ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Profile

ರಂಜಿತ್​ ಎಚ್​ ಅಶ್ವತ್ಥ್

columnist

[email protected]

ಮೂಲತಃ ದಾವಣಗೆರೆ ಜಿಲ್ಲೆಯ ಜಗಳೂರಿನ ರಂಜಿತ್‌ ಎಚ್‌. ಅಶ್ವತ್ಥ ಅವರಿಗೆ ಪತ್ರಿಕೋದ್ಯಮದಲ್ಲಿ ಒಂದು ದಶಕಕ್ಕೂ ಹೆಚ್ಚಿನ ಅನುಭವವಿದೆ. ವಿಶ್ವವಾಣಿಯ "ಎಳೆನಿಂಬೆಕಾಯಿ" ತಂಡದಿಂದ ವರದಿಗಾರಿಕೆ ಆರಂಭಿಸಿದ ಅವರು, ಕಳೆದ ಒಂಬತ್ತು ವರ್ಷಗಳಿಂದ ರಾಜಕೀಯ ಹಾಗೂ ಸಚಿವಾಲಯದ ವರದಿಗಾರಿಕೆ ಮಾಡುತ್ತಿದ್ದಾರೆ. ಆರಂಭದಲ್ಲಿ ಶಿಕ್ಷಣ, ರಕ್ಷಣಾ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವರದಿಗಾರಿಕೆಯನ್ನು ನಿರ್ವಹಿಸಿದ್ದರು. 2019ರಿಂದ ವಿಶ್ವವಾಣಿಯಲ್ಲಿ "ಅಶ್ವತ್ಥಕಟ್ಟೆ"ಯ ಮೂಲಕ ರಾಜಕೀಯದ ಒಳಸುಳಿಗೆ ಸಂಬಂಧಿಸಿದಂತೆ ಪ್ರತಿ ಮಂಗಳವಾರ ಅಂಕಣ ಬರೆಯುತ್ತಿದ್ದಾರೆ. ವಿಶ್ವವಾಣಿಗೂ ಮೊದಲು ಪ್ರಜಾ ಟಿವಿ, ಸಂಯುಕ್ತ ಕರ್ನಾಟಕದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಪ್ರಸ್ತುತ ವಿಶ್ವವಾಣಿ ಮುಖ್ಯವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Articles
Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

Ranjith H Ashwath Column: ಭರ್ತಿ ಜತೆ ಖಾಲಿ ಹುದ್ದೆ ಬಗ್ಗೆಯೂ ಗಮನಿಸಿ !

ಖಾಲಿ ಹುದ್ದೆಗಳ ಭರ್ತಿಗೆ ಹತ್ತಾರು ಕಾರಣಗಳಿದ್ದರೂ, ಪ್ರತಿವರ್ಷ ನಿವೃತ್ತಿಯಾಗುವ ನೌಕರರ, ಸಿಬ್ಬಂದಿಯ ಸಂಖ್ಯೆಯಂತೂ ಸರಾಸರಿ ಒಂದೇ ರೀತಿಯಲ್ಲಿರುತ್ತದೆ. ಇದರೊಂದಿಗೆ ಅಸಹಜ ವಾಗಿ ಮೃತಪಡುವ, ವಿವಿಧ ಕಾರಣಕ್ಕೆ ಸ್ವಯಂ ನಿವೃತ್ತಿ ಪಡೆಯುವವರ ಸಂಖ್ಯೆಯೂ ಸೇರಿಕೊಳ್ಳುವುದರಿಂದ ಆಯಾ ವರ್ಷದ ಭರ್ತಿಯನ್ನು ಆಯಾ ವರ್ಷವೇ ಮಾಡದೇ ಹೋದರೆ ಇರುವ ಸಿಬ್ಬಂದಿಯ ಮೇಲೆ ಕಾರ್ಯದೊತ್ತಡ ಹೆಚ್ಚಾಗುತ್ತಲೇ ಸಾಗುತ್ತದೆಯೇ ಹೊರತು, ಕಡಿಮೆಯಾಗುವುದಿಲ್ಲ.

Ranjith H Ashwath Column: ವಿವಿಗಳು ಕೇವಲ ಪದವಿ ಕೊಡುವ ಕೇಂದ್ರಗಳಲ್ಲ !

ವಿವಿಗಳು ಕೇವಲ ಪದವಿ ಕೊಡುವ ಕೇಂದ್ರಗಳಲ್ಲ !

