ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ
Profile

ರಂಜಿತ್​ ಎಚ್​ ಅಶ್ವತ್ಥ್

columnist

info74@vishwavani.news

ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್‌ ಎಚ್‌. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿ ಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Ranjith H Ashwath Column: ಬಜೆಟ್‌ ಎಂದರೆ ಬರೀ ಘೋಷಣೆಯಲ್ಲ

Ranjith H Ashwath Column: ಬಜೆಟ್‌ ಎಂದರೆ ಬರೀ ಘೋಷಣೆಯಲ್ಲ

ಭಾರತದಲ್ಲಿ ಬಜೆಟ್‌ಗೆ ಸಿಗುವಷ್ಟು ಮಾನ್ಯತೆ ಇನ್ಯಾವ ದೇಶದಲ್ಲಿಯೂ ಸಿಗುವುದಿಲ್ಲವೇನೋ ಎನಿಸು ವಷ್ಟರ ಮಟ್ಟಿಗೆ ಕುತೂಹಲವಿರುತ್ತದೆ. ಬಜೆಟ್‌ಗಳೆಂದರೆ ಜನರಿಗೆ ಯಾವೆಲ್ಲ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಆಯಾ ಆರ್ಥಿಕ ವರ್ಷದಲ್ಲಿ ದೇಶದ ಖಜಾನೆಗೆ ಬರುವ ಆದಾಯವೆಷ್ಟು, ಮಾಡುತ್ತಿರುವ ಖರ್ಚೆಷ್ಟು? ಅನುದಾನ ಹಂಚಿಕೆಗೆ ಮಾಡಿಕೊಂಡಿರುವ ಲೆಕ್ಕಾಚಾರಗಳೇನು? ಎನ್ನುವ ಅಂಶವನ್ನು ದೇಶದ ಮುಂದಿಡುವುದೇ ಆಗಿರುತ್ತದೆ.

Ranjith H Ashwath Column: ರಾಜ್ಯಪಾಲರ ಭಾಷಣವೆಂಬ 'ಗ್ರೇ ಏರಿಯಾ'

Ranjith H Ashwath Column: ರಾಜ್ಯಪಾಲರ ಭಾಷಣವೆಂಬ 'ಗ್ರೇ ಏರಿಯಾ'

ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಒಪ್ಪಿದ್ದರು. ಆ ಕಾರಣಕ್ಕಾಗಿಯೇ ಅಧಿವೇಶನವನ್ನೂ ‘ಕರೆದಿದ್ದರು’. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಯಾವಾಗ ಸರಕಾರ ಕೇಂದ್ರದ ವಿರುದ್ಧ 11 ಪ್ಯಾರಗಳನ್ನು ಸೇರಿಸಿತೋ ಅಲ್ಲಿಗೆ, ಲೋಕಭವನ ಹಾಗೂ ಸರಕಾರದ ನಡುವಿನ ಸಂಘರ್ಷ ಆರಂಭವಾಯಿತು.

Ranjith H Ashwath Column: 'ರಾಗಾ' ಅಂತರದ ಹಿಂದಿರುವ ಲೆಕ್ಕಾಚಾರವೇನು ?

ರಾಗಾ ಅಂತರದ ಹಿಂದಿರುವ ಲೆಕ್ಕಾಚಾರವೇನು ?

ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರದಲ್ಲಿದ್ದ ಗೊಂದಲಗಳಿಗೆ ರೋಸಿಯೇ, 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ನೀಡಿದ್ದರು ಮತದಾರರು. ಆದರೆ ಸರಕಾರವು ಎರಡೂವರೆ ವರ್ಷ ಪೂರೈಸಿದ ದಿನದಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ನಾಯಕತ್ವ ಗೊಂದಲಕ್ಕೆ ಈಗಲೂ ಕೊನೆಯಿಲ್ಲವಾಗಿದ್ದು ಅದು ‘ನಾಳೆ ಬಾ’ ಕಥೆಯಾಗಿದೆ.

Ranjith H Ashwath Column: ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ ನಿಜಕ್ಕೂ ಸಾಧ್ಯವೇ ?

ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ ನಿಜಕ್ಕೂ ಸಾಧ್ಯವೇ ?

ರಾಜಕೀಯ ಕಿತ್ತಾಟ ನೋಡುವುದಕ್ಕಿಂತ ಕೇರಳ ಸರಕಾರದ ವಿಧೇಯಕದಲ್ಲಿ ಏನಿದೆ ಎನ್ನುವುದು ಮುಖ್ಯವಾಗುತ್ತದೆ. ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಜಾರಿಗೊಳಿಸಿ ರುವ ಮಲಯಾಳಂ ವಿಧೇಯಕದಲ್ಲಿ ಪ್ರಮುಖವಾಗಿ, ಮಲಯಾಳಂ ಅನ್ನು ಕೇರಳದ ಅಧಿಕೃತ ಭಾಷೆಯೆಂದು ಘೋಷಿಸುವುದರೊಂದಿಗೆ, ಸರಕಾರಿ ವ್ಯವಸ್ಥೆಯಲ್ಲಿ ಮಲಯಾಳಂ ಅಧಿಕೃತ ಸಂವಹನ ಭಾಷೆಯಾಗಿರಬೇಕು ಎಂದಿದೆ.

Ranjith H Ashwath Column: ಹೋರಾಟ ಆರಂಭಿಸುವ ಮೊದಲು ಸ್ಪಷ್ಟತೆ ಇರಲಿ

ಹೋರಾಟ ಆರಂಭಿಸುವ ಮೊದಲು ಸ್ಪಷ್ಟತೆ ಇರಲಿ

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಹಾಗೂ ಮೂಲಸೌಕರ್ಯವನ್ನು ಕೊಡಿಸಬೇಕು ಎನ್ನು ವುದೇ ಈ ಎರಡೂ ಕಾನೂನಿನ ಮೂಲ ಉದ್ದೇಶವಾದರೂ, ವಿವಾದಕ್ಕೆ ಕಾರಣವಾಗಲು ಹಲವು ಆಯಾಮಗಳಿವೆ. ಮೊದಲಿಗೆ ಮಹಾತ್ಮ ಗಾಂಧಿ ಅವರ ಹೆಸರಿನ ಯೋಜನೆಯನ್ನು ಕೈಬಿಟ್ಟು ‘ರಾಮ್’ ಎನ್ನುವ ಶಬ್ದ ಬರುವಂತೆ ಯೋಜನೆಯ ಹೆಸರನ್ನು ಮರುರೂಪಿಸಿರುವುದು. ಎರಡನೆಯದಾಗಿ ಈ ಹಿಂದೆ ನರೇಗಾ ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಗ್ರಾಮ ಪಂಚಾಯಿತಿ ಗಳೇ ಪ್ರಮುಖ ಪಾತ್ರ ವಹಿಸುತ್ತಿದ್ದವು.

Ranjith H Ashwath Column: ದಶಕದಿಂದ ನಡೆಯುತ್ತಿರುವ ಚರ್ಚೆಯ ಫಲವೇನು ?

Ranjith H Ashwath Column: ದಶಕದಿಂದ ನಡೆಯುತ್ತಿರುವ ಚರ್ಚೆಯ ಫಲವೇನು ?

ಇತ್ತೀಚೆಗಷ್ಟೇ ಮುಗಿದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮೊದಲ ಬಾರಿಗೆ ಎರಡನೇ ದಿನದಿಂದಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲಿನ ಚರ್ಚೆಗೆ ಅವಕಾಶ ನೀಡಲಾಯಿತು. ವಿಧಾನ ಸಭೆಯಲ್ಲಿ 39 ಶಾಸಕರು ಸುಮಾರು 17 ಗಂಟೆ 02 ನಿಮಿಷಗಳ ಕಾಲ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ದಂತೆ ಚರ್ಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು ಮೂರು ತಾಸು ಉತ್ತರ ನೀಡಿದ್ದಾರೆ.

Ranjith H Ashwath Column: ಕುರ್ಚಿ ಗೊಂದಲ; ಸಮಯ ದೂಡಲು ಕಾರಣ ?

Ranjith H Ashwath Column: ಕುರ್ಚಿ ಗೊಂದಲ; ಸಮಯ ದೂಡಲು ಕಾರಣ ?

ಕಳೆದ ಎರಡು ತಿಂಗಳಿನಿಂದ, ಕಾಂಗ್ರೆಸ್‌ನಲ್ಲಿರುವ ನಾಯಕತ್ವ ಗೊಂದಲಕ್ಕೆ ಕೊನೆಯಿಲ್ಲವಾಗಿದೆ. ಎರಡೂ ಕಡೆಯವರು ಸ್ಪಷ್ಟತೆಯ ಹುಡುಕಾಟದಲ್ಲಿದ್ದರೆ, ಪಕ್ಷದ ಹೈಕಮಾಂಡ್ ನಾಯಕರು ಯಾವ ರೀತಿಯಲ್ಲಿ ಸ್ಪಷ್ಟನೆ ನೀಡಬೇಕೆಂಬ ಗೊಂದಲದಲ್ಲಿದ್ದಾರೆ. ಈ ಗೊಂದಲಕ್ಕೆ ಶಾಶ್ವತ ಪರಿಹಾರದ ಬದಲಿಗೆ ಸಮಯ ದೂಡುವ ಮೂಲಕ ತಾತ್ಕಾಲಿಕ ಪರಿಹಾರ ನೀಡುವುದಕ್ಕೆ ಇಡೀ ಪ್ರಹಸನವನ್ನು ಸೀಮಿತಗೊಳಿಸಲಾಗುತ್ತಿದೆಯೇ ಎನ್ನುವ ಅನುಮಾನ ಶುರುವಾಗಿದೆ.

ಪ್ರವಾಸೋದ್ಯಮಕ್ಕೆ ಎರವಾದ ‌ʼಸಫಾರಿʼ ಬಂದ್

ಪ್ರವಾಸೋದ್ಯಮಕ್ಕೆ ಎರವಾದ ‌ʼಸಫಾರಿʼ ಬಂದ್

ಕಾಡುಪ್ರಾಣಿ-ಮಾನವ ಸಂಘರ್ಷ ತಡೆಯಬೇಕೆಂಬ ಉದ್ದೇಶದಿಂದ ಅರಣ್ಯ ಇಲಾಖೆ ಸಫಾರಿಯನ್ನು ನಿರ್ಬಂಧಿಸುವ ತೀರ್ಮಾನ ಮಾಡಿತ್ತು. ಇದು ರಾಜ್ಯ ಸರಕಾರದ ಬೊಕ್ಕಸಕ್ಕೆ ಭಾರಿ ಪ್ರಮಾಣದ ನಷ್ಟವಾಗುತ್ತಿದೆ ಎನ್ನುವ ಮಾತುಗಳು ಶುರುವಾಗಿದೆ. ಕೆಲ ತಿಂಗಳಿನಿಂದ ಮೈಸೂರು ಭಾಗದಲ್ಲಿ ಜನರ ಮೇಲೆ ಹುಲಿ, ಚಿರತೆ ದಾಳಿಯ ವರದಿಯಾಗುತ್ತಿದೆ.

Ranjith H Ashwath Column: ಗೊಂದಲ ಮೀರಿ ಸದನದಲ್ಲಿ ಒಗ್ಗಟ್ಟು ಸಾಧ್ಯವೇ ?

Ranjith H Ashwath Column: ಗೊಂದಲ ಮೀರಿ ಸದನದಲ್ಲಿ ಒಗ್ಗಟ್ಟು ಸಾಧ್ಯವೇ ?

ಬೆಳಗಾವಿ ಅಧಿವೇಶನದ ದಿನಾಂಕ ಘೋಷಣೆಯ ಬಳಿಕ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಕೂಗು ಶುರುವಾಗಿತ್ತು. ಈ ಕೂಗು ಒಂದು ಹಂತದಲ್ಲಿ ಸದನವನ್ನೇ ಮುಂದೂಡುವ ಅಥವಾ ಹೆಚ್ಚುವರಿ ಸಮಯ ನಡೆಸುವ ಮಟ್ಟಿಗಿತ್ತು. ಆದರೆ ಹೈಕಮಾಂಡ್ ನಾಯಕರ ಮಧ್ಯಸ್ಥಿಕೆ ಹಾಗೂ ‘ಸೂತ್ರ’ ಸಿದ್ಧಪಡಿಸುವ ಭರವಸೆಯ ಬಳಿಕ ತಾತ್ಕಲಿಕವಾಗಿ ಈ ಗೊಂದಲಕ್ಕೆ ಇತಿಶ್ರೀ ಹಾಡಿ ದಂತಾಗಿದೆ ಅಥವಾ ಗೊಂದಲ ಶಮನವಾಗಿರುವಂತೆ ಕೆಲವರು ‘ತೋರಿಸಿಕೊಳ್ಳುತ್ತಿದ್ದಾರೆ’.

Ranjith H Ashwath Column: ಉಪಾಹಾರ ಸಭೆಯಿಂದ ಕೊಟ್ಟ ಸಂದೇಶವೇನು ?

Ranjith H Ashwath Column: ಉಪಾಹಾರ ಸಭೆಯಿಂದ ಕೊಟ್ಟ ಸಂದೇಶವೇನು ?

