ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Aarama

Dr N Someshwara Column: ಆಲ್ಬರ್ಟ್ ಐನ್‌ಸ್ಟೀನ್ʼರ ಮಿದುಳನ್ನು ಕತ್ತರಿಸಿದಾಗ...

ಆಲ್ಬರ್ಟ್ ಐನ್‌ಸ್ಟೀನ್ʼರ ಮಿದುಳನ್ನು ಕತ್ತರಿಸಿದಾಗ...

ಐನ್'ಸ್ಟೀನರ ಮಿದುಳನ್ನು ಒಡಲಿನಿಂದ ಪ್ರತ್ಯೇಕಿಸಿದರು. ಅದನ್ನು 240 ಚೂರುಗಳನ್ನಾಗಿ ಕತ್ತರಿಸಿದರು. ಗಾಜಿನ ಸೀಸೆಗಳಲ್ಲಿ ಸಂರಕ್ಷಕ ದ್ರಾವಣವನ್ನು ತುಂಬಿ ಅದರಲ್ಲಿ ಈ ಚೂರು ಗಳನ್ನು ಇರಿಸಿದರು. ನಂತರ ಆ ಗಾಜಿನ ಸೀಸೆಗಳನ್ನು ತಮ್ಮ ಮನೆಗೆ ಕೊಂಡೊಯ್ದು ಬಹಳ ಜತನದಿಂದ ಕಾಪಾಡಲಾರಂಭಿಸಿದರು.

ಇಂದು ಗಾಯಕಿ ಎಸ್.ಜಾನಕಿ ಅವರ ಹುಟ್ಟುಹಬ್ಬ: ಕೋಗಿಲೆ ಹಾಡಿದೆ ಕೇಳಿದೆಯಾ, ಹೊಸ ರಾಘವ ಹಾಡಿದೆ ಆಲಿಸೆಯಾ..

ಇಂದು ಗಾಯಕಿ ಎಸ್.ಜಾನಕಿ ಅವರ ಹುಟ್ಟುಹಬ್ಬ

ಹಾಡಿನ ಸಾಹಿತ್ಯವನ್ನು ಅರ್ಥಮಾಡಿಕೊಂಡು, ಸಿನಿಮಾದಲ್ಲಿನ ಅದರ ಸಂದರ್ಭವನ್ನು ತಿಳಿದು ಕೊಂಡು, ಜೀವ-ಭಾವ ತುಂಬಿ ಹಾಡುವುದು ಇವರ ವಿಶೇಷ. ಕನ್ನಡದಲ್ಲಿ ಇವರು ಹಾಡಿರುವ ಸಹಸ್ರಾರು ಹಾಡುಗಳಿಗೂ ಈ ಮಾತು ಅನ್ವಯವಾಗುತ್ತದೆ. ಈ ಪೈಕಿ, ತುಂಬಾ ಜನಪ್ರಿಯವಾದ, ವೈವಿಧ್ಯಮಯ ವಾದ ಮತ್ತು ಅವರ ದೈತ್ಯ ಪ್ರತಿಭೆಯನ್ನು ಅನಾವರಣಗೊಳಿಸಿದ 10 ಹಾಡು ಗಳನ್ನು, ಅವರ ಹುಟ್ಟಿದ ದಿನವಾದ ಇಂದು ನೆನಪಿಸಿಕೊಳ್ಳುವ ಮೂಲಕ ಅವರಿಗೆ ಶುಭ ಕೋರೋಣ.

Dr N Someshwara Column: ವೈದ್ಯಕೀಯ ಜಗತ್ತಿನ ಮಹಾನ್‌ ದುರಂತ: ಈಥರ್‌ ವಾರ್‌ !

ವೈದ್ಯಕೀಯ ಜಗತ್ತಿನ ಮಹಾನ್‌ ದುರಂತ: ಈಥರ್‌ ವಾರ್‌ !

ಯಾವುದೇ ಪ್ರಯತ್ನವಿಲ್ಲದೆ ಅವನಿಂದ ನಗುವಿನ ಹೊಳೆ ಹರಿಯಲಾರಂಭಿಸಿತು. ಶಾರೀರಿಕ ನೋವೆಲ್ಲ ಮಾಯವಾಯಿತು. ಕೊನೆಗೆ ಬ್ರಿಸ್ಟಲ್ ನಗರದ ‘ನ್ಯುಮಾಟಿಕ್ ಇನ್‌ಸ್ಟಿಟ್ಯೂಷನ್’ ಎಂಬಲ್ಲಿ ತನ್ನ ಗೆಳೆಯರನ್ನೆಲ್ಲ ಸೇರಿಸಿಕೊಂಡು ಎಲ್ಲರಿಗೂ ಹೊಸ ಅನಿಲವನ್ನು ಸೇವಿಸಲು ಹೇಳಿದ. ಎಲ್ಲರೂ ಹುಚ್ಚೆದ್ದು ಕುಣಿಯಲಾರಂಬಿಸಿದರು. ಅವರಿಗೆ ವಿನಾಕಾರಣ ಸಂತೋಷವಾಗಿ, ಮುಕ್ತಮನಸ್ಸಿನಿಂದ ನಗಲಾರಂಭಿಸಿದರು.

