ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ರಂಜಿತ್​ ಎಚ್​ ಅಶ್ವತ್ಥ್

columnist

info74@vishwavani.news

ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್‌ ಎಚ್‌. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿ ಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Ranjith H Ashwath Column: ನಾಯಕರ ಮೇಲಾಟ: ಕಾರ್ಯಕರ್ತರಿಗೆ ಒದ್ದಾಟ

ನಾಯಕರ ಮೇಲಾಟ: ಕಾರ್ಯಕರ್ತರಿಗೆ ಒದ್ದಾಟ

ಪಕ್ಷದ ನಾಯಕರ ನಡುವಿನ ತಿಕ್ಕಾಟವಿದ್ದರೂ, ಇದರಲ್ಲಿ ಅತಿಹೆಚ್ಚು ಸಮಸ್ಯೆಗೆ ಒಳಗಾಗಿದ್ದು ಮಾತ್ರ ಸಂಘಟನೆ. ಏಕೆಂದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಇತ್ತ ಪಕ್ಷವನ್ನೂ ಬಿಟ್ಟುಕೊಡಲಾಗದೇ, ಅತ್ತ ನಾಯಕರನ್ನೂ ಬಿಟ್ಟುಕೊಡಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಉದಾಹರಣೆಗೆ, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಲಿಂಬಾವಳಿ ಅಥವಾ ಜಿ.ಎಂ.ಸಿದ್ದೇಶ್ವರ ಅವರೊಂದಿಗೆ ದಶಕಗಳ ಕಾಲ ಗುರುತಿಸಿಕೊಂಡಿರುವ ಪಕ್ಷದ ಕಾರ್ಯಕರ್ತರು ಈಗ ರಾಜ್ಯಾಧ್ಯಕ್ಷ ಹಾಗೂ ತಮ್ಮ ನಾಯಕನ ನಡುವೆ ಭಿನ್ನಮತ ಉಂಟಾದ ಮಾತ್ರಕ್ಕೆ ಇತ್ತ ನಾಯಕರನ್ನು ಬಿಡಲಾಗದೇ, ಅತ್ತ ಪಕ್ಷವನ್ನೂ ಬಿಡಲಾಗದ ಸ್ಥಿತಿಗೆ ಬಂದು ನಿಂತಿದ್ದಾರೆ.

Ranjith H Ashwath Column: ಹೈಕಮಾಂಡ್‌ ಅನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಕರ್ನಾಟಕ

ಹೈಕಮಾಂಡ್‌ ಅನ್ನೇ ಇಕ್ಕಟ್ಟಿಗೆ ಸಿಲುಕಿಸಿದ ಕರ್ನಾಟಕ

‘ನಾನೇ ಸಿಎಂ’ ಎಂದಿದ್ದ ಸಿದ್ದರಾಮಯ್ಯ ಅವರು ದೆಹಲಿಯಲ್ಲಿ ಕೂತು ಸುದ್ದಿಗೋಷ್ಠಿ ನಡೆಸುವ ಮೂಲಕ ಇದೇ ಸಂದೇಶವನ್ನು ರವಾನಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ದರು. ರಾಜಸ್ಥಾನದ ಅನುಭವವನ್ನು ನೋಡಿದ್ದ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರ ಹೇಳಿಕೆ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಬಣಕ್ಕೆ ‘ಡೋಂಟ್ ರಿಯಾಕ್ಟ್’ ಎನ್ನುವ ಸಂದೇಶವನ್ನು ರವಾನಿಸಿದೆ ಎನ್ನುವುದು ಸ್ಪಷ್ಟ.

Ranjith H Ashwath Column: ಸಿದ್ಧಾಂತಕ್ಕಾಗಿ ಪಕ್ಷದಲ್ಲಿರುವವರಿಗೊಂದು ಅವಕಾಶ ?

ಸಿದ್ಧಾಂತಕ್ಕಾಗಿ ಪಕ್ಷದಲ್ಲಿರುವವರಿಗೊಂದು ಅವಕಾಶ ?

