ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Pushpa Kumari

[email protected]

Articles
"ಮೂಲಭೂತ ಸೌಕರ್ಯ ಇಲ್ಲ, ರಜೆಯೂ ಇಲ್ಲ": 20 ಲಕ್ಷ ರುಪಾಯಿ ಸಂಬಳದ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿದ 25ರ ಯುವಕ

ಒತ್ತಡದಿಂದ 20 ಲಕ್ಷ ರು. ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿದ ಯುವಕ

Viral News: 25 ವರ್ಷದ ಯುವಕನೊಬ್ಬ ಕೆಲಸದ ಹೊರೆ ಹೆಚ್ಚಾಗಿ 20 ಲಕ್ಷ ರುಪಾಯಿ ಪ್ಯಾಕೇಜ್ ಹೊಂದಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾನೆ‌. ಎನ್‌ಐಟಿ ಕುರುಕ್ಷೇತ್ರದ 25 ವರ್ಷದ ಎಂಜಿನಿಯರ್ ಸೌರಭ್ ಮಿತ್ತಲ್, 22ನೇ ವಯಸ್ಸಿನಲ್ಲಿ ವರ್ಷಕ್ಕೆ 20 ಲಕ್ಷ ರುಪಾಯಿ ಸಂಬಳದೊಂದಿಗೆ ಬಿಪಿಸಿಎಲ್‌ಗೆ (ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್) ಉದ್ಯೋಗಕ್ಕೆ ಸೇರಿದ್ದ. ಈ ಕೆಲಸವನ್ನು ಪ್ರತಿಷ್ಠಿತವೆಂದು ಪರಿಗಣಿಸಲಾಗುತ್ತದೆ‌. ಆದರೆ ಇದೀಗ ಅತೀವ ಒತ್ತಡ ಹಾಗೂ ಮಾನಸಿಕ ನೆಮ್ಮದಿ ಇಲ್ಲದೆ ಕೆಲಸಕ್ಕೆ ಗುಡ್ ಬೈ ಹೇಳಿದ್ದಾನೆ.

''ಮಗಳ ಪ್ರಾಣಕ್ಕಿಂತ ಪ್ರತಿಷ್ಠೆ ಮುಖ್ಯವಾಯ್ತೆ?ʼʼ: ನಿಗೂಢವಾಗಿ ಮೃತಪಟ್ಟ ತ್ವಿಶಾ ವಾಟ್ಸ್‌ಆ್ಯಪ್ ಚಾಟ್‌ ನೋಡಿ ನೆಟ್ಟಿಗರಿಂದ ಕ್ಲಾಸ್‌

ನೋಯ್ಡಾ ಮಹಿಳೆಯ ಆತ್ಮಹತ್ಯೆ ಪ್ರಕರಣ: ನೆಟ್ಟಿಗರು ಕಿಡಿ

Viral News: ನೋಯ್ಡಾ ಮೂಲದ ಯುವತಿ ತ್ವಿಶಾ ಶರ್ಮಾ ಅವರ ಸಾವು ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಮದುವೆಯಾಗಿ ಕೇವಲ ಐದು ತಿಂಗಳಿಗೆ ಅವರ ಮೃತದೇಹವು ಶವಾಗಾರದಲ್ಲಿದೆ. ಅವರ ಪೋಷಕರು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ತ್ವಿಶಾ ನಡೆಸಿದ ಚಾಟ್‌ ವೈರಲ್‌ ಆಗಿದೆ.

"ವಿದೇಶಕ್ಕಿಂತ ಹಳ್ಳಿಯೇ ಸುಂದರ, ‌ತಪ್ಪಿತಸ್ಥ ಭಾವನೆ ಕಾಡುತ್ತಿದೆʼʼ ಎಂದು ಕೇರಳಂ ಯುವಕ ಹೇಳಿದ್ದೇಕೆ?

