Viral Video: ವಂದೇ ಭಾರತ್ ರೈಲಿನಲ್ಲಿ ಈ ದಂಪತಿ ಮಾಡಿದ ಕೆಲ್ಸಕ್ಕೆ ನೆಟ್ಟಿಗರು ಫುಲ್ ಗರಂ-ವಿಡಿಯೊ ಫುಲ್ ವೈರಲ್
ಕಾಶ್ಮೀರದ ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ ತಮ್ಮ ಮಗನ ಆರನೇ ಹುಟ್ಟುಹಬ್ಬವನ್ನು ಅವಿಸ್ಮರಣೀಯಗೊಳಿಸಲು ವಾರಾಣಸಿಯ ದಂಪತಿಯ ಪ್ರಯತ್ನವು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಆಚರಣೆಯ ಸಮಂಜಸತೆಯನ್ನು ಅನೇಕರು ಪ್ರಶ್ನಿಸಿದ್ದಾರೆ.


ಶ್ರೀನಗರ: ಕಾಶ್ಮೀರದ (Kashmir) ಮೊದಲ ವಂದೇ ಭಾರತ್ ಎಕ್ಸ್ಪ್ರೆಸ್ನಲ್ಲಿ (Vande Bharat Express) ತಮ್ಮ ಮಗನ ಆರನೇ ಹುಟ್ಟುಹಬ್ಬವನ್ನು (Birthday) ಅವಿಸ್ಮರಣೀಯಗೊಳಿಸಲು ವಾರಾಣಸಿಯ (Varanasi) ದಂಪತಿಯ ಪ್ರಯತ್ನವು ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಕ್ಕೆ ಕಾರಣವಾಗಿದೆ. ಸುರಕ್ಷತೆ ಮತ್ತು ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಆಚರಣೆಯ ಸಮಂಜಸತೆಯನ್ನು ಅನೇಕರು ಪ್ರಶ್ನಿಸಿದ್ದಾರೆ.
ಸುದ್ದಿ ಸಂಸ್ಥೆ ಹಂಚಿಕೊಂಡ ವಿಡಿಯೊ ಪೋಸ್ಟ್ನ ಪ್ರಕಾರ, ರಾಕೇಶ್ ಮತ್ತು ನೇಹಾ ಜೈಸ್ವಾಲ್ ದಂಪತಿ ತಮ್ಮ ಮಗ ಮೋಕ್ಷನ ಆರನೇ ಹುಟ್ಟುಹಬ್ಬವನ್ನು ಜೂನ್ 6ರಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಅಂಜಿ ಖಾದ್ ಸೇತುವೆಯನ್ನು ರೈಲು ದಾಟುವಾಗ ಕೇಕ್ ಕತ್ತರಿಸಿ ಆಚರಿಸಿದ್ದಾರೆ. ವಿಡಿಯೊದಲ್ಲಿ, ನೇಹಾ ಜೈಸ್ವಾಲ್ ಕೇಕ್ನ ಮೇಲೆ ಮೇಣದ ಬತ್ತಿಗಳನ್ನು ಬೆಳಗಿಸುವುದು ಕಾಣಿಸುತ್ತದೆ.
#WATCH | A couple, Rakesh and Neha Jaiswal from Varanasi, celebrate their son Moksh's sixth birthday inside Kashmir's first Vande Bharat express train, cutting the cake as the train reaches Anji Khad Bridge, inaugurated by PM Narendra Modi yesterday.
— ANI (@ANI) June 7, 2025
Rakesh Jaiswal says, "It was… pic.twitter.com/cr6b3UaI4K
ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪ
ವಿಡಿಯೊ ವೈರಲ್ ಆದ ಬಳಿಕ, ಅನೇಕರು ಈ ಕೃತ್ಯವನ್ನು ಜವಾಬ್ದಾರಿಯಿಲ್ಲದ ಮತ್ತು ಸಾರ್ವಜನಿಕ ಸಾರಿಗೆಗೆ ಸೂಕ್ತವಲ್ಲದ್ದು ಎಂದು ಟೀಕಿಸಿದ್ದಾರೆ. “ರೈಲು ನಿಮ್ಮ ಪಾರ್ಟಿ ಹಾಲ್ ಅಲ್ಲ. ಒಳಗೆ ಮೇಣದ ಬತ್ತಿಗಳನ್ನು ಬೆಳಗಿಸುವುದು ಅಪಾಯಕಾರಿ ಮಾತ್ರವಲ್ಲ, ಮೂಲಭೂತ ನಾಗರಿಕ ಶಿಷ್ಟಾಚಾರದ ಕೊರತೆಯನ್ನು ತೋರಿಸುತ್ತದೆ” ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
“ರೈಲಿನೊಳಗೆ ಬೆಂಕಿಕಡ್ಡಿ ಗೀರುವುದನ್ನು ನಿಷಿದ್ಧವೆಂದು ಭಾವಿಸಿದ್ದೆ” ಎಂದು ಮತ್ತೊಬ್ಬರು ರೈಲ್ವೇ ಸಚಿವಾಲಯ ಮತ್ತು ಸಚಿವ ಅಶ್ವಿನಿ ವೈಷ್ಣವ್ರನ್ನು ಟ್ಯಾಗ್ ಮಾಡಿ ಬರೆದಿದ್ದಾರೆ. “ಇಂತಹ ಪ್ರಯಾಣಿಕರನ್ನು ಇತರರ ಜೀವಕ್ಕೆ ಅಪಾಯ ತಂದವರೆಂದು ಶಿಕ್ಷಿಸಬೇಕು. ಇದು ದುರಂತವಾಗುವ ಮೊದಲು ಉದಾಹರಣೆಯಾಗಲಿ” ಎಂದು ಇನ್ನೊಬ್ಬರು ಒತ್ತಾಯಿಸಿದ್ದಾರೆ.
ರೈಲ್ವೇ ನಿಯಮದ ಕುರಿತು ಪ್ರಶ್ನೆ
“ಭಾರತೀಯ ರೈಲ್ವೇಯಲ್ಲಿ ಮೇಣದ ಬತ್ತಿಗಳನ್ನು ಬೆಳಗಿಸಲಿ ಅನುಮತಿ ಇದೆಯೇ, ಅಥವಾ ನಿಯಮದ ವಿರುದ್ಧವೇ? ನಿಷಿದ್ಧವಾದರೆ, ಶಿಕ್ಷೆ ಏನು? ಯಾವ ಸೆಕ್ಷನ್ಗಳಡಿಯಲ್ಲಿ?” ಎಂದು ಕೆಲವರು ಪ್ರಶ್ನಿಸಿದ್ದಾರೆ. “ಎಲ್ಲರ ಸುರಕ್ಷತೆಗಾಗಿ ರೈಲಿನೊಳಗೆ ಮೇಣದ ಬತ್ತಿಗಳನ್ನು ಬೆಳಗಿಸದಿರೋಣ,”ಎಂದು ಮತ್ತೊಬ್ಬ ಬಳಕೆದಾರ ಸಲಹೆ ನೀಡಿದ್ದಾರೆ. ಈ ಘಟನೆ ಕುರಿತು ಭಾರತೀಯ ರೈಲ್ವೇ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.