ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

B S Shivanna Column: ಪಂಚ ಗ್ಯಾರಂಟಿಗಳು ಮತ್ತು ಕರ್ನಾಟಕ ಸರಕಾರದ ಆರ್ಥಿಕತೆ

ಸಂಪತ್ತನ್ನು ಕ್ರೋಢೀಕರಿಸುವುದು ‘ಬಂಡವಾಳಶಾಹಿ ವಾದ’ ಎನಿಸಿಕೊಂಡರೆ, ಸಮಾಜದ ಸಂಪತ್ತನ್ನು ಬಡವರು, ನಿರ್ಗತಿಕರು, ವಿಧವೆಯರು, ವಿದ್ಯಾರ್ಥಿಗಳು, ಅಂಗವಿಲರಿಗೆ ಹಂಚು ವುದೇ ‘ಸಮಾಜವಾದ’ ಎನಿಸಿಕೊಳ್ಳುತ್ತದೆ. ಬಸವಣ್ಣನವರು ಹೇಳಿದ್ದು ಅದನ್ನೇ. ಇಂದಿನ ಹಂಚಿ-ತಿನ್ನುವ ಈ ಕಾರ್ಯವೇ ಉಚಿತ ಕೊಡುಗೆಗಳು/ಗ್ಯಾರಂಟಿಗಳು

ಪಂಚ ಗ್ಯಾರಂಟಿಗಳು ಮತ್ತು ಕರ್ನಾಟಕ ಸರಕಾರದ ಆರ್ಥಿಕತೆ

Profile Ashok Nayak Feb 19, 2025 9:44 AM

ವಿಚಾರ ವೇದಿಕೆ

ಬಿ.ಎಸ್.ಶಿವಣ್ಣ

ಬಸವಣ್ಣನವರು 12ನೇ ಶತಮಾನದಲ್ಲಿ ಜಗತ್ತಿಗೆ ಸಮಾಜವಾದವನ್ನು ಬೋಧಿಸಿದ ಮಹಾನ್ ಮಾನವತಾವಾದಿ. ಅದೇ ಮಾದರಿಯನ್ನು ಭಾರತದ ಸಂವಿಧಾನದ ವಿಧಿ 38 ಮತ್ತು 39ರಲ್ಲಿ ‘ಸಮಾಜವಾದ’ ಎಂಬ ಸಿದ್ಧಾಂತದ ಅಡಿ ಯಲ್ಲಿ ಸೇರಿಸಲಾಗಿದೆ. ಸಂಪತ್ತ ನ್ನು ಕ್ರೋಡೀಕರಿಸುವುದು ‘ಬಂಡವಾಳಶಾಹಿ ವಾದ’ ಎನಿಸಿಕೊಂಡರೆ, ಸಮಾಜದ ಸಂಪ ತ್ತನ್ನು ಬಡವರು, ನಿರ್ಗತಿಕರು, ವಿಧವೆಯರು, ವಿದ್ಯಾರ್ಥಿಗಳು, ಅಂಗವಿಲರಿಗೆ ಹಂಚು ವುದೇ ‘ಸಮಾಜವಾದ’ ಎನಿಸಿಕೊಳ್ಳುತ್ತದೆ. ಬಸವಣ್ಣನವರು ಹೇಳಿದ್ದು ಅದನ್ನೇ. ಇಂದಿನ ಹಂಚಿ-ತಿನ್ನುವ ಈ ಕಾರ್ಯವೇ ಉಚಿತ ಕೊಡುಗೆಗಳು/ಗ್ಯಾರಂಟಿಗಳು. ಅಂದು ಬಸವಣ್ಣ ಮಾಡಿದ್ದು ಸರಿಯಿದ್ದರೆ, ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಡುತ್ತಿರು ವುದೂ ಸರಿಯೇ.

2023ರ ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಜನರಿಗಾಗಿ ಪಂಚ ಗ್ಯಾರಂಟಿ ಗಳನ್ನು ಘೋಷಿಸಿತು ಮತ್ತು ಅವನ್ನು ತನ್ನ ಪ್ರಣಾಳಿಕೆಯಲ್ಲಿ ಅಡಕಗೊಳಿಸಿತು. ಈಗ ಫಲಾನುಭವಿಗಳು ಅದರ ಸದುಪಯೋಗವನ್ನು ಪಡೆಯಲಾರಂಭಿಸಿದ್ದಾರೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಹಲವರು, ‘ಸರಕಾರದ ಈ ಪಂಚಗ್ಯಾರಂಟಿಗಳಿಂದ ರಾಜ್ಯದ ಸರ್ವನಾಶವಾಗುತ್ತಿದೆ’ ಎಂದು ಬೊಬ್ಬಿರಿಯುತ್ತಿರುವುದನ್ನು ನೋಡಿದ್ದೇವೆ.

