ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Asia Cup 2025

Asia Cup Trophy: ಏಷ್ಯಾ ಕಪ್ ಬಿಕ್ಕಟ್ಟು ಅಂತ್ಯ; ಶೀಘ್ರದಲ್ಲೇ ಭಾರತಕ್ಕೆ ಟ್ರೋಫಿ ಹಸ್ತಾಂತರ ಸಾಧ್ಯತೆ

ಏಷ್ಯಾ ಕಪ್ ಬಿಕ್ಕಟ್ಟು ಅಂತ್ಯ; ಶೀಘ್ರದಲ್ಲೇ ಭಾರತಕ್ಕೆ ಟ್ರೋಫಿ ಹಸ್ತಾಂತರ!

Asia Cup Trophy controversy: ಸೈಕಿಯಾ ಮತ್ತು ನಖ್ವಿ ನಡುವಿನ ಭೇಟಿಯನ್ನು ಸಕಾರಾತ್ಮಕ ಹೆಜ್ಜೆಯೆಂದು ಪರಿಗಣಿಸಲಾಗಿದೆ ಮತ್ತು ಎಸಿಸಿ ಮುಖ್ಯಸ್ಥ ನಖ್ವಿ ಅವರ ಸ್ಪಷ್ಟ ಆದೇಶದ ಮೇರೆಗೆ ದುಬೈನಲ್ಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಕಚೇರಿಯಲ್ಲಿ ಬೀಗ ಹಾಕಲಾಗಿರುವ ಏಷ್ಯಾ ಕಪ್ ಟ್ರೋಫಿಯನ್ನು ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಲಕ್ಷಣಗಳು ಕಂಡುಬರುತ್ತಿವೆ. ಸೆಪ್ಟೆಂಬರ್ 28 ರಂದು ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸಿತ್ತು.

ICC meeting: ನಾಲ್ಕು ದಿನಗಳ ಕಾಲ ಐಸಿಸಿ ಸಭೆ; ಏಷ್ಯಾಕಪ್‌ ಟ್ರೋಫಿ ಕಳ್ಳ ಪಾಕ್‌ ಸಚಿವನಿಗೆ ನಡುಕ

ಐಸಿಸಿ ಸಭೆಯಲ್ಲಿ ಬಿಸಿಸಿಐನಿಂದ ಏಷ್ಯಾಕಪ್​ ಟ್ರೋಫಿ ವಿವಾದ ಪ್ರಸ್ತಾಪ

ಏಷ್ಯಾಕಪ್​ ಟ್ರೋಫಿ ಹಸ್ತಾಂತರಿಸಬೇಕೆಂದು ಬಿಸಿಸಿಐ 10 ದಿನಗಳ ಹಿಂದೆಯೇ ಏಷ್ಯನ್​ ಕ್ರಿಕೆಟ್​ ಕೌನ್ಸಿಲ್​ಗೆ ಪತ್ರ ಬರೆದಿತ್ತು. ಆದರೆ ಅದು ಇನ್ನೂ ಬಾರದಿರುವುದರಿಂದ ನಾವು ಐಸಿಸಿ ಮೊರೆ ಹೋಗುವುದು ಅನಿವಾರ್ಯವಾಗಿದೆ. ಐಸಿಸಿ ನಮಗೆ ನ್ಯಾಯ ಒದಗಿಸಿ, ಟ್ರೋಫಿ ಪಡೆಯಲು ನೆರವಾಗುವ ಭರವಸೆ ಇದೆ ಎಂದು ಸೈಕಿಯಾ ತಿಳಿಸಿದ್ದಾರೆ.

Mohsin Naqvi: ಗುಪ್ತ ಸ್ಥಳವೊಂದರಲ್ಲಿ ಏಷ್ಯಾಕಪ್‌ ಟ್ರೋಫಿ ಅಡಗಿಸಿಟ್ಟ ಮೊಹ್ಸಿನ್ ನಖ್ವಿ

ಏಷ್ಯಾಕಪ್‌ ಟ್ರೋಫಿ ಅಡಗಿಸಿಟ್ಟ ಮೊಹ್ಸಿನ್ ನಖ್ವಿ

ಕಳೆದ ಶನಿವಾರ ಬಿಸಿಸಿಐ ಇ-ಮೇಲ್‌ ಮೂಲಕ ಏಷ್ಯಾಕಪ್ ಟ್ರೋಫಿ ನೀಡುವಂತೆ ಮತ್ತು, ಉತ್ತರಕ್ಕಾಗಿ ಕಾಯುತ್ತಿದ್ದೇವೆ ಎಂದು ಮೊಹ್ಸಿನ್ ನಖ್ವಿಗೆ ಹೇಳಿತ್ತು. ಇದಕ್ಕೆ ಉತ್ತರಿಸಿದ ನಖ್ವಿ, ಬಿಸಿಸಿಐ ಭಾರತ ತಂಡದ ಯಾರಾದರೂ ಒಬ್ಬ ಆಟಗಾರನನ್ನು ಕಳುಹಿಸಿದರೆ ಅವರ ಕೈಗೆ ಟ್ರೋಫಿ ಕೊಡಬಹುದು ಎಂದಿದ್ದರು.

