ಸಾಫ್ಟ್ ಸೆಕ್ಯುಲರ್ ಡಿಕೆ; ಕಟ್ಟರ್ ಸೆಕ್ಯುಲರ್ ಪಿಕೆ
ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ,ಪಕ್ಷದ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳ ಹಿಂದೆ ಅವರ ನೆರಳು ಕಾಣು ತ್ತಿದೆ. ಕಳೆದ ವಾರ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಬಿಜೆಪಿಯ ಪ್ರೊ.ಎಂ.ನಾಗರಾಜ್ ಆಯ್ಕೆಯಾದರಲ್ಲ? ಇವರ ಆಯ್ಕೆಯ ಹಿಂದಿದ್ದವರು ಇದೇ ಪ್ರಲ್ಹಾದ ಜೋಶಿ. ಅಂದ ಹಾಗೆ ಯಡಿಯೂ ರಪ್ಪ ಟೀಮು ರಾಜ್ಯಸಭೆಗೆ ಡಿ.ವಿ.ಸದಾನಂದಗೌಡರನ್ನು ಕಳಿಸಲು ಅತ್ಯುತ್ಸಾಹದಿಂದಿದ್ದರೂ ಕೊನೆ ಘಳಿಗೆಯಲ್ಲಿ ನಾಗರಾಜ್ ಅವರ ಹೆಸರು ಮುನ್ನೆಲೆಗೆ ಬಂತು. ಇದಕ್ಕೆ ಪ್ರಲ್ಹಾದ ಜೋಶಿಯಯವರೇ ನೇರ ಕಾರಣ.