Shivanna-Daali Movie: ಮತ್ತೆ ಅಬ್ಬರಿಸೋಕೆ ರೆಡಿ ಆಗ್ತಿದೆ ʼಟಗರುʼ ಜೋಡಿ; ಈ ಬಾರಿ ಶಿವಣ್ಣ-ಡಾಲಿ ಕಾಂಬಿನೇಶನ್ ಹವಾ ಹೇಗಿರುತ್ತೆ?
ಹೇಮಂತ್ ರಾವ್ ನಿರ್ದೇಶನದಲ್ಲಿ ಶಿವಣ್ಣ ಹಾಗೂ ಡಾಲಿ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನದಿಂದ ಕೇಳಿಬಂದಿತ್ತು. ಆದರೆ ಇದೀಗ ಕನ್ಪರ್ಮ್ ಆಗಿದೆ. ಟೈಟಲ್ ಆನಿಮೇಷನ್ ಮೋಷನ್ ಟೀಸರ್ ಸಮೇತ ಸಿನಿಮಾ ಘೋಷಣೆ ಆಗಿದೆ. ಹೇಮಂತ್ ರಾವ್ ತಮ್ಮ ಮುಂದಿನ ಚಿತ್ರಕ್ಕೆ '666 ಆಪರೇಷನ್ ಡ್ರೀಮ್ ಥಿಯೇಟರ್' ಎಂಬ ಹೆಸರಿಟ್ಟಿದ್ದಾರೆ.


ಬೆಂಗಳೂರು: ಗೋಧಿ ಬಣ್ಣ ಸಾಧಾರಣ ಮೈಕಟ್ಟು, 'ಕವಲುದಾರಿ', 'ಸಪ್ತಸಾಗರದಾಚೆ ಎಲ್ಲೋ ಹೀಗೆ ವಿಭಿನ್ನ ಸಿನಿ ಮಾಗಳನ್ನು ನಿರ್ದೇಶಿಸಿ ಹೇಮಂತ್ ರಾವ್ (Hemanth Rao) ಮೆಚ್ಚುಗೆ ಗಳಿಸಿದ್ದಾರೆ. ಈಗ ತಮ್ಮ ಮುಂದಿನ ಚಿತ್ರ ‘666 ಆಪರೇಷನ್ ಡ್ರೀಮ್ ಥಿಯೇಟರ್’ (666 Operation Dream Theatre) ಮೂಲಕ ಮತ್ತೊಮ್ಮೆ ಹೊಸ ಸಿನಿಮಾಕ್ಕೆ ಕೈ ಹಾಕಿದ್ದಾರೆ. ಇದರಲ್ಲಿ ಕನ್ನಡ ಚಿತ್ರರಂಗದ ಬಹುಬೇಡಿಕೆ ಕಲಾವಿದರಾದ ಶಿವರಾಜ್ಕುಮಾರ್ ಮತ್ತು ಡಾಲಿ ಧನಂಜಯ್ ಪ್ರಮುಖ ಪಾತ್ರ ಮಾಡಲಿದ್ದಾರೆ. ಟೈಟಲ್ ಟೀಸರ್ ನೋಡಿದರೆ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಚಿತ್ರದಲ್ಲಿರುವ ಸಾಧ್ಯತೆಯಿದೆ.
