ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026

ಎಂಎಸ್‌ ಧೋನಿ ಅಲ್ಲವೇ ಅಲ್ಲ; ಭಾರತೀಯ ಕ್ರಿಕೆಟ್‌ ಸ್ಮಾರ್ಟೆಸ್ಟ್‌ ಮೈಂಡ್‌ ಯಾರೆಂದು ಹೆಸರಿಸಿದ ಮೊಯೀನ್‌ ಅಲಿ!

ಭಾರತೀಯ ಕ್ರಿಕೆಟ್‌ನ ಸ್ಮಾರ್ಟೆಸ್ಟ್‌ ಮೈಂಡ್‌ ಹೆಸರಿಸಿದ ಮೊಯೀನ್‌ ಅಲಿ!

ಗುಜರಾತ್‌ ಟೈಟನ್ಸ್‌ ತಂಡದ ಹೆಡ್‌ ಕೋಚ್‌ ಆಶಿಶ್‌ ನೆಹ್ರಾ ಅವರು ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಅತ್ಯಂತ ಸ್ಮಾರ್ಟೆಸ್ಟ್‌ ಕ್ರಿಕೆಟ್‌ ಮೈಂಡ್‌ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಮೊಯೀನ್‌ ಅಲಿ ಆರಿಸಿದ್ದಾರೆ. ಆದರೆ, ಭಾರತೀಯ ಕ್ರಿಕೆಟ್‌ ಅನ್ನು ಅಗ್ರ ಸ್ಥಾನ ಏರಿಸಿದ್ದ ಎಂಎಸ್‌ ಧೋನಿಯನ್ನು ಕಡೆಗಣಿಸಿದ್ದಾರೆ.

ʻಆರ್‌ಸಿಬಿಯ ನಿಜವಾದ ರಾಣಿʼ: ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವಾದ ಅನನ್ಯಾ ಬಿರ್ಲಾ!

ಅಸ್ಸಾಂ ಪ್ರವಾಹ ಪೀಡಿತರಿಗೆ ನೆರವಾದ ಆರ್‌ಸಿಬಿ ಓನರ್‌ ಅನನ್ಯಾ!

ಅಸ್ಸಾಂನಲ್ಲಿ ಭಾರೀ ಪ್ರವಾಹದ ಹಿನ್ನೆಲೆಯಲ್ಲಿ ಉದ್ಯಮಿ ಹಾಗೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಕೋ ಓನರ್‌ ಅನನ್ಯಾ ಬಿರ್ಲಾ ಅವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಹಾರ ಕಾರ್ಯಗಳ ಮೇಲ್ವಿಚಾರಣೆ ನಡೆಸಿದರು. ಅಲ್ಲದೆ, ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತ ಸಮುದಾಯಗಳಿಗೆ ಅಗತ್ಯ ನೆರವು ಮತ್ತು ಬೆಂಬಲವನ್ನು ನೀಡಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

IPL 2027: ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಮತ್ತೊಂದು ತಲೆ ನೋವು!

ಅಜಿಂಕ್ಯ ರಹಾನೆ ನಿವೃತ್ತಿಯಿಂದ ಕೆಕೆಆರ್‌ಗೆ ಮತ್ತೊಂದು ತಲೆ ನೋವು!

ಭಾರತೀಯ ಕ್ರಿಕೆಟ್‌ನ ಹಿರಿಯ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಅವರು ತಮ್ಮ ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಮುಂದಿನ ನಾಯಕ ಯಾರೆಂಬ ಪ್ರಶ್ನೆ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲ್ಕತಾ ಫ್ರಾಂಚೈಸಿ 2027ರ ಟೂರ್ನಿಯ ನಿಮಿತ್ತ ಹೊಸ ನಾಯಕ ಹುಡುಕಾಟದಲ್ಲಿ ತೊಡಗಿದೆ.

IPL 2027: ಎಲ್ಲಾ 10 ಫ್ರಾಂಚೈಸಿಗಳನ್ನು ಹಿಂದಿಕ್ಕಿ ತನ್ನ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಂಡ ಆರ್‌ಸಿಬಿ!

