ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೈಲೈನ್‌ ಸ್ಟೋರೀಸ್‌

ಮಳೆ ಕೈ ಕೊಟ್ಟ ಹಿನ್ನೆಲೆ ಕೃಷಿಗೆ ಸಂಕಷ್ಟ, ಬರ ಘೋಷಣೆಗೆ ರೈತರ ಒತ್ತಾಯ: 1000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹ

1000 ಕೋಟಿ ವಿಶೇಷ ಪ್ಯಾಕೇಜ್‌ಗೆ ಆಗ್ರಹ

ಕಲಬುರಗಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸಿರುವ ಸಂದರ್ಭದಲ್ಲೇ ರೈತರ ಈ ಬೇಡಿಕೆ ಮತ್ತಷ್ಟು ಮುನ್ನೆಲೆಗೆ ಬಂದಿದೆ. ಬರದ ಸಂಕಷ್ಟದಲ್ಲಿರುವ ಕೃಷಿಕರಿಗೆ ಸರಕಾರ ತಕ್ಷಣ ಸ್ಪಂದಿಸಬೇಕು. ನೈಜ ಬೆಳೆನಷ್ಟ ಗುರುತಿಸಿ ಪರಿಹಾರ ಕಲ್ಪಿಸುವ ಜತೆಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು ಹಾಗೂ ಕೃಷಿ ಪುನಶ್ಚೇತನಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು.

ನಾಳೆ ಕರಾವಳಿಯಲ್ಲಿ ಸಂಪುಟ ಸಭೆ: ತುಳು 2ನೇ ಆಡಳಿತ ಭಾಷೆ, ಮೂಲಸೌಕರ್ಯ ಯೋಜನೆಗಳಿಗೆ ಅಧಿಕೃತ ಮುದ್ರೆಯ ನಿರೀಕ್ಷೆ

ನಾಳೆ ಕರಾವಳಿಯಲ್ಲಿ ಸಂಪುಟ ಸಭೆ

ಕರ್ನಾಟಕದ ಆಡಳಿತ ಶಕ್ತಿ ಸೌಧವೇ ಕರಾವಳಿಯಂಗಳಕ್ಕೆ ಇಳಿದು ಬರುತ್ತಿರುವ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಜನಪ್ರತಿನಿಧಿಗಳು, ಧಾರ್ಮಿಕಸಾಮಾಜಿಕ ಸಂಘಟನೆಗಳು ಹಾಗೂ ಕೈಗಾರಿಕಾ ಒಕ್ಕೂಟಗಳು ಸರಕಾರದ ಮುಂದಿಟ್ಟಿರುವ ಪ್ರಮುಖ ಪ್ರಸ್ತಾವನೆಗಳು ಮತ್ತು ಅವುಗಳ ಸಂಪುಟ ಅನುಮೋದನೆಯ ಸಾಧ್ಯತೆಗಳು ಹೀಗಿದೆ.

Street Festival: ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಸ್ಪಂದನೆ: ರಸ್ತೆಗೆ ವಿಶೇಷ ವಿನ್ಯಾಸ, ಜಗಮಗಿಸುವ ಲೇಸರ್ ಶೋ, ಡ್ರೋನ್ ಶೋಗೆ ಜನ ಫಿದಾ, ಕಲಬುರಗಿಯಲ್ಲಿ ರಂಗೇರಿದ ಕಲ್ಯಾಣ ಕರ್ನಾಟಕ ಉತ್ಸವ

ಸ್ಟ್ರೀಟ್‌ ಫೆಸ್ಟಿವಲ್‌ಗೆ ಭಾರೀ ಸ್ಪಂದನೆ

ಬಣ್ಣ ಬಣ್ಣದ ದೀಪಾಲಂಕಾರದಿಂದ ಕಂಗೊಳಿಸಿದ ಆವರಣದಲ್ಲಿ ಯುವಕ-ಯುವತಿಯರು, ಮಕ್ಕಳು, ಮಹಿಳೆ ಯರು ಸೇರಿ ಸಾವಿರಾರು ಜನರು ಸೇರಿ ಸಂಭ್ರಮಿಸಿದರು. ಜಗಮಗಿಸುವ ದೀಪಾಲಂಕಾರ, ಅಲಂಕೃತ ಪ್ರವೇಶದ್ವಾರ ಹಾಗೂ ವಿಭಿನ್ನ ವಿನ್ಯಾಸಗಳ ನಡುವೆ ಯುವಕ-ಯುವತಿಯರು ಸ್ಟ್ರೀಟ್ ಫೆಸ್ಟಿವಲ್‌ನ ಪ್ರಮುಖ ಆಕರ್ಷಣೆಯಾಗಿ ಕಾಣಿಸಿಕೊಂಡರು. ಮೊಬೈಲ್‌ಗಳಲ್ಲಿ ಕ್ಷಣಗಳನ್ನು ಸೆರೆ ಹಿಡಿಯುತ್ತಾ, ಸ್ನೇಹಿತರೊಂದಿಗೆ ಹೆಜ್ಜೆ ಹಾಕುತ್ತಾ ಯುವ ಸಮೂಹ ಉತ್ಸವದ ವಾತಾವರಣಕ್ಕೆ ಮತ್ತಷ್ಟು ರಂಗು ತಂದಿತು.

