ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೈಲೈನ್‌ ಸ್ಟೋರೀಸ್‌

Kalaburagi Transport App: ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ಕೈಕೊಟ್ಟ ನಮ್ಮ ಕಲಬುರಗಿ ಸಾರಿಗೆ App

ಸಾರ್ವಜನಿಕರಿಗೆ ನಿಖರ ಮಾರ್ಗಸೂಚಿಯಾಗಿದ್ದ ಈ ಹೈಟೆಕ್ ಆಪ್ ತಾಂತ್ರಿಕ ದೋಷ ಹಾಗೂ ಅಧಿಕಾರಿ ಗಳ ಬೇಜವಾಬ್ದಾರಿಯಿಂದಾಗಿ ಸ್ಥಗಿತಗೊಂಡಿದ್ದು, ಪ್ರತಿನಿತ್ಯ ಬಸ್‌ಗಳನ್ನೇ ನೆಚ್ಚಿಕೊಂಡಿರುವ ಸಾವಿ ರಾರು ಪ್ರಯಾಣಿಕರು, ಕಾಲೇಜು ವಿದ್ಯಾರ್ಥಿಗಳು ಹಾಗೂ ಉದ್ಯೋಗಸ್ಥರು ತೀವ್ರ ತೊಂದರೆ ಅನುಭವಿಸು ವಂತಾಗಿದೆ.

Indira Canteen: ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ

ಇಂದಿರಾ ಕ್ಯಾಂಟೀನ್‌ ಹಸಿವು ನೀಗಿಸುವ ಅಕ್ಷಯಪಾತ್ರೆ

ಕ್ಯಾಂಟಿನ್‌ನಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ನುರಿತ ಸಿಬ್ಬಂದಿ ವರ್ಗದವರು ಆಹಾರ ತಯಾರಿಕೆಯಲ್ಲಿ ಕಾಳಜಿ ವಹಿಸುತ್ತಾರೆ. ಪೌಷ್ಟಿಕಾಂಶಯುಕ್ತವಾದ ಭೋಜನವು ನಿತ್ಯವೂ ನೂರಾರು ಜನರನ್ನು ಸೆಳೆಯುತ್ತಿದೆ. ಸರಕಾರಿ ಕಚೇರಿಗಳ ಕೆಲಸಕ್ಕೆಂದು ಬರುವವರು, ದೈನಂದಿನ ಕೂಲಿ ಕಾರ್ಮಿಕರು, ಮತ್ತು ನಗರದ ಬಡಾವಣೆಗಳಲ್ಲಿ ವಾಸಿಸುವ ಕೂಲಿ ಕಾರ್ಮಿಕರಿಗೆ ಇದು ಕೈಗೆಟುಕುವ ಬೆಲೆಯ ಅತ್ಯುತ್ತಮ ಆಯ್ಕೆಯಾಗಿದೆ.

ಕೇರಳದಲ್ಲಿ ಶಾಲಾ ಬಾಲಕಿಯರಿಗೆ ತಿಂಗಳಿಗೆ 3 ದಿನ ಪಿರಿಯಡ್ಸ್ ರಜೆ? ಆರೋಗ್ಯ-ಶಿಕ್ಷಣದ ನಡುವೆ ಹೊಸ ಚರ್ಚೆ

ಶಾಲಾ ಬಾಲಕಿಯರಿಗೆ ಪಿರಿಯಡ್ಸ್ ರಜೆ: ಕೇರಳದ ಪ್ರಸ್ತಾವನೆಗೆ ದೇಶಾದ್ಯಂತ ಚರ್ಚೆ

ಕೇರಳ ಸರ್ಕಾರವು ಶಾಲಾ ಬಾಲಕಿಯರಿಗೆ ಪಿರಿಯಡ್ಸ್ ಸಮಯದಲ್ಲಿ ತಿಂಗಳಿಗೆ ಮೂರು ದಿನಗಳ ರಜೆ ನೀಡುವ ಪ್ರಸ್ತಾವನೆ ಮುಂದಿಟ್ಟಿದ್ದು, ಇದು ಆರೋಗ್ಯ, ಶಿಕ್ಷಣ ಮತ್ತು ಮಹಿಳಾ ಹಕ್ಕುಗಳ ಕುರಿತು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ವಿದ್ಯಾರ್ಥಿನಿಯರ ಆರೋಗ್ಯದ ದೃಷ್ಟಿಯಿಂದ ಸ್ವಾಗತಿಸಿದ್ದರೆ, ಇನ್ನು ಕೆಲವರು ಖಾಸಗಿತನ ಮತ್ತು ಶೈಕ್ಷಣಿಕ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆ ಹೈಸ್ಪೀಡ್ ರೈಲು ಸಂಪರ್ಕ