Presenting my next directorial
— Hemanth M Rao (@hemanthrao11) June 18, 2025
'666 Operation Dream Theatre' with the incredible @NimmaShivanna and @Dhananjayaka @Vaishak_J_Films
Shoot starts soon! Excited!! ♥️♥️#666OperationDreamTheatre #666ODT
Check out the title animation 👇🏾https://t.co/RNhcHQsJw0
ಹೇಮಂತ್ ರಾವ್ ನಿರ್ದೇಶನದಲ್ಲಿ ಶಿವಣ್ಣ ಹಾಗೂ ಡಾಲಿ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನದಿಂದ ಕೇಳಿಬಂದಿತ್ತು. ಆದರೆ ಇದೀಗ ಕನ್ಪರ್ಮ್ ಆಗಿದೆ. ಟೈಟಲ್ ಆನಿಮೇಷನ್ ಮೋಷನ್ ಟೀಸರ್ ಸಮೇತ ಸಿನಿಮಾ ಘೋಷಣೆ ಆಗಿದೆ.ಹೇಮಂತ್ ರಾವ್ ತಮ್ಮ ಮುಂದಿನ ಚಿತ್ರಕ್ಕೆ '666 ಆಪರೇಷನ್ ಡ್ರೀಮ್ ಥಿಯೇಟರ್' ಎಂಬ ಹೆಸರಿಟ್ಟಿದ್ದಾರೆ. ಶಿವಣ್ಣ, ಧನಂಜಯ್ ಹಾಗೂ ವೈಶಾಕ್ ಜೆ ಫಿಲ್ಮ್ಸ್ ಜೊತೆ ನನ್ನ ಮುಂದಿನ ಸಿನಿಮಾ '666 ಆಪರೇಷನ್ ಡ್ರೀಮ್ ಥಿಯೇಟರ್' ಶೀಘ್ರದಲ್ಲೇ ಶೂಟಿಂಗ್ ಪ್ರಾರಂಭವಾಗುತ್ತದೆ. ಈ ಬಗ್ಗೆ ಬಹಳ ಉತ್ಸುಕ ನಾಗಿದ್ದೇನೆ" ಎಂದು ನಿರ್ದೇಶಕ ಹೇಮಂತ್ ರಾವ್ ಟ್ವೀಟ್ ಮಾಡಿದ್ದಾರೆ.
ಇದನ್ನು ಓದಿ: Toxic Movie: ಗರ್ಭಿಣಿ ಕಿಯಾರಾಗಾಗಿ ʼಟಾಕ್ಸಿಕ್ʼ ಚಿತ್ರೀಕರಣವನ್ನು ಬೆಂಗಳೂರಿನಿಂದ ಮುಂಬೈಗೆ ಸ್ಥಳಾಂತರಿಸಿದ್ದ ಯಶ್
ಈಗಾಗಲೇ 'ಟಗರು' ಹಾಗೂ 'ಬೈರಾಗಿ' ಚಿತ್ರಗಳಲ್ಲಿ ಶಿವಣ್ಣ ಹಾಗೂ ಧನು ಒಟ್ಟಿಗೆ ನಟಿಸಿದ್ದರು. ಇದೀಗ '666 ಆಪರೇಷನ್ ಡ್ರೀಮ್ ಥಿಯೇಟರ್' ಚಿತ್ರದಲ್ಲಿ ಅವರಿಬ್ಬರ ಪಾತ್ರದ ಬಗ್ಗೆ ಕುತೂಹಲ ಮೂಡಿದೆ.ಈ ಚಿತ್ರವು ಡಾ. ವೈಶಾಖ್ ಜೆ ಗೌಡ ಅವರ ವೈಶಾಖ್ ಜೆ ಫಿಲ್ಮ್ಸ್ಬ್ಯಾನರ್ ಅಡಿಯಲ್ಲಿ ಮೂಡಿ ಬರಲಿದೆ. 666 ಆಪರೇಷನ್ ಡ್ರೀಮ್ ಥಿಯೇಟರ್’ ಚಿತ್ರತಂಡದಲ್ಲಿ ಚರಣ್ ರಾಜ್ ಸಂಗೀತ ಸಂಯೋಜನೆ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ, ಮತ್ತು ವಿಶ್ವಾಸ್ ಕಾಶ್ಯಪ್ ಕಲಾ ನಿರ್ದೇಶನವನ್ನು ನಿರ್ವಹಿಸುತ್ತಿದ್ದಾರೆ.ಶೀಘ್ರದಲ್ಲೇ ಸಿನಿಮಾ ಸೆಟ್ಟೇರಲಿದ್ದು ಮುಂದಿನ ವರ್ಷವೇ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.