ಪ್ರೀತಮ್ ತಯಾರಿಸಿದ ವಿಠ್ಠಲ ರೂಪದ ಗಣೇಶ ಮೂರ್ತಿ

ಪ್ರೀತಮ್ ತಯಾರಿಸಿದ ವಿಠ್ಠಲ ರೂಪದ ಗಣೇಶ ಮೂರ್ತಿ

ಮನೆಯಲ್ಲಿಯೇ ಮೂರ್ತಿಗಳನ್ನು ತಯಾರಿಸು ವುದರ ಜತೆಗೆ, ನಗರದ ಕಲ್ಮಠ ಗಲ್ಲಿಯ ವಿನೋದ ಬಡಿಗೇರ ಅವರ ಗಣೇಶ ಮೂರ್ತಿ ತಯಾರಿಕಾ ಕಾರ್ಯದಲ್ಲಿಯೂ ಪ್ರೀತಮ್ ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾನೆ. ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡುವ ಮೂಲಕ ಮೂರ್ತಿ ತಯಾರಿಕೆಯ ವಿವಿಧ ಸೂಕ್ಷ್ಮತೆಗಳನ್ನು ಕಲಿಯುತ್ತಿರುವ ಈ ಬಾಲಕ,

26.90 ಲಕ್ಷ ರು.ವೆಚ್ಚದಲ್ಲಿ ನಿರ್ಮಾಣ: ನಾಲ್ಕು ತಿಂಗಳಿನಿಂದ ಶೌಚಾಲಯಕ್ಕೆ ಬೀಗ,, ಸಾರ್ವಜನಿಕರಿಗೆ ಬಯಲೇ ಗತಿ

ನಾಲ್ಕು ತಿಂಗಳಿನಿಂದ ಶೌಚಾಲಯಕ್ಕೆ ಬೀಗ,, ಸಾರ್ವಜನಿಕರಿಗೆ ಬಯಲೇ ಗತಿ

ನಗರಸಭೆ ಅನುದಾನದಡಿ ಸ್ವಚ್ಛ ಭಾರತ್ ಮಿಷನ್ (ನಗರ 2.0) ಯೋಜನೆಯಡಿ ಅಂದಾಜು 26.90 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾದ ಈ ಶೌಚಾಲಯ, ನಿರ್ಮಾಣ ಗೊಂಡು ಕೇವಲ ಮೂರು ವರ್ಷಗಳಲ್ಲೇ ಬಳಕೆಗೆ ಬಾರದ ಸ್ಥಿತಿಗೆ ತಲುಪಿದೆ. ಕಳೆದ ನಾಲ್ಕು ತಿಂಗಳಿಂದ ಬಾಗಿಲು ತೆರೆಯದ ಕಾರಣ, ಸಾರ್ವಜನಿಕರ ಹಣದಲ್ಲಿ ನಿರ್ಮಿಸಿದ ಸೌಲಭ್ಯ ಇದ್ದೂ ಇಲ್ಲದಂತಾಗಿದೆ.

ಗಟ್ಟಿಯಾಗುತ್ತಿದೆ ಹೋರಾಟದ ಧ್ವನಿ: ಹೊಸನಗರ ವಿದ್ಯುತ್ ಕತ್ತಲೆ ಕಳೆಯುವುದು ಯಾವಾಗ?

ಹೊಸನಗರ ವಿದ್ಯುತ್ ಕತ್ತಲೆ ಕಳೆಯುವುದು ಯಾವಾಗ?ಗೊಒ

ನಿತ್ಯ ಕತ್ತಲಾಗುವ ತಾಲೂಕಿನ ವಿದ್ಯುತ್ ಗೋಳು ತಪ್ಪಿಸುವ ಹಿನ್ನೆಲೆಯಲ್ಲಿ ಹಲವು ವರ್ಷದ ಬೇಡಿಕೆ ಮತ್ತು ಈ ಹಿಂದೆ ಇಲ್ಲಿನ ಕೆಲವರ ಆಗ್ರಹದ ಪ್ರತಿಫಲವಾಗಿ 110 ಕೆವಿ ಟವರ್ ವಿದ್ಯುತ್ ಮಾರ್ಗದ ಯೋಜನೆಯ ಅಂದಾಜು ಪಟ್ಟಿ ಈ ಹಿಂದೆಯೇ ಸಿದ್ಧಪಡಿಸಲಾಗಿತ್ತು. ಆದರೆ ಉದ್ದೇಶಿತ 110 ಕೆವಿ ವಿದ್ಯುತ್ ಮಾರ್ಗದ ಪ್ರಸ್ತಾಪವನ್ನು ಆಗ ವೃತ್ತಮಟ್ಟದ ಮತ್ತು ವಲಯ ಮಟ್ಟದ ಸಂಯೋಜಕ ಸಮಿತಿ ಯ ಸಭೆಯಲ್ಲಿ ಕೈ ಬಿಟ್ಟೂ ಆಗಿತ್ತು

