ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Plane Crash
Ahmedabad Plane Crash: ಟೆಸ್ಟ್‌ ಫೈನಲ್, ಭಾರತ ಅಭ್ಯಾಸ ಪಂದ್ಯದ ವೇಳೆ ಸಂತಾಪ

ವಿಮಾನ ಅಪಘಾತ: ಟೆಸ್ಟ್‌ ಫೈನಲ್, ಭಾರತ ಅಭ್ಯಾಸ ಪಂದ್ಯದ ವೇಳೆ ಸಂತಾಪ

ಗುರುವಾರ ಮಧ್ಯಾಹ್ನ, 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತು ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಪ್ರಯಾಣಿಕ ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ 241 ಪ್ರಯಾಣಿಕರು ಮತ್ತು ಸಿಬ್ಬಂದಿ ಸಾವನ್ನಪ್ಪಿದ್ದರು.

Narendra Modi: ʼʼಹೃದಯ ವಿದ್ರಾವಕʼʼ; ಅಹಮದಾಬಾದ್‌ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ: ಬದುಕುಳಿದ ಏಕೈಕ ಪ್ರಯಾಣಿಕನಿಗೆ ಸಾಂತ್ವನ

ಅಹಮದಾಬಾದ್‌ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Ahmedabad plane crash: ಜೂ. 12ರಂದು ದೇಶದಲ್ಲೇ 2ನೇ ಅತೋ ದೊಡ್ಡ ವಿಮಾನ ದುರಂತ ಅಹಮದಾಬಾದ್‌ನಲ್ಲಿ ನಡೆದು ಸುಮಾರು 250ಕ್ಕೂ ಹೆಚ್ಚುಮಂದಿಯನ್ನು ಬಲಿ ಪಡೆದಿದೆ. 230 ಪ್ರಯಾಣಿಕರು, 12 ಸಿಬ್ಬಂದಿಯನ್ನು ಹೊತ್ತು ಲಂಡನ್‌ಗೆ ಹಾರಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದು, ಓರ್ವ ಬದುಕುಳಿದಿದ್ದಾನೆ. ಶುಕ್ರವಾರ (ಜೂ. 13) ನರೇಂದ್ರ ಮೋದಿ ದುರಂತ ನಡೆದ ಸ್ಥಳ ಪರಿಶೀಲಿಸಿದರು. ಜತೆಗೆ ಬದುಕುಳಿದ ಏಕೈಕ ಪ್ರಯಾಣಿಕ ರಮೇಶ್‌ ವಿಶ್ವಕುಮಾರ್‌ಗೆ ಸಾಂತ್ವನ ಹೇಳಿದರು.

Ahmedabad Plane Crash: ಅಹಮದಾಬಾದ್‌ ವಿಮಾನ ದುರಂತ; ಮೃತ ದೇಹದ ಪತ್ತೆಗೆ ಇರುವ ದಾರಿಗಳೇನು?

ವಿಮಾನ ದುರಂತ; ಮೃತ ದೇಹದ ಪತ್ತೆಗೆ ಇರುವ ದಾರಿಗಳೇನು?

ಗುರುವಾರ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ. (Ahmedabad Plane Crash) ಅವರ ಮೃತದೇಹವನ್ನು ಕೂಡ ಗುರುತಿಸಲು ಸಾಧ್ಯವಾಗುತ್ತಿಲ್ಲ. ವಿಧಿವಿಜ್ಞಾನ ತಂಡ ಹಲ್ಲುಗಳ ಮಾದರಿಗಳನ್ನು ಎಚ್ಚರಿಕೆಯಿಂದ ಹೊರತೆಗೆದು ಹೆಚ್ಚಿನ ಭದ್ರತೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತಿದೆ.