Asia Cup 2025: ಭಾರತ ತಂಡಕ್ಕೆ ಏಷ್ಯಾ ಕಪ್‌ ಟ್ರೋಫಿ ನೀಡಲು ತಿರಸ್ಕರಿಸಿದ ಮೊಹ್ಸಿನ್‌ ನಖ್ವಿ!

ಭಾರತಕ್ಕೆ ಏಷ್ಯಾ ಕಪ್‌ ನೀಡಲು ತಿರಸ್ಕರಿಸಿದ ಮೊಹ್ಸಿನ್‌ ನಖ್ವಿ!

2025ರ ಏಷ್ಯಾ ಕಪ್ ಟ್ರೋಫಿಯ ಸುತ್ತಲಿನ ವಿವಾದ ಮುಂದುವರಿದಿದೆ. ಮೊಹ್ಸಿನ್ ನಖ್ವಿ ಟೀಮ್ ಇಂಡಿಯಾಗೆ ಟ್ರೋಫಿಯನ್ನು ಪ್ರದಾನ ಮಾಡಿರಲಿಲ್ಲ. ಏಷ್ಯಾ ಕಪ್‌ ಮುಗಿದು ಒಂದು ತಿಂಗಳ ಕಳೆದರೂ ಇನ್ನೂ ಭಾರತಕ್ಕೆ ಸಿಕ್ಕಿಲ್ಲ. ಟ್ರೋಫಿ ನೀಡುವಂತೆ ಬಿಸಿಸಿಐ, ಮೊಹ್ಸಿನ್‌ ನಖ್ವಿಗೆ ಪತ್ರ ಬರೆದಿತ್ತು. ಆದರೆ, ನಖ್ವಿ ಅವರು ಇದನ್ನು ನಿರಾಕರಿಸಿದ್ದಾರೆ.

ʻನನ್ನ ಒಪ್ಪಿಗೆ ಇಲ್ಲದೆ ಭಾರತಕ್ಕೆ ಏಷ್ಯಾ ಕಪ್‌ ಟ್ರೋಫಿ ನೀಡಬಾರದುʼ: ಮೊಹ್ಸಿನ್‌ ನಖ್ವಿಯ ಮತ್ತೊಂದು ಚಿಲ್ಲರೆ ಬುದ್ದಿ ಬಯಲು!

ಏಷ್ಯಾ ಕಪ್‌ ಟ್ರೋಫಿಯನ್ನು ಲಾಕ್‌ ಮಾಡಿದ ಮೊಹ್ಸಿನ್‌ ನಖ್ವಿ!

ಸೂರ್ಯಕುಮಾರ್‌ ಯಾದವ್‌ ನಾಯಕತ್ವದ ಭಾರತ ತಂಡ 2025ರ ಏಷ್ಯಾ ಕಪ್‌ ಟ್ರೋಫಿ ಸ್ವೀಕರಿಸುವ ವಿಷಯದಲ್ಲಿ ದಿನದಿಂದ ದಿನಕ್ಕೆ ಹೈಡ್ರಾಮಾ ನಡೆಯುತ್ತಿದೆ. ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರು ಏಷ್ಯಾ ಕಪ್‌ ಟ್ರೋಫಿಯನ್ನು ಲಾಕರ್‌ನಲ್ಲಿ ಇಟ್ಟಿದ್ದು, ನನ್ನ ಅನುಮತಿ ಇಲ್ಲದೆ ಭಾರತಕ್ಕೆ ಯಾರೂ ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ʻಕ್ರಿಕೆಟ್‌ ಅನ್ನು ರಾಜಕೀಯದಿಂದ ದೂರವಿಡಿʼ: ಎಬಿಡಿ ಹೇಳಿದ ಮಾತು ಅಕ್ಷರಶಃ ಸತ್ಯ!

ಕ್ರಿಕೆಟ್‌ನಲ್ಲಿ ರಾಜಕೀಯ ಸೇರಿದರೆ ಕ್ರೀಡಾ ಸ್ಪೂರ್ತಿಗೆ ಧಕ್ಕೆ!