ಇದನ್ನೂ ಓದಿ: B S Shivanna Column: ನೆನಪಿರಲಿ...ಒಳಸಂಚಿಗೆ ಸಿದ್ದರಾಮಯ್ಯ ಸೋಲುವುದಿಲ್ಲ

ಹೀಗಾಗಿ ಆ ಯೋಜನೆಗಳ ಕಡೆಗೊಂದು ಇಣುಕುನೋಟ ಬೀರೋಣ. ಗೃಹಜ್ಯೋತಿ ಯೋಜನೆ 2023ರ ಜುಲೈ 1ರಿಂದ, ಪ್ರತಿ ಮನೆಗೆ 200 ಯುನಿಟ್‌ನಷ್ಟು ಉಚಿತ ವಿದ್ಯುತ್ ನೀಡಲಾಗುತ್ತಿದೆ. ಹಿಂದಿನ ವಿದ್ಯುತ್ ಬಿಲ್ ಪಾವತಿಸಿದವರು ಈ ಯೋಜನೆಗೆ ಅರ್ಹರು. ಇದು ಬಡವರ ಮನೆಯ ಅಂಧಕಾರವನ್ನು ದೂರ ಮಾಡುವ ಯೋಜನೆ. ಸೀಮೆಎಣ್ಣೆ ದೀಪದ ಬೆಳಕಲ್ಲಿ ಓದಿ ಮನಮೋಹನ್ ಸಿಂಗ್ ಈ ದೇಶದ ಪ್ರಧಾನಮಂತ್ರಿಯಾದರು, ಬೀದಿ ದೀಪದ ಬೆಳಕಲ್ಲಿ ಓದಿ ಸರ್ ಎಂ.ವಿಶ್ವೇಶ್ವರಯ್ಯ ದಿವಾನರಾದರು.

ಇಂದಿನ ಈ ಗೃಹಜ್ಯೋತಿ ಯೋಜನೆಯ ಬೆಳಕಿನಲ್ಲಿ ಓದಿದ ಬಾಲಕರು ಮುಂದೆ ಇಂಥ ಸಾಧಕರೇ ಆದರೆ ಅಚ್ಚರಿಯಿಲ್ಲ. ಈ ಯೋಜನೆಯನ್ನು ವಿರೋಧಿಸುವವರ ಮಾತು ಹೇಗಿದೆ ಯೆಂದರೆ, “ವಿಶ್ವೇಶ್ವರಯ್ಯನವರು ರಾತ್ರಿಯಲ್ಲಿ ಬೀದಿದೀಪದಡಿ ಓದುತ್ತಿದ್ದುದೇಕೆ, ಅವರು ಹಗಲಿನಲ್ಲಿ ಏನು ಮಾಡುತ್ತಿದ್ದರು?" ಎಂದು ಅಣಕಿಸುವಂತಿದೆ. ಈ ಹಿಂದಿದ್ದ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ, ಅಮೃತಜ್ಯೋತಿ ಯೋಜನೆಗಳನ್ನು ವಿರೋಧಿಸದವರು ಭಾಗ್ಯ ಜ್ಯೋತಿಗೆ ಅಪಸ್ವರ ಹಾಡುತ್ತಿರುವುದೇಕೆ? ಬಡವರ ಮಕ್ಕಳು ಬೆಳೆಯಬಾರದೇ?

ಗೃಹಲಕ್ಷ್ಮಿ ಯೋಜನೆ

2023ರ ಜೂನ್ 6ರಂದು ಕರ್ನಾಟಕ ಸರಕಾರವು ಆದೇಶವನ್ನು ಹೊರಡಿಸಿ, ಮನೆಯ ಯಜಮಾನಿಯಾಗಿರುವ ಮಹಿಳೆಗೆ ಆಗಸ್ಟ್ 5 ರಿಂದ ಪ್ರತಿ ತಿಂಗಳು 2000 ರುಪಾಯಿ ನೀಡು ವುದಾಗಿಯೂ, ಈ ಯೋಜನೆಯ ಫಲಾನುಭವಿಗಳು ಬಡತನ ರೇಖೆಗಿಂತ ಕೆಳಗಿದ್ದು ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಾಗಿರಬೇಕೆಂದೂ ತಿಳಿಸಿತು. ‘ಹೆಣ್ಣು ಜಗದ ಕಣ್ಣು’ ಅಂತ ಹಾಡಿ ಹೊಗಳಿದರೆ ಸಾಲದು, ಅವಳ ಕೈಯನ್ನು ಬಲಪಡಿಸಬೇಕಾದ್ದೂ ಅತ್ಯಗತ್ಯ.

