ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr Vijay Darda Column: ವಿಮಾನಯಾನ ಸುರಕ್ಷತೆಯಲ್ಲಿ ಭಾರತವೇಕೆ ಹಿಂದಿದೆ ?

ಭಾರತದಲ್ಲಿ ಜಗತ್ತಿನಲ್ಲೇ ಮೂರನೇ ಅತಿಹೆಚ್ಚು ಜನರು ವಿಮಾನ ಪ್ರಯಾಣ ಮಾಡುತ್ತಾರೆ. ಆದರೆ ವೈಮಾನಿಕ ಸುರಕ್ಷತೆಯಲ್ಲಿ ನಮ್ಮ ದೇಶ 48ನೇ ಸ್ಥಾನದಲ್ಲಿದೆ. ಸಾರಿಗೆ ಕ್ಷೇತ್ರದಲ್ಲಿ ಸಂಭವಿಸುವ ಅಪಘಾತವನ್ನು ಗಮನಿಸಿದರೆ ವಿಮಾನಯಾನ ಅತ್ಯಂತ ಸುರಕ್ಷಿತ ಎಂಬುದು ನಿಜ. ಆ ಸುರಕ್ಷತೆ ಎಷ್ಟು ಹೆಚ್ಚುತ್ತದೆಯೋ ಅಷ್ಟೇ ವೇಗದಲ್ಲಿ ದೇಶ ಅಭಿವೃದ್ಧಿ ಹೊಂದುತ್ತದೆ. 2024ರಲ್ಲಿ ಭಾರತ ಸರಕಾರ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಹಳೆಯ ನಿಯಮಗಳನ್ನು ಪರಿಷ್ಕಾರ ಮಾಡಿದೆ. ಅದರಿಂದಾಗಿ ಸಾಕಷ್ಟು ಬದಲಾವಣೆ ಆಗುವ ನಿರೀಕ್ಷೆಯಿದೆ.

ವಿಮಾನಯಾನ ಸುರಕ್ಷತೆಯಲ್ಲಿ ಭಾರತವೇಕೆ ಹಿಂದಿದೆ ?

ಸಂಗತ

ನೀವು ವಿಮಾನದಲ್ಲಿ ಎಷ್ಟೊಂದು ಪ್ರಯಾಣ ಮಾಡುತ್ತೀರಿ’ ! ಹಾಗಂತ ನನ್ನ ಅನೇಕ ಸ್ನೇಹಿತರು ಹಾಗೂ ಹಿತೈಷಿಗಳು ಅಹಮದಾಬಾದ್ ವಿಮಾನ ದುರಂತದ ನಂತರ ಸೂಕ್ಷ್ಮವಾಗಿ ವಿಚಾರಿಸಿಕೊಂಡರು. ನೇರವಾಗಿ ಹೇಳದೆ ಇದ್ದರೂ ಅವರ ಮಾತಿನಲ್ಲಿ ನಾನು ಕೂಡ ಅಪಾಯ ದಲ್ಲಿದ್ದೇನೆ ಎಂಬ ಕಳವಳ ಕಾಣಿಸುತ್ತಿತ್ತು. ವೈಮಾನಿಕ ಸುರಕ್ಷತೆ ಬಗ್ಗೆ ಅವರಲ್ಲಿ ಆತಂಕವಿತ್ತು.

