Vastu Tips: ಬಿದಿರಿನ ಗಿಡ ಮನೆಯಲ್ಲಿದ್ದರೆ ಏನೆಲ್ಲಾ ಲಾಭವಿದೆ ಗೊತ್ತೇ?
ಮನೆಯ ಅಲಂಕಾರದಲ್ಲಿ ನಾವು ಕೆಲವೊಂದು ಗಿಡಗಳನ್ನು ಇಡುತ್ತೇವೆ. ಇಂತಹ ಗಿಡಗಳನ್ನು ವಾಸ್ತು ನಿಯಮಗಳ ಪ್ರಕಾರ ಇರಿಸುವುದು ಸಾಕಷ್ಟು ಲಾಭದಾಯಕ ಮತ್ತು ಒಳ್ಳೆಯ ಫಲಿತಾಂಶಗಳನ್ನು ಕೊಡುತ್ತದೆ. ಅಂತಹ ಒಂದು ಸಸ್ಯಗಳಲ್ಲಿ ಒಂದು ಬಿದಿರಿನ ಗಿಡ. ವಾಸ್ತು (Vastu Tips) ಸಲಹೆಗಳನ್ನು ಪಾಲಿಸಿ ಈ ಸಸ್ಯವನ್ನು ನೆಡುವುದರಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಬಹುದು. ಅದು ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.


ಮನೆಯಲ್ಲಿ (Vastu for home) ಕೆಲವೊಂದು ಗಿಡಗಳು ಸಕಾರಾತ್ಮ ಶಕ್ತಿಯನ್ನು (Vastu Tips for Positive energy) ತುಂಬುತ್ತದೆ. ಅಂತಹ ಸಸ್ಯಗಳಲ್ಲಿ ಬಿದಿರಿನ ಗಿಡ ( Bamboo Plant) ಕೂಡ ಒಂದು. ಬಿದಿರಿನ ಗಿಡದ ಸಕಾರಾತ್ಮಕ ಶಕ್ತಿಯ ಪ್ರಯೋಜನ ಪಡೆಯಲು ಅದಕ್ಕೆ ಸೂಕ್ತ ಸ್ಥಾನವನ್ನು ನೀಡುವುದು ಬಹು ಮುಖ್ಯವಾಗಿದೆ. ಅದೃಷ್ಟ ಮತ್ತು ಸಮೃದ್ಧಿಯನ್ನು ತರುವ ಸಸ್ಯಗಳಲ್ಲಿ ಒಂದಾದ ಬಿದಿರು ಅದರ ವಿಶಿಷ್ಟ ಗುಣಲಕ್ಷಣಗಳು ಮತ್ತು ಪ್ರಯೋಜನಗಳಿಂದಾಗಿ ಎಲ್ಲರನ್ನೂ ಸೆಳೆಯುತ್ತದೆ. ಈ ಕುರಿತು ವಾಸ್ತು ತಜ್ಞರಾದ ಪೂಜಾ ಸೇಠ್ ಹೇಳುವುದು ಹೀಗೆ..
ಬಿದಿರಿನ ಗಿಡದ ಗರಿಷ್ಠ ಪ್ರಯೋಜನ ಪಡೆಯಬೇಕಾದರೆ ಈ ಗಿಡವನ್ನು ಮನೆ ಅಥವಾ ಕಚೇರಿಯ ಆಗ್ನೇಯ ಮೂಲೆಯಲ್ಲಿ ಇಡಬೇಕು. ಯಾಕೆಂದರೆ ಈ ದಿಕ್ಕು ಫೆಂಗ್ ಶೂಯಿಯಲ್ಲಿ ಸಂಪತ್ತು ಮತ್ತು ಸಮೃದ್ಧಿಗೆ ಸಂಬಂಧಿಸಿದೆ. ಇದನ್ನು ಪೂರ್ವ ಮೂಲೆಯಲ್ಲಿ ಇಡುವುದು ಸಹ ಪ್ರಯೋಜನಕಾರಿಯಾಗಿದೆ. ಇದು ಕುಟುಂಬ ಮತ್ತು ಆರೋಗ್ಯವನ್ನು ಪ್ರತಿನಿಧಿಸುತ್ತದೆ.
