ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

ಆರ್‌.ಟಿ. ವಿಠ್ಠಲಮೂರ್ತಿ‌

columnist

[email protected]

ವಿಶ್ವವಾಣಿ ಪತ್ರಿಕೆಯ ಅಂಕಣಕಾರ ಆರ್.ಟಿ.ವಿಠ್ಠಲಮೂರ್ತಿ ಅವರು 1985 ರಿಂದ ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಆಂದೋಲನ, ಹಾಯ್ ಬೆಂಗಳೂರ್, ತರಂಗ, ಸುದ್ದಿಸಂಗಾತಿ, ಅಭಿಮಾನಿ ಸೇರಿದಂತೆ ನಾಡಿನ ಹಲವು ಪತ್ರಿಕೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಆಂದೋಲನ ಪತ್ರಿಕೆಯಲ್ಲಿ ಸತತ 30 ವರ್ಷಗಳಿಂದ ರಾಜಕೀಯ ಅಂಕಣ 'ಬೆಂಗಳೂರು ಡೈರಿ' ಬರೆಯುತ್ತಿರುವ ಆರ್.ಟಿ.ವಿಠ್ಠಲಮೂರ್ತಿ ಅವರು, ರಾಜಕೀಯ ವಿಶ್ಲೇಷಕರಾಗಿ ಗಮನ ಸೆಳೆದವರು. ಪ್ರಸ್ತುತ ರಾಜ್ಯಮಟ್ಟದ ಕನ್ನಡ ದಿನಪತ್ರಿಕೆ ʼಅಂಕಣಗಳ ಪತ್ರಿಕೆʼ ಎಂದು ಹೆಸರುವಾಸಿಯಾದ ವಿಶ್ವವಾಣಿಯಲ್ಲಿ ಅವರು ಬರೆಯುತ್ತಿರುವ ಮೂರ್ತಿ ಪೂಜೆ ಅಂಕಣ ಪ್ರತಿ ಸೋಮವಾರ ಪ್ರಕಟವಾಗುತ್ತಿದ್ದು, ರಾಜ್ಯ ರಾಜಕಾರಣದ ನೈಜ ಪ್ರತಿಬಿಂಬವಾಗಿದೆ

Articles
R T Vittalmurthy Column: ಸಿದ್ದು ಕೊರಳಿಗೆ ಗಂಟು ಕಟ್ಟುವವರು ಯಾರು ?

ಸಿದ್ದು ಕೊರಳಿಗೆ ಗಂಟು ಕಟ್ಟುವವರು ಯಾರು ?

‘ಸಾರ್, ಸತೀಶ್ ಜಾರಕಿಹೊಳಿ ಮತ್ತು ಜಮೀರ್ ಅಹ್ಮದ್ ಸೇರಿದಂತೆ ಮೂರು ಜನರಿಗೆ ಡಿಸಿಎಂ ಹುದ್ದೆಯ ಆಫರ್ರು ನೀಡಲಾಗಿದೆ. ಅದರಲ್ಲೂ ಡಿಕೆ ಅವರ ಪರವಾಗಿ ಸುರ್ಜೇವಾಲಾ ಅವರೇ ಈ ಮೂವರು ನಾಯಕರಿಗೆ ‘ನೀವು ಡಿಸಿಎಂ ಹುದ್ದೆಗೇರುತ್ತೀರಿ. ಈ ಪೈಕಿ ಜಾರಕಿಹೊಳಿ ಅವರು ಡಿಸಿಎಂ ಹುದ್ದೆಯ ಜತೆ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ’ ಅಂತ ಪ್ರಾಮಿಸ್ಸು ಮಾಡಿದ್ದಾರೆ.

R T Vittalmurthy Column: ಕುಮಾರಣ್ಣ ಬಾಂಬು ಹಾಕುವ ಟೈಂ ಬಂತು

ಕುಮಾರಣ್ಣ ಬಾಂಬು ಹಾಕುವ ಟೈಂ ಬಂತು

ಸೆಪ್ಟೆಂಬರ್ 11ರ ರಾತ್ರಿ ಇಲ್ಲವೇ ಸೆಪ್ಟೆಂಬರ್ 12ರಂದು ವಾಪಸ್ ಆಗಲಿದ್ದಾರೆ. ಹೀಗೆ ಬಂದ ತಕ್ಷಣ ಅವರು ಸಿಡಿಸುವ ಬಾಂಬು ಕರ್ನಾಟಕದ ರಾಜಕೀಯ ಸ್ವರೂಪ ವನ್ನು ಬದಲಿಸುವುದು ಮಾತ್ರವಲ್ಲ, ಇಡೀ ದೇಶವೇ ನಿಬ್ಬೆರಗಾಗುವಂತೆ ಮಾಡಲಿದೆ. ಅವರ ಆಪ್ತ ಮೂಲಗಳ ಪ್ರಕಾರ, ಹೀಗೆ ಬಾಂಬು ಸಿಡಿಸಲಿರುವ ಕುಮಾರಸ್ವಾಮಿ ಜನರೊಂದಿಗೆ ಸೇರಿ ನೇರವಾಗಿ ಬೀದಿಗಿಳಿಯಲಿದ್ದಾರೆ ಮತ್ತು ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಲಿದ್ದಾರೆ.