‘ಅಹಮದಾಬಾದ್‌ನಲ್ಲಿ ನಡೆದಿದ್ದು ಒಂದು ಅಪಘಾತವಷ್ಟೆ. ನಿಜ ಹೇಳಬೇಕೆಂದರೆ, ಎಲ್ಲಾ ರೀತಿಯ ಸಾರಿಗೆಯ ಪೈಕಿ ವಿಮಾನ ಸಾರಿಗೆ ಅತ್ಯಂತ ಸುರಕ್ಷಿತ ಎಂದು ಅವರಿಗೆ ವಿವರಿಸಿ ಹೇಳಿದೆ. ಜಗತ್ತಿನಲ್ಲಿ ಪ್ರತಿ ವರ್ಷ ಸಂಭವಿಸುವ ಬೇರೆ ಬೇರೆ ರೀತಿಯ ಅಪಘಾತಗಳ ಅಂಕಿ ಸಂಖ್ಯೆಗಳನ್ನು ವಿಶ್ಲೇಷಿಸಿ ನೋಡಿದರೆ, ವಿಮಾನದಲ್ಲಿ ಪ್ರಯಾಣಿಸವವರು ಮರಣ ಹೊಂದುವ ಸಾಧ್ಯತೆ 1.10 ಕೋಟಿಯಲ್ಲಿ 1 ಮಾತ್ರ. ಆದರೆ ಇನ್ನಿತರ ರೀತಿಯ ಸಾರಿಗೆಯಲ್ಲಿ ಈ ಸಂಖ್ಯೆ ಬಹಳ ಹೆಚ್ಚಿದೆ!

ವಿಮಾನಯಾನ ಏಕೆ ಸುರಕ್ಷಿತ ಎಂಬುದನ್ನು ಸಾಬೀತುಪಡಿಸಲು ನಾನು ಅವರಿಗೆ ಇನ್ನಷ್ಟು ಅಂಕಿಅಂಶಗಳನ್ನು ನೀಡಿದೆ. ಉದಾಹರಣೆಗೆ, ಭಾರತದಲ್ಲಿ ಕಳೆದ ವರ್ಷ 1.80 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ರೈಲ್ವೆ ಅಪಘಾತಗಳಲ್ಲಿ ನಮ್ಮ ದೇಶದಲ್ಲಿ ಪ್ರತಿ ವರ್ಷ ಸರಾಸರಿ 20000 ಜನರು ಮರಣ ಹೊಂದುತ್ತಾರೆ. ಅದಕ್ಕೆ ಹೋಲಿಸಿದರೆ ವಿಮಾನ ಪ್ರಯಾಣ ಬಹಳ ಸುರಕ್ಷಿತ. ಆದರೂ ಈ ವಿಷಯದಲ್ಲಿ ನನಗೆ ಕೆಲವು ಪ್ರಶ್ನೆಗಳಿವೆ.

ಇದನ್ನೂ ಓದಿ: Dr Vijay Darda Column: ತರೂರ್‌ ಬಗ್ಗೆ ಕಾಂಗ್ರೆಸ್‌ಗೇಕೆ ಇಷ್ಟೊಂದು ಚಿಂತೆ ?

ಅದರಲ್ಲೂ ಅಹಮದಾಬಾದ್ ವಿಮಾನ ದುರಂತದ ನಂತರ ಆ ಪ್ರಶ್ನೆಗಳು ಪದೇಪದೇ ಕಾಡಲಾರಂಭಿಸಿವೆ. ಜಗತ್ತಿನ ಬೇರೆ ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ವಿಮಾನದಲ್ಲಿ ಪ್ರಯಾಣಿಸುವ ಜನರ ಸಂಖ್ಯೆ ಬಹಳ ದೊಡ್ಡದಿದೆ. ಈ ವಿಷಯದಲ್ಲಿ ನಮ್ಮ ದೇಶಕ್ಕೆ ಜಗತ್ತಿನಲ್ಲೇ ಮೂರನೇ ರ‍್ಯಾಂಕ್. ಪ್ರಪಂಚದಲ್ಲಿ ಅತಿಹೆಚ್ಚು ಜನರು ವಿಮಾನದಲ್ಲಿ ಪ್ರಯಾಣಿಸುವುದು ಅಮೆರಿಕದಲ್ಲಿ.