ಅಧಿಕಾರಕ್ಕೆ ಬರುವ ಬಹುತೇಕ ಸರಕಾರಗಳು ಶಿಕ್ಷಣಕ್ಕೆ ಒತ್ತು ನೀಡುವ ಮಾತುಗಳನ್ನು ಆಡು ತ್ತವೆ. ಅದೇ ರೀತಿ ವಿಶ್ವವಿದ್ಯಾಲಯಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ, ಬೋಧಕ ಸಿಬ್ಬಂದಿಯ ನೇಮಕ, ಮೂಲಸೌಕರ್ಯ ಮಾಡುವುದಾಗಿ ಘೋಷಿಸುತ್ತವೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಪ್ರತಿ ವರ್ಷ ಒಂದಿಲ್ಲೊಂದು ಹೊಸ ವಿಶ್ವವಿದ್ಯಾಲಯಗಳನ್ನು ಘೋಷಿಸುತ್ತವೆ.

Ranjith H Ashwath Column: ಭರ್ತಿಗಿಂತ, ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ !

ಭರ್ತಿಗಿಂತ, ಉದ್ಯೋಗ ಸೃಷ್ಟಿ ಆದ್ಯತೆಯಾಗಬೇಕಿದೆ !

ದೇಶದ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಸರಕಾರಗಳು ಬದಲಾಗುವುದಕ್ಕೆ ಭ್ರಷ್ಟಾಚಾರದೊಂದಿಗೆ ನಿರುದ್ಯೋಗ ಸಮಸ್ಯೆಯೂ ಪ್ರಮುಖ ಕಾರಣವಾಗುತ್ತದೆ. ಇದೇ ಕಾರಣಕ್ಕೆ ಬಹುತೇಕ ಚುನಾವಣೆಯಲ್ಲಿ ಎಲ್ಲ ಪಕ್ಷಗಳು ಉದ್ಯೋಗ ಸೃಷ್ಟಿಗೆ ಸರಕಾರದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಭರವಸೆಗಳನ್ನು ನೀಡುತ್ತಾ ಬಂದಿವೆ.

Ranjith H Ashwath Column: ವಿವಿ ಚುನಾವಣೆ ವಿಷಯದಲ್ಲೇಕೆ ಗೊಂದಲ ?

Ranjith H Ashwath Column: ವಿವಿ ಚುನಾವಣೆ ವಿಷಯದಲ್ಲೇಕೆ ಗೊಂದಲ ?

ಜೆಎನ್‌ಯು ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಚುನಾವಣೆಯ ಬಳಿಕ ಗಲಾಟೆ, ಅಶಾಂತಿ ಸೃಷ್ಟಿಯಾಗಿರುವ ಉದಾಹರಣೆಗಳಿವೆ. ಇದರೊಂದಿಗೆ ರಾಜಕೀಯ ಪಕ್ಷಗಳನ್ನು ಪೂರ್ಣ ಪ್ರಮಾಣದಲ್ಲಿ ಹೊರಗಿಟ್ಟು ಚುನಾವಣೆ ನಡೆಸುವುದು ಕರ್ನಾಟಕ ದಲ್ಲಿ ಸದ್ಯಕ್ಕೆ ತೀರಾ ಕಷ್ಟ. ಒಂದು ವೇಳೆ ನೇರ ಅಥವಾ ಪರೋಕ್ಷವಾಗಿ ರಾಜಕೀಯ ಪಕ್ಷಗಳ ಪ್ರಭಾವದೊಂದಿಗೆ ಚುನಾವಣೆ ನಡೆದರೆ, ಶೈಕ್ಷಣಿಕ ಕಾರ್ಯಕ್ಕೆ ಸಮಸ್ಯೆಯಾಗಲಿದೆ ಎನ್ನುವ ಆತಂಕವನ್ನು ಬಹುತೇಕ ವಿಶ್ವವಿದ್ಯಾಲಯಗಳ ಕುಲಪತಿಗಳು ವ್ಯಕ್ತಪಡಿಸಿದ್ದಾರೆ.

Safari begins: ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಸಫಾರಿ ಆರಂಭ: ಸಿಎಂ ಸೂಚನೆಗೂ ಕ್ಯಾರೇ ಎನ್ನದ ಅರಣ್ಯ ಇಲಾಖೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾರಿ ಪುನರಾರಂಭಿಸುವಂತೆ ಸೂಚನೆ ನೀಡಿ ತಿಂಗಳು ಕಳೆದರೂ ಅರಣ್ಯ ಇಲಾಖೆ ಸಫಾರಿ ಆರಂಭಿಸುವ ಸುಳಿವನ್ನು ನೀಡಿಲ್ಲ. ತಾಂತ್ರಿಕ ಸಮಿತಿ, ಪ್ರವಾಸೋದ್ಯಮ ಇಲಾಖೆ, ಅರಣ್ಯ ಇಲಾಖೆಯ ಅಭಿಪ್ರಾಯ ಪಡೆದು ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಅರಣ್ಯ ಇಲಾಖೆ ಈಶ್ವರ್ ಖಂಡ್ರೆ ಹೇಳಿದ್ದರು.

Ranjith H Ashwath Column: ಗೊಂದಲದ ಹೇಳಿಕೆ ನಡುವೆ ಗ್ಯಾರಂಟಿಗಳೇ ಮಾಯ !