Hosmane Muttu Column: ಮಣ್ಣು ಮೂರ್ತಿಯಾಗುವ ಮಾಯಾಜಾಲ..!

Hosmane Muttu Column: ಮಣ್ಣು ಮೂರ್ತಿಯಾಗುವ ಮಾಯಾಜಾಲ..!

ಕುಂಬಾರನು ಅತ್ಯಂತ ಧ್ಯಾನಸ್ಥ ಸ್ಥಿತಿಯಲ್ಲಿ ಮಣ್ಣಿಗೆ ಆಕಾರ ನೀಡುವಾಗ ಆ ಕಲಾಕೃತಿಯು ಆತನ ಹೃದಯ ಮತ್ತು ಆತ್ಮದ ಭಾವನೆಗಳನ್ನು ಪ್ರತಿಫಲಿಸುತ್ತದೆ. ಮಣ್ಣು ಮಡಕೆಯಾಗುವ ಈ ಪ್ರಕ್ರಿಯೆಯಲ್ಲಿ ನಮಗೂ ಒಂದು ಜೀವನಪಾಠವಿದೆ; ಮಣ್ಣಿನಂತೆ ನಾವು ಕೂಡ ಕಾಲಕ್ಕೆ ತಕ್ಕಂತೆ ರೂಪುಗೊಳ್ಳಬಹುದು, ಬದಲಾಗಬಹುದು ಹಾಗೂ ನಮ್ಮನ್ನು ನಾವು ಮತ್ತೆ ಮತ್ತೆ ಮುರಿದು ಕಟ್ಟಿಕೊಳ್ಳುತ್ತಾ ಹೊಸ ರೂಪದಲ್ಲಿ ಕಂಗೊಳಿಸಬಹುದು.

3 ರೀತಿಯ ದುಃಖಗಳು ಮತ್ತು ಮುಕ್ತಿಯ ಮಾರ್ಗ

3 ರೀತಿಯ ದುಃಖಗಳು ಮತ್ತು ಮುಕ್ತಿಯ ಮಾರ್ಗ

ಭೌತಿಕ ದುಃಖವು ಬಾಹ್ಯ ಪ್ರಪಂಚದಿಂದ, ಅಂದರೆ ಆಸ್ತಿಗಳು, ಆಸೆಗಳು, ಸಂಬಂಧಗಳು, ಮಹತ್ವಾಕಾಂಕ್ಷೆ ಗಳು, ವೈಫಲ್ಯಗಳು ಮತ್ತು ಬಾಂಧವ್ಯಗಳಿಂದ ಉದ್ಭವಿಸುತ್ತವೆ. ಮನುಷ್ಯರು ನಿರಂತರವಾಗಿ ಹೋಲಿಸಿ ಕೊಳ್ಳುವುದಲ್ಲದೆ ಸ್ಪರ್ಧಾತ್ಮಕವಾಗಿ ಬದುಕುತ್ತಾರೆ, ಹೆಚ್ಚಿನದನ್ನು ಬಯಸುತ್ತಾರೆ ಮತ್ತು ನಷ್ಟಕ್ಕೆ ಹೆದರುತ್ತಾರೆ. ಒಬ್ಬರ ನಿರೀಕ್ಷೆಗಳು ಈಡೇರದಿದ್ದಾಗ, ಮನಸ್ಸು ದುಃಖಿಸುತ್ತದೆ. ಅವುಗಳನ್ನು ಪೂರೈಸಿ ದಾಗಲೂ, ಅವುಗಳನ್ನು ಕಳೆದುಕೊಳ್ಳುವ ಭಯವು ಮತ್ತೆ ದುಃಖವನ್ನು ಸೃಷ್ಟಿಸುತ್ತದೆ.

Maya Balachandra Column: ಆಧ್ಯಾತ್ಮಿಕತೆಯು ಪಲಾಯನ ಮಾರ್ಗವೇ ? ಪ್ರತಿರೋಧವೇ ?

ಆಧ್ಯಾತ್ಮಿಕತೆಯು ಪಲಾಯನ ಮಾರ್ಗವೇ ? ಪ್ರತಿರೋಧವೇ ?