KPSC Recruitment Scam: ಕೆಪಿಎಸ್‌ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ, ನೇಮಕಾತಿ ಅಕ್ರಮ, ಲಂಚವೇ ಪರಪಂಚ

ಕೆಪಿಎಸ್‌ಸಿಯನ್ನೂ ಮೀರಿಸಿದೆ ಕೊಪ್ಪಳ ವಿವಿ

ಯಲಬುರ್ಗಾ ಕಾಂಗ್ರೆಸ್ ಕಾರ್ಯಕರ್ತೆಯೊಬ್ಬರ ಪುತ್ರನೊಬ್ಬ ಇಲ್ಲಿ ಹೊರಗುತ್ತಿಗೆ ನೌಕರನಾಗಿದ್ದು, ಇಡೀ ಅಕ್ರಮದ ಸೂತ್ರಧಾರ ಆತನೇ ಎಂದು ಆರೋಪಿಸಲಾಗಿದೆ. ಇಷ್ಟೆಲ್ಲ ಗೊತ್ತಿದ್ದರೂ ಸ್ವತಃ ತಮ್ಮ ಸ್ವಗ್ರಾಮ ದಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯದ ದಯನೀಯ ಸ್ಥಿತಿಯ ಬಗ್ಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸಂಪೂರ್ಣ ನಿರ್ಲ ಕ್ಷ್ಯ ವಹಿಸಿದ್ದಾರೆ ಎಂದು ಜನ ಬೇಸರ ವ್ಯಕ್ತಪಡಿಸಿದ್ದಾರೆ.

ದೆಹಲಿಯಿಂದ ಬೆಂಗಳೂರಿಗೆ ಎಕ್ಸ್‌ʼಪ್ರೆಸ್‌ ರೈಲಿಗಿಂತಲೂ ವೇಗವಾಗಿ ತಲುಪಿದ ಕಾರು !

ದೆಹಲಿಯಿಂದ ಬೆಂಗಳೂರಿಗೆ ಎಕ್ಸ್‌ʼಪ್ರೆಸ್‌ ರೈಲಿಗಿಂತಲೂ ತಲುಪಿದ ಕಾರು !

ಈ ಇಬ್ಬರೂ ಪ್ರಯಾಣಿಸಿದ್ದು ದೆಹಲಿಯಿಂದ ಬೆಂಗಳೂರಿಗೆ. ಒಟ್ಟು 2,075 ಕಿಲೋ ಮೀಟರ್‌ಅಂತರದ ಪ್ರಯಾಣ ಅದು. ಈ ದೂರವನ್ನು ಈ ಈರ್ವರೂ ಚಾಲಕರು ಕೇವಲ 29 ಗಂಟೆಗಳಲ್ಲಿ ಕ್ರಮಿಸಿದ್ದು ನಿಬ್ಬೆರಗಾಗುವ ದಾಖಲೆಯೇ ಹೌದು. ಒಂದು ದೇಶದಲ್ಲಿ ಕಾರಿನಲ್ಲಿ ಅತೀ ದೀರ್ಘದ ನಿರಂತರ ಪ್ರಯಾಣ ಕ್ಕಾಗಿ ಕೇಶವಪ್ರಸಾದ್ ಮುಳಿಯ ಮತ್ತು ಡಾ. ಅನಿಲ್ ಬೈಪಾಡಿ ತ್ತಾಯ ಅವರಿಗೆ ಜಂಟಿಯಾಗಿ ವಿಶ್ವದಾಖಲೆಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಪ್ರಧಾನ ಮಾಡಲಾಯಿತು.

ವಿಸಿ ನೇಮಕದಲ್ಲಿ ʼಸ್ತ್ರೀ ಎಂದರೆ ಅಷ್ಟೇ ಸಾಕುʼ ಎಂದ ಸರಕಾರ

ವಿಸಿ ನೇಮಕದಲ್ಲಿ ʼಸ್ತ್ರೀ ಎಂದರೆ ಅಷ್ಟೇ ಸಾಕುʼ ಎಂದ ಸರಕಾರ

ಗದಗ ಜಿಲ್ಲೆಯ ಆರ್ ಡಿಪಿಆರ್ ವಿಶ್ವವಿದ್ಯಾಲಯ, ಹಾವೇರಿಯ ಜಾನಪದ ವಿವಿ ಹಾಗೂ ಹಂಪಿಯ ಕರ್ನಾಟಕ ಕನ್ನಡ ವಿವಿಯ ಕುಲಪತಿ ನೇಮಕ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಇದಕ್ಕಾಗಿ ಅರ್ಹರ ಶೋಧನಾ ಸಮಿತಿಯನ್ನೂ ರಚಿಸಲಾಗಿದ್ದು, ಇವರಲ್ಲಾದರೂ ಮಹಿಳೆಯರಿಗೆ, ಪರಿಶಿಷ್ಟ ಜಾತಿ ಮಹಿಳೆಯರಿಗೆ ಅಥವಾ ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರಿಗೆ ಅವಕಾಶ ಸಿಗುವುದೇ ಎಂದು ನೋಡಬೇಕಿದೆ.