ತನ್ನ ಬ್ರ್ಯಾಂಡ್‌ ಮೌಲ್ಯವನ್ನು ಹೆಚ್ಚಿಸಿಕೊಂಡು ದಾಖಲೆ ಬರೆದ ಆರ್‌ಸಿಬಿ!

IPL 2026: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಒಟ್ಟು ವ್ಯವಹಾರ ಮೌಲ್ಯ ಶೇ.11.4 ರಷ್ಟು ಏರಿಕೆಯಾಗಿ 1.96 ಲಕ್ಷ ಕೋಟಿಗೆ ತಲುಪಿದೆ. ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಅತ್ಯಂತ ಮೌಲ್ಯಯುತ ಐಪಿಎಲ್ ತಂಡವಾಗಿದ್ದು, 2,982 ಕೋಟಿ ಬ್ರಾಂಡ್ ಮೌಲ್ಯವನ್ನು ಹೊಂದಿದೆ.

ಹ್ಯಾಪಿ ಬರ್ತ್‌ಡೇ ಕ್ಯಾಪ್ಟನ್‌ ಕೂಲ್‌: ಎಂಎಸ್‌ ಧೋನಿಗೆ ದಳಪತಿ ವಿಜಯ್‌ ಹೃದಯ ಸ್ಪರ್ಶಿ ಸಂದೇಶ!

ಎಂಎಸ್‌ ಧೋನಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿದ ಸಿಎಂ ವಿಜಯ್‌!

MS Dhoni Birthday: ಭಾರತ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಹುಟ್ಟು ಹಬ್ಬಕ್ಕೆ ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್‌ ಶುಭಾಶಯ ಕೋರಿದ್ದಾರೆ. ತಮ್ಮ ನಾಯಕತ್ವ, ಮಾನವೀಯತೆ ಹಾಗೂ ರಾಜ್ಯದೊಂದಿಗಿನ ಬಾಂಧವ್ಯವನ್ನು ಇದೇ ಅವರು ಉಲ್ಲೇಖಿಸಿದ್ದಾರೆ.

IPL 2027: ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲು ಕಾರಣ ತಿಳಿಸಿದ ಎಬಿ ಡಿ ವಿಲಿಯರ್ಸ್‌!

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಲು ಕಾರಣ ತಿಳಿಸಿದ ಎಬಿಡಿ!

2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ನಿಮಿತ್ತ ರಿಷಭ್‌ ಪಂತ್‌ ಅವರು ಲಖನೌ ಸೂಪರ್‌ ಜಯಂಟ್ಸ್‌ ತಂಡದಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮರಳಿದ್ದಾರೆ. ಟ್ರೇಡ್‌ ಡೀಲ್‌ ಮೂಲಕ ಅವರು ತಮ್ಮ ತವರು ತಂಡಕ್ಕೆ ಮರಳಿದ್ದು, ಇದಕ್ಕೆ ಕಾರಣವೇನೆಂದು ಆರ್‌ಸಿಬಿ ದಿಗ್ಗಜ ಎಬಿ ಡಿ ವಿಲಿಯರ್ಸ್‌ ತಿಳಿಸಿದ್ದಾರೆ.

ಪಂತ್‌-ಕುಲ್ದೀಪ್‌ ಟ್ರೇಡ್‌ ಡೀಲ್‌ ಬಗ್ಗೆ ಪಾರ್ಥ್‌ ಜಿಂದಾಲ್‌ ಪೋಸ್ಟ್‌ಗೆ ಡೇವಿಡ್‌ ವಾರ್ನರ್‌ ಅಚ್ಚರಿ ಪ್ರತಿಕ್ರಿಯೆ!

ಪಾರ್ಥ್‌ ಜಿಂದಾಲ್‌ ಪೋಸ್ಟ್‌ಗೆ ಡೇವಿಡ್‌ ವಾರ್ನರ್‌ ಅಚ್ಚರಿ ಪ್ರತಿಕ್ರಿಯೆ!