ಕಲ್ಯಾಣ ಕರ್ನಾಟಕಕ್ಕೆ ಸಿಗಲಿದೆ ಹೈಸ್ಪೀಡ್ ರೈಲು ಸಂಪರ್ಕ

ಸುಮಾರು 2 ಲಕ್ಷ ಕೋಟಿ ರುಪಾಯಿ ಬಜೆಟ್ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ರೈಲು ಮಾರ್ಗ 671 ಕಿ.ಮೀ. ಉದ್ದ ಇರಲಿದೆ. ಮಾರ್ಗವು ಜಾರಿಗೆ ಬಂದರೆ, ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮುಂಬೈ ಮತ್ತು ಹೈದರಾಬಾದ್ ನಗರಗಳು ಅತ್ಯಂತ ಸಮೀಪವಾಗಲಿವೆ. ಸದ್ಯ 2 ಮಹಾನಗರಗಳಿಗೆ ಕಲಬುರಗಿ ಯಿಂದ ತಲುಪಲೂ ಸುದೀರ್ಘ ಸಮಯ ಬೇಕಾಗುತ್ತಿದ್ದು, ಬುಲೆಟ್ ಟ್ರೇನ್ ಆರಂಭ ವಾದರೆ ಕಲಬುರಗಿಯಿಂದ ಕೇವಲ ಎರಡು ತಾಸಿನಲ್ಲಿ ಮುಂಬೈ ನಗರವನ್ನು ತಲುಪಬಹುದಾಗಿದೆ.

Zameer Ahmed Khan: ಕಾಂಗ್ರೆಸ್‌ನಲ್ಲಿ ಬದಲಾದ ಅಲ್ಪಸಂಖ್ಯಾತ ಆದ್ಯತೆ

Zameer Ahmed Khan: ಕಾಂಗ್ರೆಸ್‌ನಲ್ಲಿ ಬದಲಾದ ಅಲ್ಪಸಂಖ್ಯಾತ ಆದ್ಯತೆ

ದಾವಣಗೆರೆ ಚುನಾವಣೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಆಡಿಯೋ ಬಿಡುಗಡೆಯಾಗಿದ್ದು ಮತ್ತು ಅದಕ್ಕೆ ಸಂಬಂಧಿಸಿದ ಚರ್ಚೆಗಳ ಹಿನ್ನೆಲೆಯಲ್ಲಿ ಜಮೀರ್ ಹಾದಿ ದುರ್ಗಮ ಎನ್ನುವಂತಾ ಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಜಮೀರ್ ಅಹಮ್ಮದ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದು, ಪಕ್ಷದ ಹೈಕಮಾಂಡ್ ಕೂಡ ಜಮೀರ್ ವಿರುದ್ಧ ಆಕ್ರೋಶ ಗೊಂಡಿದೆ ಎನ್ನಲಾಗಿದೆ.

T20 World Cup: ಭಾರತೀಯ ವನಿತೆಯರಿಗೀಗ ಟಿ20 ವಿಶ್ವಕಪ್ ಗೆಲ್ಲುವ ಛಲ

ಭಾರತೀಯ ವನಿತೆಯರಿಗೀಗ ಟಿ20 ವಿಶ್ವಕಪ್ ಗೆಲ್ಲುವ ಛಲ

ಎರಡು ಗುಂಪುಗಳಾಗಿ ಎಲ್ಲಾ ತಂಡಗಳನ್ನು ವಿಂಗಡಿಸಲಾಗಿದ್ದು, ಮೊದಲ ಸುತ್ತಿನಲ್ಲಿ ಗ್ರೂಪ್‌ ಗಳಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ಜಂಟಿಯಾಗಿ ಆಯೋಜಿ ಸಿರುವ ಈ ಮಹತ್ವದ ಪಂದ್ಯಾವಳಿಯು ಜುಲೈ 5ರ ವರೆಗೆ ನಡೆಯಲಿದ್ದು, ಒಟ್ಟು 33 ಪಂದ್ಯಗಳ ನ್ನೊಳಗೊಂಡಿದೆ. ಉದ್ಘಾಟನಾ ಪಂದ್ಯದಲ್ಲಿ ಬರ್ಮಿಂಗ್ ಹ್ಯಾಂನ ಎಡ್ಜ್ಬಾಸ್ಟನ್ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಶ್ರೀಲಂಕಾವನ್ನು ಎದುರಿಸಲಿದೆ.