ಇಂದಿನ ಜಗತ್ತು ವಿಚಿತ್ರ ವಿರೋಧಾಭಾಸದ ಮೇಲೆ ನಿಂತಿದೆ. ಹೊರಗೆ ಅತಿವೇಗ, ಒಳಗೆ ಅತಿ ಖಾಲಿತನ. ಮಾಹಿತಿ ಅತಿರೇಕ, ಆದರೆ ಅರ್ಥದ ಕೊರತೆ. ಸಂಪರ್ಕಗಳ ಹೆಚ್ಚಳ, ಆದರೆ ಸಂಬಂಧಗಳ ಕ್ಷೀಣತೆ. ಈ ಸಂದರ್ಭದಲ್ಲಿ ‘ಆಧ್ಯಾತ್ಮಿಕತೆ’ ಎಂಬ ಪದ ಎರಡು ವಿರುದ್ಧ ಅರ್ಥಗಳಲ್ಲಿ ಕೇಳಿಸುತ್ತದೆ, ಒಂದು- ಜೀವನದಿಂದ ಪಲಾಯನ, ಮತ್ತೊಂದು- ಜೀವನದ ಕಠಿಣ ಸತ್ಯವನ್ನು ಎದುರಿಸುವ ಶಕ್ತಿ.

Ajay Anchepalya Column: ಸವಾಲು ಹಾಕಿ ಎಲ್ಲರ ಮನ ಗೆದ್ದ ಆಶಾ !

Ajay Anchepalya Column: ಸವಾಲು ಹಾಕಿ ಎಲ್ಲರ ಮನ ಗೆದ್ದ ಆಶಾ !

ಲತಾ ಮಂಗೇಶ್ಕರ್ ಅವರು ಕ್ಯಾಬರೆಗೆ ಸಂಬಂಧಿಸಿದ ಮತ್ತು ತೀರಾ ಮಾಡರ್ನ್ ಎನಿಸುವ ಹಾಡು ಗಳನ್ನು ಹಾಡಲು ಇಷ್ಟಪಡುತ್ತಿರಲಿಲ್ಲ; ಅಂಥ ಹಾಡುಗಳನ್ನು ಆಶಾ ಭೋಸ್ಲೆ ಅವರು ಹಾಡುತ್ತಾರೆ ಎಂದು ಗೊತ್ತಾದ ನಂತರ, ಕ್ಯಾಬರೆ ಹಾಡುಗಳಿಗೆಲ್ಲಾ ಇವರೇ ಧ್ವನಿ ನೀಡುವಂಥ ಸನ್ನಿವೇಶ ಸೃಷ್ಟಿ ಯಾಯಿತು. ಐಟಂ ಸಾಂಗ್, ಕ್ಯಾಬರೆ ನೃತ್ಯ, ‘ದಮ್’ ಹೊಡೆಯುವಾಗ ಹಾಡುವಂಥ ಮತ್ತೇರಿಸುವ ಹಾಡು- ಇವೆಲ್ಲವೂ ಆಶಾ ಅವರ ಪಾಲಾಯಿತು!

Dr N Someshwara Column: ಏಳು ಸಲ ಸಿಡಿಲು ಹೊಡೆದರೂ ಬದುಕುಳಿದ !

Dr N Someshwara Column: ಏಳು ಸಲ ಸಿಡಿಲು ಹೊಡೆದರೂ ಬದುಕುಳಿದ !

ಸಿಡಿಲು ಹೊಡೆದರೆ ಮನುಷ್ಯನು ಬದುಕಲಾರ ಎನ್ನುವುದು ನಮಗೆ ತಿಳಿದ ವಿಚಾರ. ಆದರೆ ವ್ಯಕ್ತಿಯ ಯೊಬ್ಬರು ಒಂದಲ್ಲ ಏಳುಬಾರಿ ಸಿಡಿಲಿನ ಹೊಡೆತಕ್ಕೆ ತುತ್ತಾಗಿ ಬದುಕಿದರು ಎಂದರೆ ನಂಬಲು ಕಷ್ಟ ವಾಗುತ್ತದೆ. ಅಂಥ ವ್ಯಕ್ತಿಯೊಬ್ಬರು ಇದ್ದದ್ದು ನಿಜ. ಅವರೇ ರಾಯ್ ಕ್ಲೀವ್ ಲ್ಯಾಂಡ್ ಸಲಿವಾನ್ (1912-1983). ಸಲಿವಾನ್ ಅವರ ಈ ಕಥನವು ಕೇವಲ ವಿಚಿತ್ರ ಘಟನೆಯ ಕಥೆಯಲ್ಲ.