ಕೆಲವೊಮ್ಮೆ ಪಕ್ಷಗಳ ವಿಭಜನೆ, ಅಧಃಪತನಕ್ಕೆ ಕಾರಣವಾಗಿವೆ. ಆದರೆ ಕರ್ನಾಟಕದಲ್ಲಿ ಕಳೆದೊಂದು ತಿಂಗಳಿನಿಂದ ನಡೆದ ನಾಯಕತ್ವ ಬದಲಾವಣೆಯ ಕಿತ್ತಾಟ ಹಲವು ಹೈಡ್ರಾಮಾಕ್ಕೆ ಸಾಕ್ಷಿಯಾದರೂ, ಅಂತಿಮವಾಗಿ ಬ್ರೇಕ್ ಫಾಸ್ಟ್ ಸಭೆಯೊಂದರಲ್ಲಿಯೇ ಎಲ್ಲ ಸಮಸ್ಯೆ ಬಗೆಹರಿದು ‘ನಾವೆಲ್ಲ ಒಂದೇ’ ಎನ್ನುವ ಸಂದೇಶವನ್ನು ಇಬ್ಬರೂ ನಾಯಕರು ರವಾನಿಸಿದ್ದಾರೆ.

Ranjith H Ashwath Column: ಡಿಕೆ ಉಡಾಯಿಸಿದ ಕ್ಷಿಪಣಿ ಪಾಸೋ ? ಫೇಲೋ ?

ಡಿಕೆ ಉಡಾಯಿಸಿದ ಕ್ಷಿಪಣಿ ಪಾಸೋ ? ಫೇಲೋ ?

ಬಜೆಟ್ ಮುಗಿಸುವ ನಿರೀಕ್ಷೆಯಲ್ಲಿ ಸಿದ್ದರಾಮಯ್ಯ ಅವರಿದ್ದರೆ, ‘ಒಪ್ಪಂದ’ ವಿಷಯವನ್ನು ಮುಂದಿಟ್ಟು ಎರಡೂವರೆ ವರ್ಷಕ್ಕೆ ತಮಗೆ ಸಿಎಂ ಪಟ್ಟಕಟ್ಟ ಬೇಕೆಂಬ ವಾದವನ್ನು ಡಿ.ಕೆ. ಶಿವಕುಮಾರ್ ಮಂಡಿಸುತ್ತಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಅಧಿಕಾರ ಹಂಚಿಕೆಯ ಸೂತ್ರದ ಗೊಂದಲ ಸದ್ಯ ಹೈಕಮಾಂಡ್‌ಗೂ ತಲೆಬಿಸಿಯಾಗಿದೆ.

Ranjith H Ashwath Column: ಸಿಕ್ಕ ಯಶಸ್ಸನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರೆ ?

ಸಿಕ್ಕ ಯಶಸ್ಸನ್ನು ಉಳಿಸಿಕೊಳ್ಳುವಲ್ಲಿ ವಿಫಲರಾದರೆ ?

ರಾಹುಲ್ ಗಾಂಧಿ ಕಾಂಗ್ರೆಸ್ ನೇತೃತ್ವ ವಹಿಸಿದ ಬಳಿಕ ಸುಮಾರು ಚುನಾವಣೆಗಳನ್ನು ಎದುರಿಸ ಲಾಗಿದೆ. ಇದರಲ್ಲಿ 95 ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸೋಲಾಗಿದೆಯಂತೆ. ಪ್ರಮುಖವಾಗಿ ಹಿಮಾಚಲ ಪ್ರದೇಶ (2007, 2017), ಪಂಜಾಬ್ (2007, 2012, 2022), ಗುಜರಾತ್ (2007, 2012, 2017, 2022), ಮಧ್ಯಪ್ರದೇಶ (2008, 2013, 2018, 2023), ಮಹಾ ರಾಷ್ಟ್ರ (2014, 2019, 2024) ಮತ್ತು ದೆಹಲಿ, ಹರಿಯಾಣ, ಉತ್ತರಪ್ರದೇಶ, ಬಿಹಾರದಲ್ಲಿ ಸರಣಿ ಸೋಲುಗಳನ್ನು ಕಾಂಗ್ರೆಸ್ ಕಂಡಿದೆ.

