ಕೇವಲ 5 ದಿನಗಳಲ್ಲಿ 4 ಹಿಮಾಲಯ ಶಿಖರಗಳನ್ನು ಏರಿದ 'ಬ್ಯಾಡ್ನೀಸ್ಗುರು' ಸಿದ್ಧಾರ್ಥ್ ಉನಿಯಾಲ್!
ಬ್ಯಾಡ್ನೀಸ್ಗುರು ಎಂದು ಜನಪ್ರಿಯರಾಗಿರುವ ಸಿದ್ಧಾರ್ಥ್ ಉನಿಯಾಲ್, ಬೆಂಗಳೂರಿನ ಸಾಹಸ ಸಂಸ್ಥೆಯಾದ ಟ್ರೆಕ್ನೊಮಾಡ್ಸ್ (TrekNomads) ಸಹಯೋಗದಲ್ಲಿ ಕೇವಲ 5 ದಿನ 5 ಗಂಟೆಗಳಲ್ಲಿ 6,000 ಮೀಟರ್ಗಿಂತ ಹೆಚ್ಚಿನ ಎತ್ತರದ ನಾಲ್ಕು ಹಿಮಾಲಯ ಶಿಖರಗಳನ್ನು ಯಶಸ್ವಿಯಾಗಿ ಏರಿದ್ದಾರೆ.
ಬಹು-ಶಿಖರ ಹಿಮಾಲಯ ಸವಾಲು ಪೂರ್ಣಗೊಳಿಸಿದ ಬ್ಯಾಡ್ನೀಸ್ಗುರು -
ಬೆಂಗಳೂರು: ಧೈರ್ಯ, ಸ್ಥೈರ್ಯ ಮತ್ತು ಮಾನವ ಸಹಿಷ್ಣುತೆಯ ಸ್ಫೂರ್ತಿದಾಯಕ ಕಥೆಯಲ್ಲಿ “ಬ್ಯಾಡ್ನೀಸ್ಗುರು” ಎಂದು ಜನಪ್ರಿಯರಾಗಿರುವ ಸಿದ್ಧಾರ್ಥ್ ಉನಿಯಾಲ್, ಬೆಂಗಳೂರಿನ ಸಾಹಸ ಸಂಸ್ಥೆಯಾದ ಟ್ರೆಕ್ನೊಮಾಡ್ಸ್ (TrekNomads) ಸಹಯೋಗದಲ್ಲಿ ಕೇವಲ 5 ದಿನ 5 ಗಂಟೆಗಳಲ್ಲಿ 6,000 ಮೀಟರ್ಗಿಂತ ಹೆಚ್ಚಿನ ಎತ್ತರದ ನಾಲ್ಕು ಹಿಮಾಲಯ ಶಿಖರಗಳನ್ನು ಯಶಸ್ವಿಯಾಗಿ ಏರಿದ್ದಾರೆ.
“ಪ್ರಾಜೆಕ್ಟ್ ಬ್ಯಾಡ್ನೀಸ್” ಎಂಬ ಹೆಸರಿನ ಈ ಅಭಿಯಾನವು ನೇಪಾಳದ ಅತ್ಯಂತ ಸವಾಲಿನ ಟ್ರೆಕ್ಕಿಂಗ್ ಶಿಖರಗಳಲ್ಲಿ ಸತತ ಏರಿಕೆಗಳನ್ನು ಒಳಗೊಂಡಿದ್ದು, ಇತ್ತೀಚಿನ ವರ್ಷಗಳಲ್ಲಿ ನಡೆದ ಅತ್ಯಂತ ಅಪರೂಪದ ಮತ್ತು ವೇಗದ ಬಹು-ಶಿಖರ ಹಿಮಾಲಯ ಸಾಹಸಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.
