ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Aarama

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

ವೈಜ್ಞಾನಿಕ ಕಥೆ ಎಂದರೆ ತಮ್ಮ ತಮ್ಮ ಕಲ್ಪನೆಯನ್ನು ಮನಸ್ಸಿಗೆ ಬಂದ ಹಾಗೆ ಹರಿಯಬಿಡುವ ಹಾಗೆ ಇಲ್ಲ. ವೈಜ್ಞಾನಿಕ ಕಥೆ, ಕಾದಂಬರಿ ಇಲ್ಲವೇ ಚಲನಚಿತ್ರಗಳಲ್ಲಿ ಒಂದು ವೈಜ್ಞಾನಿಕ ಎಳೆಯಿಲ್ಲದ ಕಥೆಯನ್ನು ವಿಸ್ತರಿಸುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಅಂಥ ಒಂದು ಎಳೆಯು ನಾವೀ ಜನರ ನೀಲಿ ಚರ್ಮದ ಹಿನ್ನೆಲೆಯಲ್ಲಿದೆ.

Beluru Raamamurthy Column: ಜ್ಞಾನಾಧಾರಿತ ಜೀವನ ಕ್ರಮ

Beluru Raamamurthy Column: ಜ್ಞಾನಾಧಾರಿತ ಜೀವನ ಕ್ರಮ

ಇನ್ನೊಂದು ವಚನದಲ್ಲಿ ನಮಗೆ ಯಾವ ಯಾವ ಸಮಯಕ್ಕೆ ಯಾವ ಯಾವ ರೀತಿಯ ಜ್ಞಾನ ಇರ ಬೇಕೋ ಅದು ಇರಬೇಕು. ಸಾಫ್ಟ್‌ʼವೇರ್ ಇಂಜಿನಿಯರ್ ಎಂದುಕೊಂಡವನು ಎಮ್ಮೆ ಮೇಯಿ ಸೋಕೆ ಹೋಗಬಾರದು. ಎಮ್ಮೆ ಮೇಯಿಸುವವನು ಅಡುಗೆ ಕೆಲಸಕ್ಕೆ ಹೋಗಬಾರದು. ಯಾವ ಕೆಲಸವೋ ಅದಕ್ಕೆ ತಕ್ಕ ಜ್ಞಾನ, ಯಾವ ಜ್ಞಾನವೋ ಅದಕ್ಕೆ ತಕ್ಕ ಕೆಲಸ ಎನ್ನುವುದನ್ನು ಈ ವಚನದಲ್ಲಿ ಬಹು ಸೊಗಸಾಗಿ ಹೇಳಿದ್ದಾನೆ.

Vidya Shankar Sharma Column: ಆಹಾರ ಸೇವನೆ ಎಂಬ ಧ್ಯಾನ

Vidya Shankar Sharma Column: ಆಹಾರ ಸೇವನೆ ಎಂಬ ಧ್ಯಾನ

ಊಟ, ಉಪರಗಳನ್ನು ಮಾಡುವಾಗ ನಾವು ಅನೇಕ ವಿಷಯಗಳ ಕಡೆ ಗಮನಹರಿಸಬೇಕು. ನಮ್ಮ ಮನಸ್ಸು ಪ್ರಶಾಂತವಾಗಿರಬೇಕು. ಭಾವೋದ್ರೇಕ, ದುಃಖ,ಅಸಮಾಧಾನ ಇರುವಂತಹ ಮನಸ್ಥಿತಿ ಯಲ್ಲಿ ನಾವು ಆಹಾರ ಸೇವನೆ ಮಾಡಬಾರದು. ಭಾವಾವೇಶಗಳು ಇರುವಾಗ ನಮ್ಮ ದೈಹಿಕ ಸ್ಥಿತಿಯು ಆಹಾರ ವನ್ನು ಸ್ವೀಕರಿಸಲು ಯೋಗ್ಯವಾಗಿರುವುದಿಲ್ಲ.