‌SIR: ನೈಜ ಮತದಾರರಿಗೆ ಜರಡಿ ಹಿಡಿಯಲಿದೆ ಎಸ್‌ʼಐಆರ್

ನೈಜ ಮತದಾರರಿಗೆ ಜರಡಿ ಹಿಡಿಯಲಿದೆ ಎಸ್‌ʼಐಆರ್

ಪ್ರತಿಯೊಬ್ಬ ಅರ್ಹ ನಾಗರಿಕನು ಕೂಡ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ಮುಂಬರುವ ಚುನಾವಣೆ ಗಳಿಗೆ ಮತದಾರರ ಪಟ್ಟಿಯ ನಿಖರತೆ, ಪಾರದರ್ಶಕತೆಯನ್ನು ಸುಧಾರಿಸುವುದು. ನೋಂದಣಿಯನ್ನು ಸುಲಭ ಪ್ರಕ್ರಿಯೆಯಲ್ಲಿ ಮಾಡುವ ಮೂಲಕ ಮತದಾರರ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಎಸ್‌ಐಆರ್, ಮತಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಮೂಲ ಉದ್ದೇಶ.

Digital Revolution in KKRTC: ಕೆಕೆಆರ್‌ʼಟಿಸಿ ಬಸ್‌ʼಗಳಲಿ ಡಿಜಿಟಲ್‌ ಕ್ರಾಂತಿ

ಕೆಕೆಆರ್‌ʼಟಿಸಿ ಬಸ್‌ʼಗಳಲಿ ಡಿಜಿಟಲ್‌ ಕ್ರಾಂತಿ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಹಯೋ ಗದೊಂದಿಗೆ ಹಮ್ಮಿಕೊಳ್ಳಲಾದ ಈ ಬೃಹತ್ ಡಿಜಿಟಲ್ ಜಾಲದಲ್ಲಿ ಆರಂಭದಲ್ಲಿ ಕೆಲವು ನೆಟ್‌ವರ್ಕ್ ಹಾಗೂ ಸರ್ವರ್ ಸಮಸ್ಯೆಗಳು ಎದುರಾಗಿದ್ದವು. ಆದರೆ, ಸಾರಿಗೆ ಸಂಸ್ಥೆಯು ಆ ಎಲ್ಲ ದೋಷಗಳನ್ನು ಶೀಘ್ರವಾಗಿ ಬಗೆಹರಿಸಿ, ಇದೀಗ ನಿಗಮದ ಎಲ್ಲ ಬಸ್‌ಗಳಿಗೂ ಈ ಸೇವೆಯನ್ನು ಯಶಸ್ವಿಯಾಗಿ ವಿಸ್ತರಿಸಿದೆ. ಇದರಿಂದಾಗಿಗೂ ಗಲ್ಫ್ ಪೇ, ಫೋನ್ ಪೇ ಮೂಲಕ ಕೇವಲ ಒಂದು ಸ್ಕ್ಯಾನ್‌ನೊಂದಿಗೆ ಪ್ರಯಾಣಿಕರು ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ.

ಕೊಡಗಿನಲ್ಲಿ ನಿಲ್ಲದ ಕಾಡಾನೆ-ಮಾನವ ಸಂಘರ್ಷ

ಕೊಡಗಿನಲ್ಲಿ ನಿಲ್ಲದ ಕಾಡಾನೆ-ಮಾನವ ಸಂಘರ್ಷ

ಕಾಫಿ ತೋಟಗಳಲ್ಲಿ ದೊರಕುವ ಹಲಸು, ಬಿದಿರು, ಕೆರೆಯಲ್ಲಿನ ನೀರು, ಸೊಪ್ಪು ತಿಂದು ಕುಡಿದು ಕಾಡಿಗಿಂತ ಸುಖವಾದ ಜೀವನವನ್ನು ಆನೆ ಪರಿವಾರ ಕಾಫಿ ತೋಟಗಳಲ್ಲಿ ಕಂಡಿವೆ. ಹೀಗಾಗಿಯೇ ತೋಟ ಬಿಟ್ಟು ಕಾಡಿನತ್ತ ಹೆಜ್ಜೆ ಹಾಕದ ಆನೆಗಳು, ಆಗಿಂದಾಗ್ಗೆ ತಮ್ಮತ್ತ ಬರುವ ಮನುಷ್ಯರ ಮೇಲೆ ಧಾಳಿ ನಡೆಸಿ ಪ್ರಾಣಹರಣಕ್ಕೆ ಕಾರಣವಾಗಿದೆ.

ಯಾರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ?

ಯಾರಿಗೂ ಬೇಡವಾದ ಬೆಂಗಳೂರು ನಗರಾಭಿವೃದ್ಧಿ ಖಾತೆ?

ಖಾತೆ ಹಂಚಿಕೆಯ ಕ್ಷಣದಿಂದಲೂ ಕಂದಾಯ ಇಲಾಖೆಯ ಮೇಲೆ ಕಣ್ಣಿಟ್ಟಿದ್ದ ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದು ಪೂರ್ಣ ಒಪ್ಪಿಗೆ ಇರಲಿಲ್ಲ. ಇದ ರೊಂದಿಗೆ ರಾಮಲಿಂಗಾರೆಡ್ಡಿ ಅವರ ರಾಜೀನಾಮೆ ಪ್ರಹಸನ, ಜಿಬಿಎ ಚುನಾವಣೆಯಿಂದ ಅಂತರ ಕಾಯ್ದು ಕೊಳ್ಳುವುದಾಗಿ ರೆಡ್ಡಿ ಎಚ್ಚರಿಕೆ ನೀಡಿದ ಬೆನ್ನ, ಈ ಖಾತೆ ನನಗೆ ಬೇಡ ಎನ್ನುವ ಕ್ಯಾತೆಯನ್ನು ಕೃಷ್ಣ ಬೈರೇಗೌಡ ಎತ್ತಿದ್ದಾರೆ. ಈ ಖಾತೆಯ ಬದಲು ಬೇರೆ ಖಾತೆಯ ಬೇಡಿಕೆಯನ್ನು ಡಿ.ಕೆ.ಶಿವಕುಮಾರ್ ಹಾಗೂ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಮುಂದಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಲಕ್ಷ್ಮಣ- ಲಕ್ಷ್ಮೀ: ಇಬ್ಬರಲ್ಲಿ ಯಾರು ಲಕ್ಕಿ?

ಲಕ್ಷ್ಮಣ- ಲಕ್ಷ್ಮೀ: ಇಬ್ಬರಲ್ಲಿ ಯಾರು ಲಕ್ಕಿ?

ಲಕ್ಷ್ಮೀ ಹೆಬ್ಬಾಳಕರ ಹಾಗೂ ಲಕ್ಷ್ಮಣ ಸವದಿ ಹೊರತಾಗಿ ಈ ಬಾರಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳ ಪಟ್ಟಿಯಲ್ಲಿ ರಾಮದುರ್ಗ ಶಾಸಕ ಹಾಗೂ ಸಿದ್ದರಾಮಯ್ಯನವರ ಪರಮಾಪ್ತ ಅಶೋಕ್ ಪಟ್ಟಣ, ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ ಹಾಗೂ ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಇದ್ದಾರೆ. ತಮ್ಮ ಆಪ್ತ ನಾಯಕರ ಮೂಲಕ ಮಂತ್ರಿ ಸ್ಥಾನಕ್ಕಾಗಿ ಲಾಬಿ ನಡೆಸಿದ್ದು, ಕಾಂಗ್ರೆಸ್ ಹೈಕಮಾಂಡ್ ಯಾರಿಗೆ ಅವಕಾಶ ನೀಡುತ್ತದೆ ಎಂಬುದನ್ನು ಕಾದು ನೋಡಬೇಕು.