ಗೊಂದಲದ ಹೇಳಿಕೆ ನಡುವೆ ಗ್ಯಾರಂಟಿಗಳೇ ಮಾಯ !

ರಾಜ್ಯದಲ್ಲಿ ಕಾಂಗ್ರೆಸ್ ನೀಡಿದ್ದ ಪಂಚ ಗ್ಯಾರಂಟಿ, ಬಿಜೆಪಿಯ ಒಳಜಗಳ, ಒಳ ಕಿತ್ತಾಟದ ಫಲ ವಾಗಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಐತಿಹಾಸಿಕ ಬಹುಮತ ಬಂದಿತ್ತು. ಬಳಿಕ ನಡೆದ ಉಪಚುನಾವಣೆ, ಪಕ್ಷೇತರ ಅಭ್ಯರ್ಥಿಗಳ ಬೆಂಬಲದೊಂದಿಗೆ 139 ಶಾಸಕರ ಬಲದೊಂದಿಗೆ ಅಧಿಕಾರ ನಡೆಸುತ್ತಿದೆ.

SAFARI: ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ನಿಷೇಧಕ್ಕೆ ಮುನ್ನ ಅಕ್ರಮ ಪ್ರವೇಶ ನಿಯಂತ್ರಿಸಿ !

ಸಫಾರಿ ನಿರ್ಬಂಧ ಹೇರಿರುವ ಪ್ರದೇಶಕ್ಕಿಂತ ಅರಣ್ಯ ಪ್ರದೇಶದೊಳಗೆ ಈ ರೀತಿ ಅಕ್ರಮ ಕಟ್ಟಡ ಗಳನ್ನು ನಿರ್ಮಿಸಲಾಗುತ್ತಿದೆ. ಆದ್ದರಿಂದ ಅರಣ್ಯ, ವನ್ಯಜೀವಿ ಗಳನ್ನು ರಕ್ಷಿಸಬೇಕು ಎನ್ನುವ ಆಲೋಚನೆ ಇದ್ದರೆ ಅರಣ್ಯ ಇಲಾಖೆ ಅಧಿಕಾರಿಗಳು ಸಫಾರಿಯನ್ನು ಸ್ಥಗಿತಗೊಳಿಸುವುದಕ್ಕಿಂತ ಮೊದಲು ಅರಣ್ಯ ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಜಮೀನು ಮಾಡಿಕೊಂಡಿರುವವರು, ಎಲೆಕ್ಟ್ರಿಕ್ ಫೆನ್ಸಿಂಗ್ಗಳನ್ನು ಮಾಡಿಕೊಂಡಿರುವವರನ್ನು ಮಟ್ಟಹಾಕಬೇಕಿದೆ

Safari Ban: ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಇಲ್ಲಿ ಸಫಾರಿಗೆ ನಿರ್ಬಂಧ: ರಾಜ್ಯದ ಎಲ್ಲೆಲ್ಲೋ ಸಂಕಷ್ಟ

ಸಫಾರಿ ನಿರ್ಬಂಧದಿಂದ ಕರ್ನಾಟಕದೊಳಗಿರುವ ಹಾಗೂ ನೆರೆ ರಾಜ್ಯ ತಮಿಳುನಾಡು, ಕೇರಳ, ಆಂಧ್ರ, ತೆಲಂಗಾಣದಿಂದ ಕರ್ನಾಟಕಕ್ಕೆ ಬರುವ ಪ್ರವಾಸಿಗರಿಗೆ ಹೆಚ್ಚು ವ್ಯತ್ಯಾಸವಾಗುವುದಿಲ್ಲ. ನಾಗರಹೊಳೆ, ಬಂಡೀಪುರ ಬಿಟ್ಟು ರಾಜ್ಯದ ಇತರೆ ಭಾಗಗಳಿಗೆ ಪ್ರವಾಸಕ್ಕೆ ತೆರಳುತ್ತಾರೆ. ಆದರೆ ವಿದೇಶದಿಂದ ಆಗಮಿಸುವವರಿಗೆ, ಉತ್ತರ ಭಾರತದಿಂದ ‘ಮಕ್ಕಳ ರಜೆ’ ಎಂಜಾಯ್ ಮಾಡಲು ಬರುವವರು ಈ ಸಫಾರಿಯ ನಿರ್ಬಂಧದಿಂದ ಕರ್ನಾಟಕಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ.

Safari for VIPs?: ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಸಾರ್ವಜನಿಕರಿಗಿಲ್ಲದ ಸಫಾರಿ, ವಿಐಪಿಗಳಿಗೆ ಹೇಗೆ ಸಾಧ್ಯ ?

