Daily Horoscope: ಇಂದು ಈ ರಾಶಿಯವರ ಮೇಲೆ ಕೇತು ಪ್ರಭಾವ; ಯಾರಿಗೆ ಒಳಿತು? ಯಾರಿಗೆ ಕೆಡುಕು?
ವಿಶ್ವವಸು ನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಸಪ್ತಮಿ ತಿಥಿ, ಮೂಲ ನಕ್ಷತ್ರದ ಸೆಪ್ಟೆಂಬರ್ 29ನೇ ತಾರೀಕಿನ ಈ ದಿನ ನವರಾತ್ರಿಯ ಏಂಟನೇ ದಿನ ಈ ದಿನದ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

Daily Horoscope -

ಬೆಂಗಳೂರು: ವಿಶ್ವ ವಸುನಾಮ ಸಂವತ್ಸರದ ದಕ್ಷಿಣಾಯನ ವರ್ಷ ಋತು ಆಶ್ವಯುಜ ಮಾಸದ ಶುಕ್ಷ ಪಕ್ಷದ, ಸಪ್ತಮಿ ತಿಥಿ, ಮೂಲ ನಕ್ಷತ್ರದ ಸೆಪ್ಟೆಂಬರ್ 29ನೇ ತಾರೀಖಿನ ಸೋಮವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿ ಭವಿಷ್ಯದ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.
ಮೇಷ ರಾಶಿ: ಇಂದು ಮೂಲ ನಕ್ಷತ್ರ ಇದ್ದು, ಇದರ ಅಧಿಪತಿ ಕೇತು ಆಗಿದ್ದಾನೆ. ಆದ್ದರಿಂದ ಎಲ್ಲ ರಾಶಿಯವರಿಗೂ ಅತೀ ಹೆಚ್ಚಾಗಿ ಪರಿಣಾಮ ಬೀರುವ ಸಾಧ್ಯತೆ ಇದೆ. ಯಾವುದೇ ವಿಚಾರದಲ್ಲಿ ಅಷ್ಟೊಂದು ಆಸಕ್ತಿ ನಿಮಗೆ ಇರುವುದಿಲ್ಲ. ಹೀಗಾಗಿ ಎಲ್ಲ ರಾಶಿಯವರಿಗೂ ಕೇತುವಿನ ಪ್ರಭಾವ ಇದೆ. ಮೇಷ ರಾಶಿಯವರಿಗೆ ಇಂದು ಅದೃಷ್ಟದ ದಿನ. ಮನಸ್ಸಿಗೆ ನೆಮ್ಮದಿ ಇದ್ದು ಹಿಂದಿನ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅದೇ ರೀತಿ ಉತ್ತಮ ಮಾರ್ಗದರ್ಶನ ಕೂಡ ನಿಮಗೆ ಸಿಗಲಿದೆ. ಆದರೆ ಭಗವಂತನ ಆಶೀರ್ವಾದ ಪಡೆಯುವುದನ್ನು ಮರಿಬೇಡಿ.
ವೃಷಭ ರಾಶಿ: ಇಂದು ವೃಷಭ ರಾಶಿಯವರ ಮನಸ್ಸಿಗೆ ಕ್ಷೇಷ ಮೂಡಬಹುದು. ಮುಖ್ಯವಾದ ವಿಚಾರದಲ್ಲಿ ಯಾವುದೇ ನಿರ್ಧಾರ ಬೇಡ. ನಿಮ್ಮ ಪ್ರೀತಿ ಪಾತ್ರರಿಂದ ಯಾವುದೇ ಅಕ್ಕರೆ ಇಂದು ಪ್ರಾಪ್ತಿಯಾಗುವುದಿಲ್ಲ
ಮಿಥುನ ರಾಶಿ: ಮಿಥುನ ರಾಶಿಯಲ್ಲಿರುವವರಿಗೆ ಅತ್ಯುತ್ತಮ ದಿನವಾಗಲಿದೆ. ಮನಸ್ಸಿಗೆ ಅತೀ ಹೆಚ್ಚಿನ ನೆಮ್ಮದಿ ಸಿಗುತ್ತದೆ. ನಿಮ್ಮ ಮಿತ್ರರು, ಜೀವನ ಸಂಗಾತಿಯಿಂದ ನೆಮ್ಮದಿ ಸಿಗುತ್ತದೆ.
