ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Aarama

Dr N Someshwara Column: ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಆಯುರ್ವೇದವು ಮಕ್ಕಳಿಲ್ಲದ ಸ್ಥಿತಿಯನ್ನು ‘ವಂಧ್ಯತ್ವ’ ಎಂದು ಕರೆದಿದೆ. ಮಕ್ಕಳಾಗ ಬೇಕಾದರೆ ‘ನಾಲ್ಕು ಗರ್ಭ ಸಂಭವ ಸಾಮಾಗ್ರಿ’ಗಳು ಅಗತ್ಯ. ಮೊದಲನೆಯದು ಋತು. ಒಂದು ಬೀಜವು ಮೊಳೆಯಬೇಕಾದರೆ ಅದಕ್ಕೆ ಅನುಕೂಲಕರ ಋತು ಅಗತ್ಯ. ಎಲ್ಲ ಋತುಗಳಲ್ಲೂ ಬೀಜ ಮೊಳೆಯದು. ಹಾಗಾಗಿ ಮಕ್ಕಳಾಗಲೂ ‘ಫಲವಂತಿಕೆಯ ಅವಧಿ’ (ಫರ್ಟೈಲ್ ವಿಂಡೋ) ಎನ್ನುವುದು ಇರುತ್ತದೆ.

Maya Balachandra Column: ಜೈಸಾ ಅನ್ನ್‌, ವೈಸಾ ಮನ್...:‌ ರುಚಿಯ ರಾಜಕೀಯಕ್ಕೆ ಆರೋಗ್ಯದ ಬೆಲೆ ತೆರಬೇಕಾ ?

ರುಚಿಯ ರಾಜಕೀಯಕ್ಕೆ ಆರೋಗ್ಯದ ಬೆಲೆ ತೆರಬೇಕಾ ?

ಮಾತು ಮಾತಿಗೆ ಅಜ್ಜಿಯ ಅಡುಗೆಯನ್ನು ಕೊಂಡಾಡುವುದಷ್ಟೇ; ಹೋಗುವುದು ಮಾತ್ರ ದರ್ಶಿನಿ, ಫಾಸ್ಟ್‌ ಫುಡ್, ಸ್ಟ್ರೀಟ್ ಫುಡ್, ಕಲೋನಿಯಲ್ ಫುಡ್ ಜಾಯಿಂಟ್ ಗಳಿಗೆ. ಅಜ್ಜಿಯ ಅಡುಗೆಯ ಬಗ್ಗೆ ಮಾತನಾಡಿದ ನಾಲಿಗೆಯು ಸವಿಯುವುದು ಅಲ್ಲಿನ ವ್ಯಂಜನಗಳನ್ನೇ. ನಮ್ಮ ಅಕ್ಷರಮಾಲೆಯಲ್ಲಿ ವ್ಯಂಜನಗಳಿಗೆ ಸ್ವರಗಳು ಮೇಲ್ಪಂಕ್ತಿ ಆಗಿರುವಂತೆ, ಊಟದ ತಟ್ಟೆಯ ಲ್ಲಿಯೂ, ಸ್ವರವಾಗಿ ಅನ್ನ, ವ್ಯಂಜನವಾಗಿ ಸಾರು-ಸಾಂಬಾರ್ -ಪಲ್ಯಗಳು ಇದ್ದರೇನೇ ಅದು ಸಂಪೂರ್ಣ ಎನಿಸಿಕೊಳ್ಳುವುದು. ಅನ್ನ-ಸಾರು ಎಂದರೆ ಮೂಗು ಮುರಿಯುವ ಇಂದಿನ ತಲೆಮಾರಿಗೆ ಅದರ ಮಹತ್ವ ತಿಳಿಯುವ ಆಸಕ್ತಿ ಸಹ ಇಲ್ಲ.

Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

ವೇದಕಾಲದ ಋಷಿಗಳಿಗೆ ಯಾವುದೋ ಒಂದು ಕ್ಷಣದಲ್ಲಿ ಹೇಗೆ ನಿರ್ದಿಷ್ಟ ಮಂತ್ರವು ಸುರಿಸು ತ್ತದೆಯೋ, ಹಾಗೆಯೇ ವಿಜ್ಞಾನಿಗಳಿಗೂ ಪರಿಹಾರವು ಮಿಂಚಿನಂತೆ ಹೊಳೆಯುತ್ತದೆ. ಅಂಥ ಮಿಂಚಿನ ಹೊಳಹು ‘ಹೃದಯದ ಗತಿನಿಯಂತ್ರಕ’ದ (ಕಾರ್ಡಿಯಾಕ್ ಪೇಸ್‌ ಮೇಕರ್) ಆವಿಷ್ಕಾರಕ್ಕೆ ಅನುವು ಮಾಡಿಕೊಟ್ಟ ಕಥೆಯು ರೋಚಕವಾಗಿದೆ.

Dr N Someshwara Column: ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು

ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು

ರಕ್ತವು 120-140 ಎಂಎಂಎಚ್‌ಜಿ ಒತ್ತಡದಲ್ಲಿ ಮಹಾಧಮನಿಯನ್ನು ಪ್ರವೇಶಿಸುತ್ತದೆ. ಮಹ ಧಮನಿಯಿಂದ ಹೊರಡುವ ಅನೇಕ ರಕ್ತನಾಳಗಳ ಮೂಲಕ, ರಕ್ತವು ದೇಹದ ಎಲ್ಲ ಭಾಗಗಳಿಗೆ ರವಾನೆಯಾಗುತ್ತದೆ. ಕೆಲವರು ರಕ್ತದ ಏರೊತ್ತಡದಿಂದ (ಹೈ ಬ್ಲಡ್ ಪ್ರೆಶರ್) ನರಳುವುದುಂಟು. ಈ ಏರೊತ್ತಡವನ್ನು ನಿಯಂತ್ರಿಸದಿದ್ದರೆ, ಗರಿಷ್ಠ 140 ಎಂಎಂಎಚ್‌ಜಿ ಯಲ್ಲಿ ಸಾಗಬೇಕಾದ ರಕ್ತವು 180 ಎಂಎಂಎಚ್‌ಜಿ ಅಥವಾ ಅದಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಸಾಗಬಹುದು.

Dr Maithri Bhat Column: ಕರುಳುಬಳ್ಳಿಯ ನಂಟು

ಕರುಳುಬಳ್ಳಿಯ ನಂಟು

ಸಮಾಜ ಮತ್ತು ಭಾಷೆಯ ನಡುವೆ ಒಂದು ಅವಿನಾಭಾವ ಸಂಬಂಧವಿದೆ. ಏಕೆಂದರೆ ಭಾಷೆಯು ಇತಿಹಾಸದಲ್ಲಿ ದಾಖಲಾಗಿದ್ದರೂ, ಅದರ ನಿರ್ವಹಣೆ ಸಾಧ್ಯವಾಗುವುದು ಭಾಷೆಯನ್ನು ಬಳಸುವ ಮತ್ತು ಅರ್ಥ ಮಾಡಿಕೊಳ್ಳುವ ಜನರಿಂದ ಮಾತ್ರ. ಕಲಿಯುವಿಕೆ ಮತ್ತು ಕಲಿಸುವಿಕೆ ಯ ಮೂಲಕ ಭಾಷೆಯು ಸಂಸ್ಕೃತಿಯಾಗಿ ಪಸರಿಸುತ್ತದೆ.

Dr N Someshwara Column: ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ

ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ

ಇಂಗ್ಲಂಡಿನಲ್ಲಿ ಕೈಗಾರಿಕಾ ಕ್ರಾಂತಿಯ ಕಾರಣ, ಕಲ್ಲಿದ್ದಿಲಿನ ಉಪಯೋಗವು ಮಿತಿಮೀರಿತ್ತು. ಎಲ್ಲೆಲ್ಲೂ ಕಪ್ಪು ಮಸಿಯದೇ ಕಾರು ಬಾರು. ಮನೆಯ ಒಳ-ಹೊರ ಗೋಡೆಗಳಲ್ಲಿ ಕಪ್ಪು ಛಾಯೆ ಯಿಂದ ಕೂಡಿದ್ದ ಕಾರಣ, ಜನರ ಮನಸ್ಸೂ ಸಹ ಒಂದು ರೀತಿ ಮಂಕುಬಡಿದಂತಿತ್ತು.