Ahmedabad Plane Crash: ವಿಮಾನ ದುರಂತ ಪ್ರಕರಣ; 200 ಡಿಎನ್ಎ ಸ್ಯಾಂಪಲ್ಸ್‌ ಸಂಗ್ರಹ, ಹಲವು ಮೃತದೇಹಗಳ ಗುರುತು ಪತ್ತೆ

ವಿಮಾನ ದುರಂತ; 200 ಡಿಎನ್ಎ ಸ್ಯಾಂಪಲ್ಸ್‌ ಸಂಗ್ರಹ

ದೇಶದ ಇತಿಹಾಸದಲ್ಲಿ ಸಂಭವಿಸಿದ ಹಲವು ಭೀಕರ ವಿಮಾನ ಅವಘಡಗಳ ಸಾಲಿಗೆ ಜೂನ್‌ 12ರಂದು ನಡೆದ ವಿಮಾನ ಅವಘಡ ಕೂಡ ಸೇರಿಕೊಂಡಿದೆ. ಅಹಮದಾಬಾದ್‌ನ ಸರ್ದಾರ್‌ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ ಕಡೆಗೆ ಹೊರಟ AI171 ವಿಮಾನ, ಟೇಕ್‌ ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.

ನಾಗರೀಕ ವಿಮಾನಯಾನ ದುರಂತ ಸರಪಣಿ

ನಾಗರೀಕ ವಿಮಾನಯಾನ ದುರಂತ ಸರಪಣಿ

2020ರ ಆಗಸ್ಟ್ 7ರಂದು ಕೇರಳದ ಕೋಯಿಕ್ಕೋಡ್‌ನಲ್ಲಿ ಏರ್ ಇಂಡಿಯ ಎಕ್ಸ್‌ಪ್ರೆಸ್ 9-1344 ವಿಮಾನ ಅವಘಡಕ್ಕೀಡಾಗಿದ್ದರಿಂದ 21 ಜನರು ಸಾವಿಗೀಡಾದರು, 100 ಮಂದಿ ಗಾಯಗೊಂಡರು. ವಂದೇಭಾರತ್ ಮಿಷನ್‌ನಡಿ ದುಬೈಗೆ ತೆರಳಿ ಬಳಿಕ ವಾಪಸಾಗುತ್ತಿದ್ದ ಎಐ ಎಕ್ಸ್‌ ಪ್ರೆಸ್ ವಿಮಾನ ದಲ್ಲಿ ಪ್ರಯಾಣಿಕರು-ಸಿಬ್ಬಂದಿ ಸೇರಿದಂತೆ ಒಟ್ಟು 190 ಜನರಿದ್ದರು.

Vijay Rupani: ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿಗೆ ಕೈಕೊಟ್ಟ ಲಕ್ಕಿ ನಂಬರ್‌; ಏನಿದು ಸಂಖ್ಯೆಯ ರಹಸ್ಯ?

ಅದೃಷ್ಟದ ಸಂಖ್ಯೆಯೇ ವಿಜಯ್‌ ರೂಪಾನಿ ಪ್ರಾಣಕ್ಕೆ ಮುಳುವಾಯ್ತು

ಗುರುವಾರ (ಜೂನ್ 12) ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರಲ್ಲಿ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ವಿಜಯ್ ರೂಪಾನಿ ಕೂಡ ಒಬ್ಬರು. ಆದರೆ ಅವರು ಅದೃಷ್ಟ ಎಂದು ತಿಳಿದಿದ್ದ ಸಂಖ್ಯೆಯೇ ಅವರ ಪಾಲಿಗೆ ಮುಳುವಾಗಿದೆ.