Dr Maithri Bhat Column: ಭಾವಗಳ ದೀಪ, ಮೌನದ ಹಾದಿ

Dr Maithri Bhat Column: ಭಾವಗಳ ದೀಪ, ಮೌನದ ಹಾದಿ

ಸಂಬಂಧವು ಬಾಂಧವ್ಯ ಆಗಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಅರಿತಂದು ಬಾಳು ಸಾರ್ಥಕ. ಆದರೆ ಯಾವ ಓದು ಕೂಡಾ ಅತ್ತ ಪ್ರೇರೇಪಿಸದೇ ಹೋದಲ್ಲಿ... ಹೇಳಿಯೂ ಅರಿತು ಕೊಳ್ಳದೇ ಹೋದಲ್ಲಿ ಹೇಗೆ? ಎನ್ನುವುದು ಕಾಡುವ ಪ್ರಶ್ನೆ. ಬಾಂಧವ್ಯ ಎಂದಾಗ ‘ನಾನು’ ಬದಲಾದರೆ ಸಾಲದು, ‘ನಾವು’ ಬದಲಾಗಬೇಕು.

Hosmane Muttu Column: ಲಾಗೋಮ್:‌ ಹಿತ-ಮಿತ ಬದುಕಿನ ಸುಂದರಪಥ...!

Hosmane Muttu Column: ಲಾಗೋಮ್:‌ ಹಿತ-ಮಿತ ಬದುಕಿನ ಸುಂದರಪಥ...!

ಕೇವಲ ಕೆಲಸಕ್ಕಾಗಿ ಬದುಕದೆ, ಕುಟುಂಬ ಮತ್ತು ಹವ್ಯಾಸಗಳಿಗೂ ಅಷ್ಟೇ ಪ್ರಾಮುಖ್ಯ ನೀಡುವುದು, ಕಚೇರಿಯ ಕೆಲಸವನ್ನು ಅಲ್ಲೇ ಮುಗಿಸಿ ಮನೆಗೆ ಬರುವುದು ಅಪ್ಪಟ ಲಾಗೋಮ್ ಶೈಲಿ. ಸತತವಾಗಿ ಬಿಡುವಿಲ್ಲದೆ ದುಡಿಯುವುದರಿಂದ ಕೆಲಸದ ದಕ್ಷತೆ ಕಡಿಮೆಯಾಗುವುದಲ್ಲದೆ, ಮಾನಸಿಕ ಬಳಲಿಕೆಯೂ ಉಂಟಾಗುತ್ತದೆ. ಆದ್ದರಿಂದಲೇ ಸ್ವೀಡನ್ ಜನರು ಕೆಲಸದ ನಡುವೆ ‘ಫಿಕಾ’ ಎಂಬ ಕಾಫಿ ವಿರಾಮವನ್ನು ತೆಗೆದುಕೊಳ್ಳುತ್ತಾರೆ.

S N Bhat Column: ಮರದ ಬಟ್ಟಲು ಮತ್ತು ಮರೆಯದ ಪಾಠ

S N Bhat Column: ಮರದ ಬಟ್ಟಲು ಮತ್ತು ಮರೆಯದ ಪಾಠ

ಮಗನ ಈ ಮಾತು ತಂದೆ-ತಾಯಿಯ ಎದೆಗೆ ಬಿದ್ದ ಚಾಕುವಿನಂತಾಯಿತು. ತಾವು ಇಂದು ಪೋಷಕರನ್ನು ನಡೆಸಿಕೊಳ್ಳುತ್ತಿರುವ ರೀತಿಯಲ್ಲೇ, ನಾಳೆ ತಮ್ಮ ಮಕ್ಕಳೂ ತಮ್ಮನ್ನು ನಡೆಸಿ ಕೊಳ್ಳುತ್ತಾರೆ ಎಂಬುದು ಅಂದು ಅವರಿಗೆ ಅರ್ಥವಾಯಿತು. ಅಂದೇ ಅವರು ಅಜ್ಜನನ್ನು ಮತ್ತೆ ತಮ್ಮ ಜತೆಯ ಗೌರವಾದರ ಗಳೊಂದಿಗೆ ಕೂರಿಸಿಕೊಂಡು ಊಟ ಮಾಡಿಸಲು ಆರಂಭಿಸಿದರು.