ವರ್ಷದಿಂದ ವರ್ಷಕ್ಕೆ ಅಧಿಕಾರವನ್ನು ವಿಸ್ತರಿಸುತ್ತಲೇ ಸಾಗುತ್ತಿರುವ ಬಿಜೆಪಿ ನಾಯಕರಿಗೆ, ಕರ್ನಾಟಕದ ಇಂದಿನ ಸ್ಥಿತಿ ‘ಗಂಭೀರ’ ಎನಿಸದೇ ಇರಬಹುದು. ಆದರೆ ದಕ್ಷಿಣ ಭಾರತದಲ್ಲಿ ಪಕ್ಷದ ಬಾವುಟ ಕಟ್ಟಲು ಜನರಿಲ್ಲದ ಸಮಯದಲ್ಲಿ ‘ನಿಷ್ಠಾವಂತ’ ಕಾರ್ಯಕರ್ತರಿಂದಲೇ ಮಾದರಿ ಎನಿಸಿದ್ದ ರಾಜ್ಯ ಬಿಜೆಪಿಯಲ್ಲಿ ಇಂದು ವಲಸಿಗರದ್ದೇ ಕಾರುಬಾರಾಗುತ್ತಿರುವುದು ಹಲವು ಕಾರ್ಯಕರ್ತರ ಅಕ್ಷೇಪಕ್ಕೆ ಕಾರಣವಾಗಿದೆ ಎಂದರೆ ತಪ್ಪಾಗುವುದಿಲ್ಲ.

Ranjith H Ashwath Column: ಇನ್ನಾದರೂ ಒಂದಾಗುವುದೇ ಕಮಲದ ದಳಗಳು ?

ಇನ್ನಾದರೂ ಒಂದಾಗುವುದೇ ಕಮಲದ ದಳಗಳು ?

ಬಿಜೆಪಿ ರಾಜ್ಯಾಧ್ಯಕ್ಷರಾಗಿ ವಿಜಯೇಂದ್ರ ಹಾಗೂ ಪ್ರತಿಪಕ್ಷ ನಾಯಕರಾಗಿ ಆರ್.ಅಶೋಕ್ ನೇಮಕಗೊಂಡ ದಿನದಿಂದ ಬಿಜೆಪಿ ಭಿನ್ನಮತ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇದರಿಂದ ಬಿಜೆಪಿಗಾದ ಲಾಭ-ನಷ್ಟಕ್ಕಿಂತ ಮಿಗಿಲಾಗಿ ಕಾಂಗ್ರೆಸ್ ಸರಕಾರಕ್ಕಾದ ಲಾಭವನ್ನು ಲೆಕ್ಕ ಹಾಕುವುದು ಸುಲಭ ಎಂದರೆ ತಪ್ಪಾಗುವುದಿಲ್ಲ.

Ranjith H Ashwath Column: ಕೈ ಶಾಸಕರಿಗೆ ಲಗಾಮು ಹಾಕೋದ್ಯಾರು ?

ಕೈ ಶಾಸಕರಿಗೆ ಲಗಾಮು ಹಾಕೋದ್ಯಾರು ?

ಯಾವುದೇ ಪಕ್ಷ ಅಧಿಕಾರದಲ್ಲಿದ್ದರೂ ಆಡಳಿತ ಪಕ್ಷದ ಎಲ್ಲ ಶಾಸಕರು, ನಾಯಕರು ತೃಪ್ತರಾಗಿರು ತ್ತಾರೆ ಎನ್ನುವುದು ಸುಳ್ಳು. ಆದರೆ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ಹೊರ ಹಾಕುವ ಬದಲಿಗೆ, ಪಕ್ಷದ ವೇದಿಕೆಯಲ್ಲಿಯೇ ತಮ್ಮ ಅತೃಪ್ತಿಯನ್ನು ಹೊರ ಹಾಕುವುದು ಸಾಮಾನ್ಯ. ಅದಕ್ಕೆ ಪೂರಕವಾಗಿ ತಮ್ಮದೇ ಸರಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಬಾರದು ಎನ್ನುವ ‘ಅಲಿಖಿತ’ ನಿಯಮವೂ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಬಂದಾಗಿದೆ.

Ranjith H Ashwath Column: ದಳಗಳನ್ನು ಒಗ್ಗೂಡಿಸುವುದು ಸುಲಭವೇ ?

ದಳಗಳನ್ನು ಒಗ್ಗೂಡಿಸುವುದು ಸುಲಭವೇ ?

ಸಂಘಟನೆಯಿಲ್ಲದೇ ನೇರವಾಗಿ ಜನಪ್ರತಿನಿಧಿಯಾಗುವ ಉತ್ಸಾಹದಲ್ಲಿದ್ದ ನಿಖಿಲ್ ಕುಮಾರಸ್ವಾಮಿ, ಸತತ ಮೂರು ಸೋಲುಗಳ ಬಳಿಕ ಇದೀಗ ಸಂಘಟನೆಯ ಮೂಲಕ ಪಕ್ಷದ ರಾಜಕೀಯದಲ್ಲಿ ಆಯ ಕಟ್ಟಿನ ಸ್ಥಾನದಲ್ಲಿ ಕೂರಬೇಕೆನ್ನುವ ಲೆಕ್ಕಾಚಾರ ಆರಂಭಿಸಿದ್ದಾರೆ. ಇದರ ಭಾಗವಾಗಿ ‘ಜನರೊಂದಿಗೆ ಜನತಾದಳ’ ಎನ್ನುವ ಅಭಿಯಾನ ಆರಂಭಿಸಿ ‘ಮಿಸ್ಡ್ ಕಾಲ್’ ಅಭಿಯಾನ ಹಾಗೂ ರಾಜ್ಯಾದ್ಯಂತ ಸಂಘಟನಾತ್ಮಕ ಪ್ರವಾಸ ಮಾಡಲು ಮುಂದಾಗಿದ್ದಾರೆ.