ಜೂ.4, 5 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕ್ರೀಡಾಕೂಟ
ಯಶಸ್ವಿಯಾಗಿ ಏರಲಾದ ಶಿಖರಗಳು
ನಿರೇಖಾ ಶಿಖರ (6,159 ಮೀ.) – ಮೇ 11, 2026 ಬೆಳಿಗ್ಗೆ 9:08
ಲೋಬುಚೆ ಶಿಖರ (6,119 ಮೀ.) – ಮೇ 13, 2026 ಮಧ್ಯಾಹ್ನ 12:30
ಐಲ್ಯಾಂಡ್ ಶಿಖರ (6,189 ಮೀ.) – ಮೇ 15, 2026 ಮಧ್ಯಾಹ್ನ 3:11
ಮೇರಾ ಶಿಖರ (6,476 ಮೀ.) – ಮೇ 16, 2026 ಮಧ್ಯಾಹ್ನ 2:07
ಮೊದಲ ಶಿಖರಾರೋಹಣದಿಂದ ಅಂತಿಮ ಶಿಖರ ತಲುಪುವವರೆಗೆ ಸಂಪೂರ್ಣ ಅಭಿಯಾನವನ್ನು ಕೇವಲ 5 ದಿನ 5 ಗಂಟೆಗಳಲ್ಲಿ ಪೂರ್ಣಗೊಳಿಸಲಾಯಿತು. ತೀವ್ರ ಹಿಮಾಲಯದ ಹವಾಮಾನ, ಬಿರುಗಾಳಿ, ಗಡ್ಡೆಗಟ್ಟುವ ಚಳಿ ಮತ್ತು ದೃಶ್ಯತೆ ಕಡಿಮೆಯಿಂದ ಉಂಟಾದ ಹೆಲಿಕಾಪ್ಟರ್ ವಿಳಂಬಗಳ ನಡುವೆಯೂ ಈ ಸಾಧನೆ ಸಾಧ್ಯವಾಯಿತು.
ಈ ಸಾಧನೆಯನ್ನು ಇನ್ನಷ್ಟು ಅಸಾಧಾರಣವಾಗಿಸುವುದು ಸಿದ್ಧಾರ್ಥ್ ಅವರ ವೈದ್ಯಕೀಯ ಹಿನ್ನೆಲೆ. ಅವರು ಮೂರು ACL ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದು, ಗಂಭೀರ ಮೆನಿಸ್ಕಸ್ ಮತ್ತು ಕಾರ್ಟಿಲೇಜ್ ಹಾನಿ ಅನುಭವಿಸಿದ್ದಾರೆ. ಪ್ರಸ್ತುತ ಅವರ ಎಡ ಮೊಣಕಾಲಿನಲ್ಲಿ ACL ಇಲ್ಲದೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಆಶ್ಚರ್ಯಕರವಾಗಿ, ಈ ಅಭಿಯಾನ ಆರಂಭವಾಗುವುದಕ್ಕೆ ಕೇವಲ 15 ದಿನಗಳ ಮೊದಲು ಅವರ ಮೊಣಕಾಲು ಮತ್ತೆ ತಿರುಗಿ ಗಾಯಗೊಂಡಿತ್ತು, ಇದರಿಂದ ಸಂಪೂರ್ಣ ಮಿಷನ್ ಅಪಾಯಕ್ಕೆ ಸಿಲುಕಿತ್ತು.
Norway Chess 2026: 5 ಬಾರಿಯ ವಿಶ್ವ ಚಾಂಪಿಯನ್ ಮ್ಯಾಗ್ನಸ್ಗೆ ಸೋಲುಣಿಸಿದ ಪ್ರಜ್ಞಾನಂದ
ಆದಾಗ್ಯೂ, ಎಲ್ಲಾ ಅಡೆತಡೆಗಳನ್ನು ಮೀರಿ ಸಿದ್ಧಾರ್ಥ್ ಅವರು ಪೆಂಬಾ ತಾಶಿ ಶೆರ್ಪಾ ಅವರ ನೇತೃತ್ವದ ಅನುಭವಿ ಶೆರ್ಪಾಗಳು ಹಾಗೂ ಟ್ರೆಕ್ನೊಮಾಡ್ಸ್ ತಂಡದ ಮಾರ್ಗದರ್ಶನದಲ್ಲಿ ದೃಢ ಸಂಕಲ್ಪದಿಂದ ಅಭಿಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಯೋಜನೆಯಲ್ಲಿದ್ದ ಐದನೇ ಶಿಖರವಾದ ಪಾಚೆರ್ಮೊ ಶಿಖರವನ್ನು ಭಾರೀ ಹಿಮಪಾತ ಮತ್ತು ಅಸುರಕ್ಷಿತ ಪರಿಸ್ಥಿತಿಗಳ ಕಾರಣದಿಂದ ರದ್ದುಗೊಳಿಸಬೇಕಾಯಿತು.