ರಿಷಭ್ ಪಂತ್ ಮತ್ತು ಕುಲ್‌ದೀಪ್ ಯಾದವ್ ಅವರ ಟ್ರೇಡ್‌ ಡೀಲ್‌ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ಮಾಲೀಕ ಪಾರ್ಥ್ ಜಿಂದಾಲ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಆಸ್ಟ್ರೇಲಿಯಾ ಮಾಜಿ ಆರಂಭಿಕ ಡೇವಿಡ್ ವಾರ್ನರ್ ಅವರು ನಗುವ ಎಮೋಜಿ ಹಾಕಿದ್ದಾರೆ. ಇದು ವೈರಲ್ ಆಗಿದೆ. ಅವರು ಇದಕ್ಕೆ ಕಾಮೆಂಟ್‌ ಕೂಡ ಹಾಕಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಿದ ಬೆನ್ನಲ್ಲೆ ಎಲ್‌ಎಸ್‌ಜಿಗೆ ರಿಷಭ್‌ ಪಂತ್‌ ಕೊನೆಯ ಸಂದೇಶ!

ಎಲ್‌ಎಸ್‌ಜಿಗೆ ಕೊನೆಯ ಸಂದೇಶ ರವಾನಿಸಿದ ರಿಷಭ್‌ ಪಂತ್‌!

ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಸೇರಿದ ಬೆನ್ನಲ್ಲೆ ವಿಕೆಟ್‌ ಕೀಪರ್‌-ಬ್ಯಾಟರ್‌ ರಿಷಭ್‌ ಪಂತ್‌, ತಮ್ಮ ಮಾಜಿ ತಂಡ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ ಕೊನೆಯ ಸಂದೇಶವನ್ನು ರವಾನಿಸಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಅವರು ʻಧನ್ಯವಾದ ತಂಡʼ ಎಂದು ಸ್ಟೋರಿಯನ್ನು ಹಾಕಿಕೊಂಡಿದ್ದಾರೆ.

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ಅಕ್ಷರ್‌ಗೆ ನಾಯಕತ್ವ ಕೈ ತಪ್ಪಲಿದೆಯಾ?

ರಿಷಭ್‌ ಪಂತ್‌ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದರೆ, ನಾಯಕತ್ವ ಯಾರಿಗೆ?

ರಿಷಭ್‌ ಪಂತ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ ಮರಳಿದ್ದಾರೆ. ಇದೀಗ ತಂಡದ ನಾಯಕತ್ವದಲ್ಲಿ ಅಕ್ಷರ್‌ ಪಟೇಲ್‌ ಅವರನ್ನು ಮುಂದುವರಿಸಲಾಗುತ್ತಾ? ಅಥವಾ ಪಂತ್‌ಗೆ ನಾಯಕತ್ವವನ್ನು ನೀಡಲಾಗುತ್ತಾ? ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.

IPL trade buzz:ಹಾರ್ದಿಕ್‌ ಪಾಂಡ್ಯಗಾಗಿ ಮುಂಬೈ ಇಂಡಿಯನ್ಸ್‌ ಜೊತೆ ಕೆಕೆಆರ್‌, ಆರ್‌ಆರ್‌ ಚರ್ಚೆ!

ಹಾರ್ದಿಕ್‌ ಪಾಂಡ್ಯಗಾಗಿ ರಾಜಸ್ಥಾನ್‌-ಕೋಲ್ಕತಾ ನಡುವೆ ಪೈಪೋಟಿ!

ಕೋಲ್ಕತಾ ನೈಟ್‌ ರೈಡರ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಮುಂಬೈ ಇಂಡಿಯನ್ಸ್‌ ತಂಡದೊಂದಿಗೆ ಹಾರ್ದಿಕ್‌ ಪಾಂಡ್ಯ ಅವರನ್ನು ಟ್ರೇಡ್‌ ಮಾಡಿಕೊಳ್ಳಲು ಚರ್ಚೆ ನಡೆಸುತ್ತಿವೆ. ಇದೇ ವೇಳೆ ಆರ್‌ಆರ್‌ ತಂಡವು ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್‌ ಅವರನ್ನು ಒಳಗೊಂಡ ವಿನಿಮಯ ಒಪ್ಪಂದದ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಾಗುತ್ತಿದೆ.