P M Narendraswamy Interview: ಮಾಲಿನ್ಯ ನಿಯಂತ್ರಣಕ್ಕೆ ಕಾನೂನಿಗಿಂತ ಜಾಗೃತಿ ಅಗತ್ಯ

ಮಾಲಿನ್ಯ ನಿಯಂತ್ರಣಕ್ಕೆ ಕಾನೂನಿಗಿಂತ ಜಾಗೃತಿ ಅಗತ್ಯ

ರಾಜ್ಯವನ್ನು ಕಾಡುತ್ತಿರುವ ವಿವಿಧ ಮಾದರಿಯ ಮಾಲಿನ್ಯ ನಿಯಂತ್ರಿಸಲು ಸರಕಾರ ಹತ್ತಾರು ಕಾನೂನು ತರಬಹುದು. ಆದರೆ ಈ ಎಲ್ಲ ಕಾನೂನು ಮೀರಿ, ಜನರಲ್ಲಿ ಮಾಲಿನ್ಯ ನಿಯಂತ್ರಿಸುವ ಅರಿವು ಮೂಡಿಸಿ ದಾಗ ಮಾತ್ರ ಮಾಲಿನ್ಯ ನಿಯಂತ್ರಿಸುವಲ್ಲಿ ಯಶಸ್ಸು ಸಾಧ್ಯ. ಆದ್ದರಿಂದ ಮುಂದಿನ ಮೂರು ತಿಂಗಳುಗಳ ಕಾಲ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ, ಶಾಸಕ ಪಿ.ಎಂ. ನರೇಂದ್ರಸ್ವಾಮಿ ಅಭಿಪ್ರಾಯಪಟ್ಟರು.

Ranjith H Ashwath Column: ಅತಿಯಾದ್ರೆ ʼಕಪ್‌ʼ ಕೂಡ ಕಪ್ಪಾಗುತ್ತೆ

ಅತಿಯಾದ್ರೆ ʼಕಪ್‌ʼ ಕೂಡ ಕಪ್ಪಾಗುತ್ತೆ

18ನೇ ಆವೃತ್ತಿಯ ಆರಂಭದಲ್ಲಿಯೂ ‘ಇಎಸ್‌ಸಿಎನ್’ ಎನ್ನುವ ಮಹದಾಸೆಯೊಂದಿಗೆ ಆರ್‌ಸಿಬಿ ತನ್ನ ಆವೃತ್ತಿಯನ್ನು ಆರಂಭಿಸಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದ ಹೊರತಾಗಿ ಉಳಿದೆಲ್ಲ ಕಡೆ ಉತ್ತಮ ಪ್ರದರ್ಶನ ನೀಡಿ ಕೊನೆಗೂ ‘ಕಪ್ ನಮ್ದೇ’ ಎನ್ನುವ ಘೋಷಣೆಯನ್ನು ಮಾಡಿದ್ದಾಯಿತು. ಆರ್ ಸಿಬಿಯ ಈ ಗೆಲುವಿನ ಕ್ಷಣವನ್ನು ಕೇವಲ ಕರ್ನಾಟಕ ಮಾತ್ರವಲ್ಲದೇ, ವಿಶ್ವಾದ್ಯಂತ ಇರುವ ಅಭಿಮಾನಿಗಳು ಸಂಭ್ರಮಿಸಿದರು.

Ranjith H Ashwath Column: ಫಲಿತಾಂಶ ಸರಿಯಾಗಬೇಕೆಂದರೆ, ವ್ಯವಸ್ಥೆ ಸರಿಪಡಿಸಿ

ಫಲಿತಾಂಶ ಸರಿಯಾಗಬೇಕೆಂದರೆ, ವ್ಯವಸ್ಥೆ ಸರಿಪಡಿಸಿ

ಡಿಡಿಪಿಐಗಳಿಗೆ ನೀಡಿರುವ ನೋಟಿಸ್, ಈಗ ಬಂದಿರುವ ಫಲಿತಾಂಶಕ್ಕೆ ಸ್ಪಷ್ಟನೆ ನೀಡುವ ಬದಲಾಗಿ ಮುಂಬರುವ ದಿನಗಳಲ್ಲಿ ಯಾವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸಬೇಕು ಎನ್ನುವ ನೀಲನಕ್ಷೆ ತಯಾರಿಸಲು ‘ಎಚ್ಚರಿಕೆ’ ನೀಡುವ ನಿಟ್ಟಿನಲ್ಲಿ ನೀಡಲಾಗಿರುವ ನೋಟಿಸ್ ಆಗಿದ್ದರೆ ಉತ್ತಮ. ಆದರೆ ನೋಟಿಸ್‌ನ ಈ ನಡೆ ಹಲವರ ಆಕ್ಷೇಪಕ್ಕೆ ಕಾರಣವಾಗಿರುವುದಂತೂ ಸುಳ್ಳಲ್ಲ.