Ranjith H Ashwath Column: ಆರಂಭ-ಅಂತ್ಯವಿಲ್ಲದ ಜೈಲಿನ ರಾಜಾತಿಥ್ಯ

Ranjith H Ashwath Column: ಆರಂಭ-ಅಂತ್ಯವಿಲ್ಲದ ಜೈಲಿನ ರಾಜಾತಿಥ್ಯ

ವಿಕೃತ ಕಾಮಿ ಉಮೇಶ್ ರೆಡ್ಡಿ ಮೊಬೈಲ್ ಹಿಡಿದು ಸೆಲ್‌ನಲ್ಲಿಯೇ ಮಾತನಾಡುತ್ತಿರುವುದು, ಐಸಿಸ್ ಜತೆ ನಂಟು ಹೊಂದಿದ್ದ ಉಗ್ರನೊಬ್ಬ ಆರಾಮಾಗಿ ವಿಡಿಯೋಗಳನ್ನು ನೋಡಿಕೊಂಡು, ಫೋನ್‌ನಲ್ಲಿ ಮಾತನಾ ಡುತ್ತಿರುವುದು ಮುಂತಾದ ದೃಶ್ಯಗಳು ಪರಪ್ಪನ ಅಗ್ರಹಾರ ಜೈಲಿನಿಂದ ವೈರಲ್ ಆಗುತ್ತಿದ್ದಂತೆ, ಜೈಲಿನಲ್ಲಿ ಸಿಗುತ್ತಿರುವ ರಾಜಾತಿಥ್ಯದ ವಿಷಯ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

Ranjith H Ashwath Column: ಒಳಗಿದ್ದ ಆರು ಮಂದಿಯಲ್ಲಿ ಹೇಳೋರ್ಯಾರು ?

Ranjith H Ashwath Column: ಒಳಗಿದ್ದ ಆರು ಮಂದಿಯಲ್ಲಿ ಹೇಳೋರ್ಯಾರು ?

ಸಂಪುಟ ಪುನಾರಚನೆ ಮಾಡಿಕೊಳ್ಳುವ ಮೂಲಕ ನಾಯಕತ್ವ ಬದಲಾವಣೆ ಚರ್ಚೆಗೆ ‘ಫುಲ್‌ಸ್ಟಾಪ್’ ಇಡುವ ಪ್ರಯತ್ನವನ್ನು ಸಿದ್ದರಾಮಯ್ಯ ಮಾಡುತ್ತಿದ್ದರೆ, ಡಿ.ಕೆ.ಶಿವಕುಮಾರ್ ಅವರು ಸಂಪುಟ ಪುನಾರಚನೆಗೂ ಮೊದಲೇ ಹೈಕಮಾಂಡ್ ತಮಗೆ ನೀಡಿದೆ ಎನ್ನಲಾಗುತ್ತಿರುವ ‘ವರ’ವನ್ನು ನೆನಪಿಸಿ ಪಡೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ.

Ranjith H Ashwath Column: ಉತ್ತರಾಧಿಕಾರಿ ಘೋಷಣೆ ಸುಲಭವಲ್ಲ

Ranjith H Ashwath Column: ಉತ್ತರಾಧಿಕಾರಿ ಘೋಷಣೆ ಸುಲಭವಲ್ಲ

ಯತೀಂದ್ರ ಅವರು ಬೆಳಗಾವಿಯ ಕಾರ್ಯಕ್ರಮದಲ್ಲಿ ಸತೀಶ್ ಜಾರಕಿಹೊಳಿ ಅವರನ್ನು ಮೆಚ್ಚಿಸಲು ಹೇಳಿದರೋ ಅಥವಾ ಸಿದ್ದರಾಮಯ್ಯ ಬಳಿಕ ಅಹಿಂದ ನಾಯಕನ್ಯಾರು ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಹೇಳಿದರೋ ಅಥವಾ ಅವರೇ ಸಮರ್ಥಿಸಿಕೊಂಡಂತೆ ಸೈದ್ಧಾಂತಿಕ ನಾಯಕತ್ವದ ಬಗ್ಗೆ ಮಾತನಾಡಿದರೋ, ಇಲ್ಲವೇ ರಾಜ್ಯಾದ್ಯಂತ ಸದ್ದಾಗುತ್ತಿರುವಂತೆ ಸಿಎಂ ಸ್ಥಾನದ ಬಗ್ಗೆ ಮಾತನಾಡಿ ದರೋ ಗೊತ್ತಿಲ್ಲ

Ranjith H Ashwath Column: ನಿರ್ಬಂಧದ ತೀರ್ಮಾನ; ಲಾಭಕ್ಕಿಂತ ನಷ್ಟವೇ ಹೆಚ್ಚು !