ಬಂಡೀಪುರ, ನಾಗರಹೊಳೆ ಭಾಗದಲ್ಲಿ ಸಂಪೂರ್ಣವಾಗಿ ಸಫಾರಿ ನಿರ್ಬಂಧವಾಗಿಲ್ಲ. ಬದಲಿಗೆ ಅಧಿಕಾರಿ ವರ್ಗ, ರಾಜಕೀಯ ನಾಯಕರು, ಅವರ ಕುಟುಂದವರು ಬಂದರೆ ಈಗಲೂ ಅರಣ್ಯ ಇಲಾಖೆಯ ಗೆಸ್ಟ್ ಹೌಸ್‌ನಲ್ಲಿಯೇ ರಾಜಾತಿಥ್ಯ ನೀಡಿ, ಸಫಾರಿಗೆ ಕರೆದುಕೊಂಡು ಹೋಗಲಾಗು ತ್ತಿದೆ ಎನ್ನುವ ಮಾತುಗಳನ್ನು ಸ್ಥಳೀಯರೇ ಹೇಳುತ್ತಿದ್ದಾರೆ.

Safari: ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ನೈಸರ್ಗಿಕ ʼಅರಣ್ಯʼಕ್ಕೆ ಕುಂದು ತಂದಿದ್ದು ಯಾರು ?

ಈ ಹಿಂದೆ ಬಂಡೀಪುರ, ನಾಗರಹೊಳೆ ಭಾಗದಲ್ಲಿ ಅರಣ್ಯದ ಅಂಚಿನಿಂದ ಮೂರು ಕಿಮೀ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿ, ಆ ಪ್ರದೇಶದಲ್ಲಿ ಯಾವುದೇ ಕಟ್ಟಡ ಕಾಮಗಾರಿಗೆ ಅಥವಾ ಕೃಷಿಗೆ ಅವಕಾಶ ನೀಡುತ್ತಿರಲಿಲ್ಲ. ಇದರಿಂದ ಪ್ರಾಣಿಗಳು ಕಾಡಿನಿಂದ ಹೊರ ಬಂದರೂ ಮನುಷ್ಯರ ಸಂಪರ್ಕ ಸಿಗುತ್ತಿರಲಿಲ್ಲ. ಆದರೆ ಸಚಿವ ಸಂಪುಟ ಉಪಸಮಿತಿ ಈ ನಿರ್ಬಂಧವನ್ನು ಮೂರು ಕಿಮೀ ನಿಂದ ಒಂದು ಕಿಲೋ ಮೀಟರ್‌ಗೆ ಇಳಿಸಿದೆ.

Safari Bandh: ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಸುಗ್ಗಿ ಕಾಲದಲ್ಲಿ ಸಫಾರಿ ಬಂದ್‌; ರೆಸಾರ್ಟ್‌ʼಗಳೆಲ್ಲ ಖಾಲಿ ಖಾಲಿ

ಬಂಡೀಪುರ-ನಾಗರಹೊಳೆ ಭಾಗದ ರೆಸಾರ್ಟ್ ಮಾಲೀಕರು ಇಡೀ ವರ್ಷದ ಲಾಭದ ಶೇ.50ರಷ್ಟು ಲಾಭ ವನ್ನು ಕೇವಲ ಮೂರು ತಿಂಗಳಲ್ಲಿ ಮಾಡಿಕೊಳ್ಳುತ್ತಿದ್ದರು. ಆದರೆ ಅರಣ್ಯ ಇಲಾಖೆಯ ಅವೈಜ್ಞಾನಿಕ ಸಫಾರಿ ನಿರ್ಬಂಧದ ತೀರ್ಮಾನದಿಂದಾಗಿ, ನಷ್ಟ ಇರಲಿ, ಇಷ್ಟು ವರ್ಷದ ಲಾಭ ವನ್ನೂ ಕಳೆದು ಕೊಳ್ಳುವ ಆತಂಕ ರೆಸಾರ್ಟ್ ಮಾಲೀಕರದ್ದಾಗಿದೆ.

Tigers in Safari: ಅಮಾಯಕ ಹುಲಿಗಳು ಮಾಡಿದ ತಪ್ಪಾದರೂ ಏನು ?

ಅಮಾಯಕ ಹುಲಿಗಳು ಮಾಡಿದ ತಪ್ಪಾದರೂ ಏನು ?

ಬಂಡೀಪುರ, ನಾಗರಹೊಳೆ ಭಾಗದಲ್ಲಾಗಿರುವ ಹುಲಿ ದಾಳಿಗೂ, ಸಫಾರಿಗೂ ಸಂಬಂಧವಿಲ್ಲ ದಿದ್ದರೂ ಎರಡಕ್ಕೂ ಸಂಬಂಧ ಕಲ್ಪಿಸಿ ಅರಣ್ಯ ಇಲಾಖೆ ಸಫಾರಿಯನ್ನು ಸ್ಥಗಿತಗೊಳಿಸಿದೆ. ಆದರೆ ಈ ಭಾಗದಲ್ಲಿ ಹುಲಿ ದಾಳಿಯ ಹಿಂದಿನ ಉದ್ದೇಶವೇನು? ಮನುಷ್ಯರಿಂದ ಹುಲಿಗಳಿಗೆ ಆಗಿರುವ ತೊಂದರೆ ಏನು ಎನ್ನುವ ಬಗ್ಗೆ ಅರಣ್ಯ ಇಲಾಖೆ ಪರಿಶೀಲಿಸುತ್ತಿಲ್ಲ.