ಕಾರಣ, ಹೆಣ್ಣಿನ ಕೈಗೆ ನೀಡಿದ ಹಣವು ಭೂಮಿಗೆ ಹಾಕಿದ ಬೀಜಗಳಿದ್ದಂತೆ, ಅವು ಇಂದಲ್ಲಾ ನಾಳೆ ಫಲವನ್ನು ಕೊಟ್ಟೇ ಕೊಡುತ್ತವೆ. ಶತಶತಮಾನಗಳಿಂದ ಗಂಡಿನಿಂದ ತುಳಿತಕ್ಕೊಳ ಗಾಗುತ್ತಲೇ ಬಂದಿದೆ ಸೀಸಂಕುಲ. ಮಹಾಭಾರತದಲ್ಲಿ ಅಂಬೆ, ಅಂಬಿಕೆ, ಅಂಬಾಲಿಕೆ, ದ್ರೌಪದಿ, ಕುಂತಿ, ಗಾಂಧಾರಿ ಇವರ ಜೀವನಚರಿತ್ರೆಯನ್ನು ಅವಲೋಕಿಸಿದರೆ ಇದು ಅರಿ ವಾಗುತ್ತದೆ. ರಜಪೂತರ ಜೋಹರ್ ಪದ್ಧತಿ, ಸತಿಪದ್ಧತಿ ಮಾತ್ರವಲ್ಲದೆ ಬಹಳಷ್ಟು ಕಡೆ ಕಾಣಬರುವ ವರದಕ್ಷಿಣೆ ಪಿಡುಗು, ದೇವದಾಸಿ ಪದ್ಧತಿ ಇಂಥವನ್ನೆಲ್ಲ ನೋಡಿದ ಕವಯಿತ್ರಿ ಯೊಬ್ಬರು, ‘ಹೆಣ್ಣಾಗಿ ಹುಟ್ಟೋದಕ್ಕಿಂತ ಮಣ್ಣಾಗಿ ಹುಟ್ಟಿದ್ದರೆ, ಮಣ್ಣಿನ ಮೇಲೊಂದು ಮರವಾಗಿ ಹುಟ್ಟಿದ್ದರೆ, ಪುಣ್ಯವಂತರಿಗೆ ನೆರಳಾಗುತ್ತಿದ್ದೆ’ ಎಂದು ಬರೆದಿದ್ದಾರೆ.

ಪ್ರಸ್ತುತ, ಕರ್ನಾಟಕ ಸರಕಾರದ ಗೃಹಲಕ್ಷ್ಮಿ ಯೋಜನೆಯು, ಕನ್ನಡದ ಎಷ್ಟೊಂದು ಮಾತೆ ಯರು ತಲೆಯೆತ್ತಿ ಬದುಕುವಂತೆ ಮಾಡಿದೆ. “ವಿಷ ಕುಡಿದು ಸಾಯೋಕೂ ನನ್ನ ಕಡೆ ಹತ್ತು ಪೈಸೆ ಇಲ್ಲ" ಅಂತ ಹಳ್ಳಿಯ ಹೆಂಗಸರು ಬೇಸರವಾದಾಗ ಹೇಳುವುದನ್ನ ಕೇಳಿರುವೆ. ಆದ ರಿಂದು, ಹೆಣ್ಣಿನ ಖಾತೆಗೆ ಪ್ರತಿ ತಿಂಗಳೂ 2000 ರು. ಜಮೆಯಾಗುತ್ತಿರುವುದರಿಂದ ಆಕೆ ಗೌರವಯುತವಾಗಿ ಬದುಕುವಂತಾಗಿದೆ. ಈ ಯೋಜನೆಗೆ ಸರಕಾರವು ಎಷ್ಟು ಖರ್ಚು ಮಾಡುತ್ತದೆ ಎಂಬುದಕ್ಕಿಂತ, ಅದರಿಂದ ಎಷ್ಟು ಬಡ ಮಹಿಳೆಯರ ಕಣ್ಣೀರನ್ನು ಒರೆಸು ತ್ತದೆ ಎಂಬುದನ್ನು ಪರಿಗಣಿಸಬೇಕಾದ್ದು ಮುಖ್ಯ.

