"ಚುನಾವಣಾ ಕಣಕ್ಕಳಿಯಲು ಮಗಳೇ ಕಾರಣ"; ನ್ಯಾಯಕ್ಕಾಗಿ ಸ್ಪರ್ಧಿಸಿದ್ದ ಆರ್ಜಿ ಕರ್ ಸಂತ್ರಸ್ತೆಯ ತಾಯಿ ಮುನ್ನಡೆ
ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟ ಯುವತಿಯ ತಾಯಿ ರತ್ನ ದೇಬ್ನಾಥ್ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಪಾಣಿಹಟಿ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ತೃಣಮೂಲ ಕಾಂಗ್ರೆಸ್ನ ತೀರ್ಥಂಕರ ಘೋಷ್ ಅವರು ಹಿನ್ನಡೆಯಲ್ಲಿದ್ದಾರೆ.
ಸಂಗ್ರಹ ಚಿತ್ರ -
ಕೊಲ್ಕತ್ತಾ: ಆರ್ಜಿ ಕರ್ ವೈದ್ಯಕೀಯ ( RG Kar Physical Assault) ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲ್ಲಲ್ಪಟ್ಟ (West Bengal Assembly Election) ಯುವತಿಯ ತಾಯಿ ರತ್ನ ದೇಬ್ನಾಥ್ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದು, ವಿಧಾನಸಭಾ ಚುನಾವಣೆಯಲ್ಲಿ ಪಾಣಿಹಟಿ ಕ್ಷೇತ್ರದಲ್ಲಿ ಮುನ್ನಡೆಯಲ್ಲಿದ್ದಾರೆ. ತೃಣಮೂಲ ಕಾಂಗ್ರೆಸ್ನ ತೀರ್ಥಂಕರ ಘೋಷ್ ಅವರು ಹಿನ್ನಡೆಯಲ್ಲಿದ್ದಾರೆ. ಎರಡನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ ಆರ್ಜಿ ಕರ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯ ತಂದೆ ಶೇಖರ್ ರಂಜನ್ ದೇಬ್ನಾಥ್ ಮತ ಚಲಾಯಿಸಿದರು. ಈ ವೇಳೆ ತಮ್ಮ ಕುಟುಂಬದ ಪರಿಸ್ಥಿತಿಯನ್ನು ವಿವರಿಸುತ್ತಾ ಕಣ್ಣೀರು ಹಾಕಿದ್ದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಶೇಖರ್ ರಂಜನ್ ದೇಬ್ನಾಥ್ ಭಾವುಕರಾದರು. ನಮ್ಮ ಮಗಳಿಗೆ ನ್ಯಾಯ ಸಿಗಲು ಈ ದಾರಿಯನ್ನು (ರಾಜಕೀಯ) ಆರಿಸಿಕೊಳ್ಳಬೇಕಾಗಿ ಬಂದಿದೆ. ಆದರೆ ನಾವು ಈ ಹೋರಾಟದಲ್ಲಿ ಗೆಲ್ಲುತ್ತೇವೆ ಮತ್ತು ನಮ್ಮ ಮಗಳಿಗೆ ಖಂಡಿತಾ ನ್ಯಾಯ ಸಿಗುತ್ತದೆ ಎಂಬ ನಂಬಿಕೆ ಇದೆ. ನಾವು ಸಾರ್ವಜನಿಕರ ಬೆಂಬಲದೊಂದಿಗೆ ಇದ್ದೇವೆ ಎಂದು ನೋವಿನಿಂದ ಹೇಳಿದ್ದರು. ತಮ್ಮ ಪ್ರಚಾರದುದ್ದಕ್ಕೂ ಮಹಿಳಾ ಸುರಕ್ಷತೆಯ ಕುರಿತು ಅವರು ಮಾತನಾಡಿದ್ದರು. ಪನಿಹಟಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಅವರು ಚುನಾವಣೆಯನ್ನು ಸಾಂಪ್ರದಾಯಿಕ ರಾಜಕೀಯ ಸ್ಪರ್ಧೆಯಾಗಿ ಅಲ್ಲ, ಬದಲಾಗಿ "ನ್ಯಾಯಕ್ಕಾಗಿ ಹೋರಾಟ" ಎಂದು ಹೇಳಿದ್ದರು.
2024 ರ ಆಗಸ್ಟ್ 9 ರಂದು ಕೋಲ್ಕತ್ತಾದ ಸರ್ಕಾರಿ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣವು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಆಕೆಯ ಶವ ಆಸ್ಪತ್ರೆಯ ಸೆಮಿನಾರ್ ಕೊಠಡಿಯಲ್ಲಿ ಪತ್ತೆಯಾದ ಬಳಿಕ, ಕೋಲ್ಕತ್ತಾ ಪೊಲೀಸರೊಂದಿಗೆ ಸಂಬಂಧ ಹೊಂದಿದ್ದ ನಾಗರಿಕ ಸ್ವಯಂಸೇವಕ ಸಂಜಯ್ ರಾಯ್ ಎಂಬಾತನನ್ನು ಬಂಧಿಸಲಾಗಿತ್ತು. ಈ ಘಟನೆ ಬಳಿಕ ಇಡೀ ದೇಶಾದ್ಯಂತ ಹೋರಾಟ, ಮುಷ್ಕರಗಳು ನಡೆದಿದ್ದವು. ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಈ ಕೇಸ್ ಭಾರೀ ಮುಜುಗರವನ್ನು ತಂದಿತ್ತು. . ಕೊಲ್ಕತ್ತಾ ಹೈಕೋರ್ಟ್ ಆದೇಶದಂತೆ ಪ್ರಕರಣದ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ (ಸಿಬಿಐ) ವರ್ಗಾಯಿಸಲಾಗಿತ್ತು. ಇದೀಗ ಅದೇ ಪ್ರಕರಣದ ಸಂತ್ರಸ್ತೆಯ ಕುಟುಂಬವು ಚುನಾವಣಾ ಅಖಾಡದ ಮೂಲಕ ನ್ಯಾಯಕ್ಕಾಗಿ ಹೋರಾಡುತ್ತಿದೆ.
'ನೆಲಕ್ಕೆ ಬಿದ್ದ TMC' ; ಬಂಗಾಳದಲ್ಲಿ ಬಿಜೆಪಿ ಗೆಲುವಿನ ಓಟದ ಕುರಿತು ಸುವೇಂದು ಅಧಿಕಾರಿ ಹೇಳಿದ್ದೇನು?
ಇದು ರತ್ನ ದೇಬ್ನಾಥ್ ಅವರ ಚುನಾವಣಾ ರಾಜಕೀಯಕ್ಕೆ ಮೊದಲ ಪ್ರವೇಶವಾಗಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ , ಪಣಿಹಟಿ ಸ್ಥಾನವನ್ನು ಟಿಎಂಸಿಯ ನಿರ್ಮಲ್ ಘೋಷ್ ಗೆದ್ದರು , ಅವರು ಬಿಜೆಪಿಯ ಸೈಕತ್ ರಾಜ್ಯವನ್ನು 14,177 ಮತಗಳ ಅಂತರದಿಂದ ಸೋಲಿಸಿದ್ದರು.