ಕಳಪೆ ಪ್ರದರ್ಶನದ ಮಧ್ಯೆಯೂ ಸಿಎಸ್‌ಕೆ ಮುಖ್ಯ ಕೋಚ್ ಆಗಿ ಸ್ಟೀಫನ್ ಫ್ಲೆಮಿಂಗ್ ಮುಂದುವರಿಕೆ

ಸಿಎಸ್‌ಕೆ ಮುಖ್ಯ ಕೋಚ್ ಆಗಿ ಸ್ಟೀಫನ್ ಫ್ಲೆಮಿಂಗ್ ಮುಂದುವರಿಕೆ

Stephen Fleming: 2025 ರ ಋತುವಿನಲ್ಲಿ CSK ಅಂಕಪಟ್ಟಿಯ ಕೊನೆಯ ಸ್ಥಾನದಲ್ಲಿತ್ತು ಮತ್ತು ಇತ್ತೀಚೆಗೆ ಮುಕ್ತಾಯಗೊಂಡ ಅಭಿಯಾನದಲ್ಲಿ ಎಂಟನೇ ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಯಿತು. ಆದಾಗ್ಯೂ, ಫ್ರಾಂಚೈಸಿ ಫ್ಲೆಮಿಂಗ್‌ ಕಾರ್ಯ ವೈಕರಿಯಲ್ಲಿ ಬದ್ಧವಾಗಿದೆ, ಅವರ ಒಪ್ಪಂದವನ್ನು ವಾರ್ಷಿಕವಾಗಿ ನವೀಕರಿಸಲಾಗುತ್ತದೆ ಎನ್ನಲಾಗಿದೆ.

IPL 2027ರ ಐಪಿಎಲ್‌ ಟೂರ್ನಿಯ ನಿಮಿತ್ತ ಕೆಎಲ್‌ ರಾಹುಲ್‌ಗೆ ದೊಡ್ಡ ಗಣೇಶ್‌ ಮಹತ್ವದ ಸಲಹೆ!

IPL 2027: ಕೆಎಲ್‌ ರಾಹುಲ್‌ಗೆ ದೊಡ್ಡ ಗಣೇಶ್‌ ಮಹತ್ವದ ಸಲಹೆ!

ರಿಷಭ್‌ ಪಂತ್‌ ಟ್ರೇಡ್‌ ಡೀಲ್‌ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳುತ್ತಿದ್ದಾರೆಂಬ ಸುದ್ದಿ ಹರಿದಾಡುತ್ತಿದ್ದಂತೆ ಭಾರತ ತಂಡದ ಮಾಜಿ ಆಟಗಾರ ದೊಡ್ಡ ಗಣೇಶ್‌ ಅವರು, ಕೆಎಲ್‌ ರಾಹುಲ್‌ಗೆ ಮಹತ್ವದ ಸಲಹೆಯನ್ನು ನೀಡಿದ್ದಾರೆ. ಅವರು ಮುಂದಿನ ಟೂರ್ನಿಯ ಮಿನಿ ಹರಾಜಿಗೆ ಬರಬೇಕೆಂದು ಹೇಳಿದ್ದಾರೆ.

IPL 2027: ಎಲ್‌ಎಸ್‌ಜಿ ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರಲು ಮುಂದಾದ ರಿಷಭ್‌ ಪಂತ್‌?

IPL 2027: ಎಲ್‌ಎಸ್‌ಜಿ ತೊರೆಯಲು ಮುಂದಾದ ರಿಷಭ್‌ ಪಂತ್‌?