Ahmedabad Plane Crash: ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಸರ್ಕಾರದ ಮಹತ್ವದ ನಿರ್ಧಾರ; ಮುನ್ನೆಚ್ಚರಿಕಾ ಕ್ರಮಕ್ಕೆ ಆದ್ಯತೆ

ಏರ್‌ ಇಂಡಿಯಾ ದುರಂತ ಬೆನ್ನಲ್ಲೇ ಸರ್ಕಾರದ ಮಹತ್ವದ ನಿರ್ಧಾರ

ಗುಜರಾತ್‌ನಲ್ಲಿ ನಡೆದ ಏರ್‌ ಇಂಡಿಯಾ ವಿಮಾನದ ಪತನ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಅಪಘಾತದಲ್ಲಿ 241 ಜನರು ಮೃತಪಟ್ಟಿದ್ದಾರೆ. ಇದೀಗ ನಾಗರಿಕ ವಿಮಾನಯಾನ ಸಚಿವಾಲಯವು ಡ್ರೀಮ್‌ಲೈನರ್‌ಗಳ ದೇಶೀಯ ಫ್ಲೀಟ್‌ನ ಸುರಕ್ಷತಾ ಪರಿಶೀಲನೆಯನ್ನು ಪರಿಶೀಲಿಸುತ್ತಿದೆ.

ಗುಡ್ ಬೈ ಇಂಡಿಯಾ ಎಂದವನು ಬದುಕಿಗೇ ಗುಡ್‌ಬೈ ಹೇಳಿದ; ಅಹಮದಾಬಾದ್ ವಿಮಾನ ಪತನಕ್ಕೂ ಮುನ್ನ ಬ್ರಿಟಿಷ್ ಪ್ರಯಾಣಿಕ‌ ಮಾಡಿದ್ದ ವಿಡಿಯೊ ವೈರಲ್

ವಿಮಾನ ಪತನ: ಬ್ರಿಟಿಷ್ ಪ್ರಯಾಣಿಕ‌ ಕೊನೆಯ ವಿಡಿಯೊದಲ್ಲಿ ಹೇಳಿದ್ದೇನು?

Ahmedabad Plane Crash: ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್‌ಇಂಡಿಯಾ ವಿಮಾನ AI171ನಲ್ಲಿ ಪ್ರಯಾಣಿಸಿದ ಬ್ರಿಟಿಷ್ ಪ್ರಯಾಣಿಕ ಜೇಮೀ ರೇ ಮೀಕ್ ತನ್ನ ಕೊನೆಯ ವಿಡಿಯೊವನ್ನು ಸೋಶಿಯಲ್ ಮೀಡಿಯಾ ಪೇಜ್‍ನಲ್ಲಿ ಹಂಚಿಕೊಂಡಿದ್ದು, ಇದು ಎಲ್ಲರ ಗಮನಸೆಳೆದು ಸಿಕ್ಕಾಪಟ್ಟೆ ವೈರಲ್ (Viral Video) ಆಗಿದೆ.

Ahmedabad Plane Crash: ವಿಮಾನ ದುರಂತ ಸ್ಥಳಕ್ಕೆ ಮೋದಿ ಭೇಟಿ ; ಆಸ್ಪತ್ರೆಯಲ್ಲಿ ಗಾಯಾಳುಗಳ ಆರೋಗ್ಯ ವಿಚಾರಿಸಿದ ಪ್ರಧಾನಿ

ವಿಮಾನ ದುರಂತ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

ಗುಜರಾತಿನ ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ (Ahmedabad Plane Crash) ವಿಮಾನ ಪತನಗೊಂಡು 241 ಮಂದಿ ಮೃತಪಟ್ಟಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ಗೆ ಭೇಟಿ ನೀಡಿದ್ದಾರೆ. ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದರು.

