ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಆರ್‌.ಟಿ. ವಿಠ್ಠಲಮೂರ್ತಿ‌

columnist

[email protected]

ವಿಶ್ವವಾಣಿ ಪತ್ರಿಕೆಯ ಅಂಕಣಕಾರ ಆರ್.ಟಿ.ವಿಠ್ಠಲಮೂರ್ತಿ ಅವರು 1985 ರಿಂದ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆಂದೋಲನ, ಹಾಯ್ ಬೆಂಗಳೂರ್, ತರಂಗ, ಸುದ್ದಿಸಂಗಾತಿ, ಅಭಿಮಾನಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆಂದೋಲನ ಪತ್ರಿಕೆಯಲ್ಲಿ ಸತತ 30 ವರ್ಷಗಳಿಂದ ರಾಜಕೀಯ ಅಂಕಣ 'ಬೆಂಗಳೂರು ಡೈರಿ' ಬರೆಯುತ್ತಿರುವ ಆರ್.ಟಿ.ವಿಠ್ಠಲಮೂರ್ತಿ ಅವರು, ರಾಜಕೀಯ ವಿಶ್ಲೇಷಕರಾಗಿ ಗಮನ ಸೆಳೆದವರು. ಪ್ರಸ್ತುತ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ʼಅಂಕಣಗಳ ಪತ್ರಿಕೆʼ ಎಂದು ಹೆಸರುವಾಸಿಯಾದ ವಿಶ್ವವಾಣಿಯಲ್ಲಿ ಅವರು ಬರೆಯುತ್ತಿರುವ ಮೂರ್ತಿ ಪೂಜೆ ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತಿದ್ದು, ರಾಜ್ಯ ರಾಜಕಾರಣದ ನೈಜ ಪ್ರತಿಬಿಂಬವಾಗಿದೆ

Articles
R T Vittalmurthy Column: ಮದಕರಿ ನಾಯಕ ಫ್ರಂಟ್‌ ಲೈನಿಗೆ ಬಂದಿದ್ದೇಕೆ ?

ಮದಕರಿ ನಾಯಕ ಫ್ರಂಟ್‌ ಲೈನಿಗೆ ಬಂದಿದ್ದೇಕೆ ?

ಯುವ ಜನರ ಮನ:ಸ್ಥಿತಿ ಆಯಾ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಪ್ರಭಾವ ಬೀರುವು ದರಿಂದ ಆ ಆಂಗಲ್ಲಿನಲ್ಲೂ ಹೊಡೆತ ಬೀಳುತ್ತದೆ. ಮೊನ್ನೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕ್ ವರ್ತಿಸಿದ್ದು ಹೀಗೆಯೇ ತಾನೇ? ಹೀಗಾಗಿಯೇ ಕಾಂಗ್ರೆಸ್ ವರಿಷ್ಟರಿಗೆ ಚಿಂತೆ ಶುರುವಾಗಿದೆ.

R T Vittalmurthy Column: ಸಿದ್ದರಾಮಯ್ಯ-ಡಿಕೆಶಿ ಕ್ಯಾಂಪಿನ ಫ್ರೆಷ್‌ ರಿಪೋರ್ಟು

ಸಿದ್ದರಾಮಯ್ಯ-ಡಿಕೆಶಿ ಕ್ಯಾಂಪಿನ ಫ್ರೆಷ್‌ ರಿಪೋರ್ಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಡಿದ ಮಾತನ್ನು ಕೇಳಿ ರಾಜಣ್ಣ ಸುಮ್ಮನೆ ಮುಖ ನೋಡಿದಾಗ ಪುನಃ ಮಾತನಾಡಿದ ಸಿದ್ದರಾಮಯ್ಯ: ‘ನಾನು ಇರಬೇಕೋ ಕೆಳಗಿಳಿಯಬೇಕೋ? ಎರಡರಲ್ಲಿ ಒಂದು ವಿಷಯವನ್ನು ಕನ್ʼಫರ್ಮ್ ಅಗಿ ಹೇಳಿ. ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕು ಎಂಬುದು ನಿಮ್ಮ ಇಚ್ಚೆಯಾದರೆ ನನ್ನ ಸಚಿವ ಸಂಪುಟವನ್ನು ಪುನಾರಚಿಸಲು ಗ್ರೀನ್ ಸಿಗ್ನಲ್ ಕೊಡಿ ಅಂತ ಕೇಳುತ್ತೇನೆ.