Dr N Someshwara Column: ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು

ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು

ಮಾನವ ಮತ್ತೊಬ್ಬ ಮಾನವನೊಂದಿಗೆ ಮಾತಿನ ಮೂಲಕ, ಪಶು-ಪಕ್ಷಿಗಳು ತಮಗೆ ಅರ್ಥವಾಗು ವಂಥ ಶಬ್ದಗಳ ಮೂಲಕ ಸಂಪರ್ಕ ನಡೆಸುತ್ತವೆ. ಇವೆರಡರ ಲಭ್ಯವಿಲ್ಲದ ಕೆಲವು ಜೀವಿಗಳು ವಾಸನಾಯುಕ್ತ ವಾದ ಹಲವು ಸಾವಯವ ಸಂಕೀರ್ಣ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುವುದರ ಮೂಲಕ ಸಂಪರ್ಕ ನಡೆಸುತ್ತವೆ.

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

ಛೇದನಕೆ ಒಳಗಾಗಿದ್ದ ಕಿವಿ, ಮೂಗು ಮುಂತಾದ ಅಂಗಗಳನ್ನು ಮರುರೂಪಿಸುವ ಶಸ್ತ್ರ ಚಿಕಿತ್ಸಾ ತಂತ್ರಗಳನ್ನು ಅಭಿವೃದ್ಧಿಪಡಿಸಿ, ಸುರೂಪಿಕಾ ಶಸ್ತ್ರ ವಿಜ್ಞಾನಕ್ಕೆ (ಪ್ಲಾಸ್ಟಿಕ್ ಸರ್ಜರಿ) ಭದ್ರಬುನಾದಿ ಹಾಕಿ ‘ಸುರೂಪಿಕ ಶಸ ವೈದ್ಯಕೀಯ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರರಾದವರು ಸುಶ್ರುತ ಮಹರ್ಷಿಗಳು. ಇವರ ಈ ಜ್ಞಾನವು ಮಧ್ಯಪ್ರಾಚ್ಯದ ಮುಸ್ಲಿಂ ವೈದ್ಯರ ಮೂಲಕ ಯುರೋಪ್ ಖಂಡಕ್ಕೆ ಹರಡಿತು.

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

Narayana Yaji Column: ಚಿನ್ನದ ಬೆಲೆ ಏರುತ್ತಿದೆ ಏಕೆ ?

ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಪುನರ್ನಿರ್ಮಿಸಲು ಮತ್ತು ವ್ಯಾಪಾರ ದಲ್ಲಿ ಸ್ಥಿರತೆ ತರಲು ಒಂದು ಹೊಸ ವ್ಯವಸ್ಥೆಯ ಅಗತ್ಯವಿತ್ತು. ಅಮೆರಿಕದ ಅಂದಿನ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್‌ರ ದೂರದೃಷ್ಟಿಯ ಫಲವಾಗಿ, ಯುದ್ಧದಿಂದ ಜರ್ಜರಿತವಾಗಿದ್ದ ಜಾಗತಿಕ ಆರ್ಥಿಕತೆಯನ್ನು ಹಳಿಗೆ ತರಲು ಚಾಣಾಕ್ಷ ಹೆಜ್ಜೆಯೊಂದನ್ನು ಇಡಲಾಯಿತು. 1944ರ ಜುಲೈ 22ರಂದು ಅಮೆರಿಕದ ನ್ಯೂ ಹ್ಯಾಂಪ್‌ಶೈರ್‌ನ ಬ್ರೆಟನ್‌ವುಡ್ಸ್‌ನಲ್ಲಿ ವಿಶ್ವದ 44 ರಾಷ್ಟ್ರ ಗಳ ಪ್ರತಿನಿಧಿಗಳನ್ನು ಸೇರಿಸಿ, ಅಲ್ಲಿಯವರೆಗೆ ಆಳಿದ್ದ ಬ್ರಿಟಷ್ ಪೌಂಡ್‌ನ ಬದಲು ಡಾಲರನ್ನು ವ್ಯಾಪಾರದ ವಿನಿಮಯ ಜಗತ್ತಿನ ಅಧಿಪತ್ಯಕ್ಕೆ ಏರಿಸಲಾಯಿತು. ಇದೇ ‘ಬ್ರೆಟನ್‌ವುಡ್ಸ್ ಒಪ್ಪಂದ’.

