ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಬೈಲೈನ್‌ ಸ್ಟೋರೀಸ್‌

Vishwavani Impact: ಪಂಪ್‌ʼಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆರೋಪ: ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ

ತಮ್ಮ ಯಾವುದೇ ಕೈವಾಡ ಇಲ್ಲ ಎಂದು ಗ್ರಾಮಸ್ಥರಿಗೆ ಮನವರಿಕೆ

ವಿಶ್ವವಾಣಿಯಲ್ಲಿ ಹೆಸ್ಕಾಂ ಸಿಬ್ಬಂದಿಯ ಪಿತೂರಿ: ಪಂಪ್‌ʼಸೆಟ್‌ಗಳಿಗೆ ದೊರೆಯದ ವಿದ್ಯುತ್ ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಗೊಂಡಿತ್ತು. ಗ್ರಾಮಸ್ಥರು ಹಾಗೂ ಹೆಸ್ಕಾಂ ಉಪ ಕೇಂದ್ರದ ಶಾಖಾಧಿಕಾರಿ ಮಾರುತಿ ಹಟ್ಟಿ ಆರೋಪದ ಬೆನ್ನಲ್ಲೆ ಗ್ರಾಮಕ್ಕೆ ಆಗಮಿಸಿದ ಹಿಂದೆ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಸಿಬ್ಬಂದಿಗಳು ತಮ್ಮ ಮೇಲೆ ವಿನಾಕಾರಣ ಆರೋಪವಿದೆ.

ದಲಿತ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ

ದಲಿತ ಕುಟುಂಬಕ್ಕೆ ಬಹಿಷ್ಕಾರದ ಬೆದರಿಕೆ

ಸಮಾಧಿ ಅಗೆಯಲು ನಿರಾಕರಿಸಿದ ದಲಿತ ಕುಟುಂಬಕ್ಕೆ ಗ್ರಾಮದಿಂದ ಬಹಿಷ್ಕಾರ ಹಾಕುವ ಬೆದರಿಕೆ ಹಾಗೂ ಜಾತಿ ನಿಂದನೆ ಮಾಡಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಖಾಪುರ ಎಸ್.ಎಚ್.ಗ್ರಾಮದಲ್ಲಿ ನಡೆದಿದೆ. ಕುಣಿ (ಸಮಾಧಿ) ಅಗೆಯಲು ನಿರಾಕರಿಸಿದ ದಲಿತ ಕುಟುಂಬ ದವರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿ, ಗ್ರಾಮದಿಂದ ಬಹಿಷ್ಕಾರ ಹಾಕುವುದಾಗಿ ಸವರ್ಣೀಯರು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಶಾಸಕರಿಗೆ ʼವಿಆರ್‌ಎಸ್ʼ ದಾರಿ ತೋರಿದ ಕಾಂಗ್ರೆಸ್

ಶಾಸಕರಿಗೆ ʼವಿಆರ್‌ಎಸ್ʼ ದಾರಿ ತೋರಿದ ಕಾಂಗ್ರೆಸ್

ಎರಡು ತಿಂಗಳ ವಿಳಂಬದ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ನಿರೀಕ್ಷೆಯಂತೆ ಅನೇಕ ಸಂಪುಟದಿಂದ ಕೊಕ್ ನೀಡಲಾಗಿದ್ದು, ಇದು ಅನಿರೀಕ್ಷಿತವೇ ಆಗಿದೆ. ಆದರೆ ಮತ್ತೊಂದು ದಿಢೀರ್ ಬೆಳವಣಿಗೆ ಎಂದರೆ, ಶಾಸಕರ ರಾಜ ಕೀಯ ಸ್ವಯಂ ನಿವೃತ್ತಿ, ಅಂದರೆ ಸಂಪುಟ ವಿಸ್ತರಣೆ ಯ ಪರಿಣಾಮ ಸುಮಾರು 15ಕ್ಕೂ ಹೆಚ್ಚು ಶಾಸಕರು ಇದೀಗ ಸ್ವಯಂ ನಿವೃತ್ತಿ ಹಾದಿಯಲಿದ್ದಾರೆ.