R T Vittalmurthy Column: ಜಮೀರ್‌ ಕೋಟೆಗೆ ʼನಾಹುʼ ಸಾಬ್‌ ಲಗ್ಗೆ

R T Vittalmurthy Column: ಜಮೀರ್‌ ಕೋಟೆಗೆ ʼನಾಹುʼ ಸಾಬ್‌ ಲಗ್ಗೆ

ಯಾವಾಗ ‘ನಾಹು’ಸಾಬ್ ತಮ್ಮ ಕೋಟೆಗೆ ಲಗ್ಗೆ ಹಾಕಲು ಹೊರಟಿದ್ದಾರೆ ಮತ್ತು ಎಐಸಿಸಿ ಲೆವೆಲ್ಲಿನಲ್ಲಿ ಕೆಲ ನಾಯಕರು ಇದಕ್ಕೆ ‘ತಾಕತ್ ಕೀ ದವಾ’ ನೀಡುತ್ತಿದ್ದಾರೆ ಎಂಬುದು ಕನರ್ಮ್ ಆಯಿತೋ ಅಗ ಜಮೀರ್ ಅಹ್ಮದ್ ಅವರು ಈ ಗೇಮ್ ಪ್ಲಾನಿಗೆ ಶಕ್ತಿ ತುಂಬುವ ಜಾಗದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಂಪರ್ಕಿಸಿದ್ದಾರೆ.

R‌ T Vittalmurthy Column: ಶಾಮನೂರು ಕೋಟೆಯಲ್ಲಿ ಸಂಪತ್ತಿಗೆ ಸವಾಲ್

R‌ T Vittalmurthy Column: ಶಾಮನೂರು ಕೋಟೆಯಲ್ಲಿ ಸಂಪತ್ತಿಗೆ ಸವಾಲ್

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅದುವರೆಗೂ ಅಜೇಯನಾಗಿದ್ದ ನೆಪೋಲಿಯನ್ ಬೋನಾ ಪಾರ್ಟೆ ‘ವಾಟರ್‌ಲೂ’ ಕದನದಲ್ಲಿ ಬ್ರಿಟಿಷರು ಮತ್ತವರ ಮಿತ್ರಕೂಟದೆದುರು ಸೋಲು ಅನುಭವಿಸಿದ. ಆ ಮೂಲಕ ಯೂರೋಪಿಯನ್ನರು ವಿಶ್ವದೆದುರು ತಲೆ ಎತ್ತಿ ನಿಲ್ಲುವಂತಾಯಿತು. ಈಗ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಕೂಡಾ ಭವಿಷ್ಯದಲ್ಲಿ ಕಾಂಗ್ರೆಸ್ ನಡೆ ‘ವಾಟರ್ ಲೂ’ ಕಡೆ ಎಂಬಂತೆ ಭಾಸವಾಗುತ್ತಿದೆ.

R T Vittalmurthy Column: ಸುರ್ಜೇವಾಲಾ ವಿರುದ್ಧ ಶುರುವಾಗಲಿದೆ ದಂಗೆ ?

R T Vittalmurthy Column: ಸುರ್ಜೇವಾಲಾ ವಿರುದ್ಧ ಶುರುವಾಗಲಿದೆ ದಂಗೆ ?

ಕರ್ನಾಟಕದ ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಪವರ್ ಪುಲ್ ನಾಯಕ. ಅವರನ್ನು ಬದಲಿಸುವುದು ಎಂದರೆ ಪಕ್ಷವನ್ನು ಅಸ್ಥಿರಗೊಳಿಸುವುದು ಎಂದರ್ಥ ಅಂತ ಸುರ್ಜೇವಾಲಾ ವರಿಷ್ಠರಿಗೆ ವಸ್ತುಸ್ಥಿತಿಯ ವರದಿ ಕೊಟ್ಟರೂ ಸಾಕಿತ್ತು. ಹಾಗೊಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯ ಅಂತನ್ನಿಸಿದ್ದರೆ ವರಿಷ್ಠರು ಏನೇ ತೀರ್ಮಾನ ತೆಗೆದುಕೊಳ್ಳಲಿ. ಆದರೆ, ಸುರ್ಜೇವಾಲಾ ಅವರು ನಿರಂತರವಾಗಿ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಕುಮ್ಮಕ್ಕು ಕೊಡುತ್ತಾ ಬಂದರು.

