Viral Video: ರೈಲ್ವೆ ಸಿಬ್ಬಂದಿ ನಡುವೆ ಮಾರಾಮಾರಿ... ಅಷ್ಟಕ್ಕೂ ಆಗಿದ್ದೇನು? ವಿಡಿಯೊ ವೈರಲ್
Fight breaks out between railway staff: ಮಾತಿನ ಚಕಮಕಿಯಾಗಿ ಪ್ರಾರಂಭವಾದ ಜಗಳ ನಂತರ ಗುಂಪುಗಳ ನಡುವೆ ಹೊಡೆದಾಟಕ್ಕೆ ಕಾರಣವಾದ ಘಟನೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ರೈಲು ಸಿಬ್ಬಂದಿಗಳು ಪ್ರಯಾಣಿಕರ ಮುಂದೆಯೇ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಇದರ ವಿಡಿಯೊ ವೈರಲ್ ಆಗಿದೆ.

-

ನವದೆಹಲಿ: ಐಆರ್ಸಿಟಿಸಿ ನೌಕರರ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿಯಾಗಿ ಪ್ರಾರಂಭವಾಗಿದ್ದು, ಶೀಘ್ರದಲ್ಲೇ ಹಿಂಸಾತ್ಮಕ ಜಗಳವಾಗಿ ಮಾರ್ಪಟ್ಟ ಘಟನೆ ದೆಹಲಿ ರೈಲ್ವೆ ನಿಲ್ದಾಣದಲ್ಲಿ (Delhi Railway Station) ನಡೆದಿದೆ. ಕೆಲವರು ಇನ್ನೂ ಸಮವಸ್ತ್ರದಲ್ಲಿದ್ದರು. ದಿಗ್ಭ್ರಮೆಗೊಂಡ ಪ್ರಯಾಣಿಕರು ನೋಡುತ್ತಿದ್ದಂತೆ ರೈಲ್ವೆ ಸಿಬ್ಬಂದಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಒದೆತ, ಹೊಡೆತಗಳ ಸುರಿಮಳೆಯೊಂದಿಗೆ ಶೀಘ್ರದಲ್ಲೇ ಸಂಪೂರ್ಣ ಅವ್ಯವಸ್ಥೆಯಾಗಿ ಮಾರ್ಪಟ್ಟಿತು. ಇಡೀ ಘಟನೆಯನ್ನು ಕ್ಯಾಮರಾದಲ್ಲಿ ಸೆರೆಹಿಡಿಯಲಾಗಿದ್ದು, ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral Video) ಆಗಿದೆ.
ಒಬ್ಬ ವ್ಯಕ್ತಿ ತನ್ನ ಬೆಲ್ಟ್ ತೆಗೆದು ಸಹೋದ್ಯೋಗಿಯ ಮೇಲೆ ಬೀಸುವುದನ್ನು ಈ ವಿಡಿಯೊದಲ್ಲಿ ನೋಡಬಹುದು. ಇತರರು ಬರಿ ಕೈಗಳಿಂದ ಪ್ರತೀಕಾರ ತೀರಿಸಿಕೊಳ್ಳುವುದರಿಂದ ಗಲಾಟೆ ಮತ್ತಷ್ಟು ಹೆಚ್ಚಾಗುತ್ತದೆ. ಪ್ರಯಾಣಿಕರು ಗೊಂದಲದಿಂದ ಹಿಂದೆ ಸರಿಯುವುದನ್ನು ಕಾಣಬಹುದು. ಕೆಲವರು ತಮ್ಮ ಫೋನ್ಗಳಲ್ಲಿ ಘಟನೆಯನ್ನು ರೆಕಾರ್ಡ್ ಮಾಡುತ್ತಿದ್ದರೆ, ಇತರರು ಜಗಳ ಹೆಚ್ಚು ಹಿಂಸಾತ್ಮಕವಾಗುತ್ತಿದ್ದಂತೆ ದಿಗ್ಭ್ರಮೆಯಾಗಿ ನಿಂತಿದ್ದರು.
ವಿಡಿಯೊ ವೀಕ್ಷಿಸಿ:
I am fixated on the guy who towards the end of the video pushes the dustbin six inches back to its vague spot in the middle of the platform.
— Smita Prakash (@smitaprakash) October 17, 2025
Indian railway platform is a metaphor of life in India. pic.twitter.com/OyWUJ5phIw
ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ. ತನ್ನ ಅಧಿಕೃತ ಹೇಳಿಕೆಯಲ್ಲಿ, ಈ ವಿಚಾರದಲ್ಲಿ ಭಾಗಿಯಾದವರನ್ನು ಈಗಾಗಲೇ ಬಂಧಿಸಲಾಗಿದೆ ಎಂದು ತಿಳಿಸಿದೆ. ರೈಲ್ವೆ ಆಡಳಿತವು ಘಟನೆಯ ಬಗ್ಗೆ ತಕ್ಷಣ ತಿಳಿದುಕೊಂಡು ಕಠಿಣ ಕ್ರಮ ಕೈಗೊಂಡಿದೆ. ಎಲ್ಲಾ ತಪ್ಪಿತಸ್ಥವೈರನ್ನು ರೈಲ್ವೆ ರಕ್ಷಣಾ ಪಡೆ (RPF) ಬಂಧಿಸಿದೆ. ಸಂಬಂಧಪಟ್ಟ ಗುತ್ತಿಗೆದಾರರಿಗೆ 5 ಲಕ್ಷ ರೂ. ದಂಡ ವಿಧಿಸಲಾಗಿದೆ ಮತ್ತು ಒಪ್ಪಂದವನ್ನು ರದ್ದುಗೊಳಿಸಲು ನೋಟಿಸ್ ನೀಡಲಾಗಿದೆ ಎಂದು ಉತ್ತರ ರೈಲ್ವೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಬಂಧನದ ಸಮಯದಲ್ಲಿ ಭಾಗಿಯಾಗಿರುವ ನಾಲ್ವರು ಮಾರಾಟಗಾರರ ಗುರುತಿನ ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಲಾಖೆ ಉಲ್ಲೇಖಿಸಿದೆ.