ವಿವಾದಗಳಿಂದಲೇ ಆರಂಭವಾದ ಈ ಬಾರಿ ಏಷ್ಯಾ ಕಪ್ ಟೂರ್ನಿ ವಿವಾದಗಳೊಂದಿಗೆ ಅಂತ್ಯವಾಯಿತು. ಭಾರತ ಫೈನಲ್ ಪಂದ್ಯದಲ್ಲಿ ಗೆದ್ದರೂ, ಎಸಿಸಿ ಅಧ್ಯಕ್ಷ ಹಾಗೂ ಪಾಕ್ ಸಚಿವ ಮೊಹ್ಸಿನ್ ನಖ್ವಿಯಿಂದ ಟ್ರೋಫಿ ಪಡೆಯಲು ನಿರಾಕರಿಸಿತ್ತು. ಈ ಬಗ್ಗೆ ಹಲವು ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ತಮ್ಮದೇ ಆದ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಇದೀಗ ಪತ್ರಿಕೋದ್ಯಮ ವಿದ್ಯಾರ್ಥಿ ಕೆಎನ್‌ ರಂಗು ಅಂಕಣವನ್ನು ಬರೆದಿದ್ದಾರೆ.

Varun Chakravarthy: ಟ್ರೋಫಿ ಇಲ್ಲದೆ ಭಾರತದ ಏಷ್ಯಾ ಕಪ್ ಆಚರಣೆಯ ಹಿಂದಿರುವ ಮಾಸ್ಟರ್‌ ಮೈಂಡ್‌ ಯಾರು?

ಟ್ರೋಫಿ ಇಲ್ಲದೆ ಏಷ್ಯಾಕಪ್ ಆಚರಣೆಯ ಹಿಂದಿರುವ ಐಡಿಯಾ ಯಾರದ್ದು?

India's Asia Cup celebration: "ನಾನು ಕಪ್ ಬರುತ್ತದೆ ಎಂದು ಆಶಿಸುತ್ತಾ ನಿಂತಿದ್ದೆ. ನಾವೆಲ್ಲರೂ ಕಾಯುತ್ತಿದ್ದೆವು. ಆದರೆ ನನ್ನ ಪಕ್ಕದಲ್ಲಿದ್ದ ಒಂದೇ ಒಂದು ಕಪ್ ಕಾಫಿ ಕಪ್ ಆಗಿತ್ತು" ಎಂದು ಅವರು ನಗುತ್ತಾ ಹೇಳಿದರು. ಫೈನಲ್‌ ಪಂದ್ಯದ ಬಳಿಕ ಕಾಫಿ ಕಪ್ ಜತೆ ವರುಣ್‌ ಚಕ್ರವರ್ತಿ ಫೋಟೊವೊಂದನ್ನು ಕೂಡ ಹಂಚಿಕೊಂಡಿದ್ದರು.

Abhishek Sharma: ಏಷ್ಯಾಕಪ್‌ನಲ್ಲಿ ಕಾರು ಗೆದ್ದರೂ ಭಾರತದಲ್ಲಿ ಓಡಿಸುವಂತಿಲ್ಲ ಅಭಿಷೇಕ್ ಶರ್ಮಾ; ಕಾರಣ ಏನು?

ಏಷ್ಯಾಕಪ್‌ನಲ್ಲಿ ಕಾರು ಸಿಕ್ಕರೂ ಅಭಿಷೇಕ್‌ಗೆ ಚಲಾಯಿಸುವ ಭಾಗ್ಯವಿಲ್ಲ!

2018ರ ಅಂಡರ್-19 ವಿಶ್ವಕಪ್ ವಿಜೇತ ತಂಡದ ಪ್ರಮುಖ ಆಟಗಾರನಾಗಿದ್ದ ಅಭಿಷೇಕ್ ಶರ್ಮಾ ಟೀಂ ಇಂಡಿಯಾಗೆ ಪ್ರವೇಶ ಪಡೆಯಲು ಬರೋಬ್ಬರಿ 6 ವರ್ಷಕ್ಕಿಂತ ಅಧಿಕ ಸಮಯ ತೆಗೆದುಕೊಂಡರು. ಆದರೆ ಅವರ ಜೊತೆ ಅಂಡರ್–19 ತಂಡದಲ್ಲಿ ಆಡಿದ್ದ ಪೃಥ್ವಿ ಶಾ, ಶುಭಮನ್ ಗಿಲ್ ಸೇರಿ ಕೆಲವು ಆಟಗಾರರು ಬೇಗನೆ ಭಾರತ ತಂಡದಲ್ಲಿ ಕಾಣಿಸಿಕೊಂಡಿದ್ದರು.