ನಿರ್ಬಂಧದ ತೀರ್ಮಾನ; ಲಾಭಕ್ಕಿಂತ ನಷ್ಟವೇ ಹೆಚ್ಚು !

ಸರಕಾರ ಈಗ ಹೊರಡಿಸಿರುವ ಆದೇಶದ ಪಾಲನೆಯನ್ನು ಮೊದಲಿನಿಂದಲೇ ಮಾಡಿಕೊಂಡು ಬರುತ್ತಿರು ವಾಗ ನಮ್ಮ ಯಾವ ಕಾರ್ಯಕ್ರಮಗಳಿಗೂ ತೊಂದರೆಯಾಗುವುದಿಲ್ಲ ಎನ್ನುವ ಸ್ಪಷ್ಟತೆಯಲ್ಲಿದ್ದಾರೆ. ಹಾಗಾದರೆ, ಈ ಆದೇಶದಿಂದ ಸರಕಾರಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

Ranjith H Ashwath Column: ಊಟ ಮಾಡೋದು ತಪ್ಪಲ್ಲ, ಆದ್ರೆ..!

Ranjith H Ashwath Column: ಊಟ ಮಾಡೋದು ತಪ್ಪಲ್ಲ, ಆದ್ರೆ..!

ಮುಖ್ಯಮಂತ್ರಿಯಾದವರು ತಮ್ಮ ಸಂಪುಟದ ಸಚಿವರನ್ನು ಊಟಕ್ಕೆ ಆಹ್ವಾನಿಸುವುದು ಹೊಸ ದೇನಲ್ಲ. ಹಾಗೆ ನೋಡಿದರೆ, ಮುಖ್ಯಮಂತ್ರಿ ಹುದ್ದೆಯಲ್ಲಿ ಕೂತವರಲ್ಲಿ ಬಹುತೇಕರು ತಮ್ಮ ಊಟವನ್ನು ಕುಟುಂಬ ಸದಸ್ಯರಿಗಿಂತ ಹೆಚ್ಚಾಗಿ ತಮ್ಮ ಆಪ್ತರು, ಸಚಿವರು ಹಾಗೂ ನಾಯಕ ರೊಂದಿಗೆ ಮಾಡುತ್ತಾರೆ. ಇದು ಸಿದ್ದರಾಮಯ್ಯ ಅವರಿಗಷ್ಟೇ ಅಲ್ಲ, ಈವರೆಗೆ ಆ ಹುದ್ದೆಯಲ್ಲಿ ಕೂತಿರುವ ಎಲ್ಲ ಮುಖ್ಯಮಂತ್ರಿ ಗಳಿಗೂ ಅನ್ವಯವಾಗುತ್ತದೆ.

ಬುರುಡೆ ಪ್ರಕರಣ: ದಿಕ್ಕು ತಪ್ಪಿತೇ ಎಸ್‌ಐಟಿ ತನಿಖೆ?

ಬುರುಡೆ ಪ್ರಕರಣ: ದಿಕ್ಕು ತಪ್ಪಿತೇ ಎಸ್‌ಐಟಿ ತನಿಖೆ?

ವಿಚಾರಣೆಯ ವೇಳೆ ಚಿನ್ನಯ್ಯ ಸಹ ತಿಮರೋಡಿ ಗ್ಯಾಂಗ್ ಹೇಳಿಕೊಟ್ಟಿದ್ದ ಗಿಳಿಪಾಠ ಮಾತ್ರ ನಾನು ಹೇಳಿದ್ದೇನೆ ಎನ್ನುವುದನ್ನು ಒಪ್ಪಿಕೊಂಡಿದ್ದ. ಬಳಿಕ ತಿಮರೋಡಿ ನಿವಾಸದಲ್ಲಿ ನಡೆದ ಸ್ಥಳ ಮಹಜರಿನ ವೇಳೆಯೂ ಷಡ್ಯಂತ್ರದಲ್ಲಿ ತಿಮರೋಡಿ ಹಾಗೂ ಮಟ್ಟಣ್ಣನವರ್ ಪಾತ್ರವಿರುವುದು ಸ್ಪಷ್ಟವಾಗಿತ್ತು. ಇಷ್ಟೆಲ್ಲ ಸಾಕ್ಷ್ಯವಿದ್ದರೂ ಈವರೆಗೂ ಈ ಇಬ್ಬರ ವಿರುದ್ಧ ಕ್ರಮ ವಹಿಸದೇ ಇರುವುದು ಏಕೆ? ಎನ್ನುವ ಸಂದೇಹ ಜನರಲ್ಲಿ ಮೂಡಿದೆ.