ಹಳ್ಳಿ ಬದುಕು ತ್ಯಜಿಸಿದ ಬಗ್ಗೆ ಬೇಸರ ಹೊರಹಾಕಿದ ಕೇರಳಂ ಯುವಕ

Viral Video: ಹಳ್ಳಿಯ ಸರಳ ಜೀವನ, ಸ್ವಚ್ಛ ಪರಿಸರ ಇದನ್ನೆಲ್ಲ ಮಿಸ್ ಮಾಡಿಕೊಳ್ಳುವವರು ಬಹುತೇಕ ಮಂದಿ ಇದ್ದಾರೆ. ಪ್ರಸ್ತುತ ಲಂಡನ್‌ನಲ್ಲಿ ಉದ್ಯೋಗ ಮಾಡುತ್ತಿರುವ ಕೇರಳಂ ಕಂಟೆಂಟ್ ಕ್ರಿಯೇಟರ್‌ ಒಬ್ಬರು ಹಳ್ಳಿಯನ್ನು ತೊರೆದು ಬಂದ ಬಗ್ಗೆ ಬೇಸರ ಹೊರ ಹಾಕಿದ್ದಾರೆ‌. ಕೆಲವೊಮ್ಮೆ ವಿದೇಶದಲ್ಲಿ ಕೆಲಸ ಮಾಡಲು ಹಳ್ಳಿ ಬಿಟ್ಟು ಬಂದಿದ್ದಕ್ಕಾಗಿ ತಪ್ಪಿತಸ್ಥ ಭಾವನೆ ಕಾಡುತ್ತದೆ ಎಂದು ಸೋಷಿಯಲ್ ಮೀಡಿಯಾ ಪೋಸ್‌ನಲ್ಲಿ ಬರೆದಿದ್ದಾರೆ.

Viral News: ರಣಬೀರ್‌ ಕಪೂರ್‌-ದೀಪಿಕಾ ಪಡುಕೋಣೆ ಸಿನಿಮಾ ನೋಡಿ ಕಾರ್ಪೋರೇಟ್‌ ಕೆಲಸ ಬಿಟ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಯುವತಿ

ಸಿನಿಮಾ ನೋಡಿ ಕೆಲಸ ತ್ಯಜಿಸಿದ ಯುವತಿ: ಪೋಸ್‌ನಲ್ಲಿ ಹೇಳಿದ್ದೇನು?

ಯುವತಿಯೊಬ್ಬಳು ʼತಮಾಷʼ ಬಾಲಿವುಡ್ ಸಿನಿಮಾ ವೀಕ್ಷಿಸಿ ಕಾರ್ಪೋರೇಟ್ ಕೆಲಸ ತೊರೆದು ಕಲಾ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾಗಿರುವ ವಿಚಾರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರ್ಪೋರೇಟ್ ಉದ್ಯೋಗವನ್ನು ತ್ಯಜಿಸಿದ್ದರಿಂದ ಆರ್ಥಿಕ ಸಮಸ್ಯೆ ಎದುರಾಗಿದೆ ಎಂದು ಆಕೆ ಹೇಳಿದ್ದಾಳೆ.

ವಿದ್ಯಾವಂತರಾದರೂ ಬುದ್ಧಿಯಿಲ್ಲ: ಶತಾಬ್ದಿ ರೈಲಿನಲ್ಲಿ ಪ್ರಯಾಣಿಕನ ಅತಿರೇಕದ ವರ್ತನೆ

ಸಾರ್ವಜನಿಕ ಸಾರಿಗೆಯಲ್ಲಿ ನಾಗರಿಕ ಪ್ರಜ್ಞೆಯ ಕೊರತೆ: ಪ್ರಯಾಣಿಕರು ಕಿಡಿ ಕಿಡಿ

Viral News: ರೈಲಿನಲ್ಲಿ ಉಂಟಾದ ಘಟನೆಯೊಂದು ಇದೀಗ ಭಾರೀ ಚರ್ಚೆಯನ್ನು ಹುಟ್ಟುಹಾಕಿದೆ. ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕನೊಬ್ಬ ಚಕ್ಕಳಮಕ್ಕಳ ಹಾಕಿ ಕುಳಿತಿದ್ದ. ಈ ಬಗ್ಗೆ ಕಿಡಿಕಾರಿದ ಸಹಪ್ರಯಾಣಿಕರೊಬ್ಬರು ಫೋಟೊ ಸಮೇತ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ತನ್ನ ಜಾಗವನ್ನು ಅತಿಕ್ರಮಿಸಿಕೊಂಡು ಚಕ್ಕಳಮಕ್ಕಳ ಹಾಕಿ ಕುಳಿತಿರುವ ಪ್ರಯಾಣಿಕ ಬಗ್ಗೆ ಆಕ್ರೋಶ ಹೊರಹಾಕಿದ್ದು ಭಾರತದಲ್ಲಿ ನಾಗರಿಕ ಪ್ರಜ್ಞೆ ಹಾಗೂ ಶಿಸ್ತಿನ ವರ್ತನೆಯ ಬಗ್ಗೆ ಬೇಸರ ವ್ಯಕ್ತ ಪಡಿಸಿದ್ದಾರೆ.