R T Vittalmurthy Column: ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಾಕ್ಟ್ರು ಬರುತ್ತಾರೆ

ಕೆಪಿಸಿಸಿ ಅಧ್ಯಕ್ಷ ಪಟ್ಟಕ್ಕೆ ಡಾಕ್ಟ್ರು ಬರುತ್ತಾರೆ

ಯುದ್ಧಕಾಲದಲ್ಲಿ ಅಧ್ಯಕ್ಷರಾಗುವುದು ಬೇರೆ. ಆದರೆ ಶಾಂತಿಕಾಲದಲ್ಲಿ ಅಧ್ಯಕ್ಷರಾಗಿ ಮಾಡುವುದೇನು? ಎಂಬುದು ಅವರ ಯೋಚನೆ. ಇದಾದ ನಂತರ ಲೋಕೋಪಯೋಗಿ ಖಾತೆ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ತುಂಬ ಕಾಲ ಫೀಲ್ಡಿನಲ್ಲಿತ್ತಾದರೂ ಈಗ ಇದ್ದಕ್ಕಿದ್ದಂತೆ ಕೆಪಿಸಿಸಿ ಅಧ್ಯಕ್ಷ ಪಟ್ಟದ ರೇಸಿನಿಂದ ಅವರೂ ಮೆಲ್ಲಗೆ ಹಿಂದೆ ಸರಿದಿದ್ದಾರೆ.

R T Vittalmurthy Column: ಆಪರೇಷನ್‌ ಟ್ವೆಂಟಿಗೆ ಸಿದ್ದು ರೆಡಿ

R T Vittalmurthy Column: ಆಪರೇಷನ್‌ ಟ್ವೆಂಟಿಗೆ ಸಿದ್ದು ರೆಡಿ

ಕೆ.ಸಿ.ವೇಣುಗೋಪಾಲ್ ಅವರು ಸಿದ್ದರಾಮಯ್ಯ ಅವರ ಪರವಾಗಿಯೇ ನಿಂತವರು ಮತ್ತು ಈಗಲೂ ಸಿದ್ದರಾಮಯ್ಯ ಅವರ ನಾಯಕತ್ವದ ಮೇಲೆ ಹೆಚ್ಚು ವಿಶ್ವಾಸವಿಟ್ಟವರು. ಇಷ್ಟಾ ದರೂ ಈ ಬಾರಿ ದಿಲ್ಲಿಗೆ ಬರುತ್ತಿರುವ ಸಿದ್ದರಾಮಯ್ಯ ಅವರ ಬಳಿ ಕೆ.ಸಿ.ವೇಣುಗೋಪಾಲ್ ಅವರು ಮಹತ್ವದ ವಿಷಯವೊಂದನ್ನು ಪ್ರಸ್ತಾಪಿಸಲಿದ್ದಾರೆ.

R‌ T Vittalmurthy Column: ಬಿಜೆಪಿಯಲ್ಲಿ ಮತ್ತೆ ಪ್ರೆಸಿಡೆಂಟ್‌ ವಾರ್

R‌ T Vittalmurthy Column: ಬಿಜೆಪಿಯಲ್ಲಿ ಮತ್ತೆ ಪ್ರೆಸಿಡೆಂಟ್‌ ವಾರ್

ಸರಕಾರ ಅಸ್ತಿತ್ವಕ್ಕೆ ಬಂದು 33 ತಿಂಗಳುಗಳು ಕಳೆದಿವೆ. ಈಗಲಾದರೂ ಸಂಪುಟ ಪುನಾರಚನೆ ಮಾಡದಿದ್ದರೆ ಹೇಗೆ? ಅಂತ ಹಿರಿಯ ಶಾಸಕರು ವರಾತ ತೆಗೆಯುತ್ತಿದ್ದಾರೆ. ಅವರ ಈ ವರಾತ ವನ್ನು ತಡೆಗಟ್ಟಲು ಮುಂದಾಗದಿದ್ದರೆ ಅಪಾಯ ಗ್ಯಾರಂಟಿ. ಹೀಗಾಗಿ ಸಂಪುಟ ಪುನಾರಚನೆಗೆ ಅನುಮತಿ ಕೊಡಿ ಅಂತ ಕೇಳುತ್ತಾರೆ.

R T Vittalmurthy Column: ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ

ದೇವೇಗೌಡ್ರು ಮತ್ತೆ ರಾಜ್ಯಸಭೆಗೆ ಹೋಗುತ್ತಾರೆ

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠಎಚ್.ಡಿ.ದೇವೇಗೌಡರು ಪುನಃ ರಾಜ್ಯಸಭೆಗೆ ಹೋಗಲಿದ್ದಾರೆ. ಹೀಗೆ ದೇವೇಗೌಡರು ಮರಳಿ ರಾಜ್ಯಸಭೆಗೆ ಹೋದರೆ ರಾಜ್ಯ ಬಿಜೆಪಿ ನಾಯಕರಿಗೇಕೆ ವಿಸ್ಮಯ ಎಂದರೆ, ಅವರನ್ನು ಮರಳಿ ರಾಜ್ಯಸಭೆಗೆ ಕಳಿಸುವ ವಿಷಯದಲ್ಲಿ ಖುದ್ದು ನರೇಂದ್ರ ಮೋದಿ ಯವರೇ ಉತ್ಸುಕತೆ ತೋರಿಸಿರುವುದು. ಈ ವರ್ಷದ ಜೂನ್ ಹೊತ್ತಿಗೆ ಕರ್ನಾಟಕ ವಿಧಾನಸಭೆ ಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ.