Ahmedabad Plane Crash: ನನ್ನ ಚಿಕ್ಕಪ್ಪ ಮಗನನ್ನು ಕಳೆದುಕೊಂಡರು; ಪೈಲಟ್‌ ಕುಂದರ್‌ ಕುರಿತು ಭಾವುಕ ಪೋಸ್ಟ್‌ ಮಾಡಿದ ನಟ

ದುರಂತದಲ್ಲಿ ಮಡಿದ ಪೈಲಟ್‌ ಕುರಿತು ಪೋಸ್ಟ್‌ ಮಾಡಿದ ನಟ ವಿಕ್ರಾಂತ್‌ ಮಾಸ್ಸೆ

ಜೂನ್ 12 ರಂದು ಅಹಮದಾಬಾದ್‌ನಲ್ಲಿ (Ahmedabad Plane Crash) ನಡೆದ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ವಿಮಾನದ ಸಿಬ್ಬಂದಿಗಳು ಸೇರಿ 241 ಜನರು ಮೃತಪಟ್ಟಿದ್ದಾರೆ. ಬಾಲಿವುಡ್‌ ನಟ ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರಲ್ಲಿ ತಮ್ಮ ಕುಟುಂಬ ಸ್ನೇಹಿತ ಕ್ಲೈವ್ ಕುಂದರ್ ಕೂಡ ಸೇರಿದ್ದಾರೆ ಎಂದು ಹೇಳಿದ್ದಾರೆ.

Ahmedabad Plane Crash: ವಿಮಾನ ಅಪಘಾತ; ದುರಂತ ನಡೆದ ಸ್ಥಳಕ್ಕೆ ಇಂದು ಪ್ರಧಾನಿ ಮೋದಿ ಭೇಟಿ

ವಿಮಾನ ಅಪಘಾತ; ದುರಂತ ನಡೆದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

ಗುರುವಾರ ಗುಜರಾತಿನ ಅಹಮದಾಬಾದ್‌ನಲ್ಲಿ ನಡೆದ (Ahmedabad Plane Crash) ವಿಮಾನ ದುರಂತದಲ್ಲಿ 241 ಮಂದಿ ಸೇರಿದಂತೆ ಐವರು ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಏರ್ ಇಂಡಿಯಾ ವಿಮಾನ ಅಪಘಾತದ ನಂತರ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತ್‌ನ ಅಹಮದಾಬಾದ್‌ಗೆ ಭೇಟಿ ನೀಡಲಿದ್ದಾರೆ.

Ahmedabad Plane Crash: ದೊಡ್ಡ ಶಬ್ದ ಕೇಳಿಸಿತು, ಆಮೇಲೆ..... ವಿಮಾನ ದುರಂತದಲ್ಲಿ ಬದುಕಿ ಬಂದ ವ್ಯಕ್ತಿ ಹೇಳಿದ್ದೇನು?

ವಿಮಾನ ದುರಂತದಲ್ಲಿ ಬದುಕಿ ಬಂದ ವ್ಯಕ್ತಿ ಹೇಳಿದ್ದೇನು?

ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ಭೀಕರ (Ahmedabad Plane Crash) ವಿಮಾನಾಪಘಾತದಲ್ಲಿ ವಿಮಾನದಲ್ಲಿದ್ದ 242 ರ ಪೈಕಿ 241 ಜನರು ಮೃತಪಟ್ಟಿದ್ದಾರೆ.ಅಪಘಾತದಲ್ಲಿ ಭಾರತೀಯ ಮೂಲದ ಬ್ರಿಟಿಷ್ ಪ್ರಜೆಯೊಬ್ಬರು ಪವಾಡ ಎನ್ನುವಂತೆ ಬದುಕುಳಿದಿದ್ದಾರೆ. ಬದುಕುಳಿದ ವ್ಯಕ್ತಿ 11A ಸೀಟಿನ ಪ್ರಯಾಣಿಕ ಎಂದು ಅಹಮದಾಬಾದ್ ಪೊಲೀಸ್ ಆಯುಕ್ತ ಜಿ.ಎಸ್. ಮಲಿಕ್ ತಿಳಿಸಿದ್ದಾರೆ.