ಯುವನಿಧಿ ಯೋಜನೆ

ಯುವಜನರು ಈ ದೇಶದ ಆಶಾಕಿರಣ. ಕರ್ನಾಟಕದ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3000 ಉದ್ಯೋಗ ಪಡೆಯಬೇಕು, ಇಲ್ಲದಿದ್ದರೆ ಈ ಯೋಜನೆಯಿಂದ ಅವರಿಗೆ ಹಣವು ಜಮೆಯಾಗುವುದನ್ನು ನಿಲ್ಲಿಸಲಾಗುತ್ತದೆ. ಇಲ್ಲಿಯವರೆಗೆ ಶಿಷ್ಯವೇತನ, ಉಚಿತ ಹಾಸ್ಟೆಲ್, ಬೈಸಿಕಲ್, ಸಮವಸ್ತ್ರ, ಮಧ್ಯಾಹ್ನದ ಬಿಸಿಯೂಟ ಮುಂತಾದ ಯೋಜನೆಗಳನ್ನು ಸರಕಾರಗಳು ನೀಡುತ್ತಾ ಬಂದಿದ್ದುಂಟು; ಅವಕ್ಕೆ ಇರದಿದ್ದ ವಿರೋಧ ಇಂದಿನ ಈ ಯೋಜ ನೆಗೆ ಹೊಮ್ಮಿರುವುದೇಕೆ? ಇಂದಿನ ಯುವಕನೇ ನಾಳಿನ ನಾಯಕ. ಇಂದು ಶಿಷ್ಯ ವೇತನ ಪಡೆದಾತನೇ ಮುಂದೆ ಅಧಿಕಾರಿ, ನ್ಯಾಯಾಧೀಶ, ರಾಜಕಾರಣಿ, ವಿಜ್ಞಾನಿ, ತಂತ್ರ ಜ್ಞಾನಿ ಆಗಬಹುದು, ಆಗ ಆತ ಈ ಸಮಾಜದ ಋಣವನ್ನು ತೀರಿಸಬಹುದಲ್ಲವೇ?

ಅನ್ನಭಾಗ್ಯ ಯೋಜನೆ

‘ಅನ್ನ ದೇವರ ಮುಂದೆ ಇನ್ನು ದೇವರುಂಟೆ, ಜಗದೊಳು ಅನ್ನವೇ ದೈವ’ ಎಂದಿದ್ದಾನೆ ಸರ್ವಜ್ಞ. ದೇವರನ್ನು ಹುಡುಕಿಕೊಂಡು ಹೋಗುವ ಅಗತ್ಯವಿಲ್ಲ, ಹಸಿದವರಿಗೆ ಅನ್ನ ಹಾಕಿದರೆ ದೇವರೇ ನಮ್ಮನ್ನು ಹುಡುಕಿಕೊಂಡು ಬರುತ್ತಾನೆ. ಕರ್ನಾಟಕ ಸರಕಾರವು 2023ರ ಜುಲೈ 1ರಿಂದ, ಬಿಪಿಎಲ್ ಕುಟುಂಬಗಳಿಗೆ 10 ಕೆ.ಜಿ. ಅಕ್ಕಿಯು ಉಚಿತವಾಗಿ ದೊರಕುವಂತೆ ಮಾಡಿದೆ. ಸಾರ್ವಜನಿಕ ಪಡಿತರ ವ್ಯವಸ್ಥೆಯು ಸಾಕಷ್ಟು ವರ್ಷಗಳ ಹಿಂದಿ ನಿಂದಲೇ ಜಾರಿಯಲ್ಲಿದೆ.

ಬಡವನ ಹೊಟ್ಟೆ ತುಂಬಿಸಬೇಕಾದ್ದು ಎಲ್ಲಾ ಸರಕಾರಗಳ ಆದ್ಯ ಕರ್ತವ್ಯ. ಆಹಾರ ಭದ್ರತಾ ಕಾಯ್ದೆಯೂ ಜಾರಿಗೆ ಬಂದಿದೆ. ಆದರೆ ಅಂದು ಹೊಮ್ಮದಿದ್ದ ವಿರೋಧ ಇಂದೇಕೆ? ಜನಸಂಖ್ಯೆಯ ಆಧಿಕ್ಯ ಮತ್ತು ವೈವಿಧ್ಯವಿರುವ ದೇಶಗಳಿಗೆ ಇಂಥ ಯೋಜನೆಗಳು ಅತ್ಯ ಗತ್ಯ. ದೇಶದ ಯಾವುದೇ ಪ್ರಜೆಯು ಹಸಿದು ಮಲಗಬಾರದು ಎಂಬುದೇ ಸಮಾಜ ವಾದದ ಪರಿಕಲ್ಪನೆಯ ಮೂಲಸೆಲೆ. ತಿನ್ನಲು ಅನ್ನ, ಕುಡಿಯಲು ನೀರು, ಮಾನ ಮುಚ್ಚಲು ಬಟ್ಟೆ ಹಾಗೂ ಇತರ ಅಗತ್ಯ ಸೌಕರ್ಯಗಳನ್ನು ಕೊಡಲಾಗದಿದ್ದ ಮೇಲೆ ಪ್ರಜಾಪ್ರಭುತ್ವಕ್ಕೆ ಬೆಲೆಯೆಲ್ಲಿದೆ?

