ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Aarama
ಕನ್ನಡಕ್ಕಾಗಿ ಕಣ್ಣೀರಿಟ್ಟ ರಾಜಕುಮಾರ್‌ !

ಕನ್ನಡಕ್ಕಾಗಿ ಕಣ್ಣೀರಿಟ್ಟ ರಾಜಕುಮಾರ್‌ !

ನಮ್ಮ ‘ಕನ್ನಡ ಜಾಗೃತಿ’ ಎಂಬ ಸಾಕ್ಷ್ಯಚಿತ್ರದಲ್ಲಿ ಆ ಐತಿಹಾಸಿಕ ಚಳುವಳಿಯ ನೇರ ಚಿತ್ರೀಕರಣ ವಿದೆ. ಇದು ಆ ಚಳುವಳಿಯ ಏಕಮೇವ ಸಾಕ್ಷಚಿತ್ರ ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಮೇ 18, 1982. ಸಮಯ ಬೆಳಿಗ್ಗೆ 11 ಗಂಟೆ. ಸ್ಥಳ: ಪುರಸಭೆ ಮೈದಾನ, ಮೈಸೂರು. ಶಾಲೆಗಳಲ್ಲಿ ಕನ್ನಡ ಭಾಷೆಗೆ ಪ್ರಮುಖ ಸ್ಥಾನ ದೊರೆಯಲು ‘ಗೋಕಾಕ್ ವರದಿ’ಯನ್ನು ಜಾರಿಗೆ ತರಲು ಸರಕಾರವನ್ನು ಒತ್ತಾಯಿಸಿ ಎಲ್ಲೆಡೆ ನಡೆಯು ತ್ತಿದ್ದ ಆಂದೋಲನಕ್ಕೆ ಡಾ.ರಾಜ್ ಬಂದು ಸೇರಿದ್ದು ಬಹುದೊಡ್ಡ ಬಲವನ್ನು ಒದಗಿಸಿತು.

‌Srinivasmurthy N S Column: ಪ್ರಾಗೈತಿಹಾಸಿಕ ನೆಲೆಯ ಹುಡುಕಾಟದಲ್ಲಿ

ಪ್ರಾಗೈತಿಹಾಸಿಕ ನೆಲೆಯ ಹುಡುಕಾಟದಲ್ಲಿ

ಸೊಮೇಶ್ವರ ದೇವಾಲಯದ ಸಮೀಪದ ಬಂಡೆಯ ಮೇಲಿನ 1280ರ ಶಾಸನದಲ್ಲಿ, ಕುವಳಾಲನಗರದ ಗಂಗ ವಂಶದ ವೀರಗಂಗ ಉತ್ತಮ ಚೋಳಗಂಗನ ಮಗನಾದ ವೆತ್ತುಮಪ್ಪರ ಬಾಣನು ದೇವಾಲಯದ ದೈನಂದಿನ ಸೇವೆಗೆ ದತ್ತಿ ನೀಡಿದ ಉಲ್ಲೇಖವಿದೆ. ದೇವಾಲಯದ ಗೋಡೆಯಲ್ಲಿನ 1295ರ ಶಾಸನದಲ್ಲಿ ಮೂಡಲಿಪಿಳ್ಳೈ ಮಹಾಮಂತ್ರಿ ಮತ್ತು ಇಳಾನಾಡಿನಲ್ಲಿನ ಪಿರಿಯನಾಡಿನ ನಿವಾಸಿಗಳು ಅಖಂಡ ದೀಪ ಉರಿಸುವದಕ್ಕೆ ದತ್ತಿ ನೀಡಿದ ಉಲ್ಲೇಖವಿದೆ.

Mallappa C Khaodnapura: ಜಂಕ್‌ ಫುಡ್‌ ತಿನ್ನಬೇಕೆನ್ನುವ ಕ್ರೇಜ್‌, ಮಕ್ಕಳಿಗದು ಕಾಯಲೆಗೆ ರಹದಾರಿ