ಸಫಾರಿ ಜೀಪ್ ಮೇಲೆ ಆಟ್ಯಾಕ್ ಮಾಡಲು ಮುಂದಾದ ಖಡ್ಗಮೃಗ: ಕೂದಲೆಳೆ ಅಂತರದಲ್ಲಿ ಪ್ರವಾಸಿಗರು ಪಾರು, ವಿಡಿಯೋ ನೋಡಿ

ಪ್ರವಾಸಿಗರ ಸಫಾರಿ ಜೀಪ್ ಮೇಲೆ ಖಡ್ಗಮೃಗ ದಾಳಿ: ಭಯಾನಕ ವಿಡಿಯೊ!

Viral Video: ಅಸ್ಸಾಂನ ಮಾನಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಘೇಂಡಾಮೃಗವು ಸಫಾರಿ ಜೀಪಿನ ಮೇಲೆ ದಾಳಿ ಮಾಡಲು ಮುಂದಾಗಿದ್ದು ಪ್ರವಾಸಿಗರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಈ ಭಯಾನಕ ಘಟನೆಯ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಬೇಸಿಗೆಯಲ್ಲಿ ದೇಹವನ್ನು ನೈಸರ್ಗಿಕವಾಗಿ ತಣಿಸಲು ಅಡುಗೆ ಕೋಣೆಯಲ್ಲೇ ಇದೆ ಔಷಧ

ಬೇಸಿಗೆಯ ತೀವ್ರ ಶಾಖವನ್ನು ನೈಸರ್ಗಿಕವಾಗಿ ನಿವಾರಿಸಲು ಇಲ್ಲಿದೆ ಟಿಪ್ಸ್

Beat The Intense Summer Heat Naturally: ಕೇವಲ ದೇಹಕ್ಕೆ ನೀರಿನ ಅಂಶ ಸಿಕ್ಕರೆ ಸಾಲದು. ಅಗತ್ಯವಾದ ಜೀವಸತ್ವಗಳು ಮತ್ತು ಎಲೆಕ್ಟ್ರೋಲೈಟ್‌ಗಳನ್ನು ಪಡೆಯುವುದು ಕೂಡ ಅಗತ್ಯ. ಅದರಲ್ಲೂ ಈ ಸೆಕೆಯನ್ನು ತಡೆದುಕೊಳ್ಳಲು ಹೆಚ್ಚಿನವರು ಐಸ್‌ಕ್ರೀಂ, ಕೋಲ್ಡ್ ಡ್ರಿಂಕ್ಸ್‌ನಂತಹ ತಂಪು ಪಾನೀಯದ ಮೊರೆ ಹೋಗುತ್ತಾರೆ‌. ಅದರ ಬದಲು ಬಿಸಿಲಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ನೈಸರ್ಗಿಕವಾಗಿ ಅಡುಗೆಮನೆಯಲ್ಲೇ ಸಿಗುವ ಈ ಆಹಾರ ಪದಾರ್ಥಗಳನ್ನು ಬಳಸಲು ತಜ್ಞರು ಸಲಹೆ ನೀಡಿದ್ದಾರೆ.

ದಿನ ಭವಿಷ್ಯ, ಮೇ 18, 2026: ಎಚ್ಚರ! ಇಂದು ವ್ಯವಹಾರದಲ್ಲಿ ಭಾರಿ ನಷ್ಟವಾಗುವ ಸಾಧ್ಯತೆ

ಈ ರಾಶಿಯವರಿಗೆ ಇಂದು ಕಷ್ಟದ ದಿನ

Horoscope Today May 18th: ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷಪಕ್ಷ, ದ್ವೀತಿಯ ತಿಥಿ, ರೋಹಿಣಿ ನಕ್ಷತ್ರದ ಮೇ 18ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ತಿಳಿಸಿದ್ದಾರೆ.

ಬಂಧಿತ ವಿವಾಹಿತ ಪ್ರೇಮಿಯ ಬಿಡುಗಡೆ ಆಗ್ರಹಿಸಿ ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮ

ಪ್ರೇಮಿಯ ಬಿಡುಗಡೆಗಾಗಿ ಮೊಬೈಲ್ ಟವರ್ ಏರಿ ಯುವತಿಯ ಹೈಡ್ರಾಮ

Viral News: ಪ್ರೇಮಿಯನ್ನು ಪೊಲೀಸ್ ಕಸ್ಟಡಿಯಿಂದ ಬಿಡುಗಡೆ ಮಾಡಬೇಕೆಂದು ಪ್ರೇಯಸಿ ಸುಮಾರು 90 ನಿಮಿಷಗಳ ಹೈವೋಲ್ಟೇಜ್ ಟವರ್ ಮೇಲೆ ಏರಿರುವ ಘಟನೆ ನಡೆದಿದೆ. ಈ ನಾಟಕೀಯ ದೃಶ್ಯದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಬಕ್ರೀದ್‌ಗೂ ಮುನ್ನ ಬಾಂಗ್ಲಾದೇಶದಲ್ಲಿ ಭಾರಿ ಸದ್ದು ಮಾಡ್ತಿವೆ 'ಡೊನಾಲ್ಡ್ ಟ್ರಂಪ್', 'ನೆತನ್ಯಾಹು' ಎಮ್ಮೆಗಳು!