Constitution: ಸಂವಿಧಾನದ ಜಾಗೃತಿ: ಪ್ರಜಾಪ್ರಭುತ್ವದ ಜೀವಾಳ

ಸಂವಿಧಾನದ ಜಾಗೃತಿ: ಪ್ರಜಾಪ್ರಭುತ್ವದ ಜೀವಾಳ

ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಮೌಲ್ಯಗಳನ್ನು ಮರೆತಂತೆ ಕಾಣುವ ಘಟನೆಗಳು ಹೆಚ್ಚಾ ಗುತ್ತಿವೆ. ಅಭಿವ್ಯಕ್ತಿ ಸ್ವಾತಂತ್ರ್ಯದ ಅರ್ಥವನ್ನು ತಪ್ಪಾಗಿ ಗ್ರಹಿಸಲಾಗುತ್ತಿದೆ; ಧರ್ಮನಿರಪೇಕ್ಷತೆ ಎಂಬ ತತ್ವವನ್ನು ವಕ್ರವಾಗಿ ಬಳಸಲಾಗುತ್ತಿದೆ; ಸಮಾನತೆಯ ಬದಲು ಮೇಲುಗೈ ಮನೋಭಾವ ಬೆಳೆದು ಬರುತ್ತಿದೆ.

ಅದ್ದೂರಿ ಮದುವೆಗಳು ಬೇಕು

ಅದ್ದೂರಿ ಮದುವೆಗಳು ಬೇಕು

ಬೆಂಗಳೂರಿನಲ್ಲಿರಲಿ ಅಥವಾ ಯಾವುದೇ ಊರಿನಲ್ಲಿರಲಿ ಒಂದು ಮದುವೆ ಎಂದರೆ ಅದು ನೂರಾರು ಜನರಿಗೆ ಉದ್ಯೋಗ ಸೃಷ್ಟಿಗೆ ದಾರಿಯಾಗಿದೆ ಎನ್ನುವುದು ಸುಳ್ಳಲ್ಲ. ಒಂದು ಸಾಧಾರಣ ಕಲ್ಯಾಣ ಮಂದಿರವಾದರೆ ಕಡಿಮೆ ಎಂದರೆ 80ರಿಂದ 100 ಜನರಿಗೆ ಕನಿಷ್ಠ 2-3 ದಿನ ಉದ್ಯೋಗ. ಇನ್ನು ದೊಡ್ಡ ಪ್ರದೇಶವಾದಷ್ಟೂ ಉದ್ಯೋಗ ಸೃಷ್ಟಿ ಜಾಸ್ತಿಯಾಗುತ್ತದೆ.

ನೆನಪಿನಂಗಳದಲ್ಲಿ ಕೆ.ಎಸ್.ನರಸಿಂಹಸ್ವಾಮಿ

ನೆನಪಿನಂಗಳದಲ್ಲಿ ಕೆ.ಎಸ್.ನರಸಿಂಹಸ್ವಾಮಿ

1915ರ ಜನವರಿ 26ರಂದು ಜನಿಸಿದ ‘ಕೆಎಸ್‌ನ’, ಕನ್ನಡ ಕಾವ್ಯ ಕ್ಷಿತಿಜದ ಬೆಳ್ಳಿತಾರೆ. ಇಂಥ ಕವಿ ಯನ್ನು ಅವರ 111ನೇ ಜನ್ಮದಿನದಂದು ಸ್ಮರಿಸುವುದು ಹೆಮ್ಮೆಯ ಸಂಗತಿ. ಬದುಕಿನ ದುರ್ಭರ ನೋವು ‘ಕೆಎಸ್‌ನ’ ಅವರನ್ನು ಬಾಳಿನುದ್ದಕ್ಕೂ ಕಾಡಿದೆ. ಆದರೆ ಅದಕ್ಕೆ ಅವರು ಹತಾಶರಾಗಲಿಲ್ಲ. ಜೀವನ್ಮುಖಿ ಪ್ರವೃತ್ತಿಯು ‘ಕೆಎಸ್‌ನ’ ಅವರ ಕಾವ್ಯ ಮತ್ತು ಬದುಕಿನ ಅವಿಭಾಜ್ಯ ಅಂಗವಾಗಿ ಬಿಟ್ಟಿತು, ಶಕ್ತಿಯಾಗಿ ಬಿಟ್ಟಿತು.

