹೇಗೆ ಬಲಪಡಿಸುತ್ತದೆ ಎಂಬುದನ್ನು ಉದಾಹರಣೆಯಾಗಿಟ್ಟುಕೊಂಡು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.

PM Narendra Modi 3

ಪ್ರಧಾನಿ ನರೇಂದ್ರ ಮೋದಿ ಅವರ ಎಕ್ಸ್‌ ಪೋಸ್ಟ್‌:



ನವ ರಾಯ್‌ಪುರದ ಶ್ರೀ ಸತ್ಯ ಸಾಯಿ ಸಂಜೀವನಿ ಮಕ್ಕಳ ಹೃದಯ ಆರೈಕೆ ಕೇಂದ್ರವು, 'ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ' ದ ಅತಿದೊಡ್ಡ ಮಕ್ಕಳ ಹೃದಯ ಆರೈಕೆ ಆಸ್ಪತ್ರೆಗಳ ಸರಪಳಿಯ ಭಾಗವಾಗಿದೆ. ಹುಟ್ಟಿನಿಂದಲೇ ಹೃದಯ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸುಧಾರಿತ ಮತ್ತು ವಿಶ್ವ ದರ್ಜೆಯ ಹೃದಯ ಆರೈಕೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಎಲ್ಲರಿಗೂ ಉಚಿತ ಚಿಕಿತ್ಸಾ ಸೇವೆಯು, ವಿಶ್ವ ದರ್ಜೆಯ ಮತ್ತು ಸಮಾನ ಹೃದಯ ಆರೈಕೆಯ ಕಡೆಗೆ 'ಒಂದು ಜಗತ್ತು ಒಂದು ಕುಟುಂಬ ಸೇವಾ ಅಭಿಯಾನ'ದ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಈ ಮಿಷನ್ ಇಲ್ಲಿಯವರೆಗೆ ಭಾರತ ಮತ್ತು ಅದರಾಚೆಗೆ ಜನ್ಮಜಾತ ಹೃದಯ ಸಮಸ್ಯೆಗಳನ್ನು ಹೊಂದಿರುವ 37,000ಕ್ಕೂ ಹೆಚ್ಚು ಮಕ್ಕಳಿಗೆ ಚಿಕಿತ್ಸೆ ನೀಡಿದೆ. ಇದಕ್ಕೆ ಯಾವುದೇ ಮಿತಿಗಳು ಇಲ್ಲವಾಗಿದ್ದು, ಸಹಾನುಭೂತಿಯ ಶಕ್ತಿಯನ್ನು ನೆನಪಿಸುತ್ತದೆ.‌

ಈ ಸುದ್ದಿಯನ್ನೂ ಓದಿ | Sadguru Sri Madhusudan Sai: ರೈತರಿಗೆ ಸತ್ಯ ಸಾಯಿ ವಿವಿ ಕೌಶಲ್ಯ ಪ್ರಮಾಣ ಪತ್ರ: ಸದ್ಗುರು ಶ್ರೀ ಮಧುಸೂದನ ಸಾಯಿ ಘೋಷಣೆ

'ವಸುಧೈವ ಕುಟುಂಬಕಂ' ಆಶಯದ ಭಾಗವಾಗಿರುವ ಆರೋಗ್ಯ ರಕ್ಷಣೆಯು ಒಂದು ಸವಲತ್ತು ಅಲ್ಲ, ಹಕ್ಕು ಎಂಬ ಆದರ್ಶವನ್ನು ನಿಜವಾಗಿಯೂ ಪ್ರತಿಧ್ವನಿಸುವ ಒಂದು ಮೈಲಿಗಲ್ಲನ್ನು ಸಂಭ್ರಮಿಸುವ ಈ ಕಾರ್ಯಕ್ರಮದಲ್ಲಿ ಸೇವಾ ಅಭಿಯಾನದ ಖ್ಯಾತ ಪೋಷಕರಾದ ಡಾ. ಸಿ. ಶ್ರೀನಿವಾಸ್, ಮಾಜಿ ಕ್ರಿಕೆಟ್ ಆಟಗಾರ ಸುನಿಲ್ ಗವಾಸ್ಕರ್, ಹಿರಿಯರಾದ ವಿವೇಕ್ ನಾರಾಯಣ್ ಗೌರ್, ಬಿ.ಎನ್. ನರಸಿಂಹಮೂರ್ತಿ ಹಾಗೂ ವಿ. ಕೃಷ್ಣನ್ ಪಾಲ್ಗೊಂಡಿದ್ದರು.