ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aarama

Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

ದಂಶಕಗಳು (ರೋಡೆಂಟ್ಸ್) ಎಂಬ ಪ್ರಾಣಿಗಳಿವೆ. ಇಲಿ, ಅಳಿಲು, ಮೊಲ, ಮುಳ್ಳು ಹಂದಿ, ಗಿನಿಪಿಗ್, ಬೀವರ್, ಹ್ಯಾಮ್‌ಸ್ಟರ್ ಮುಂತಾದ ಪ್ರಾಣಿಗಳಿವೆ. ಇದೇ ವರ್ಗಕ್ಕೆ ಸೇರಿದ ಹಾಗೂ ಅಮೆರಿಕ ಮತ್ತು ಕೆನಡಗಳಲ್ಲಿ ವಿಶೇಷವಾಗಿ ವಾಸಿಸುವ ಗ್ರೌಂಡ್‌ಹಾಗ್ (ಮಾರ್ಮೋಟ ಮೊನಾಕ್ಸ್) ಎಂಬ ಜೀವಿಯಿದೆ. ಹಾಗ್ ಎಂದರೆ ಹಂದಿಯಲ್ಲ. ಸ್ವಲ್ಪ ದೊಡ್ಡ ಅಳಿಲು. ಹಾಗಾಗಿ ಇದನ್ನು ನೆಲಅಳಿಲು ಎಂದು ಕರೆಯಬಹುದು.

Rudrappa Lamani Interview: ಹಾವೇರಿಗೆ ನೀರು ತಂದ ಭಗೀರಥ ರುದ್ರಪ್ಪ ಲಮಾಣಿ !

ಹಾವೇರಿಗೆ ನೀರು ತಂದ ಭಗೀರಥ ರುದ್ರಪ್ಪ ಲಮಾಣಿ !

ಬಡತನದಲ್ಲಿ ಬೆಳೆದು, ದನ- ಆಡು ಮೇಯಿಸಿ, ಒಪ್ಪತ್ತು ಶಾಲೆ ಸೇರಿ, ಕಾರ್ಮಿಕನಾಗಿ ದುಡಿದು, ಬಳಿಕ ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದು, ಉತ್ತಮ ಸಾಧನೆಯನ್ನು ಮಾಡಿ ತೋರಿಸಿದ ಲೀಡರ್ ರುದ್ರಪ್ಪ ಮಾನಪ್ಪ ಲಮಾಣಿಯವರು. ಹಾವೇರಿಯ ಶಾಸಕರಾದ ಲಮಾಣಿ ಈಗ ವಿಧಾನ ಸಭೆಯ ಉಪಸಭಾಪತಿ ಕೂಡ ಹೌದು

Dr N Someshwara Column: ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ರೈಲು ಮಾರ್ಗವನ್ನು ನಿರ್ಮಿಸಲು ಅಡ್ಡ ಬರುತ್ತಿದ್ದ ಎಲ್ಲ ಬಂಡೆಗಳನ್ನು ಸಿಡಿಸಬೇಕಿತ್ತು. ಈ ಕೆಲಸವನ್ನು ಮಾಡುವುದರಲ್ಲಿ ಗೇಜ್ ಪರಿಣತನಾಗಿದ್ದ. ಮೊದಲು ಭೈರಿಗೆಯ ನೆರವಿನಿಂದ ಬಂಡೆಯಲ್ಲಿ ಒಂದು ಕುಣಿಯನ್ನು ಕೊರೆಯಬೇಕಿತ್ತು. ಆ ಕುಣಿಯೊಳಗೆ ಸಿಡಿಮದ್ದು (ಗನ್ ಪೌಡರ್) ತುಂಬಬೇಕಿತ್ತು. ಒಂದು ಫ್ಯೂಸ್ ಇಡಬೇಕಿತ್ತು.