ಅವ್ಯವಸ್ಥೆಯ ಆಗರವಾದ ಕುಷ್ಟಗಿಯ ತಾಯಿ-ಮಕ್ಕಳ ಆಸ್ಪತ್ರೆ: ಹೊಸ ಕಟ್ಟಡದಲ್ಲೂ ಅದೇ ಹಳೇ ಸಮಸ್ಯೆ

ಅವ್ಯವಸ್ಥೆಯ ಆಗರವಾದ ಕುಷ್ಟಗಿಯ ತಾಯಿ-ಮಕ್ಕಳ ಆಸ್ಪತ್ರೆ

ಒಟ್ಟು 100 ಹಾಸಿಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಹೊಸ ಕಟ್ಟಡದಲ್ಲೇ ಮೂಲ ಸೌಲಭ್ಯ ಇಲ್ಲದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕನಿಷ್ಠ ಸೌಲಭ್ಯಗಳಾದ ಶುದ್ಧ ಕುಡಿವ ನೀರು, ಬಾಣಂತಿರಿಗೆ ಬೇಕಾದ ಬಿಸಿ ನೀರಿನ ವ್ಯವಸ್ಥೆ ಸರಿಯಾಗಿ ಇಲ್ಲ. ಆಸ್ಪತ್ರೆ ಮೇಲ್ಚಾವಣಿ ಮೇಲೆ ಅಳವಡಿಸಿರುವ ಸೋಲಾರ್‌ವಾಟರ್ ಹೀಟರ್‌ನ ಟೂಬ್ ಗಳು ಹಾಳಾಗಿವೆ.

ಹೊಸ ಸಚಿವರಿಗೆ ʼವರ್ಗಾವಣೆʼ ಅಧಿಕಾರವಿಲ್ಲ

ಹೊಸ ಸಚಿವರಿಗೆ ʼವರ್ಗಾವಣೆʼ ಅಧಿಕಾರವಿಲ್ಲ

ಒಂದು ವೇಳೆ ಕೆಲವು ಸಿಬ್ಬಂದಿ ಈಗಾಗಲೇ ವರ್ಗಾವಣೆಯಾಗಿದ್ದರೆ ಅವರನ್ನು ಸಚಿವರು ಕೂಡ ಬದಲಿಸುವುದು ಕಷ್ಟ. ಈಗಾಗಲೇ ವರ್ಗಾವಣೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಮುಖ್ಯಮಂತ್ರಿಗಳ ಆದೇಶದ ಮೂಲಕ ಮತ್ತೆ ವರ್ಗಾವಣೆ ಮಾಡಿಸದೆ ಅಂಥ ಸಿಬ್ಬಂದಿ ತಮ್ಮ ವಿರುದ್ಧದ ವರ್ಗಾವಣೆ ಆದೇಶವನ್ನು ಕೋರ್ಟ್‌ನಲ್ಲಿ ಪ್ರಶ್ನಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಮಣ್ಣಿನಲ್ಲೇ ಬದುಕು, ಕಲೆಯಲ್ಲೇ ಭಕ್ತಿ: ಜೀವನೋಪಾಯಕ್ಕೆ ನಾನಾವೇಶ ನಾನಾ ಪ್ರದೇಶ

ಕಾಯಕ ಸಮುದಾಯದ ಚೆದುರಿದ ಬದುಕಿಗೆ ಸಮಾಜದ ಬೆಂಬಲ ಅಗತ್ಯ

ಈಗಾಗಲೇ ನಗರ ಹೊಲಯ ಅಗಲಗುರ್ಕಿಗೆ ಹೋಗುವ ರೈಲ್ವೆ ಟ್ರ್ಯಾಕ್ ಸಮೀಪ ನೆಲೆ ನಿಂತಿರುವ ಇವರು ಗಣಪತಿ  ಹಬ್ಬಕ್ಕೂ ಪೂರ್ವದಲ್ಲಿಯೇ ನರಸಿಂಹ ಅವತಾರ, ವರಾಹ ಅವತಾರ ಗಣಪತಿ, ದರ್ಬಾರ್ ಗಣಪತಿ, ಶಿವ ಗಣಪತಿ, ಆಂಜನೇಯ ಗಣಪತಿ, ರಥಾರೂಢ, ಗರುಡವಾಹನ, ಸಿಂಹಾ ರೂಢ, ಗಜಾರೂಢ, ಬಸವಾರೂಡ, ಇಲಿವಾಹನ, ಸರ್ಪಾರೂಢ, ಕೃಷ್ಣ ಗಣಪತಿ ಸೇರಿದಂತೆ ನೂರಕ್ಕೂ ಹೆಚ್ಚು ವಿನ್ಯಾಸಗಳ ಮಾದರಿಗಳನ್ನು ಸಿದ್ಧಪಡಿಸಿರುವ ಇವರ ಕಲಾನೈಪುಣ್ಯ ನೋಡು ಗರ ಗಮನ ಸೆಳೆಯುತ್ತದೆ.