R T Vittalmurthy Column: ನಾಗೇಂದ್ರ- ‘ಬಿಜೆಪಿಗೆ ಕ್ರೆಡಿಟ್ಟು, ಕಾಂಗ್ರೆಸ್ಸಿಗೆ ಕ್ಯಾಶು’

ನಾಗೇಂದ್ರ- ‘ಬಿಜೆಪಿಗೆ ಕ್ರೆಡಿಟ್ಟು, ಕಾಂಗ್ರೆಸ್ಸಿಗೆ ಕ್ಯಾಶು’

ರಾಜ್ಯ ರಾಜಕೀಯದ ಒಳವಲಯಗಳಲ್ಲಿ ಇಂಟರೆಸ್ಟಿಂಗ್ ಸುದ್ದಿಯೊಂದು ಹರಿದಾಡುತ್ತಿದೆ. ಅದರ ಪ್ರಕಾರ, ‘ಮೊನ್ನೆ ಮೊನ್ನೆಯವರೆಗೆ ಶರಂಪರ ಬಡಿದಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಇಬ್ಬರು ನಾಯಕರು ಈಗ ಆಳದಲ್ಲಿ ಒಂದಾಗಲು ಬಯಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಆಪ್ತರ ಮೂಲಕ ಪರಸ್ಪರ ಸಂದೇಶ ಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.

R T Vittalmurthy Column: ಡಿಕೆಶಿ ಫ್ಲೈಟಿನಿಂದ ಇಬ್ಬರು ಇಳೀತಾರೆ

R T Vittalmurthy Column: ಡಿಕೆಶಿ ಫ್ಲೈಟಿನಿಂದ ಇಬ್ಬರು ಇಳೀತಾರೆ

ಈಗಿರುವ ಮಾಹಿತಿಯಂತೆ ಡಿಕೆಶಿ ಸಂಪುಟದಲ್ಲಿರುವ ಇಬ್ಬರು ಸಚಿವರ ಮನವೊಲಿಸಿ ರಾಜೀನಾಮೆ ಕೊಡಿಸುವುದು ಸದ್ಯದ ಲೆಕ್ಕಾಚಾರ. ಅ ಮೂಲಕ ಈಗ ಖಾಲಿ ಇರುವ ಒಂದು ಹುದ್ದೆಯ ಜತೆ ಇನ್ನು ಎರಡು ಹುದ್ದೆಗಳಿಗೆ ಬಸವರಾಜ ಶಿವಣ್ಣನವರ್, ರೂಪಕಲಾ ಶಶಿಧರ್ ಮತ್ತು ಎಂ.ಕೃಷ್ಣಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಪ್ಲಾನು ಮಾಡಲಾಗಿದೆ.

R T Vittalmurthy Column: ಮೇಜರ್ ಸರ್ಜರಿಯ ಸುಳಿವು ಕೊಟ್ಟರು ನಿತಿನ್‌ ಅಬಿನ್

ಮೇಜರ್ ಸರ್ಜರಿಯ ಸುಳಿವು ಕೊಟ್ಟರು ನಿತಿನ್‌ ಅಬಿನ್

ಇನ್ನು ರಾಜ್ಯ ಬಿಜೆಪಿಗೆ ಸರ್ಜರಿ ಮಾಡಲು ಪಕ್ಷದ ವರಿಷ್ಟರು ಸಜ್ಜಾಗುತ್ತಿದ್ದು, ಇದರ ಹಿನ್ನೆಲೆ ಯಲ್ಲಿಯೇ ವಿವಿಧ ನಾಯಕರ ಜತೆ ಮಾತುಕತೆ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಇಂತಹ ಕಾರಣಗಳಿಗಾಗಿಯೇ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ರಾಜ್ಯದ ಮೂವರು ನಾಯಕ ರನ್ನು ಕರೆಸಿ ಮಾತನಾಡಿ ದ್ದಾರೆ. ಈ ಪೈಕಿ ಒಬ್ಬರು ಕೇಂದ್ರ ಸಚಿವರಾದ ವಿ.ಸೋಮಣ್ಣ, ಮತ್ತೊಬ್ಬರು ಮಾಜಿ ಸಚಿವ ಮುರುಗೇಶ್ ನಿರಾಣಿ, ಮಗದೊಬ್ಬರು ಅರವಿಂದ ಬೆಲ್ಲದ್.