Dr N Someshwara Column: ಹಿಮಶಿಲ್ಪಕ್ಕೆ ಜೀವ ತಂದ ಎಲ್-ಡೋಪ

Dr N Someshwara Column: ಹಿಮಶಿಲ್ಪಕ್ಕೆ ಜೀವ ತಂದ ಎಲ್-ಡೋಪ

ರೋಗಿಗಳಲ್ಲಿ ಅಸಾಮಾನ್ಯ ನಿದ್ರಾಹೀನತೆ, ಕಣ್ಣಿನ ವಿಚಿತ್ರ ಚಲನೆಯ ಸಮಸ್ಯೆಗಳು, ಜ್ವರ ಮತ್ತು ಮಾನಸಿಕ ಬದಲಾವಣೆಗಳು ಕಂಡು ಬರಲಾರಂಬಿಸಿದವು. ಕೆಲವರು ಮಹಾನ್ ದಡ್ಡ ಶಿಖಾಮಣಿ ಗಳಂತೆ ವರ್ತಿಸಲಾರಂಭಿಸಿದರು. ಹಲವರು ತೀವ್ರ ಮಾನಸಿಕ ಪ್ರಕ್ಷುಬ್ಧತೆ ಅಥವಾ ಮನೋ ವೈಕಲ್ಯಕ್ಕೆ ಒಳಗಾದರು.

Dr N Someshwara Column: ಅವಳು ವಾಸನೆಯಿಂದ ಕಾಯಿಲೆಗಳನ್ನು ಪತ್ತೆ ಹಚ್ಚುತ್ತಿದ್ದಳು !

ಅವಳು ವಾಸನೆಯಿಂದ ಕಾಯಿಲೆಗಳನ್ನು ಪತ್ತೆ ಹಚ್ಚುತ್ತಿದ್ದಳು !

ಜಾಯ್, ತನ್ನ ಗಂಡ ಲೆಸ್‌ನ ದೇಹದಲ್ಲಿ ಒಂದು ಬದಲಾವಣೆಯಾಗುತ್ತಿರುವುದನ್ನು ಗಮನಿಸಿ ದಳು. ಅವನ ದೇಹದಿಂದ ಗಾಢವಾದ ಕಸ್ತೂರಿ ವಾಸನೆಯನ್ನು (ಮಸ್ಕಿ ಓಡರ್) ಹೋಲುವಂಥ ವಾಸನೆಯು ಹೊರಬರಲಾರಂಭಿಸಿತು. ವಿಶೇಷವಾಗಿ ಲೆಸ್‌ನ ಕುತ್ತಿಗೆ ಮತ್ತು ಬಾಹುಗಳಿಂದ ಈ ರೀತಿಯ ವಾಸನೆಯು ಹೊರಡುತ್ತಿತ್ತು. ವಾಸನೆಯು ಏನೂ ಅಹಿತರಕರವಾಗಿರಲಿಲ್ಲ. ಆದರೂ ಆ ವಾಸನೆಯು ಅಸಹಜವಾಗಿತ್ತು

Padyana Brahmakalashotsava: ಪದ್ಯಾಣ ಬ್ರಹ್ಮಕಲಶೋತ್ಸವ: ವಿದ್ವಾಂಸರು, ಕಲಾವಿದರ ಸಾಂಸ್ಕೃತಿಕ ನೆಲೆಬೀಡು

ಪದ್ಯಾಣ ಬ್ರಹ್ಮಕಲಶೋತ್ಸವ

ಈ ಕ್ಷೇತ್ರದ ಪ್ರಮುಖ ಆಕರ್ಷಣೆ ಎಂದರೆ ಶ್ರೀ ಚಕ್ರ ಪೂಜೆ. 1975ರಲ್ಲಿ ದೇವಸ್ಥಾನದ ನವೀಕರಣ ದ ಸಂದರ್ಭದಲ್ಲಿ ಶ್ರೀಚಕ್ರ ಸಹಿತ ಶ್ರೀ ಮಹಾ ಲಿಂಗೇಶ್ವರ ಸ್ವಾಮಿಯ ಪ್ರತಿಷ್ಠೆ ಮಾಡಲಾಗಿತ್ತು. ಒಂದು ಕಾಲದಲ್ಲಿ ಪಾಳುಬಿದ್ದಿದ್ದ ಈ ದೇಗುಲವನ್ನು 1975ರಲ್ಲಿ ದಿ.ಸೇರಾಜೆ ನಾರಾಯಣ ಭಟ್ಟರ ನೇತೃತ್ವದಲ್ಲಿ ಊರ ಭಕ್ತರ ಸಹಕಾರದೊಂದಿಗೆ ಪುನರ್‌ನಿರ್ಮಿಸಲಾಯಿತು.

Ranganath Gudimani Column: ಸಜ್ಜನರ ದುಃಖ, ದುರ್ಜನರ ಸುಖ ಶಾಶ್ವತವಲ್ಲ...

ಸಜ್ಜನರ ದುಃಖ, ದುರ್ಜನರ ಸುಖ ಶಾಶ್ವತವಲ್ಲ...