147 ರೈತರ ಜೀವ ನುಂಗಿದ ಸಾಲ

147 ರೈತರ ಜೀವ ನುಂಗಿದ ಸಾಲ

ಕೃಷ್ಣಾ-ಭೀಮಾ ನದಿಯ ಬೃಹತ್ ಜಲಾಶಯ ದಿಂದ ಫಲವತ್ತಾದ ಭೂಮಿ ಹೊಂದಿರುವ ಯಾದಗಿರಿ ಜಿಲ್ಲೆಯ ರೈತರು ದುರಾದೃಷ್ಟವಶಾತ್ ಋಣ ಭಾರಕ್ಕೆ ನಲುಗಿ ಹೋಗಿದ್ದಾರೆ. ಕೃಷಿ ಚಟುವಟಿಕೆ, ಕೌಟುಂಬಿಕ ಕಾರ್ಯಕ್ರಮಗಳಿಗೆ ಮಾಡಿಕೊಂಡ ಸಾಲ ತೀರಿಸಲು ಆಗದೆ ಆತ್ಮ ಹತ್ಯೆ ಮೊರೆ ಹೋಗುತ್ತಿದ್ದಾರೆ

ಕಲಬುರಗಿ: ಸ್ಟಾರ್‌ ಏರ್‌ʼಗೆ ಭರ್ಜರಿ ಸ್ಪಂದನೆ

ಕಲಬುರಗಿ: ಸ್ಟಾರ್‌ ಏರ್‌ʼಗೆ ಭರ್ಜರಿ ಸ್ಪಂದನೆ

ಕಳೆದ ಒಂದು ತಿಂಗಳಲ್ಲಿ ಕಲಬುರಗಿ-ಬೆಂಗಳೂರು ನಡುವೆ ಒಟ್ಟು 60 ವಿಮಾನ ಟ್ರಿಪ್‌ಗಳು ನಡೆದಿವೆ. ಬೆಂಗಳೂರಿನಿಂದ ಕಲಬುರಗಿಗೆ 2596 ಮಂದಿ ಆಗಮಿಸಿದ್ದರೆ, ಕಲಬುರಗಿಯಿಂದ ಬೆಂಗಳೂರಿಗೆ 2774 ಮಂದಿ ಪ್ರಯಾಣಿಸಿದ್ದಾರೆ. ಹಲವು ದಿನಗಳಲ್ಲಿ ವಿಮಾನಗಳು ಶೇ.100ರಷ್ಟು ಭರ್ತಿಯಾಗಿ ಸಂಚರಿಸಿರುವುದು ಈ ಮಾರ್ಗದ ಅಗತ್ಯವನ್ನು ಸಾಬೀತುಪಡಿಸಿದೆ.

ಸಂಪುಟ: ಬದಲಾದ ಕಾಂಗ್ರೆಸ್ ಆಟ

ಸಂಪುಟ: ಬದಲಾದ ಕಾಂಗ್ರೆಸ್ ಆಟ

ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕಳೆದ ಒಂದೂವರೆ ತಿಂಗಳಿನಿಂದಲೂ ವಿಳಂಬವಾಗುತ್ತಿದ್ದು, ಇದರಿಂದ ಆಕಾಂಕ್ಷಿಗಳಲ್ಲಿ ದಿಗಿಲು ಶುರುವಾಗಿದೆ. ಅದರಲ್ಲೂ ಎರಡು ದಿನಗಳ ಹಿಂದೆಯೇ ಪೂರ್ಣ ಗೊಳ್ಳಬೇಕಿದ್ದ ವಿಸ್ತರಣೆ ಪ್ರಕ್ರಿಯೆ ಅಪೂರ್ಣಗೊಂಡಿದ್ದು, ಜತೆಗೆ ಈ ಬಾರಿ ಹೊಸ ಮುಖಗಳಿಗೆ (ಯುವಶಾಸಕರಿಗೆ) ಅವಕಾಶ ನೀಡಬೇಕು ಎನ್ನಲಾಗುವ ಕಾರಣಕ್ಕೆ ಮುಂದೂಡಿದ್ದು ನಿಜಕ್ಕೂ ಆಕಾಂಕ್ಷಿ ಗಳಲ್ಲಿ ಆತಂಕ ತಂದಿದೆ.

ವಿಶ್ವ ಗೆಲ್ಲಲು 'ವಿಶ್ವವಿಜೇತರ ಸಮರ

ವಿಶ್ವ ಗೆಲ್ಲಲು 'ವಿಶ್ವವಿಜೇತರ ಸಮರ

ಅಮೆರಿಕದ ನ್ಯೂಜೆರ್ಸಿಯ ಮೆಟ್‌ಲೈಫ್ ಸ್ಟೇಡಿಯಂನಲ್ಲಿ ಭಾನುವಾರ ಮಧ್ಯರಾತ್ರಿ ಹಾಲಿ ಚಾಂಪಿಯನ್ ತಂಡವಾಗಿರುವ ಅರ್ಜೆಂಟೀನಾ ಮತ್ತು ಸ್ಪೈನ್ ತಂಡಗಳ ಮಧ್ಯೆ ಈ ಬಾರಿಯ ಫಿಫಾ ಫೈನಲ್ ಕಾದಾಟ ನಡೆಯಲಿದೆ. 4 ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾ ಮಹೋತ್ಸವದ 23ನೇ ಆವೃತ್ತಿಯ ಫೈನಲ್ ಪಂದ್ಯ ಇದಾಗಿದೆ.

ಬೇಡಿಕೆಗೆ ತಕ್ಕಷ್ಟು ಪ್ರಶ್ನೆ ಪತ್ರಿಕೆ ಪೂರೈಸದ ಕೊಪ್ಪಳ ವಿವಿ

ಬೇಡಿಕೆಗೆ ತಕ್ಕಷ್ಟು ಪ್ರಶ್ನೆ ಪತ್ರಿಕೆ ಪೂರೈಸದ ಕೊಪ್ಪಳ ವಿವಿ

ಪರಿಕ್ಷಾರ್ಥಿಗಳಿಗೆ ಸಮರ್ಪಕ ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆ ಪೂರೈಕೆ ಮಾಡದ ಕೊಪ್ಪಳ ವಿಶ್ವ ವಿದ್ಯಾಲಯದ ಸ್ಥಿತಿ ಈ ಮೇಲಿನ ಮಾತಿಗೆ ಪುಷ್ಠಿ ನೀಡಿದೆ. ಇತ್ತೀಚೆಗಷ್ಟೇ ಕೊಪ್ಪಳ ವಿಶ್ವ ವಿದ್ಯಾಲಯ ಡಿಜಿಟಲ್ ಮೌಲ್ಯಮಾಪನಕ್ಕೆ ಮುಂದಾಗಿರುವ ಬಗ್ಗೆ ವರದಿ ಆಗಿತ್ತು. ಆದರೆ, ಗುರುವಾರ ನಡೆದ ವಿವಿಧ ಓಪನ್ ಎಲೆಕ್ಟಿವ್ ವಿಷಯಗಳ ಪರೀಕ್ಷೆಯಲ್ಲಿ ಸಾಕಷ್ಟು ಅಪರಾತಪರ ಆಗಿದೆ.

ಟ್ರಾಮಾ ಸೆಂಟರ್‌, ಅಸ್ಥಿ ಚಿಕಿತ್ಸಾ ಕೇಂದ್ರ ಆರಂಭ ಯಾವಾಗ ?

ಟ್ರಾಮಾ ಸೆಂಟರ್‌, ಅಸ್ಥಿ ಚಿಕಿತ್ಸಾ ಕೇಂದ್ರ ಆರಂಭ ಯಾವಾಗ ?

ಸ್ಥಳೀಯರು ಹಾಗೂ ಸಾರ್ವಜನಿಕ ಸಂಘಟನೆಗಳ ಪ್ರಕಾರ, ಟ್ರಾಮಾ ಸೆಂಟರ್‌ನಲ್ಲಿ ಅಗತ್ಯ ವೈದ್ಯರು, ತಜ್ಞ ಸಿಬ್ಬಂದಿ, ವೈದ್ಯಕೀಯ ಉಪಕರಣಗಳು ಹಾಗೂ ಆಡಳಿತಾತ್ಮಕ ವ್ಯವಸ್ಥೆ ಇನ್ನೂ ಪೂರ್ಣ ಪ್ರಮಾಣ ದಲ್ಲಿ ಸಿದ್ಧವಾಗಿಲ್ಲ. ಆರೋಗ್ಯ ಇಲಾಖೆ ಈ ಬಗ್ಗೆ ಶೀಘ್ರ ಕ್ರಮ ಕೈಗೊಂಡು ಟ್ರಾಮಾ ಸೆಂಟರ್ ಅನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಬೇಕು ಎಂಬುದು ಜಿಲ್ಲೆಯ ಜನರ ಆಗ್ರಹವಾಗಿದೆ.