R T Vittalmurhy Column: ವಿಜಯೇಂದ್ರ ಅವರ ರಿಯಲ್ ಪ್ರಾಬ್ಲಮ್ಮು

R T Vittalmurhy Column: ವಿಜಯೇಂದ್ರ ಅವರ ರಿಯಲ್ ಪ್ರಾಬ್ಲಮ್ಮು

ಯಾವಾಗ ಕುಮಾರಸ್ವಾಮಿ ಸಿಟ್ಟು ಮಾಡಿಕೊಂಡರೋ? ಅದು ಕೆಲವರ ಮೂಲಕ ರಾಜ್ಯ ಬಿಜೆಪಿಯ ಉಸ್ತುವಾರಿ ರಾಧಾಮೋಹನ ದಾಸ್ ಅಗರ್ವಾಲ್ ಅವರ ಕಿವಿಗೆ ತಲುಪಿದೆ. ಹೀಗೆ ವಿಷಯ ಕಿವಿಗೆ ಬಿದ್ದಿದ್ದೇ ತಡ, ಗಡಬಡಿಸಿ ಮೇಲೆದ್ದ ರಾಧಾಮೋಹನದಾಸ್ ಅಗರ್ವಾಲ್ ಅವರು ಆ ಹೊತ್ತಿಗಾಗಲೇ ದಿಲ್ಲಿಯಲ್ಲಿದ್ದ ಕರ್ನಾಟಕದ ಇಬ್ಬರು ನಾಯಕರನ್ನು ಸಂಪರ್ಕಿಸಿದ್ದಾರೆ. ಅಷ್ಟೇ ಅಲ್ಲ, ‘ನೀವಿಬ್ಬರೂ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ರಾಜ್ಯದಲ್ಲಿ ಉಭಯ ಪಕ್ಷಗಳು ಒಗ್ಗೂಡಿ ಹೋರಾಡಬೇಕು ಎಂಬ ವಿಷಯದಲ್ಲಿ ನಾವು ಕ್ಲಿಯರ್ ಆಗಿದ್ದೇವೆ ಅಂತ ಕನ್ವಿನ್ಸು ಮಾಡಿ ಬನ್ನಿ’ ಅಂತ ಸೂಚಿಸಿದ್ದಾರೆ.

R T Vittalmurthy Column: ರಾಹುಲ್ ಗಾಂಧಿ ಅವರಿಗೆ ಭಿನ್ನರ ಚಿಂತೆ!

ರಾಹುಲ್ ಗಾಂಧಿ ಅವರಿಗೆ ಭಿನ್ನರ ಚಿಂತೆ!

ಎರಡನೇ ಕಂತಿನ ಸಂಪುಟ ವಿಸ್ತರಿಸುವಾಗ ಯುವಕರಿಗೆ, ಹೊಸ ಮುಖಗಳಿಗೆ ಆದ್ಯತೆ ನೀಡಬೇಕು ಅಂತ ರಾಹುಲ್ ಗಾಂಧಿ ಸೂಚನೆ ನೀಡಿದ್ದರು. ಅವರ ಈ ಸೂಚನೆಯ ಪ್ರಕಾರ, ಯುವಕರಿಗೆ, ಹೊಸ ಮುಖ ಗಳಿಗೆ ಆದ್ಯತೆ ಸಿಕ್ಕಿದೆಯಾದರೂ ಫೈನಲ್ ಪಟ್ಟಿಯಿಂದ ಹೊರಗುಳಿಯುವ ಶಾಸಕರು ಮಾತ್ರವಲ್ಲ, ರಾಜ್ಯದ ನಾಯಕರೂ ಕೂಡಾ ಅಪ್‌ಸೆಟ್ ಆಗುವ ಸಾಧ್ಯತೆ ಜಾಸ್ತಿ.

R T Vittalmurthy Column: ಡಿಚ್ಚಿ ಹೊಡೆಯುತ್ತಿದೆ ರಾಹುಲ್ ಪಟ್ಟಿ?

R T Vittalmurthy Column: ಡಿಚ್ಚಿ ಹೊಡೆಯುತ್ತಿದೆ ರಾಹುಲ್ ಪಟ್ಟಿ?

ಒಂದು ಕಡೆ ರಾಜ್ಯದ ಕಾಂಗ್ರೆಸ್ ನಾಯಕತ್ವಕ್ಕೆ ಬಲ ತುಂಬುವ ಕೆಲಸವನ್ನು ಅದರ ಹೈಕಮಾಂಡ್ ಮಾಡುತ್ತಿದೆ. ಆದರೆ ಇನ್ನೊಂದು ಕಡೆ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಅಸಮಾಧಾನ ತಣಿಸಲು ಅದರ ದಿಲ್ಲಿ ವರಿಷ್ಠರಿಂದ ಸಾಧ್ಯವಾಗುತ್ತಿಲ್ಲ. ನಾಯಕತ್ವ ಬದಲಿಸಿ ಅಂತ ಕೂಗುತ್ತಿರುವವರ ಬಾಯಿಗೆ ವರಿಷ್ಟರು ಇದುವರೆಗೆ ಬೀಗ ಹಾಕಿಲ್ಲ.

R T Vittalmurthy Column: ಸಂಪುಟ ಸರ್ಕಸ್ಸು ಏಕೆ ಮುಗಿಯುತ್ತಿಲ್ಲ?

R T Vittalmurthy Column: ಸಂಪುಟ ಸರ್ಕಸ್ಸು ಏಕೆ ಮುಗಿಯುತ್ತಿಲ್ಲ?