Kalaburagi as state's second capital: ಕಲ್ಯಾಣ ಕರ್ನಾಟಕಕ್ಕೆ ಪ್ರಾಶಸ್ತ್ಯ ನೀಡಲು ಆಗ್ರಹ: ಕಲಬುರಗಿ ಆಗಲಿ ರಾಜ್ಯದ ಎರಡನೇ ರಾಜಧಾನಿ

ಕಲಬುರಗಿ ಆಗಲಿ ರಾಜ್ಯದ ಎರಡನೇ ರಾಜಧಾನಿ

ಬೆಂಗಳೂರು ಕೇಂದ್ರಿತ ಅಭಿವೃದ್ಧಿಗೆ ಪರ್ಯಾಯವಾಗಿ ರಾಜ್ಯದ ವಿವಿಧ ನಗರಗಳಲ್ಲಿ ಆರ್ಥಿಕ, ತಂತ್ರಜ್ಞಾನ ಹಾಗೂ ಕೈಗಾರಿಕಾ ಚಟವಟಿಕೆಗಳನ್ನು ವಿಕೇಂದ್ರೀಕರಿಸುವ ಚಿಂತನೆ ನಡೆಯುತ್ತಿದೆ. ಇದೇ ಸಂದರ್ಭದಲ್ಲಿ ಕಲಬುರಗಿಗೆ ಕೇವಲ ಬಿಯಾಂಡ್ ಬೆಂಗಳೂರು ಕ್ಲಸ್ಟರ್‌ನ ಸ್ಥಾನಮಾನ ನೀಡುವು ದಕ್ಕಿಂತ, ಆಡಳಿತಾತ್ಮಕವಾಗಿ ಹೆಚ್ಚಿನ ಮಹತ್ವ ನೀಡಬೇಕು ಎನ್ನಲಾಗಿದೆ.

ಸಾತಗಳ್ಳಿಯಲ್ಲಿ ಭರದ ಸಿದ್ಧತೆ, 175 ಜತೆ ಕೋಣಗಳಿಗೆ ಅವಕಾಶ: ದಸರಾ ಅಂಗಳದಲ್ಲಿ ಕರಾವಳಿ ಕಂಬಳದ ಸಪ್ಪಳ

ದಸರಾ ಅಂಗಳದಲ್ಲಿ ಕರಾವಳಿ ಕಂಬಳದ ಸಪ್ಪಳ

ತುಳುನಾಡಿನ ಸಾಂಪ್ರದಾಯಿಕ ವೀರಕ್ರೀಡೆ ಕಂಬಳ ಆಯೋಜನೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಮೈಸೂರಿನಲ್ಲಿ ಕಂಬಳ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿಯ ದಸರಾದಲ್ಲಿ ಕೋಣಗಳ ಸದ್ದು ಕೇಳಿಸಲಿದ್ದು, ಸಾತಗಳ್ಳಿ ಸಮೀಪ ಕಂಬಳದ ಅಖಾಡ ಸಿದ್ಧಗೊಳ್ಳುತ್ತಿದೆ. ಟ್ರ್ಯಾಕ್ ನಿರ್ಮಾಣ ಸೇರಿದಂತೆ ಅಗತ್ಯ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.

Koppal University: ಯುಜಿಸಿ ನಿಯಮದ ಹೆಸರಿನಲ್ಲಿ ಸ್ವಹಿತಾಸಕ್ತಿ ಸಾಧನೆ ಆರೋಪ: ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಿಯಮ ಉಲ್ಲಂಘನೆ

ಕೊಪ್ಪಳ ವಿವಿಯಲ್ಲಿ ಅಪರಾತಪರ ?

ಯಡವಟ್ಟು, ಅವಾಂತರಗಳ ಕಾರಣಕ್ಕೆ ಸದಾ ಸುದ್ದಿಯಲ್ಲಿರುವ ಕೊಪ್ಪಳ ವಿಶ್ವವಿದ್ಯಾಲಯ ಈಗ ಮತ್ತೇ ಸುದ್ದಿಯಲ್ಲಿದೆ. ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಯುಜಿಸಿ ನಿಯಮ ಉಲ್ಲಂಘಿಸಿ, ಮನಸೋ ಇಚ್ಛೇ ಮೆರಿಟ್ ಲಿಸ್ಟ್ ಸಿದ್ಧತೆ ಮಾಡಿರುವ ಆರೋಪ ಕೇಳಿ ಬಂದಿದೆ. ಯುಜಿಸಿ ನಿಯಮಾವಳಿ ಒಂದೆಡೆ ಇರಲಿ, ಕೊಪ್ಪಳ ವಿಶ್ವವಿದ್ಯಾಲಯದ ಒಂದು ವಿಭಾಗದ ನೇಮಕಾತಿಗೆ ಇದ್ದ ನಿಯಮ ಮತ್ತೊಂದು ವಿಭಾಗಕ್ಕೆ ಅನ್ವಯ ಆಗಿಲ್ಲ