ಜಂಕ್‌ ಫುಡ್‌ ತಿನ್ನಬೇಕೆನ್ನುವ ಕ್ರೇಜ್‌, ಮಕ್ಕಳಿಗದು ಕಾಯಲೆಗೆ ರಹದಾರಿ

ನಮ್ಮ ದೇಶದ ಮಕ್ಕಳಲ್ಲೂ ಬೊಜ್ಜು ಸೇರಿದಂತೆ ಇತರ ರೋಗಗಳ ಪ್ರಮಾಣವು ಅತ್ಯಧಿಕವಾಗಿ ಹೆಚ್ಚುತ್ತಿರುವುದು ಕಂಡುಬಂದಿದೆ. ಗುಜರಾತ್ ರಾಜ್ಯವು ಈ ಪೈಕಿ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಎರಡನೇಯ ಸ್ಥಾನದಲ್ಲಿದೆ, ನಮ್ಮ ಕರ್ನಾಟಕ ರಾಜ್ಯವು 4ನೇ ಸ್ಥಾನದಲ್ಲಿದೆ. ಈ ಗಂಭೀರ ಅಪಾಯವನ್ನ ರಿತ ಕೇರಳ ರಾಜ್ಯ ಸರಕಾರವು ಜಂಕ್ ಫುಡ್‌ಗಳ ಮೇಲೆ ಹೆಚ್ಚುವರಿಯಾಗಿ ಶೇ 14.5%ರಷ್ಟು ತೆರಿಗೆ ಭಾರ ವಿಧಿಸುವ ಮೂಲಕ ಜಂಕ್ ಫುಡ್ ತಿನ್ನುವುದರಿಂದ ಜನರನ್ನು ತಡೆಯುವ ಪ್ರಯತ್ನ ಮಾಡುವ ಆರೋಗ್ಯ ಸುಧಾರಣಾ ಕ್ರಮಕ್ಕೆ ಮುಂದಾಗಿರುವುದು ಸ್ವಾಗತಾರ್ಹ

‌Supreetha Venkat Column: ಐಟಿ ಕೆಲಸದ ಹೆಬ್ಬಯಕೆಯೇ..ಹಾಗಿದ್ದರೆ ನಿಮಗಿಲ್ಲೊಂದಿಷ್ಟು ಟಿಪ್ಸ್

ಐಟಿ ಕೆಲಸದ ಹೆಬ್ಬಯಕೆಯೇ..ಹಾಗಿದ್ದರೆ ನಿಮಗಿಲ್ಲೊಂದಿಷ್ಟು ಟಿಪ್ಸ್

ಐಟಿ ಕ್ಷೇತ್ರದಲ್ಲಿ ಕೆಲಸ ಹುಡುಕಿ, ಒಂದು ಕಂಪನಿ ಸೇರಬೇಕೆಂದರೆ ಇಂಟರ್ವ್ಯೂ ಹಂತದಲ್ಲೂ ದಿನ ಕ್ಕೊಂದು ಟ್ರೆಂಡ್ ಚಾಲ್ತಿಯಲ್ಲಿದೆ ಎಂಬುದು ವಾಸ್ತವ. ಇವತ್ತಿರುವ ರೂಢಿ ನಾಳೆ ಇರಲ್ಲ, ಒಂದು ಕಂಪೆನಿಯ ರಿಕ್ರೂಟ್‌ಮೆಂಟ್ ಪ್ರೊಸೆಸ್ ಒಂದು ತರಹವಾದರೆ, ಮತ್ತೊಂದು ಕಂಪೆನಿದು ಇನ್ನೊಂದು ವಿಧ

Surendra Pai Column: ಸಿಹಿ ಜಡೆ ಈರುಳ್ಳಿ ಬಲ್ಲಿರಾ ?

ಸಿಹಿ ಜಡೆ ಈರುಳ್ಳಿ ಬಲ್ಲಿರಾ ?

ಕುಮಟಾ ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಜಡೆ ಈರುಳ್ಳಿಯ ರಾಶಿಗಳನ್ನು ಇಟ್ಟು ಮಾರಾಟ ಮಾಡುವ ದೃಶ್ಯ ಈ ಸಮಯದಲ್ಲಿ ಸಾಮಾನ್ಯವಾಗಿ ಕಾಣಸಿಗುತ್ತವೆ. ಈ ಈರುಳ್ಳಿಯನ್ನು ಜುಟ್ಟು ಸಮೇತ ಮಣ್ಣಿನಿಂದ ತೆಗೆದು ಅವುಗಳ ಒಣಗಿದ ಎಲೆಗಳನ್ನು ಕೂದಲನ್ನು ಹೆಣೆಯುವ ರೀತಿ ಹೆಣೆದು, ಆ ಜಡೆ ಈರುಳ್ಳಿಯನ್ನು ನೇತು ಹಾಕಿರುತ್ತಾರೆ.