Dr N Someshwara Column: ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಒಂದು ವೇಳೆ ವಿದ್ಯುಚ್ಛಕ್ತಿ ಉತ್ಪಾದನೆ ಏನಾದರೂ ನಿಂತುಹೋದರೆ, ತಕ್ಷಣ ಅದರ ಕೆಲಸವನ್ನು ನಿಭಾಯಿಸುವಂಥ ‘ಸ್ಟ್ಯಾಂಡ್ ಬೈ’ ವ್ಯವಸ್ಥೆಯೂ ಇರಬೇಕು. ವಿದ್ಯುತ್ತಿನ ಜತೆಯಲ್ಲಿ, ತನ್ನ ಅಗತ್ಯಕ್ಕೆ ಬೇಕಾದ ಇತರ ಎಲ್ಲ ವಸ್ತುಗಳನ್ನು ತಾನೇ ಪೂರೈಸಿ ಕೊಳ್ಳಬೇಕು. ಈ ಪಂಪು, ಅಗತ್ಯಕ್ಕೆ ತಕ್ಕ ಹಾಗೆ, ತನ್ನ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚು ಮಾಡಬೇಕಾಗುತ್ತದೆ; ಕೆಲವು ಸಲ ಸಾವಕಾಶವಾಗಿ ಪಂಪ್ ಮಾಡಬೇಕಾಗುತ್ತದೆ.

ಸಂಗಮ ಕನ್ನಡ ಸಂಘ, ಸೈಂಟ್‌ ಲೂಯಿಸ್‌, ಮಿಸ್ಸೋರಿ

ಸಂಗಮ ಕನ್ನಡ ಸಂಘ, ಸೈಂಟ್‌ ಲೂಯಿಸ್‌, ಮಿಸ್ಸೋರಿ

ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಕವನದ ಸಾಲಿನಂತೆ ತಾಯಿನಾಡಿನಿಂದ ಹೊರಗೆ ಇದ್ದು, ತಮ್ಮ ಕಸ್ತೂರಿ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ, ಕಲೆಗಳು, ಆಟ ಪಾಠ, ಆಚರಣೆ, ವಿಚಾರಣೆ ಹಾಗೂಮುಂದಿನ ಪೀಳಿಗೆಗೆ ಕಲಿಸುವ ಉದ್ದೇಶ ದಿಂದ ಸೈಂಟ್ ಲೂಯಿಸ್ ಕನ್ನಡಾಭಿಮಾನಿ ಮಿತ್ರರ ಸಮಾಲೋಚನೆಯಿಂದ ಸಂಗಮದ ಉಗಮ.

Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

ಪ್ರತಿಯೊಂದು ಶವಪೆಟ್ಟಿಗೆಯ ಒಳಗೆ ಒಂದು ಗಂಟೆಯನ್ನು ಇಡುತ್ತಿದ್ದರು. ಶವಪೆಟ್ಟಿಗೆಯಲ್ಲಿ ಇರುವವನು ನಿಜಕ್ಕೂ ಸತ್ತಿಲ್ಲದಿದ್ದರೆ, ಅವನು ಗಂಟೆಯನ್ನು ನಿರಂತರವಾಗಿ ಬಾರಿಸುತ್ತಿದ್ದನು. ಆಗ ಸ್ಮಶಾನದಲ್ಲಿ ನಿತ್ಯ ಕಾವಲಿರುವ ಯಾರಾದರೂ ಬಂದು ಅವನನ್ನು ಕಾಪಾಡುತ್ತಿದ್ದರು. ಆಗ ಒಂದು ಪ್ರಶ್ನೆಯು ವೈದ್ಯ ವಿಜ್ಞಾನಿಗಳನ್ನು ಕಾಡಿತು.

D‌r N Someshwara Column: ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ಎಲ್ಲ ರೀತಿಯ ಪೋಷಕಾಂಶಗಳನ್ನು ಹಾಗೂ ಅಗತ್ಯ ಪರಿಸರವನ್ನು ಒದಗಿಸಿದರೂ, ಜೀವಕೋಶಗಳು ಒಂದು ನಿಗದಿತ ಪ್ರಮಾಣದವರೆಗೆ ಪುನರುತ್ಪಾದನೆಯಾಗಿ ಆನಂತರ ಸ್ಥಗಿತವಾಗುತ್ತಿದ್ದವು. ಅವು ಏಕೆ ಸ್ಥಗಿತವಾದವು ಎಂಬುದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ವಿವರಣೆಯು ಅವರಿಗೆ ತಿಳಿದಿರಲಿಲ್ಲ. ಗೇ ಅವರ ಸಹಾಯಕಿಯು ಹೆನ್ರೀಟ್ಟಾಳ ಜೀವಕೋಶಗಳನ್ನು ಕೃಷಿಕೆಯ ಮಾಧ್ಯಮದಲ್ಲಿ ಬೆರೆಸಿದಳು. ಬೆಳೆಯಲು ಬಿಟ್ಟಳು.

ತುಂಟತನದ ಹಿಂದಿನ ದೊಡ್ಡ ಮನಸ್ಸು

ತುಂಟತನದ ಹಿಂದಿನ ದೊಡ್ಡ ಮನಸ್ಸು

ಹನುಮಂತನ ಗಾಯನ ಎಷ್ಟು ಶಕ್ತಿಯುತವಾಗಿತ್ತೆಂದರೆ, ಸುತ್ತಲಿನ ಪ್ರಕೃತಿಯೇ ಆನಂದದಿಂದ ಕರಗಿತು. ಅಲ್ಲಿದ್ದ ಪ್ರತಿಯೊಂದು ಕಲ್ಲೂ ಕರಗಿ ನೀರಾಗತೊಡಗಿತು. ಮರಗಳೆಲ್ಲವೂ ಪುಷ್ಪವೃಷ್ಟಿ ಮಾಡಿದವು. ಪ್ರಾಣಿಪಕ್ಷಿಗಳು ಸುತ್ತಲೂ ಕುಳಿತು ಕಣ್ಣುಮುಚ್ಚಿ ಆನಂದದಿಂದ ಆಲಿಸತೊಡಗಿದವು. ಹನುಮಂತನು ಇದಾವುದೂ ತಿಳಿಯದೇ ತನ್ನ ಪಾಡಿಗೆ ತಾನು ಹಾಡುತ್ತಿದ್ದನು.

ಎರಡು ದಶಕ ಪೂರೈಸಿದ ಮಾಹಿತಿ ಹಕ್ಕು ಕಾಯಿದೆ

ಎರಡು ದಶಕ ಪೂರೈಸಿದ ಮಾಹಿತಿ ಹಕ್ಕು ಕಾಯಿದೆ

ಜನಸಾಮಾನ್ಯರನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಕಾಯಿದೆ ಎಂದು ಗುರುತಿಸ ಲಾಗಿರುವ ‘ಆರ್‌ಟಿಐ’ ಜಾರಿಯಾಗಿ ೨೦ ವರ್ಷಗಳಾದರೂ ಮಾಹಿತಿ ನಿರಾಕರಣೆ, ಉನ್ನತ ಸ್ತರಗಳಲ್ಲಿ ಹೆಚ್ಚುತ್ತಿರುವ ಬಾಕಿ ಪ್ರಕರಣಗಳು, ಮಾಹಿತಿ ಅಯೋಗಗಳಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳ ಸಂಖ್ಯೆ ಸೇರಿದಂತೆ ಹಲವು ವಿಷಯಗಳು ಮಾಹಿತಿ ಹಕ್ಕು ಕಾಯಿದೆಯ ಮೂಲ ಉದ್ದೇಶ ಈಡೇರುವಲ್ಲಿ ಪ್ರಮುಖ ಅಡೆತಡೆಗಳಾಗಿ ಹೊರಹೊಮ್ಮಿವೆ.

ನವ ಭರವಸೆಯ ಬೆಳಕು ಮೂಡಲಿ

ನವ ಭರವಸೆಯ ಬೆಳಕು ಮೂಡಲಿ

ಪುರಾಣ ಕಾಲದಿಂದಲೂ ಆಚರಿಸಿಕೊಂಡು ಬರುತ್ತಿರುವ ಸಾಂಪ್ರದಾಯಿಕ ಹಬ್ಬ ದೀಪಾವಳಿ. ರಾಮಾಯಣ, ಮಹಾ ಭಾರತದ ಕಾಲದಲ್ಲೂ ದೀಪಾವಳಿಯ ಆಚರಣೆಯಿತ್ತು. ಭಾರತದಾದ್ಯಂತ ದೀಪಾವಳಿಯು ಆಚರಿಸಲ್ಪಡುತ್ತದೆ. ಆಚರಣೆಯಲ್ಲಿ ವೈವಿಧ್ಯವಿದ್ದರೂ ಅದರ ಮೂಲ ಉದ್ದೇಶ ಮಾತ್ರ ಒಂದೇ. ಅದು- ಅಜ್ಞಾನದಿಂದ ಜ್ಞಾನದತ್ತ ಸಾಗುವುದು. ದೀಪವನ್ನು ಬೆಳಗುವ ಮೂಲಕ ಅಜ್ಞಾನದ ಅಂಧಕಾರವನ್ನು ನಿವಾರಿಸುವುದು.