ಬಕ್ರೀದ್‌ಗೂ ಮುನ್ನ ಸದ್ದು ಮಾಡ್ತಿವೆ 'ಟ್ರಂಪ್', 'ನೆತನ್ಯಾಹು' ಎಮ್ಮೆಗಳು!

Viral News: ವಿಶ್ವದ ಎರಡು ಪ್ರಮುಖ ನಾಯಕರಾದ ಡೊನಾಲ್ಡ್ ಟ್ರಂಪ್ ಹಾಗೂ ಬೆಂಜಮಿನ್ ನೆತನ್ಯಾಹು ಹೋಲುವ ಎರಡು ದೈತ್ಯ ಎಮ್ಮೆಗಳು ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ‌. ಬಾಂಗ್ಲಾದೇಶದ ರಾಜಧಾನಿ ಡಾಕಾದಲ್ಲಿ ಈ ವಿಶೇಷ ವಿನ್ಯಾಸದ ಎಮ್ಮೆಗಳನ್ನು ವೀಕ್ಷಿಸಲು ಜನರು ಸಾಲುಗಟ್ಟಿ ನಿಂತಿದ್ದಾರೆ.

ಅಜಾಗರೂಕತೆಯಿಂದ ಹಾವು ಹಿಡಿಯಲು ಹೋಗಿ ಕಚ್ಚಿಸಿಕೊಂಡ ಯುವಕ: ವಿಡಿಯೊ ನೋಡಿ ನೆಟ್ಟಿಗರು ಕಿಡಿ

ಹಾವು ಹಿಡಿಯಲು ಹೋಗಿ ಪೇಚಿಗೆ ಸಿಲುಕಿದ ಯುವಕ: ಭಯಾನಕ ವಿಡಿಯೊ

Viral Video: ಯುವಕನೊಬ್ಬ ಮನೆಯೊಳಗೆ ನುಗ್ಗಿದ ಹಾವನ್ನು ಹಿಡಿಯಲು ಹೋಗಿ ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ. ಗುಜರಾತ್‌ನ ಸೂರತ್‌ನಲ್ಲಿ ಈ ಘಟನೆ ನಡೆದಿದ್ದು, ಈ ಆಘಾತಕಾರಿ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ. ಯಾವುದೇ ರಕ್ಷಣಾತ್ಮಕ ಸಾಧನ ಅಥವಾ ವೃತ್ತಿಪರ ಬೆಂಬಲವಿಲ್ಲದೆ ಮನೆಯೊಳಗೆ ಇದ್ದ ಹಾವನ್ನು ಯುವಕನೊಬ್ಬ ಸೆರೆ ಹಿಡಿಯಲು ಪ್ರಯತ್ನಿಸಿದ್ದಾನೆ.

84ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ವಿಮಾನ ಪ್ರಯಾಣ: ಅಜ್ಜಿಯ ಆಸೆ ಈಡೇರಿಸಿದ ಮೊಮ್ಮಗ: ಹೃದಯಸ್ಪರ್ಶಿ ಕ್ಷಣ ಇಲ್ಲಿದೆ

ಅಜ್ಜಿಯ ವಿಮಾನ ಪ್ರಯಾಣದ ಆಸೆ ಈಡೇರಿಸಿದ ಮೊಮ್ಮಗ: ವಿಡಿಯೊ ವೈರಲ್

Viral Video: ವೃದ್ಧೆಯೊಬ್ಬರು ಮೊದಲ ಬಾರಿ ವಿಮಾನ ಪ್ರಯಾಣ ಮಾಡಿದ ಹೃದಯಸ್ಪರ್ಶಿ ವಿಡಿಯೊ ಎಲ್ಲರ ಹೃದಯ ಗೆದ್ದಿದೆ. 84ನೇ ವಯಸ್ಸಿನಲ್ಲಿ ಅಜ್ಜಿಯ ಮೊದಲ ಬಾರಿಗೆ ವಿಮಾನ ಪ್ರಯಾಣದ ಅನುಭವ ಪಡೆದಿದ್ದು, ಅಜ್ಜಿಯ ಆಸೆಯನ್ನು ಈಡೇರಿಸಲು ಮೊಮ್ಮಗ ಸಾಥ್ ನೀಡಿದ್ದಾನೆ. ಸದ್ಯ ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ಲಕ್ಷಗಟ್ಟಲೆ ಆದಾಯ ತರುವ ಕಾರ್ಪೊರೇಟ್ ಉದ್ಯೋಗ ತ್ಯಜಿಸಿ ನೂರಾರು ಬೀದಿನಾಯಿಗಳಿಗೆ ಆಶ್ರಯದಾತನಾದ ಬೆಂಗಳೂರಿನ ಸಾಫ್ಟ್‌ವೇರ್ ಎಂಜಿನಿಯರ್