Ranjith H Ashwath Column: ಅಲೆ ಮೇಲೊಂದು ಅಲೆ; ಇದಕ್ಕಿಲ್ಲ ಕೊನೆ

ಅಲೆ ಮೇಲೊಂದು ಅಲೆ; ಇದಕ್ಕಿಲ್ಲ ಕೊನೆ

ಪ್ರತಿ ಬಾರಿಯೂ ಹೊಸ ತಳಿಯ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವ ಕರೋನಾವನ್ನು ಸಹಜ ಜ್ವರದ ರೀತಿಯಲ್ಲಿ ಸ್ವೀಕರಿಸಬೇಕೇ ಅಥವಾ ಗಂಭೀರ ಕಾಯಿಲೆ ಎಂದೂ ಪರಿಗಣಿಸಬೇಕೆ ಎನ್ನುವ ಜಿಜ್ಞಾಸೆ ಬಹುತೇಕರಲ್ಲಿದೆ. ಮೊದಲ ಎರಡು ಅಲೆಯಲ್ಲಿ ಇಡೀ ವಿಶ್ವವನ್ನು ತೀವ್ರವಾಗಿ ಕಾಡಿದ್ದ ಕರೋನಾ, ಮೂರನೇ ಹಾಗೂ ನಾಲ್ಕನೇ ಅವಧಿಯಲ್ಲಿ ಆಘಾತ ತರುವಂಥ ಅನಾಹುತವನ್ನು ಸೃಷ್ಟಿಸಿಲ್ಲ.

Ranjith H Ashwath Column: ಮೋದಿ ಸುತ್ತಲೇ ಕಾಂಗ್ರೆಸಿನ ಗಿರಕಿ !

ಮೋದಿ ಸುತ್ತಲೇ ಕಾಂಗ್ರೆಸಿನ ಗಿರಕಿ !

ಕಳೆದ ಒಂದೂವರೆ ದಶಕದಿಂದ ಕಾಂಗ್ರೆಸ್ ರಾಷ್ಟ್ರ ಮಟ್ಟದಲ್ಲಿ ಬಹುದೊಡ್ಡ ಹಿನ್ನಡೆ ಅನುಭವಿಸಲು ಈ ಲೆಕ್ಕಾ ಚಾರದಲ್ಲಿ ತಪ್ಪು ಹೆಜ್ಜೆ ಇಟ್ಟಿರುವುದೇ ಕಾರಣ ಎಂದರೆ ತಪ್ಪಾಗುವುದಿಲ್ಲ. 2014ರ ಲೋಕ ಸಭಾ ಚುನಾವಣೆಗೆ ಬಿಜೆಪಿ ಅಂದಿನ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಘೋಷಿಸಿದ ಕ್ಷಣದಿಂದ, ಈ ಟೀಕಾಸ್ತ್ರ ಪ್ರಯೋಗದ ವಿಷಯದಲ್ಲಿ ಕಾಂಗ್ರೆಸ್ ಎಡವಿಕೊಂಡು ಬಂದಿದೆ

Ranjith H Ashwath Column: ಯುದ್ದ ಭಾವನೆಗಳ ಮೇಲೆ ನಡೆಯಲ್ಲ

ಯುದ್ದ ಭಾವನೆಗಳ ಮೇಲೆ ನಡೆಯಲ್ಲ

ಕಳೆದ ಮೂರು ವಾರಗಳಿಂದ ದೇಶದಲ್ಲಿ ‘ಯುದ್ಧ’ದ ಕಾರ್ಮೋಡ ಕವಿದಿದೆ. ಮೊದಲ 15 ದಿನ ಪ್ರತೀಕಾರದ ಒತ್ತಡಗಳಿದ್ದರೆ, ‘ಆಪರೇಷನ್ ಸಿಂದೂರ’ದ ಬಳಿಕ ಪಾಕಿಸ್ತಾನಕ್ಕೆ ಇನ್ನೆಂದೂ ಏಳದಂತೆ ಪೆಟ್ಟು ಕೊಡಬೇಕು ಎನ್ನುವ ‘ಆಸೆ’ ಭಾರತೀಯರಲ್ಲಿ ಶುರುವಾಗಿತ್ತು. ಈ ಆಸೆಗೆ ತಕ್ಕಂತೆ ಭಾರತದ ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಪಾಕಿಸ್ತಾನ ಕುಸಿದು, ಅಮೆರಿಕದ ಮೂಲಕ ಕದನ ವಿರಾಮದ ಬೇಡಿಕೆಯಿಟ್ಟು, ಕದನವಿರಾಮ ಘೋಷಿಸಿ, ಮತ್ತೆ ಡ್ರೋನ್ ದಾಳಿ ನಡೆಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ.