Surendra Pai Column: ಸಂಕ್ರಾಂತಿ ನಾಡಿನೆಲ್ಲೆಡೆ ಸುಗ್ಗಿ ಸಂಭ್ರಮ

Surendra Pai Column: ಸಂಕ್ರಾಂತಿ ನಾಡಿನೆಲ್ಲೆಡೆ ಸುಗ್ಗಿ ಸಂಭ್ರಮ

ಹಿಂದೂ ಪಂಚಾಂಗದ ಪ್ರಕಾರ, ಸೂರ್ಯನು ಮಕರ ರಾಶಿಗೆ ಪ್ರವೇಶಿಸುವ ಈ ದಿನವನ್ನು ಅತ್ಯಂತ ಶುಭದಿನವೆಂದು ಪರಿಗಣಿಸಲಾಗುತ್ತದೆ.ಈ ಶುಭ ಸಂದರ್ಭವನ್ನೇ ‘ಮಕರ ಸಂಕ್ರಾಂತಿ’ ಎಂದು ಕರೆಯ ಲಾಗುತ್ತದೆ. ಮಕರ ಸಂಕ್ರಾಂತಿಯಂದು ಎಳ್ಳು-ಬೆಲ್ಲ ಬೀರುವುದಕ್ಕೆ, ಪವಿತ್ರ ಸ್ನಾನಕ್ಕೆ, ಸೂರ್ಯ ಪೂಜೆಗೆ, ದಾನ ಮಾಡುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.

Surendra Pai Column: ಅಪರೂಪದ ವಸ್ತುಗಳ ಪ್ರದರ್ಶನ !

Surendra Pai Column: ಅಪರೂಪದ ವಸ್ತುಗಳ ಪ್ರದರ್ಶನ !

127 ವರ್ಷಗಳ ನಂತರ ಭಾರತಕ್ಕೆ ತರಲಾದ ಭಗವಾನ್ ಬುದ್ಧನ ಪಿಪ್ರಹ್ವಾ ರತ್ನದ ಅವಶೇಷಗಳ ಬಗ್ಗೆ ದೇಶಕ್ಕೆ ತಿಳಿಸುವ ಉದ್ದೇಶದಿಂದ ಈ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು. ಒಂದು ಶತಮಾನಕ್ಕೂ ಹೆಚ್ಚು ಅವಧಿಯ (127 ವರ್ಷಗಳ ಬಳಿಕ) ಜುಲೈ 30, 2025ರಂದು ಸ್ವದೇಶಕ್ಕೆ ಮರಳಿ ತರಲಾದ ಪಿಪ್ರಹ್ವಾದ ಅಧಿಕೃತ ಅವಶೇಷಗಳು ಮತ್ತು ಪುರಾತತ್ತ್ವ ವಸ್ತುಗಳನ್ನು ಇದೇ ಮೊದಲ ಬಾರಿ ನಮ್ಮ ದೇಶದಲ್ಲಿ ಪ್ರದರ್ಶಿಸಲಾಗುತ್ತಿದೆ.

Yagati Raghu Naadig Column: ʼಸುವರ್ಣʼ ಇತಿಹಾಸ ಬರೆದ ʼಬಂಗಾರʼದ ಮನುಷ್ಯ

ʼಸುವರ್ಣʼ ಇತಿಹಾಸ ಬರೆದ ʼಬಂಗಾರʼದ ಮನುಷ್ಯ

ಚಿತ್ರರಸಿಕರು ಇಂಥ ಟೀಕೆ-ಟಿಪ್ಪಣಿಗಳನ್ನು ಕಿವಿಗೆ ಹಾಕಿಕೊಳ್ಳದೆ, ‘ಬಂಗಾರದ ಮನುಷ್ಯ’ ಬಿಂಬಿಸಿದ ಉತ್ತಮಿಕೆಗಳಿಗೆ ಓಗೊಟ್ಟು ಪ್ರವಾಹದೋಪಾದಿಯಲ್ಲಿ ಚಿತ್ರಮಂದಿರಗಳಿಗೆ ದಾಂಗುಡಿಯಿಟ್ಟರು. ಇದಕ್ಕೆ ಪುರಾವೆ ಎಂಬಂತೆ, ಬೆಂಗಳೂರಿನ ಸ್ಟೇಟ್ಸ್ ಚಿತ್ರಮಂದಿರದಲ್ಲಿ (ಈಗ ಭೂಮಿಕಾ ಎಂದಾಗಿದೆ) ಬಿಡುಗಡೆ ಯಾದ ಈ ಚಿತ್ರ ಬರೋಬ್ಬರಿ 2 ವರ್ಷಗಳಿಗೂ ಹೆಚ್ಚು ಕಾಲ ಪ್ರದರ್ಶನ ಕಂಡರೆ, ಮೈಸೂರಿನ ಚಾಮುಂಡೇಶ್ವರಿ ಚಿತ್ರಮಂದಿರದಲ್ಲಿ 60 ವಾರಗಳವರೆಗೆ ಓಡಿತು. ಮಾತ್ರವಲ್ಲದೆ, ರಾಜ್ಯದ ವಿವಿಧೆಡೆ 25 ವಾರಗಳ ಪ್ರದರ್ಶನ ಭಾಗ್ಯವನ್ನು ಕಂಡಿತು. 1988ರಲ್ಲಿ ಮರು ಬಿಡುಗಡೆಯಾದಾಗಲೂ 25 ವಾರಗಳ ಪ್ರದರ್ಶನ ಕಂಡ ಹೆಗ್ಗಳಿಕೆ ‘ಬಂಗಾರದ ಮನುಷ್ಯ’ನದ್ದು.