Maya Balachandra Column: ಮಾನವನನ್ನು ಪ್ರಕೃತಿಯೊಂದಿಗೆ ಬೆಸೆವ ಸೂರ್ಯನಮಸ್ಕಾರ

ಮಾನವನನ್ನು ಪ್ರಕೃತಿಯೊಂದಿಗೆ ಬೆಸೆವ ಸೂರ್ಯನಮಸ್ಕಾರ

ಧರ್ಮ ಸಾಧನೆ ಎನ್ನುವುದು ಸೀಮಿತಾರ್ಥದ ಮತಾಚರಣೆಯಲ್ಲ, ಪ್ರಾಚೀನರಿಂದ ಉಲ್ಲೇಖಿತ ವಾದ ಆಚರಣೆಗಳ ಅಂಧಾನುಕರಣೆಯೂ ಅಲ್ಲ. ಪೂಜೆ, ಪ್ರಾರ್ಥನೆ, ಆರಾಧನೆಗೆ ಸೀಮಿತ ವಾದದ್ದೂ ಅಲ್ಲ. ಇದು ಜೀವನದ ಎಲ್ಲಾ ಆಯಾಮಗಳಲ್ಲಿ, ಎಲ್ಲಾ ಕ್ಷೇತ್ರಗಳಲ್ಲಿ, ಸರಿಯಾದ ಮಾರ್ಗಪಥಿಕರಾಗಿ, ನೈತಿಕವಾಗಿ ಬದುಕಿ, ಆಧ್ಯಾತ್ಮಿಕವಾಗಿ ಬೆಳೆದು, ದುರ್ಲಭವಾದ ನರಜನ್ಮ ವನ್ನು ಸಾರ್ಥಕಗೊಳಿಸಿಕೊಳ್ಳುವ ಒಂದು ಅನನ್ಯ ಪ್ರಕ್ರಿಯೆ.

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

ವೈಜ್ಞಾನಿಕ ಕಥೆ ಎಂದರೆ ತಮ್ಮ ತಮ್ಮ ಕಲ್ಪನೆಯನ್ನು ಮನಸ್ಸಿಗೆ ಬಂದ ಹಾಗೆ ಹರಿಯಬಿಡುವ ಹಾಗೆ ಇಲ್ಲ. ವೈಜ್ಞಾನಿಕ ಕಥೆ, ಕಾದಂಬರಿ ಇಲ್ಲವೇ ಚಲನಚಿತ್ರಗಳಲ್ಲಿ ಒಂದು ವೈಜ್ಞಾನಿಕ ಎಳೆಯಿಲ್ಲದ ಕಥೆಯನ್ನು ವಿಸ್ತರಿಸುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಅಂಥ ಒಂದು ಎಳೆಯು ನಾವೀ ಜನರ ನೀಲಿ ಚರ್ಮದ ಹಿನ್ನೆಲೆಯಲ್ಲಿದೆ.

Beluru Raamamurthy Column: ಜ್ಞಾನಾಧಾರಿತ ಜೀವನ ಕ್ರಮ

Beluru Raamamurthy Column: ಜ್ಞಾನಾಧಾರಿತ ಜೀವನ ಕ್ರಮ

ಇನ್ನೊಂದು ವಚನದಲ್ಲಿ ನಮಗೆ ಯಾವ ಯಾವ ಸಮಯಕ್ಕೆ ಯಾವ ಯಾವ ರೀತಿಯ ಜ್ಞಾನ ಇರ ಬೇಕೋ ಅದು ಇರಬೇಕು. ಸಾಫ್ಟ್‌ʼವೇರ್ ಇಂಜಿನಿಯರ್ ಎಂದುಕೊಂಡವನು ಎಮ್ಮೆ ಮೇಯಿ ಸೋಕೆ ಹೋಗಬಾರದು. ಎಮ್ಮೆ ಮೇಯಿಸುವವನು ಅಡುಗೆ ಕೆಲಸಕ್ಕೆ ಹೋಗಬಾರದು. ಯಾವ ಕೆಲಸವೋ ಅದಕ್ಕೆ ತಕ್ಕ ಜ್ಞಾನ, ಯಾವ ಜ್ಞಾನವೋ ಅದಕ್ಕೆ ತಕ್ಕ ಕೆಲಸ ಎನ್ನುವುದನ್ನು ಈ ವಚನದಲ್ಲಿ ಬಹು ಸೊಗಸಾಗಿ ಹೇಳಿದ್ದಾನೆ.