ನಾನೇನೂ ತಪ್ಪು ಮಾಡಿಲ್ಲ, ಭಾರತಕ್ಕೆ ಟ್ರೋಫಿ ಬೇಕಿದ್ದರೆ ನನ್ನಿಂದ ಸ್ವೀಕರಿಸಲಿ: ನಖ್ವಿ ಉದ್ಧಟತನ

Mohsin Naqvi: ಭಾರತಕ್ಕೆ ಟ್ರೋಫಿ ಬೇಕಿದ್ದರೆ ನನ್ನಿಂದ ಸ್ವೀಕರಿಸಲಿ: ನಖ್ವಿ

Asia Cup 2025: ಏಷ್ಯಾಕಪ್‌ ಫೈನಲ್‌ ಗೆದ್ದ ಬಳಿಕ ಭಾರತ ತಂಡ ನಖ್ವಿ ಕೈಯಿಂದ ಟ್ರೋಫಿ ಸ್ವೀಕರಿಸದಿರಲು ನಿರ್ಧರಿಸಿತ್ತು. ಗಂಟೆಗಳ ಕಾಲ ನಡೆದ ನಾಟಕೀಯ ಬೆಳವಣಿಗೆ ಬಳಿಕ ನಖ್ವಿ ಹೋಟೆಲ್‌ಗೆ ತೆರಳಿದ್ದರು. ಜೊತೆಗೆ ಸಿಬ್ಬಂದಿ ಜತೆ ಟ್ರೋಫಿಯನ್ನು ತೆಗೆದುಕೊಂಡು ಹೋಗಿದ್ದರು.

'2-3 ವರ್ಷಗಳಲ್ಲಿ ನೀನು ಭಾರತ ತಂಡಕ್ಕಾಗಿ ಆಡುವೆ': ಮೆಂಟರ್‌ ಯುವಿ ಮಾತನ್ನು ನೆನೆದ ಅಭಿಷೇಕ್‌ ಶರ್ಮಾ!

ಮೆಂಟರ್‌ ಯುವರಾಜ್‌ ಸಿಂಗ್‌ ಮಾತನ್ನು ನೆನೆದ ಅಭಿಷೇಕ್‌ ಶರ್ಮಾ!

ಭಾರತ ತಂಡದ ಅಭಿಷೇಕ್ ಶರ್ಮಾ ತಮ್ಮ ಕ್ರಿಕೆಟ್ ಗುರು ಯುವರಾಜ್ ಸಿಂಗ್ ಮಾರ್ಗದರ್ಶನವನ್ನು ಸ್ಮರಿಸಿಕೊಂಡಿದ್ದಾರೆ. ಈ ಕುರಿತು ಮಾತನಾಡಿರುವ ಅಭಿಷೇಕ್, ಯುವರಾಜ್ ಸಿಂಗ್ ಅವರ ಮಾರ್ಗದರ್ಶನ ನನ್ನ ಕ್ರಿಕೆಟ್ ಕರಿಯರ್ ಮೇಲೆ ಬಹುದೊಡ್ಡ ಪ್ರಭಾವ ಬೀರಿದೆ ಮತ್ತು ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿದೆ ಎಂದು ಹೇಳಿದ್ದಾರೆ.

ʻಕ್ರೀಡೆಯಿಂದ ರಾಜಕೀಯ ದೂರವಿರಬೇಕುʼ: ಭಾರತ-ಪಾಕ್‌ ಏಷ್ಯಾ ಕಪ್‌ ವಿವಾದದ ಬಗ್ಗೆ ಎಬಿಡಿ ಪ್ರತಿಕ್ರಿಯೆ!

ಕ್ರೀಡೆಯಿಂದ ರಾಜಕೀಯವನ್ನು ದೂರವಿಡಿ: ಎಬಿ ಡಿ ವಿಲಿಯರ್ಸ್!

ಏಷ್ಯಾ ಕಪ್‌ ಟೂರ್ನಿಯಲ್ಲಿ ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಣ ವಿದ್ಯಮಾನಗಳ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಹಾಗೂ ದಿಗ್ಗಜ ಎಬಿ ಡಿವಿಲಿಯರ್ಸ್‌ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಕ್ರೀಡೆಯಲ್ಲಿ ರಾಜಕೀಯ ಇರಬಾರದು ಹಾಗೂ ಎರಡೂ ತಂಡಗಳ ಆಟಗಾರರು ಆಟವನ್ನು ಆನಂದಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

ʻಬಿಸಿಸಿಐ ಬಳಿ ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲʼ: ಭಾರತಕ್ಕೆ ಏಷ್ಯಾ ಕಪ್‌ ನೀಡಲು ಸಿದ್ದ ಎಂದ ಮೊಹ್ಸಿನ್‌ ನಖ್ವಿ!

ʻಬಿಸಿಸಿಐ ಬಳಿ ಕ್ಷಮೆ ಕೇಳಿಲ್ಲ, ಕೇಳೋದು ಇಲ್ಲʼ: ಮೊಹ್ಸಿನ್‌ ನಖ್ವಿ!