L P Kulkarni Column: ಸ್ಟಿಫನ್ ಹಾಕಿಂಗ್‌: ವಿಶ್ವ ಉಗಮದ ರಹಸ್ಯ ತಿಳಿಸಿದ್ದ ವಿಜ್ಞಾನಿ

ಸ್ಟಿಫನ್ ಹಾಕಿಂಗ್‌: ವಿಶ್ವ ಉಗಮದ ರಹಸ್ಯ ತಿಳಿಸಿದ್ದ ವಿಜ್ಞಾನಿ

ನರ ಸಂಬಂಧಿ ಕಾಯಿಲೆಗೆ ತುತ್ತಾಗಿ, ಸರಿಯಾಗಿ ಚಲಿಸಲು, ವೀಕ್ಷಿಸಲು, ಕೇಳಲು, ಮಾತನಾ ಡಲು ಆಗದೇ ತನ್ನ ಇಡೀ ಜೀವನವನ್ನೆಲ್ಲಾ ಗಾಲಿ ಕುರ್ಚಿಯ ಮೇಲೆ ಕುಳಿತು ಕಳೆದ, ಖ್ಯಾತ ಸೈದ್ಧಾಂತಿಕ ಭೌತಶಾಸ್ತ್ರಜ್ಞನಾಗಿ, ಪ್ರೊಫೆಸರ್ ಆಗಿ ಜಗದ್ವಿಖ್ಯಾತಿ ಗಳಿಸಿ, ಕೇವಲ 26 ವರ್ಷಕ್ಕೆ ಮರಣ ಹೊಂದುತ್ತಾನೆಂದು ಭಾವಿಸಿದ್ದ, ವೈದ್ಯಲೋಕಕ್ಕೆ ಸವಾಲೆಸೆದು 76 ವರ್ಷ ಸಾರ್ಥಕ ಜೀವನ ನಡೆಸಿದ ಆ ಮಹಾನ್ ಚೇತನವೇ ವಿಜ್ಞಾನಿ ಸ್ಟಿಫನ್ ಹಾಕಿಂಗ್

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

‘ಸ್ಟಾರೋ ಕ್ಲಾಡಿಯ’ ಎಂಬ ಅಂಬಲಿ ಮೀನು ಕೇವಲ 0.5 ಮಿ.ಮೀ. ಇರುತ್ತದೆ. ಅದೇ ‘ಸಯನಿಯ ಕ್ಯಾಪಿಲ್ಲೇಟ’ ಎಂಬ ಬೃಹತ್ ಅಂಬಲಿ ಮೀನಿನ ಲತಾಬಾಹುಗಳು 100-120 ಅಡಿ ಉದ್ದವಿರುತ್ತವೆ. ಹಾಗಾಗಿ ಕೆಲವರು ಈ ಅಂಬಲಿ ಮೀನನ್ನು ‘ಸಾಗರದ ಅತ್ಯಂತ ಉದ್ದನೆಯ ಜೀವಿ’ ಎಂದು ಕರೆಯುವರು.

Hosmane Muttu Column: ಒನಕೆ ತೂಬು: ಪುರಾತನ ಭಾರತದ ಜಲವಿಜ್ಞಾನದ ಅದ್ಭುತ

ಒನಕೆ ತೂಬು: ಪುರಾತನ ಭಾರತದ ಜಲವಿಜ್ಞಾನದ ಅದ್ಭುತ

ಇಲ್ಲಿರುವ ಕಂಬಗಳ ನಡುವೆ, ಮೇಲೆ ಮತ್ತು ಕೆಳಕ್ಕೆ ರಂಧ್ರ ಗಳಿರುವ ಕಲ್ಲಿನ ಪಟ್ಟಿಗಳನ್ನು ಅಳವಡಿಸ ಲಾಗಿರುತ್ತದೆ. ಈ ರಂಧ್ರಕ್ಕೆ ಸರಿಯಾಗಿ ಹೊಂದುವಂತೆ, ತುದಿಯಲ್ಲಿ ಬಿರಟೆಯಂಥ ಆಕಾರವಿರುವ ಉದ್ದನೆಯ ಮರದ ಕಂಬವೊಂದನ್ನು (ಒನಕೆ ಮಾದರಿಯ ಕಂಬ) ಮೇಲಿಂದ ಇಳಿಸಲಾಗಿರುತ್ತದೆ. ನೀರು ಬೇಕಾದಾಗ ಈ ಕಂಬವನ್ನು ಮೇಲೆತ್ತಲಾಗುತ್ತಿತ್ತು. ಆಗ ನೀರು ಕೆರೆಯ ಕೆಳಭಾಗದ ಕಾಲುವೆ ಗಳ ಮೂಲಕ ಗದ್ದೆ-ತೋಟಗಳಿಗೆ ಹರಿಯುತ್ತಿತ್ತು.

