Viral Video: ಅರೇ ಇದೆಂಥಾ ಹಬ್ಬ! ಇಲ್ಲಿ ಸೆಗಣಿ ಎರಚೋದೆ ದೀಪಾವಳಿಯ ವಿಶೇಷವಂತೆ
Men Throw Cow Dung At Each Other: ದೀಪಾವಳಿ ಅಂದರೆ ನೆನಪಾಗುವುದು ದೀಪಗಳು ಹಾಗೂ ಪಟಾಕಿ. ಬೆಳಕಿನ ಹಬ್ಬವನ್ನು ದೇಶದೆಲ್ಲೆಡೆ ದೀಪ ಬೆಳಗಿಸಿ, ಪಟಾಕಿ ಸಿಡಿಸಿ ಆಚರಿಸಲಾಗುತ್ತದೆ. ಆದರೆ, ತಮಿಳುನಾಡಿನಲ್ಲಿ ಹಸುವಿನ ಸಗಣಿ ಎಸೆಯುವ ಮೂಲಕ ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸಲಾಗುತ್ತದೆ.
-
Priyanka P
Oct 26, 2025 6:01 PM
ಚೆನ್ನೈ: ಭಾರತದ ಹಲವೆಡೆ ದೀಪಗಳನ್ನು ಬೆಳಗಿಸಿ, ಸಿಹಿತಿಂಡಿಗಳು ಮತ್ತು ಪಟಾಕಿಗಳೊಂದಿಗೆ ದೀಪಾವಳಿಯನ್ನು (Deepavali) ಆಚರಿಸಿದರೆ, ಕರ್ನಾಟಕ-ತಮಿಳುನಾಡು ಗಡಿಯಲ್ಲಿರುವ ಒಂದು ಸಣ್ಣ ಹಳ್ಳಿಯು ಪರಸ್ಪರ ಹಸುವಿನ ಸಗಣಿ ಎಸೆಯುವ ಮೂಲಕ ವಿಭಿನ್ನ ರೀತಿಯಲ್ಲಿ ಹಬ್ಬವನ್ನು ಆಚರಿಸುತ್ತದೆ. ಗೋರೆಹಬ್ಬ ಉತ್ಸವ ಎಂದು ಕರೆಯಲ್ಪಡುವ ಈ ವಿಶಿಷ್ಟ ಆಚರಣೆಯು ದೀಪಾವಳಿಯ ಒಂದು ದಿನದ ನಂತರ ಅಕ್ಟೋಬರ್ 23 ರಂದು ನಡೆಯಿತು. ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ (Viral Video). ಇದು ನೆಟ್ಟಿಗರನ್ನು ಆಕರ್ಷಿಸಿದೆ.
ಪ್ರತಿ ವರ್ಷ, ಬಲಿ ಪಾಡ್ಯಮಿಯಂದು, ಗುಮ್ಮಟಪುರದ ಗ್ರಾಮಸ್ಥರು ತಮ್ಮ ಸ್ಥಳೀಯ ದೇವರು ಬೀರೇಶ್ವರ ಸ್ವಾಮಿಯ ಜನನವನ್ನು ಆಚರಿಸಲು ಈ ಆಚರಣೆಗಾಗಿ ಒಟ್ಟುಗೂಡುತ್ತಾರೆ. ದಂತಕಥೆಯ ಪ್ರಕಾರ, ಹಿಂದೂ ಸಂಪ್ರದಾಯದಲ್ಲಿ ಪವಿತ್ರ ಮತ್ತು ಶುದ್ಧೀಕರಣಕಾರಿ ಎಂದು ಪರಿಗಣಿಸಲಾದ ಹಸುವಿನ ಸಗಣಿಯಲ್ಲಿ ಬೀರೇಶ್ವರ ಸ್ವಾಮಿಯು ಜನಿಸಿದ್ದರು ಎಂದು ನಂಬಲಾಗಿದೆ.