ನೂರಾರು ಬೀದಿ ನಾಯಿಗಳಿಗೆ ಆಸರೆಯಾದ ಬೆಂಗಳೂರಿನ ಎಂಜಿನಿಯರ್

Viral News: ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಬೆಂಗಳೂರಿನ ಯುವಕ ಈಗ ನೂರಾರು ಬೀದಿ ನಾಯಿಗಳಿಗೆ ಆಶ್ರಯದಾತರಾಗಿದ್ದಾರೆ. ಇದೀಗ ಅವರ ವೃತ್ತಿ ತೊರೆದು ದೊಡ್ಡಬಳ್ಳಾಪುರದ ತೋಟದಲ್ಲಿ ನೂರಾರು ನಾಯಿಗಳ ಜತೆ ವಾಸಿಸುತ್ತಿದ್ದಾರೆ. ಇಲ್ಲಿರುವ ಫಾರ್ಮ್ ಹೌಸ್‌ ಅನ್ನು ನಾಯಿಗಳ ಅನುಕೂಲಕಕ್ಕಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಅವು ಮುಕ್ತವಾಗಿ ಓಡಬಹುದಾದ ದೊಡ್ಡ ತೆರೆದ ಮೈದಾನಗಳು, ಈಜಲು ಕೊಳಗಳಿವೆ. ಅಲ್ಲದೆ ಬೀದಿ ನಾಯಿಗಳ ಸುರಕ್ಷತೆಗಾಗಿ ಬೇಲಿಗಳನ್ನು ಅಳವಡಿಸಲಾಗಿದೆ.

ಹಳದಿ ಶಾಸ್ತ್ರದ ವೇಳೆ ಬೆಂಕಿ ದುರಂತ: ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ ವರ

ಬೆಂಕಿ ಅವಘಡದಿಂದ ವಧು ಸುಟ್ಟು ಹೋದರೂ ಆಸ್ಪತ್ರೆಯಲ್ಲೇ ವರಿಸಿದ ವರ

Viral Video: ಮದುವೆ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸೋರಿಕೆಯಾಗಿ 12 ಮಂದಿ ಬೆಂಕಿಯ ಜ್ವಾಲೆಗೆ ಸಿಲುಕಿ ತೀವ್ರವಾಗಿ ಗಾಯಗೊಂಡ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ವಧು ಸೇರಿ ಒಟ್ಟು 12 ಜನರು ತೀವ್ರವಾಗಿ ಸುಟ್ಟು ಹೋಗಿದ್ದಾರೆ. ಹಳದಿ ಸಾಸ್ತ್ರದ ವೇಳೆ ಈ ಘಟನೆ ನಡೆದಿದ್ದು, ವರ ಆಸ್ಪತ್ರೆಯಲ್ಲೇ ತಾಳಿ ಕಟ್ಟಿದ್ದಾನೆ.

ನಿಮ್ಮ ನಾಲಗೆಯ ಬಣ್ಣ ಬಿಚ್ಚಿಡುತ್ತೆ ಆರೋಗ್ಯದ ಗುಟ್ಟು; ಮನೆಯಲ್ಲೇ ಹೆಲ್ತ್‌ ಚೆಕಪ್‌ ಮಾಡಿಕೊಳ್ಳಿ

ನಾಲಗೆಯ ಬಣ್ಣ ಹೇಳುತ್ತೆ ನಿಮ್ಮ ಆರೋಗ್ಯದ ಗುಟ್ಟು

Health Tips: ನಾಲಗೆ ಮಸುಕಾದ, ಪ್ರಕಾಶಮಾನವಾದ ಕೆಂಪು, ಬಿಳಿ, ಹಳದಿ, ನೇರಳೆ ಅಥವಾ ಕಪ್ಪು ಬಣ್ಣಕ್ಕೆ ತಿರುಗಿದರೆ ಅದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎನ್ನುವುದನ್ನು ಸೂಚಿಸುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಸುಮಾರು ಅರ್ಧದಷ್ಟು ಜನರು ಬಾಯಿ ಮತ್ತು ಹಲ್ಲಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮ್ಮ ಆರೋಗ್ಯದ ಬಗ್ಗೆ ನಾಲಗೆಯ ಬಣ್ಣ ಏನನ್ನು ಹೇಳುತ್ತದೆ ಎನ್ನುವ ಮಾಹಿತಿ ಇಲ್ಲಿದೆ.