Purushottam Venki Column: ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ...ಈ ಮಾತು ನೂರಕ್ಕೆ ನೂರರಷ್ಟು ಸತ್ಯ..!

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ...

ಒಂದು ಮಡಕೆ ತಯಾರಿಸಲು ಕನಿಷ್ಠ 10 ದಿನ ಬೇಕು. 2 ಕೊಡ ನೀರು ಹಿಡಿಯುವ ಮಡಕೆಯ ತಯಾರಿಗೆ 4 ಕೆ.ಜಿ. ಮಣ್ಣು ಬೇಕು. ಇದು ಒಬ್ಬರೇ ಮಾಡುವ ಕೆಲಸವಲ್ಲ, ಇಡೀ ಕುಟುಂಬದವರು ಕೈಜೋಡಿಸ ಬೇಕಾಗುವ ಬಾಬತ್ತು. ಮೊದಲು ಮಣ್ಣನ್ನು ಜರಡಿ ಹಿಡಿಯಬೇಕು, ಬಳಿಕ ರಾಡಿ ಮಾಡಿ ಸೋಸಿ, ಕಲ್ಲಿನ ಚೂರು, ಕಸ-ಕಡ್ಡಿ ಇತ್ಯಾದಿಗಳನ್ನು ಬೇರ್ಪಡಿಸಬೇಕು.

Dr. Karaveeraprabhu Kyalakonda Column: ಭಾವೈಕ್ಯತೆಯ ಬನಶಂಕರಿ ಯಾತ್ರೆ

ಭಾವೈಕ್ಯತೆಯ ಬನಶಂಕರಿ ಯಾತ್ರೆ

ಬನದೇವಿಯ ಸಂಪದದಲ್ಲಿ ಎದ್ದು ಕಾಣುವ ಧವಳ ಶಿಖರ ವನ್ನು ಹೊಂದಿದ ಬನಶಂಕರಿ ದೇವಿಯ ಗುಡಿಯು ದೂರದಿಂದಲೇ ಮನವನ್ನಾಕರ್ಷಿಸುತ್ತದೆ. ಚತುರಸ್ತ ಕಲ್ಲು ಮಂಟಪಗಳಿಂದ ಆವೃತವಾದ ಹರಿದ್ರಾತೀರ್ಥದ ಪಶ್ಚಿಮಕ್ಕೆ ಪೂರ್ವ ಮಹಾ ದ್ವಾರದಿಂದ ಒಳಗೂಡಿನ ಪ್ರಾಕಾರದ ಮಧ್ಯದಲ್ಲಿ ಈ ಶಕ್ತಿದೇವತೆಯ ಗುಡಿ ಇದೆ.

Surendra Pai Column: ಹೊಸ ವರ್ಷದ ಸಂಪನ್ನತೆ: ಸರಳ ಸೂತ್ರಗಳಿವು

ಹೊಸ ವರ್ಷದ ಸಂಪನ್ನತೆ: ಸರಳ ಸೂತ್ರಗಳಿವು

ಏನಾದರೂ ಮಾಡು ಮೊದಲು ಮಾನವನಾಗು: ಏನಾದರೂ ಆಗುವ ಮುನ್ನ ಏನಾದರೂ ಮಾಡಬೇಕಲ್ಲವೇ? ಇಂದಿನ ಆಧುನಿಕ ಯುಗದಲ್ಲಿ ದಿನಗಳೆದಂತೆ ಸ್ವಾರ್ಥ ತಾಂಡವವಾಡುತ್ತಿದೆ. ಮಾನವ ದಾನವ ನಂತೆ ವರ್ತಿಸುವ ಮಟ್ಟಕ್ಕೆ ಇಳಿದಿದ್ದಾನೆ. ಬದುಕು ಎಂಬುದು ನಮಗೆಲ್ಲರಿಗೂ ದೊರೆತ ಬೆಲೆ ಕಟ್ಟಲಾಗದ ಅತ್ಯಮೂಲ್ಯ ಕಾಣಿಕೆ.