ಕಳೆದ ಶನಿವಾರ ರಾಜ್ಯ ಬಿಜೆಪಿ ಪಾಳಯದಲ್ಲಿ ಕುತೂಹಲಕಾರಿ ಸುದ್ದಿಯೊಂದು ತೇಲಿ ಬಂತು. ಕರ್ನಾಟಕದಲ್ಲಿ ಪಕ್ಷದ ವಿದ್ಯಮಾನಗಳನ್ನು ಗಮನಿಸಲು ವರಿಷ್ಟರು ವೀಕ್ಷಕರ ತಂಡವನ್ನು ಕಳಿಸಲು ನಿರ್ಧರಿಸಿzರೆ ಎಂಬುದು ಈ ಸುದ್ದಿ. ಜುಲೈ ಇಪ್ಪತ್ತೈದರ ಹೊತ್ತಿಗೆ ಕರ್ನಾಟಕಕ್ಕೆ ಆಗಮಿಸ ಲಿರುವ ಈ ವೀಕ್ಷಕರ ಪಡೆ ಇಲ್ಲಿ ವಿವಿಧ ಹಂತದ ನಾಯಕರ ಅಭಿಪ್ರಾಯ ಸಂಗ್ರಹಿಸಿ, ಆನಂತರ ದಿಲ್ಲಿಗೆ ಮರಳಲಿದೆ.

R T Vittalmurthy Column: ‘ಸಿರಾ-ಶಿಕು’ ಸೇತುವೆಗೆ ‘ಡಿಕೆ’ ಸಿಮೆಂಟು

R T Vittalmurthy Column: ‘ಸಿರಾ-ಶಿಕು’ ಸೇತುವೆಗೆ ‘ಡಿಕೆ’ ಸಿಮೆಂಟು

1957ರಲ್ಲಿ ಮುಖ್ಯಮಂತ್ರಿಯಾದ ನಿಜಲಿಂಗಪ್ಪ, 1958ರಲ್ಲಿ ಪಕ್ಷದೊಳಗಿನ ಬಂಡಾಯಕ್ಕೆ ಬಲಿಯಾಗ ಬೇಕಾಯಿತು. ಅದರೆ ಹೀಗೆ ಸಿಎಂ ಹುದ್ದೆಯಿಂದ ಕೆಳಗಿಳಿದರೂ ಪಕ್ಷದಲ್ಲಿ ಅವರ ಶಕ್ತಿ ಕುಂದಿರಲಿಲ್ಲ. ಆದರೆ ನಿಜಲಿಂಗಪ್ಪ ಅವರ ಜಾಗಕ್ಕೆ ಬಂದು ಕುಳಿತ ಬಿ.ಡಿ.ಜತ್ತಿಯವರಿಗೆ ಇದು ಮುಖ್ಯವಾಗಲಿಲ್ಲ. ಹೀಗಾಗಿ ಅವರು ತಮ್ಮಿಚ್ಚೆಯಂತೆ ಮುನ್ನುಗ್ಗಿದರು.

R T Vittalmurthy Column: ಅಲ್ರೀ, ಬಿಕೆ-ಪಿಕೆ ಚಿಂತೆ ನಿಮಗೇಕ್ರೀ?

R T Vittalmurthy Column: ಅಲ್ರೀ, ಬಿಕೆ-ಪಿಕೆ ಚಿಂತೆ ನಿಮಗೇಕ್ರೀ?

ನಿಜವಾದ ಮತದಾರರು ಮತ್ತು ನಕಲಿ ಮತದಾರರನ್ನು ಗುರುತಿಸುವಲ್ಲಿ ಯಶಸ್ಸು ಕಂಡಿದ್ದರು. ಅಷ್ಟೇ ಅಲ್ಲ, ನಿಜವಾದ ಮತದಾರರು ಮತಪಟ್ಟಿಯಲ್ಲಿ ಉಳಿದುಕೊಳ್ಳಲು ಮತ್ತು ನಕಲಿ ಮತದಾರರು ಮತ ಪಟ್ಟಿಗೆ ಸೇರದಂತೆ ನೋಡಿಕೊಂಡಿದ್ದರು. ಪರಿಣಾಮ? ಈ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆ ಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತು.

R T Vittalmurthy Column: ಜುಲೈ ಹತ್ತಕ್ಕೆ ಫುಲ್ ಆಗಲಿದೆ ಡಿಕೆ ಫ್ಲೈಟು

R T Vittalmurthy Column: ಜುಲೈ ಹತ್ತಕ್ಕೆ ಫುಲ್ ಆಗಲಿದೆ ಡಿಕೆ ಫ್ಲೈಟು

ಜುಲೈ ಹತ್ತರ ಹೊತ್ತಿಗೆ ರಾಜ್ಯ ಸಚಿವ ಸಂಪುಟ ವಿಸ್ರರಣೆಯಾಗಲಿದೆ. ಆ ಮೂಲಕ ಟೇಕಾಫ್ ಆಗಿರುವ ಡಿಕೆ-26 ಫ್ಲೈಟು ಫುಲ್ಲಾಗಲಿದೆ. ಅಂದ ಹಾಗೆ ಜುಲೈ ಮಧ್ಯ ಭಾಗದಲ್ಲಿ ವಿಧಾನಮಂಡಲ ಅಧಿವೇಶನ ನಡೆಸುವ ಲೆಕ್ಕಾಚಾರ ಸಿಎಂ ಡಿ.ಕೆ.ಶಿವಕುಮಾರ್ ಅವರಲ್ಲಿದ್ದು, ಈ ವಾರ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಅಧಿವೇಶನದ ಡೇಟು ಫಿಕ್ಸಾಗಲಿದೆ.