ದಿನ ಭವಿಷ್ಯ, ಮೇ 17, 2026: ಈ ರಾಶಿಯವರಿಗೆ ಇಂದು ಸಾಮಾಜಿಕ ಚಟುವಟಿಕೆಯಲ್ಲಿ ಅತೀ ಹೆಚ್ಚಿನ ಯಶಸ್ಸು!

ಈ ರಾಶಿಯವರಿಗೆ ಇಂದು ಶುಭದಾಯಕ ದಿನ!

Horoscope Today May 17th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಷಪಕ್ಷದ, ಪ್ರತಿಭಾತಿಥಿ, ಕೃತಿಕಾ ನಕ್ಷತ್ರದ ಮೇ 17ನೇ ತಾರೀಖಿನ ಭಾನುವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

Viral Video: ಬರೇಲಿಯಲ್ಲಿ ರಣ ಭೀಕರ ಬಿರುಗಾಳಿ; ಶೆಡ್‌ನೊಂದಿಗೆ ಆಕಾಶಕ್ಕೆ ಹಾರಿದ ವ್ಯಕ್ತಿಯ ವಿಡಿಯೊ ವೈರಲ್‌

ಬರೇಲಿಯ ಬಿರುಗಾಳಿ ಹೊಡೆತಕ್ಕೆ ಸಿಲುಕಿ ಆಕಾಶಕ್ಕೆ ಹಾರಿದ ವ್ಯಕ್ತಿ

ಉತ್ತರ ಪ್ರದೇಶದ ಬರೇಲಿಯಲ್ಲಿ ಅಘಾತಕಾರಿ ಘಟನೆಯೊಂದು ನಡೆದಿದೆ. ಭೀಕರ ಬಿರುಗಾಳಿ ಹಾಗೂ ಮಳೆಯ ಆರ್ಭಟಕ್ಕೆ 100ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಈ ಗಾಳಿ ಹಾಗೂ ಮಳೆಯ ತೀವ್ರತೆಗೆ ಶೆಡ್‌ ಬಳಿ ನಿಂತಿದ್ದ ವ್ಯಕ್ತಿಯೊಬ್ಬ ಆಕಾಶಕ್ಕೆ ಹಾರಿ ಹೋಗಿದ್ದಾನೆ. ಈ ಭಯಾನಕ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾರತದಲ್ಲಿನ ಪ್ರಯಾಣ ಸುರಕ್ಷತೆ, ಸ್ವಚ್ಛತೆ ಬಗ್ಗೆ ಸಿಹಿ-ಕಹಿ ಅನುಭವ ಶೇರ್ ಮಾಡಿದ ಸಿಂಗಾಪುರ ಯುವತಿ; ಹೇಳಿದ್ದೇನು?

ಭಾರತದ ಪ್ರಯಾಣದ ಅನುಭವ ಹಂಚಿಕೊಂಡ ಸಿಂಗಾಪುರ ಯುವತಿ

Viral Video: ಸಿಂಗಾಪುರದ ಯುವತಿಯೊಬ್ಬರು ಭಾರತದಲ್ಲಿ ಎದುರಾದ ಸಿಹಿ ಹಾಗೂ ಕಹಿ ಅನುಭವ ಎರಡನ್ನು ಹಂಚಿಕೊಂಡಿದ್ದಾರೆ. ಅವರು ಉತ್ತರ ಭಾರತದ ಪ್ರವಾಸದ ವೇಳೆ ತಾಜ್ ಮಹಲ್, ಹವಾ ಮಹಲ್ ಹಾಗೂ ಕೆಂಪು ಕೋಟೆ ಸೇರಿ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.‌ ಉತ್ತರ ಭಾರತದ ಮೂಲಕ ಪ್ರಯಾಣಿಸುವ ತನ್ನ ಮೊದಲ ಅನಿಸಿಕೆಗಳನ್ನು ವಿವರಿಸುತ್ತ, ಅನುಭವವು ತೀವ್ರ ಅಸ್ತವ್ಯಸ್ತವಾಗಿತ್ತು ಎಂದು ಅವರು ಒಪ್ಪಿಕೊಂಡಿದ್ದಾರೆ.