Kuntoji Basavanna Jatra: ಇಂದಿನಿಂದ ಕುಂಟೋಜಿ ಬಸವಣ್ಣನ ಜಾತ್ರೆ: ನಾಳೆ ಎರಡನೇ ವರ್ಷದ ರಥೋತ್ಸವ

ಇಂದಿನಿಂದ ಕುಂಟೋಜಿ ಬಸವಣ್ಣನ ಜಾತ್ರೆ

ನಾಡಿನ ಹರಗುರು ಚರಮೂರ್ತಿಗಳನ್ನು ಕರೆಸಿ ಅವರ ಅಮೃತ ಹಸ್ತದಿಂದ ಮೊಟ್ಟ ಮೊದಲ ತೇರೆಳೆದು ಸಂಭ್ರಮಿಸಿದರು. ತಮ್ಮ ಊರಿನಿಂದ ಸಾವಿರಾರು ಕಿ.ಮೀ.ಗಳ ದೂರ ಇದ್ದವರು ಕೂಡಾ ಕಳೆದ ವರ್ಷ ತಮ್ಮ ಆರಾಧ್ಯ ದೈವದ ಪ್ರಥಮ ತೇರೆಳೆದು ಕೃತಾರ್ಥ ರಾಗಿದ್ದರು. ಈಗ ಎರಡನೇ ವರ್ಷದ ತೇರೆಳೆಯುವ ಸಂಭ್ರಮದಲ್ಲಿದಾರೆ. ಇಂದು ಶ್ರಾವಣ ಮಾಸದ ಕಡೆಯ ಸೋಮವಾ ರದಂದು ಬಸವಣ್ಣನ ಜಾತ್ರೆ ಆರಂಭವಾಗಲಿದೆ. ಅದರ ನಿಮಿತ್ಯವಾಗಿ ಇಂದು ನಸುಕಿನಲ್ಲಿ ಮಹಾ ಪೂಜೆ ರುದ್ರಾಭಿಷೇಕ ನೆರವೇರಲಿದೆ.

KPSC Recruitment Scam: ಕೆಪಿಎಸ್‌ಸಿ ಅಕ್ರಮದ ಮಧ್ಯವರ್ತಿ ಬಸವರಾಜ ಪಾಲುದಾರಿಕೆ ಸಂಸ್ಥೆಗಳಲ್ಲಿ ಸಿಐಡಿ ಶೋಧ: ಕನ್ನಾಳೆ ಸಂಪತ್ತಿನ ಮೂಲ ಹುಡುಕಾಟ

ಕನ್ನಾಳೆ ಸಂಪತ್ತಿನ ಮೂಲ ಹುಡುಕಾಟ

ಆರೋಪಿ ಬಸವರಾಜ ಕನ್ನಾಳೆ ಸಂಪತ್ತಿನ ಮೂಲದ ಬಗ್ಗೆ ಸಿಐಡಿ ತಂಡ ಮಾಹಿತಿ ಕಲೆ ಹಾಕುತ್ತಿದೆ. ಬೀದರ್ ನಗರದ ನ್ಯೂ ಆದರ್ಶ ಕಾಲೋನಿಯಲ್ಲಿನ ಇನ್ಸೂರೆನ್ಸ್ ಸಂಸ್ಥೆ ಹಾಗೂ ಭಾಲ್ಕಿಯಲ್ಲಿನ ಓಂ ಲಕ್ಷ್ಮಿ ಸೌಹಾರ್ದ ಸಹಕಾರ ಸಂಘ, ಕನ್ನಾಳೆ ಟ್ರಾವೆಲ್‌ನಲ್ಲಿ ಕೋಟಿ ಕೋಟಿ ರುಪಾಯಿ ಹಣ ಹೂಡಿಕೆ ಮಾಡಿರುವ ಬಗ್ಗೆ ತನಿಖೆ ನಡೆದಿದೆ.

ಯಾದಗಿರಿ ಜಿಲ್ಲೆಯಲ್ಲಿ ರಾತ್ರಿ 10ರವರೆಗೂ ನ್ಯಾಯಬೆಲೆ ಅಂಗಡಿ ಮುಂದೆ ಸರತಿ: ಸರ್ವರ್‌ ಇಲ್ಲ ಸರ್‌, ಏನ್‌ ಮಾಡೋದು ?

ಸರ್ವರ್‌ ಇಲ್ಲ ಸರ್‌, ಏನ್‌ ಮಾಡೋದು ?

ಕಳೆದ ನಾಲ್ಕೈದು ತಿಂಗಳಿನಿಂದ ಇಡೀ ರಾಜ್ಯದ ಸರಕಾರಿ ಕಚೇರಿಗಳಲ್ಲಿ ಸರ್ವರ್ ಸಮಸ್ಯೆ ಎಂಬ ಪದ ಪದೇಪದೇ ಕೇಳಿಬರುತ್ತಿದೆ. ಭೂದಾಖಲೆಗಳನ್ನು ಪಡೆದುಕೊಳ್ಳಲು, ಕೆವೈಸಿ ಮಾಡಿಸಲು, ದಾಖಲೆ ವರ್ಗಾವಣೆ ಮಾಡಲೂ ಇದೇ ಸಮಸ್ಯೆಯನ್ನು ಹೇಳಲಾಗುತ್ತಿದೆ. ಅದಕ್ಕೆ ಸರಿಯಾಗಿ ಯಾದಗಿರಿ ಜಿಲ್ಲೆಯಲ್ಲಿ ಜನ ತಡರಾತ್ರಿಯವರೆಗೆ ಕಾದರೂ ಪಡಿತರ ಚೀಟಿ ಇ-ಕೆವೈಸಿ ಮಾಡಿಸ ಲಾಗದೇ ಪರದಾಡಿದ್ದಾರೆ. ಇದಕ್ಕೆ ಕಾರಣ ಸರ್ವರ್ ಸಮಸ್ಯೆ!