ಶಕ್ತಿ ಯೋಜನೆ

2023ರ ಜೂನ್ 11ರಿಂದ, ಕರ್ನಾಟಕದ ಮಹಿಳೆಯರು ರಾಜ್ಯದ ಯಾವುದೇ ಭಾಗಕ್ಕಾ ದರೂ ಸರಕಾರಿ ಬಸ್ಸುಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದಾಗಿದೆ. ‘ಅರಿವನ್ನು ದಕ್ಕಿಸಿ ಕೊಳ್ಳಲು ಒಂದೋ ದೇಶವನ್ನು ಸುತ್ತಬೇಕು, ಇಲ್ಲವೇ ಕೋಶವನ್ನು ಓದಬೇಕು’ ಎಂದಿದ್ದಾರೆ ಬಲ್ಲವರು. ಹೆಣ್ಣು ಎಂಬ ಒಂದೇ ಕಾರಣಕ್ಕೆ ಆಕೆಯ ವಿದ್ಯಾಭ್ಯಾಸ, ಬಟ್ಟೆ-ಬರೆ, ಊಟೋಪಚಾರದಲ್ಲಿ ತಾರತಮ್ಯ ಮಾಡುತ್ತಲೇ ಬಂದಿದ್ದಾರೆ ನಮ್ಮ ಸಮಾಜದ ಕೆಲವರು. ಹೆಣ್ಣಿನ ಸ್ವಾತಂತ್ರ್ಯದ ಮೊದಲ ಹೆಜ್ಜೆಯೇ ಚಲನಶೀಲತೆ. ಯಾವಾಗ ಹೆಣ್ಣು ಮನೆಯ ನಾಲ್ಕು ಗೋಡೆಯಿಂದ ಹೊರಬಂದು ಚಲಿಸಲು ಪ್ರಾರಂಭಿಸುವಳೋ, ಆಗ ಅವಳು ಸ್ವತಂತ್ರಳು. ಆಕೆ ದೇವಸ್ಥಾನಕ್ಕೆ, ತವರಿಗೆ, ಮಗಳ ಮನೆಗೆ, ಶಾಲೆಗೆ, ನೌಕರಿಗೆ ಹೀಗೆ ಎಲ್ಲಿಗೆ ಬೇಕಿದ್ದರೂ ಹೋಗಲಿ, ಒಟ್ಟಾರೆ ಸ್ವತಂತ್ರವಾಗಿ ನಿರ್ಭೀತಿಯಿಂದ ಈ ನಾಡನ್ನು ನೋಡಲಿ ಎಂಬುದೇ ಸರಕಾರದ ಆಶಯವಾಗಿದೆ. ‘ಹೆಣ್ಣೊಬ್ಬಳು ನಿರ್ಭೀತಿಯಿಂದ ಮಧ್ಯ ರಾತ್ರಿ ಯಲ್ಲಿ ರಸ್ತೆಯಲ್ಲಿ ಓಡಾಡಿದಾಗ ಮಾತ್ರವೇ ನಿಜವಾದ ರಾಮರಾಜ್ಯ ಬಂದಂತೆ’ ಎಂದಿ ದ್ದಾರೆ ಮಹಾತ್ಮ ಗಾಂಧೀಜಿ. ಅಂತೆಯೇ, ಗಾಂಧೀಜಿ ಕಂಡ ರಾಮರಾಜ್ಯದ ಕನಸು ಕರ್ನಾಟಕದಲ್ಲಿಂದು ನನಸಾಗಿದೆ; ಅಂಬೇಡ್ಕರ್ ಕಂಡಿದ್ದ ಭೀಮರಾಜ್ಯದ ಕನಸು ನನಸಾಗಬೇಕಿದೆ!

ಕರ್ನಾಟಕ ಸರಕಾರದ ಆರ್ಥಿಕತೆ

ಕರ್ನಾಟಕ ಸರಕಾರವು 2024ರ ಫೆಬ್ರವರಿ 16ರಂದು, 2024-25ರ ಸಾಲಿನ ಬಜೆಟ್ ಅನ್ನು ಮಂಡಿಸಿತು. ಬಜೆಟ್‌ನ ವೆಚ್ಚ ರು. 3,46,409 ಕೋಟಿಯಷ್ಟಿದ್ದರೆ, ಒಟ್ಟು ಸ್ವೀಕೃತಿಯು ರು. 2,63,428 ಕೋಟಿಯಷ್ಟಿತ್ತು. ಈ ಬಜೆಟ್‌ನಲ್ಲಿ 53,674 ಕೋಟಿ ರು. ಮೊತ್ತವನ್ನು ಸರಕಾ ರವು ಪಂಚ ಗ್ಯಾರಂಟಿಗಳಿಗೆ ನಿಗದಿ ಮಾಡಿತ್ತು. ಈ ಅಂಕಿ-ಅಂಶಗಳನ್ನು ನೋಡಿದಾಗ, ಇದು ರಾಜ್ಯದ ಮೇಲೆ ಹೊರೆಯೇ? ಬಡವರು, ನಿರ್ಗತಿಕರು, ಹೆಂಗಸರು, ಯುವಕರು ಈ ರಾಜ್ಯಕ್ಕೆ ಭಾರವೇ? ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಉತ್ತರ- ಖಂಡಿತ ಇಲ್ಲ. ಈ ಅಂಕಿ-ಅಂಶ ಗಳನ್ನು ನೋಡಿದಾಗ, ಈಗ ಸಾಲ ಮಾಡಿ ಬಡವರಿಗೆ, ಯುವಕರಿಗೆ, ಹೆಂಗಸರಿಗೆ ಗ್ಯಾರಂಟಿ ಯೋಜನೆ ಗಳನ್ನು ನೀಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತದೆ.