Dr Yathindra Siddaramaiah: ʼಡಾ.ಯತೀಂದ್ರʼಗೆ ಒಲಿದು ಬಂದ ʼಮಂತ್ರಿʼಭಾಗ್ಯ

Dr yathindra Siddaramaiah: ʼಡಾ.ಯತೀಂದ್ರʼಗೆ ಒಲಿದು ಬಂದ ʼಮಂತ್ರಿʼಭಾಗ್ಯ

ಸಿಎಂ ಹುದ್ದೆಯಿಂದ ನಿರ್ಗಮಿಸುವ ಮುನ್ನ ಭವಿಷ್ಯದ ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಕೊಂಡೇ ಉರುಳಿಸಿದ ಪಗಡೆ ಆಟದಲ್ಲಿ ಯಶ ಕಂಡಿರುವ ಸಿದ್ದರಾಮಯ್ಯ, ಮೈಸೂರಿನಲ್ಲಿ ತಮ್ಮ ಮಗನಿಗೆ ರಾಜಕೀಯದ ಭದ್ರ ನೆಲೆ ಕಲ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಾತ್ರವಲ್ಲ, ಜಿಲ್ಲಾ ಉಸ್ತುವಾರಿ ಪಟ್ಟದ ಸನಿಹಕ್ಕೆ ತಂದು ಕೂರಿಸಿದ್ದಾರೆ.

Ministry for U T Khader: ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ಕರಾವಳಿಗೆ ಖಾದರ್ ಸಾಹೇಬರ ಖದರ್ ಆಡಳಿತ ಭಾಗ್ಯ!

ಕ್ಷೇತ್ರದ ಶಾಸಕರಾಗಿ ಸತತ ಐದು ಬಾರಿ ಆಯ್ಕೆಯಾಗಿ, ಪ್ರಸ್ತುತ ಸಚಿವ ಸಂಪುಟದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿರುವ ಯು.ಟಿ.ಖಾದರ್ ಅವರು ಅತ್ಯಂತ ಪ್ರಭಾವಶಾಲಿ ಹಾಗೂ ಜನಪ್ರಿಯ ನಾಯಕರಲ್ಲಿ ಒಬ್ಬರು. ಕಾನೂನು ಪದವೀಧರರಾದ ಇವರು, ಸೇಂಟ್ ಅಲೋಶಿಯಸ್ ಮತ್ತು ಎಸ್‌ಡಿ ಎಂ ಕಾಲೇಜುಗಳಲ್ಲಿ ಶಿಕ್ಷಣ ಮುಗಿಸಿದರು. ವಿದ್ಯಾರ್ಥಿ ದಿಸೆಯಿಂದಲೇ ಎನ್‌ಎಸ್‌ಯುಐ ಸಂಘಟನೆ ಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡು, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಹಂತಹಂತವಾಗಿ ಬೆಳೆದರು.

ಖಾತೆ ಕಸರತ್ತು ಮಂತ್ರಿಗಳಿಂದ ಮಹಾ ಲಾಬಿ ಶುರು

ಖಾತೆ ಕಸರತ್ತು ಮಂತ್ರಿಗಳಿಂದ ಮಹಾ ಲಾಬಿ ಶುರು

ಸಂಪುಟ ರಚನೆಯ ನಿರಂತರ ಕಸರತ್ತು ನಡೆಸಿದ ನಂತರ ಪಕ್ಷದ ಹೈಕಮಾಂಡ್, ಖಾತೆಗಳ ಹಂಚಿಕೆ ಬಗ್ಗೆ ಮುಖ್ಯಮಂತ್ರಿ ಶಿವಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ನಾಯಕರಿಗೆ ಸೂಚನೆಗಳು ನೀಡಿದೆ. ಇದನ್ನು ಆಧರಿಸಿ ಈಗಾಗಲೇ ಯಾವ ಸಚಿವರಿಗೆ ಯಾವ ಖಾತೆ ಎನ್ನುವ ತಾತ್ಕಾಲಿಕ ಪಟ್ಟಿಯನ್ನು ಒಂದು ಹಂತಕ್ಕೆ ಸಿದ್ಧಪಡಿಸಲಾಗಿದೆ.

Medical Negligency: ತಾಲೂಕು ಆಸ್ಪತ್ರೆಯಲ್ಲಿ ಒಂದೇ ಸಿರೆಂಜಿನಲ್ಲಿ ಹಲವಾರು ಜನರಿಗೆ ಚುಚ್ಚುಮದ್ದು : ವೈದ್ಯಕೀಯ ಲೋಪ ಎಸಗಿದ ಸಿಬ್ಬಂದಿ !

ವೈದ್ಯಕೀಯ ಲೋಪ ಎಸಗಿದ ಸಿಬ್ಬಂದಿ !