Padayatra reached 6th day: ಗಡಿನಾಡು ಬಳ್ಳಾರಿಗೆ ಕಾಲಿಟ್ಟ ವಿಜಯೇಂದ್ರ ದುಂದುಬಿ

ಗಡಿನಾಡು ಬಳ್ಳಾರಿಗೆ ಕಾಲಿಟ್ಟ ವಿಜಯೇಂದ್ರ ದುಂದುಬಿ

ವಿಜಯೇಂದ್ರ ತಮ್ಮ 6ನೇ ದಿನದ ಪಾದಯಾತ್ರೆಯ ದಿನಚರಿಯನ್ನು ಕುರಿಗಾಯಿಗಳ ಜೊತೆಗೆ ಸಂವಾದ ಮಾಡುವ ಮೂಲಕ ಆರಂಭಿಸಿದರು. ಬೆಳಗ್ಗೆ 7 ಗಂಟೆಗೆ ನೇರವಾಗಿ ಗಂಗಾವತಿ ತಾಲೂಕು ಮರಳಿ ಗ್ರಾಮದ ಬಳಿ ನೆಲೆಸಿದ್ದ ಸಂಚಾರಿ ಕುರಿಗಾಯಿಗಳ ಟೆಂಟ್‌ಗೆ ಭೇಟಿ ನೀಡಿ, ಸಂವಾದ ನಡೆಸಿ, ಸಮಸ್ಯೆ ಆಲಿಸಿ, ಈ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದಾಗಿ ಭರವಸೆ ನೀಡಿದರು.

ಪಾದಯಾತ್ರೆ: ಪಕ್ಷದಲ್ಲಿ ಪುನಶ್ಚೇತನ, ಕೊಂಚ ಸಮಾಧಾನ

ಪಾದಯಾತ್ರೆ: ಪಕ್ಷದಲ್ಲಿ ಪುನಶ್ಚೇತನ, ಕೊಂಚ ಸಮಾಧಾನ

ಪಾದಯಾತ್ರೆಯ ಪ್ರಖರತೆ ಹೆಚ್ಚಿಸಬೇಕಿದ್ದ ಕೇಂದ್ರ ಸಚಿವರು, ಸಂಸದರೂ ಸೇರಿದಂತೆ ಪಕ್ಷದ ಅನೇಕ ಹಿರಿಯ ನಾಯಕರ ಹಾಜರಿಯೇ ಕಾಣುತ್ತಿಲ್ಲ, ಅಷ್ಟೇ ಏಕೆ, ಪಾದಯಾತ್ರೆಯುದ್ಧಕ್ಕೂ ಸರಕಾರದ ವಿರುದ್ಧ ಪರಾಕ್ರಮ ಮೆರೆಯಬೇಕಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಆಶೋಕ್ ಅವರ ಗೈರು ಹಾಜರಿಯೇ ಎದ್ದು ಕಾಣುತ್ತಿದ್ದು, ಇದಕ್ಕೆ ಅನಾರೋಗ್ಯದ ಕಾರಣ ನೀಡಲಾಗಿದೆ.

ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯ, ಸಾವಯವ ಉತ್ಪನ್ನಗಳಿಗೆ ವಿಶೇಷ ಆದ್ಯತೆ: ಮಹಾರಾಜ ಮೈದಾನದಲ್ಲಿ ಅ.11ರಿಂದ 25ರವರೆಗೆ ಆಯೋಜನೆ

ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯ, ಸಾವಯವ ಉತ್ಪನ್ನಗಳಿಗೆ ವಿಶೇಷ ಆದ್ಯತೆ

ದಸರಾ ಪ್ರವಾಸಕ್ಕೆ ಮೈಸೂರಿಗೆ ಆಗಮಿಸುವ ಜನರಿಗೆ ವಿವಿಧ ಪ್ರದೇಶಗಳ ಆಹಾರ ಸಂಸ್ಕೃತಿಯನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವುದು ಈ ಬಾರಿಯ ಮೇಳದ ಪ್ರಮುಖ ಉದ್ದೇಶ. ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಭಾರತದ ವಿವಿಧ ರಾಜ್ಯಗಳ ಪ್ರಸಿದ್ಧ ಆಹಾರಗಳನ್ನು ಸವಿಯುವ ಅವಕಾಶವೂ ಇರಲಿದೆ.