Vidya Shankar Sharma Column: ಆಹಾರ ಸೇವನೆ ಎಂಬ ಧ್ಯಾನ

Vidya Shankar Sharma Column: ಆಹಾರ ಸೇವನೆ ಎಂಬ ಧ್ಯಾನ

ಊಟ, ಉಪರಗಳನ್ನು ಮಾಡುವಾಗ ನಾವು ಅನೇಕ ವಿಷಯಗಳ ಕಡೆ ಗಮನಹರಿಸಬೇಕು. ನಮ್ಮ ಮನಸ್ಸು ಪ್ರಶಾಂತವಾಗಿರಬೇಕು. ಭಾವೋದ್ರೇಕ, ದುಃಖ,ಅಸಮಾಧಾನ ಇರುವಂತಹ ಮನಸ್ಥಿತಿ ಯಲ್ಲಿ ನಾವು ಆಹಾರ ಸೇವನೆ ಮಾಡಬಾರದು. ಭಾವಾವೇಶಗಳು ಇರುವಾಗ ನಮ್ಮ ದೈಹಿಕ ಸ್ಥಿತಿಯು ಆಹಾರ ವನ್ನು ಸ್ವೀಕರಿಸಲು ಯೋಗ್ಯವಾಗಿರುವುದಿಲ್ಲ.

Surendra Pai Column: ಸಂಕ್ರಾಂತಿ ನಾಡಿನೆಲ್ಲೆಡೆ ಸುಗ್ಗಿ ಸಂಭ್ರಮ

Surendra Pai Column: ಸಂಕ್ರಾಂತಿ ನಾಡಿನೆಲ್ಲೆಡೆ ಸುಗ್ಗಿ ಸಂಭ್ರಮ

ಹಿಂದೂ ಪಂಚಾಂಗದ ಪ್ರಕಾರ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ.ಈ ಶುಭ ಸಂದರ್ಭವನ್ನೇ ‘ಮಕರ ಸಂಕ್ರಾಂತಿ’ ಎಂದು ಕರೆಯ ಲಾಗುತ್ತದೆ. ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರುವುದಕ್ಕೆ, ಪವಿತ್ರ ಸ್ನಾನಕ್ಕೆ, ಸೂರ್ಯ ಪೂಜೆಗೆ, ದಾನ ಮಾಡುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.

Surendra Pai Column: ಅಪರೂಪದ ವಸ್ತುಗಳ ಪ್ರದರ್ಶನ !

Surendra Pai Column: ಅಪರೂಪದ ವಸ್ತುಗಳ ಪ್ರದರ್ಶನ !

127 ವರ್ಷಗಳ ನಂತರ ಭಾರತಕ್ಕೆ ತರಲಾದ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳ ಬಗ್ಗೆ ದೇಶಕ್ಕೆ ತಿಳಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಒಂದು ಶತಮಾನಕ್ಕೂ ಹೆಚ್ಚು ಅವಧಿಯ (127 ವರ್ಷಗಳ ಬಳಿಕ) ಜುಲೈ 30, 2025ರಂದು ಸ್ವದೇಶಕ್ಕೆ ಮರಳಿ ತರಲಾದ ಪಿಪ್ರಹ್ವಾದ ಅಧಿಕೃತ ಅವಶೇಷಗಳು ಮತ್ತು ಪುರಾತತ್ತ್ವ ವಸ್ತುಗಳನ್ನು ಇದೇ ಮೊದಲ ಬಾರಿ ನಮ್ಮ ದೇಶದಲ್ಲಿ ಪ್ರದರ್ಶಿಸಲಾಗುತ್ತಿದೆ.