'ಜಾಗತಿಕ ಕುಟುಂಬ ದಿನ': ಕುಟುಂಬಗಳ ಸಾಮಾಜಿಕ ಸಮ್ಮಿಲನ

'ಜಾಗತಿಕ ಕುಟುಂಬ ದಿನ': ಕುಟುಂಬಗಳ ಸಾಮಾಜಿಕ ಸಮ್ಮಿಲನ

ಪ್ರತೀ ವರ್ಷ ಜನವರಿ-1ನ್ನು ‘ಜಾಗತಿಕ ಕುಟುಂಬ ದಿನ’ವಾಗಿ ಆಚರಿಸಲಾಗುತ್ತದೆ. ಕುಟುಂಬ ಕಲ್ಪನೆಯ ಮೂಲಕ ರಾಷ್ಟ್ರಗಳು ಮತ್ತು ಸಂಸ್ಕೃತಿಗಳ ಏಕತೆ, ವೈವಿಧ್ಯತೆಯನ್ನು ಗೌರವಿಸುವುದು, ಇತರೆ ದೇಶಗಳ ಕುರಿತು ನಕಾರಾತ್ಮಕ ಧೋರಣೆ ಹೊಂದುವುದನ್ನು ತಡೆಯುವುದು, ಶತ್ರು ರಾಷ್ಟ್ರವನ್ನು ಕೆರಳಿಸಬಾರದು ಎನ್ನುವುದು ಇದರ ಉದ್ದೇಶ. ಆದರೆ ಜಗತ್ತು ವಿಶ್ವ ಕುಟುಂಬ ದಿನ ಆಚರಣೆ ಮಾಡುವ ಮುನ್ನವೇ ನಮ್ಮ ಹೆಮ್ಮೆಯ ಭಾರತವು ವಸುಧೈವ ಕುಟುಂಬಕಂ ಎಂದು ಜಗತ್ತಿಗೆ ತಿಳಿಸಿತ್ತು.

ಬೆಲೆಯಿರುವ ಜಾಗದಲ್ಲಿರೋಣ

ಬೆಲೆಯಿರುವ ಜಾಗದಲ್ಲಿರೋಣ

ಹುಡುಗನಿಗೆ ಆಶ್ಚರ್ಯ ಉಂಟಾಗಿ ‘ಸರಿ, ನಮ್ಮ ಅಜ್ಜನಿಗೆ ಕೇಳಿ ಬರುತ್ತೇನೆ’ ಎಂದ. ಅಜ್ಜನ ಹತ್ತಿರ ಬಂದು ‘ಅಜ್ಜಾ...ಈ ವಾಚಿಗೆ ಒಂದೊಂದು ಅಂಗಂಡಿಯಲ್ಲಿ ಒಂದೊಂದು ಬೆಲೆಯಿದೆ’ ಎಂದಾಗ ಅಜ್ಜ, ‘ಮಗು ನಮಗೆ ಹೆಚ್ಚು ಬೆಲೆ ಸಿಗುವ ಜಾಗದಲ್ಲಿ ನಾವಿರಬೇಕು, ಅಂದಾಗ ಮಾತ್ರ ನಮ್ಮ ವ್ಯಕ್ತಿತ್ವ ಇಮ್ಮಡಿ ಗೊಳ್ಳುತ್ತದೆ ಮತ್ತು ಹೆಚ್ಚು ಗೌರವ ದೊರಕುತ್ತದೆ’ ಎಂದಾಗ ಮಗುವಿಗೆ ಅಜ್ಜನ ಮಾತು ಅರ್ಥವಾಗಿತ್ತು.

Dr N Someshwara Column: ಹುಟ್ಟು, ಸಾವು ಮತ್ತು ಚಿರಂಜೀವತ್ವ !

Dr N Someshwara Column: ಹುಟ್ಟು, ಸಾವು ಮತ್ತು ಚಿರಂಜೀವತ್ವ !

ಆಕೆಯು ನೇರವಾಗಿ ಬುದ್ಧನ ಬಳಿಗೆ ಬಂದು, ಅವನ ಪದತಲದಲ್ಲಿ ಮಗನ ಕಳೇಬರವನ್ನು ಇಟ್ಟು, ತನ್ನ ಮಗನಿಗೆ ಜೀವಕೊಡುವಂತೆ ಪ್ರಾರ್ಥಿಸುತ್ತಾಳೆ. ಆಕೆಯ ಅಳಲನ್ನು ಕೇಳಿದ ಭಗವಾನ್ ಬುದ್ಧ “ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತಂದರೆ ನಿನ್ನ ಮಗನನ್ನು ಬದುಕಿಸುವೆ" ಎನ್ನುತ್ತಾನೆ. ಕಿಸಾ ಗೌತಮಿಯು ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತರಲು ಇಡೀ ಶ್ರಾವಸ್ತಿ ನಗರದ ಮನೆಯೊಂದನ್ನೂ ಬಿಡದೆ ಸುತ್ತುತ್ತಾಳೆ. ಆದರೆ ಎಲ್ಲರ ಮನೆಯಲ್ಲಿಯೂ ಒಬ್ಬರಲ್ಲ ಒಬ್ಬರು ಸತ್ತೇ ಇರುತ್ತಾರೆ. ಸಂಜೆಯ ವೇಳೆಗೆ ಕಿಸಾ ಗೌತಮಿಗೆ ಜ್ಞಾನೋದಯವಾಗುತ್ತದೆ.