ಸಚಿವ ಸ್ಥಾನಕ್ಕೆ ಸವದಿ ಪಟ್ಟು, ಲಕ್ಮೀ ನಿರೀಕ್ಷೆ

ಸಚಿವ ಸ್ಥಾನಕ್ಕೆ ಸವದಿ ಪಟ್ಟು, ಲಕ್ಮೀ ನಿರೀಕ್ಷೆ

ರಾಜಕೀಯವಾಗಿ ಪ್ರಬಲ ಜಿಲ್ಲೆಯಾಗಿ ಗುರುತಿಸಿಕೊಂಡಿರುವ ಬೆಳಗಾವಿ ಜಿಲ್ಲೆಯಲ್ಲಿ ಸದ್ಯ 11 ಕಾಂಗ್ರೆಸ್ ಶಾಸಕರಿದ್ದು, ಈ ಪೈಕಿ ಸತೀಶ್ ಜಾರಕಿಹೊಳಿ ಈಗಾಗಲೇ ಸಚಿವರಾಗಿದ್ದಾರೆ. ಇನ್ನುಳಿದ ಹತ್ತು ಜನರ ಪೈಕಿ ಇಬ್ಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ದಟ್ಟವಾಗಿದ್ದು ಶಾಸಕರ ನಡುವೆ ಪೈಪೋಟಿ ಏರ್ಪಟ್ಟಿದೆ. ಅಥಣಿ ಶಾಸಕ ಲಕ್ಷ್ಮಣ ಸವದಿ, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ರಾಮದುರ್ಗ ಶಾಸಕ ಅಶೋಕ್ ಪಟ್ಟಣ ಈ ಬಾರಿ ಡಿಕೆಶಿ ಸಂಪುಟದಲ್ಲಿ ಸಚಿಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ.

ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ

ಕೃಷ್ಣಾ ತೀರದಲ್ಲಿ ಪ್ರವಾಹ ಭೀತಿ

ಪ್ರತಿ ವರ್ಷ ಪ್ರವಾಹದ ಸಂದರ್ಭದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಪಂಪ್‌ಸೆಟ್‌ಗಳು ನೀರಿನಲ್ಲಿ ಮುಳುಗಿ ಹಾಳಾಗುತ್ತಿದ್ದ ಕಹಿ ಅನುಭವ ದಿಂದ ಎಚ್ಚೆತ್ತುಕೊಂಡಿರುವ ಕೃಷ್ಣಾ ತೀರದ ರೈತರು, ನದಿಯ ನೀರಿನ ಮಟ್ಟ ಏರಿಕೆಯಾಗುತ್ತಿದ್ದಂತೆ ತಮ್ಮ ನೀರಾವರಿ ಪಂಪ್‌ಸೆಟ್‌ಗಳು ಹಾಗೂ ವಿದ್ಯುತ್ ಮೋಟಾರ್‌ ಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ವಿಸ್ತರಣೆ ಆಗಲಿದೆ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ

ವಿಸ್ತರಣೆ ಆಗಲಿದೆ, ರಾಜ್ಯ ರಾಜಕಾರಣಕ್ಕೆ ದಿಕ್ಸೂಚಿ

2029ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಮಂತ್ರಿಗಳಾಗಿದ್ದವರು ಸಂಸತ್‌ಗೆ ಕರ್ನಾಟಕ ದಿಂದ ಎಷ್ಟು ಮಂದಿ ಸಂಸದ ರನ್ನು ಗೆಲ್ಲಿಸಿ ಕಳುಹಿಸುವ ಸಾಮರ್ಥ್ಯ ಹೊಂದಿ ರುವವರನ್ನು ಆಯ್ಕೆ ಮಾಡುವ ಮಹತ್ವದ ಕಾರ್ಯ ವಾಗಿದೆ. ಹೀಗಾಗಿ ಈ ಬಾರಿ ಸಂಪುಟ ಸೇರುವವರು ಕನಿಷ್ಟ 3 ರಿಂದ 4 ಮಂದಿ ಶಾಸಕರನ್ನು ತಮ್ಮ ಜಿಲ್ಲೆಯಿಂದ ಆರಿಸಿ ಕಳುಹಿಸಿಕೊಡುವಂಥವರಿಗೆ ಅವಕಾಶ ನೀಡಬೇಕೆನ್ನುವ ನಿಟ್ಟಿನಲ್ಲಿ ಸಂಪುಟ ವಿಸ್ತರಣೆ ಮಾಡಬೇಕೆನ್ನುವ ಗಂಭೀರ ಚಿಂತನೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ ಎನ್ನಲಾಗಿದೆ.