ಇದನ್ನೂ ಓದಿ: Viral Video: ಕುಡಿದು ತೂರಾಡಿದ ಪೊಲೀಸಪ್ಪ... ಅಡ್ಡಾದಿಡ್ಡಿ ಕಾರು ಚಲಾಯಿಸಿ ಭಾರೀ ಅವಾಂತರ!
ದೂರುಗಳ ಮೇಲಿನ ಕ್ರಮಕ್ಕೆ ಸಂಬಂಧಿಸಿದಂತೆ, ಭಾರತೀಯ ರೈಲ್ವೆ ದೇಶದಲ್ಲೇ ಅತ್ಯುತ್ತಮ ಇಲಾಖೆಯಾಗಿದೆ. ಹೆಚ್ಚಿನ ಶುಲ್ಕ ವಿಧಿಸುವುದರ ವಿರುದ್ಧ ಸಾಕ್ಷಿ ಇದ್ದರೆ, ಹೆಚ್ಚಿನ ಶುಲ್ಕ ವಿಧಿಸುವುದಕ್ಕೆ 5 ರೂಪಾಯಿಗಳಿಂದ 50000 ರೂ.ವರೆಗೆ ದಂಡ ವಿಧಿಸುತ್ತಾರೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ರೈಲ್ವೆಯನ್ನು ಶ್ಲಾಘಿಸಿದ್ದಾರೆ.
ಅಂದಹಾಗೆ, ಭಾರತೀಯ ರೈಲ್ವೆಯು ಪ್ರಯಾಣಿಕ ಸ್ನೇಹಿ ವೈಶಿಷ್ಟ್ಯವನ್ನು ಪರಿಚಯಿಸಲು ಸಜ್ಜಾಗಿದೆ. ಶೀಘ್ರದಲ್ಲೇ, ಪ್ರಯಾಣಿಕರು ರದ್ದತಿ ಶುಲ್ಕವನ್ನು ಪಾವತಿಸದೆ ತಮ್ಮ ರೈಲು ಪ್ರಯಾಣವನ್ನು ಮರು ನಿಗದಿಪಡಿಸಬಹುದು. ಅಂದರೆ, ದಂಡವಿಲ್ಲದೆ ಪ್ರಯಾಣ ದಿನಾಂಕವನ್ನು ಬದಲಾಯಿಸಬಹುದು. ರೈಲು ಪ್ರಯಾಣಿಕರು ಹೆಚ್ಚಾಗಿ ಪ್ರಯಾಣ ರದ್ದಾದಾಗ ಅಥವಾ ಟಿಕೆಟ್ ಬುಕ್ ಮಾಡಿ, ಕೊನೆ ನಿಮಿಷದಲ್ಲಿ ರೈಲಿನಲ್ಲಿ ಪ್ರಯಾಣಿಸಲು ಸಾಧ್ಯವಾಗದೇ ಇದ್ದಾಗ ಹಣದ ನಷ್ಟವನ್ನು ಎದುರಿಸುತ್ತಾರೆ. ಹೀಗಾಗಿ ಈ ಸಮಸ್ಯೆಯನ್ನು ಪರಿಹರಿಸಲು ರೈಲ್ವೇ ಇಲಾಖೆ ಈ ಹೊಸ ಗುರಿಯ ಬಗ್ಗೆ ಯೋಜಿಸಿದೆ. ಹೆಚ್ಚು ಹೆಚ್ಚು ರೈಲು ಪ್ರಯಾಣ ಮಾಡಲು, ಅನುಕೂಲಕರ ಮತ್ತು ಕೈಗೆಟುಕುವಂತೆ ಮಾಡುವತ್ತ ಈ ಕ್ರಮವನ್ನು ಪ್ರಮುಖ ಹೆಜ್ಜೆ ಎಂದು ವಿವರಿಸಲಾಗುತ್ತಿದೆ. ವಿಶೇಷವಾಗಿ ತಾವು ಪ್ರಯಾಣ ಮಾಡುವಾಗ ಹಠಾತ್ ಬದಲಾವಣೆಗಳನ್ನು ಎದುರಿಸುವವರಿಗೆ ಈ ಯೋಜನೆ ಹೆಚ್ಚು ಉಪಯುಕ್ತವಾಗಿದೆ.