2025 ಹಾಗೂ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ವೈಫಲ್ಯ ಅನುಭವಿಸಿದ ಐಪಿಎಲ್‌ ಇತಿಹಾಸದ ಅತ್ಯಂತ ದುಬಾರಿ ಆಟಗಾರ ರಿಷಭ್‌ ಪಂತ್‌ ಅವರಿಗೆ ಮುಂದಿನ ಟೂರ್ನಿಯಲ್ಲಿ ಸಂಭಾವನೆಯಲ್ಲಿ ಕಡಿತವಾಗಲಿದೆ. ಅವರು ಲಖನೌ ಸೂಪರ್‌ ಜಯಂಟ್ಸ್‌ ತೊರೆದು ಡೆಲ್ಲಿ ಕ್ಯಾಪಿಟಲ್ಸ್‌ಗೆ ಸೇರ್ಪಡೆಯಾಗಲು ಮುಂದಾಗಿದ್ದಾರೆ.

2030ರವರೆಗೂ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ಆಡಲಿದ್ದಾರೆಂದ ರಾಜೇಶ್‌ ಮೆನನ್‌!

2030ರವರೆಗೂ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ಆಡಲಿದ್ದಾರೆ: ರಾಜೇಶ್‌ ಮೆನನ್!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವಿರಾಟ್‌ ಕೊಹ್ಲಿ ಅವರು 2030ರವರೆಗೂ ಆಡಬಹುದೆಂದು ಬೆಂಗಳೂರು ಫ್ರಾಂಚೈಸಿ ಸಿಇಒ ರಾಜೇಶ್‌ ಮೆನನ್‌ ಹೇಳಿದ್ದಾರೆ. ಅವರು ಫಿಟ್‌ನೆಸ್‌, ಆಡಬೇಕೆಂಬ ಹಸಿವು ಹಾಗೂ ಯಶಸ್ಸಿನ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ ಎಂದು ತಿಳಿಸಿದ್ದಾರೆ.

2028 ರಿಂದ ಮಾರ್ಚ್‌ ಮೊದಲ ವಾರದಿಂದಲೇ ಐಪಿಎಲ್‌ ಟೂರ್ನಿ ಆರಂಭ, ದ್ವಿಪಕ್ಷೀಯ ಸರಣಿಗಳಿಗೆ ಕತ್ತರಿ?

2028ರಿಂದ ಮಾರ್ಚ್‌ ಮೊದಲ ವಾರದಿಂದಲೇ ಐಪಿಎಲ್‌ ಆರಂಭ?

ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಂದ್ಯಗಳ ಸಂಖ್ಯೆಯನ್ನು 74 ರಿಂದ 94ಕ್ಕೆ ಏರಿಸಬೇಕೆಂಬ ಪ್ರಕ್ರಿಯೆಯ ಬಗ್ಗೆ ಸದ್ಯ ಬಿಸಿಸಿಐನಲ್ಲಿ ಸದ್ಯ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಬಿಸಿಸಿಐ ಮೂಲಗಳು ಮಾಧ್ಯಮಗಳಿಗೆ ಮಾಹಿತಿ ನೀಡಿವೆ. ಇದರ ಪ್ರಕಾರ, 2028ರ ಐಪಿಎಲ್‌ ಟೂರ್ನಿಯನ್ನು ಮಾರ್ಚ್‌ ಮೊದಲ ವಾರದಲ್ಲಿಯೇ ಆರಂಭಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ.

ಭುಜದ ಶಸ್ತ್ರ ಚಿಕಿತ್ಸೆಯ ಯಶಸ್ಸಿನ ಬಳಿಕ ಫ್ಯಾನ್ಸ್‌ಗೆ ಸಂದೇಶ ರವಾನಿಸಿದ ರಿಯಾನ್‌ ಪರಾಗ್‌!

ಭುಜದ ಶಸ್ತ್ರ ಚಿಕಿತ್ಸೆಗೆ ಒಳಗಾದ ರಿಯಾನ್‌ ಪರಾಗ್‌!