Dr N Someshwara Column: ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಇದು ಉತ್ತಮ ಸಂಶೋಧಿತ ಬರಹ ಎಂದು ವಿದ್ವಾಂಸ ವಲಯದಲ್ಲಿ ಪ್ರಸಿದ್ಧವಾಗಿದೆ. ಹಾಗಾಗಿ ಈ ಪುಸ್ತಕದ ಸಾರಾಂಶವನ್ನು ಸ್ಥೂಲವಾಗಿ ನೋಡಬಹುದು. 1842. ಹೆನ್ರಿ ಗ್ರೇ, 15 ವರ್ಷದ ಹುಡುಗ ನಾಗಿದ್ದಾಗ ಸೈಂಟ್ ಜಾರ್ಜ್ ಆಸ್ಪತ್ರೆಯನ್ನು ಸೇರಿದ. ೧೦ ವರ್ಷಗಳ ಕಾಲ ಅಧ್ಯಯನ ಮಾಡಿದ. 25 ವರ್ಷವಾಗುವ ವೇಳೆಗೆ ಪ್ರಖ್ಯಾತ ವೈದ್ಯನಾದ. ಆ ವೇಳೆಗೆ ಸರ್ವ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಂಶೋಧನೆಗಳನ್ನು ಮಾಡಿ ಪ್ರಬಂಧಗಳನ್ನು ಪ್ರಕಟಿಸಿದ್ದ.

Dr N Someshwara Column: ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

ಅನ್ನಾಹಾರ ಮೈಥುನ ಮನರಂಜನೆಗಳನ್ನು ಮರೆತು ಬರೀ ನಿದ್ದೆ. ನಿದ್ರೆಯಿಂದ ಕೋಮಾಕ್ಕೆ ಜಾರುತ್ತಿದ್ದರು. ಆ ಕೋಮಾದಲ್ಲಿ ಅವರು ಯಾವಾಗ ಜೀವವನ್ನು ಬಿಡುತ್ತಿದ್ದರೋ... ಅದು ದೇವರಿಗೆ ಗೊತ್ತು. ನಾಮುಸೋಕ್ ಎಂಬ ಮಹಿಳೆಯು ಹೇಳಿದಳು ‘ನಮ್ಮಜ್ಜಿ ಮೂರು ವರ್ಷಗಳ ಕಾಲ ಮಲಗಿದ್ದಳು.

Prof R G Hegde Column: ರಸ್ತೆಗಳು ಇರುವುದು ಸಂಚಾರಕ್ಕಾಗಿ, ಮೆರವಣಿಗೆಗಾಗಿ ಅಲ್ಲ

ರಸ್ತೆಗಳು ಇರುವುದು ಸಂಚಾರಕ್ಕಾಗಿ, ಮೆರವಣಿಗೆಗಾಗಿ ಅಲ್ಲ

ಸುಮಾರಾಗಿ ಮೆರವಣಿಗೆಗಳು ಹೊರಡುವ ಸಮಯ ಸಾಯಂಕಾಲ. ಏಕೆಂದರೆ ಜನ ಮಾರ್ಕೆಟ್ಟಿಗೆ ಬರುವ ಸಮಯ ಅದೇ. ಅಷ್ಟೊಂದು ಖರ್ಚು ಮಾಡಿದ ಮೆರವಣಿಗೆಗಳನ್ನು ನೋಡುವವರು ಬೇಕಲ್ಲ? ಹಾಗೆಂದು ರಸ್ತೆಗಳಲ್ಲಿ ತಯಾರಿ, ಡೆಕೋರೇಶನ್ ಬೆಳಗ್ಗೆಯಿಂದಲೇ ಆರಂಭಗೊಳ್ಳುತ್ತವೆ. ರಸ್ತೆಗಳು ಫುಲ್. ಮುಷ್ಕರಗಳು ನಡೆಯುವುದು ಹಗಲ ಹೊತ್ತು. ಆಮೇಲೆ ಯಾರಾದರೂ ತೀರಿ ಕೊಂಡಿದ್ದರೆ ಆ ಮೆರವಣಿಗೆ ಬರುವುದು ಹಗಲೇ.