Ahmedabad Plane Crash: ತಟ್ಟೆಗೆ ಹಾಕಿದ್ದ ಊಟ, ಸಿಲುಕಿಕೊಂಡ ವಿಮಾನದ ಭಾಗಗಳು; ದುರಂತದ ಭೀಕರತೆಗೆ ಸಾಕ್ಷಿಯಾದ ಚಿತ್ರಗಳಿವು

ತಟ್ಟೆಗೆ ಹಾಕಿದ್ದ ಊಟ, ಸಿಲುಕಿಕೊಂಡ ವಿಮಾನದ ಭಾಗಗಳು; ದುರಂತದ ದೃಶ್ಯಗಳಿವು

ಗುರುವಾರ ಮಧ್ಯಾಹ್ನ ಏರ್ ಇಂಡಿಯಾ ವಿಮಾನವು ಟೇಕ್‌ ಆಪ್‌ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. ಅದು ವೈದ್ಯಕೀಯ ಕಾಲೇಜಿನ ಹಾಸ್ಟೆಲ್‌ ಮೇಲೆ ಬಿದ್ದಿದೆ. ಪರಿಣಾಮ 5 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಸದ್ಯ ಕಾರ್ಯಾಚರಣೆ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

Ahmedabad Plane Crash:  ಹಾಸ್ಟೆಲ್‌ನಲ್ಲಿ ಊಟ ಮಾಡುತ್ತಿದ್ದವರ ಮೇಲೆ ಯಮನಂತೆ ಬಂದ ವಿಮಾನ; ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ಅಹಮದಾಬಾದ್‌ ದುರಂತ; ಐವರು ವೈದ್ಯಕೀಯ ವಿದ್ಯಾರ್ಥಿಗಳು ಸಾವು

ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನವು ಗುರುವಾರ (ಜೂನ್ 12) ಮಧ್ಯಾಹ್ನ (Ahmedabad Plane Crash) ಅಹಮದಾಬಾದ್ ವಿಮಾನ ನಿಲ್ದಾಣದ ಬಳಿಯ ಮೇಘನಿ ನಗರ ಪ್ರದೇಶದಲ್ಲಿ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತು. ಫೈಟ್‌ನಲ್ಲಿದ್ದ 242 ರ ಪೈಕಿ 241 ಜನರು ಮೃತಪಟ್ಟಿದ್ದಾರೆ.

Ahmedabad Plane Crash: ವಿಮಾನದಲ್ಲಿ ಪ್ರಯಾಣಿಸಲಿದ್ದ ಮಹಿಳೆಯ ಪ್ರಾಣ ಉಳಿಸಿದ ಟ್ರಾಫಿಕ್‌ ಜಾಮ್!

ವಿಮಾನದಲ್ಲಿ ಪ್ರಯಾಣಿಸಲಿದ್ದ ಮಹಿಳೆಯ ಪ್ರಾಣ ಉಳಿಸಿದ ಟ್ರಾಫಿಕ್‌ ಜಾಮ್!

Ahmedabad Plane Crash: ಎರಡು ವರ್ಷದ ಹಿಂದೆ ಇಂಡಿಯಾಗೆ ಬಂದಿದ್ದ ಭೂಮಿ ಲಂಡನ್‌ಗೆ ಒಬ್ಬಂಟಿಯಾಗಿ ವಾಪಸ್ ಹೊರಟಿದ್ದರಂತೆ. "ನನ್ನ ಮೈಯೆಲ್ಲ ನಡುಗುತ್ತಾ ಇದೆ. ಮಾತಾಡೋಕೂ ಆಗ್ತಿಲ್ಲ. ನಡೆದಿದ್ದೆಲ್ಲ ಕೇಳಿದ ಮೇಲೆ ನನ್ನ ತಲೆ ಖಾಲಿ ಆಯ್ತು" ಅಂತ ಅವರು ದುಃಖ, ಆಘಾತದಿಂದ ಹೇಳಿಕೊಂಡಿದ್ದಾರೆ.

Ahmedabad Plane Crash: ಲಂಡನ್‌ನಲ್ಲಿ ಸೆಟಲ್‌ ಆಗಲು ಹೊರಟಿದ್ದ ಇಡೀ ಕುಟುಂಬವೇ ನಾಶ!