ವಿಡಿಯೊ ವೀಕ್ಷಿಸಿ:
🇮🇳 VIDEO Crowds pelt each other with cow dung to mark the end of Diwali
— AFP News Agency (@AFP) October 24, 2025
Joyful crowds pelted each other with fistfuls of cow manure as part of one village's local ritual to mark the end of Diwali, India's most important Hindu festival. #AFPVertical pic.twitter.com/KY170eSFU9
ಗ್ರಾಮಸ್ಥರು ಹತ್ತಿರದ ಮನೆಗಳಿಂದ ಹಸುವಿನ ಸಗಣಿ ಸಂಗ್ರಹಿಸಿ, ಟ್ರ್ಯಾಕ್ಟರ್ ಟ್ರಾಲಿಗಳಲ್ಲಿ ತುಂಬಿಸಿ, ದೇವಾಲಯಕ್ಕೆ ತರುವುದರೊಂದಿಗೆ ದಿನವು ಪ್ರಾರಂಭವಾಗುತ್ತದೆ. ಅರ್ಚಕರಿಂದ ಪವಿತ್ರಗೊಳಿಸಿದ ನಂತರ, ಗೊಬ್ಬರವನ್ನು ತೆರೆದ ಮೈದಾನದಲ್ಲಿ ಎಸೆಯಲಾಗುತ್ತದೆ. ಪುರುಷರು ಗೊಬ್ಬರದ ರಾಶಿಯೊಳಗೆ ನಡೆದು ಮದ್ದುಗುಂಡುಗಳಂತೆ ರೂಪಿಸಿ ಎಸೆಯುತ್ತಾರೆ. ಇಲ್ಲಿಂದ ಸ್ನೇಹಪರ ಸಗಣಿ ಯುದ್ಧ ಪ್ರಾರಂಭವಾಗುತ್ತದೆ. ನಗು, ಜಯಘೋಷಗಳೊಂದಿಗೆ ಸಗಣಿಯನ್ನು ಪರಸ್ಪರ ಎಸೆಯಲಾಗುತ್ತದೆ.
ಸ್ಥಳೀಯರಿಗೆ, ಇದು ಕೇವಲ ವಿಲಕ್ಷಣ ಆಚರಣೆಯಲ್ಲ, ಬದಲಾಗಿ ಶುದ್ಧೀಕರಣ ಮತ್ತು ಸಮುದಾಯ ಬಾಂಧವ್ಯದ ಸಂಕೇತವಾಗಿದೆ. ಹಸುವಿನ ಸಗಣಿಯು ಚರ್ಮ ರೋಗಗಳು ಮತ್ತು ಇತರ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ ಎಂದು ಹಲವರು ನಂಬುತ್ತಾರೆ. ಹೀಗಾಗಿ ಈ ಹಬ್ಬವು ಬಹಳ ವಿಶೇಷವಾಗಿದೆ. ಬಹಳಷ್ಟು ಮಂದಿ ಈ ಉತ್ಸವವನ್ನು ವೀಕ್ಷಿಸಲು ಆಗಮಿಸುತ್ತಾರೆ. ಬೇರೆ ಊರುಗಳಿಂದ ಬಂದು ಈ ಹಬ್ಬವನ್ನು ನೋಡಿ ಆನಂದಿಸುತ್ತಾರೆ. ಊರಿನ ಜನರು ಕೂಡ ಬಹಳ ಉತ್ಸಾಹದಲ್ಲಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ: ದೀಪಾವಳಿ ವೇಳೆ ಮಿನಿ ಭಾರತವಾದ ಸಿಡ್ನಿ; ಬೆಳಕಿನ ಹಬ್ಬದಲ್ಲಿ ಆಸ್ಟ್ರೇಲಿಯಾದ ಪ್ರಮುಖ ನಗರ ಮಿಂದೆದ್ದಿದ್ದು ಹೀಗೆ
ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದು ಭಾರತೀಯ ಸಂಸ್ಕೃತಿಯಲ್ಲ, ಇದು ದ್ರಾವಿಡ ಸಂಸ್ಕೃತಿ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಇತರರು ಇದನ್ನು ನಂಬಿಕೆಗೆ ಆಳವಾಗಿ ಸಂಬಂಧಿಸಿರುವ ಸ್ಥಳೀಯ ಸಂಪ್ರದಾಯವೆಂದು ಸಮರ್ಥಿಸಿಕೊಂಡರು. ಇದನ್ನು ಗಂಗಾ ನದಿಗಿಂತ ಹೆಚ್ಚು ನೈರ್ಮಲ್ಯ ಎಂದು ಹಲವರು ಹೇಳಿದರು.