Yagati Raghu Naadig Column: ʼಸುವರ್ಣʼ ಇತಿಹಾಸ ಬರೆದ ʼಬಂಗಾರʼದ ಮನುಷ್ಯ

ʼಸುವರ್ಣʼ ಇತಿಹಾಸ ಬರೆದ ʼಬಂಗಾರʼದ ಮನುಷ್ಯ

ಚಿತ್ರರಸಿಕರು ಇಂಥ ಟೀಕೆ-ಟಿಪ್ಪಣಿಗಳನ್ನು ಕಿವಿಗೆ ಹಾಕಿಕೊಳ್ಳದೆ, ‘ಬಂಗಾರದ ಮನುಷ್ಯ’ ಬಿಂಬಿಸಿದ ಉತ್ತಮಿಕೆಗಳಿಗೆ ಓಗೊಟ್ಟು ಪ್ರವಾಹದೋಪಾದಿಯಲ್ಲಿ ಚಿತ್ರಮಂದಿರಗಳಿಗೆ ದಾಂಗುಡಿಯಿಟ್ಟರು. ಇದಕ್ಕೆ ಪುರಾವೆ ಎಂಬಂತೆ, ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ (ಈಗ ಭೂಮಿಕಾ ಎಂದಾಗಿದೆ) ಬಿಡುಗಡೆ ಯಾದ ಈ ಚಿತ್ರ ಬರೋಬ್ಬರಿ 2 ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡರೆ, ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರಗಳವರೆಗೆ ಓಡಿತು. ಮಾತ್ರವಲ್ಲದೆ, ರಾಜ್ಯದ ವಿವಿಧೆಡೆ 25 ವಾರಗಳ ಪ್ರದರ್ಶನ ಭಾಗ್ಯವನ್ನು ಕಂಡಿತು. 1988ರಲ್ಲಿ ಮರು ಬಿಡುಗಡೆಯಾದಾಗಲೂ 25 ವಾರಗಳ ಪ್ರದರ್ಶನ ಕಂಡ ಹೆಗ್ಗಳಿಕೆ ‘ಬಂಗಾರದ ಮನುಷ್ಯ’ನದ್ದು.

L P Kulkarni Column: ಸ್ಟಿಫನ್ ಹಾಕಿಂಗ್‌: ವಿಶ್ವ ಉಗಮದ ರಹಸ್ಯ ತಿಳಿಸಿದ್ದ ವಿಜ್ಞಾನಿ

ಸ್ಟಿಫನ್ ಹಾಕಿಂಗ್‌: ವಿಶ್ವ ಉಗಮದ ರಹಸ್ಯ ತಿಳಿಸಿದ್ದ ವಿಜ್ಞಾನಿ

ನರ ಸಂಬಂಧಿ ಕಾಯಿಲೆಗೆ ತುತ್ತಾಗಿ, ಸರಿಯಾಗಿ ಚಲಿಸಲು, ವೀಕ್ಷಿಸಲು, ಕೇಳಲು, ಮಾತನಾ ಡಲು ಆಗದೇ ತನ್ನ ಇಡೀ ಜೀವನವನ್ನೆಲ್ಲಾ ಗಾಲಿ ಕುರ್ಚಿಯ ಮೇಲೆ ಕುಳಿತು ಕಳೆದ, ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞನಾಗಿ, ಪ್ರೊಫೆಸರ್ ಆಗಿ ಜಗದ್ವಿಖ್ಯಾತಿ ಗಳಿಸಿ, ಕೇವಲ 26 ವರ್ಷಕ್ಕೆ ಮರಣ ಹೊಂದುತ್ತಾನೆಂದು ಭಾವಿಸಿದ್ದ, ವೈದ್ಯಲೋಕಕ್ಕೆ ಸವಾಲೆಸೆದು 76 ವರ್ಷ ಸಾರ್ಥಕ ಜೀವನ ನಡೆಸಿದ ಆ ಮಹಾನ್ ಚೇತನವೇ ವಿಜ್ಞಾನಿ ಸ್ಟಿಫನ್ ಹಾಕಿಂಗ್

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

‘ಸ್ಟಾರೋ ಕ್ಲಾಡಿಯ’ ಎಂಬ ಅಂಬಲಿ ಮೀನು ಕೇವಲ 0.5 ಮಿ.ಮೀ. ಇರುತ್ತದೆ. ಅದೇ ‘ಸಯನಿಯ ಕ್ಯಾಪಿಲ್ಲೇಟ’ ಎಂಬ ಬೃಹತ್ ಅಂಬಲಿ ಮೀನಿನ ಲತಾಬಾಹುಗಳು 100-120 ಅಡಿ ಉದ್ದವಿರುತ್ತವೆ. ಹಾಗಾಗಿ ಕೆಲವರು ಈ ಅಂಬಲಿ ಮೀನನ್ನು ‘ಸಾಗರದ ಅತ್ಯಂತ ಉದ್ದನೆಯ ಜೀವಿ’ ಎಂದು ಕರೆಯುವರು.