Ranjith H Ashwath Column: ಶಾಂತಿಯ ತೋಟಕ್ಕೆ ಓಲೈಕೆಯೇ ತೊಡಕು

ಶಾಂತಿಯ ತೋಟಕ್ಕೆ ಓಲೈಕೆಯೇ ತೊಡಕು

ಈ ಹಿಂದೆ ಕಾನೂನು ಸುವ್ಯವಸ್ಥೆಯ ವಿಷಯದಲ್ಲಿ ಪಕ್ಷಾತೀತವಾಗಿ ಸರಕಾರಗಳು ತೀರ್ಮಾನ ತೆಗೆದುಕೊಳ್ಳುವಾಗ ‘ಕಠಿಣ’ ಕ್ರಮ ಕೈಗೊಳ್ಳುತ್ತಿದ್ದವು. ಆದರೆ ಕಾಲ ಬದಲಾದಂತೆ, ರಾಜಕೀಯ ಪಕ್ಷಗಳು ‘ಓಲೈಕೆ’ ರಾಜಕೀಯಕ್ಕೆ ಹೆಚ್ಚೆಚ್ಚು ಒತ್ತು ನೀಡಲು ಶುರು ಮಾಡಿದ ಬಳಿಕ ಪದೇಪದೆ ಕೋಮುಗಳ ಹೆಸರಲ್ಲಿ ಗಲಾಟೆಗಳ ಪ್ರಮಾಣ ಹೆಚ್ಚಾಗುತ್ತಿವೆ.

Ranjith H Ashwath Column: ಮತಬ್ಯಾಂಕ್‌ʼನ ಮಾತಾಗದಿರಲಿ ದೇಶದ ಭದ್ರತೆ

ಮತಬ್ಯಾಂಕ್‌ʼನ ಮಾತಾಗದಿರಲಿ ದೇಶದ ಭದ್ರತೆ

ದೇಶವನ್ನೇ ಬೆಚ್ಚಿ ಬೀಳಿಸಿದ ಪಹಲ್ಗಾಮ್ ಉಗ್ರರ ದಾಳಿಯ ಸಮಯದಲ್ಲಿ ಕೆಲ ನಾಯಕರು ನಡೆದು ಕೊಂಡಿರುವ ರೀತಿಯ ಬಗ್ಗೆ ಚರ್ಚಿಸಬೇಕಿದೆ. ಈ ಉಗ್ರರ ದಾಳಿಗೆ ಕೇಂದ್ರ ಸರಕಾರದ ಗುಪ್ತಚರ ಇಲಾಖೆಯ ವೈಫಲ್ಯ ಕಾರಣ ಎನ್ನುವುದು ಪ್ರತಿಪಕ್ಷಗಳ ವಾದವಾಗಿದ್ದರೆ, ಸ್ಥಳೀಯರ ಕುಮ್ಮಕ್ಕಿನಿಂದಲೇ ಉಗ್ರವಾದಿಗಳು ದೇಶದೊಳಗೆ ನುಸುಳಿದ್ದಾರೆ ಎನ್ನುವುದು ಬಿಜೆಪಿ ಹಾಗೂ ಮೈತ್ರಿ ಪಕ್ಷಗಳ ವಾದವಾಗಿದೆ