Narendra Parekat Column: ಮಕ್ಕಳ ಬೇಸಿಗೆ ಶಿಬಿರ ವಿಕಸನದ ಅವಕಾಶ

ಮಕ್ಕಳ ಬೇಸಿಗೆ ಶಿಬಿರ ವಿಕಸನದ ಅವಕಾಶ

ಸುಮ್ಮನೆ ಮನೆಯಲ್ಲಿದ್ದು ಸದಾ ಟಿ.ವಿ, ಮೊಬೈಲ್ ಜತೆ ಕಾಲ ಕಳೆಯುವ ಬದಲು ಬಗೆಬಗೆಯ ಚಟುವಟಿಕೆಗಳಲ್ಲಿ ಮಕ್ಕಳು ತಮ್ಮನ್ನು ತೊಡಗಿಸಬಹುದಾದ ಒಂದೊಳ್ಳೆಯ ಅವಕಾಶವೂ ಇದಾಗಿದೆ. ಬೇಸಿಗೆ ಶಿಬಿರಗಳು ಈಗ ನಗರದಲ್ಲಿ ಅಷ್ಟೇ ಏಕೆ, ಹಳ್ಳಿ ಹಳ್ಳಿಗಳಲ್ಲೂ ಮಕ್ಕಳ ಆಸಕ್ತಿ ಗಳನ್ನು ಹೆಚ್ಚಿಸಿಕೊಳ್ಳಲು, ಅವರ ಕ್ರಿಯಾಶೀಲತೆಗೆ ಅನುವು ಮಾಡಿಕೊಡುವ ಚಟುವಟಿಕೆ ಗಳಾಗುತ್ತಿರುವು ದರಿಂದ ಹೆಚ್ಚಿನ ಬೇಡಿಕೆ ಹೊಂದಿದೆ

Veena Bhat Column: ದ್ವಾರಕಾಧೀಶನ ರಾಜ್ಯದಲ್ಲಿ

ದ್ವಾರಕಾಧೀಶನ ರಾಜ್ಯದಲ್ಲಿ

ಇಲ್ಲಿನ ದೇವಸ್ಥಾನವನ್ನು ಜಗತ್ ಮಂದಿರ ಎಂದೂ ಕರೆಯುತ್ತಾರೆ. ಈ ದೇವಾಲಯವು ಭಾರತದ ಗುಜರಾತ್‌ನ ದ್ವಾರಕಾ ನಗರದಲ್ಲಿ, ಗೋಮತಿ ನದಿಯ ತಟದಲ್ಲಿದೆ. ಈ ದೇವಾಲಯವನ್ನು ಸುಮಾರು 2000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎನ್ನಲಾಗಿದೆ. ಮೂಲ ದೇವಾಲಯವನ್ನು ಕೃಷ್ಣನ ಮೊಮ್ಮಗ ವಜ್ರನಾಭನು ಕೃಷ್ಣನ ವಸತಿ ಸ್ಥಳದ ಮೇಲೆ ನಿರ್ಮಿಸಿದನೆಂದು ನಂಬಲಾಗಿದೆ.

ಚಿನ್ನದ ತೋಳಿನ ವ್ಯಕ್ತಿ

ಚಿನ್ನದ ತೋಳಿನ ವ್ಯಕ್ತಿ

ಸಾಮಾನ್ಯರಲ್ಲಿ ಅಸಾಮಾನ್ಯರಾದ ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್ ಅವರು 24 ಲಕ್ಷ ಶಿಶುಗಳ ಜೀವ ಉಳಿಸಲು ಕಾರಣರಾದವರು! ಶಿಶುಗಳನ್ನು ಉಳಿಸುವ ರಕ್ತದಾನಕ್ಕಾಗಿ ‘ಚಿನ್ನದ ತೋಳನ್ನು ಹೊಂದಿರುವ ವ್ಯಕ್ತಿ’ ಎಂದು ಪ್ರಸಿದ್ಧಿ ಪಡೆದ ಅವರು ತಮ್ಮ 88ನೇ ವಯಸ್ಸಿನಲ್ಲಿ ನಿಧನರಾದರು. ಜೇಮ್ಸ್ ಹ್ಯಾರಿಸನ್ ರು ರಕ್ತದಾನಕ್ಕೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು; ಆ ಮೂಲಕ ಇಂದಿಗೂ ಲಕ್ಷಾಂತರ ಜೀವಗಳಲ್ಲಿ ಚಿರಂಜೀವಿಯಾಗಿದ್ದಾರೆ!

Yagati Raghu Nadig Column: ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ʼಹಿಮʼದ ಮಡಿಲು ಈಗ ಅಗ್ನಿʼಕುಂಡʼ

ನೇಪಾಳದಲ್ಲಿ ಈಗಿರುವ ಪ್ರಜಾಪ್ರಭುತ್ವ ತೊಲಗಿ ರಾಜಪ್ರಭುತ್ವ ಮರಳಬೇಕು, ದೇಶವನ್ನು ಮೊದ ಲಿನಂತೆ ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಆಗ್ರಹಿಸಿ ನೇಪಾಳಿಗರು ಪ್ರತಿಭಟನೆಗೆ ಮುಂದಾ ಗಿದ್ದಾರೆ. ಆ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಸಾವು-ನೋವುಗಳೂ ಸಂಭವಿಸಿವೆ. ಈ ಕುರಿತಾದ ಪಕ್ಷಿ ನೋಟ ಇಲ್ಲಿದೆ.

ಲೇಖಕ ಯಾವ ಪಕ್ಷಕ್ಕೂ ಸೇರಬಾರದು !

ಲೇಖಕ ಯಾವ ಪಕ್ಷಕ್ಕೂ ಸೇರಬಾರದು !