ಅಭಿಯಾನದ ನಂತರ ಮಾತನಾಡಿದ ಸಿದ್ಧಾರ್ಥ್ ಉನಿಯಾಲ್, “ ಹೆಚ್ಚಿನ ಜನರು ತಮ್ಮ ಗಾಯಗಳಿಂದ ಸೀಮಿತರಾಗುವುದಿಲ್ಲ; ಆ ಗಾಯಗಳ ಬಗ್ಗೆ ಹೊಂದಿರುವ ಭಯವೇ ಅವರನ್ನು ಸೀಮಿತಗೊಳಿಸುತ್ತದೆ. ‘ಪ್ರಾಜೆಕ್ಟ್ ಬ್ಯಾಡ್ನೀಸ್’ ಪರ್ವತಗಳನ್ನು ಜಯಿಸುವುದರ ಬಗ್ಗೆ ಇರಲಿಲ್ಲ, ಜನರೊಳಗಿನ ಭಯವನ್ನು ಜಯಿಸಲು ಪ್ರೇರೇಪಿಸುವುದರ ಬಗ್ಗೆ ಇತ್ತು. ಏರಿಕೆಯ ವೇಳೆ ಪ್ರತಿಯೊಂದು ಹೆಜ್ಜೆಯೂ ನೋವಿನಿಂದ ಕೂಡಿದ ಕ್ಷಣಗಳು ಬಂದವು. ಆದರೆ ಕೈಬಿಡುವುದು ಸುಲಭವೆನಿಸುವ ಅಂಥ ಕ್ಷಣಗಳಲ್ಲಿಯೇ ನಿಜವಾದ ಸ್ಥೈರ್ಯ ನಿರ್ಮಾಣವಾಗುತ್ತದೆ. ಗಾಯಗೊಂಡಿರುವ ಪ್ರತಿಯೊಬ್ಬ ಕ್ರೀಡಾಪಟು ಮತ್ತು ಜೀವನದ ಹಿನ್ನಡೆಯಿಂದ ಚೇತರಿಸಿಕೊಳ್ಳುತ್ತಿರುವ ಪ್ರತಿಯೊಬ್ಬರೂ ನಿಮ್ಮ ದೇಹವು ನಿಮ್ಮ ಭಯಗಳು ನಂಬಿಸುವುದಕ್ಕಿಂತ ಬಹಳ ಹೆಚ್ಚು ಸಾಮರ್ಥ್ಯ ಹೊಂದಿದೆ ಎಂಬುದನ್ನು ತಿಳಿಯಬೇಕು .”
ಆನ್ಲೈನ್ನಲ್ಲಿ “ಬ್ಯಾಡ್ನೀಸ್ಗುರು” ಎಂದು ಪ್ರಸಿದ್ಧರಾಗಿರುವ ಸಿದ್ಧಾರ್ಥ್, ಜಾಗತಿಕ ಗಾಯ ಪುನರ್ವಸತಿ ಮತ್ತು ಕಾರ್ಯಕ್ಷಮತೆ ವೇದಿಕೆಯಾದ ಗ್ರಾನಿಮಲ್ಸ್ (Granimals) ಸಂಸ್ಥೆಯ ಸಹ-ಸ್ಥಾಪಕರಾಗಿದ್ದಾರೆ. ಈ ವೇದಿಕೆ ಈಗಾಗಲೇ 60 ಕ್ಕೂ ಹೆಚ್ಚು ದೇಶಗಳ 15,000 ಕ್ಕೂ ಅಧಿಕ ಜನರಿಗೆ ಗಾಯಗಳಿಂದ ಚೇತರಿಸಿಕೊಳ್ಳಲು ಮತ್ತು ಸಕ್ರಿಯ ಜೀವನಶೈಲಿಗೆ ಮರಳಲು ಸಹಾಯ ಮಾಡಿದೆ.ಈ ಅಭಿಯಾನವು ಟ್ರೆಕ್ನೊಮಾಡ್ಸ್ ಸಂಸ್ಥೆಯ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯಿಂದ ಬೆಂಗಳೂರಿನ ಬೆಳೆಯುತ್ತಿರುವ ಸಾಹಸ ಮತ್ತು ಸಹಿಷ್ಣುತೆ (Endurance) ಪರಿಸರ ವ್ಯವಸ್ಥೆಯನ್ನೂ ಗಮನ ಸೆಳೆಯಿತು.
ಭುವನೇಶ್ವರ್ಗೆ ಎರಡನೇ ಸ್ಥಾನ: 2026ರ ಐಪಿಎಲ್ ಟೂರ್ನಿಯಲ್ಲಿ ಟಾಪ್ 5 ವಿಕೆಟ್ ಟೇಕರ್ಸ್!