ಎರಡನೇ ಸ್ಥಾನದಲ್ಲಿ ಚೀನಾ ಇದೆ. ಮೂರನೇ ಸ್ಥಾನದಲ್ಲಿ ನಾವಿದ್ದೇವೆ. 2025ರಲ್ಲಿ ಅಂತ್ಯಗೊಂಡ ಹಣಕಾಸು ವರ್ಷದಲ್ಲಿ ಭಾರತದ ದೇಸಿ ವಿಮಾನ ಪ್ರಯಾಣಿಕರ ಸಂಖ್ಯೆ 16.54 ಕೋಟಿಯನ್ನು ತಲುಪಿದೆ. ಇದು 2023-24ನೇ ಸಾಲಿಗಿಂತ ಶೇ.7.6ರಷ್ಟು ಹೆಚ್ಚು. ಈ ಸಂಖ್ಯೆ ಇನ್ನು ಮುಂದೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ಏಕೆಂದರೆ ನಮ್ಮ ದೇಶದ ಅನೇಕ ಸಣ್ಣಪುಟ್ಟ ನಗರಗಳಲ್ಲಿ ವಿಮಾನ ನಿಲ್ದಾಣವಿದ್ದರೂ ಅಲ್ಲಿಗೆ ಇನ್ನೂ ವಿಮಾನ ಸೇವೆ ಆರಂಭಗೊಂಡಿಲ್ಲ.

ಕ್ರಮೇಣ ಅಲ್ಲಿಗೂ ವಿಮಾನಗಳು ಹಾರಲು ಆರಂಭಿಸುತ್ತವೆ. ಆಗ ವಿಮಾನಗಳಲ್ಲಿ ಪ್ರಯಾಣಿಸು ವವರ ಸಂಖ್ಯೆ ಇನ್ನೂ ಹೆಚ್ಚುತ್ತದೆ. ಹೀಗಾಗಿ ಆತಂಕಕಾರಿ ಪ್ರಶ್ನೆಯೊಂದನ್ನು ನಾವು ಕೇಳಿಕೊಳ್ಳಲೇ ಬೇಕಾಗಿದೆ.

ಏಕೆ ವಿಮಾನಯಾನ ಸುರಕ್ಷತೆಯಲ್ಲಿ ಭಾರತ ಹಿಂದುಳಿದಿದೆ? ಏಕೆ ‘ಹಿಂದುಳಿದಿದೆ’ ಎಂದು ಹೇಳುತ್ತಿದ್ದೇನೆ ಅಂದರೆ, ಜಗತ್ತಿನಲ್ಲೇ ವೈಮಾನಿಕ ಸುರಕ್ಷತೆಯಲ್ಲಿ ನಮ್ಮ ದೇಶಕ್ಕೆ 48ನೇ ಸ್ಥಾನ. ವೊಂದು ಪತನಗೊಂಡಿದೆ ಅಂತಾದರೆ ಎಲ್ಲೋ ಏನೋ ತಪ್ಪಾಗಿದೆ ಎಂದೇ ಅರ್ಥ! ವಿಮಾನ ಯಾನದ ಇತಿಹಾಸದಲ್ಲಿ ಇಂತಹ ಅನೇಕ ಮಹಾ ಪ್ರಮಾದಗಳ ಉದಾಹರಣೆ ಈಗಾಗಲೇ ದಾಖಲಾಗಿದೆ. ಅದರ ಗಂಭೀರತೆ ನಿಮಗೆ ಅರ್ಥವಾಗಲಿ ಎಂದು ಭಾರತದಲ್ಲಿ ಈ ಹಿಂದೆ ಸಂಭವಿಸಿದ ಕೆಲ ದೊಡ್ಡ ವೈಮಾನಿಕ ದುರಂತಗಳನ್ನು ನೆನಪಿಸುತ್ತೇನೆ.

1978ರ ಜನವರಿ 1ರಂದು ಏರ್ ಇಂಡಿಯಾ ಬೋಯಿಂಗ್ 747 ವಿಮಾನ ದುಬೈಗೆ ಹೊರಟಿತ್ತು. ಅದು ಮುಂಬೈನಿಂದ ಟೇಕಾ- ಆಗುತ್ತಿದ್ದಂತೆ ನೇರವಾಗಿ ಹೋಗಿ ಸಮುದ್ರಕ್ಕೆ ಬಿದ್ದಿತ್ತು. ಅದರಲ್ಲಿದ್ದ ಎಲ್ಲಾ 213 ಜನರು ಮೃತಪಟ್ಟಿದ್ದರು. ಕೊನೆಗೆ ತನಿಖೆ ನಡೆದಾಗ ವಿಮಾನದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷ ಮತ್ತು ಅದಕ್ಕೆ ಪೈಲಟ್‌ನ ಗೊಂದಲಕಾರಿ ಪ್ರತಿಕ್ರಿಯೆಯೇ ಅಪಘಾತಕ್ಕೆ ಕಾರಣ ಎಂಬುದು ತಿಳಿದುಬಂತು.

1983ರ ಏಪ್ರಿಲ್ ತಿಂಗಳಿನಲ್ಲಿ ಔರಂಗಾಬಾದ್ ವಿಮಾನ ನಿಲ್ದಾಣದಲ್ಲಿ ಇಂಡಿಯನ್ ಏರ್ ಲೈನ್ಸ್ ವಿಮಾನವೊಂದು ರನ್ ವೇಯಲ್ಲಿ ಟ್ರಕ್‌ಗೆ ಡಿಕ್ಕಿ ನಾವು ಖುಷಿಪಡಬೇಕು! 2018ರಲ್ಲಿ ನಮಗೆ ಜಾಗತಿಕ ಮಟ್ಟದಲ್ಲಿ 102ನೇ ಸ್ಥಾನವಿತ್ತು. 2022ರಲ್ಲಿ ಅದು 48ಕ್ಕೆ ಏರಿಕೆಯಾಗಿದೆ. ಆದರೂ ಇದು ಕಳಪೆ ಸಾಧನೆಯೇ ಸರಿ. ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ವಿಮಾನದಲ್ಲಿ ಪ್ರಯಾಣಿಸುವಾಗ ನಾವು ವೈಮಾನಿಕ ಸುರಕ್ಷತೆಯಲ್ಲೂ ಸಾಕಷ್ಟು ದಕ್ಷತೆಯನ್ನು ಸಾಧಿಸಬೇಕಲ್ಲವೇ? 2024ರಲ್ಲಿ ಭಾರತ ಸರಕಾರ ವಿಮಾನಯಾನ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಹಳೆಯ ನಿಯಮಗಳನ್ನು ಪರಿಷ್ಕಾರ ಮಾಡಿದೆ.

ಅದರಿಂದಾಗಿ ಸಾಕಷ್ಟು ಬದಲಾವಣೆ ಆಗುವ ನಿರೀಕ್ಷೆಯಿದೆ. ಆದರೂ ವಿಮಾನಗಳ ವಿಷಯದಲ್ಲಿ ಸಣ್ಣಪುಟ್ಟ ತಪ್ಪೂ ಕೂಡ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡಬಹುದು. ಉದಾಹರಣೆಗೆ, ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಕೆಲ ತಿಂಗಳ ಹಿಂದೆ ಒಂದು ದಿನ ಛಾವಣಿಯ ದೊಡ್ಡ ಭಾಗವೊಂದು ಹಠಾತ್ ಕುಸಿದು ಬಿದ್ದಿತ್ತು. ಅದೃಷ್ಟವಶಾತ್ ದೊಡ್ಡ ದುರಂತವೇನೂ ಆಗಿರಲಿಲ್ಲ. ಆದರೂ ಕೆಲವರು ಗಾಯಗೊಂಡಿದ್ದರು. ಸುರಕ್ಷತಾ ಲೋಪದ ಬಗ್ಗೆ ವಿಮಾನಯಾನ ಕ್ಷೇತ್ರದಲ್ಲಿ ಶೂನ್ಯ ಸಹಿಷ್ಣುತೆ ನೀತಿ ಅನುಸರಿಸಲಾಗುತ್ತದೆಯಾದರೂ ನಾಗ್ಪುರದಲ್ಲಿ ಛಾವಣಿ ಕುಸಿದಿದ್ದು ಹೇಗೆ? ಖಂಡಿತ ವಿಮಾನ ನಿಲ್ದಾಣದ ನಿರ್ಮಾಣದ ಸಮಯದಲ್ಲೇ ಏನೋ ತಪ್ಪಾಗಿದೆ. ಪಟ್ಟಿ ಮಾಡಿದರೆ ಇನ್ನೂ ಸಾಕಷ್ಟು ಇಂತಹ ಘಟನೆಗಳು ಸಿಗುತ್ತವೆ.

ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದ್ದರ ಹಿಂದಿನ ಕಾರಣ ಇನ್ನೂ ಸ್ಪಷ್ಟವಿಲ್ಲ. ಆದರೆ, ಅದೇ ದಿನ ಅದೇ ವಿಮಾನದಲ್ಲಿ ದೆಹಲಿ-ಅಹಮದಾಬಾದ್ ನಡುವೆ ಪ್ರಯಾಣಿಸಿದ್ದ ವ್ಯಕ್ತಿಯೊಬ್ಬ ವಿಮಾನದೊಳಗೆ ಸೆರೆ‌ ಹಿಡಿದ ವಿಡಿಯೋ ಆತಂಕ ಹುಟ್ಟಿಸುವಂತಿದೆ. ಆ ವಿಮಾನದಲ್ಲಿ ಯಾವುದೇ ಬಟನ್‌ಗಳೂ ಕೆಲಸ ಮಾಡುತ್ತಿರಲಿಲ್ಲ.

ಹವಾನಿಯಂತ್ರಕ ವ್ಯವಸ್ಥೆ ಕೆಲಸ ಮಾಡದೆ ಪ್ರಯಾಣಿಕರೆಲ್ಲ ಬಸವಳಿದಿದ್ದರು. ದುಸ್ಥಿತಿಯಲ್ಲಿದ್ದ ಅಂತಹ ವಿಮಾನ ಅಹಮದಾಬಾದ್‌ನಲ್ಲಿ ಇಳಿದ ಮೇಲೆ ಲಂಡನ್ನಿಗೆ ಹೊರಡುವುದಕ್ಕೂ ಮೊದಲು ಸರಿಯಾಗಿ ಪರೀಕ್ಷೆ ನಡೆಸಿದ್ದರೋ ಇಲ್ಲವೋ? ವಿಮಾನ ಹೊಡೆದಿತ್ತು. ಓವರ್‌ಲೋಡಿಂಗ್ ಮತ್ತು ಪೈಲಟ್‌ನ ತಪ್ಪು ಈ ಅಪಘಾತಕ್ಕೆ ಕಾರಣವೆಂಬುದು ತನಿಖೆಯಲ್ಲಿ ಗೊತ್ತಾಗಿತ್ತು. ಅದೇ ರೀತಿ, ಕೇರಳದ ಕೋಳಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2020ರ ಆಗಸ್ಟ್‌ನಲ್ಲಿ ವಿಮಾನವೊಂದು ಲ್ಯಾಂಡ್ ಆಗುವಾಗ ನಿಯಂತ್ರಣಕ್ಕೆ ಸಿಗದೆ ಕಣಿವೆಗೆ ಹೋಗಿ ಬಿದ್ದಿತ್ತು. ಅದರ ರಭಸಕ್ಕೆ ಇಡೀ ವಿಮಾನ ಎರಡು ತುಂಡಾಗಿತ್ತು.

ವಿಮಾನದಲ್ಲಿದ್ದ ಸುಮಾರು 21 ಜನರು ಮೃತಪಟ್ಟಿದ್ದರು. ಇಬ್ಬರು ಪೈಲಟ್‌ಗಳು ಕೂಡ ಜೀವ ಕಳೆದುಕೊಂಡಿದ್ದರು. ಅದಕ್ಕೂ ಹಿಂದೆ, 1990ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದ ಸಮೀಪ ಇಂಡಿಯನ್ ಏರ್‌ಲೈನ್ಸ್ ವಿಮಾನವೊಂದು ಪತನಗೊಂಡು 92 ಜನರು ಮೃತಪಟ್ಟಿದ್ದರು. ಅದಕ್ಕೂ ಪೈಲಟ್ ಮಾಡಿದ ಎಡವಟ್ಟೇ ಕಾರಣ ಎಂಬುದು ಸಾಬೀತಾಗಿತ್ತು.