ರೈತರು ಕಾರ್ಮಿಕರು ಉಗ್ರ ಹೋರಾಟ ನಡೆಸಿದರು. ಈ ಸಂದರ್ಭದಲ್ಲಿ ಗಾಯಗೊಂಡ ಪೊಲೀಸ್ ಪೇದೆ ಮರಣ ಹೊಂದಿದ. ಈ ಪ್ರಕರಣದ ನಾಲ್ಕು ಆರೋಪಿಗಳಿಗೆ ಮರಣದಂಡನೆ ನೀಡಿ 1943 ಮಾರ್ಚ್ 29ರಂದು ನೇಣು ಹಾಕಲಾಯಿತು. ಇವರೊಂದಿಗೆ ನೇರ ಸಂಪರ್ಕ ಹೊಂದಿದ್ದ ನಿರಂಜನರು ವಾಸ್ತವ ಸಂಗತಿಯನ್ನು ಆಧರಿಸಿ ಚಿರಸ್ಮರಣೆ ರಚಿಸಿದ್ದಾರೆ. ಕೈಯೂರಿನಲ್ಲಿ ಈ ನಾಲ್ಕು ಹುತಾತ್ಮರ ಮಂದಿರಗ ಳನ್ನು ಸ್ಮಾರಕ ರೂಪದಲ್ಲಿರಿಸಿದ್ದಾರೆ. ಪತ್ನಿ ಅನುಪಮಾ ಅವರು 1991 ಫೆಬ್ರವರಿ 15ರಂದು ಅಸು ನೀಗಿದರು.

Surendra Pai Column: ಓದುಗರ ಮನಗೆದ್ದ ಪುಸ್ತಕ ಸಂತೆಗಳು

ಓದುಗರ ಮನ ಗೆದ್ದ ಪುಸ್ತಕ ಸಂತೆಗಳು

ಮೊದಲೆಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಮಯದಲ್ಲಿ ಮಾತ್ರ ಆಯೋಜಿಸುತ್ತಿದ್ದ ಪುಸ್ತಕ ಮೇಳಗಳು ಒಂದು ಸಿಮೀತ ವ್ಯಾಪ್ತಿಗೆ ಒಳಪಟ್ಟಿವು. ಆದರೆ ಇಂದು ಹಲವು ಉತ್ಸಾಹಿ ಪ್ರಕಾಶನ ದವರು ಲಾಭ ನಷ್ಟದ ಬಗ್ಗೆ ಹೆಚ್ಚಾಗಿ ಲೆಕ್ಕಾಚಾರ ಹಾಕದೇ ಓದುಗರಿಗೆ ಹೊಸ ಹೊಸ ವಿಷಯ ಗಳನ್ನು ಹೊತ್ತಿರುವ ಹೊತ್ತಿಗೆಯನ್ನು ಪರಿಚಯಿಸುವುದರ ಮೂಲಕ ‘ಒಳ್ಳೆಯ ಪುಸ್ತಕ ಓದುವು ದರಿಂದ ನಮ್ಮ ಬಾಳು ಬೆಳಗುವುದು’ ಎಂದು ತೋರಿಸಿಕೊಟ್ಟರು.

Veena Bhat Column: ಬೆಂಗಳೂರಿನ ರಸ್ತೆಗಳಲ್ಲಿ ಬಣ್ಣ ಚೆಲ್ಲುವವರು

ಬೆಂಗಳೂರಿನ ರಸ್ತೆಗಳಲ್ಲಿ ಬಣ್ಣ ಚೆಲ್ಲುವವರು

ಇದು ಮೂಲತಃ ಪೆರು ದೇಶದ ಹೂವು. ಈ ಗುಲಾಬಿ ಬಣ್ಣದ ಹೂಗಳು ಕಾಲಕ್ಕನುಗುಣವಾಗಿ ಅರಳುತ್ತವೆ.ಈ ಜಾತಿಯ ಮರಗಳು ದಕ್ಷಿಣ ಮೆಕ್ಸಿಕೋ, ವೆನೆಜುವೆಲಾ ಮತ್ತು ಈಕ್ವೆಡಾರ್‌ನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಈ ಹೂವನ್ನು ಎಲ್-ಸಾಲ್ವೆಡಾರ್ ದೇಶ ತನ್ನ ರಾಷ್ಟ್ರೀಯ ಹೂ ವಾಗಿ ಘೋಷಿಸಿದೆ. ಈ ಮರವನ್ನು ಹೆಚ್ಚಾಗಿ ಅಲಂಕಾರಿಕ ಮರವಾಗಿ ಬೆಂಗಳೂರಿನ ಕೆಲವು ಬೀದಿಗಳುದ್ದಕ್ಕೂ ಪಿಂಕ್ ಬಣ್ಣದ ಹೊಳೆಯೇ ಹರಿದಿದೆ!