ಈ ಸಹಯೋಗದ ಬಗ್ಗೆ ಮಾತನಾಡಿದ ಟ್ರೆಕ್ನೊಮಾಡ್ಸ್ ಸಹ-ಸ್ಥಾಪಕ ನವೀನ್ ಮಲ್ಲೇಶ್ ಅವರು ಹೀಗೆ ಹೇಳಿದರು: “ಈ ಅಭಿಯಾನ ಕೇವಲ ಪರ್ವತಾರೋಹಣದ ಬಗ್ಗೆ ಇರಲಿಲ್ಲ; ಇದು ಮಾನವ ಸಾಮರ್ಥ್ಯದ ಮಿತಿಗಳನ್ನು ಮರುಪರಿಭಾಷಿಸುವ ಪ್ರಯತ್ನವಾಗಿತ್ತು. ಟ್ರೆಕ್ನೊಮಾಡ್ಸ್ನಲ್ಲಿ ನಾವು ದೈಹಿಕ ಸವಾಲುಗಳಿಂದ ಚೇತರಿಸಿಕೊಳ್ಳುತ್ತಿರುವವರಿಗೂ ಸಾಹಸ ಲಭ್ಯವಾಗಬೇಕು ಎಂದು ನಂಬುತ್ತೇವೆ. ಅದಕ್ಕಾಗಿ ನಾವು ಗ್ರಾನಿಮಲ್ಸ್ ಜೊತೆಗೂಡಿ ‘ಮೌಂಟನ್ ಫಿಟ್ ಅಸೆಸ್ಮೆಂಟ್ ಪ್ರೋಗ್ರಾಂ’ ಅನ್ನು ರೂಪಿಸಿದ್ದೇವೆ. ಇದರ ಮೂಲಕ ಟ್ರೆಕ್ಕರ್ಗಳು ಮತ್ತು ಪರ್ವತಾರೋಹಕರು ಫಿಸಿಯೋಥೆರಪಿಸ್ಟ್ಗಳಿಂದ ದೈಹಿಕ ಮೌಲ್ಯಮಾಪನ, ಕ್ರೀಡಾ ವಿಜ್ಞಾನ ಆಧಾರಿತ ವರದಿಗಳು ಮತ್ತು ವೈಯಕ್ತಿಕ ವ್ಯಾಯಾಮ ಯೋಜನೆಗಳನ್ನು ಪಡೆದು ನಂತರ ಎತ್ತರದ ಪರ್ವತಾರೋಹಣಕ್ಕೆ ಸಿದ್ಧರಾಗಬಹುದು .”
ಟ್ರೆಕ್ನೊಮಾಡ್ಸ್ ಮತ್ತು ಗ್ರಾನಿಮಲ್ಸ್ ನಡುವಿನ ಈ ಸಹಭಾಗಿತ್ವವು ಭಾರತಾದ್ಯಂತದ ಸಾಹಸಾಸಕ್ತರಲ್ಲಿ ಸುರಕ್ಷಿತ ಟ್ರೆಕ್ಕಿಂಗ್, ದೈಹಿಕ ಸಿದ್ಧತೆ, ಗಾಯಗಳಿಂದ ಚೇತರಿಕೆ ಮತ್ತು ಸಹಿಷ್ಣುತೆ ತರಬೇತಿ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ನಿರೀಕ್ಷೆಯಿದೆ.
“ಪ್ರಾಜೆಕ್ಟ್ ಬ್ಯಾಡ್ನೀಸ್” ಮೂಲಕ ಸಿದ್ಧಾರ್ಥ್ ಉನಿಯಾಲ್ ಅವರು ಕೇವಲ ಅಪರೂಪದ ಹಿಮಾಲಯ ಸಾಧನೆ ಮಾಡಿರುವುದಲ್ಲದೆ, ಗಾಯಗಳು, ಮಾನಸಿಕ ಅಡೆತಡೆಗಳು ಮತ್ತು ಆತ್ಮವಿಶ್ವಾಸದ ಕೊರತೆಯ ವಿರುದ್ಧ ಹೋರಾಡುತ್ತಿರುವ ಜನರಿಗೆ ಶಕ್ತಿಯುತ ಸಂದೇಶವನ್ನೂ ನೀಡಿದ್ದಾರೆ.