R T Vittalmurthy Column: ಅಮಿತ್‌ ಷಾ ಚಿಂತೆಗೆ ಇಷ್ಟೆಲ್ಲ ಕಾರಣಗಳಿವೆ

R T Vittalmurthy Column: ಅಮಿತ್‌ ಷಾ ಚಿಂತೆಗೆ ಇಷ್ಟೆಲ್ಲ ಕಾರಣಗಳಿವೆ

ಇವತ್ತು ಸಿಎಂ ಹುದ್ದೆಗೆ ಪಟ್ಟು ಹಿಡಿದು ಡಿ.ಕೆ. ಶಿವಕುಮಾರ್ ಯಶಸ್ವಿಯಾದ ಮತ್ತು ಸಿಎಂ ಹುದ್ದೆ ಯಿಂದ ಸಿದ್ದರಾಮಯ್ಯ ಕೆಳಗಿಳಿದ ಬೆಳವಣಿಗೆ ಅಹಿಂದ ವರ್ಗಗಳನ್ನು ಕೆರಳಿಸಿದೆ. ಪರಿಣಾಮವಾಗಿ ಪ್ರಬಲ ಕುರುಬ ಸಮುದಾಯ ಸಾಲಿಡ್ಡಾಗಿ ಕಾಂಗ್ರೆಸ್ ವಿರುದ್ಧ ತಿರುಗಿ ಬೀಳಲಿದೆ. ಇದೇ ರೀತಿ ಮುಸ್ಲಿಂ ಸಮುದಾಯದಲ್ಲಿ ಉಂಟಾಗಿರುವ ಗೊಂದಲ ಜೆಡಿಎಸ್ ಪಾಳಯಕ್ಕೆ ಲಾಭ ತಂದುಕೊಡಲಿದೆ.

R T Vittalmurthy Column: ಸಾಫ್ಟ್ ಸೆಕ್ಯುಲರ್ ಡಿಕೆ; ಕಟ್ಟರ್‌ ಸೆಕ್ಯುಲರ್‌ ಪಿಕೆ

ಸಾಫ್ಟ್ ಸೆಕ್ಯುಲರ್ ಡಿಕೆ; ಕಟ್ಟರ್‌ ಸೆಕ್ಯುಲರ್‌ ಪಿಕೆ

ಇತ್ತೀಚೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅಷ್ಟೇ ಅಲ್ಲ,ಪಕ್ಷದ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ಹಲವು ಬೆಳವಣಿಗೆಗಳ ಹಿಂದೆ ಅವರ ನೆರಳು ಕಾಣು ತ್ತಿದೆ. ಕಳೆದ ವಾರ ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಬಿಜೆಪಿಯ ಪ್ರೊ.ಎಂ.ನಾಗರಾಜ್ ಆಯ್ಕೆಯಾದರಲ್ಲ? ಇವರ ಆಯ್ಕೆಯ ಹಿಂದಿದ್ದವರು ಇದೇ ಪ್ರಲ್ಹಾದ ಜೋಶಿ. ಅಂದ ಹಾಗೆ ಯಡಿಯೂ ರಪ್ಪ ಟೀಮು ರಾಜ್ಯಸಭೆಗೆ ಡಿ.ವಿ.ಸದಾನಂದಗೌಡರನ್ನು ಕಳಿಸಲು ಅತ್ಯುತ್ಸಾಹದಿಂದಿದ್ದರೂ ಕೊನೆ ಘಳಿಗೆಯಲ್ಲಿ ನಾಗರಾಜ್ ಅವರ ಹೆಸರು ಮುನ್ನೆಲೆಗೆ ಬಂತು. ಇದಕ್ಕೆ ಪ್ರಲ್ಹಾದ ಜೋಶಿಯಯವರೇ ನೇರ ಕಾರಣ.