Umesh Vamana Prabhu Column: ಮರೆಯಾಗುತ್ತಿರುವ ಸಂಸ್ಕೃತಿ !

ಮರೆಯಾಗುತ್ತಿರುವ ಸಂಸ್ಕೃತಿ !

ಡಿಜಿಟಲ್ ಯುಗವು ಮಾನವ ಜೀವನದ ಪ್ರತಿಯೊಂದು ಅಂಶವನ್ನೂ ಆಳವಾಗಿ ಪರಿವರ್ತಿಸಿದೆ. ತಂತ್ರ ಜ್ಞಾನದ ಈ ಕ್ರಾಂತಿಯು ಸಂವಹನ, ಶಿಕ್ಷಣ, ಕೆಲಸದ ವಿಧಾನಗಳು ಮತ್ತು ದೈನಂದಿನ ಚಟುವಟಿಕೆ ಗಳನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಈ ಯುಗದಲ್ಲಿ ಕೈ ಬರಹದ ಪ್ರಾಮುಖ್ಯತೆಯೂ ಗಮನಾ ರ್ಹವಾಗಿ ಕಡಿಮೆಯಾಗಿದೆ. ಕೈ ಬರಹ ಒಂದು ಕಾಲದಲ್ಲಿ ಸಂವಹನದ ಪ್ರಮುಖ ಸಾಧನವಾಗಿತ್ತು; ಇಂದು ಮರೆಯಾಗುವ ಹಂತದಲ್ಲಿದೆ.

Siddesh Haranahalli Column: ಸತ್ಯದ ಶಕ್ತಿ ಅದರ ಪ್ರತಿಪಾದನೆಯಲ್ಲಿದೆ

ಸತ್ಯದ ಶಕ್ತಿ ಅದರ ಪ್ರತಿಪಾದನೆಯಲ್ಲಿದೆ

ಸತ್ಯವು ಎಂದಿಗೂ ಶಾಶ್ವತ ಎಂದು ನಾವು ಬಾಲ್ಯದಿಂದಲೇ ಕಲಿತಿದ್ದೇವೆ. ‘ಸತ್ಯಮೇವ ಜಯತೇ’ ಎಂಬುದು ನಮ್ಮ ರಾಷ್ಟ್ರದ ಮಂತ್ರ. ಆದರೆ ನಿಜ ಜೀವನದಲ್ಲಿ ಈ ಮಾತು ಎಷ್ಟು ಸತ್ಯವಾಗಿ ಅನ್ವಯ ವಾಗುತ್ತಿದೆ? ಇತಿಹಾಸ, ಸಮಾಜ, ರಾಜಕೀಯ ಅಥವಾ ವ್ಯವಹಾರ ಎಲ್ಲ ಕ್ಷೇತ್ರಗಳಲ್ಲಿಯೂ ನಾವು ಕಾಣುವ ವಾಸ್ತವ್ಯ ಏನೆಂದರೆ, ‘ಸತ್ಯವು ತನ್ನಂತೆಯೇ ಹೊರಬಂದು ಜಯ ಸಾಧಿಸುವುದಿಲ್ಲ." ಸತ್ಯವು ಕೆಲವೊಮ್ಮೆ ಮೌನವಾಗಿಯೇ ಉಳಿದುಕೊಳ್ಳುತ್ತದೆ, ಕೆಲವೊಮ್ಮೆ ಸುಳ್ಳಿನ ಗದ್ದಲದಲ್ಲಿ ಮುಚ್ಚಿಹೋಗು ತ್ತದೆ.