Safari Ban: ಇರುವುದೇ ಸ್ವಲ್ಪ ಜಾಗ, ಅಲ್ಲೂ ಸಫಾರಿ ನಿರ್ಬಂಧ !

ಇರುವುದೇ ಸ್ವಲ್ಪ ಜಾಗ, ಅಲ್ಲೂ ಸಫಾರಿ ನಿರ್ಬಂಧ !

ಬಂಡೀಪುರ ಸಫಾರಿ ಸುಮಾರು 15 ರಿಂದ 20 ಕಿಮೀ ಇದ್ದರೆ, ನಾಗರಹೊಳೆಯದ್ದು 12ರಿಂದ 18 ಕಿಮೀ ಇದೆ. ಒಂದು ಸುತ್ತಿನಲ್ಲಿ ಈ ದೂರವನ್ನು ಕ್ರಮಿಸುವುದರಿಂದ ಕಾಡಿನ ಆರೇಳು ಕಿಮೀ ಭಾಗದಲ್ಲಿ ಮಾತ್ರ ಸಫಾರಿ ವಾಹನಗಳು ಹೋಗುತ್ತವೆ. ಅದರ ಆಚೆಗೆ ಈಗಲೂ ಪ್ರವಾಸಿಗರಿಗೆ ಅವಕಾಶವಿಲ್ಲ. ಇದನ್ನು ಗಣಿಸದೇ, ಇನ್ನೊಂದು ಭಾಗದಲ್ಲಿ ಆಗಿರುವ ಹುಲಿ ದಾಳಿಗೆ ಸಫಾರಿ ಯನ್ನು ‘ಲಿಂಕ್’ ಮಾಡುತ್ತಿರುವುದು ಸರಿಯಲ್ಲ ಎಂಬ ಆಕ್ರೋಶ ಕೇಳಿಸಿದೆ.

Ranjith H Ashwath Column: ಪ್ರವಾಸೋದ್ಯಮದ ಬಗ್ಗೆ ಸರಕಾರಕ್ಕೆ ಅಲಕ್ಷ್ಯವೇಕೆ ?

ಪ್ರವಾಸೋದ್ಯಮದ ಬಗ್ಗೆ ಸರಕಾರಕ್ಕೆ ಅಲಕ್ಷ್ಯವೇಕೆ ?

ಪ್ರವಾಸೋದ್ಯಮವನ್ನು ಬೂಸ್ಟ್ ಮಾಡುವುದಕ್ಕೆ ಅಗತ್ಯವಿರುವ ಸಾರಿಗೆ ಸಂಪರ್ಕ, ಮೂಲ ಸೌಕರ್ಯ ವ್ಯವಸ್ಥೆಗೆ ಒತ್ತುನೀಡುವ ಬಗ್ಗೆ ಬಹುತೇಕರು ಆಲೋಚಿಸುವುದಿಲ್ಲ ಎನ್ನುವುದು ವಾಸ್ತವ.ಹಾಗೆಂದ ಮಾತ್ರಕ್ಕೆ ಕರ್ನಾಟಕದಲ್ಲಿ ಪ್ರವಾಸೋದ್ಯಮಕ್ಕೆ ಅವಕಾಶವಿಲ್ಲ ಎಂದಲ್ಲ. ಕರ್ನಾಟಕದಲ್ಲಿ ‘ಮರುಭೂಮಿ’ ಪ್ರವಾಸೋದ್ಯಮ ಹೊರತಾಗಿ ಇನ್ನುಳಿದ ಎಲ್ಲ ರೀತಿಯ ಪ್ರವಾಸೋದ್ಯಮಕ್ಕೆ ಅವಕಾಶವಿದೆ.