R‌ T Vittalmurthy Column: ಟೇಕ್‌ ಆಫ್‌ ಆಗುತ್ತಿದೆ ಡಿ.ಕೆ.ಫ್ಲೈಟ್

R‌ T Vittalmurthy Column: ಟೇಕ್‌ ಆಫ್‌ ಆಗುತ್ತಿದೆ ಡಿ.ಕೆ.ಫ್ಲೈಟ್

ಡಿ.ಕೆ.ಶಿವಕುಮಾರ್ ನೇತೃತ್ವದ ಮೊದಲ ಕಂತಿನ ಸಂಪುಟ ಸಾಲಿಡ್ಡಾಗಿದೆಯಾದರೂ ಅದರಲ್ಲಿ ‘ಅಹಿಂದ’ ವರ್ಗಗಳ ಮೇಜರ್ ಪಿಲ್ಲರುಗಳು ಕಾಣಿಸುತ್ತಿಲ್ಲ. ಈ ಪೈಕಿ ಮುಖ್ಯರಾದವರು ಹಿಂದೆ ಸಮಾಜ ಕಲ್ಯಾಣ ಸಚಿವರಾಗಿದ್ದ ಹೆಚ್.ಸಿ.ಮಹದೇವಪ್ಪ. ರಾಜ್ಯದಲ್ಲಿ ಅಹಿಂದ ಚಳವಳಿ ತಲೆ ಎತ್ತಲು ಹೆಚ್.ಸಿ.ಮಹದೇಪ್ಪ ಪವರ್ ಫುಲ್ ಆದ ಕಾಣಿಕೆ ನೀಡಿದ್ದಾರೆ.

R T Vittalmurthy Column: ಸಿದ್ದು ವಿದಾಯದ ಅಂತಿಮ ಕ್ಷಣಗಳು

R T Vittalmurthy Column: ಸಿದ್ದು ವಿದಾಯದ ಅಂತಿಮ ಕ್ಷಣಗಳು

ಯಾವಾಗ ರಾಹುಲ್ ಗಾಂಧಿಯವರು ಈ ಮಾತು ಹೇಳಿದರೋ? ಆಗ ಗಟ್ಟಿ ಮನಸ್ಸು ಮಾಡಿ ಕೊಂಡ ಸಿದ್ದರಾಮಯ್ಯ ಅವರು: ‘ಸಾರ್, ನೀವು ನನಗೆ ನಿರಂತರವಾಗಿ ಬೆಂಬಲ, ಸಹಕಾರ ನೀಡುತ್ತಾ ಬಂದವರು. ಪಕ್ಷವನ್ನು ಬಲಿಷ್ಟಗೊಳಿಸಲು ನೀವು ಏನು ಹೇಳುತ್ತೀರೋ? ಅದನ್ನು ಮಾಡಲು ನಾನು ರೆಡಿ’ ಎಂದಿದ್ದಾರೆ.

R T Vittalmurthy Column: ರೆಡಿಯಾಗುತ್ತಿದೆ ಅಮಿತ ಸಮರ ಸೂತ್ರ

R T Vittalmurthy Column: ರೆಡಿಯಾಗುತ್ತಿದೆ ಅಮಿತ ಸಮರ ಸೂತ್ರ

ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು, ಮುಂದಿನ ಯುದ್ಧಕ್ಕೆ ಅಣಿಗೊಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ಲಾನು ರೆಡಿಯಾಗಿದೆ. ಅವರು ಇಂತಹ ಪ್ಲಾನು ರೆಡಿ ಮಾಡಲು 2018ರ ಅನುಭವವೇ ಕಾರಣ. ಆ ಸಂದರ್ಭದಲ್ಲಿ ಕರ್ನಾಟಕಕ್ಕೆ ಬಂದ ಅಮಿತ್ ಶಾ ಬೆಂಗಳೂರಿನ ಯಲಹಂಕ ಸಮೀಪದ ರೆಸಾರ್ಟ್ ಒಂದರಲ್ಲಿ ಮೀಟಿಂಗು ಮಾಡಿದ್ದರು. ಈ ಸಭೆಯಲ್ಲಿ ಮಾತನಾಡಿದ ಪಕ್ಷದ ನಾಯಕಿಯೊಬ್ಬರು: ‘ನಾವು ಚುನಾವಣೆಯಲ್ಲಿ ಗೆಲ್ಲಲು ಅದು ಮಾಡ ಬೇಕು, ಇದು ಮಾಡಬೇಕು’ ಅಂತ ವೀರಾವೇಶದಿಂದ ಮಾತನಾಡಿದರಂತೆ.

R T Vittalmurthy Column: ಫೈನಲ್‌ ಸೆಟ್ಲ್‌ʼಮೆಂಟಿಗೆ ಸಿದ್ದರಾಮಯ್ಯ ರೆಡಿ

R T Vittalmurthy Column: ಫೈನಲ್‌ ಸೆಟ್ಲ್‌ʼಮೆಂಟಿಗೆ ಸಿದ್ದರಾಮಯ್ಯ ರೆಡಿ

ಕಳೆದ ಎರಡು ವರ್ಷಕ್ಕೂ ಹೆಚ್ಚು ಕಾಲದಿಂದ ವೆಂಕಟೇಶ್ವರ ಸ್ತೋತ್ರದಂತಾಗಿರುವ ಅಧಿಕಾರ ಹಂಚಿಕೆ ಯ ಮಾತನ್ನು ಸೆಟ್ಲ್‌ ಮಾಡಿಕೊಳ್ಳುವುದು ಸಿದ್ದರಾಮಯ್ಯ ಅವರ ನಿರ್ಧಾರ. ಅಂದ ಹಾಗೆ ಸಿದ್ದರಾಮ ಯ್ಯ ಅವರು ತಕ್ಷಣದ ಸೆಟ್ಲ್‌ಮೆಂಟ್ʼಗೆ ರೆಡಿಯಾಗಲು ಹಲವು ಕಾರಣಗಳಿವೆ. ಈ ಪೈಕಿ ಮುಖ್ಯವಾದುದು ಡಿ.ಕೆ.ಶಿವಕುಮಾರ್ ಅವರ ಕ್ಯಾಂಪಿನಿಂದ ಕೇಳಿ ಬರುತ್ತಿರುವ ಮಾತು.