ಜಪಾನಿನಲ್ಲಿ ಗಣೇಶ

ಜಪಾನಿನಲ್ಲಿ ಗಣೇಶ

ಜಪಾನ್ ದೇಶದಲ್ಲಿ ಗಣೇಶನನ್ನು ನಂದಿಕೇಶ್ವರ ಎಂದೂ ಕರೆಯಲಾಗುತ್ತದೆ! ಜಪಾನಿನ ಬೌದ್ಧ ಧರ್ಮದ ಒಂದು ಶಾಖೆಯ ದೇವರಾಗಿರುವ ಗಣೇಶನನ್ನು ಅಲ್ಲಿನವರು ಕಂಜಿಟೆನ್ ಅಥವಾ ಕಾಂಕಿ ಟೆನ್ ಎಂದು ಕರೆಯುವರು. ಅಲ್ಲಿ ಗಣೇಶನಿಗೆ ಬಳಕೆಯಲ್ಲಿರುವ ಇತರ ಹೆಸರುಗಳೆಂದರೆ ಶೋಟೆನ್, ಶೋಡೆನ್, ಗಣಬಚಿ, ಗಣಹತಿ, ಬಿನಾಯಕ ಇತ್ಯಾದಿ.

ಮತ್ತೆ ಬಂದಿದೆ ಚೌತಿ ಸಂಭ್ರಮ

ಮತ್ತೆ ಬಂದಿದೆ ಚೌತಿ ಸಂಭ್ರಮ

ಗಣಪತಿ ಹಬ್ಬ ವಿಜೃಂಭಣೆಯಿಂದ ಆಚರಿಸುವ ಸಡಗರದ ಹಬ್ಬ. ವಿಘ್ನ ವಿನಾಶಕ, ಸಂಕಷ್ಟಹರ ನೆಂದು ಭಕ್ತಿ-ಭಾವದಿಂದ ಪೂಜಿಸುವ ಹಬ್ಬವಿದು. ಒಂದು ಕಾಲದಲ್ಲಿ ಅವರವರ ಮನೆಯಲ್ಲಿ ಆಚರಿಸುತ್ತಿದ್ದ ಹಬ್ಬ ಇಂದು ಸಾರ್ವಜನಿಕವಾಗಿ ಸಡಗರದಿಂದ ಆಚರಿಸುವ ಸಂಭ್ರಮದ ಹಬ್ಬ ವಾಗಿದೆ. ಇಂತಹ ಹಬ್ಬ ಹತ್ತಿರವಾಗುತ್ತಿದ್ದಂತೇ ಅದೇನೋ ಮೈಪುಳಕ.

Surendra Pai Column: ಕೃತಕ ಬುದ್ಧಿಮತ್ತೆ ಯುಗದ ರೋಬೋಟ್‌ ಮಮ್ಮಿಗಳು

ಕೃತಕ ಬುದ್ಧಿಮತ್ತೆ ಯುಗದ ರೋಬೋಟ್‌ ಮಮ್ಮಿಗಳು

ರೋಬೋಟಿಕ್ ತಂತ್ರಜ್ಞಾನವು ಇದೀಗ ನಮ್ಮೆಲ್ಲರ ನಿರೀಕ್ಷೆಗಳನ್ನು ಮೀರಿದ ಅನುಭವವನ್ನು ನೀಡಲು ಸಜ್ಜಾಗಿವೆ. ತಂತ್ರಜ್ಞಾನ ಲೋಕದ ಇಂಥ ಆವಿಷ್ಕಾರವನ್ನು ಜಗತ್ತು ಕುತೂಹಲ ಮತ್ತು ಚಿಂತೆಯ ಕಣ್ಣಿಂದ ನಿರೀಕ್ಷಿಸುವಂತಾಗಿದೆ. ಇದನ್ನೊಮ್ಮೆ ಊಹಿಸಿಕೊಂಡರೆ ಹಾಲಿವುಡ್ ಸಿನಿಮಾಗಳಲ್ಲಿ ಕಂಡುಬರುವ ಅತಿರಂಜಿತ/ಭ್ರಮಾತ್ಮಕ ಪಾತ್ರದಂತೆ ಕಾಣಬಹುದು