‌R T Vittalmurthy Column: ಯಡಿಯೂರೋತ್ಸವಕ್ಕೆ 114ರ ಟಾರ್ಗೆಟ್

‌R T Vittalmurthy Column: ಯಡಿಯೂರೋತ್ಸವಕ್ಕೆ 114ರ ಟಾರ್ಗೆಟ್

ಮುಂಬರುವ ಚುನಾವಣೆಯಲ್ಲಿ ಜೆಡಿಎಸ್‌ನ ಜತೆಗೂಡಿ ಅಧಿಕಾರ ಹಿಡಿಯುವುದು ಗ್ಯಾರಂಟಿ ಎಂಬ ಲೆಕ್ಕಾಚಾರದಲ್ಲಿರುವ ರಾಜ್ಯ ಬಿಜೆಪಿ ನಾಯಕರು ಇದೀಗ 114ರ ಟಾರ್ಗೆಟ್ ಮೇಲೆ ಕಣ್ಣಿಟ್ಟು ‘ಯಡಿಯೂರೋತ್ಸವ’ಕ್ಕೆ ಸಜ್ಜಾಗುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜಕಾರಣಕ್ಕೆ ಬಂದು ಐವತ್ತು ವರ್ಷವಾಗಿರುವ ಹಿನ್ನೆಲೆಯಲ್ಲಿ ಇಂಥ ಉತ್ಸವ ನಡೆಸಲು ಸಜ್ಜಾಗಿರುವ ಬಿಜೆಪಿ ನಾಯಕರಿಗೆ ಈಗ ಇದ್ದಕ್ಕಿದ್ದಂತೆ ಒಗ್ಗಟ್ಟಿನ ಅನಿವಾರ್ಯತೆ ಕಾಣತೊಡಗಿದೆ.

R T Vittalmurthy Column: ಪರಂ-ಕುಮಾರಸ್ವಾಮಿ ತಾಜ್‌ ಮೀಟಿಂಗ್‌ ರಹಸ್ಯವೇನು ?

ಪರಂ-ಕುಮಾರಸ್ವಾಮಿ ತಾಜ್‌ ಮೀಟಿಂಗ್‌ ರಹಸ್ಯವೇನು ?

ಈ ಮಧ್ಯೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಬೆಳವಣಿಗೆ ರಾಜಕೀಯ ವಲಯಗಳಲ್ಲಿ ಸಂಚಲನ ಮೂಡಿಸಿದೆ. ಬೆಂಗಳೂರಿನ ತಾರಾ ಹೋಟೆಲ್ ಒಂದರಲ್ಲಿ ಕಳೆದ ಶನಿವಾರ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಪರಮೇಶ್ವರ್ 45 ನಿಮಿಷಗಳ ಕಾಲ ರಹಸ್ಯವಾಗಿ ಚರ್ಚಿಸಿದ್ದು ಕೈ ಪಾಳಯದಲ್ಲಿ ಸಂಭವಿಸಲಿರುವ ಅಪಾಯದ ಮುನ್ಸೂಚನೆ ಎಂಬುದು ಮೂಲಗಳ ಅಭಿಪ್ರಾಯ.

R T Vittalmurthy Column: ಮತ್ತೆ ತಲೆ ಎತ್ತಲಿದೆಯೇ ಪ್ರಗತಿಪರ ದಳ ?

R T Vittalmurthy Column: ಮತ್ತೆ ತಲೆ ಎತ್ತಲಿದೆಯೇ ಪ್ರಗತಿಪರ ದಳ ?

ಇಪ್ಪತ್ತು ವರ್ಷಗಳ ಹಿಂದೆ ಕರ್ನಾಟಕದ ರಾಜಕೀಯಕ್ಕೆ ಹೊಸ ದಿಕ್ಕು ತೋರಿಸಿದ್ದ ಮತ್ತು ಕಾಂಗ್ರೆಸ್ ಪಡಸಾಲೆಯಲ್ಲಿ ಲೀನವಾಗಿದ್ದ ಪ್ರಗತಿಪರ ಜನತಾದಳಕ್ಕೆ ಮರುಚೈತನ್ಯ ನೀಡುವ ಸಲುವಾಗಿ, ಸಿದ್ದು ಸಂಪುಟದ ಕೆಲ ಸಚಿವರು ಮತ್ತು ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಮಾತು ಕತೆ ಆರಂಭಿಸಿದ್ದಾರೆ.

R T Vittalmurthy Column: ರಾಜೀನಾಮೆ ಕೊಡ್ತೀನಂದ್ರಾ ಮಲ್ಲಿಕಾರ್ಜುನ್‌ ?

R T Vittalmurthy Column: ರಾಜೀನಾಮೆ ಕೊಡ್ತೀನಂದ್ರಾ ಮಲ್ಲಿಕಾರ್ಜುನ್‌ ?

ಮಲ್ಲಿಕಾರ್ಜುನ್ ಅವರು ಹೀಗೆ ಏಕಾಏಕಿಯಾಗಿ ರಾಜೀನಾಮೆಗೆ ರೆಡಿಯಾಗಿದ್ದನ್ನು ಕಂಡು ವಿಸ್ಮಿತ ರಾದ ಸಿದ್ದರಾಮಯ್ಯ ಅವರು, “ಅದೇಕ್ರೀ ಮಲ್ಲಿಕಾರ್ಜುನ್, ಮಂತ್ರಿಯಾಗಿ ನಿಮ್ಮ ಪಾಡಿಗೆ ನೀವು ಕೆಲಸ ಮಾಡಿಕೊಂಡು ಹೋಗುತ್ತಿದ್ದೀರಿ. ಅದರಲ್ಲೂ ನೀವು ನೋಡಿಕೊಳ್ಳುತ್ತಿರುವ ಗಣಿ ಖಾತೆ ಎಂದರೆ ವಿವಾದದ ಗೂಡು. ಅದರೆ ಅಂಥ ವಿವಾದದ ಗೂಡನ್ನೇ ತಂಟೆ-ತಕರಾರಿಲ್ಲದೆ ನಿರ್ವಹಿಸಿ ಕೊಂಡು ಹೋಗುತ್ತಿದ್ದೀರಿ. ಹೀಗಿರುವಾಗ ಮಂತ್ರಿಗಿರಿಯಿಂದ ನಿಮ್ಮನ್ನೇಕೆ ರಿಲೀವ್ ಮಾಡಲಿ? ನೋ, ನೋ, ನಿಮ್ಮ ಪಾಡಿಗೆ ನೀವು ನೆಮ್ಮದಿಯಾಗಿ ಮುಂದುವರಿಯಿರಿ" ಎಂದರಂತೆ.

R T Vittalmurthy Column: ಶಾಮನೂರು ಸಾಮ್ರಾಜ್ಯಕ್ಕೆ ಓವೈಸಿ ಎಂಟ್ರಿ ?

R T Vittalmurthy Column: ಶಾಮನೂರು ಸಾಮ್ರಾಜ್ಯಕ್ಕೆ ಓವೈಸಿ ಎಂಟ್ರಿ ?

ಕಳೆದ ವಾರ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಲುಪಿದ ಸುದ್ದಿ ಅಷ್ಟೇನೂ ಹಿತಕರವಾಗಿರಲಿಲ್ಲ. ಕಾರಣ? ಹೈದರಾಬಾದ್‌ನ ಕಟ್ಟರ್ ಮುಸ್ಲಿಂ ನಾಯಕ ಅಸಾದುದ್ದೀನ್ ಓವೈಸಿ ಕರ್ನಾಟಕದ ರಾಜಕಾರಣಕ್ಕೆ ಎಂಟ್ರಿ ಆಗಲಿದ್ದಾರೆ ಎಂಬ ಸುದ್ದಿ. ಅಂದ ಹಾಗೆ, ‘ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದ್ ಮುಸ್ಲಿಮಿನ್’ ಪಕ್ಷದ ಸರ್ವೋಚ್ಚ ನಾಯಕರಾದ ಅಸಾದುದ್ದೀನ್ ಓವೈಸಿ ಅವರಿಗೆ ಕರ್ನಾಟಕದ ರಾಜಕಾರಣದ ಮೇಲೆ ಒಂದು ಕಣ್ಣು ಇದ್ದೇ ಇದೆ.