ಕಾಲ ಉರುಳಿ ಹೋದಂತೆ ದುರ್ಜನರ ಹಾದಿಯೇ ದುರ್ಗಮವಾಗಿ, ಸಜ್ಜನರ ಹಾದಿಯು ಸುಗಮ ವಾಗುವುದು. ಸಜ್ಜನರಿಗೆ ಸಮಸ್ಯೆ-ಸಂಕಷ್ಟಗಳು ಅಧಿಕ. ದುರ್ಜನರಿಗೆ ಸಿರಿ-ಸಂಪತ್ತು ಅತ್ಯಧಿಕ. ಬದುಕಿನ ಸುದೀರ್ಘ ಹೋರಾಟದಲ್ಲಿ ಸೋತು ಗೆಲ್ಲುವವರು ಸಜ್ಜನನಾದರೆ, ಗೆದ್ದು ಸೋಲು ವವರೇ ದುರ್ಜನರು. ದುರ್ಜನರ ಸಿರಿವಂತಿಕೆಯು ಮಧ್ಯಾಹ್ನದ ಬಿಸಿಲಿನಂತೆ.

Vidyashankar Sharma Column: ಜನಮತದ ಬೆಂಬಲ ಪಡೆದ ಶ್ರೀರಾಮನ ಪಟ್ಟಾಭಿಷೇಕ

ಜನಮತದ ಬೆಂಬಲ ಪಡೆದ ಶ್ರೀರಾಮನ ಪಟ್ಟಾಭಿಷೇಕ

ದಶರಥನು ತನ್ನ ಇಚ್ಛೆಯನ್ನು ಪ್ರಕಟಿಸಿದಾಗ, ಪ್ರಜೆಗಳು ಒಮ್ಮತದಿಂದ ‘ಅದು ಸರಿಯಾದ ನಿರ್ಣಯ’ ಎನ್ನುತ್ತಾರೆ. ಆಗ ದಶರಥನು ಹೇಳುವ ಮಾತುಗಳನ್ನು ಗಮನಿಸಬೇಕು- “ಪ್ರಜೆ ಗಳೇ, ನನ್ನ ಉದ್ದೇಶವನ್ನು ಹೇಳಿದ ತಕ್ಷಣ ನೀವೆಲ್ಲರೂ ಅದನ್ನು ಕೂಡಲೇ ಒಪ್ಪಿಬಿಟ್ಟಿರಿ. ನನ್ನ ಮಾತುಗಳನ್ನು ಪಾಲಿಸಬೇಕೆಂದು ನೀವು ಹೀಗೆ ಹೇಳುತ್ತಿಲ್ಲವಷ್ಟೇ? ನನ್ನ ಆಡಳಿತವು ಸುಗಮ ವಾಗಿರುವಾಗ, ನನ್ನ ಮಗನು ರಾಜನಾಗಲು ವಿಶೇಷವಾದ ಕಾರಣವೇನಾದರೂ ತಮ್ಮಲ್ಲಿ ಇರುವುದೇ?".

Maya Balachandra Column: ಮರೆವು ಮತ್ತು ಸ್ಮೃತಿ: ಅಂತರಂಗದ ಮೌನ ಸಂವಾದ

ಮರೆವು ಮತ್ತು ಸ್ಮೃತಿ: ಅಂತರಂಗದ ಮೌನ ಸಂವಾದ

‘ನನಗೆ ಆಗಿದ್ದ ನೋವು’, ‘ನಾನು ಅನುಭವಿಸಿದ ಅವಮಾನ’, ‘ನನ್ನ ಸಾಧನೆ’ ಎನ್ನುವ ಎಲ್ಲವೂ ಮನಸ್ಸನ್ನು ಕಟ್ಟಿ ಹಾಕುತ್ತವೆ. ಹೀಗೆ ಸ್ಮೃತಿ ಬಂಧನವಾಗುತ್ತದೆ. ಧ್ಯಾನ ಪರಂಪರೆಯಲ್ಲಿ ಹೇಳುವ ಒಂದು ಗಂಭೀರ ಸತ್ಯ ಇದೆ- “ಸ್ಮೃತಿಗಳಿಂದ ಮುಕ್ತವಾದಾಗ ಮಾತ್ರವೇ ಮನಸ್ಸು ಮೌನವನ್ನು ಅನುಭವಿಸುತ್ತದೆ".