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತು ಏಷ್ಯನ್ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಹ್ಸಿನ್ ನಖ್ವಿ ಮತ್ತೊಂದು ವಿವಾದವನ್ನು ಹುಟ್ಟು ಹಾಕಿದ್ದಾರೆ. ನಾನು ಎಂದಿಗೂ ಬಿಸಿಸಿಐಗೆ ಕ್ಷಮೆ ಕೇಳಿಲ್ಲ ಹಾಗೂ ಎಂದಿಗೂ ಕ್ಷಮೆಯನ್ನು ಕೇಳುವುದಿಲ್ಲ ಎಂದಿದ್ದಾರೆ. ಅಲ್ಲದೆ, ಭಾರತ ತಂಡ ಏಷ್ಯಾ ಕಪ್‌ ಬೇಕಿದ್ದರೆ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಕಛೇರಿಗೆ ಬರಲಿ ಎಂದು ಹೇಳಿದ್ದಾರೆ.

ಐಸಿಸಿ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಅಭಿಷೇಕ್‌ ಶರ್ಮಾ!

ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ವಿಶೇಷ ದಾಖಲೆ ಬರೆದ ಅಭಿಷೇಕ್‌ ಶರ್ಮಾ!

ಕಳೆದ ಏಷ್ಯಾ ಕಪ್‌ ಟೂರ್ನಿಯಲ್ಲಿ ಅತಿ ಹಚ್ಚು ರನ್‌ ಗಳಿಸುವ ಮೂಲಕ ಭಾರತ ತಂಡದ ಪ್ರಶಸ್ತಿ ಗೆಲುವಿಗೆ ನೆರವು ನೀಡಿದ್ದ ಅಭಿಷೇಕ್‌ ಶರ್ಮಾ ಟೂರ್ನಿ ಶ್ರೇಷ್ಠ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು. ಇದೀಗ ಅವರು ಐಸಿಸಿ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ ಸ್ಥಾನ ಪಡೆಯುವ ಜೊತೆಗೆ ಅತಿ ಹೆಚ್ಚು ರೇಟಿಂಗ್‌ ಪಾಯಿಂಟ್ಸ್‌ ಪಡೆದ ವಿಶ್ವದ ಮೊದಲ ಬ್ಯಾಟ್ಸ್‌ಮನ್‌ ಎಂಬ ದಾಖಲೆಯನ್ನು ಬರೆದಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಅಶಾಂತಿ; ಪಿಸಿಬಿ ಮುಖ್ಯಸ್ಥ ನಖ್ವಿ ರಾಜೀನಾಮೆಗೆ ಅಫ್ರಿದಿ ಒತ್ತಾಯ

Mohsin Naqvi: ಪಿಸಿಬಿ ಮುಖ್ಯಸ್ಥ ನಖ್ವಿ ರಾಜೀನಾಮೆಗೆ ಅಫ್ರಿದಿ ಒತ್ತಾಯ

Shahid Afridi: "ನಖ್ವಿ ಸಾಹೇಬರಿಗೆ ನನ್ನ ವಿನಂತಿ ಅಥವಾ ಸಲಹೆ ಏನೆಂದರೆ ಇವು ಎರಡು ಬಹಳ ಮುಖ್ಯವಾದ ಹುದ್ದೆಗಳು ಮತ್ತು ಅವು ಸಮಯ ಕೊಡಬೇಕಾದ ದೊಡ್ಡ ಕೆಲಸಗಳು. ಹೀಗಾಗಿ ಒಂದು ಹುದ್ದೆಯನ್ನಷ್ಟೇ ಆಯ್ಕೆ ಮಾಡಿ. ನಿಮ್ಮ ಅಧಕಾರದ ಜಿದ್ದಿನಿಂದ ಪಾಕಿಸ್ತಾನ ಕ್ರಿಕೆಟ್‌ ನಾಶವಾಗುತ್ತಿದೆ" ಎಂದು ಅಫ್ರಿದಿ ಹೇಳಿರುವುದಾಗಿ ಟೆಲಿಕಾಂ ಏಷ್ಯಾ ಸ್ಪೋರ್ಟ್ ವರದಿ ಮಾಡಿದೆ.

Mohsin Naqvi: ಬಿಸಿಸಿಐಗೆ ಕ್ಷಮೆಯಾಚಿಸಿದ ಮೊಹ್ಸಿನ್ ನಖ್ವಿ; ಟ್ರೋಫಿ ನೀಡಲು ನಿರಾಕರಣೆ

ಬಿಸಿಸಿಐಗೆ ಕ್ಷಮೆಯಾಚಿಸಿದ ಮೊಹ್ಸಿನ್ ನಖ್ವಿ

ಸೆಪ್ಟೆಂಬರ್ 30, ಮಂಗಳವಾರ ನಡೆದ ಎಸಿಸಿ ಸಭೆಯಲ್ಲಿ, ಟ್ರೋಫಿ ವಿವಾದದಲ್ಲಿ ನಖ್ವಿ ಅವರ ನಡವಳಿಕೆಯನ್ನು ಬಿಸಿಸಿಐ ತೀವ್ರವಾಗಿ ಖಂಡಿಸಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಏಷ್ಯಾ ಕಪ್ ಟ್ರೋಫಿ ಪಿಸಿಬಿ ಮುಖ್ಯಸ್ಥರದ್ದಲ್ಲ, ಎಸಿಸಿಗೆ ಸೇರಿದ್ದು ಎಂದು ಒತ್ತಿ ಹೇಳಿದ್ದರು. ಸರಿಯಾದ ಹಸ್ತಾಂತರವಿಲ್ಲದೆ ಟ್ರೋಫಿ ಮತ್ತು ಪದಕಗಳನ್ನು ನಖ್ವಿ ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಅವರು ಟೀಕಿಸಿದ್ದರು.