Nadoja Mahesh Joshi Interview: ಟೀಕೆಗೆ ಹೆದರಿ, ಕೆಲಸದಿಂದ ಹಿಂಜರಿಯುವುದಿಲ್ಲ

ಟೀಕೆಗೆ ಹೆದರಿ, ಕೆಲಸದಿಂದ ಹಿಂಜರಿಯುವುದಿಲ್ಲ

ಸಂಸ್ಥೆ ಮತ್ತು ಅದರ ಆಡಳಿತ ನಿಂತ ನೀರಲ್ಲ. ನಿರಂತರವಾಗಿ ಹರಿಯುತ್ತಿರುವ ಜೀವನದಿ. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಸಾಮರ್ಥ್ಯ, ಪಾರದರ್ಶಕತೆ, ಹೊಸ ಕಾನೂನಿನ ಅಳವಡಿಕೆ ಹಾಗೂ ನ್ಯಾಯಾಲಯಗಳ ತೀರ್ಪುಗಳ ಹಿನ್ನೆಲೆಯಲ್ಲಿ ಹಾಗೂ ಕಾಲ ಧರ್ಮಕ್ಕೆ ತಕ್ಕಂತೆ ಪರಿವರ್ತನೆಯ ಬದಲಾವಣೆ ಅಭಿವೃದ್ಧಿ ತರುವ ಕೆಲಸಕ್ಕೆ ಕೈ ಹಾಕಿದಾಗ ಕೆಲವು ವ್ಯಕ್ತಿಗಳಿಂದ ಅದರಲ್ಲೂ ಕೆಲವು ಪಟ್ಟಭದ್ರ ಹಿತಾಸಕ್ತಿಗಳ ವಿರೋಧ ಸಹಜ

Ranjith H Ashwath Column: ಜಾತಿಯ ವಿಷಯದಲ್ಲಿ ಮೌನವೇ ಲೇಸೆಂದ ಬಿಜೆಪಿ

ಜಾತಿಯ ವಿಷಯದಲ್ಲಿ ಮೌನವೇ ಲೇಸೆಂದ ಬಿಜೆಪಿ

ಜಾತಿಗಣತಿಯನ್ನು ವಿರೋಧಿಸಿ ಮಾತನಾಡಿದರೆ ಲಿಂಗಾಯತ, ಒಕ್ಕಲಿಗ ಸೇರಿದಂತೆ ಮೇಲ್ಜಾತಿಯನ್ನು ‘ಮೆಚ್ಚಿ’ಸಬಹುದು. ಆದರೆ ಈ ಜಾತಿಗಣತಿ ಪರವಾಗಿರುವ ಹಲವು ಸಮು ದಾಯದ ವಿರೋಧ ಕಟ್ಟಿ ಕೊಳ್ಳಬೇಕಾಗುತ್ತದೆ. ಅದರಲ್ಲಿಯೂ ಬಿಜೆಪಿಯೊಂದಿಗೆ ಮೊದಲಿ ನಿಂದಲೂ ಗುರುತಿಸಿಕೊಂಡಿರುವ ಪರಿಶಿಷ್ಟ ಪಂಗಡ, ಸಣ್ಣ ಪ್ರಮಾಣದಲ್ಲಿ ಬಿಜೆಪಿಯೊಂದಿಗೆ ಇರುವ ಕುರುಬರು ಸೇರಿದಂತೆ ಹಲವು ಹಿಂದುಳಿದ ವರ್ಗಗಳ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ.

S Raghunath Interview: ವೈಜ್ಞಾನಿಕ ಸಮೀಕ್ಷೆ ನಡೆಸಲಿ

ವೈಜ್ಞಾನಿಕ ಸಮೀಕ್ಷೆ ನಡೆಸಲಿ

ಜಾತಿ ಗಣತಿಗೆ ಸಂಬಂಧಿಸಿದಂತೆ ಊಹಾತ್ಮಕ ವಿಷಯಗಳನ್ನು ಮುಂದಿಟ್ಟುಕೊಂಡು ಮಾತಾಡುವು ದಕ್ಕಿಂತ, ವರದಿಯನ್ನು ಸಂಪೂರ್ಣವಾಗಿ ಅಧ್ಯಯನ ನಡೆಸಿದ ಬಳಿಕ ಮುಂದೇನು ಮಾಡಬೇಕು ಎನ್ನುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್.ರಘುನಾಥ್ ಅಭಿಪ್ರಾಯಪಟ್ಟಿದ್ದಾರೆ.

Ranjith H Ashwath Column: ಜಾತಿಗಣತಿ ಎಂಬ ಜೇನುಗೂಡು

ಜಾತಿಗಣತಿ ಎಂಬ ಜೇನುಗೂಡು

150 ಕೋಟಿ ರು. ವೆಚ್ಚದಲ್ಲಿ ಸಿದ್ಧವಾಗಿರುವ ಈ ಜಾತಿಗಣತಿಗೆ ಮೊದಲಿನಿಂದಲೂ ಪಕ್ಷಾ ತೀತ ಪರ-ವಿರೋಧ ಚರ್ಚೆಗಳಿವೆ. ಅಹಿಂದ ಸಮುದಾಯದ ಬಹುಪಾಲು ಮಂದಿ ಜಾತಿಗಣತಿ ಬಹಿರಂಗವಾಗ ಬೇಕು ಎಂದಿದ್ದರೆ, ಸಮೀಕ್ಷೆ ನಡೆಸಿರುವುದನ್ನೇ ಮೇಲ್ಜಾತಿಗಳು ಅನುಮಾನಿಸಿ ಮರುಸಮೀಕ್ಷೆಗೆ ಆಗ್ರಹಿಸಿ ದ್ದವು. ಈ ವಿಷಯದಲ್ಲಿ ಕಾಂಗ್ರೆಸ್‌ನಲ್ಲಿಯೇ ಎರಡು ಪ್ರತ್ಯೇಕ ಗುಂಪುಗಳು ಕಾಣಿಸಿಕೊಳ್ಳುತ್ತಿರುವುದು ಸ್ಪಷ್ಟ

Ranjith H Ashwath Column: ಮುದುಡಿದ ಕಮಲದ ಜೀವಕಳೆಯ ಗುಟ್ಟೇನು ?