Ranjith H Ashwath Column: ಮಾಹಿತಿಯಿಲ್ಲದಿದ್ದರೂ ವೈಜ್ಞಾನಿಕ ಸಮೀಕ್ಷೆಯೇ ?!

ಮಾಹಿತಿಯಿಲ್ಲದಿದ್ದರೂ ವೈಜ್ಞಾನಿಕ ಸಮೀಕ್ಷೆಯೇ ?!

ಎಲ್ಲ ಮಾಹಿತಿಯನ್ನು ನೀಡಲೇಬೇಕು ಎನ್ನುವ ನಿಯಮವಿಲ್ಲ ಎನ್ನುವುದನ್ನು ಹೈಕೋರ್ಟ್ ಸ್ಪಷ್ಟ ಪಡಿಸಿದೆ. ಆದರೆ ಆಧಾರ್ ಕಾರ್ಡ್, ಫೋನ್ ನಂಬರ್, ಮನೆಯ ವಿದ್ಯುತ್ ಬಿಲ್ ಅನ್ನು ನೀಡುವುದು ಅನಿವಾರ್ಯ. ಜಾತಿ ವಿಷಯದಲ್ಲಿ, ಮನೆಯಲ್ಲಿರುವ ಆಭರಣ, ಸ್ಥಿರ-ಚರಾಸ್ತಿ ವಿಷಯದಲ್ಲಿ ಹೆಚ್ಚು ಕಡಿಮೆ ಮಾಡಬಹುದು. ನಗರ ಪ್ರದೇಶದಲ್ಲಿರುವ ಬಹುತೇಕರಿಗೆ, ಈ ಬೇಸಿಕ್ ಮಾಹಿತಿಯನ್ನು ನೀಡುವ ವಿಷಯದಲ್ಲಿಯೇ ‘ತಕರಾರು’ ಇದೆ.

Ranjith H Ashwath Column: ಗುಂಡಿ ವಿಷ್ಯದಲ್ಲಿ ಎಲ್ಲರೂ ಸಮಾನ ಅಪರಾಧಿಗಳೇ !

ಗುಂಡಿ ವಿಷ್ಯದಲ್ಲಿ ಎಲ್ಲರೂ ಸಮಾನ ಅಪರಾಧಿಗಳೇ !

‘ಗುಂಡಿಯಿಲ್ಲದ ರಸ್ತೆ ನಿರ್ಮಿಸುವ’ ಕನಸು ಹೋಗಿ, ‘ಗುಂಡಿಯಿಲ್ಲದೇ ರಸ್ತೆ ಇಲ್ಲ’ ಎನ್ನುವ ಪರಿಸ್ಥಿತಿ ಯಲ್ಲಿ ಬೆಂಗಳೂರಿನ ರಸ್ತೆಗಳಿವೆ. ಇದು ಬಿಜೆಪಿ ಗುಂಡಿ, ಕಾಂಗ್ರೆಸ್ ಗುಂಡಿ ಎನ್ನುವುದು ರಾಜಕೀಯ ಹೇಳಿಕೆ ಸರಿ. ಆದರೆ ಸಾರ್ವಜನಿಕರ ದೃಷ್ಟಿಯಿಂದ ಈ ಗುಂಡಿಗಳ ವಿಷಯದಲ್ಲಿ ಎಲ್ಲ ಪಕ್ಷದವರ ಸಮಾನ ಪಾಲಿದೆ ಎನ್ನುವುದು ಸ್ಪಷ್ಟ.

Ranjith H Ashwath Column: ಜಾತಿಗಣತಿಯೆಂಬ ಜೇನುಗೂಡು

ಜಾತಿಗಣತಿಯೆಂಬ ಜೇನುಗೂಡು

ಸಿದ್ದರಾಮಯ್ಯನವರ ಸರಕಾರದ ಅವಧಿಯಲ್ಲಿ ‘ಕೋಲ್ಡ್ ಸ್ಟೋರೇಜ್’ ಸೇರಿದ್ದ ಜಾತಿ ಗಣತಿಯ ವರದಿಯನ್ನು ಹೊರತೆಗೆಯುವುದಕ್ಕೂ ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತೆ ಅಧಿಕಾರಕ್ಕೆ ಬರಬೇಕಾಯಿತು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಆದರೆ ವರದಿ ಯನ್ನು ಸಂಪುಟ ಒಪ್ಪಿದ್ದು, ಬಹಿರಂಗಗೊಳಿಸಿದ್ದು, ಅದಕ್ಕೆ ಅಲ್ಪಸಂಖ್ಯಾತ ಹಾಗೂ ದಲಿತ ಹೊರತುಪಡಿಸಿ ಬಹುತೇಕ ಸಮುದಾಯಗಳು ವಿರೋಧಿಸಿದ್ದು ಗೊತ್ತಿರು ವಂಥದ್ದೇ.

