ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Pushpa Kumari

[email protected]

Articles
ನನ್ನ ಸ್ವಂತ ಮನೆಗೆ ಭೇಟಿ ನೀಡಲು ಅನುಮತಿ ಬೇಕೆ? ಪಿತೃ ಪ್ರಧಾನ ಮದುವೆ ಸಂಪ್ರದಾಯದ ವಿರುದ್ಧ ಯುವತಿ ಆಕ್ರೋಶ

ಮದುವೆ ಮಂಟಪದಲ್ಲೇ ಪಿತೃಪ್ರಧಾನ ಪದ್ಧತಿ ಖಂಡಿಸಿದ ವಧು

Viral News: ಮದುವೆಯೊಂದರಲ್ಲಿ ಪಿತೃ ಪ್ರಧಾನ ಭಾರತೀಯ ವಿವಾಹ ಆಚರಣೆಯ ಬಗ್ಗೆ ಯುವತಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ವಿವಾಹದ ವಿಧಿ ವಿಧಾನದ ಸಂದರ್ಭ ದಲ್ಲಿ ಪಾದ್ರಿಯೂ ವಧುವನ್ನು ತನ್ನ ಗಂಡನ ