ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Robbery: ದೇವಸ್ಥಾನಕ್ಕೆ ಕನ್ನ ಹಾಕಲು ಬಂದು ಅಲ್ಲೇ ಮಲಗಿದ ಕಳ್ಳ; ನಂತರ ನಡೆದಿದ್ದೇನು ಗೊತ್ತಾ?

ಜಾರ್ಖಂಡ್‌ನ ನೋಮುಂಡಿಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೀರ್ ನಾಯಕ್ ಎಂಬ ಯುವಕ ಕಾಳಿ ದೇವಸ್ಥಾನಕ್ಕೆ ಕಳ್ಳತನ ಮಾಡಲು ಬಂದು, ಮದ್ಯದ ಅಮಲಿನಲ್ಲಿ ದೇವಸ್ಥಾನದೊಳಗೇ ಮಲಗಿಬಿಟ್ಟಿದ್ದಾನೆ. ಸ್ಥಳೀಯರು ಮತ್ತು ಅರ್ಚಕರು ಆತನು ಮಲಗಿರುವುದನ್ನು ಕಂಡು ಕದ್ದ ವಸ್ತುಗಳೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ

ಕಳ್ಳತನ ಮಾಡಲು ಬಂದು ದೇವಸ್ಥಾನದಲ್ಲೇ ನಿದ್ರೆಗೆ ಜಾರಿದ ಕಳ್ಳ..!

ಕಳ್ಳತನ ಮಾಡಲು ಬಂದ ನಿದ್ರೆಗೆ ಜಾರಿದ ಕಳ್ಳ

Profile Sushmitha Jain Jul 18, 2025 9:12 PM

ನೋಮುಂಡಿ: ಜಾರ್ಖಂಡ್‌ನ (Jharkhand) ನೋಮುಂಡಿಯಲ್ಲಿ (Noamundi) ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ವೀರ್ ನಾಯಕ್ (Veer Nayak) ಎಂಬ ಯುವಕ, ಕಾಳಿ ದೇವಸ್ಥಾನಕ್ಕೆ ಕಳ್ಳತನ (Theft) ಮಾಡಲು ಬಂದು, ಮದ್ಯದ ಅಮಲಿನಲ್ಲಿ ದೇವಸ್ಥಾನದೊಳಗೇ ಮಲಗಿಬಿಟ್ಟಿದ್ದಾನೆ. ಸ್ಥಳೀಯರು ಮತ್ತು ಅರ್ಚಕರು ಆತನು ಮಲಗಿರುವುದನ್ನು ಕಂಡು ಕದ್ದ ವಸ್ತುಗಳೊಂದಿಗೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಆರೋಪಿ ವೀರ್ ನಾಯಕ್ ಪೊಲೀಸರಿಗೆ ತಿಳಿಸಿದ ಪ್ರಕಾರ, ಸೋಮವಾರ ರಾತ್ರಿ ಸ್ನೇಹಿತರೊಂದಿಗೆ ಅತಿಯಾಗಿ ಮದ್ಯ ಸೇವಿಸಿದ್ದ. ಬಳಿಕ, ಕಾಳಿ ದೇವಸ್ಥಾನದ ಮುಂಭಾಗದ ಗೋಡೆ ಹಾರಿ, ಬಾಗಿಲಿನ ಬೀಗ ಒಡೆದು ಒಳನುಗ್ಗಿದ್ದ. ಆತ ಒಳಗೆ ದೊರೆತ ಅಲಂಕಾರ ವಸ್ತುಗಳು, ಗಂಟೆ, ಪೂಜಾ ತಟ್ಟೆ ಮತ್ತು ಆಭರಣಗಳನ್ನು ಕದ್ದಿದ್ದಾನೆ. ಕದ್ದ ವಸ್ತುಗಳನ್ನು ಚೀಲದಲ್ಲಿ ತುಂಬಿಕೊಂಡು ಓಡಿಹೋಗಲು ಸಿದ್ಧನಾಗಿದ್ದ ಆತ, ಮದ್ಯದ ಅಮಲಿನಿಂದ ನಿದ್ರೆಗೆ ಜಾರಿ ಅಲ್ಲೇ ಮಲಗಿಬಿಟ್ಟಿದ್ದಾನೆ.

ಮಂಗಳವಾರ ಬೆಳಗ್ಗೆ ಸ್ಥಳೀಯರು ದೇವಸ್ಥಾನದೊಳಗೆ ಒಬ್ಬ ವ್ಯಕ್ತಿ ಗಾಢವಾಗಿ ಮಲಗಿರುವುದನ್ನು ಕಂಡಿದ್ದಾರೆ. ಶಂಕೆಯಿಂದ ಆತನ ಚೀಲವನ್ನು ತೆರೆದು ಪರಿಶೀಲಿಸಿದಾಗ, ದೇವಸ್ಥಾನದ ವಸ್ತುಗಳು ತುಂಬಿರುವುದು ಕಂಡುಬಂದಿತು. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಸುದ್ದಿಯನ್ನು ಓದಿ:Viral News: ಮಾಲಕಿಯನ್ನು ಪ್ರಾಣಾಪಾಯದಿಂದ ಕಾಪಾಡಿದ ಬೆಕ್ಕುಗಳು; ಸಿಸಿಟಿವಿ ವಿಡಿಯೋ ವೈರಲ್
ಪೊಲೀಸರ ಪ್ರಕಾರ, ನಾಯಕ್ ದೇವಾಲಯದ ಗರ್ಭಗುಡಿಯಿಂದ ಚಿನ್ನ, ಬೆಳ್ಳಿಯ ಆಭರಣಗಳು ಮತ್ತು ದೇವತೆಯ ಕಿರೀಟ ಸೇರಿದಂತೆ ಹಲವಾರು ಮೌಲ್ಯಯುತ ವಸ್ತುಗಳನ್ನು ಸಂಗ್ರಹಿಸಿದ್ದ. ವಿಚಾರಣೆಯಲ್ಲಿ ಆರೋಪಿಯು ಕಳ್ಳತನದ ಯತ್ನವನ್ನು ಒಪ್ಪಿಕೊಂಡಿದ್ದಾನೆ, ಆದರೆ ಯಾವಾಗ ನಿದ್ರೆಗೆ ಬಂತೆಂಬುದೇ ತಿಳಿದಿಲ್ಲ ಎಂದಿದ್ದಾನೆ.