Mohsin Naqvi: ಏಷ್ಯಾ ಕಪ್ ಟ್ರೋಫಿಯನ್ನು ಭಾರತಕ್ಕೆ ಹಸ್ತಾಂತರಿಸಲು ಮೊಹ್ಸಿನ್ ನಖ್ವಿ ನಿರಾಕರಣೆ

ಏಷ್ಯಾಕಪ್ ಟ್ರೋಫಿ ನೀಡಲು ನಿರಾಕರಿಸಿದ ಮೊಹ್ಸಿನ್ ನಖ್ವಿ

ಟ್ರೋಫಿ ಹಸ್ತಾಂತರದ ಬಿಕ್ಕಟ್ಟು ವಿಚಾರವಾಗಿ ಮಾತನಾಡಿರುವ ನಾಯಕ ಸೂರ್ಯಕುಮಾರ್‌, "14 ಆಟಗಾರರು ಮತ್ತು 10-12 ಸಹಾಯಕ ಸಿಬ್ಬಂದಿ. ಅದು ನಿಜವಾದ ಟ್ರೋಫಿ. ತಂಡದ ಆದ್ಯತೆ ಕ್ರಿಕೆಟ್ ಆಡುವುದಾಗಿತ್ತು ಮತ್ತು ಎಲ್ಲರು ಆಟದ ಮೇಲೆ ಕೇಂದ್ರೀಕರಿಸಿ ಪಂದ್ಯಾವಳಿಯನ್ನು ಗೆದ್ದೆವು" ಎಂದು ಹೇಳಿದರು.

Mohsin Naqvi: ಷರತ್ತಿಗೆ ಒಪ್ಪಿದರೆ ಏಷ್ಯಾಕಪ್​ ಟ್ರೋಫಿ ನೀಡುವೆ; ಭಾರತಕ್ಕೆ ನಖ್ವಿ ತಾಕೀತು

ಏಷ್ಯಾಕಪ್​ ಟ್ರೋಫಿ ನೀಡಲು ಭಾರತಕ್ಕೆ ಷರತ್ತು ವಿಧಿಸಿದ ನಖ್ವಿ

ಮಂಗಳವಾರ ನಡೆದ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ಅನ್ನು ಪ್ರತಿನಿಧಿಸುವ ಸಭೆಯಲ್ಲಿ ಭಾಗವಹಿಸಿದ್ದ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ನಖ್ವಿ ಅವರನ್ನು ಕಠಿಣ ಪ್ರಶ್ನೆಗಳನ್ನು ಕೇಳಿ, ವಿಜೇತ ಭಾರತ ತಂಡಕ್ಕೆ ಟ್ರೋಫಿಯನ್ನು ಹಸ್ತಾಂತರಿಸದಿದ್ದಕ್ಕಾಗಿ ಮೊಹ್ಸಿನ್ ನಖ್ವಿಯನ್ನು ಕೆಣಕಿದರು.

Mohsin Naqvi: ಮೊಹ್ಸಿನ್ ನಖ್ವಿ ವಿರುದ್ಧ ಬಿಸಿಸಿಐ ವಿಚಾರಣೆ; ಐಸಿಸಿಗೆ ದೂರು

ಟ್ರೋಫಿ ಕಳ್ಳ ಮೊಹ್ಸಿನ್ ನಖ್ವಿ ವಿರುದ್ಧ ಐಸಿಸಿಗೆ ದೂರು ಸಲ್ಲಿಸಿದ ಬಿಸಿಸಿಐ

ಪಹಲ್ಗಾಂ ದಾಳಿ ಕಾರಣ ಭಾರತೀಯ ಆಟಗಾರರು ನಖ್ವಿ ಕೈಯಿಂದ ಟ್ರೋಫಿ, ಪದಕ ಸ್ವೀಕರಿಸಲು ಸಿದ್ಧರಿರಲಿಲ್ಲ. ಬದಲಾಗಿ, ವೇದಿಕೆ ಮೇಲಿದ್ದ ಬೇರೆ ಯಾವುದೇ ಗಣ್ಯರಿಂದ ಟ್ರೋಫಿ ಸ್ವೀಕರಿಸಲು ಭಾರತ ತಯಾರಿತ್ತು. ಆದರೆ ಪಟ್ಟುಬಿಡದ ನಖ್ವಿ ತನ್ನ ಕೈಗಳಿಂದಲೇ ಟ್ರೋಫಿ ಸ್ವೀಕರಿಸಬೇಕು ಎನ್ನುವ ಜಿದ್ದಿಗೆ ಬಿದ್ದು ಕೊನೆಗೆ ಟ್ರೋಫಿಯನ್ನೇ ಹೊತ್ತೊಯ್ದಿದ್ದರು.