Ranjith H Ashwath : ಈ ಸಮೀಕ್ಷೆಯಲ್ಲಿ ಸಿಗುವುದೇ ಜಾತಿಗಳ ನಿಖರ ಲೆಕ್ಕ ?

ಈ ಸಮೀಕ್ಷೆಯಲ್ಲಿ ಸಿಗುವುದೇ ಜಾತಿಗಳ ನಿಖರ ಲೆಕ್ಕ ?

ದೇಶದ ರಾಜಕೀಯದಲ್ಲಿ ಒಂದೊಂದು ವಿಷಯ ಒಂದೊಂದು ರೀತಿಯ ಪ್ರಭಾವ ಬೀರುತ್ತದೆ. ಉತ್ತರ ಭಾರತ ಹಾಗೂ ರಾಷ್ಟ್ರೀಯ ಮಟ್ಟದ ರಾಜಕಾರಣದಲ್ಲಿ ಧರ್ಮಾಧಾರಿತ ರಾಜಕಾರಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ಸಿಕ್ಕರೆ ಕರ್ನಾಟಕದ ಮಟ್ಟಿಗೆ ಧರ್ಮಕ್ಕಿಂತ ಮಿಗಿಲಾದ ಜಾತಿ ಸಮೀಕರಣದಲ್ಲಿಯೇ ರಾಜಕೀಯದ ಆಗು-ಹೋಗುಗಳಾಗುತ್ತದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ.

Ranjith H Ashwath Column: ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?

ಇವಿಎಂ ಬದಿಗಿಟ್ಟು ಸಾಧಿಸಲು ಹೊರಟಿದ್ದೇನನ್ನು ?

ಒಂದು ವೇಳೆ ಬ್ಯಾಲೆಟ್ ಪೇಪರ್ ಬಳಸಿಕೊಂಡು ಕಾಂಗ್ರೆಸ್ಸಿಗರು ಗೆದ್ದರೆ ಬಿಜೆಪಿ ವಿರುದ್ಧ ಕಾಂಗ್ರೆಸ್ ನಾಯಕರು ಮಾಡುತ್ತಿರುವ ‘ಮತಗಳ್ಳತನ’ದ ಆರೋಪವನ್ನೇ ಮತ್ತೊಂದು ಸ್ವರೂಪದಲ್ಲಿ ಬಿಜೆಪಿಗರು ಮಾಡುತ್ತಾರೆ. ಒಂದು ವೇಳೆ ಕಾಂಗ್ರೆಸ್ ಮೇಲುಗೈ ಸಾಧಿಸಲು ಸಾಧ್ಯವಾಗದಿದ್ದರೆ ಅದಕ್ಕೆ ಮತ್ತೊಂದು ರೀತಿಯ ಟೀಕೆ ಮಾಡುವುದಂತೂ ಸತ್ಯ.

ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ !

ಕನ್ನಡದ ವಿದ್ಯಾರ್ಥಿಗಳಿಗೆ ಉರ್ದುವಿನಲ್ಲಿ ಪಾಠ !

ಉರ್ದು ಶಿಕ್ಷಕರಿಗೆ ಕನ್ನಡ ಅಥವಾ ಇಂಗ್ಲಿಷ್ ಬಾರದಿರುವುದರಿಂದ, ಅವರು ಉರ್ದು ವಿನಲ್ಲಿಯೇ ಪಾಠ ಮಾಡುತ್ತಾರೆ ಎನ್ನುವುದು ವಿದ್ಯಾರ್ಥಿಗಳ ಆತಂಕ. ಉರ್ದು ಶಿಕ್ಷಕರಿಗೆ ಇಂಗ್ಲಿಷ್ ಸರಿಯಾಗಿ ಬರುವುದಿಲ್ಲ, ಕನ್ನಡವೂ ಗೊತ್ತಿಲ್ಲ. ಅವರು ಉರ್ದುವಿನಲ್ಲಿಯೇ ಪಾಠ ಮಾಡಿದರೆ, ನಮಗೆ ಅರ್ಥವಾಗುವುದಿಲ್ಲ.

Loading...