ಒಣಗುತ್ತಿರುವ ಬೆಳೆ, ಅನ್ನದಾತ ಕಂಗಾಲು

ಒಣಗುತ್ತಿರುವ ಬೆಳೆ, ಅನ್ನದಾತ ಕಂಗಾಲು

ಭೂಮಿಯನ್ನು ಹಸನುಗೊಳಿಸಿ, ಸಾಲ-ಸೋಲ ಮಾಡಿ ಬೀಜ-ಗೊಬ್ಬರ ಹಾಕಿ ಬಿತ್ತನೆ ಮಾಡಿದ ಕೃಷಿಕರು ಈಗ ಕೈಚೆಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಜೂನ್ ಆರಂಭದಲ್ಲಿ ಬಿದ್ದ ಅಲ್ಪ-ಸ್ವಲ್ಪ ಮಳೆಯನ್ನು ನಂಬಿ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ರೈತರು ತೊಗರಿ, ಹತ್ತಿ ಇತ್ಯಾದಿ ಬೀಜ ಬಿತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದರು.

ಕನಸಿನ ಮನೆಗೆ ಎಂ.ಬಿ.ಪಾಟೀಲ್ ಹೆಸರಿಟ್ಟ ರೈತ

ಕನಸಿನ ಮನೆಗೆ ಎಂ.ಬಿ.ಪಾಟೀಲ್ ಹೆಸರಿಟ್ಟ ರೈತ

ತಿಕೋಟಾ ತಾಲೂಕಿನ ಸೋಮದೇವರಹಟ್ಟಿ ಗ್ರಾಮದ ಹಿರೇಮಠ ಕುಟುಂಬದ ಸಿದ್ದಯ್ಯ, ಸಾತಯ್ಯ, ಮಲ್ಲಯ್ಯ, ಬಸಯ್ಯ ಹಾಗೂ ಚಂದ್ರವ್ವ ಎಂಬ 30ಕ್ಕೂ ಹೆಚ್ಚು ಜನ ಇರುವ ಅವಿಭಕ್ತ ಕುಟುಂಬವು ವಿಜಯಪುರದ ರಾಜಕುಮಾರ್ ಬಡಾವಣೆಯಲ್ಲಿ ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಸ್ವಂತ ಮನೆಗೆ ಸಚಿವ ಎಂ.ಬಿ.ಪಾಟೀಲರ ಹೆಸರನ್ನು ಇಡುವ ಮೂಲಕ ತಮ್ಮ ಭೂಮಿಗೆ ನೀರುಕೊಟ್ಟಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಬತ್ತಿದ ಜಲಮೂಲಗಳು: ರೈತರಲ್ಲಿ ಹೆಚ್ಚಿದ ಆತಂಕ

ಬತ್ತಿದ ಜಲಮೂಲಗಳು: ರೈತರಲ್ಲಿ ಹೆಚ್ಚಿದ ಆತಂಕ

ಬೀದರ್ ಜಿಲ್ಲೆಯ ಪ್ರಮುಖ ಕಾರಂಜಾ ಜಲಾಶಯದಲ್ಲಿ ನೀರಿನ ಮಟ್ಟ ಶೇ.59.50ಕ್ಕೆ ಕುಸಿದಿದ್ದು, ಚುಳಕಿನಾಲಾದಲ್ಲಿ ಶೇ.57.04 ರಷ್ಟಿದೆ. ಅಪ್ಪರ್ ಮುಲ್ಲಾಮಾರಿ ಜಲಾಶಯವು ಶೇ.27.64 ರಷ್ಟಕ್ಕೆ ಕುಸಿದಿರುವುದು ಆ ಭಾಗದ ರೈತರ ಕೃಷಿ ಆಧಾರಿತ ಜೀವನಕ್ಕೆ ದೊಡ್ಡ ಹೊಡೆತ ನೀಡಿದೆ. ಯಾದಗಿರಿ ಜಿಲ್ಲೆಯ ಪರಿಸ್ಥಿತಿಯಂತೂ ಅತ್ಯಂತ ಗಂಭೀರವಾಗಿದ್ದು, ಹತ್ತಿಕುಣಿ ಜಲಾಶಯದಲ್ಲಿ ಕಳೆದ ವರ್ಷ ಶೇ. 80.11 ರಷ್ಟು ನೀರಿದ್ದರೆ, ಈ ಬಾರಿ ಕೇವಲ ಶೇ.25.00 ರಷ್ಟು ಮಾತ್ರ ಇದೆ.