Suryakumar Yadav: ಏಷ್ಯಾಕಪ್‌ ಗೆದ್ದು ತವರಿಗೆ ಮರಳಿದ ಸೂರ್ಯಕುಮಾರ್‌ಗೆ ಅದ್ದೂರಿ ಸ್ವಾಗತ

ತವರಿಗೆ ಮರಳಿದ ಸೂರ್ಯಕುಮಾರ್‌ಗೆ ಅದ್ದೂರಿ ಸ್ವಾಗತ

ಏಷ್ಯಾಕಪ್‌ನ ಮ್ಯಾಚ್‌ ಫೀಯನ್ನು ಭಾರತೀಯ ಸೇನೆಗೆ, ಪಹಲ್ಗಾಂ ಸಂತ್ರಸ್ತರಿಗೆ ಅರ್ಪಿಸಬೇಕು ಎನ್ನುವುದು ನನ್ನ ವೈಯಕ್ತಿಕ ನಿರ್ಧಾರ. ಮೊದಲ ದಿನ ನಾನು ಬಹಿರಂಗವಾಗಿ ಹೇಳಿಕೆ ನೀಡಿ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೆ. ಅದಕ್ಕಿಂತ ಹೆಚ್ಚು ಮಾಡಬಹುದು ಎನಿಸಿತು. ಪಂದ್ಯದ ಸಂಭಾವನೆಯನ್ನು ಸೇನೆ, ಪಹಲ್ಗಾಂ ಸಂತ್ರಸ್ತರಿಗೆ ಕೊಡಲು ನಿರ್ಧರಿಸಿದೆ ಎಂದು ಸೂರ್ಯ ಹೇಳಿದರು.

ಭಾರತ ತಂಡಕ್ಕೆ ಏಷ್ಯಾ ಕಪ್‌ ಪದಕ ನೀಡಲು ರೆಡಿ ಆದ್ರೆ, ಒಂದು ಕಂಡೀಷನ್‌! ಮೊಹ್ಸಿನ್‌ ನಖ್ವಿಯ ಹೊಸ ನಾಟಕ!

ʻಭಾರತಕ್ಕೆ ಪದಕ ನೀಡಲು ಸಿದ್ದʼ: ಮೊಹ್ಸಿನ್‌ ನಖ್ವಿ ಹೊಸ ನಾಟಕ!

ಪಾಕಿಸ್ತಾನ ತಂಡವನ್ನು ಮಣಿಸಿ 2025ರ ಏಷ್ಯಾ ಕಪ್‌ ಮುಡಿಗೇರಿಸಿಕೊಂಡ ಭಾರತ ತಂಡ 9ನೇ ಬಾರಿ ಚಾಂಪಿಯನ್‌ ಆಗಿತ್ತು. ಆದರೆ, ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸಲು ಟೀಮ್‌ ಇಂಡಿಯಾ ನಿರಾಕರಿಸಿತ್ತು. ನಂತರ ಹೈಡ್ರಾಮಾ ನಡೆದಿತ್ತು. ಇದೀಗ ಮೊಹ್ಸಿನ್‌ ನಖ್ವಿ ಅವರ ಮತ್ತೊಂದು ನಾಟಕ ಬಯಲಾಗಿದೆ.

15 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಕ್ರಿಸ್‌ ವೋಕ್ಸ್‌!

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ವಿದಾಯ ಹೇಳಿದ ಕ್ರಿಸ್‌ ವೋಕ್ಸ್‌!

Chris Woakes retirement: ಇಂಗ್ಲೆಂಡ್‌ ತಂಡದ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಕ್ರಿಸ್‌ ವೋಕ್ಸ್‌ ಅವರು ಸೆಪ್ಟಂಬರ್‌ 29 ರಂದು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಆ ಮೂಲಕ 15 ವರ್ಷಗಳ ಇಂಗ್ಲೆಂಡ್‌ ತಂಡದ ಜೊತೆಗಿನ ಪಯಣಕ್ಕೆ ಪೂರ್ಣ ವಿರಾಮವನ್ನು ಇಟ್ಟಿದ್ದಾರೆ.

ಏಷ್ಯಾ ಕಪ್‌ ಪಂದ್ಯದ ಸಂಭಾವನೆಯನ್ನು 'ಆಪರೇಷನ್ ಸಿಂಧೂರ್‌ ಸಂತ್ರಸ್ತರಿಗೆ' ನೀಡಿದ ಸಲ್ಮಾನ್‌ ಆಘಾ!

ಸೂರ್ಯಕುಮಾರ್‌ ಯಾದವ್‌ ಹಾದಿಯನ್ನು ತುಳಿದ ಪಾಕ್‌ ನಾಯಕ!

Salman Ali Agha: ಭಾರತದ ವಿರುದ್ಧದ 2025ರ ಏಷ್ಯಾ ಕಪ್ ಫೈನಲ್ ಸೋಲಿನ ನಂತರ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಅಲಿ ಆಘಾ ಅವರು ಸೂರ್ಯಕುಮಾರ್ ಯಾದವ್ ಹಾದಿಯನ್ನು ಅನುಕರಿಸಿದ್ದಾರೆ. ಏಷ್ಯಾ ಕಪ್‌ ಪಂದ್ಯದ ಸಂಭಾವನೆಯನ್ನು 'ಆಪರೇಷನ್ ಸಿಂಧೂರ್ ಸಂತ್ರಸ್ತರಿಗೆ' ನೀಡಲು ಪಾಕಿಸ್ತಾನ ತಂಡ ಬಯಸಿದೆ ಎಂದು ನಾಯಕ ಸಲ್ಮಾನ್‌ ಆಘಾ ತಿಳಿಸಿದ್ದಾರೆ.

ಮೊಹ್ಸಿನ್‌ ನಖ್ವಿಯಿಂದ ಏಷ್ಯಾ ಕಪ್‌ ಸ್ವೀಕರಿಸದೇ ಇರಲು ಕಾರಣ ತಿಳಿಸಿದ ದೇವಜಿತ್‌ ಸೈಕಿಯಾ!

ಮೊಹ್ಸಿನ್‌ ನಖ್ವಿಯಿಂದ ಟ್ರೋಫಿ ಪಡೆಯದೇ ಇರಲು ಕಾರಣ ಬಹಿರಂಗ!

2025ರ ಏಷ್ಯಾ ಕಪ್‌ ಟೂರ್ನಿಯ ಫೈನಲ್‌ ಪಂದ್ಯದ ಬಳಿಕ ಎಸಿಸಿ ಮುಖ್ಯಸ್ಥ ಮೊಹ್ಸಿನ್‌ ನಖ್ವಿ ಅವರಿಂದ ಏಷ್ಯಾ ಕಪ್‌ ಸ್ವೀಕರಿಸದೇ ಇರಲು ಕಾರಣವೇನೆಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್‌ ಸೈಕಿಯಾ ಬಹಿರಂಗಪಡಿಸಿದ್ದಾರೆ. ಭಾನುವಾರ ಪಾಕಿಸ್ತಾನ ವಿರುದ್ಧ ಭಾರತ ತಂಡ 5 ವಿಕೆಟ್‌ಗಳಿಂದ ಗೆದ್ದು 9ನೇ ಏಷ್ಯಾ ಕಪ್‌ ಮುಡಿಗೇರಿಸಿಕೊಂಡಿತ್ತು.

ʻಕ್ರೀಡೆಗೆ ರಾಜಕೀಯ ತರಬೇಡಿʼ: ಇಂಡೋ-ಪಾಕ್‌ ವಿವಾದದ ಬಗ್ಗೆ ಕಪಿಲ್‌ ದೇವ್‌ ಪ್ರತಿಕ್ರಿಯೆ!

ʻಕ್ರೀಡೆಯನ್ನು ಕ್ರೀಡೆಯಾಗಿ ನೋಡಿʼ: ಕಪಿಲ್‌ ದೇವ್‌!

ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಬಾರಿ ಏಷ್ಯಾ ಕಪ್‌ ಟೂರ್ನಿಯಲ್ಲಿ ಮೂರು ಬಾರಿ ಮುಖಾಮುಖಿಯಾಗಿದ್ದವು. ಈ ಮೂರೂ ಪಂದ್ಯಗಳಲ್ಲಿ ಭಾರತ ತಂಡ ಗೆಲುವು ಪಡೆಯಿತು. ಆದರೆ, ಈ ಬಾರಿ ಟೂರ್ನಿಯಲ್ಲಿ ಸಾಂಪ್ರದಾಯಿಕ ಎದುರಾಳಿಗಳ ನಡುವಣ ಪಂದ್ಯಗಳು ಹಲವು ವಿವಾದಗಳಿಗೆ ಕಾರಣವಾಗಿದೆ. ಈ ಬಗ್ಗೆ ಮಾಜಿ ನಾಯಕ ಕಪಿಲ್‌ ದೇವ್‌ ಪ್ರತಿಕ್ರಿಯೆ ನೀಡಿದ್ದಾರೆ.

Loading...