ಪುತ್ರ ಶೇಕಡ 55ರಷ್ಟು ಅಂಕ ಗಳಿಸಿದ್ದಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕುಟುಂಬ; ಇನ್ನು ಡಿಸ್ಟಿಂಕ್ಷನ್‌ ಅಂಕ ಬಂದಿದ್ರೆ ಏನಾಗ್ತಿತ್ತು ಎಂದು ಕಾಲೆಳೆದ ನೆಟ್ಟಿಗರು

ಕಡಿಮೆ ಅಂಕ ಗಳಿಸಿದರೂ ಕೇಕ್ ಕತ್ತರಿಸಿ ಸಂಭ್ರಮಿಸಿದ ಮುಂಬೈ ಕುಟುಂಬ

Viral Video: ಮುಂಬೈಯ ಕುಟುಂಬವೊಂದು ತಮ್ಮ ಮಗ ಕಡಿಮೆ ಅಂಕ ಪಡೆದರೂ ಸಂಭ್ರಮಿಸುವ ಮೂಲಕ ಜನರ ಹೃದಯ ಗೆದ್ದಿದೆ. ಮಗ ಪರೀಕ್ಷೆಯಲ್ಲಿ ಶೇಕಡ 55ರಷ್ಟು ಅಂಕಗಳನ್ನು ಗಳಿಸಿದರೂ ಅಂಕ ಪಟ್ಟಿ ಆಕಾರದ ಕೇಕ್‌ ತರಿಸಿ ಅದನ್ನು ಕಟ್‌ ಮಾಡುವ ಮೂಲಕ ಯಶಸ್ಸನ್ನು ಕೊಂಡಾಡಿದೆ. ಕಡಿಮೆ ಅಂಕ ಪಡೆದಿದ್ದರೂ ಪೋಷಕರು ಬೆಂಬಲ ವ್ಯಕ್ತಪಡಿಸಿರುವ ರೀತಿ ಅನೇಕರನ್ನು ಭಾವುಕರನ್ನಾಗಿಸಿತು.

ಬೀದಿ ನಾಯಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕಾಮುಕನಿಗೆ ತಕ್ಕ ಪಾಠ: ಅಟ್ಟಾಡಿಸಿ ಹೊಡೆದ ಸ್ಥಳೀಯರು

ಬೀದಿ ನಾಯಿ ಮೇಲೆ ಅತ್ಯಾಚಾರ ಎಸಗಿದ ಕಾಮುಕನಿಗೆ ಪಾಠ ಕಲಿಸಿದ ಸ್ಥಳೀಯರು

Viral Vide: ಕಾಮುಕ ಬೀದಿ ನಾಯಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು ಇಡೀ ಸಮಾಜವೇ ತಲೆ ತಗ್ಗಿಸುವಂತಾಗಿದೆ. ಆರೋಪಿಯನ್ನು ಪೊಲೀಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು ಔಪಚಾರಿಕ ದೂರು ದಾಖಲಿಸಲಾಗಿದೆ. ಈ ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಮರುದಿನವೇ ಸಾರ್ವಜನಿಕರು ಆರೋಪಿಯನ್ನು ಹಿಡಿದು ತೀವ್ರವಾಗಿ ಥಳಿಸಿದ್ದಾರೆ..

ಕ್ಷುಲ್ಲಕ ವಿಚಾರಕ್ಕೆ ಯುವತಿಯ ಕಪಾಳಕ್ಕೆ ಬಾರಿಸಿದ ಯುವಕ; ಹಲ್ಲೆ ವಿಡಿಯೋ ವೈರಲ್‌

ಯುವತಿಯ ಕೆನ್ನೆಗೆ ಬಾರಿಸಿ ಕ್ರೂರವಾಗಿ ಹಲ್ಲೆ ನಡೆಸಿದ ಯುವಕ

Viral Video: ಲಿಫ್ಟ್ ವಿಚಾರವಾಗಿ ನಡೆದ ಸಣ್ಣ ಮಾತಿನ ಚಕಮಕಿಯಿಂದ ಯುವಕನೊಬ್ಬ ಯುವತಿ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಪುಣೆಯ ವಸತಿ ಕಟ್ಟಡ ವೊಂದರಲ್ಲಿ ಈ ಘಟನೆ ನಡೆದಿದ್ದು ಲಿಫ್ಟ್ ಬಳಿ ಮಹಿಳೆ ಮತ್ತು ಯುವಕನ ನಡುವೆ ನಡೆದ ಸಣ್ಣ ವಾಗ್ವಾದವು ದೈಹಿಕ ವಾಗ್ವಾದವಾಗಿ ಉಲ್ಬಣಗೊಂಡಿದೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ.

ಎನರ್ಜಿ ಡ್ರಿಂಕ್‌ ಕ್ಯಾನ್‌ನಲ್ಲಿ ಸತ್ತ ಇಲಿ ಪತ್ತೆ: ವಿಡಿಯೊ ನೋಡಿ ಕಿಡಿಕಾರಿದ ನೆಟ್ಟಿಗರು!

ಎನರ್ಜಿ ಡ್ರಿಂಕ್‌ ಒಳಗೆ ತೇಲುತ್ತಿರುವ ಸತ್ತ ಇಲಿ: ವಿಡಿಯೊ ನೋಡಿ!

Viral Video; ಎನರ್ಜಿ ಡ್ರಿಂಕ್ ಒಳಗೆ ಸತ್ತ ಇಲಿಯೊಂದು ಪತ್ತೆಯಾಗಿದ್ದು ಮಹಿಳೆಯೊಬ್ಬರಿಗೆ ಮರೆಯಲಾಗದ ಅನುಭವ ವಾಗಿದೆ.. ಪಾನೀಯದೊಳಗೆ ಇಲಿಯೊಂದು ತೆಲುತ್ತಿರುವುದು ಕಂಡು ಮಹಿಳೆ ದಂಗಾಗಿ ಹೋಗಿದ್ದಾಳೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾ ದಲ್ಲಿ ವೈರಲ್ ಆಗುತ್ತಿದ್ದಂತೆ ಆಹಾರ ಸುರಕ್ಷತೆ ಹಾಗೂ ಕಳಪೆ ಆಹಾರದ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದಾರೆ...

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೆಲ್ಲಿಕಾಯಿ ಸೇವನೆ ಮಾಡಿದರೆ ಈ ಆರೋಗ್ಯ ಲಾಭ ಸಿಗಲಿದೆ!

ಆಮ್ಲಾದಿಂದ ದೇಹಕ್ಕೆ ಈ ಆರೋಗ್ಯ ಪ್ರಯೋಜನ ಸಿಗಲಿದೆ!

Health Tips: ಅನಾರೋಗ್ಯಕ್ಕೆ ತುತ್ತಾಗಿದ್ದೇವೆ ಎಂದಾಗ ದುಬಾರಿ ಚಿಕಿತ್ಸೆಯ ಮೊರೆ ಹೋಗುತ್ತೇವೆ. ಆದರೆ ಕೆಲವೊಮ್ಮೆ ನಮ್ಮ ಅಡುಗೆ ಮನೆಯಲ್ಲೇ ಸಿಗುವ ಸುಲಭ ಆಹಾರದ ಮೂಲಕ ಚಿಕಿತ್ಸೆ ಪಡೆಯಬಹುದು. ಅದರಲ್ಲಿ ಪ್ರಮುಖವಾಗಿ ನೆಲ್ಲಿಕಾಯಿ ಕೂಡ ಒಂದಾಗಿದ್ದು ಗಾತ್ರದಲ್ಲಿ ಚಿಕ್ಕದಾಗಿದ್ದರೂ, ಇದು ವಿಟಮಿನ್ ಸಿ, ಉತ್ಕರ್ಷಣ ನಿರೋಧಕಗಳನ್ನು ನೀಡುತ್ತವೆ‌. ಆರೋಗ್ಯ ತಜ್ಞರ ಸಲಹೆಯಂತೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಸಿ ನೆಲ್ಲಿಕಾಯಿ ಸೇವನೆ ಮಾಡಿದರೆ ಹಲವು ಆರೋಗ್ಯ ಲಾಭವನ್ನು ಪಡೆಯಬಹುದು.

ದಿನ ಭವಿಷ್ಯ, ಮೇ 16, 2026: ಈ ರಾಶಿಯವರಿಗೆ ಇಂದು ಕಾರ್ಯಕ್ಷೇತ್ರದ ಜವಾಬ್ದಾರಿಗಳು ಹೆಚ್ಚಳ!

ಈ ರಾಶಿಯವರಿಗೆ ಇಂದು ಕೆಲಸ ಕಾರ್ಯದಲ್ಲಿ ಮುನ್ನಡೆ!

Horoscope Today May 16th: ಇಂದು ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷದ, ಅಮಾವಾಸ್ಯ ತಿಥಿ, ಭರಣಿ ನಕ್ಷತ್ರದ ಮೇ 16ನೇ ತಾರೀಖಿನ ಶನಿವಾರದ ಈ ದಿನದ ಭವಿಷ್ಯದ ಬಗ್ಗೆ ಖ್ಯಾತ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ಅವರು ತಿಳಿಸಿದ ಭವಿಷ್ಯ ಹೀಗಿದೆ..

Loading...