ಲಂಡನ್‌ನಲ್ಲಿ ಸೆಟಲ್‌ ಆಗಲು ಹೊರಟಿದ್ದ ಇಡೀ ಕುಟುಂಬವೇ ನಾಶ!

Ahmedabad Plane Crash: ಬನ್ಸ್ವಾರಾ ನಿವಾಸಿ ಪ್ರತೀಕ್ ಜೋಶಿ ತಮ್ಮ ಇಡೀ ಕುಟುಂಬದೊಂದಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಪ್ರತೀಕ್ ಜೋಶಿ ಸುಮಾರು ಆರು ವರ್ಷಗಳ ಹಿಂದೆ ಲಂಡನ್‌ಗೆ ಸ್ಥಳಾಂತರಗೊಂಡಿದ್ದರು. ಇತ್ತೀಚೆಗೆ ತಮ್ಮ ಪತ್ನಿ ಮತ್ತು ಮೂವರು ಮಕ್ಕಳೊಂದಿಗೆ ಅಲ್ಲಿ ನೆಲೆಸಲು ಪ್ಲಾನ್ ಮಾಡಿದ್ದರು.

Ahmedabad plane crash: ಅಹಮದಾಬಾದ್‌ ವಿಮಾನ ದುರಂತ; ಮೃತರ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದ ಟಾಟಾ ಗ್ರೂಪ್‌

ಅಹಮದಾಬಾದ್‌ ವಿಮಾನ ದುರಂತ: ಟಾಟಾ ಗ್ರೂಪ್‌ನಿಂದ 1 ಕೋಟಿ ರೂ.

Tata Group: ಗುಜರಾತ್‌ನ ಅಹಮದಾಬಾದ್‌ನಿಂದ 242 ಮಂದಿಯನ್ನು ಹೊತ್ತುಕೊಂಡು ಲಂಡನ್‌ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ 241 ಮಂದಿ ಮೃತಪಟ್ಟಿದ್ದಾರೆ. ಇದೀಗ ಟಾಟಾ ಗ್ರೂಪ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ತಲಾ 1 ಕೋಟಿ ರೂ. ಪರಿಹಾರ ಘೋಷಿಸಿದೆ. ಜತೆಗೆ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಗಭರವಸೆ ನೀಡಿದೆ.

India’s Deadliest Plane Crashes: ಭಾರತ ಇತಿಹಾಸದಲ್ಲಿ ದಾಖಲಾದ ಅತಿ ದೊಡ್ಡ ವಿಮಾನ ದುರಂತಗಳಿವು

ದೇಶದ ಇತಿಹಾಸದಲ್ಲಿ ನಡೆದ ಅತಿ ದೊಡ್ಡ ವಿಮಾನ ದುರಂತಗಳಿವು

ಜೂ. 12ರಂದು ಗುಜರಾತ್‌ನ ಆಗಸದಲ್ಲಿ ಭೀಕರ ಅಪಘಾತವೊಂದು ನಡೆದಿದ್ದು ಏರ್‌ ಇಂಡಿಯಾ ವಿಮಾನ ಪತನವಾಗಿ ಅದರಲ್ಲಿದ್ದ 242 ಮಂದಿಯೂ ಮೃತಪಟ್ಟಿದ್ದಾರೆ. ಅಹಮದಾಬಾದ್‌ನಿಂದ ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾ ವಿಮಾನ ಎಐ 171 ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಮೇಘಾನಿನಗರದಲ್ಲಿ ಪತನವಾಗಿದೆ. ವಿಮಾನದಲ್ಲಿ 230 ಪ್ರಯಾಣಿಕರು ಮತ್ತು 12 ಮಂದಿ ಸಿಬ್ಬಂದಿ ಇದ್ದರು. ಈ ಪೈಕಿ 241 ಮಂದಿ ಮೃತಪಟ್ಟಿದ್ದು, ಒಬ್ಬರು ಬದುಕುಳಿದಿದ್ದಾರೆ. ದೇಶದಲ್ಲಾ ಅತೀ ಭೀಕರ ವಿಮಾನ ದುರಂತಗಳ ಮಾಹಿತಿ ಇಲ್ಲಿದೆ.