Ban on Safari: ಸಫಾರಿಗೆ ನಿರ್ಬಂಧ; ಕರುನಾಡು ಪ್ರವಾಸಿ ಸಂಸ್ಕೃತಿಗೆ ಧಕ್ಕೆ

ಸಫಾರಿಗೆ ನಿರ್ಬಂಧ; ಕರುನಾಡು ಪ್ರವಾಸಿ ಸಂಸ್ಕೃತಿಗೆ ಧಕ್ಕೆ

ಉತ್ತರ ಭಾರತದಿಂದ ವಾರಗಟ್ಟಲೇ ರಾಜ್ಯಕ್ಕೆ ಆಗಮಿಸುವವರು, ಕೇವಲ ಬಂಡೀಪುರಕ್ಕೆ ಬರುವುದಿಲ್ಲ. ಬದಲಿಗೆ ಬಂಡೀಪುರಕ್ಕೆ ಬಂದು ಇಲ್ಲಿನ ಸಫಾರಿ ವೀಕ್ಷಿಸಿ ಬಳಿಕ ಕರ್ನಾಟಕದ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಾರೆ. ಆದರೀಗ ಕರ್ನಾಟಕದಲ್ಲಿ ಸಫಾರಿ ಇಲ್ಲ ಎಂದರೆ ಅವರು ನೆರೆ ರಾಜ್ಯಗಳಿಗೆ ಭೇಟಿ ನೀಡುವ ಸಾಧ್ಯತೆಯಿರುತ್ತದೆ ಎನ್ನುವ ಆತಂಕವನ್ನು ಪ್ರವಾಸೋದ್ಯಮ ಕ್ಷೇತ್ರದ ತಜ್ಞರು ವ್ಯಕ್ತಪಡಿಸಿದ್ದಾರೆ.

Safari struggle: ಐಎಫ್‌ಎಸ್‌- ಖಂಡ್ರೆ ಕಿತ್ತಾಟದಲ್ಲಿ ಸಫಾರಿ ಸ್ಥಗಿತ ?

ಐಎಫ್‌ಎಸ್‌- ಖಂಡ್ರೆ ಕಿತ್ತಾಟದಲ್ಲಿ ಸಫಾರಿ ಸ್ಥಗಿತ ?

ಬಂಡೀಪುರ, ನಾಗರಹೊಳೆ ಸಫಾರಿ ನಿರ್ಬಂಧ ಸದ್ಯದ ಹಾಟ್ ಟಾಪಿಕ್. ಸಫಾರಿಯಿಂದ 40 ಕಿಮೀ ದೂರದ ಪ್ರದೇಶದಲ್ಲಿನ ಹುಲಿ ದಾಳಿ ಮುಂದಿಟ್ಟುಕೊಂಡು ಸಫಾರಿ ನಿರ್ಬಂಧಿಸಿರುವುದಕ್ಕೆ ಪ್ರವಾಸಿ ಕ್ಷೇತ್ರದಲ್ಲಿ ತೀವ್ರ ಆಕ್ಷೇಪ ವ್ಯಕ್ತ ವಾಗುತ್ತದೆಯಾದರೂ, ನಿರ್ಬಂಧಕ್ಕೆ ಸಚಿವರು ಮತ್ತು ಐಎಫ್‌ಎಸ್ ಅಧಿಕಾರಿ ಗಳ ನಡುವಣ ತಿಕ್ಕಾಟ ಕಾರಣ ಎನ್ನಲಾಗುತ್ತಿದೆ.

Safari: ಪ್ರತಿಷ್ಠೆಗೆ ಬಿದ್ದು ನಿರ್ಬಂಧ, ನೂರಾರು ಕುಟುಂಬ ಬೀದಿಗೆ

ಪ್ರತಿಷ್ಠೆಗೆ ಬಿದ್ದು ನಿರ್ಬಂಧ, ನೂರಾರು ಕುಟುಂಬ ಬೀದಿಗೆ

ಜಂಗಲ್ ರೆಸಾರ್ಟ್ ನಿಗಮದ ರೆಸಾರ್ಟ್‌ನಲ್ಲಿ 180ಕ್ಕೂ ಹೆಚ್ಚು ಜನ ಕಾರ್ಯನಿರ್ವಹಿಸುತ್ತಿದ್ದರೆ, ಇನ್ನು ಕೆಲ ಐಷಾರಾಮಿ ರೆಸಾರ್ಟ್‌ನಲ್ಲಿ 200ಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ರೆಸಾರ್ಟ್, ಹೋಮ್ ಸ್ಟೇಗಳಲ್ಲಿಯೇ ಎರಡು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಬ್ಬ ಸಿಬ್ಬಂದಿಯ ಮನೆಯಲ್ಲಿ ನಾಲ್ಕು ಜನರಿದ್ದರೂ, ಈ ಸಫಾರಿಗೆ ಬರುವ ಪ್ರವಾಸಿಗರಿಂದಲೇ ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಜನರ ಜೀವನ ಅವಲಂಬಿಸಿದೆ.