Maya Balachandra Column: ಯುದ್ಧವು ಮೊದಲ ಪರಿಹಾರವಲ್ಲ, ಕೊನೆಯ ಆಯ್ಕೆ

ಯುದ್ಧವು ಮೊದಲ ಪರಿಹಾರವಲ್ಲ, ಕೊನೆಯ ಆಯ್ಕೆ

ಒಂದು ರಾಷ್ಟ್ರ ಅಥವಾ ಗುಂಪು ‘ತನ್ನ ಭದ್ರತೆ ಪಾಯದಲ್ಲಿದೆ’ ಅನ್ನುವ ತೀರ್ಮಾನಕ್ಕೆ ಬಂದರೆ, ಆ ಗುಂಪಿನ ಸಾಮೂಹಿಕ ಪ್ರಜ್ಞೆಯಲ್ಲಿ ಯುದ್ಧ ಹುಟ್ಟಿದಂತೆಯೇ. ಇಲ್ಲಿ ಭಯ ಮತ್ತು ಅಸುರಕ್ಷಿತತೆಯ ಮನೋಭಾವ, ಯುದ್ಧದ ಪ್ರಮುಖ ನೆಲೆಗಟ್ಟು. ಈ ಭಯವು ಅನೇಕ ಬಾರಿ ನಿಜವಾದ ಅಪಾಯಕ್ಕಿಂತ ಹೆಚ್ಚಾಗಿ, ಕಲ್ಪನೆಯಲ್ಲಿ ಬೆಳೆಯುತ್ತದೆ.

Vidyashankar Sharma Column: ʼವಿನಯʼವೇ ಭೂಷಣ

ʼವಿನಯʼವೇ ಭೂಷಣ

ವಿನಮ್ರತೆಯನ್ನು ರೂಢಿಸಿಕೊಳ್ಳಲು ನಮ್ಮಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳ ಬೇಕಾ ಗುತ್ತದೆ. ಮೊದಲನೆಯದಾಗಿ, ನಾವು ಒಳ್ಳೆಯ ಕೇಳುಗರಾಗಬೇಕು. ಇದು ವಿನಯವಂತಿಕೆಯ ಬಹುಮುಖ್ಯ ಲಕ್ಷಣವಾಗಿದೆ. ನಮ್ಮ ತಪ್ಪುಗಳನ್ನು ಒಪ್ಪಿಕೊಳ್ಳುವುದು, ಸರಳತೆಯ ಕಡೆಗೆ ನಾವು ಇಡಬಹುದಾದ ದೊಡ್ಡ ಹೆಜ್ಜೆ. ಈ ಹೆಜ್ಜೆಯಿಡಲು ಧೈರ್ಯ ಬೇಕಾಗುತ್ತದೆ.

ಹೊಸ ಯುಗದ ಕಾವ್ಯಾತ್ಮಕ ಉದಯ

ಹೊಸ ಯುಗದ ಕಾವ್ಯಾತ್ಮಕ ಉದಯ

ವಸಂತ ಋತುವಿನ ಮೃದುವಾದ ಗಾಳಿ, ಹಸಿರು ಚಿಗುರುಗಳ ನಗು, ಹೂಗಳ ಸುಗಂಧ-ಇವೆಲ್ಲವೂ ಯುಗಾದಿಯ ಆಗಮನವನ್ನು ಕಾವ್ಯಾತ್ಮಕವಾಗಿ ಸಾರುತ್ತವೆ. ಯುಗಾದಿ ದಿನವು ಜೀವನದ ಒಂದು ತತ್ವಶಾಸ್ತ್ರೀಯ ಪಾಠವನ್ನು ನೀಡುತ್ತದೆ. ಬೇವು-ಬೆಲ್ಲದ ಸಂಯೋಜನೆ, ಕಹಿ ಮತ್ತು ಸಿಹಿಯ ಸಮ್ಮಿಳನವಾಗಿ, ಜೀವನದಲ್ಲಿ ಬರುವ ಸುಖ-ದುಃಖಗಳ ಪ್ರತೀಕ ವಾಗಿದೆ.

ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ

ಪರಾಭವ ನಾಮ ಸಂವತ್ಸರಕ್ಕೆ ಸ್ವಾಗತ

ಯುಗಾದಿಯಂದು ಸೂರ್ಯೋದಯದ ಸಮಯದಲ್ಲಿಯೇ ಬ್ರಹ್ಮದೇವ ಸೃಷ್ಟಿಯ ಕಾರ್ಯ ವನ್ನು ಆರಂಭಿಸಿದರು, ಕಾಲಗಣನೆ ಆರಂಭವಾದ ದಿನ ಮತ್ತು ನಾರಾಯಣನ ಏಳನೇ ಪ್ರಸಿದ್ಧ ಅವತಾರವಾದ ಶ್ರೀರಾಮ ತನ್ನ ಸಹೋದರ ಲಕ್ಷ್ಮಣ ಮತ್ತು ಪತ್ನಿ ಸೀತೆಯೊಟ್ಟಿಗೆ 14 ವರ್ಷಗಳ ವನವಾಸ ಮುಗಿಸಿ, ಮರಳಿ ಅಯೋಧ್ಯೆಗೆ ಬಂದು ರಾಜನಾಗಿ ಪಟ್ಟಾಭಿಷಿಕ್ತನಾದ ದಿನ, ಅಂದರೆ ರಾಮರಾಜ್ಯ ಆರಂಭವಾದ ದಿನವೆಂದು ಪುರಾಣ ಗ್ರಂಥಗಳಲ್ಲಿ ಉಲ್ಲೇಖವಿದೆ