R T Vittalmurthy Column: ಸಿದ್ದುಗೆ ಅನುದಾನ ಹೊಂದಿಸುವ ತಲೆನೋವು ಶುರುವಾಗಿದೆ

ಸಿದ್ದುಗೆ ಅನುದಾನ ಹೊಂದಿಸುವ ತಲೆನೋವು ಶುರುವಾಗಿದೆ

ರಾಜ್ಯದ ಆದಾಯ ಕಡಿಮೆ, ಹೊರೆ ಜಾಸ್ತಿಯಾಗಿ ಬಜೆಟ್ಟಿನ ಸೊಂಟಕ್ಕೆ ‘ತಾಕತ್ ಕಿ ದವಾ’ ಕೊಡುವುದೇ ಸಿದ್ದರಾಮಯ್ಯ ಅವರಿಗೆ ಸವಾಲಾಗಿದೆ. ಇದೇ ಕಾರಣಕ್ಕಾಗಿ ಬಜೆಟ್ಟಿಗೆ ಹೊಸ ಸಂಪನ್ಮೂಲಗಳನ್ನು ಕಂಡುಹಿಡಿಯಲು ಆರ್ಥಿಕ ತಜ್ಞರಾದ ಕೃಷ್ಣನ್ ನೇತೃತ್ವದ ತಂಡವನ್ನು ರಚಿಸಿ, ವರದಿ ಪಡೆದಿದ್ದರೂ ಸಿದ್ದರಾಮಯ್ಯ ಅವರಿಗೆ ತಲೆನೋವು ತಪ್ಪಿಲ್ಲ.

R T Vittalmurthy Column: ಡೋಂಟ್‌ ವರಿ, ಕಮ್‌ ಟು ಡೆಲ್ಲಿ

R T Vittalmurthy Column: ಡೋಂಟ್‌ ವರಿ, ಕಮ್‌ ಟು ಡೆಲ್ಲಿ

ಸಿದ್ದರಾಮಯ್ಯ ಅವರನ್ನಿಳಿಸಲು ರಾಹುಲ್ ಗಾಂಧಿ ಏಕೆ ಬಯಸುತ್ತಿಲ್ಲ? ಎಂಬುದು. ಎಲ್ಲಕ್ಕಿಂತ ಮುಖ್ಯವಾಗಿ ಅಹಿಂದ ವರ್ಗಗಳ ಸಾಲಿಡ್ಡು ನಾಯಕರಾಗಿ ನೆಲೆಯಾಗಿರುವ ಸಿದ್ದರಾಮಯ್ಯ ಅವರನ್ನಿ ಳಿಸಿದರೆ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಆದರೆ ಇದನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೇರವಾಗಿ ಹೇಳಲು ತಯಾರಿಲ್ಲದ ರಾಹುಲ್ ಗಾಂಧಿಯವರು, ರಾಜ್ಯ ಬಜೆಟ್ ಹತ್ತಿರದಲ್ಲಿರು ವಾಗ, ಐದು ರಾಜ್ಯಗಳ ಚುನಾವಣೆ ಸನಿಹಕ್ಕೆ ಬಂದಿರುವಾಗ ಸಿದ್ದರಾಮಯ್ಯ ಅವರನ್ನು ಮುಟ್ಟುವುದು ಸರಿಯಲ್ಲ ಎಂಬ ನಿಲುವಿಗೆ ಬಂದಿದ್ದಾರೆ.

R T Vittalmurthy Column: ಬೊಮ್ಮಾಯಿ ರೂಪಿಸಿದ ಸಂಕಷ್ಟ ಸೂತ್ರ

R T Vittalmurthy Column: ಬೊಮ್ಮಾಯಿ ರೂಪಿಸಿದ ಸಂಕಷ್ಟ ಸೂತ್ರ

ಬಿಜೆಪಿ ಮೂಲಗಳ ಪ್ರಕಾರ, ಸಭೆಯಲ್ಲಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿದ ಸಂಕಷ್ಟ ಸೂತ್ರ ಬಹುತೇಕ ಎಲ್ಲರಿಗೂ ಒಪ್ಪಿಗೆಯಾಗಿದೆ. ಅರ್ಥಾತ್, ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನಿಳಿಸಲು ಎಲ್ಲ ಬಗೆಯ ಹೋರಾಟ ನಡೆಸುವುದು, ಒಂದು ವೇಳೆ ಅದು ಯಶಸ್ವಿಯಾಗದೆ ಇದ್ದರೆ ತಮ್ಮ ತಮ್ಮ ಪಾಳೇಪಟ್ಟುಗಳನ್ನು ಭದ್ರಗೊಳಿಸಿಕೊಂಡು ಹಿತ ಕಾಪಾಡಿ ಕೊಳ್ಳುವುದು ಅನಿವಾರ್ಯ ಎಂಬುದು ಮನದಟ್ಟಾಗಿದೆ.