ವಿಶ್ವ ಆರೋಗ್ಯ ಸಂಸ್ಥೆ ಮಾರ್ಗಸೂಚಿ ಪ್ರಕಾರ, ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕ ಮತ್ತು ಹೊಸ ಸಿರಿಂಜ್ಗಳನ್ನು ಕಡ್ಡಾಯವಾಗಿ ಬಳಸಬೇಕು ಎಂಬ ಕಾನೂನು ಇದೆ ಆದರೆ ಪಟ್ಟಣದ ತಾಲೂಕಾ ಆಸ್ಪತ್ರೆಯಲ್ಲಿ ಮಲ್ಲಿಕಾರ್ಜುನ ಎಂಬ ಯುವಕ ಸಣ್ಣಪುಟ್ಟ ಗಾಯಗಳಾ ಗಿದ್ದು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ಹೋಗಿದ್ದಾನೆ ಈ ವೇಳೆ ಕರ್ತವ್ಯದಲ್ಲಿದ್ದ ಸ್ಟಾಪ್ ನರ್ಸ್ ಕೇವಲ ಸೂಜಿ ಬದಲಿಸಿ ಹಳೆಯ ಸಿರೇಂಜ್ ಬಳಸಿ ಚುಚ್ಚುಮದ್ದು ನೀಡಿದ್ದಾನೆ.

Dharmasthala: ಸರಕಾರಗಳಿಗೇ ಮಾದರಿಯಾದ ಧರ್ಮಸ್ಥಳದ ವಿಕಾಸ ಪಥ

ಸರಕಾರಗಳಿಗೇ ಮಾದರಿಯಾದ ಧರ್ಮಸ್ಥಳದ ವಿಕಾಸ ಪಥ

ಧರ್ಮಸ್ಥಳದ ಧರ್ಮಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ದೂರದೃಷ್ಟಿಯ ಫಲವಾಗಿ ಮೂಡಿ ಬಂದ ಗ್ರಾಮೀಣಾಭಿ ವೃದ್ಧಿ ಯೋಜನೆ, ರುಡ್ಸೆಟ್ ಮತ್ತು ಸಿರಿ’ ಗ್ರಾಮೋದ್ಯೋಗ ಸಂಸ್ಥೆಗಳು ಇಂದು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ಇಡೀ ದೇಶದ ಆರ್ಥಿಕ ಮತ್ತು ಸಾಮಾಜಿಕ ಕ್ಷೇತ್ರಕ್ಕೆ ದಿಕ್ಸೂಚಿಯಾಗಿವೆ.

ಸ್ವಚ್ಛತಾ ನಿಯಮ ಉಲ್ಲಂಘನೆಗೆ 1.72 ಕೋಟಿ ರುಪಾಯಿ ದಂಡ

ಸ್ವಚ್ಛತಾ ನಿಯಮ ಉಲ್ಲಂಘನೆಗೆ 1.72 ಕೋಟಿ ರುಪಾಯಿ ದಂಡ

ಬೆಂಗಳೂರು ನಗರದಲ್ಲಿ ಸ್ವಚ್ಛತೆ ಕಾಪಾಡುವ ಹಾಗೂ ಘನ ತ್ಯಾಜ್ಯ ನಿರ್ವಹಣಾ ನಿಯಮ ಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಜಿಬಿಎ ಕೈಗೊಂಡಿರುವ ಕ್ರಮಗಳ ಪರಿಣಾಮವಾಗಿ ಕಳೆದ ಮೂರು ತಿಂಗಳಲ್ಲಿ (ಫೆಬ್ರವರಿ 2026 ರಿಂದ ಏಪ್ರಿಲ್ 2026ರವರೆಗೆ) ಒಟ್ಟು 1.72 ಕೋಟಿ ರು.ದಂಡ ಸಂಗ್ರಹಿಸಲಾಗಿದೆ.

Kalaburagi Airport: ಕಲಬುರಗಿ-ಬೆಂಗಳೂರು ವಿಮಾನಯಾನಕ್ಕೆ ಮತ್ತೆ ಚೈತನ್ಯ

ಕಲಬುರಗಿ-ಬೆಂಗಳೂರು ವಿಮಾನಯಾನಕ್ಕೆ ಮತ್ತೆ ಚೈತನ್ಯ

ಆರಂಭದಲ್ಲಿ ಸಂಜೆ ವೇಳೆಯಲ್ಲಿ ರೌಂಡ್ ಟ್ರಿಪ್ ಸೇವೆ ಆರಂಭಿಸುವ ಕುರಿತು ಮಾಹಿತಿ ನೀಡ ಲಾಗಿದ್ದರೂ ಬಳಿಕ ಸಾರ್ವಜನಿಕರು ಮತ್ತು ಕಲ್ಯಾಣ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ (ಕೆಕೆಸಿಸಿಐ) ಸಲ್ಲಿಸಿದ ಮನವಿಯನ್ನು ಪರಿಗಣಿಸಿ ವೇಳಾ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ.