Ajakkala Girish Bhat Column: ಭೈರಪ್ಪ ಅವರ ಸಾಹಿತ್ಯವೂ, ವ್ಯಕ್ತಿತ್ವವೂ

ಭೈರಪ್ಪ ಅವರ ಸಾಹಿತ್ಯವೂ, ವ್ಯಕ್ತಿತ್ವವೂ

ದೇಶ ಸುತ್ತು, ಕೋಶ ಓದು ಎನ್ನುವ ಮಾತನ್ನು ಭೈರಪ್ಪನವರ ಹಾಗೆ ಅಕ್ಷರಶ: ಪಾಲಿಸಿದ ಬೇರೆ ಕಾದಂಬರಿಕಾರರು ಕನ್ನಡದಲ್ಲಷ್ಟೇ ಅಲ್ಲ ಬಹುಶಃ ಭಾರತೀಯ ಭಾಷೆಗಳಲ್ಲಿ ಇರಲಾರರು. ಭೈರಪ್ಪ ನವರು ದೇಶ ಸುತ್ತಿ ಕೋಶ ಓದಿದ್ದಷ್ಟೇ ಅಲ್ಲ; ಬರವಣಿಗೆಯನ್ನೂ ಮಾಡಿದರು. ಹೀಗೆ ಕನ್ನಡದಲ್ಲಿ ಬಹುದೊಡ್ಡ ಸಂಖ್ಯೆಯ ಓದುಗರಿಂದ ಪ್ರೀತಿ- ಅಭಿಮಾನವನ್ನು ಪಡೆದ ಭೈರಪ್ಪನವರು ಇತರ ಹಲವು ಭಾರತೀಯ ಭಾಷೆಗಳ ಓದುಗರಿಂದಲೂ ಮೆಚ್ಚುಗೆಯನ್ನು ಪಡೆದು ಪ್ರಸಿದ್ಧರಾಗಿದ್ದಾರೆ.

Surendra Pai Column: ಸಂಪರ್ಕ ಸೇತುವೆ!

ಸಂಪರ್ಕ ಸೇತುವೆ!

ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಿರುವುದರಿಂದ ಇಂತಹ ಅಡಿಕೆ ಮರದ ಕಾಂಡಗಳ ಸೇತುವೆ ಹೆಚ್ಚು ಪ್ರಚಲಿತವಿದೆ. ಹರಿಯುವ ನೀರಿನ ನಿನಾದದ ನಡುವೆ ತುಂತುರು ಮಳೆಯಲ್ಲಿ ತಲೆಯ ಮೇಲೆ ಕೊಪ್ಪಿ ಹಾಕಿಕೊಂಡೊ ಅಥವಾ ಕೊಡೆ ಹಿಡಿದುಕೊಂಡೋ ಇಂತಹ ಸೇತುವೆಯ ಮೇಲೆ ನಡೆದುಕೊಂಡು ದಾಟುವುದು ಹಿತಕರ ಹಾಗೂ ರೋಮಾಂಚಕಾರಿ ಅನುಭವ ನೀಡಬಲ್ಲದು.

ಪಠ್ಯದ ಜತೆಯಲಿ ಇರಲಿ ಜೀವನ ಪಾಠ

ಪಠ್ಯದ ಜತೆಯಲಿ ಇರಲಿ ಜೀವನ ಪಾಠ

ತಾವು ಸಿಕ್ಕಿ ಹಾಕಿಕೊಳ್ಳುವ ಭಯದಲ್ಲಿ ಮಕ್ಕಳ ಪ್ರಾಣವನ್ನು ತೆಗೆಯಲೂ ಹಿಂಜರಿಯುವುದಿಲ್ಲ. ಇಂತಹ ಸಂದರ್ಭಗಳಲ್ಲಿ, ಮಗು ತನಗೆದುರಾಗಬಹುದಾದ ಅಪಾಯಗಳ ಸಾಧ್ಯತೆಯ ಕುರಿತಾಗಿ, ಮೊದಲೇ ಅರಿವನ್ನು ಹೊಂದಿದ್ದಲ್ಲಿ ಹಾಗೂ ಅಪರಿಚಿತರಿಂದ ಇಲ್ಲಾ ಪರಿಚಿತರಿಂದ ತಾನು ಹೇಗೆ ಮೋಸ ಹೋಗಬಹುದು ಎಂಬುದನ್ನು ಮಗು ಮೊದಲೇ ತಿಳಿದಿದ್ದಲ್ಲಿ ಮುಂದೆ ಘಟಿಸುವ ಅಚಾತುರ್ಯಗಳಿಂದ ಮಗು ಪಾರಾಗಬಹುದು.