ರಾಜಸ್ಥಾನ್‌ ರಾಯಲ್ಸ್‌ ತಂಡದ ನಾಯಕ ರಿಯಾನ್‌ ಪರಾಗ್‌ ಅವರ ಭುಜದ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿ ಮುಗಿಸಿದೆ. ಈ ವಿಷಯವನ್ನು ಆರ್‌ಆರ್‌ ನಾಯಕ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಹಾಕುವ ಮೂಲಕ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದೇಶಿ ಆವೃತ್ತಿಯ ಆರಂಭಿಕ ಕೆಲ ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಭಾರತ ಟಿ20  ತಂಡದಲ್ಲಿ ಭುವನೇಶ್ವರ್‌ ಕುಮಾರ್‌ಗೆ ಚಾನ್ಸ್‌ ನೀಡದ ಬಗ್ಗೆ ಆಕಾಶ್‌ ಚೋಪ್ರಾ ಪ್ರತಿಕ್ರಿಯೆ!

ಭಾರತ ತಂಡದಲ್ಲಿ ಭುವನೇಶ್ವರ್‌ಗೆ ಸ್ಥಾನ ನೀಡದ ಬಗ್ಗೆ ಚೋಪ್ರಾ ಪ್ರತಿಕ್ರಿಯೆ!

ಭಾರತದ ಮಾಜಿ ಆರಂಭಿಕ ಬ್ಯಾಟರ್ ಹಾಗೂ ಕ್ರಿಕೆಟ್ ವಿಶ್ಲೇಷಕ ಆಕಾಶ ಚೋಪ್ರಾ, ಭುವನೇಶ್ವರ್‌ ಕುಮಾರ್‌ ಅವರ ಟಿ20ಐ ತಂಡದಲ್ಲಿನ ಅನುಪಸ್ಥಿತಿಗೆ ಪ್ರತಿಕ್ರಿಯೆ ನೀಡಿದ್ದು, ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನ ಬಹುತೇಕ ಅಂತ್ಯಗೊಂಡಂತೆಯೇ ಕಾಣುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆರ್‌ಸಿಬಿ ಪರ ಭುವನೇಶ್ವರ್‌ ಕುಮಾರ್‌ ಅವರು ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರುವ ಮೂಲಕ ಎರಡನೇ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಎನಿಸಿಕೊಂಡಿದ್ದರು.

ಟಿ20 ಕ್ರಿಕೆಟ್‌ ಅನ್ನು ಸ್ಪರ್ಧಾತ್ಮಕವಾಗಿರಿಸಲು ಮೂರು ನಿಯಮಗಳ ಸಲಹೆ ನೀಡಿದ ಗ್ರೇಗ್‌ ಚಾಪೆಲ್‌!

ಟಿ20 ಕ್ರಿಕೆಟ್‌ಗೆ 3 ನಿಯಮಗಳ ಸಲಹೆ ನೀಡಿದ ಗ್ರೇಗ್‌ ಚಾಪೆಲ್‌!

ಪ್ರಸ್ತುತ ಟಿ20 ಕ್ರಿಕೆಟ್ ನಿರ್ಣಾಯಕ ಹಂತದತ್ತ ಸಾಗುತ್ತಿದೆ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಗ್ರೇಗ್‌ ಚಾಪೆಲ್‌ ಎಚ್ಚರಿಕೆ ನೀಡಿದ್ದಾರೆ. ಟಿ20 ಸ್ವರೂಪದ ಆಟ ಇದೀಗ ಅತಿಯಾಗಿ ಬ್ಯಾಟರ್‌ಗಳ ಪರ ವಾಲಿರುವುದರಿಂದ ಬ್ಯಾಟ್ ಮತ್ತು ಬಾಲ್ ನಡುವಿನ ಸಮತೋಲನ ಹದಗೆಟ್ಟಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಟಿ20 ಕ್ರಿಕೆಟ್‌ನಲ್ಲಿ ಮೂರು ಬದಲಾವಣೆಯನ್ನು ಅವರು ಸೂಚಿಸಿದ್ದಾರೆ.