Surendra Pai Column: ಉತ್ತರ ಕನ್ನಡದ ಸುಗ್ಗಿ ಕುಣಿತ

ಉತ್ತರ ಕನ್ನಡದ ಸುಗ್ಗಿ ಕುಣಿತ

ಸುಗ್ಗಿ ಕುಣಿತವು ಕೇವಲ ಮನರಂಜನಾ ಉದ್ದೇಶಗಳಿಗಾಗಿ ಮಾತ್ರವಲ್ಲದೆ, ಸಾಂಸ್ಕೃತಿಕ ಅಭಿವ್ಯಕ್ತಿ ಮತ್ತು ಸಮೃದ್ಧವಾದ -ಸಲಿಗಾಗಿ ದೇವತೆಗೆ ಕೃತಜ್ಞತೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಒಂದು ಮಾರ್ಗ ವಾಗಿದೆ. ಹೋಳಿ ಹಬ್ಬ ಸಮೀಪಿಸಿದ ತಕ್ಷಣ, ಸುಗ್ಗಿಯ ಕಾಲ ಮತ್ತು ಆಚರಣೆಗಳು ಪ್ರಾರಂಭ ವಾಗುತ್ತವೆ.

Surendra Pai Column: ಶಿರಸಿಯ ಬೇಡರ ವೇಷ

ಶಿರಸಿಯ ಬೇಡರ ವೇಷ

ಪ್ರತಿ ಎರಡು ವರ್ಷಗಳಿಗೊಮ್ಮೆ, ಹೋಳಿ ಹಬ್ಬದ ಸಮಯದಲ್ಲಿ ಶಿರಸಿಯಲ್ಲಿ ಬೇಡರ ಕುಣಿತ ನಡೆಯು ವುದು ವಿಶೇಷ. ಪುರಾತನ ವಿದ್ಯಮಾನವೊಂದನ್ನು ಜನಪದ ಆಚರ ಣೆಯ ರೂಪದಲ್ಲಿ ಇಲ್ಲಿ ಕಾಣಬ ಹುದು. ಇದು ಹೋಳಿ ಹಬ್ಬದ ಸಮಯದಲ್ಲಿ ನಡೆಯುವುದು ಕುತೂಹಲಕಾರಿ.

Mudra Vishwa: ಜಲಮುದ್ರೆ

Mudra Vishwa: ಜಲಮುದ್ರೆ

ಮುದ್ರೆಯು ತೇವಾಂಶವನ್ನು ಹೆಚ್ಚಿಸುವ ಮೂಲಕ ಶರೀರದೊಳಗಿನ ತಾಪವನ್ನು ತಗ್ಗಿಸುತ್ತದೆ. ನೀವು ಮಾಡುವ ಧ್ಯಾನವು ಮನಸ್ಸಿಗೆ ಶಾಂತಿಯನ್ನು ತಂದು ಕೊಟ್ಟರೆ, ಜಲಮುದ್ರೆಯ ಅಭ್ಯಾ ಸವು ದೇಹವನ್ನು ತಂಪಾಗಿಸುವಲ್ಲಿ ಪ್ರಯೋಜನಕಾರಿ ಯಾಗಿದೆ. ಒಣಚರ್ಮ/ಚರ್ಮ ಸುಕ್ಕಾಗು ವಿಕೆ, ಸಂಧಿವಾತ, ಮಲಬದ್ಧತೆ, ನಿರ್ಜಲೀಕರಣ ಮುಂತಾದ ಸಮಸ್ಯೆಗಳು ಜಲಮುದ್ರೆಯ ಅಭ್ಯಾಸದಿಂದ ನಿವಾರಣೆಯಾಗುವುವು

Yagati Raghu Naadig Column: ಹೀಗೊಬ್ಬ ಜೀನಿಯಸ್..!!

ಹೀಗೊಬ್ಬ ಜೀನಿಯಸ್..!!

ಆಲೂಪ್ರಸಾದ್ ಸಾಕಷ್ಟು ಪ್ರಭಾವಿ ಪುಢಾರಿ ಆಗಿದ್ದರಿಂದ ಹಾಗೂ ಸ್ಪರ್ಧೆಯಿಂದ ಗೆದ್ದ ಹಣ ವನ್ನು ‘ಮೇವು ಸಂಗ್ರಹಣೆ’ ಕಾರ್ಯಕ್ಕೆ ಒಡ್ಡಿಕೊಂಡಿರುವ ಚಾರಿಟಿ ಸಂಸ್ಥೆಯೊಂದಕ್ಕೆ ನೀಡುವು ದಾಗಿ ‘ಆಶ್ವಾಸನೆ’ ನೀಡಿದ್ದರಿಂದ, ಈ ಸಮಾಜಸೇವೆಗೆ ಪೂರಕವಾಗಿರಲಿ ಅಂತ ಸ್ಪರ್ಧೆಯ ನಿಯಮಗಳನ್ನು ಸಡಿಲಿಸಲಾಯಿತು. ಆಲೂಪ್ರಸಾದ್‌ಗೆ ಕೇಳಲಾದ ಪ್ರಶ್ನೆಗಳು, ಆಯ್ಕೆಗೆ ಇದ್ದ ಉತ್ತರಗಳು ಹಾಗೂ ಆಲೂಪ್ರಸಾದ್ ಉತ್ತರಿಸಿದ ಪರಿ ಇವಿಷ್ಟನ್ನೂ ಮುಂದೆ ನೀಡಲಾಗಿದೆ, ಕಣ್ತುಂಬಿಕೊಳ್ಳಿ!!

Dr Pathanjali Acharya Column: ಇಂದ್ರಿಯಗಳು ಚುರುಕಾಗಲು ಪ್ರಾಣಮುದ್ರೆ ಅಭ್ಯಾಸ ಮಾಡಿ

ಇಂದ್ರಿಯಗಳು ಚುರುಕಾಗಲು ಪ್ರಾಣಮುದ್ರೆ ಅಭ್ಯಾಸ ಮಾಡಿ

ಪದ್ಮಾಸನ, ಸುಖಾಸನದಂಥ ನಿರಾಳ ಭಂಗಿಯಲ್ಲಿ ಕುಳಿತುಕೊಳ್ಳಿ. ಅಥವಾ ಕುರ್ಚಿಯ ಮೇಲೆ ಕುಳಿತೂ ಈ ಅಭ್ಯಾಸ ಮಾಡಬಹುದು. ಕಣ್ಣುಗಳನ್ನು ನಿಧಾನವಾಗಿ ಮುಚ್ಚಿ, ಇಡೀ ದೇಹವನ್ನು ವಿಶ್ರಾಂತ ಸ್ಥಿತಿಗೆ ತಂದುಕೊಳ್ಳಿ. ಚಿತ್ರದಲ್ಲಿ ತೋರಿಸಿರುವಂತೆ ಹೆಬ್ಬೆರಳಿನ ತುದಿಯನ್ನು ಉಂಗು ರದ ಬೆರಳು ಮತ್ತು ಕಿರುಬೆರಳಿನ ತುದಿಗಳಿಗೆ ಜೋಡಿಸಿಟ್ಟುಕೊಳ್ಳಿ

Dr Pathanjali Acharya Column: ಪಚನಕ್ರಿಯೆಗೆ ನೆರವಾಗುವ ಹಲಾಸನ

ಪಚನಕ್ರಿಯೆಗೆ ನೆರವಾಗುವ ಹಲಾಸನ

ಮೊದಲು ಕೈಕಾಲುಗಳನ್ನು ಚಾಚಿ ಸರಳರೇಖೆಯಂತೆ ಅಂಗಾತವಾಗಿ ಮಲಗಬೇಕು. ಹೀಗೆ ಮಲಗಿಕೊಂಡಿರು ವಂತೆ ಬೆನ್ನನ್ನು ಮತ್ತು ಕಾಲುಗಳನ್ನು ಮೇಲಕ್ಕೆತ್ತಿ ಚಿತ್ರದಲ್ಲಿ ತೋರಿಸಿರು ವಂತೆ ಹಿಂದಕ್ಕೆ ಬಾಗಿಸಿ. ನಂತರ ಕಾಲಿನ ಹೆಬ್ಬೆರಳುಗಳನ್ನು ನೆಲಕ್ಕೆ ಮುಟ್ಟಿಸಿ. ಎರಡೂ ಕೈಗಳ ಮುಷ್ಟಿಗಳನ್ನು ಸೇರಿಸಿ ಹಿಡಿಯಿರಿ. ಈ ಭಂಗಿಯಲ್ಲಿರುವಾಗ ಕಾಲು ಮತ್ತು ಕಾಲುಗಂಟು ಬಾಗದೆ ನೆಟ್ಟಗಿರಬೇಕು. 30 ಸೆಕೆಂಡು ಅಥವಾ ಒಂದು ನಿಮಿಷ ದ ನಂತರ ಪುನಃ ಮೊದಲಿನ ಸ್ಥಿತಿಗೆ ಬನ್ನಿ. ಆ ಬಳಿಕ ಕಾಲು ಗಳನ್ನು ಪುನಃ ಮೇಲಕ್ಕೆತ್ತಿ ಆಸನವನ್ನು ಆಚರಿಸಿ