R T Vittalmurthy Column: ಸಿದ್ದು ಸಂದೇಶ ರಾಹುಲ್‌ ಕಿವಿಗೆ ತಲುಪಿತು

R T Vittalmurthy Column: ಸಿದ್ದು ಸಂದೇಶ ರಾಹುಲ್‌ ಕಿವಿಗೆ ತಲುಪಿತು

ಮಮತಾ ಬ್ಯಾನರ್ಜಿ ಅವರ ಅಭೇಧ್ಯ ಕೋಟೆ ಛಿದ್ರವಾಯಿತು ಎಂಬುದು ಕಾಂಗ್ರೆಸ್ ಸೇರಿದಂತೆ ಬಿಜೆಪಿ ವಿರೋಧಿ ಶಕ್ತಿಗಳ ಆರೋಪ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ವರಿಷ್ಟರ ಗಮನವೀಗ ಕರ್ನಾಟಕದ ಮೇಲೆ ಬಿದ್ದಿದೆ. ಅಂದ ಹಾಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಅಧಿಕಾರ ಹಿಡಿದರೂ ಬಿಜೆಪಿಗೆ ಇನ್ನೂ ದಕ್ಷಿಣ ಭಾರತ ಒಲಿಯುತ್ತಿಲ್ಲ. ತಮಿಳುನಾಡಿನಲ್ಲಿ ಅದೇನೇ ಕಸರತ್ತು ಮಾಡಿದರೂ ಅದಕ್ಕೆ ಶಕ್ತಿ ಸಿಗುತ್ತಿಲ್ಲ. ಎಐಎಡಿಎಂಕೆಯ ಜತೆ ಸೇರಿ ದಷ್ಟಪುಷ್ಟ ವಾಗೋಣ ಎಂದರೂ ಅದು ಸಾಧ್ಯವಾಗಿಲ್ಲ

R T Vittalmurthy Column: ಮದಕರಿ ನಾಯಕ ಫ್ರಂಟ್‌ ಲೈನಿಗೆ ಬಂದಿದ್ದೇಕೆ ?

ಮದಕರಿ ನಾಯಕ ಫ್ರಂಟ್‌ ಲೈನಿಗೆ ಬಂದಿದ್ದೇಕೆ ?

ಯುವ ಜನರ ಮನ:ಸ್ಥಿತಿ ಆಯಾ ಕುಟುಂಬದ ಹೆಣ್ಣು ಮಕ್ಕಳ ಮೇಲೆ ಪ್ರಭಾವ ಬೀರುವು ದರಿಂದ ಆ ಆಂಗಲ್ಲಿನಲ್ಲೂ ಹೊಡೆತ ಬೀಳುತ್ತದೆ. ಮೊನ್ನೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮುಸ್ಲಿಂ ಮತ ಬ್ಯಾಂಕ್ ವರ್ತಿಸಿದ್ದು ಹೀಗೆಯೇ ತಾನೇ? ಹೀಗಾಗಿಯೇ ಕಾಂಗ್ರೆಸ್ ವರಿಷ್ಟರಿಗೆ ಚಿಂತೆ ಶುರುವಾಗಿದೆ.

R T Vittalmurthy Column: ಸಿದ್ದರಾಮಯ್ಯ-ಡಿಕೆಶಿ ಕ್ಯಾಂಪಿನ ಫ್ರೆಷ್‌ ರಿಪೋರ್ಟು

ಸಿದ್ದರಾಮಯ್ಯ-ಡಿಕೆಶಿ ಕ್ಯಾಂಪಿನ ಫ್ರೆಷ್‌ ರಿಪೋರ್ಟು

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಾಡಿದ ಮಾತನ್ನು ಕೇಳಿ ರಾಜಣ್ಣ ಸುಮ್ಮನೆ ಮುಖ ನೋಡಿದಾಗ ಪುನಃ ಮಾತನಾಡಿದ ಸಿದ್ದರಾಮಯ್ಯ: ‘ನಾನು ಇರಬೇಕೋ ಕೆಳಗಿಳಿಯಬೇಕೋ? ಎರಡರಲ್ಲಿ ಒಂದು ವಿಷಯವನ್ನು ಕನ್ʼಫರ್ಮ್ ಅಗಿ ಹೇಳಿ. ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯಬೇಕು ಎಂಬುದು ನಿಮ್ಮ ಇಚ್ಚೆಯಾದರೆ ನನ್ನ ಸಚಿವ ಸಂಪುಟವನ್ನು ಪುನಾರಚಿಸಲು ಗ್ರೀನ್ ಸಿಗ್ನಲ್ ಕೊಡಿ ಅಂತ ಕೇಳುತ್ತೇನೆ.