ಶುಭಮನ್‌ ಗಿಲ್‌, ಕೆಎಲ್‌ ರಾಹುಲ್‌ ಅಲ್ಲವೇ ಅಲ್ಲ! ಭಾರತದ ಬೆಸ್ಟ್‌ ಟೆಸ್ಟ್‌ ಬ್ಯಾಟ್ಸ್‌ಮನ್‌ ಹೆಸರಿಸಿದ ಆರ್‌ ಅಶ್ವಿನ್‌

ಭಾರತದ ಬೆಸ್ಟ್‌ ಟೆಸ್ಟ್‌ ಬ್ಯಾಟರ್‌ ಆರಿಸಿದ ಆರ್‌ ಅಶ್ವಿನ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ಹೊರತಾಗಿಯೂ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟಸ್ಟ್‌ ಪಂದ್ಯದಲ್ಲಿ ರಿಷಭ್‌ ಪಂತ್‌ 81 ರನ್‌ ಗಳಿಸಿದರು. ಆ ಮೂಲಕ ತಮ್ಮ ರೆಡ್‌ ಬಾಲ್‌ ಕ್ರಿಕೆಟ್‌ನಲ್ಲಿ ತಮ್ಮ ಫಾರ್ಮ್‌ ಅನ್ನು ಮುಂದುವರಿಸಿದ್ದಾರೆ. ಹಾಗಾಗಿ ಸ್ಪಿನ್‌ ದಿಗ್ಗಜ ರವಿಚಂದ್ರನ್‌ ಅಶ್ವಿನ್‌ ಗುಣಗಾನ ಮಾಡಿದ್ದಾರೆ.

ʻಆರ್‌ಸಿಬಿಗೆ ಸೇರ್ಪಡೆಯಾಗಲು ನನಗೆ ಇಷ್ಟವಿರಲಿಲ್ಲʼ:‌ ಹಳೆಯ ದಿನಗಳನ್ನು ಮೆಲುಕು ಹಾಕಿದ ರಜತ್‌ ಪಾಟಿದಾರ್!

ನಿಜವಾಗಲೂ ಆರ್‌ಸಿಬಿಗೆ ಸೇರಲು ಇಷ್ಟವಿರಲಿಲ್ಲ: ರಜತ್‌ ಪಾಟಿದಾರ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಸತತ ಎರಡನೇ ಪ್ರಶಸ್ತಿ ಗೆದ್ದುಕೊಟ್ಟು 10 ದಿನಗಳ ಬಳಿಕ ಆರ್‌ಸಿಬಿ ನಾಯಕ ರಜತ್‌ ಪಾಟಿದಾರ್‌ ಅಚ್ಚರಿ ಹೇಳಿಕೆ ನೀಡಿದ್ದಾರೆ. ಅವರು 2022ರ ಐಪಿಎಲ್‌ ಟೂರ್ನಿಯಲ್ಲಿ ಆರ್‌ಸಿಬಿಗೆ ಸೇರಲು ಇಷ್ಟವಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ವೈಭವ್‌ ಸೂರ್ಯವಂಶಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಕ್ಸಸ್‌ ಆಗುವುದು ಅನುಮಾನ ಎಂದ ಎಬಿ ಡಿ ವಿಲಿಯರ್ಸ್‌!

ವೈಭವ್‌ ಸೂರ್ಯವಂಶಿ ಟೆಸ್ಟ್‌ನಲ್ಲಿ ಸಕ್ಸಸ್‌ ಆಗುವುದು ಅನುಮಾನ: ಎಬಿಡಿ!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್‌ ಮೂಲಕ 776 ರನ್‌ಗಳನ್ನು ಸಿಡಿಸಿ ಆರೆಂಜ್‌ ಕ್ಯಾಪ್‌ ಮುಡಿಗೇರಿಸಿಕೊಂಡಿದ್ದ ರಾಜಸ್ಥಾನ್‌ ರಾಯಲ್ಸ್‌ ತಂಡದ ಆರಂಭಿಕ ವೈಭವ್‌ ಸೂರ್ಯವಂಶಿ ಅವರ ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿ ವಿಲಿಯರ್ಸ್‌ ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ 15ನೇ ವಯಸ್ಸಿನ ಆಟಗಾರ ಟೆಸ್ಟ್‌ ಭವಿಷ್ಯದ ಬಗ್ಗೆ ಎಬಿಡಿ ಮಾತನಾಡಿದ್ದಾರೆ.