Raju Adakalli Column: ಸ್ನೇಹಸಾಗರ ವಿದ್ಯಾಸಂಸ್ಥೆ

ಸ್ನೇಹಸಾಗರ ವಿದ್ಯಾಸಂಸ್ಥೆ

ದೂರ ದೂರದ ಊರುಗಳಿಂದ ಮಕ್ಕಳು ಇಲ್ಲಿಗೆ ಬಂದು ಅಧ್ಯಯನ ಮಾಡುವುದಕ್ಕೆ ಅನುಕೂಲ ಆಗುವಂತೆ ಇಲ್ಲಿಯೇ ಊಟ ವಸತಿಗೂ ಸೂಕ್ತ ಸೌಲಭ್ಯ ಕಲ್ಪಿಸಲಾಗಿದೆ. ಇಲ್ಲಿ ತಂಗುವ ವಿದ್ಯಾ ರ್ಥಿಗಳ ಆರೋಗ್ಯ ತಪಾಸಣೆಗೆ ವೈದ್ಯರಿಂದ ಹಿಡಿದು, ಮಕ್ಕಳಿಗೆ ಅಗತ್ಯ ವಾದರೆ ಟ್ಯೂಷನ್ ಹೇಳಿಕೊಡುವ ಅನುಕೂಲದ ತನಕ ಸಕಲ ವ್ಯವಸ್ಥೆಗಳನ್ನು ಒದಗಿಸ ಲಾಗಿದೆ

Dr Pathanjali Acharya Column: ಬೆನ್ನೆಲುಬು ಬಲವಾಗಲು ಧನುರಾಸನ ಹಾಕಿ

ಬೆನ್ನೆಲುಬು ಬಲವಾಗಲು ಧನುರಾಸನ ಹಾಕಿ

ಆಸನವನ್ನು ನಿಯತವಾಗಿ ಅಭ್ಯಾಸ ಮಾಡುವುದರಿಂದಾಗಿ ಬೆನ್ನುಮೂಳೆಯು ಮತ್ತಷ್ಟು ಶಕ್ತಿಶಾಲಿಯಾಗುತ್ತದೆ, ಅದರ ಸ್ಥಿತಿಸ್ಥಾಪಕತ್ವ ಹೆಚ್ಚುತ್ತದೆ. ಮಲಬದ್ಧತೆಯ ಸಮಸ್ಯೆ ದೂರ ವಾಗುತ್ತದೆ. ಉದರ ಭಾಗದ ಕೊಬ್ಬು ಕರಗುತ್ತದೆ. ಮಂಡಿ ಗಳ ಬಿಗಿತ, ಸೊಂಟನೋವು, ಸಂಧಿ ವಾತ ನಿವಾರಣೆಯಾಗುತ್ತವೆ. ಮಹಿಳೆಯರ ಮಾಸಿಕ ಋತುಧರ್ಮ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುತ್ತವೆ

Veena Bhat Column: ಅತಿ ಪುರಾತನ ಸೈನ್‌ ಬೋರ್ಡ್‌ ಇಲ್ಲಿದೆ !

ಅತಿ ಪುರಾತನ ಸೈನ್‌ ಬೋರ್ಡ್‌ ಇಲ್ಲಿದೆ !

ಸಿಂಧೂ ಸಂಸ್ಕೃತಿಯ ಅವಶೇಷಗಳಿರುವ ಧೋಲಾವಿರಾ, ನಮ್ಮ ದೇಶದ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದು. ಹರಪ್ಪಾ ಮತ್ತು ಮೊಹೆಂಜೊದಾರೋ ನಗರಗಳು, ನಮ್ಮ ದೇಶದ ಗಡಿಯಿಂದಾಚೆ ಇರುವುದರಿಂದ, ಧೋಲಾವಿರಾದ ಮಹತ್ವ ಇನ್ನಷ್ಟು ಹೆಚ್ಚಿದೆ. ಇದೊಂದು ಬೇರೆಯೇ ಪ್ರಪಂಚ. ಇಲ್ಲಿ ನಡೆದಾಡುತ್ತಿದ್ದಂತೆ ಸಾವಿರಾರು ವರುಷಗಳ ಹಿಂದೆ ಹೇಗೆ ಜೀವಿಸು ತ್ತಿದ್ದರು ಅನ್ನೋದನ್ನು ಕಲ್ಪಿಸಿಕೊಳ್ಳೋದಕ್ಕೆ ಶುರು ಮಾಡುತ್ತೀರಿ.