ಶಿಕ್ಷಕರ ದಿನಾಚರಣೆ ನಿಮಿತ್ತ ಬೃಹತ್ ರಕ್ತದಾನ ಶಿಬಿರ: ಸಿಇಒ ರಾಹುಲ್ ಶಿಂಧೆ ಕರೆಗೆ ಭರ್ಜರಿ ಸ್ಪಂದನೆ, ರಕ್ತ ಸಂಗ್ರಹದಲ್ಲಿ ದಾಖಲೆ ಬರೆದ ಬೆಳಗಾವಿ

ರಕ್ತ ಸಂಗ್ರಹದಲ್ಲಿ ದಾಖಲೆ ಬರೆದ ಬೆಳಗಾವಿ

ಸರಕಾರಿ ಕಚೇರಿಗಳಲ್ಲಿ ನಡೆಯುವ ಗಣ್ಯರ ದಿನಾಚರಣೆಗಳು ಇತ್ತೀಚಿನ ದಿನಗಳಲ್ಲಿ ಕೇವಲ ಫೋಟೊ ಪೂಜೆಗೆ ಮಾತ್ರ ಸೀಮಿತ ಆಗಿವೆ. ಆದರೆ ಬೆಳಗಾವಿ ಜಿಲ್ಲಾ ಪಂಚಾಯಿತಿ ವಿನೂತನ ಪ್ರಯತ್ನದ ಮೂಲಕ ಯಶಸ್ವಿ ಆಗಿದೆ. ಬೃಹತ್ ರಕ್ತದಾನ ಶಿಬಿರದ ಮೂಲಕ ಶಿಕ್ಷಕರ ದಿನಾಚರಣೆಯನ್ನು ರಾಜ್ಯದಲ್ಲೇ ಮಾದರಿಯಾಗಿ ಆಚರಣೆ ಮಾಡಿದೆ.

Padayatra reached 5th Day: ಬಿರು ಬಿಸಿಲಲ್ಲೂ ಬಿಜೆಪಿ ಜಾಥಾ, ಶಿಕ್ಷಕರ ದಿನಾಚರಣೆಯಲ್ಲಿ ಬಿವೈವಿ ಭಾಗಿ: ಪಾದಯಾತ್ರೆ ಮಧ್ಯೆ ರೈತರ ಜತೆ ಸಂವಾದ

ಪಾದಯಾತ್ರೆ ಮಧ್ಯೆ ರೈತರ ಜತೆ ಸಂವಾದ

ಮರಳಿ ಗ್ರಾಮದಲ್ಲಿ ನವಲಿ ಜಲಾಶಯ ನಿರ್ಮಾಣದ ಸಾಧಕ- ಬಾಧಕಗಳ ಕುರಿತು ರೈತ ಸಂಘಟನೆ ಮುಖಂಡರೊಂದಿಗೆ ಸಂವಾದ ನಡೆಸಿದರು. ಶನಿವಾರ ಬೆಳಗ್ಗೆ ಪಾದಯಾತ್ರೆ ಆರಂಭಕ್ಕೂ ಮೊದಲು ಎಪಿಎಂಸಿ 1ನೇ ಗೇಟ್ ನ ಶಿವಕಿರಣ ಟ್ರೇಡಿಂಗ್ ಸಮೀಪ ನಡೆದ ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾದ ರಾಜ್ಯಾಧ್ಯಕ್ಷ ಬಿವೈವಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿದರು.

ಆದೇಶಗಳ ನಡುವೆ ಅತಂತ್ರರಾದ 'ಭಾವಿ ಶಿಕ್ಷಕರು'

ಆದೇಶಗಳ ನಡುವೆ ಅತಂತ್ರರಾದ 'ಭಾವಿ ಶಿಕ್ಷಕರು'

ಕಲ್ಯಾಣ ಕರ್ನಾಟಕದ 6967 ಹಾಗೂ ಬ್ಯಾಕ್ ಲಾಗ್/ನಾನ್-ಎಚ್‌ಕೆ 8033 ಹುದ್ದೆಗಳಿಗೆ ಸೆ.15ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶವಿದ್ದು, ಪರೀಕ್ಷಾ ಸಿದ್ಧತೆ ಬದಿಗಿಟ್ಟು ದಾಖಲೆಗಳ ತಿದ್ದುಪಡಿ, ಆರ್‌ಡಿ ನಂಬರ್ ಗೊಂದಲ ಪರಿಹಾರಕ್ಕೆ ಅಭ್ಯರ್ಥಿಗಳು ಪರದಾಡುತ್ತಿದ್ದಾರೆ. ಪರೀಕ್ಷೆಗೆ ಓದಬೇಕೋ, ಆದೇಶ ಬೆನ್ನತ್ತ ಬೇಕೋ? ಎಂಬ ಪ್ರಶ್ನೆ ಅಭ್ಯರ್ಥಿಗಳನ್ನು ಕಾಡುತ್ತಿದೆ.