ಮನೆಯಲ್ಲಿ ಬಿದಿರಿನ ಗಿಡವಿದ್ದರೆ ಅದಕ್ಕೆ ನೇರವಾಗಿ ಸೂರ್ಯನ ಬೆಳಕು ಬೀಳದಂತೆ ನೋಡಿಕೊಳ್ಳಿ. ಬಿದಿರಿನ ಸಸ್ಯಗಳಿಗೆ ಇಟ್ಟಿರುವ ನೀರನ್ನು ನಿಯಮಿತವಾಗಿ ಬದಲಾಯಿಸುತ್ತಿರಬೇಕು. ಪ್ರತಿ 7-10 ದಿನಗಳಿಗೊಮ್ಮೆಯಾದರೂ ಬದಲಾಯಿಸಬೇಕು. ಇದರಿಂದ ಸಸ್ಯವು ಆರೋಗ್ಯಕರವಾಗಿರುತ್ತದೆ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೊರಸೂಸುತ್ತದೆ. ಸಸ್ಯದಲ್ಲಿ ನಿಂತ ನೀರು ನಕಾರಾತ್ಮಕ ಶಕ್ತಿಯನ್ನು ಸೃಷ್ಟಿಸುತ್ತದೆ.
ಬಿದಿರು ಗಾಳಿ ಶುದ್ದೀಕರಣ ಗುಣಗಳಿಗೆ ಹೆಸರುವಾಸಿಯಾಗಿದೆ. ಸ್ವಚ್ಛ ಮತ್ತು ಆರೋಗ್ಯಕರ ವಾತಾವರಣವನ್ನು ಇದು ಉತ್ತೇಜಿಸುತ್ತದೆ. ,ಮಾನಸಿಕ ಒತ್ತಡವನ್ನು ಕಡಿಮೆ ಮಾಡಲು ಇದು ಸಹಾಯ ಮಾಡುತ್ತದೆ.

ಈ ಸ್ಥಳಗಳಲ್ಲಿ ಇಡಬಾರದು
ಬಿದಿರು ಮನೆ ಮತ್ತು ಕಚೇರಿಗಳಿಗೆ ಉತ್ತಮವಾಗಿದ್ದರೂ ಅದನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಇದನ್ನು ವಾಸದ ಕೋಣೆ, ಅಧ್ಯಯನ, ಪ್ರವೇಶ ಪ್ರದೇಶ ಅಥವಾ ಕಾರ್ಯಸ್ಥಳಗಳಲ್ಲಿ ಇರಿಸಬಹುದು.
ಇದನ್ನೂ ಓದಿ: Vastu Tips: ತುಳಸಿ, ಅಲೋವೆರಾ ಒಟ್ಟಿಗೆ ನೆಡಬಹುದೇ? ಏನು ಹೇಳುತ್ತದೆ ವಾಸ್ತು ಶಾಸ್ತ್ರ?
ಅದೃಷ್ಟ ತರಲು ಹೀಗೆ ಮಾಡಿ
ಮನೆಗೆ ಅದೃಷ್ಟವನ್ನು ಆಹ್ವಾನಿಸಬೇಕಾದರೆ ಬಿದಿರಿನ ಕಾಂಡಗಳನ್ನು ಕೆಂಪು ಅಥವಾ ಚಿನ್ನದ ಬಣ್ಣದ ರಿಬ್ಬನ್ನಿಂದ ಕಟ್ಟಿಡಿ. ಬೆಣಚುಕಲ್ಲುಗಳು ಮತ್ತು ನೀರಿನಿಂದ ತುಂಬಿದ ಗಾಜಿನ ಪಾತ್ರೆಯಲ್ಲಿ ಬಿದಿರಿನ ಗಿಡವನ್ನು ಇಡಬಹುದು. ಅದರ ಸಕಾರಾತ್ಮಕ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಮಡಕೆಯ ಬಳಿ ನಾಣ್ಯ ಅಥವಾ ಹರಳುಗಳನ್ನು ಇರಿಸಬೇಕು ಎನ್ನುತ್ತಾರೆ ವಾಸ್ತು ತಜ್ಞರು.