ಸ್ಯಾಟ್ಸ್ ಸರ್ವರ್‌ ಸಮಸ್ಯೆ: ಪಾಲಕರ ಪರದಾಟ

ಸ್ಯಾಟ್ಸ್ ಸರ್ವರ್‌ ಸಮಸ್ಯೆ: ಪಾಲಕರ ಪರದಾಟ

ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಗೊಂಡು ತಿಂಗಳು ಕಳೆದಿದ್ದು, ಸಕಾಲದಲ್ಲಿ ಪ್ರವೇಶಾತಿ ಸಿಗದೆ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲದಂತಾಗಿದೆ. ಈಗಾಗಲೇ ಶಾಲಾ, ಕಾಲೇಜು ಪ್ರವೇಶಾತಿ ಭರದಿಂದ ಸಾಗಬೇಕಿತ್ತು. ಆದರೆ ರಾಯಚೂರು ಜಿಲ್ಲೆ ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಇಲಾಖೆಯ ಶಾಲಾ ದಾಖಲಾತಿಗೆ ಬಳಸುವ ಸ್ಯಾಟ್ಸ್ ವೆಬ್ಸೈಟ್ನಲ್ಲಿ ಉಂಟಾಗಿರುವ ಸರ್ವರ್‌ಸಮಸ್ಯೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಜಲಪಾತದ ಸೊಬಗು, ಮನಸೋತ ಪ್ರವಾಸಿಗ

ಜಲಪಾತದ ಸೊಬಗು, ಮನಸೋತ ಪ್ರವಾಸಿಗ

ರಸ್ತೆಯ ಬದಿಯಲ್ಲೇ ಚಿಮ್ಮುವ ಜಲಪಾತಗಳು: ನಮ್ಮ ಚಿತ್ರದಲ್ಲಿ ಕಾಣುವ ದೃಶ್ಯವೇ ಇದಕ್ಕೆ ಸಾಕ್ಷಿ. ಇಲ್ಲಿ ಹೆದ್ದಾರಿಯ ಪಕ್ಕದಲ್ಲಿರುವ ಬೃಹತ್ ಬಂಡೆಗಲ್ಲುಗಳ ನಡುವಿನಿಂದ ಸೋರುವ ನೀರು ಸಣ್ಣ ಪುಟ್ಟ ಜಲಪಾತಗಳಂತೆ ಮೈದಳೆಯುತ್ತದೆ. ಮಳೆಗಾಲದ ಮಂಜು ಮತ್ತು ಹಸಿರಿನ ಹೊದಿಕೆಯನ್ನು ಹೊದ್ದು ಕೊಂಡಿರುವ ಈ ಕಲ್ಲುಬಂಡೆಗಳು, ಮಳೆನೀರಿನ ಸ್ಪರ್ಶದಿಂದ ಜೀವಂತಿಕೆ ಪಡೆದುಕೊಂಡಿವೆ.

ಚಿಕ್ಕಬಳ್ಳಾಪುರವಿನ್ನು ವಿಶ್ವಬಳ್ಳಾಪುರ: ಮಧುಸೂದನ ಸಾಯಿ

ಚಿಕ್ಕಬಳ್ಳಾಪುರವಿನ್ನು ವಿಶ್ವಬಳ್ಳಾಪುರ: ಮಧುಸೂದನ ಸಾಯಿ

ಚಿಕ್ಕಬಳ್ಳಾಪುರ ಪ್ರಧಾನಿ ನರೇಂದ್ರ ಮೋದಿ ಅವರು ಮೂರು ವರ್ಷಗಳ ಹಿಂದೆ ಉದ್ಘಾಟಿಸಿದ ಶ್ರೀ ಮಧುಸೂದನ ಸಾಯಿ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆಯು ಬಿಲ್ಲಿಂಗ್ ಕೌಂಟರ್‌ಗಳಿಲ್ಲದೆ ಎಲ್ಲ ರೋಗಿಗಳಿಗೆ ಉಚಿತ ಚಿಕಿತ್ಸೆ ಮತ್ತು ಆರೈಕೆ ನೀಡುತ್ತಿದ್ದು ಇಂತಹ ಸೌಲಭ್ಯ ನೀಡುವ ವಿಶ್ವದ ಏಕೈಕ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿ ಗುರುತಿಸಿಕೊಂಡಿದೆ.