ಸಾಲ ಮಾಡುವುದು ತಪ್ಪು ಎಂದು ಭಾವಿಸಿದರೆ ಅದು ಮೂರ್ಖತನದ ಪರಮಾವಧಿ. ಸಾಲ ಮಾಡದವರು ಈ ದೇಶದಲ್ಲಿದ್ದಾರೆಯೇ? ವಾಹನ, ಮನೆ ಖರೀದಿಗೆ ನಾವು ಸಾಲ ಮಾಡುವು ದಿಲ್ಲವೇ? 10 ಲಕ್ಷ ರು.ಬೆಲೆಯ ಕಾರನ್ನು ಖರೀದಿಸುವ ನಾವು ಅದಕ್ಕಾಗಿ 8 ಲಕ್ಷ ರು. ಸಾಲ ಮಾಡುತ್ತೇವೆ, ಅದು ಯಾವ ಭರವಸೆಯ ಮೇಲೆ? ಈ ಸಾಲವನ್ನು ತೀರಿಸಿಯೇ ಸಾಯುತ್ತೇನೆ ಎಂಬ ಹಠದ ಮೇಲೆ. ಇಲ್ಲಿಯವರೆಗೆ ಈ ದೇಶ, ರಾಜ್ಯ ಮಾಡಿದ ಸಾಲವನ್ನು ಯಾವುದೇ ರಾಜಕಾರಣಿ, ನ್ಯಾಯಾಧೀಶ, ಸಿನಿಮಾ ನಟ, ಉದ್ಯಮಿ ತೀರಿಸಿದ್ದಾರೆಯೇ? ಇದನ್ನು ತೀರಿ ಸಿದ್ದು ನಾವೆಲ್ಲಾ ಸೇರಿ ಚುನಾಯಿಸುವ ಸರಕಾರವೇ. ಇದನ್ನು ವಿಶಾಲಾರ್ಥದಲ್ಲಿ ಮನ ಗಾಣಬೇಕು.

ಸಂವಿಧಾನದ 21ನೇ ವಿಧಿಯು ನಮಗೆಲ್ಲರಿಗೂ ಘನತೆಯಿಂದ ಬದುಕುವ ಹಕ್ಕನ್ನು ನೀಡಿದೆ. ಆದರೆ ದೇಶದ ಸ್ಥಿತಿಯನ್ನು ನೋಡಿದರೆ, ಗಣನೀಯ ಸಂಖ್ಯೆಯ ಜನರ ಬದುಕುವ ಹಕ್ಕನ್ನು ಕಸಿಯಲಾಗಿದೆ. ಭಾರತದ ಸಂಪತ್ತಿನ ಸಿಂಹಪಾಲು ಕೆಲವೇ ಜನರ ಕೈಯಲ್ಲಿ ಸೇರಿ ಕೊಂಡಿದೆ. ‘ಸ್ಟೇಟ್ ಆಫ್‌ ವರ್ಕಿಂಗ್ ಇಂಡಿಯಾ ರಿಪೋರ್ಟ್, 2023’ ಅನ್ನು ಅಜೀಂ ಪ್ರೇಮ್‌ ಜಿ ವಿಶ್ವವಿದ್ಯಾಲಯವು ಪ್ರಕಟಿಸಿದೆ.

ಮಹಿಳೆಯರು ಕೆಲಸದಲ್ಲಿ ಭಾಗವಹಿಸುವ ಪ್ರಮಾಣವು 1980ರಲ್ಲಿ ಶೇ.52ರಷ್ಟು ಇದ್ದುದು ಈಗ ಶೇ.39.1ಕ್ಕೆ ಇಳಿದಿದೆ. 25 ವರ್ಷದೊಳಗಿನ ಶೇ.42 ರಷ್ಟು ಪದವೀಧರರು ಇಂದು ದೇಶ ದಲ್ಲಿ ನಿರುದ್ಯೋಗಿಗಳು. ನರೇಗಾ ಯೋಜನೆ ಪಡಿತರ ವ್ಯವಸ್ಥೆಯು ಶೇ.50 ರಷ್ಟು ಜನರನ್ನು ಬಡತನ ರೇಖೆಗಿಂತ ಕೆಳಗೆ ಹೋಗದಂತೆ ತಡೆದಿದೆ. ಈ ಯೋಜನೆಯನ್ನು ನಿಲ್ಲಿಸಿದರೆ ರಾತ್ರೋರಾತ್ರಿ ಶೇ.50ರಷ್ಟು ಜನರು ಬಡತನ ರೇಖೆಗಿಂತ ಕೆಳಗೆ ಹೋಗುತ್ತಾರೆ.

ಸರಿಪಡಿಸಬೇಕಿರುವುದು ಯಾವುದನ್ನು?

ಹತ್ತು ವರ್ಷಗಳಲ್ಲಿ, ಈ ದೇಶದ ಬಂಡವಾಳಶಾಹಿಗಳ ಸುಮಾರು 15 ಲಕ್ಷ ಕೋಟಿ ರು. ಗಳಷ್ಟು ಸಾಲವನ್ನು ಮನ್ನಾ ಮಾಡಲಾಗಿದೆ, ಕಾರ್ಪೊರೇಟ್ ಕಂಪನಿಗಳ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಲಾಗಿದೆ. ಇದರಿಂದಾಗಿ, ವರ್ಷಕ್ಕೆ 1 ಲಕ್ಷ ಕೋಟಿ ರು. ಸ್ವೀಕೃತಿ ಪಡೆದ ಕಾರ್ಪೊರೇಟ್ ಕಂಪನಿಗಳು ದೇಶದ ಅಭಿವೃದ್ಧಿ ಮಾಡದೆ, ತಮ್ಮ ಅಭಿವೃದ್ಧಿಗೆ ಮುಂದಾಗಿವೆ. ಹೀಗಾಗಿ, ದೇಶದ ಅಭಿವೃದ್ಧಿಯ ಬದಲು ನಿರುದ್ಯೋಗದ ಅಭಿವೃದ್ಧಿ ಆದಂತಾಗಿದೆ. ಭಾರತ ದಲ್ಲಿ ಕೋಟ್ಯಧಿಪತಿಗಳು ಶೇ.10ರಷ್ಟು ಪ್ರಮಾಣದಲ್ಲಿದ್ದರೆ, ಉಚಿತ ಯೋಜನೆ ಪಡೆಯುವವರು ಶೇ.90ರಷ್ಟು ಇದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ‘ಪ್ರಭು’ ಎನಿಸಿಕೊಂಡವರು ಬಹುತ್ವದ ಪ್ರತಿನಿಧಿ ಆಗ ಬೇಕೇ ಹೊರತು, ಕುಲೀನರ ಕೈಯಾಳು ಆಗ ಬಾರದು.

ಒಂದು ವೇಳೆ ಹಾಗಾದರೆ, ಅದು ‘ಡೆಮಾಕ್ರಸಿ’ ಅಲ್ಲ, ‘ಅರಿಸ್ಟೋಕ್ರಸಿ’ ಆದಂತೆ! ಕರ್ನಾಟಕ ಸರಕಾರವು ತನ್ನ ಬಜೆಟ್‌ನ ಶೇ.32.4 ರಷ್ಟು ಹಣವನ್ನು ಜನಕಲ್ಯಾಣ ಯೋಜನೆಗಳಿಗೆ ವಿನಿಯೋಗಿಸುತ್ತಿದೆ. ಇದರಿಂದಾಗಿ ಪ್ರತಿ ಕುಟುಂಬಕ್ಕೆ ವಾರ್ಷಿಕ ರು.25000ರಿಂದ ರು.55000 ದವರೆಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಹಣ ದೊರೆಯುತ್ತಿದೆ. ಇದರಿಂದ ಮಾನವ ಸಂಪ ನ್ಮೂಲದ ಅಭಿವೃದ್ಧಿಯಾಗುವುದಲ್ಲದೆ, ಇದೇ ವರ್ಗವು ಭವಿಷ್ಯದಲ್ಲಿ ನೂರಾರು ಲಕ್ಷ ಕೋಟಿ ರುಪಾಯಿಗಳ ಭೌತಿಕ ಅಭಿವೃದ್ಧಿಯನ್ನು ಸೃಷ್ಟಿಸುವುದು ಸಾಧ್ಯ ವಾಗುತ್ತದೆ.

ಸರಕಾರ ಮಾಡಬೇಕಿರುವುದೇನು?