2010ರ ಮೇ ತಿಂಗಳಲ್ಲಿ ಮಂಗಳೂರಿನ ಟೇಬಲ್ ಟಾಪ್ ವಿಮಾನ ನಿಲ್ದಾಣಕ್ಕೆ ದುಬೈನಿಂದ ಬಂದಿಳಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕಂದಕಕ್ಕೆ ಹೋಗಿ ಬಿದ್ದಿತ್ತು. 158 ಮಂದಿ ಮೃತ ಪಟ್ಟಿದ್ದರು. ಇನ್ನೂ ಸಾಕಷ್ಟು ದುರಂತಗಳನ್ನು ಪಟ್ಟಿ ಮಾಡಬಹುದು. ನಾನು ವಿಮಾನದಲ್ಲಿ ತುಂಬಾ ಪ್ರಯಾಣ ಮಾಡುತ್ತೇನೆ. ವೈಯಕ್ತಿಕ ಅನುಭವದಲ್ಲಿ ಹೇಳುವುದಾದರೆ, ಭಾರತದ ವಿಮಾನ ಗಳಲ್ಲಿ ಪ್ರಯಾಣಿಸುವ ಅನುಭವ ವಿದೇಶಿ ವಿಮಾನಗಳಲ್ಲಿ ಪ್ರಯಾಣಿಸುವಷ್ಟು ಹಿತಕರವಾಗಿರುವು ದಿಲ್ಲ.

ಕೆಲವೊಮ್ಮೆ ದೇಸಿ ವಿಮಾನಗಳು ಭಯವನ್ನೇ ಹುಟ್ಟಿಸುತ್ತವೆ. ಏರ್ ಟರ್ಬ್ಯುಲೆನ್ಸ್‌ನ ಮಾತು ಪಕ್ಕಕ್ಕಿಡಿ. ನಮ್ಮ ವಿಮಾನಗಳ ಲ್ಯಾಂಡಿಂಗ್ ಒಮ್ಮೊಮ್ಮೆ ಎಷ್ಟೊಂದು ಕೆಟ್ಟದಾಗಿ ಇರುತ್ತದೆ ಯೆಂದರೆ, ಅಕ್ಷರಶಃ ವಿಮಾನ ದೊಪ್ಪನೆ ನೆಲಕ್ಕೆ ಅಪ್ಪಳಿಸಿ, ಅದರಲ್ಲಿರುವ ಪ್ರಯಾಣಿಕರು ಸೀಟಿನಿಂದ ಮೇಲೆ ಹಾರಿ ಕೆಳಗೆ ಕುಳಿತುಕೊಳ್ಳುತ್ತಾರೆ! ಹೇಳುತ್ತಾ ಹೋದರೆ ಇಲ್ಲಿನ ವಿಮಾನಗಳಲ್ಲಿ ಸಂಭವಿಸುವ ಅಚಾತುರ್ಯಗಳಿಗೆ ಲೆಕ್ಕವಿಲ್ಲ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಭಾರತದ ವಿಮಾನಯಾನ ಉದ್ದಿಮೆಯಲ್ಲಿ ಸಾಕಷ್ಟು ವಿಷಯ ಗಳಲ್ಲಿ ಶೂನ್ಯ ಸಹಿಷ್ಣುತೆಯ ನೀತಿಯನ್ನು ತುರ್ತಾಗಿ ಜಾರಿಗೆ ತರುವ ಅಗತ್ಯವಿದೆ. ನಿಮಗೊಂದು ವಿಷಯ ಗೊತ್ತೆ? ಜಗತ್ತಿನ ಟಾಪ್ 25 ವಿಮಾನ ನಿಲ್ದಾಣಗಳಲ್ಲಿ ಭಾರತದ ಒಂದೂ ವಿಮಾನ ನಿಲ್ದಾಣವಿಲ್ಲ. ಇದು ನಾಚಿಕೆಗೇಡಿನ ವಿಷಯವಲ್ಲವೇ? ಏರ್ ಟ್ರಾಫಿಕ್‌ನ ವಿಷಯದಲ್ಲಿ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಗತ್ತಿನಲ್ಲೇ 9ನೇ ಸ್ಥಾನವಿದೆ. ಆದರೂ ಜಗತ್ತಿನ ಅತ್ಯುತ್ತಮ ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ಅದು 32ನೇ ಸ್ಥಾನದಲ್ಲಿದೆ. ಹಾಗಂತ ವಿಮಾನಗಳ ಹಾರಾಟ ಹೆಚ್ಚಿದ್ದರೆ ಮಾತ್ರ ಸುರಕ್ಷತೆಗೆ ಹೆಚ್ಚು ಗಮನ ನೀಡಬೇಕು ಎಂದರ್ಥವಲ್ಲ. ಯಾವುದಾದರೂ ವಿಮಾನ ನಿಲ್ದಾಣದಿಂದ ದಿನಕ್ಕೆ ಒಂದೇ ವಿಮಾನ ಹಾರಾಟ ನಡೆಸುತ್ತಿದ್ದರೂ ಎಲ್ಲಾ ಸುರಕ್ಷತಾ ಕ್ರಮ ಕೈಗೊಳ್ಳುವುದು ಅನಿವಾರ್ಯ.