ಚೈತ್ರಮಾಸ, ವಸಂತ ಋತುವಿನ ಮೊದಲ ದಿನ

ಚೈತ್ರಮಾಸ, ವಸಂತ ಋತುವಿನ ಮೊದಲ ದಿನ

ಸೌರಮಾನ ಯುಗಾದಿ ಸಾಮಾನ್ಯವಾಗಿ ಈಗ ಇದು ಏಪ್ರಿಲ್ 14 ಅಥವಾ 15ನೇ ತಾರೀಖಿಗೆ ಬೀಳುತ್ತದೆ. ಕರಾವಳಿಯವರು ಸೌರಮಾನ ಯುಗಾದಿ ಎಂದು ಹೊಸ ವರ್ಷವನ್ನು ಆಚರಿಸು ತ್ತಾರೆ. ಮಹಾರಾಷ್ಟ್ರದಲ್ಲಿ ಗುಡಿಪಾಡ್ ಪಾಡ್ಯಮಿ ದಿವಸ ಗುಡಿಯನ್ನು ಏರಿಸುವು ದೇ ಗುಡಿಪಾಡ್ವ. ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು.

ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ

ನವಭಾವದ ನವಬದುಕನು ಹೊಸ ಯುಗಾದಿ ತೆರೆಯಲಿ

ಯುಗಾದಿ ಹಬ್ಬವು ದಕ್ಷಿಣ ಭಾರತದ ಜನರಿಗೆ ಅತ್ಯಂತ ಶ್ರೇಷ್ಠ ಹಬ್ಬವಾಗಿದ್ದು, ಜೀವನದ ಹೊಸ ಆರಂಭದ ಸಂಕೇತವಾಗಿದೆ, ಚೈತ್ರ ಮಾಸದ ಮಾಸದ ಮೊದಲ ದಿನದಂದು, ಬರುವ ಈ ಹಬ್ಬ ವಸಂತ ಋತುವಿನ, ಆಗಮನವನ್ನು ಸೂಚಿಸುತ್ತದೆ. ಯುಗಾದಿ ಎಂಬುದು ‘ಯುಗ ಮತ್ತು ಆದಿ’ ಎಂಬ ಸಂಸ್ಕೃತ ಶಬ್ದಗಳಿಂದ ಉಗಮವಾಗಿದೆ. ಕನ್ನಡದಲ್ಲಿ ಹೊಸ ವರ್ಷದ ಆರಂಭ ಎಂದೇ ಇದರ ಅರ್ಥ.

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

ನಗು ಎಂದರೆ ಸುಮ್ಮನೆಯ ನಗು ವಲ್ಲ. ಗಹಗಹಿಸುವ ನಗು. ಇದು ಸಹಜ ನಗುವಲ್ಲ. ರೋಗಗ್ರಸ್ತ ನಗು. ನಿರಂತರವಾಗಿ ಗಹಗಹಿಸಿ ನಗುತ್ತಲೇ ಇರುತ್ತಾನೆ. ನಗುವು ನಿಲ್ಲುವುದೇ ಇಲ್ಲ. ಹಗಲೂ ರಾತ್ರಿ ನಗುತ್ತಲೇ ಇರುತ್ತಾನೆ. ದೇಹವು ಸೊರಗಿ ಸೊರಗಿ ಬರೀ ಮೂಳೆಗಳು ಕಾಣುತ್ತಿದ್ದರೂ ನಗು ಮಾತ್ರ ನಿಲ್ಲುವುದಿಲ್ಲ. ಹೀಗೆ ತಿಂಗಳುಗಟ್ಟಲೆ ನಕ್ಕು ನಕ್ಕು ಒಂದು ದಿನ ಸಾಯುತ್ತಾನೆ. ಹಾಗಾಗಿ ಪಾಶ್ಚಾತ್ಯ ಪತ್ರಕರ್ತರು ಈ ಕಾಯಿಲೆಯನ್ನು ‘ಲಾಫಿಂಗ್ ಡಿಸೀಸ್’ ಎಂದು ಕರೆದರು.

Loading...