Use Safari: ʼಸಫಾರಿ ಬಳಸಿʼ ಅರಣ್ಯ ಉಳಿಸಿ

Use Safari: ʼಸಫಾರಿ ಬಳಸಿʼ ಅರಣ್ಯ ಉಳಿಸಿ

ಕರ್ನಾಟಕಕ್ಕೆ ಹೋಲಿಸಿದರೆ, ದೇಶದ ಇತರೆ ಭಾಗದಲ್ಲಿ ಇಲ್ಲಿಗಿಂತ ಹೆಚ್ಚು ಪ್ರಮಾಣದಲ್ಲಿ ದಾಳಿಗಳಾಗು ತ್ತಿವೆ. ಆದರೆ ಅಲ್ಲೆಲ್ಲಿಯೂ ಸ್ಥಗಿತವಾಗದ ಸಫಾರಿ, ಬಂಡೀಪುರ ಹಾಗೂ ನಾಗರಹೊಳೆ ಯಲ್ಲಿ ಮಾತ್ರ ಏಕಾಗಿದೆ? ಸಂಘರ್ಷ ತಡೆಗೆ ಅರಣ್ಯ ಇಲಾಖೆ ಅಧಿಕಾರಿಗಳು ವೈಜ್ಞಾನಿಕ ಪರಿಹಾರ ಕಂಡುಕೊಳ್ಳ ಬೇಕಿದೆಯೇ ಹೊರತು, ಸಫಾರಿ ಸ್ಥಗಿತಗೊಳಿಸುವುದು ಪರಿಹಾರವಲ್ಲ.

Ranjith H Ashwath Column: ಬಜೆಟ್‌ ಎಂದರೆ ಬರೀ ಘೋಷಣೆಯಲ್ಲ

Ranjith H Ashwath Column: ಬಜೆಟ್‌ ಎಂದರೆ ಬರೀ ಘೋಷಣೆಯಲ್ಲ

ಭಾರತದಲ್ಲಿ ಬಜೆಟ್‌ಗೆ ಸಿಗುವಷ್ಟು ಮಾನ್ಯತೆ ಇನ್ಯಾವ ದೇಶದಲ್ಲಿಯೂ ಸಿಗುವುದಿಲ್ಲವೇನೋ ಎನಿಸು ವಷ್ಟರ ಮಟ್ಟಿಗೆ ಕುತೂಹಲವಿರುತ್ತದೆ. ಬಜೆಟ್‌ಗಳೆಂದರೆ ಜನರಿಗೆ ಯಾವೆಲ್ಲ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ ಎನ್ನುವುದಕ್ಕಿಂತ ಹೆಚ್ಚಾಗಿ ಆಯಾ ಆರ್ಥಿಕ ವರ್ಷದಲ್ಲಿ ದೇಶದ ಖಜಾನೆಗೆ ಬರುವ ಆದಾಯವೆಷ್ಟು, ಮಾಡುತ್ತಿರುವ ಖರ್ಚೆಷ್ಟು? ಅನುದಾನ ಹಂಚಿಕೆಗೆ ಮಾಡಿಕೊಂಡಿರುವ ಲೆಕ್ಕಾಚಾರಗಳೇನು? ಎನ್ನುವ ಅಂಶವನ್ನು ದೇಶದ ಮುಂದಿಡುವುದೇ ಆಗಿರುತ್ತದೆ.

Ranjith H Ashwath Column: ರಾಜ್ಯಪಾಲರ ಭಾಷಣವೆಂಬ 'ಗ್ರೇ ಏರಿಯಾ'

Ranjith H Ashwath Column: ರಾಜ್ಯಪಾಲರ ಭಾಷಣವೆಂಬ 'ಗ್ರೇ ಏರಿಯಾ'

ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲು ಆರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಥ್ ಒಪ್ಪಿದ್ದರು. ಆ ಕಾರಣಕ್ಕಾಗಿಯೇ ಅಧಿವೇಶನವನ್ನೂ ‘ಕರೆದಿದ್ದರು’. ಅಲ್ಲಿಯವರೆಗೆ ಎಲ್ಲವೂ ಸರಿಯಾಗಿತ್ತು. ಆದರೆ ಯಾವಾಗ ಸರಕಾರ ಕೇಂದ್ರದ ವಿರುದ್ಧ 11 ಪ್ಯಾರಗಳನ್ನು ಸೇರಿಸಿತೋ ಅಲ್ಲಿಗೆ, ಲೋಕಭವನ ಹಾಗೂ ಸರಕಾರದ ನಡುವಿನ ಸಂಘರ್ಷ ಆರಂಭವಾಯಿತು.

Ranjith H Ashwath Column: 'ರಾಗಾ' ಅಂತರದ ಹಿಂದಿರುವ ಲೆಕ್ಕಾಚಾರವೇನು ?

ರಾಗಾ ಅಂತರದ ಹಿಂದಿರುವ ಲೆಕ್ಕಾಚಾರವೇನು ?

ಸಮ್ಮಿಶ್ರ ಸರಕಾರ ಹಾಗೂ ಬಿಜೆಪಿ ಸರಕಾರದಲ್ಲಿದ್ದ ಗೊಂದಲಗಳಿಗೆ ರೋಸಿಯೇ, 2023ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಭರ್ಜರಿ ಬಹುಮತ ನೀಡಿದ್ದರು ಮತದಾರರು. ಆದರೆ ಸರಕಾರವು ಎರಡೂವರೆ ವರ್ಷ ಪೂರೈಸಿದ ದಿನದಿಂದ ಕರ್ನಾಟಕ ಕಾಂಗ್ರೆಸ್‌ನಲ್ಲಿ ಶುರುವಾಗಿರುವ ನಾಯಕತ್ವ ಗೊಂದಲಕ್ಕೆ ಈಗಲೂ ಕೊನೆಯಿಲ್ಲವಾಗಿದ್ದು ಅದು ‘ನಾಳೆ ಬಾ’ ಕಥೆಯಾಗಿದೆ.