ಗ್ಯಾರಂಟಿ ಯೋಜನೆಗಳನ್ನು ಘೋಷಿಸುವ ಮೂಲಕ ಸರಕಾರವು ‘ಬಡವರ ಬಂಧು’ ಆಗಿದೆ, ನಿಜ. ಆದರೆ ಮಾಡಿದ ಸಾಲವನ್ನು ತೀರಿಸಲು ತಕ್ಕ ಯೋಜನೆಯನ್ನು ಅದು ರೂಪಿಸಬೇಕು, ಅರ್ಹ ಫಲಾನುಭವಿಗಳನ್ನು ಹುಡುಕಬೇಕು, ತೆರಿಗೆ ಸೋರಿಕೆಯನ್ನು ತಡೆಗಟ್ಟಬೇಕು, ಕೇಂದ್ರ ಸರಕಾರದಿಂದ ತನಗೆ ನ್ಯಾಯುಯುತವಾಗಿ ಬರಬೇಕಾದ ಪಾಲನ್ನು ದಕ್ಕಿಸಿಕೊಳ್ಳ ಬೇಕು, ಸಮಾಜದ ಕೆಲವು ವರ್ಗಗಳಿಗೆ ಅನವಶ್ಯಕವಾಗಿ ನೀಡಿರುವ ಐಷಾರಾಮಿ ಸೌಲಭ್ಯ ವನ್ನು ಹಿಂಪಡೆಯಬೇಕು ಮತ್ತು ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ನಷ್ಟ ಉಂಟು ಮಾಡು ವವರಿಗೆ ಉಗ್ರಶಿಕ್ಷೆ ನೀಡಬೇಕು.

ಕೊನೆಯ ನುಡಿ

ಬಂಡವಾಳಶಾಹಿ ವಾದವನ್ನು ಮಣಿಸಲು ಫ್ರಾನ್ಸ್ ನಲ್ಲಿ ರಕ್ತಕ್ರಾಂತಿಯಾಯಿತು. ಅಲ್ಲಿನ ರಾಜ 16ನೇ ಲೂಯಿಯ ತಲೆಕಡಿದು ಸಾಯಿಸಲಾಯಿತು. ರಷ್ಯಾದಲ್ಲಿ ಜಾರ್ ವಂಶದ ನಿಕೋಲಸ್ ಎಂಬ ಅರಸ ಆಳುತ್ತಿದ್ದ, ಅವನ ಜತೆಗೆ ರಾಸ್‌ಪುಟಿನ್ ಎಂಬ ದುಷ್ಟ ಸನ್ಯಾಸಿ ಯಿದ್ದ. ಇವರ ವಿರುದ್ಧ ಪಕ್ಷವೊಂದನ್ನು ಕಟ್ಟಿ, ನಿಕೋಲಸ್‌ನನ್ನು ಕೊಂದು, 1917ರಲ್ಲಿ ಸೋವಿಯತ್ ಒಕ್ಕೂಟವನ್ನು ಸ್ಥಾಪಿಸಲಾಯಿತು. ಫ್ರಾನ್ಸ್, ರಷ್ಯಾ, ಅಮೆರಿಕ ದಲ್ಲಾದ ಇಂಥ ರಕ್ತಕ್ರಾಂತಿ ಭಾರತದ ಲ್ಲಾಗಿಲ್ಲ. ಏಕೆಂದರೆ, ಈ ದೇಶದಲ್ಲಿ ‘ಗ್ಯಾರಂಟಿ ಯೋಜನೆ’ ಗಳಂಥ ಸಮಾಜವಾದಿ ಮಾರ್ಗೋಪಾಯಗಳಿವೆ. ಅಧಿಕಾರಿಗಳು, ಶ್ರೀಮಂತರು, ಪತ್ರ ಕರ್ತರು ಈ ಯೋಜನೆಗಳನ್ನು ಟೀಕಿಸಬಹುದು. ಆದರೆ, ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ.

ನಮಗೆಲ್ಲರಿಗೂ ಬೇಕಿರುವುದು ಅಗಲವಾದ ರಸ್ತೆಗಳಲ್ಲ, ಭವ್ಯ ಬಂಗಲೆಗಳಲ್ಲ, ಜಗಮಗಿ ಸುವ ವಿದ್ಯುತ್ ದೀಪಗಳಲ್ಲ, ಐಷಾರಾಮಿ ಕಾರುಗಳಲ್ಲ, ವೇಗವಾಗಿ ಚಲಿಸುವ ರೈಲು ಗಳಲ್ಲ. ನಮಗೆ ಬೇಕಿರುವುದು- ತುತ್ತು ಅನ್ನ ತಿನ್ನೋಕೆ, ಬೊಗಸೆ ನೀರು ಕುಡಿಯೋಕೆ, ತುಂಡು ಬಟ್ಟೆ ಸಾಕು ಮಾನ ಮುಚ್ಚೋಕೆ, ಅಂಗೈ ಅಗಲ ಜಾಗ ಸಾಕು ಹಾಯಾಗಿರೋಕೆ!

(ಲೇಖಕರು ರಾಮಮನೋಹರ್ ಲೋಹಿಯಾ ವಿಚಾರ ವೇದಿಕೆಯ ಅಧ್ಯಕ್ಷರು)