ಮುದುಡಿದ ಕಮಲದ ಜೀವಕಳೆಯ ಗುಟ್ಟೇನು ?

ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಬಳಿಕ ಕುಮಾರಸ್ವಾಮಿ ಅವರಿಗೆ ಕೇಂದ್ರ ಸಚಿವ ಸ್ಥಾನ ಸಿಕ್ಕಿದೆಯಾದರೂ, ಜೆಡಿಎಸ್ ಪಕ್ಷವಾಗಿ ‘ಅಸ್ತಿತ್ವ’ ಕಂಡುಕೊಳ್ಳುವ ಕಸರತ್ತಿನಲ್ಲಿದೆ. ಆದರೆ ಇದೇ ಕಸರತ್ತಿನಲ್ಲಿರುವ ಬಿಜೆಪಿಯವರೂ, ಹೋರಾಟವನ್ನು ಏಕಾಂಗಿಯಾಗಿ ಮಾಡುವುದಕ್ಕೆ ಆಸಕ್ತಿ ತೋರಿದ್ದಾರೆ. ಹಾಗೆ ನೋಡಿದರೆ, ರಾಷ್ಟ್ರ ಮಟ್ಟದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಹಾಗೂ ಬಿಜೆಪಿ ವರಿಷ್ಠರಿಗೆ ಒಳ್ಳೆಯ ಕೆಮಿಸ್ಟ್ರಿ ಯಿದ್ದರೂ ರಾಜ್ಯ ನಾಯಕತ್ವದ ವಿಷಯದಲ್ಲಿ ಹೊಂದಾ ಣಿಕೆಯಾಗುತ್ತಿಲ್ಲ

Ranjith H Ashwath Column: ಯತ್ನಾಳ್ ಉಚ್ಚಾಟನೆ ಆಯ್ತು, ಮುಂದೆ ?

ಯತ್ನಾಳ ಉಚ್ಚಾಟನೆ ಆಯ್ತು, ಮುಂದೆ ?

ಕಟ್ಟರ್ ಹಿಂದುತ್ವವಾದಿ, ಪಂಚಮಸಾಲಿ ಸಮುದಾಯದ ಮುಂಚೂಣಿ ನಾಯಕ ಎನಿಸಿಕೊಂಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಏಕಾಏಕಿ ಪಕ್ಷದಿಂದ ಉಚ್ಚಾ ಟಿಸಿದ್ದು. ಈ ಉಚ್ಚಾಟನೆ ಯನ್ನು ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನಿಸುತ್ತಿದ್ದಾರೆ. ಆದರೆ ಅಂತಿಮವಾಗಿ ಯತ್ನಾಳ್ ವಿರುದ್ಧ ಈ ರೀತಿಯ ಕಠಿಣ ಕ್ರಮ ಕೈಗೊಳ್ಳಲು ಅವರ ಮಾತಲ್ಲದೇ ಮತ್ತೇನೂ ಕಾರಣವಲ್ಲ ಎನ್ನುವುದು ಸ್ಪಷ್ಟ

Ranjith H Ashwath Column: ಕೆಟ್ಟ ಪರಂಪರೆಗೆ ನಾಂದಿ ಹಾಡದಿರಲಿ ಸದನ

ಕೆಟ್ಟ ಪರಂಪರೆಗೆ ನಾಂದಿ ಹಾಡದಿರಲಿ ಸದನ

ಮೊಬೈಲ್ ಬಳಕೆಯಷ್ಟೇ ಅಲ್ಲದೇ, ಶಾಸಕರು ಸದನಕ್ಕೆ ಹಾಜರಾಗದಿದ್ದರೆ ವೇತನ ತಡೆ ಹಿಡಿ ಯುವುದಕ್ಕೆ, ಸಚಿವರು ಸದನಕ್ಕೆ ಬಾರದಿದ್ದರೆ ಕ್ರಮವಹಿಸುವುದಕ್ಕೆ ಅನೇಕ ಅವಕಾಶ ಗಳಿವೆ. ಆದರೆ ಇತಿಹಾಸದಲ್ಲಿ ಈವರೆಗೆ ಶಾಸಕರು ಅನಧಿಕೃತ ಗೈರಾಗಿದ್ದಾರೆ ಎನ್ನುವ ಕಾರಣಕ್ಕೆ ವೇತನಕ್ಕೆ ಕತ್ತರಿ ಪ್ರಯೋಗ ಮಾಡಿರುವ ಅಥವಾ ತಡೆಹಿಡಿದಿರುವ ಉದಾಹರಣೆ ಗಳಿಲ್ಲ.