Ranjith H Ashwath Column: ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ ನಿಜಕ್ಕೂ ಸಾಧ್ಯವೇ ?

ಶಿಕ್ಷಣದಲ್ಲಿ ಮಾತೃಭಾಷೆ ಕಡ್ಡಾಯ ನಿಜಕ್ಕೂ ಸಾಧ್ಯವೇ ?

ರಾಜಕೀಯ ಕಿತ್ತಾಟ ನೋಡುವುದಕ್ಕಿಂತ ಕೇರಳ ಸರಕಾರದ ವಿಧೇಯಕದಲ್ಲಿ ಏನಿದೆ ಎನ್ನುವುದು ಮುಖ್ಯವಾಗುತ್ತದೆ. ಪಿಣರಾಯಿ ವಿಜಯನ್ ನೇತೃತ್ವದ ಸರಕಾರ ಜಾರಿಗೊಳಿಸಿ ರುವ ಮಲಯಾಳಂ ವಿಧೇಯಕದಲ್ಲಿ ಪ್ರಮುಖವಾಗಿ, ಮಲಯಾಳಂ ಅನ್ನು ಕೇರಳದ ಅಧಿಕೃತ ಭಾಷೆಯೆಂದು ಘೋಷಿಸುವುದರೊಂದಿಗೆ, ಸರಕಾರಿ ವ್ಯವಸ್ಥೆಯಲ್ಲಿ ಮಲಯಾಳಂ ಅಧಿಕೃತ ಸಂವಹನ ಭಾಷೆಯಾಗಿರಬೇಕು ಎಂದಿದೆ.

Ranjith H Ashwath Column: ಹೋರಾಟ ಆರಂಭಿಸುವ ಮೊದಲು ಸ್ಪಷ್ಟತೆ ಇರಲಿ

ಹೋರಾಟ ಆರಂಭಿಸುವ ಮೊದಲು ಸ್ಪಷ್ಟತೆ ಇರಲಿ

ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಖಾತ್ರಿ ಹಾಗೂ ಮೂಲಸೌಕರ್ಯವನ್ನು ಕೊಡಿಸಬೇಕು ಎನ್ನು ವುದೇ ಈ ಎರಡೂ ಕಾನೂನಿನ ಮೂಲ ಉದ್ದೇಶವಾದರೂ, ವಿವಾದಕ್ಕೆ ಕಾರಣವಾಗಲು ಹಲವು ಆಯಾಮಗಳಿವೆ. ಮೊದಲಿಗೆ ಮಹಾತ್ಮ ಗಾಂಧಿ ಅವರ ಹೆಸರಿನ ಯೋಜನೆಯನ್ನು ಕೈಬಿಟ್ಟು ‘ರಾಮ್’ ಎನ್ನುವ ಶಬ್ದ ಬರುವಂತೆ ಯೋಜನೆಯ ಹೆಸರನ್ನು ಮರುರೂಪಿಸಿರುವುದು. ಎರಡನೆಯದಾಗಿ ಈ ಹಿಂದೆ ನರೇಗಾ ಯೋಜನೆಯನ್ನು ಕೈಗೆತ್ತಿಕೊಳ್ಳುವಲ್ಲಿ ಗ್ರಾಮ ಪಂಚಾಯಿತಿ ಗಳೇ ಪ್ರಮುಖ ಪಾತ್ರ ವಹಿಸುತ್ತಿದ್ದವು.

Ranjith H Ashwath Column: ದಶಕದಿಂದ ನಡೆಯುತ್ತಿರುವ ಚರ್ಚೆಯ ಫಲವೇನು ?

Ranjith H Ashwath Column: ದಶಕದಿಂದ ನಡೆಯುತ್ತಿರುವ ಚರ್ಚೆಯ ಫಲವೇನು ?

ಇತ್ತೀಚೆಗಷ್ಟೇ ಮುಗಿದ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮೊದಲ ಬಾರಿಗೆ ಎರಡನೇ ದಿನದಿಂದಲೇ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲಿನ ಚರ್ಚೆಗೆ ಅವಕಾಶ ನೀಡಲಾಯಿತು. ವಿಧಾನ ಸಭೆಯಲ್ಲಿ 39 ಶಾಸಕರು ಸುಮಾರು 17 ಗಂಟೆ 02 ನಿಮಿಷಗಳ ಕಾಲ ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ದಂತೆ ಚರ್ಚಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು ಮೂರು ತಾಸು ಉತ್ತರ ನೀಡಿದ್ದಾರೆ.

Loading...