IPL 2027: ಚೆನ್ನೈ ಸೂಪರ್‌ ಕಿಂಗ್ಸ್‌ನಲ್ಲಿ ಎಂಎಸ್‌ ಧೋನಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

ಸಿಎಸ್‌ಕೆಯಲ್ಲಿ ಎಂಎಸ್‌ಡಿ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ನಾಯಕ ಎಂಎಸ್‌ ಧೋನಿ ಒಂದೇ ಒಂದು ಪ೦ದ್ಯವನ್ನು ಕೂಡ ಆಡಲಿಲ್ಲ. ಅವರು ಗಾಯಗಳ ಸಮಸ್ಯೆಯಿಂದ ಸೀಸನ್‌ ಪೂರ್ತಿ ಬೆಂಚ್‌ನಲ್ಲಿಯೇ ಕಾಲ ಕಳೆಯಬೇಕಾಯಿತು. ಇದೀಗ ಅವರು 2027ರ ಟೂರ್ನಿಯಲ್ಲಿ ಆಡುವುದು ಕೂಡ ಅನುಮಾನ ಎಂದು ಹೇಳಲಾಗುತ್ತಿದೆ.

ಐಪಿಎಲ್‌ ಫೈನಲ್‌ ಬಳಿಕ ಭೀಕರ ಕಾರು ಅಪಘಾತ, ಪ್ರಾಣಾಪಾಯದಿಂದ ಪಾರಾಗಿದ್ದ ಮೈಕಲ್‌ ಕ್ಲಾರ್ಕ್‌!

ಐಪಿಎಲ್‌ ಫೈನಲ್‌ ಬಳಿಕ ಅಪಘಾತ, ಪ್ರಾಣಾಪಾಯದಿಂದ ಕ್ಲಾರ್ಕ್‌ ಪಾರು!

2026ರ ಐಪಿಎಲ್ ಫೈನಲ್ ಪಂದ್ಯ ವೀಕ್ಷಿಸಿದ ಬಳಿಕ ವಿಮಾನ ನಿಲ್ದಾಣದತ್ತ ತೆರಳುತ್ತಿದ್ದ ವೇಳೆ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್‌ ಕ್ಲಾರ್ಕ್‌ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಕ್ಲಾರ್ಕ್ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದು, ಅವರ ದೇಹದ ಕೆಲ ಭಾಗಗಳಲ್ಲಿ ಮೂಗೇಟುಗಳಾಗಿವೆ. ಈ ಬಗ್ಗೆ ಸ್ವತಃ ಆಸೀಸ್‌ ಮಾಜಿ ನಾಯಕ ಬಹಿರಂಗಪಡಿಸಿದ್ದಾರೆ.

IPL 2026: ʻನಾನು ಈ ರೀತಿಯ ನೋಡಿರಲಿಲ್ಲʼ-ವೈಭವ್‌ ಸೂರ್ಯವಂಶಿ ಬಗ್ಗೆ ಲಿವಿಂಗ್‌ಸ್ಟೋನ್‌ ದೊಡ್ಡ ಹೇಳಿಕೆ!

ವೈಭವ್‌ ಸೂರ್ಯವಂಶಿ ಬಗ್ಗೆ ಲಿವಿಂಗ್‌ಸ್ಟೋನ್‌ ದೊಡ್ಡ ಹೇಳಿಕೆ!

ಇಂಗ್ಲೆಂಡ್ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅನ್ನು ಶ್ಲಾಘಿಸಿದ್ದಾರೆ. ಅವರು ತಮ್ಮ ಏಳು ವರ್ಷಗಳ ಐಪಿಎಲ್ ವೃತ್ತಿಜೀವನದಲ್ಲಿ ಇಂತಹ ಬ್ಯಾಟಿಂಗ್ ಅನ್ನು ಎಂದಿಗೂ ನೋಡಿರಲಿಲ್ಲ ಎಂದು ಹೇಳಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ವೈಭವ್ 29 ಎಸೆತಗಳಲ್ಲಿ 97 ರನ್ ಗಳಿಸಿದ್ದರು.

Loading...