Vishweshwar Hegde Kageri Interview: ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಶಾಸಕರ ಅಮಾನತು, ಕ್ಷೇತ್ರದ ಜನತೆಗೆ ಮಾಡಿದ ಅಪಮಾನ

ಕರ್ನಾಟಕದ ವಿಧಾನಮಂಡಲಕ್ಕೆ ತನ್ನದೇಯಾದ ಇತಿಹಾಸವಿದೆ. ಇಡೀ ವಿಶ್ವಕ್ಕೆ ಸಂಸತ್ ಅನ್ನು ಮೊದ ಲು ಪರಿಚಯಿಸಿದ್ದು ಬಸವಣ್ಣನವರ ಅನುಭವ ಮಂಟಪ. ಈಗಿನ ವಿಧಾನ ಪರಿಷತ್ ಅನ್ನು ಆರಂಭಿಸಿ ದ್ದು ಮೈಸೂರು ಒಡೆಯರ್ ಅವರು. ಅವರ ಅವಧಿಯಲ್ಲಿ ಪ್ರಜಾಪ್ರತಿನಿಧಿ ಸಭೆಯ ಮೂಲಕ ಇಡೀ ದೇಶಕ್ಕೆ ಸಂಸದೀಯ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಇನ್ನು ಈ ಕರ್ನಾಟಕದ ಮಾದರಿ ಸಂಸದೀಯ ವ್ಯವಸ್ಥೆಗೆ ಅನೇಕರು ತಮ್ಮದೇಯಾದ ಕೊಡುಗೆ ನೀಡಿದ್ದಾರೆ

Ranjith H Ashwath Column: ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಬೇರುಗಳನ್ನು ಗಟ್ಟಿಗೊಳಿಸುವುದು ಯಾವಾಗ ?

ಕರ್ನಾಟಕದ ಇಂದಿನ ಪರಿಸ್ಥಿತಿಯೂ ಇದಕ್ಕೆ ಹೊರತಾಗಿಲ್ಲ. ಬೂತ್‌ಮಟ್ಟದಲ್ಲಿ ಸಂಘಟನೆ ಬಲಿಷ್ಠ ವಾಗಿರಲು ರಾಜ್ಯ ಮಟ್ಟದ ನಾಯಕತ್ವಕ್ಕಿಂತ ಹೆಚ್ಚಾಗಿ ಸ್ಥಳೀಯ ಮಟ್ಟದ ನಾಯಕತ್ವ ಗಟ್ಟಿಯಾಗಿರ ಬೇಕು. ಬೂತ್ ಮಟ್ಟದ ಸಂಘಟನೆಯನ್ನು ಗಟ್ಟಿಗೊಳಿಸಲು ಶಾಸಕರು, ಪದಾಧಿಕಾರಿಗಳು, ಸಚಿವರು, ರಾಜ್ಯಾಧ್ಯಕ್ಷರಿಂದ ಸಾಧ್ಯವಿಲ್ಲ.

Ranjith H Ashwath Column: ಬಹುಜನ ಹಿತಾಯ, ಬಹುಜನ ಸುಖಾಯ...

ಬಹುಜನ ಹಿತಾಯ, ಬಹುಜನ ಸುಖಾಯ...

ಯಡಿಯೂರಪ್ಪ ಅವರ ಮೊದಲ ಅಧಿಕಾರಾವಧಿಯಲ್ಲಿ ರಾಜ್ಯದ ಬಜೆಟ್ ಗಾತ್ರ ಒಂದು ಲಕ್ಷ ಕೋಟಿ ರು. ದಾಟಿದ್ದು ಇತಿಹಾಸ. ಆದರೆ ಅಲ್ಲಿಂದ ಈವರೆಗೆ ವಿವಿಧ ಸರಕಾರಗಳು, ಭಿನ್ನ ಸನ್ನಿ ವೇಶಗಳಲ್ಲಿ ಮಾಡಿಕೊಂಡು ಬಂದಿರುವ ಸಾಲದ ಹೊರೆ ಇಂದು 7 ಲಕ್ಷ ಕೋಟಿ ರು. ದಾಟಿದೆ. ಈ ಸಾಲದ ಹೊರೆ ಹೆಚ್ಚಾಗುವುದಕ್ಕೆ ಯಾವುದೇ ಒಂದು ಸರಕಾರ ಕಾರಣ ಎನ್ನಲು ಸಾಧ್ಯವಿಲ್ಲ

Loading...