ಡಿಕೆ ಆಡಳಿತದಲ್ಲಿ ಡಿಸಿಎಂ ಹುದ್ದೆಗಳಿಗೆ ಕೊಕ್?

ಡಿಕೆ ಆಡಳಿತದಲ್ಲಿ ಡಿಸಿಎಂ ಹುದ್ದೆಗಳಿಗೆ ಕೊಕ್?

ಇನ್ನು ಡಿಸಿಎಂ ಹುದ್ದೆಗಳಿಗೆ ಕಚ್ಚಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸಂಭವನೀಯ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಹುದ್ದೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ನಡೆಸಿವೆ. ಉಪಮುಖ್ಯಮಂತ್ರಿ ಹುದ್ದೆಗಳು ಹೆಚ್ಚಾದಷ್ಟು ಆಡಳಿತ ದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಸಚಿವರಲ್ಲಿ ಭಿನ್ನಾಭಿಪ್ರಾಯಕ್ಕೆ ದಾರಿಯಾಗಲಿದೆ ಎನ್ನುವುದು ಡಿಕೆಶಿ ಆಪ್ತರ ವಾದ.

ಸಿದ್ದು ಸಕ್ರಿಯ ರಾಜಕಾರಣಕ್ಕೆ ದಾರಿ ಯಾವುದಯ್ಯ?

ಸಿದ್ದು ಸಕ್ರಿಯ ರಾಜಕಾರಣಕ್ಕೆ ದಾರಿ ಯಾವುದಯ್ಯ?

ಹಿಂದುಳಿದ ವರ್ಗಗಳ ಸದ್ಯದ ಪ್ರಶ್ನಾತೀತ ನಾಯಕ ಸಿದ್ದರಾಮಯ್ಯ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಿದ್ದಾಗಿದೆ. ಆದರೆ ಮುಂದೇನು ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ರಾಜೀನಾಮೆ ಸಲ್ಲಿಕೆ ನಂತರ ಅವರೇ ಸೂಚ್ಯವಾದ ಉತ್ತರಗಳನ್ನೂ ನೀಡಿದ್ದಾರೆ. ಅದೆಂದರೆ, ನಾನು ಯಾವುದೇ ಕಾರಣಕ್ಕೂ ರಾಷ್ಟ್ರರಾಜಕಾರಣಕ್ಕೆ ಹೋಗುವುದಿಲ್ಲ. ರಾಜ್ಯ ರಾಜಕಾರಣದ ಮುಂದುವರಿಯುತ್ತೇನೆ. ಅದೂ ಸಕ್ರಿಯವಾಗಿಯೇ ಇರುತ್ತೇನೆ. ಜತೆಗೆ ಕೋಮುವಾದಿ ಶಕ್ತಿಗಳ ವಿರುದ್ಧ ನಿರಂತರ ಹೋರಾಟ ನಡೆಸುತ್ತೇನೆ ಎಂದು ತಮ್ಮ ಭವಿಷ್ಯದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

ರೇಷ್ಮೆ ಉತ್ಪಾದನೆ: ತುಮಕೂರು ರಾಜ್ಯದಲ್ಲೇ ಪ್ರಥಮ

ರೇಷ್ಮೆ ಉತ್ಪಾದನೆ: ತುಮಕೂರು ರಾಜ್ಯದಲ್ಲೇ ಪ್ರಥಮ

ಮಾ 2020ರ ಅಂತ್ಯಕ್ಕೆ ಲಭ್ಯವಿರುವ ದತ್ತಾಂಶಗಳ ಪ್ರಕಾರ, ಜಿಲ್ಲೆಯ ರೈತರು ರೇಷ್ಮೆ ಕೃಷಿಯನ್ನು ಒಂದು ಲಾಭದಾಯಕ ಉದ್ದಿಮೆಯಾಗಿ ಸ್ವೀಕರಿಸಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 10223 ಹೆಕ್ಟೇರ್ ಪ್ರದೇಶದಲ್ಲಿ ಹಿಪ್ಪುನೇರಳೆ ಬೆಳೆಯುವ ಗುರಿಯನ್ನು ತಲುಪಲಾಗಿದ್ದು, ಹಸಿರು ಹೊದಿಕೆಯಂತೆ ಕಾಡುತ್ತಿರುವ ಹಿಪ್ಪು ನೇರಳೆ ತೋಟಗಳು ಜಿಲ್ಲೆಯ ಆರ್ಥಿಕತೆಗೆ ಬಲ ತುಂಬುತ್ತಿವೆ.

ಜೆಜೆಎಂ ಗುತ್ತಿಗೆದಾರರ ವಿರುದ್ಧ ಜನಾಕ್ರೋಶ

ಜೆಜೆಎಂ ಗುತ್ತಿಗೆದಾರರ ವಿರುದ್ಧ ಜನಾಕ್ರೋಶ

ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಮುನ್ನಚ್ಚರಿಕೆ ವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ಮುಂಜಾಗ್ರತಾ ಸಭೆಯಲ್ಲಿ ಸಾಕಷ್ಟು ಬಾರಿ ಸೂಚಿಸಿದರು ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರು ಅಸಮಧಾನ ವ್ಯಕ್ತಪಡಿಸಿದ್ದಾರೆ.

ಸೌಲಭ್ಯ ವಂಚಿತ ಪದವಿ ಕಾಲೇಜು

ಸೌಲಭ್ಯ ವಂಚಿತ ಪದವಿ ಕಾಲೇಜು

ತಾಲೂಕಾ ಕೇಂದ್ರವಾಗಿರುವ ರಬಕವಿ-ಬನಹಟ್ಟಿಗೆ ಪದವಿ ಕಲಿಯುವ ವಿದ್ಯಾರ್ಥಿಗಳಿಗೆ ಸರಕಾರಿ ಪದವಿ ಕಾಲೇಜು ಸವಾಲಾಗಿ ಕಾಡುತ್ತಿದೆ. ಕಲೆ ಹಾಗೂ ವಾಣಿಜ್ಯ ವಿಭಾಗ ನಿರ್ವಹಣೆ ಯಲ್ಲಿರುವ ಇಲ್ಲಿನ ಕಾಲೇಜು ಪ್ರಸಕ್ತ ವರ್ಷದಿಂದ ಬಿಬಿಎ ಹಾಗೂ ಬಿಸಿಎ ವಿಭಾಗ ಪ್ರಾರಂಭ ಗೊಳ್ಳಲಿದೆ.

ತ್ಯಾಗದ ನೆಲದಲ್ಲಿ ನಿರಾಶ್ರಿತರ ಕಣ್ಣೀರಿಗೆ ಕೊನೆಯೆಂದು?

ತ್ಯಾಗದ ನೆಲದಲ್ಲಿ ನಿರಾಶ್ರಿತರ ಕಣ್ಣೀರಿಗೆ ಕೊನೆಯೆಂದು?

ದೇಶದ ರಕ್ಷಣೆ, ರಾಜ್ಯದ ಬೆಳಕು ಮತ್ತು ರಾಷ್ಟ್ರದ ಪ್ರಗತಿಯ ಹೆಸರಿನಲ್ಲಿ ಉತ್ತರ ಕನ್ನಡ ಜಿಲ್ಲೆ ನೀಡಿದ ತ್ಯಾಗ ಅಪ್ರತಿಮ. ಆದರೆ, ಈ ‘ಅಭಿವೃದ್ಧಿ’ಯ ಮಹಾಯಾಗಕ್ಕೆ ತಮ್ಮ ಸರ್ವಸ್ವವನ್ನೂ ಆಹುತಿ ನೀಡಿದ ಇಲ್ಲಿನ ಮೂಲ ನಿವಾಸಿಗಳು ಇಂದು ಸ್ವಂತ ನೆಲದಲ್ಲೇ ನಿರಾಶ್ರಿತರಾಗಿ, ಹಕ್ಕುಪತ್ರಗಳಿಗಾಗಿ ಬೀದಿಗಿಳಿದು ಹೋರಾಡುವಂತಾಗಿರುವುದು ಜಿಲ್ಲೆಯ ಅತ್ಯಂತ ಕಟು ವಾಸ್ತವ.

Loading...