ಶ್ರಾವಣದಲ್ಲೂ ಹೂವಿಗೆ ಬೆಲೆ ಇಲ್ಲ: ತೋಟದಲ್ಲೇ ಅರಳಿ, ತೋಟದಲ್ಲೇ ಕಮರುತ್ತಿವೆ ರೈತರ ಕನಸುಗಳು

ಶ್ರಾವಣದಲ್ಲೂ ಹೂವಿಗೆ ಬೆಲೆ ಇಲ್ಲ

ರಾಜ್ಯದಲ್ಲೇ ಪ್ರಮುಖ ಹೂವಿನ ಮಾರುಕಟ್ಟೆ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಾವಿರಾರು ಎಕರೆ ಪ್ರದೇಶದಲ್ಲಿ ರೈತರು ಪುಷ್ಪಕೃಷಿಯನ್ನು ಅವಲಂಬಿಸಿದ್ದಾರೆ. ನೀರಾವರಿ ಕೊರತೆ ಹಾಗೂ ಬರದ ನಡುವೆಯೂ ದಿನನಿತ್ಯದ ಆದಾಯದ ನಿರೀಕ್ಷೆಯಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಹೂವಿನ ಕೃಷಿಯತ್ತ ಮುಖ ಮಾಡಿದ್ದಾರೆ. ಆದರೆ ಇದೀಗ ಮಾರುಕಟ್ಟೆ ದರ ಕುಸಿತವೇ ಅವರ ಬದುಕಿಗೆ ದೊಡ್ಡ ಹೊಡೆತ ನೀಡಿದೆ.

ಆಧ್ಯಾತ್ಮದ ಪೀಠದಿಂದ ಶಿಕ್ಷಣದ ಪಥದವರೆಗೆ : ಅಪ್ಪನವರ ಬದುಕು, ಜ್ಞಾನ ದಾಸೋಹದ ಬೆಳಕು

ಅಪ್ಪನವರ ಬದುಕು, ಜ್ಞಾನ ದಾಸೋಹದ ಬೆಳಕು

ಕೆಲವರು ಒಂದು ಸಂಸ್ಥೆಯನ್ನು ಕಟ್ಟುತ್ತಾರೆ, ಕೆಲವರು ಒಂದು ಪೀಳಿಗೆಯನ್ನು ಕಟ್ಟುತ್ತಾರೆ. ಲಿಂಗೈಕ್ಯ ಡಾ.ಶರಣಬಸವಪ್ಪ ಅಪ್ಪ ಅವರು ಎರಡನ್ನೂ ಮಾಡಿದ ಅಪರೂಪದ ಮಹನೀಯರು. ಶರಣ ಬಸವೇಶ್ವರ ಸಂಸ್ಥಾನದ ಪೀಠಾಧಿಪತಿಯಾಗಿ ಆಧ್ಯಾತ್ಮಿಕ ಪರಂಪರೆಯನ್ನು ಮುನ್ನಡೆಸಿದ ಅವರು, ಕಲ್ಯಾಣ ಕರ್ನಾಟಕದ ಶೈಕ್ಷಣಿಕ ಹಿಂದುಳಿದತನಕ್ಕೆ ಸವಾಲೆಸೆದು ಶಿಕ್ಷಣವನ್ನೇ ಸಾಮಾಜಿಕ ಬದಲಾವಣೆ ಯ ಸಾಧನವನ್ನಾಗಿ ರೂಪಿಸಿದರು.

ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ನಡೆ ಅನುಮಾನಕ್ಕೆ ಎಡೆ: 'ಕುಡಾ' ಕಚೇರಿಯಲ್ಲಿ ರಾತ್ರಿ ಇಡೀ ಕೆಲಸವೇ?

'ಕುಡಾ' ಕಚೇರಿಯಲ್ಲಿ ರಾತ್ರಿ ಇಡೀ ಕೆಲಸವೇ?

ಕಂಪ್ಯೂಟರ್‌ ಆಪರೇಟರ್‌ ಜೊತೆಗೂಡಿ ತಮ್ಮ ಚೇಂಬರ್ ನಲ್ಲಿ ಇದ್ದಿದ್ದು ಕಂಡು ಬಂದಿದೆ. ಪ್ರಾಧಿಕಾರದ ಕಚೇರಿಯಲ್ಲಿ ಇಡೀ ದಿನ ಮಾಡಿದರೂ ಮುಗಿಯದ ಕೆಲಸವಾದರೂ ಏನಿದೆ ಎಂಬ ಕುತೂಹಲ ಸಾರ್ವಜನಿಕರಲ್ಲಿ ಮೂಡಿದೆ. ಪ್ರತ್ಯೇಕ ಬ್ಯಾಂಕ್ ಖಾತೆ ಸೃಷ್ಟಿಸಿ ಬರೋಬ್ಬರಿ 8 ಕೋಟಿ ರು. ಭ್ರಷ್ಟಾಚಾರ ಮಾಡಿರುವ ಪ್ರಕರಣ ತನಿಖೆ ನಡೆದಿರುವಾಗಲೇ ಅಧಿಕಾರಿಗಳು ರಾತ್ರಿ ಡ್ಯೂಟಿ ಮಾಡು ತ್ತಿರುವುದು ಸಾಕಷ್ಟು ಅನುಮಾನ ಹುಟ್ಟು ಹಾಕಿದೆ.

Loading...