ಮೌಲ್ಯಗಳು ಮಾನವ ಬದುಕಿನ ಅಡಿಗಲ್ಲು

ಮೌಲ್ಯಗಳು ಮಾನವ ಬದುಕಿನ ಅಡಿಗಲ್ಲು

ಮೊಬೈಲ್ ಪರದೆಗಳ ಹಿಂದೆ ಮುಳುಗಿರುವ ನಾವು, ಪಕ್ಕದಲ್ಲಿರುವ ಮನುಷ್ಯನ ಭಾವನೆಗಳನ್ನು ಗಮನಿಸದೇ ಹೋಗುತ್ತಿರುವುದು ದುರಂತ. ಶಾಲೆಗಳು ಮತ್ತು ಕಾಲೇಜುಗಳು ಜ್ಞಾನ ನೀಡುವ ಕೇಂದ್ರ ಗಳಾಗಿವೆ. ಆದರೆ ಮೌಲ್ಯ ಶಿಕ್ಷಣಕ್ಕೆ ನೀಡುವ ಆದ್ಯತೆ ಕಡಿಮೆಯಾಗುತ್ತಿದೆ. ಅಂಕಗಳು, ರ‍್ಯಾಂಕ್, ಸ್ಪರ್ಧೆ- ಇವುಗಳ ನಡುವೆ ಮೌಲ್ಯಗಳು ಹಿಂಬದಿಗೆ ಸರಿಯುತ್ತಿವೆ. ಪರಿಣಾಮ ವಾಗಿ ವಿದ್ಯಾವಂತರು ಹೆಚ್ಚಾಗು ತ್ತಿದ್ದರೂ, ವಿವೇಕವಂತರು ಕಡಿಮೆಯಾಗುತ್ತಿದ್ದಾರೆ.

ಉಲ್ಲಾಸದ ಹೂಮಳೆ ಜಿನುಗಲಿ ತನು-ಮನದಲ್ಲೀ...

ಉಲ್ಲಾಸದ ಹೂಮಳೆ ಜಿನುಗಲಿ ತನು-ಮನದಲ್ಲೀ...

ಮನೆಯಲ್ಲಿ ಆದಷ್ಟೂ ಸೌಮ್ಯ ಆಹಾರ ಸೇವಿಸಿ. ಟಿ.ವಿ.ಯಲ್ಲಿ ಅತ್ತೆ-ಸೊಸೆ ಜಗಳ, ಕೊಲೆ, ಕಿಡ್ ನ್ಯಾಪ್, ಅಪಘಾತ, ಆಸ್ಪತ್ರೆಯ ಸುತ್ತಲೇ ಗಿರಕಿ ಹೊಡೆಯುವ ಧಾರಾವಾಹಿಗಳನ್ನು ನೋಡಬೇಡಿ. ಬದಲಾಗಿ ವಾರ್ತೆಗಳ ಜತೆಗೆ ಹಾಸ್ಯ ಹಾಗೂ ಆಧ್ಯಾತ್ಮಿಕ ವಿಷಯ ಹೊಂದಿರುವ ಪ್ರಸಂಗಗಳನ್ನು ವೀಕ್ಷಿಸಿ. ಆದಷ್ಟೂ ಮನೆಮಂದಿಯೊಡನೆ ಕುಳಿತು ಪ್ರಚಲಿತ ವಿದ್ಯಮಾನಗಳ ಕುರಿತು ಮುಕ್ತ ಮನದಿಂದ ಮಾತನಾಡಿ.