ಸಾವನ್ನೇ ಗೆದ್ದ ರಮೇಶ್‌ ಎಂಬ ದೇವರ ಮಗ: ಅಹಮದಾಬಾದ್‌ ವಿಮಾನ ದುರಂತದಲ್ಲಿ ಬದುಕುಳಿದಿದ್ದೇ ಪವಾಡ; ಪಾರಾಗಿದ್ದು ಹೇಗೆ?

ಅಹಮದಾಬಾದ್‌ ವಿಮಾನ ದುರಂತದಲ್ಲಿ ರಮೇಶ್‌ ಬದುಕುಳಿದಿದ್ದು ಹೇಗೆ?

Ahmedabad Plane Crash: ಗುಜರಾತ್‌ನ ಅಹಮದಾಬಾದ್‌ ಏರ್‌ಪೋರ್ಟ್‌ನಿಂದ 242 ಮಂದಿಯನ್ನು ಹೊತ್ತು ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದೆ. ವಿಮಾನದಲ್ಲಿದ್ದ 241 ಮಂದಿ ಮೃತಪಟ್ಟಿದ್ದು, ಓರ್ವ ಪ್ರಯಾಣಿಕ ಪವಾಡದ ರೀತಿಯಲ್ಲಿ ಬದುಕುಳಿದಿದ್ದಾರೆ. ಸಣ್ಣ ಪುಟ್ಟ ಗಾಯದೊಂದಿಗೆ ಬದುಕುಳಿದ ಪ್ರಯಾಣಿಕನ್ನು 38 ವರ್ಷದ ರಮೇಶ್ ವಿಶ್ವಕುಮಾರ್‌ ಎಂದು ಗುರುತಿಸಲಾಗಿದೆ.

Ahmedabad Plane Crash: ವಿಮಾನ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ: ಮಲ್ಲಿಕಾರ್ಜುನ ಖರ್ಗೆ

ವಿಮಾನ ದುರಂತದ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಲಿ: ಮಲ್ಲಿಕಾರ್ಜುನ ಖರ್ಗೆ

Ahmedabad Plane Crash: ಅಹಮದಾಬಾದ್‌ ವಿಮಾನ ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ನಮ್ಮ ಪಕ್ಷದ ವತಿಯಿಂದ ಏನು ಸಹಾಯ ಮಾಡಬೇಕೋ ಅದನ್ನು ಮಾಡುತ್ತೇವೆ. ಈ ಬಗ್ಗೆ ಗುಜರಾತ್ ಕಾಂಗ್ರೆಸ್ ಘಟಕಕ್ಕೆ ಸೂಚಿಸುತ್ತೇನೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

Ahmedabad Plane Crash: ಗುಜರಾತ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನ; 242 ಪ್ರಯಾಣಿಕರ ಪೈಕಿ ಓರ್ವ ಪವಾಡ ಸದೃಶ ಪಾರು

ಗುಜರಾತ್‌ನಲ್ಲಿ ಏರ್‌ ಇಂಡಿಯಾ ವಿಮಾನ ಪತನ; ಓರ್ವ ಪವಾಡ ಸದೃಶ ಪಾರು

242 ಮಂದಿಯನ್ನು ಹೊತ್ತುಕೊಂಡು ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾ ವಿಮಾನ ಟೇಕ್‌ಆಫ್‌ ಆದ ಕೆಲವೇ ಕ್ಷಣಗಳಲ್ಲಿ ಪತನವಾಗಿದ್ದು, ಓರ್ವ ಪ್ರಯಾಣಿಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಈತನನ್ನು ರಮೇಶ್‌ ವಿಶ್ವಕುಮಾರ್‌ ಎಂದು ಗುರುತಿಸಲಾಗಿದೆ.