ಹತ್ತು ಜನರ ಜೀವ ದೊಡ್ಡದು, ಒಬ್ಬರ ಜೀವ ಸಣ್ಣದು ಎಂದೇನಿಲ್ಲ. ಕೊನೆಯಲ್ಲಿ ಒಂದು ಪ್ರಶ್ನೆ: 2006 ಮತ್ತು 2024ರ ನಡುವೆ ಭಾರತದಲ್ಲಿ 10 ಏರ್‌ಲೈನ್ಸ್ ಕಂಪನಿಗಳು ಬಾಗಿಲು ಮುಚ್ಚಿದ್ದು ಏಕೆ? ಕೆದಕಿದರೆ ಇನ್ನಷ್ಟು ಕುತೂಹಲಕರ ಸಂಗತಿಗಳು ಹೊರಗೆ ಬರುತ್ತವೆ. ಇಂತಹ ಇನ್ನೂ ಸಾಕಷ್ಟು ಪ್ರಶ್ನೆಗಳೂ, ಯೋಚನೆ ಮಾಡಬೇಕಾದ ವಿಚಾರಗಳೂ ಇವೆ.

ಆದರೆ ಹೆದರುತ್ತಾ ಕುಳಿತುಕೊಳ್ಳುವ ಅಗತ್ಯವಿಲ್ಲ. ಧೈರ್ಯವಾಗಿ ಹೋಗಿ, ವಿಮಾನದಲ್ಲಿ ಪ್ರಯಾಣಿಸಿ. ಏಕೆಂದರೆ ಈಗಲೂ ವಿಮಾನ ಪ್ರಯಾಣವೇ ಬೇರೆಲ್ಲಾ ರೀತಿಯ ಸಾರಿಗೆಗಿಂತ ವೇಗವಾದದ್ದು ಮತ್ತು ಸುರಕ್ಷಿತವಾದದ್ದು. ರಸ್ತೆಯಲ್ಲಿ ಹೋದರೆ ಅಪಘಾತವಾಗಬಹುದು ಎಂದು ಯಾರಾದರೂ ಮನೆಯಲ್ಲಿ ಕುಳಿತುಕೊಳ್ಳುತ್ತಾರೆಯೇ? ರಸ್ತೆ ಪ್ರಯಾಣಕ್ಕಿಂತ ವಿಮಾನ ಪ್ರಯಾಣ ಎಷ್ಟೋ ಪಟ್ಟು ಸುರಕ್ಷಿತ. ಹೀಗಾಗಿ ಭಯ ಬೇಡ. ಬೇಕಿರುವುದು ಎಚ್ಚರವಷ್ಟೆ.