R T Vittalmurthy Column: ಜಮೀರ್‌ ಕೋಟೆಗೆ ʼನಾಹುʼ ಸಾಬ್‌ ಲಗ್ಗೆ

R T Vittalmurthy Column: ಜಮೀರ್‌ ಕೋಟೆಗೆ ʼನಾಹುʼ ಸಾಬ್‌ ಲಗ್ಗೆ

ಯಾವಾಗ ‘ನಾಹು’ಸಾಬ್ ತಮ್ಮ ಕೋಟೆಗೆ ಲಗ್ಗೆ ಹಾಕಲು ಹೊರಟಿದ್ದಾರೆ ಮತ್ತು ಎಐಸಿಸಿ ಲೆವೆಲ್ಲಿನಲ್ಲಿ ಕೆಲ ನಾಯಕರು ಇದಕ್ಕೆ ‘ತಾಕತ್ ಕೀ ದವಾ’ ನೀಡುತ್ತಿದ್ದಾರೆ ಎಂಬುದು ಕನರ್ಮ್ ಆಯಿತೋ ಅಗ ಜಮೀರ್ ಅಹ್ಮದ್ ಅವರು ಈ ಗೇಮ್ ಪ್ಲಾನಿಗೆ ಶಕ್ತಿ ತುಂಬುವ ಜಾಗದಲ್ಲಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರನ್ನು ಸಂಪರ್ಕಿಸಿದ್ದಾರೆ.

R‌ T Vittalmurthy Column: ಶಾಮನೂರು ಕೋಟೆಯಲ್ಲಿ ಸಂಪತ್ತಿಗೆ ಸವಾಲ್

R‌ T Vittalmurthy Column: ಶಾಮನೂರು ಕೋಟೆಯಲ್ಲಿ ಸಂಪತ್ತಿಗೆ ಸವಾಲ್

ಹತ್ತೊಂಬತ್ತನೇ ಶತಮಾನದ ಆರಂಭದಲ್ಲಿ ಅದುವರೆಗೂ ಅಜೇಯನಾಗಿದ್ದ ನೆಪೋಲಿಯನ್ ಬೋನಾ ಪಾರ್ಟೆ ‘ವಾಟರ್‌ಲೂ’ ಕದನದಲ್ಲಿ ಬ್ರಿಟಿಷರು ಮತ್ತವರ ಮಿತ್ರಕೂಟದೆದುರು ಸೋಲು ಅನುಭವಿಸಿದ. ಆ ಮೂಲಕ ಯೂರೋಪಿಯನ್ನರು ವಿಶ್ವದೆದುರು ತಲೆ ಎತ್ತಿ ನಿಲ್ಲುವಂತಾಯಿತು. ಈಗ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಕೂಡಾ ಭವಿಷ್ಯದಲ್ಲಿ ಕಾಂಗ್ರೆಸ್ ನಡೆ ‘ವಾಟರ್ ಲೂ’ ಕಡೆ ಎಂಬಂತೆ ಭಾಸವಾಗುತ್ತಿದೆ.

R T Vittalmurthy Column: ಸುರ್ಜೇವಾಲಾ ವಿರುದ್ಧ ಶುರುವಾಗಲಿದೆ ದಂಗೆ ?

R T Vittalmurthy Column: ಸುರ್ಜೇವಾಲಾ ವಿರುದ್ಧ ಶುರುವಾಗಲಿದೆ ದಂಗೆ ?

ಕರ್ನಾಟಕದ ನೆಲೆಯಲ್ಲಿ ಸಿದ್ದರಾಮಯ್ಯ ಅವರು ಪಕ್ಷದ ಪವರ್ ಪುಲ್ ನಾಯಕ. ಅವರನ್ನು ಬದಲಿಸುವುದು ಎಂದರೆ ಪಕ್ಷವನ್ನು ಅಸ್ಥಿರಗೊಳಿಸುವುದು ಎಂದರ್ಥ ಅಂತ ಸುರ್ಜೇವಾಲಾ ವರಿಷ್ಠರಿಗೆ ವಸ್ತುಸ್ಥಿತಿಯ ವರದಿ ಕೊಟ್ಟರೂ ಸಾಕಿತ್ತು. ಹಾಗೊಂದು ವೇಳೆ ನಾಯಕತ್ವ ಬದಲಾವಣೆ ಅನಿವಾರ್ಯ ಅಂತನ್ನಿಸಿದ್ದರೆ ವರಿಷ್ಠರು ಏನೇ ತೀರ್ಮಾನ ತೆಗೆದುಕೊಳ್ಳಲಿ. ಆದರೆ, ಸುರ್ಜೇವಾಲಾ ಅವರು ನಿರಂತರವಾಗಿ ಸಿದ್ದರಾಮಯ್ಯ ವಿರೋಧಿ ಬಣಕ್ಕೆ ಕುಮ್ಮಕ್ಕು ಕೊಡುತ್ತಾ ಬಂದರು.

Loading...