ಯಕ್ಷ ಸುಂದರನ ಒಡ್ಡೋಲಗ !

ಯಕ್ಷ ಸುಂದರನ ಒಡ್ಡೋಲಗ !

ಮಂದಾರ್ತಿಯಲ್ಲಿ ಹೆಸರಾಂತ ಯಕ್ಷಗಾನ ಮೇಳಗಳಿವೆ. ಪುಟ್ಟ ಪ್ರಸನ್ನರನ್ನು ಆಕರ್ಷಿಸಿದ್ದು ಅಲ್ಲಿ ನಡೆಯುತ್ತಿದ್ದ ಮಂದಾರ್ತಿ ಮೇಳದ ಯಕ್ಷಗಾನಗಳು. ಪ್ರತೀ ದಿನ ತಪ್ಪದೇ ಆಟ ನೋಡಲು ಹೋಗುತ್ತಿದ್ದ ಇವರು, ಅಲ್ಲಿ ಕಣ್ಣಿಮನೆ ಗಣಪತಿ ಭಟ್ಟರಲ್ಲಿ ಹೇಳುತ್ತಿದುದೊಂದೇ, ‘ಮೇಳಕ್ಕೆ ಸೇರಿಸಿಕೊಳ್ಳಿ, ಹಣ ಕೊಡದಿದ್ದರೂ ಪರವಾಗಿಲ್ಲ’ ಎಂದು.

Shivanna Ganagatte Column: ಭೂಮಿಯನು ರಕ್ಷಿಸಲು ಯೋಗ !

ಭೂಮಿಯನು ರಕ್ಷಿಸಲು ಯೋಗ !

ಈ ವರ್ಷದ ವಿಶ್ವ ಯೋಗ ದಿನದ ಧ್ಯೇಯವಾಕ್ಯವು ಭೂಮಿಯ ಆರೋಗ್ಯವನ್ನು ರಕ್ಷಿಸುವ ಕಾಳಜಿ ಯನ್ನು ಹೊಂದಿದೆ. ಜಗತ್ತಿನ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಭೀಕರ ಯುದ್ಧದ ಹಿನ್ನೆಲೆಯಲ್ಲಿ, ಈ ಭೂಮಿಯನ್ನು ಆರೋಗ್ಯಕರವಾಗಿ ರಕ್ಷಿಸುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ಈ ವರ್ಷದ ವಿಶ್ವ ಯೋಗ ದಿನವು ಒತ್ತಿ ಹೇಳುತ್ತಿದೆ.

ಮನೆ ಕಟ್ಟಲು 3ಡಿ ಡಿಸೈನ್

ಮನೆ ಕಟ್ಟಲು 3ಡಿ ಡಿಸೈನ್

ಹೊರಾಂಗಣ ವಿನ್ಯಾಸ ಸರಿಯಿಲ್ಲ, ಈ ಬಣ್ಣ ಚೆನ್ನಾಗಿಲ್ಲ, ಒಳಾಂಗಣ ವಿನ್ಯಾಸದಲ್ಲಿ ಏನೋ ಕೊರತೆ ಯಿದೆ ಅಂತೆಲ್ಲಾ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರೀತಿಯಿಂದ ಕಟ್ಟಿದ ಮನೆ ಆತ್ಮತೃಪ್ತಿ ಯಿಲ್ಲದೆ ಭೂತಬಂಗಲೆಯಂತೆ ಕಾಣಬಹುದು. ಅಂದ ಹಾಗೆ ಇಷ್ಟೊಂದು ಪರಿಶ್ರಮ ಪಟ್ಟು ಕಟ್ಟಿದ ಮನೆ ನಮ್ಮ ಎಣಿಕೆಯಂತೆ ರೂಪುಗೊಳ್ಳದಿರಲು ಮುಖ್ಯ ಕಾರಣ ಅದರ ವಿನ್ಯಾಸದ ಕೊರತೆ.

Loading...