Lakshmikanth L V Column: ಟೀಕೆಗಳಿಗಿಲ್ಲ ಆಯುಷ್ಯ, ಕೆಲಸಕ್ಕಿದೆ ಭವಿಷ್ಯ

ಟೀಕೆಗಳಿಗಿಲ್ಲ ಆಯುಷ್ಯ, ಕೆಲಸಕ್ಕಿದೆ ಭವಿಷ್ಯ

ರಾಷ್ಟ್ರಕವಿ ಕುವೆಂಪು ಅವರು ಹೇಳುವಂತೆ, ಮನುಷ್ಯನ ಅಸ್ತಿತ್ವವಿರುವುದು ಅವನ ಮಾತಿನಲ್ಲಿ ಅಲ್ಲ, ಬದಲಾಗಿ ಅವನ ಕೃತಿಯಲ್ಲಿ. ನಾವು ಎದುರಿಸುವ ಟೀಕೆಗಳು ಗಾಳಿಯಲ್ಲಿ ಹಾರಿ ಹೋಗುವ ಧೂಳಿನಂತೆ; ಅವು ಕಣ್ಣಿಗೆ ಸ್ವಲ್ಪ ಕಾಲ ಕಿರಿಕಿರಿ ಉಂಟುಮಾಡಬಹುದು, ಆದರೆ ಅವುಗಳಿಗೆ ಸ್ವತಂತ್ರ ಅಸ್ತಿತ್ವವಿಲ್ಲ. ಆದರೆ ನಾವು ಮಾಡುವ ಸೃಜನಾತ್ಮಕ ಕೆಲಸಗಳು ಭೂಮಿಯಲ್ಲಿ ಆಳವಾಗಿ ಬೇರೂರುವ ಮರಗಳಂತೆ

Purushottam Venky Column: ಸುಣ್ಣ ಸುಡುವ ಕಾಯಕ ಮರೆಯಾಗುತ್ತಿರುವುದೇಕೆ ?

ಸುಣ್ಣ ಸುಡುವ ಕಾಯಕ ಮರೆಯಾಗುತ್ತಿರುವುದೇಕೆ ?

ಸಂಕಷ್ಟದ ಸುಳಿಯಲ್ಲಿರುವ ರಾಜ್ಯದ ಬಹುತೇಕ ಸುಣ್ಣಗಾರರು ಇತ್ತೀಚಿನ ದಿನಗಳಲ್ಲಿ ವೃತ್ತಿ ಯನ್ನು ತೊರೆದಿದ್ದಾರೆ. ಕಾರಣ ಈ ಕಸುಬಿನಿಂದ ಬದುಕು ಕಟ್ಟಿಕೊಳ್ಳುವುದು ಅಸಾಧ್ಯ ಎಂಬುದು ಗೊತ್ತಾಗಿದೆ. ಜತೆಗೆ ಜನರೂ ಕಾರ್ಖಾನೆ ಸುಣ್ಣದತ್ತ ಮುಖ ಮಾಡಿರುವುದರಿಂದ ಮುಂದೆ ಇದರಿಂದ ಜೀವನ ಸಾಗಿಸಲು ಸಾಧ್ಯವಿಲ್ಲ ಎಂಬಂತಾಗಿದೆ.

Vidyashankar Sharma Column: ಲೌಕಿಕ ಸಮಸ್ಯೆಗಳಿಗೆ ಅಲೌಕಿಕ ಪರಿಹಾರ

ಲೌಕಿಕ ಸಮಸ್ಯೆಗಳಿಗೆ ಅಲೌಕಿಕ ಪರಿಹಾರ

ನಮಗಿಂತ ಬಲಶಾಲಿಯಾದ ಅಗೋಚರ ಶಕ್ತಿಗೆ ಶರಣು ಹೋಗುವುದು. ನಮ್ಮ ಪಾಲಿಗೆ ಬಂದಿರುವುದನ್ನು ಪ್ರಸಾದದಂತೆ ಸ್ವೀಕರಿಸುವುದು. ಇದರಿಂದ ಶಾಂತಯುತ ಮನಸ್ಥಿತಿಯ ಪ್ರಾಪ್ತಿ. ನಮ್ಮ ಕಾರ್ಯಗಳು ಮಾತ್ರ ನಮ್ಮ ಅಧೀನದಲ್ಲಿ ಇರುವ ವಿಷಯ, ಅದರ ಫಲಾಫಲದ ಕುರಿತು ಚಿಂತೆ ಬೇಡ. ಏನಾಗಬೇಕೆಂದಿರುವುದೋ ಅದೇ ಜರುಗುವುದು.

ಮದುವೆ ಆಗಿ ನೋಡು, ಮಗು ತೂಗಿ ನೋಡು

ಮದುವೆ ಆಗಿ ನೋಡು, ಮಗು ತೂಗಿ ನೋಡು

ಮದು ಮಗನಿಗೆ ಎಲ್ಲಿಲ್ಲದ ಖುಷಿ. ಆ ದಿನ ಬಂದೇಬಿಟ್ಟಿತು. ಕೆಲವೇ ಗಂಟೆಗಳ ಪ್ರಯಾಣದ ಊರು, ಹೆಣ್ಣಿನ ಮನೆಗೆ ಫಲ-ತಾಂಬೂಲ ಸಮೇತ ಮಧ್ಯಾಹ್ನದ ವೇಳೆಗೆ ಬಂದಿದ್ದಾರೆ ವರನ ಮನೆಯವರು. ಹಾಗೆ ಬಂದವರನ್ನು ನೋಡಿದ ಹೆಣ್ಣಿನ ಮನೆಯವರಿಗೆ ಆಶ್ಚರ್ಯವಾಗಿ, “ಯಾರು ನೀವು? ಏನು ಬಂದಿರಿ?" ಎಂದೆಲ್ಲಾ ಕೇಳಿಯೇಬಿಟ್ಟರು!