Dr Pathanjali Acharya Column: ಬೆನ್ನುಮೂಳೆಯ ಸ್ವಾಸ್ಥ್ಯಕ್ಕೆ ಭುಜಂಗಾಸನ

ಬೆನ್ನುಮೂಳೆಯ ಸ್ವಾಸ್ಥ್ಯಕ್ಕೆ ಭುಜಂಗಾಸನ

ಕಾಲುಗಳನ್ನು ನೀಳವಾಗಿ ಚಾಚಿ ನೆಲದ ಮೇಲೆ ಬೋರಲಾಗಿ ಮಲಗಿ ಕೊಳ್ಳಿ. ಅಂಗೈಗಳನ್ನು ನೆಲದ ಮೇಲೆ ಊರಿಕೊಂಡಿದ್ದು ಉಸಿರನ್ನು ಎಳೆದುಕೊಳ್ಳಿ. ಕೈಗಳ ಆಧಾರದ ಮೇಲೆ ತಲೆ ಯನ್ನು ಸಾವಕಾಶವಾಗಿ ಮೇಲಕ್ಕೆತ್ತಿ. ತರುವಾ ಯ ಪುನಃ ದೀರ್ಘ ವಾಗಿ ಉಸಿರನ್ನು ಎಳೆದು ಕೊಂಡು ಹೊಕ್ಕಳಿನ ಭಾಗದವರೆಗೆ ದೇಹ ವನ್ನು ಮೇಲಕ್ಕೆತ್ತಿ ಆಕಾಶವನ್ನು ನೋಡುವ ಭಂಗಿಗೆ ತಲುಪಿ. ಈಗ ಎರಡು ಬಾರಿ ಶ್ವಾಸೋ ಚ್ಛ್ವಾಸ ಮಾಡ ಬೇಕು

Yagati Raghu Nadig Column: ಸಾಫ್ಟ್‌‌ʼವೇರ್‌ ಬ್ರೇನ್...!!

ಸಾಫ್ಟ್‌‌ʼವೇರ್‌ ಬ್ರೇನ್...!!

ವಾತಾವರಣದಲ್ಲಿ ತುಂಬಿಕೊಂಡಿದ್ದ ಗಾಢ ವಾದ ಮೋಡಗಳು ಹಾಗೂ ಮಂಜಿನ ಕಾರಣ ದಿಂದ ಪೈಲಟ್‌ಗೆ ಹೆಲಿಕಾಪ್ಟರ್ ಈಗ ಯಾವ ಪ್ರದೇಶದಲ್ಲಿ ಹಾರಾಡುತ್ತಿದೆ ಎಂದು ತೀರ್ಮಾ ನಕ್ಕೆ ಬರುವುದು ಕಷ್ಟವಾಯಿತು. ಇಷ್ಟಾಗಿಯೂ ಗಗನಚುಂಬಿ ಕಟ್ಟಡವೊಂದು ಅವನ ಕಣ್ಣಿಗೆ ಮಸುಕು ಮಸುಕಾಗಿ ಕಾಣಿಸಿತು. ತಕ್ಷಣ ಆ ಕಡೆಗೆ ಹೆಲಿಕಾಪ್ಟರ್ ತಿರುಗಿಸಿದ ಪೈಲಟ್, “ನಾನೀಗ ಎಲ್ಲಿದ್ದೇನೆ?" ಎಂದು ದೊಡ್ಡ ದೊಡ್ಡ ಅಕ್ಷರಗಳಲ್ಲಿ ಬರೆದಿದ್ದ ಕೈಬರಹದ ಸೈನ್‌ಬೋರ್ಡ್ ಅನ್ನು ಬೀಸುತ್ತಾ ಆ ಕಟ್ಟಡವನ್ನು ಸುತ್ತುಹಾಕತೊಡಗಿದ

Mahashivratri 2025: ಈ ಹೂಗಳಿಂದ ಪೂಜೆ ಮಾಡಿದ್ರೆ ಪರಮೇಶ್ವರ ಸಂತೃಪ್ತನಾಗುತ್ತಾನೆ...!

ಪರಶಿವನ ಪೂಜೆಯಲ್ಲಿ ಯಾವ ಹೂ ಬಳಸುವುದು ಒಳ್ಳೆಯದು?

ಶಿವನನ್ನು ಒಲಿಸಲು ಶಿವ ಪಂಚಾಕ್ಷರಿಯ ಐದಕ್ಷರ ಸಾಕು. ಅಭಿಷೇಕ ಪ್ರಿಯನಾದ ಶಿವನಿಗೆ ಒಂದು ಬಿಲ್ವಪತ್ರೆಯನ್ನು ಅರ್ಪಿಸಿದರೆ ಸಾಕು ಸಕಲ ಪಾಪಕರ್ಮಗಳಿಂದಲೂ ಮುಕ್ತಿ ಸಿಗುತ್ತೆ. ಹಾಗಾಗಿ ಶಿವಶಂಕರನ ಕೃಪಾ ಕಟಾಕ್ಷಕ್ಕೆ ಪಾತ್ರರಾಗಲು ಈ ಶಿವರಾತ್ರಿ ಹಬ್ಬದಂದು ಶಿವನಿಗೆ ಯಾವ ಹೂವು ಅರ್ಪಿಸಿದ್ದರೆ ಪರಮೇಶ್ವರ ಮೆಚ್ಚಿಕೊಳ್ಳುತ್ತಾನೆ ಎಂಬುದನ್ನು ನೋಡೋಣ.