Hosmane Muttu Column: ಒನಕೆ ತೂಬು: ಪುರಾತನ ಭಾರತದ ಜಲವಿಜ್ಞಾನದ ಅದ್ಭುತ

ಒನಕೆ ತೂಬು: ಪುರಾತನ ಭಾರತದ ಜಲವಿಜ್ಞಾನದ ಅದ್ಭುತ

ಇಲ್ಲಿರುವ ಕಂಬಗಳ ನಡುವೆ, ಮೇಲೆ ಮತ್ತು ಕೆಳಕ್ಕೆ ರಂಧ್ರ ಗಳಿರುವ ಕಲ್ಲಿನ ಪಟ್ಟಿಗಳನ್ನು ಅಳವಡಿಸ ಲಾಗಿರುತ್ತದೆ. ಈ ರಂಧ್ರಕ್ಕೆ ಸರಿಯಾಗಿ ಹೊಂದುವಂತೆ, ತುದಿಯಲ್ಲಿ ಬಿರಟೆಯಂಥ ಆಕಾರವಿರುವ ಉದ್ದನೆಯ ಮರದ ಕಂಬವೊಂದನ್ನು (ಒನಕೆ ಮಾದರಿಯ ಕಂಬ) ಮೇಲಿಂದ ಇಳಿಸಲಾಗಿರುತ್ತದೆ. ನೀರು ಬೇಕಾದಾಗ ಈ ಕಂಬವನ್ನು ಮೇಲೆತ್ತಲಾಗುತ್ತಿತ್ತು. ಆಗ ನೀರು ಕೆರೆಯ ಕೆಳಭಾಗದ ಕಾಲುವೆ ಗಳ ಮೂಲಕ ಗದ್ದೆ-ತೋಟಗಳಿಗೆ ಹರಿಯುತ್ತಿತ್ತು.

Purushottam Venki Column: ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ...ಈ ಮಾತು ನೂರಕ್ಕೆ ನೂರರಷ್ಟು ಸತ್ಯ..!

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ...

ಒಂದು ಮಡಕೆ ತಯಾರಿಸಲು ಕನಿಷ್ಠ 10 ದಿನ ಬೇಕು. 2 ಕೊಡ ನೀರು ಹಿಡಿಯುವ ಮಡಕೆಯ ತಯಾರಿಗೆ 4 ಕೆ.ಜಿ. ಮಣ್ಣು ಬೇಕು. ಇದು ಒಬ್ಬರೇ ಮಾಡುವ ಕೆಲಸವಲ್ಲ, ಇಡೀ ಕುಟುಂಬದವರು ಕೈಜೋಡಿಸ ಬೇಕಾಗುವ ಬಾಬತ್ತು. ಮೊದಲು ಮಣ್ಣನ್ನು ಜರಡಿ ಹಿಡಿಯಬೇಕು, ಬಳಿಕ ರಾಡಿ ಮಾಡಿ ಸೋಸಿ, ಕಲ್ಲಿನ ಚೂರು, ಕಸ-ಕಡ್ಡಿ ಇತ್ಯಾದಿಗಳನ್ನು ಬೇರ್ಪಡಿಸಬೇಕು.

Dr. Karaveeraprabhu Kyalakonda Column: ಭಾವೈಕ್ಯತೆಯ ಬನಶಂಕರಿ ಯಾತ್ರೆ

ಭಾವೈಕ್ಯತೆಯ ಬನಶಂಕರಿ ಯಾತ್ರೆ

ಬನದೇವಿಯ ಸಂಪದದಲ್ಲಿ ಎದ್ದು ಕಾಣುವ ಧವಳ ಶಿಖರ ವನ್ನು ಹೊಂದಿದ ಬನಶಂಕರಿ ದೇವಿಯ ಗುಡಿಯು ದೂರದಿಂದಲೇ ಮನವನ್ನಾಕರ್ಷಿಸುತ್ತದೆ. ಚತುರಸ್ತ ಕಲ್ಲು ಮಂಟಪಗಳಿಂದ ಆವೃತವಾದ ಹರಿದ್ರಾತೀರ್ಥದ ಪಶ್ಚಿಮಕ್ಕೆ ಪೂರ್ವ ಮಹಾ ದ್ವಾರದಿಂದ ಒಳಗೂಡಿನ ಪ್ರಾಕಾರದ ಮಧ್ಯದಲ್ಲಿ ಈ ಶಕ್ತಿದೇವತೆಯ ಗುಡಿ ಇದೆ.

Loading...