Ahmedabad Plane Crash: ವಿಮಾನ ಪತನವಾಗುವ ಮುನ್ಸೂಚನೆ ಈತನಿಗಿತ್ತಾ? ಏನಿದು ವೈರಲ್‌ ಪೋಸ್ಟ್‌?

ವಿಮಾನ ಪತನವಾಗುವ ಮುನ್ಸೂಚನೆ ಈತನಿಗಿತ್ತಾ? ಏನಿದು ವೈರಲ್‌ ಪೋಸ್ಟ್‌?

ಅಹಮದಾಬಾದ್‌ನಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಏರ್ ಇಂಡಿಯಾ ವಿಮಾನ AI171 ಅಪಘಾತಕ್ಕೀಡಾಗುವ ಕೆಲವೇ ಗಂಟೆಗಳ ಮೊದಲು, ಅದೇ ವಿಮಾನದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕನೊಬ್ಬ ದೆಹಲಿಯಿಂದ ಅಹಮದಾಬಾದ್‌ಗೆ ಪ್ರಯಾಣಿಸುವಾಗ ಹಲವಾರು ತಾಂತ್ರಿಕ ದೋಷಗಳನ್ನು ಅನುಭವಿಸಿದ್ದಾಗಿ ಹೇಳಿ ಅದರ ವಿಡಿಯೊ ಪೋಸ್ಟ್ ಮಾಡಿದ್ದಾನೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

Ahmedabad Plane Crash: ಏರ್‌ ಇಂಡಿಯಾ ವಿಮಾನ ದುರಂತದಲ್ಲಿ ಮಂಗಳೂರಿನ ಸಹ ಪೈಲಟ್‌ ಕ್ಲೈವ್‌ ಕುಂದರ್ ಸಾವು

ವಿಮಾನ ದುರಂತದಲ್ಲಿ ಮಂಗಳೂರಿನ ಸಹ ಪೈಲಟ್‌ ಕ್ಲೈವ್‌ ಕುಂದರ್ ಸಾವು

Ahmedabad Plane Crash: 1,100 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಇವರು, ಇಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್‌ ಇಂಡಿಯಾ ವಿಮಾನದ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ಜತೆ ಸಹ ಪೈಲಟ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

Ahmedabad Plane Crash: ಗುಜರಾತ್‌ ವಿಮಾನ ಪತನ; ಎಲ್ಲ 242 ಪ್ರಯಾಣಿಕರು ಸಾವು

ಗುಜರಾತ್‌ ವಿಮಾನ ಪತನ; ಎಲ್ಲ 242 ಪ್ರಯಾಣಿಕರು ಸಾವು

Gujarat Plane Crash: ಗುಜರಾತ್‌ನಲ್ಲಿ ಭೀಕರ ವಿಮಾನ ದುರಂತ ಸಂಭವಿಸಿದ್ದು, ಎಲ್ಲ 242 ಮಂದಿ ಬಲಿಯಾಗಿದ್ದಾರೆ. ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾದ ಬೋಯಿಂಗ್ 787-8 ಡ್ರೀಮ್​​ಲೈನರ್ ವಿಮಾನ ಗುಜರಾತ್‌ನ ಅಹಮದಾಬಾದ್‌ನಲ್ಲಿ ಪತನವಾಗಿದೆ. ವಿಮಾನ ಮೆಡಿಕಲ್‌ ಕಾಲೇಜಿನ ಹಾಸ್ಟೆಲ್‌ಗೆ ಅಪ್ಪಳಿದ್ದು, ವಿದ್ಯಾರ್ಥಿಗಳೂ ಮೃತಪಟ್ಟಿರುವ ಸಾಧ್ಯತೆ ಇದೆ.