ಕಟಕ ರಾಶಿ: ಕಟಕ ರಾಶಿಯವರಿಗೆ ಇಂದು ಅತ್ಯುತ್ತಮ ದಿನವಾಗಲಿದೆ. ಸಾಮಾಜಿಕ ವಿಚಾರದಲ್ಲಿ ಜಯ ಪ್ರಾಪ್ತಿಯಾಗುತ್ತದೆ. ಆದರೆ ನಿಮ್ಮ ವೈರಿಗಳಿಂದ ಜಾಗೃತರಾಗಿದ್ದರೆ ಉತ್ತಮ.
ಸಿಂಹ ರಾಶಿ: ಸಿಂಹ ರಾಶಿಯವರಿಗೆ ನಾನಾ ರೀತಿಯ ಯೋಚನೆಗಳು ಇಂದು ಕಾಡುತ್ತವೆ. ಮನಸ್ಸಿಗೆ ಕ್ಷೇಷ ಇರುತ್ತದೆ. ನಿಮಗೆ ಬೇಕಾದಂತಹ ಪ್ರೀತಿ, ಸೌಹಾರ್ದತೆ ಯಾರಿಂದಲೂ ಪ್ರಾಪ್ತಿಯಾಗುವುದಿಲ್ಲ. ಮಕ್ಕಳಿದ್ದ ಪೋಷಕರಿಗೆ ಸ್ವಲ್ಪ ಹೆಚ್ಚು ತೊಂದರೆಯಾಗಬಹುದು. ಆದ್ದರಿಂದ ನಿಮ್ಮ ಬುದ್ದಿಯನ್ನು ಉಪಯೋಗಿಸಿಕೊಂಡು ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬೇಕಾಗುತ್ತದೆ.
ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಸ್ವಲ್ಪ ಕಷ್ಟದ ದಿನ ಆಗಿದೆ. ಮುಖ್ಯವಾದ ಕೆಲಸದಲ್ಲಿ ಯಾವುದೇ ನಿರ್ಧಾರ ಮಾಡಬೇಡಿ. ವ್ಯವಹಾರದಲ್ಲಿ ಪ್ರಗತಿ ಇರಬಹುದು. ಆದರೆ ಕೋರ್ಟ್, ಕಚೇರಿ ವ್ಯವಹಾರದ ಸಮಸ್ಯೆಯಲ್ಲಿ ಇದ್ದವರಿಗೆ ಕಷ್ಟವಾಗಬಹುದು.
ಇದನ್ನು ಓದಿ:Vastu Tips: ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಚಿತ್ರ ಇಡಬಹುದೇ? ಏನು ಹೇಳುತ್ತದೆ ವಾಸ್ತು?
ತುಲಾ ರಾಶಿ: ತುಲಾ ರಾಶಿಯವರಿಗೆ ಅತ್ಯುತ್ತಮ ದಿನವಾಗಲಿದೆ. ಸಾಮಾಜಿಕ ಕೆಲಸಗಳಲ್ಲಿ ಅತ್ಯುತ್ತಮ ದಿನ. ಸೋಶಿಯಲ್ ಮೀಡಿಯಾ ಬಳಕೆದಾರರಿಗೆ ಒಳಿತಾಗಲಿದೆ. ಇಂದು ಆತ್ಮವಿಶ್ವಾಸ ಕೂಡ ತುಂಬಾ ಚೆನ್ನಾಗಿ ಇರಲಿದೆ.
ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರಿಗೆ ಸಂಸಾರದ ವಿಚಾರದ ಬಗ್ಗೆ ಹೆಚ್ಚಿನ ಗಮನವನ್ನು ನೀಡ ಬೇಕು. ಮನೆಯ ಕುಟುಂಬದ ಬಗ್ಗೆ ಹೆಚ್ಚಿನ ಗಮನ ನೀಡಿ. ಯಾರ ಜತೆ ವಾಸ ಮಾಡುತ್ತೀರಿ ಅವರಿಗೆ ಹೆಚ್ಚಿನ ಗಮನ, ಅಕ್ಕರೆ ನೀಡಬೇಕಾಗುತ್ತದೆ.
ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಇಂದು ನಿಮ್ಮ ರಾಶಿಗೆ ಚಂದ್ರ ಬಂದಿರುವುದರಿಂದ ನಿಮ್ಮ ಮನಸ್ಸಿನ ಸಮಸ್ಯೆ, ಸಂದೇಹ ಎಲ್ಲವೂ ದೂರವಾಗಲಿದೆ. ಮುಂದಿನ ದಿನಕ್ಕೆ ಬೇಕಾದ ಮಾರ್ಗದರ್ಶನ ಇಂದು ಪ್ರಾಪ್ತಿಯಾಗುತ್ತದೆ.
ಮಕರ ರಾಶಿ: ಮಕರ ರಾಶಿಯವರಿಗೆ ಕಷ್ಟದ ದಿನವಾಗಲಿದೆ. ಆರೋಗ್ಯದಲ್ಲಿ ಸಮಸ್ಯೆ ಉಂಟಾಗಬಹುದು. ಮುಖ್ಯವಾದ ವಿಚಾರದಲ್ಲಿ ಯಾವುದೆ ನಿರ್ಧಾರ ಬೇಡ. ಹಾಗಾಗಿ ಎರಡು ದಿನ ಕಾದರೆ ಒಳ್ಳೆಯದು.
ಕುಂಭರಾಶಿ: ಕುಂಭ ರಾಶಿಯವರಿಗೆ ಉತ್ತಮ ದಿನ. ಮಿತ್ರರಿಂದ ಸಹಕಾರ ಸಿಗಲಿದೆ. ಮನಸ್ಸಿಗೆ ನೆಮ್ಮದಿ ಸಿಗಲಿದ್ದು, ಇಷ್ಟಾರ್ಥ ಸಿದ್ಧಿಯಾಗಲಿದೆ. ಕಾರ್ಯ ಕ್ಷೇತ್ರದಲ್ಲಿ ಅತೀ ಹೆಚ್ಚಿನ ಯಶಸ್ಸು ಸಿಗಲಿದೆ.
ಮೀನ ರಾಶಿ: ಮೀನ ರಾಶಿಯವರಿಗೆ ಕರ್ತ್ಯವ ದ ಬಗ್ಗೆ ಹೆಚ್ಚಿನ ಜವಾಬ್ದಾರಿ ನೀಡಬೇಕಾಗುತ್ತದೆ. ಕಾರ್ಯ ಕ್ಷೇತ್ರದಲ್ಲಿ ಹೆಚ್ಚಿನ ಜವಾಬ್ದಾರಿ ಬೇಕಾಗುತ್ತದೆ. ಹೀಗಾಗಿ ಭಗವಂತನ ಧ್ಯಾನದಿಂದ ಯಶಸ್ಸು ಕಾಣಬಹುದು. ಹಾಗಾಗಿ ಭಗವಂತನ ಆಶೀರ್ವಾದ ಪಡೆಯಲು ಮರೆಯಬೇಡಿ. ನವರಾತ್ರಿ ಉತ್ಸವದ ಈ ದಿನ ಎಲ್ಲ ರಾಶಿಯವರು ದೇವಿಯ ಆರಾಧನೆ ಮಾಡಿ.