Dr N Someshwara Column: ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಆಸ್ಪತ್ರೆಯ ಹೊರಗೆ ವೈದ್ಯರು ಜೋಲುಮುಖವನ್ನು ಹಾಕಿಕೊಂಡು ನಿಂತಿದ್ದರು. ಹರ್ನಿಯವು ಸಿಡಿದಿರಬೇಕು, ಸೋಂಕು ಉದರಾದ್ಯಂತ ವ್ಯಾಪಿಸಿದೆ. ಅಂತಿಮ ಘಟ್ಟವನ್ನು ತಲುಪಿದೆ. ಈ ಮಗು ಇನ್ನು ಕೆಲವೇ ಗಂಟೆಗಳ ಅತಿಥಿ ಮಾತ್ರ... ಎಂದು ಮೆಲುದನಿಯಲ್ಲಿ ಅಲವತ್ತು ಕೊಂಡರು.

ಸೂರ್ಯನ ಕಿರಣಗಳ ಪ್ರತಿಫಲನ, ವಿದ್ಯುಚ್ಛಕ್ತಿಯ ಉತ್ಪಾದನೆಗೆ ಉತ್ತೇಜನ

ಸೂರ್ಯನ ಕಿರಣಗಳ ಪ್ರತಿಫಲನ, ವಿದ್ಯುಚ್ಛಕ್ತಿಯ ಉತ್ಪಾದನೆಗೆ ಉತ್ತೇಜನ

‘ಸೂರ್ಯನ ಬೆಳಕನ್ನು ಬಾಹ್ಯಾಕಾಶದಿಂದ ಪ್ರತಿಫಲಿಸಿ ಭೂಮಿಗೆ ತರುವುದು ಇದರ ಉದ್ದೇಶ. ಆಗ ರಾತ್ರಿಯ ವೇಳೆಯಲ್ಲೂ ಸೌರ ವಿದ್ಯುತ್ ಉತ್ಪಾದನೆ ಸಾಧ್ಯವಾಗುತ್ತದೆ. ಕೃತಕ ಉಪಗ್ರಹಗಳ ಮೇಲೆ ಅಳವಡಿಸಲಾದ ದೊಡ್ಡ ಕನ್ನಡಿಗಳು ಸೂರ್ಯನ ಬೆಳಕನ್ನು ಪ್ರತಿಫಲಿಸಿ, ಭೂಮಿಯ ನಿರ್ದಿಷ್ಟ ಪ್ರದೇಶಗಳಿಗೆ, ವಿಶೇಷವಾಗಿ ಸೌರತೋಟಗಳಿಗೆ ಬೆಳಕು ಬೀರುತ್ತವೆ.

ಅಂಕಪಟ್ಟಿಯ ಭ್ರಮೆಗೆ ಸುಂಕವಿಲ್ಲವೇ ?!

ಅಂಕಪಟ್ಟಿಯ ಭ್ರಮೆಗೆ ಸುಂಕವಿಲ್ಲವೇ ?!

ಇದು ಸಮಸ್ಯೆಗೆ ಪರಿಹಾರವಲ್ಲ; ಸಮಸ್ಯೆಯನ್ನು ಮರೆಮಾಚುವುದು ಎನಿಸಿಕೊಳ್ಳುತ್ತದೆ, ಅಷ್ಟೇ! ಬಡತನ ರೇಖೆಯನ್ನು ಕೆಳಗೆ ಇಳಿಸುವುದು ವಾಸ್ತವ ಪರಿಷ್ಕಾರವಲ್ಲ, ಕೇವಲ ಗಣಕದಲ್ಲಿ ಅಂಕಿ-ಅಂಶವನ್ನು ಕಡಿಮೆ ತೋರಿಸುವ ತಂತ್ರ. ಅಂದರೆ, ಬಡತನ ರೇಖೆಯನ್ನು ಕೆಳಗಿಳಿಸುವುದು ಸಂಖ್ಯಾತ್ಮಕ ತಂತ್ರ ಮಾತ್ರ; ಇದರಿಂದ ಸಮಸ್ಯೆ ನಿಜವಾಗಿಯೂ ಬದಲಾಗುವುದಿಲ್ಲ.

Loading...