R T Vittalmurthy Column: ಯುದ್ಧಕ್ಕೆ ರೆಡಿಯಾಗಿ ಅಂದ್ರಂತೆ ಸಿದ್ದು

R T Vittalmurthy Column: ಯುದ್ಧಕ್ಕೆ ರೆಡಿಯಾಗಿ ಅಂದ್ರಂತೆ ಸಿದ್ದು

ಎಲ್ಲಕ್ಕಿಂತ ಮುಖ್ಯವಾಗಿ ಐದು ರಾಜ್ಯಗಳ ವಿಧಾನಸಭೆ ಚುನಾವಣೆಯಿಂದ ಹಿಡಿದು, ಜೂನ್ ಹೊತ್ತಿಗೆ ಕರ್ನಾಟಕ ವಿಧಾನಪರಿಷತ್ತಿನ ಹಲವು ಸ್ಥಾನಗಳಿಗೆ ಮತ್ತು ವಿಧಾನಸಭೆಯಿಂದ ರಾಜ್ಯ ಸಭೆಯ ಕೆಲವು ಸ್ಥಾನಗಳಿಗೆ ಚುನಾವಣೆ ನಡೆಯುವುದರಿಂದ ಅಲ್ಲಿಯ ತನಕ ಅಧಿಕಾರ ಹಸ್ತಾಂತರದ ಮಾತಿಗೆ ಬ್ರೇಕ್ ಬಿದ್ದಿದೆ ಎಂಬುದು ಮೂಲಗಳ ಹೇಳಿಕೆ.

R T Vittalmurthy Column: ಜನವರಿ ಒಂಬತ್ತಕ್ಕೆ ದಿಲ್ಲಿಯಲ್ಲಿ ಫೈನಲ್

R T Vittalmurthy Column: ಜನವರಿ ಒಂಬತ್ತಕ್ಕೆ ದಿಲ್ಲಿಯಲ್ಲಿ ಫೈನಲ್

ಯಾವಾಗ ಸಿದ್ದರಾಮಯ್ಯನವರು ಈ ಪ್ರಸ್ತಾಪ ಮಂಡಿಸಿದರೋ, ಆಗ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ವೈ ನಾಟ್ ಸಿದ್ರಾಮಯ್ಯಾಜೀ? ಸಂಪುಟ ಪುನಾರಚನೆಯ ಸ್ವರೂಪ ಹೇಗಿರಬೇಕು? ಮಂತ್ರಿಮಂಡಲ ದಿಂದ ಹೊರಹೋಗಬೇಕಾದವರು ಯಾರು? ಸೇರ್ಪಡೆ ಅಗಬೇಕಾದವರು ಯಾರು? ಎಂಬ ಬಗ್ಗೆ ವಿವರವಾಗಿ ಚರ್ಚಿಸಿ ಜನವರಿ 9ರಂದು ದಿಲ್ಲಿಗೆ ಬನ್ನಿ. ಫೈನಲ್ ಮಾಡೋಣ" ಎಂದಿದ್ದಾರೆ.

R T Vittalmurthy Column: ಬಜೆಟ್‌ ಮಂಡಿಸಲು ಸಿದ್ದು-ಡಿಕೆಶಿ ರೆಡಿ

R T Vittalmurthy Column: ಬಜೆಟ್‌ ಮಂಡಿಸಲು ಸಿದ್ದು-ಡಿಕೆಶಿ ರೆಡಿ

ಮಲ್ಲಿಕಾರ್ಜುನ ಖರ್ಗೆ ಅವರ ಮನಸ್ಸಿನಲ್ಲಿರುವ ಈ ಯೋಚನೆ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತಿಲ್ಲ ಅಂತೇನಲ್ಲ. ಆದರೆ ಬಜೆಟ್ ಮಂಡನೆಯ ಅವಕಾಶವನ್ನು ಕಳೆದುಕೊಳ್ಳಲು ಅವರು ಸಿದ್ದರಿಲ್ಲ. ಕಾರಣ? ಒಂದು ಸರಕಾರದ ನಾಲ್ಕು ಮತ್ತು ಐದನೇ ಬಜೆಟ್‌ಗಳಿಗೆ ಅಂಥ ಮಹತ್ವವಿಲ್ಲ. ಕನಿಷ್ಠಪಕ್ಷ ಮೂರನೇ ಬಜೆಟ್ ಮಂಡಿಸಲು ಅವಕಾಶ ಸಿಕ್ಕರೆ ಇಡೀ ದೇಶವೇ ಕರ್ನಾ ಟಕದತ್ತ ತಿರುಗಿ ನೋಡುವಂತೆ ಮಾಡ ಬಹುದು.

R T Vittalmurthy Column: ನಿಖಿಲ್‌ ಪತ್ತೆ ಮಾಡಿದ ಚಿದಂಬರ ರಹಸ್ಯ ಯಾವುದು ?

ನಿಖಿಲ್‌ ಪತ್ತೆ ಮಾಡಿದ ಚಿದಂಬರ ರಹಸ್ಯ ಯಾವುದು ?

ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪತ್ತೆ ಮಾಡಿದ ರಹಸ್ಯ ವೊಂದು ದೊಡ್ಡ ಗೌಡರು ಮತ್ತು ಕುಮಾರಸ್ವಾಮಿಯವರ ಗಮನ ಸೆಳೆದಿದೆ. ಪಕ್ಷಕ್ಕೆ ದೊಡ್ಡ ಯಶಸ್ಸು ಸಿಗಬೇಕೆಂದರೆ ‘ಲೀಡರ್-ಟು-ಲೀಡರ್’ ಬದಲು ‘ಲೀಡರ್-ಟು-ಕೇಡರ್’ ಸೂತ್ರವನ್ನು ಅನುಸರಿಸುವುದು ಅನಿವಾರ್ಯ ಎಂಬುದು ನಿಖಿಲ್ ಅವರು ಕಂಡುಹಿಡಿದ ಸತ್ಯ.

R T Vittalmurthy Column: ವಿಜಯೇಂದ್ರ ಇಳೀತಿಲ್ಲ, ಭಿನ್ನರು ಬಿಡ್ತಿಲ್ಲ

R T Vittalmurthy Column: ವಿಜಯೇಂದ್ರ ಇಳೀತಿಲ್ಲ, ಭಿನ್ನರು ಬಿಡ್ತಿಲ್ಲ

ಇವತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ ಮಿತಿಮೀರಿ ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಮುಂದಾ ಗಿದ್ದು ಇದರ ಪರಿಣಾಮವಾಗಿ ಹಿಂದೂ ಮತಬ್ಯಾಂಕಿನ ಕ್ರೋಡೀಕರಣವಾಗಬೇಕಿದೆ. ಇವತ್ತಿನ ಸ್ಥಿತಿ ಯಲ್ಲಿ ರಾಜ್ಯ ಬಿಜೆಪಿಯ ಯಾವುದೇ ನಾಯಕರಿಗಿಂತ ಬಲವಾಗಿ ಈ ಕೆಲಸ ಮಾಡಬಲ್ಲವರು ಬಸನಗೌಡ ಪಾಟೀಲ್ ಯತ್ನಾಳ್.

R T Vittalmurthy Column: ರಾಹುಲ್‌ ಗಾಂಧಿಯವರಿಗೆ ಒಪ್ಪಂದದ ಕತೆ ಬೇಕಿಲ್ಲ

R T Vittalmurthy Column: ರಾಹುಲ್‌ ಗಾಂಧಿಯವರಿಗೆ ಒಪ್ಪಂದದ ಕತೆ ಬೇಕಿಲ್ಲ

ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಕಳೆದ ವಾರ ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು, ಕರ್ನಾಟಕದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಅಂದ ಹಾಗೆ, ಕರ್ನಾಟಕದಲ್ಲಿ ಸಿಎಂ ಹುದ್ದೆಗಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಪಟ್ಟು ಹಿಡಿದಿದ್ದಾರೆ, ಸಿಎಂ ಸಿದ್ದರಾಮಯ್ಯ ಕನಲಿ ಕೂತಿದ್ದಾರೆ.

R T Vittalmurthy Column: 'ಕೂಲ್‌ ಆಗಿರಿ ಡಿಕೆʼ ಅಂದ್ರಾ ಖರ್ಗೆ ಸಾಹೇಬರು ?

'ಕೂಲ್‌ ಆಗಿರಿ ಡಿಕೆʼ ಅಂದ್ರಾ ಖರ್ಗೆ ಸಾಹೇಬರು ?

ಸುರೇಶ್ ಅವರ ಮಾತು ಕೇಳಿದ ಮಲ್ಲಿಕಾರ್ಜುನ ಖರ್ಗೆ ಅವರು, “ರೀ, ಸ್ವಲ್ಪ ದಿನ ಸುಮ್ಮನಿರ್ರೀ. ಮುಂದಿನ ತಿಂಗಳು ಸಂಸತ್ ಅಧಿವೇಶನ ಪ್ರಾರಂಭವಾಗುತ್ತದೆ. ಆಗ ಬನ್ರೀ. ಏನೇ ವಿಷಯ ಇದ್ದರೂ ರಾಹುಲ್ ಗಾಂಧಿ ಅವರ ಮುಂದೆ ಮಾತನಾಡೋಣ. ಆಗ ಸಿದ್ದರಾಮಯ್ಯ ಅವರೂ ಬರಲಿ. ಒಟ್ಟಿನಲ್ಲಿ ಏನೇ ಇದ್ರೂ ಅಮೈಕಬಲ್ ಆಗಿ ಸೆಟ್ಲ್ ಮಾಡೋಣ" ಎಂದಿದ್ದಾರೆ.

Loading...