ಇಚ್ಛಾಶಕ್ತಿ ಕೊರತೆ: ಕಾರಂಜಾ ಸಂತ್ರಸ್ಥರಿಗಿನ್ನೂ ಸಿಕ್ಕಿಲ್ಲ ನ್ಯಾಯ

ಇಚ್ಛಾಶಕ್ತಿ ಕೊರತೆ: ಕಾರಂಜಾ ಸಂತ್ರಸ್ಥರಿಗಿನ್ನೂ ಸಿಕ್ಕಿಲ್ಲ ನ್ಯಾಯ

ಕಾರಂಜಾ ಸಂತ್ರಸ್ತರ ಹಿತರಕ್ಷಣಾ ಸಮಿತಿಯ ಸದಸ್ಯರ ಸಾಮೂಹಿಕ ಆತ್ಮಹತ್ಯೆಯತ್ನಕ್ಕೂ ಸರಕಾರ ಮಣಿದಿಲ್ಲ. ಇಲ್ಲಿನ ಸಂತ್ರಸ್ತರ ಪಾಲಿಗೆ ಪರಿಹಾರ ಗಗನಕುಸುಮವಾಗಿದೆ. ರಾಜಕಾರಣಿಗಳ ಇಚ್ಛಾಶಕ್ತಿ ಕೊರತೆಯಿಂದ ಇದುವರೆಗೂ ಸೂಕ್ತ ಪರಿಹಾರ ಬಂದಿಲ್ಲ. ಈ ವಿಚಾರದಲ್ಲಿ ಕಾಲಕ್ಕೆ ತಕ್ಕಂತೆ ರಾಜಕಾರಣ ಮಾಡಲಾಗುತ್ತಿದೆ ಎಂಬುದು ರೈತರ ಅಳಲು. ಯಾವುದೇ ಷರತ್ತು ಇಲ್ಲದೆ 4 ದಶಕಗಳ ಹಿಂದೆ ಭೂಮಿ ನೀಡಿದ ರೈತರ ಬದುಕು ದುಸ್ತರ ಆಗಿದೆ.

ಆಡಳಿತದ ನಿರ್ಲಕ್ಷ್ಯಕ್ಕೆ ಕುಸಿದ ಕುಮದ್ವತಿ ನದಿ ದಂಡೆ

ಆಡಳಿತದ ನಿರ್ಲಕ್ಷ್ಯಕ್ಕೆ ಕುಸಿದ ಕುಮದ್ವತಿ ನದಿ ದಂಡೆ

ಇತಿಹಾಸವನ್ನು ಅಳಿಸಿ ಹಾಕುವುದು ಸುಲಭ. ಆದರೆ ಅದನ್ನು ಮತ್ತೆ ಕಟ್ಟುವುದು ಅಸಾಧ್ಯ. ರಟ್ಟಿಹಳ್ಳಿ ಯ ಹೃದಯ ಭಾಗದಲ್ಲಿ ಹರಿಯುವ ಕುಮದ್ವತಿ ನದಿ ಇದಕ್ಕೆ ಜೀವಂತ ಸಾಕ್ಷಿ. ಶತಮಾನಗಳ ಇತಿಹಾಸ ಹೊತ್ತ ಕದಂಬೇಶ್ವರ ದೇವಾಲಯದ ಪಕ್ಕದಲ್ಲಿರುವ ಕಲ್ಲಿನ ಮೆಟ್ಟಿಲುಗಳು ಕುಸಿದು ಬೀಳುತ್ತಿದ್ದು, ಈ ಪ್ರದೇಶದ ಪರಂಪರೆ ನಿಧಾನವಾಗಿ ಕಣ್ಮರೆಯಾಗುತ್ತಿದೆ.

ಮಂಡ್ಯ ನಗರ ಸಾರಿಗೆ ಇಲ್ಲದೇ ಜನತೆ ಹೈರಾಣ !

ಮಂಡ್ಯ ನಗರ ಸಾರಿಗೆ ಇಲ್ಲದೇ ಜನತೆ ಹೈರಾಣ !

ನಗರದಲ್ಲಿನ ಬಡ ಕಾಲೇಜು ವಿದ್ಯಾರ್ಥಿಗಳು, ನಾಗರೀಕರು, ವೃದ್ಧರು ಖಾಸಗಿ ವ್ಯವಸ್ಥೆಯನ್ನೇ ಅವಲಂಬಿ ಸುವಂತೆ ಪರಿಸ್ಥಿತಿ ನಿರ್ಮಿಸಲಾಗಿದೆ. ಇದಕ್ಕೆ ನಗರದಲ್ಲಿದ್ದ “ಮಿಡಿ ಬಸ್" ವ್ಯವಸ್ಥೆಯನ್ನು ಸ್ಥಗಿತ ಗೊಳಿಸಿರುವುದೇ ಕಾರಣ. ಕೋವಿಡ್ ಸಂದರ್ಭಕ್ಕೂ ಮೊದಲು ನಗರದ ಬಡವಾಸಿಗಳಿಗೆ ಅನುಕೂಲ ವಾಗುವಂತೆ ಸಾಮಾನ್ಯ ಗಾತ್ರಕ್ಕಿಂತ ಸಣ್ಣ ಗಾತ್ರದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

Loading...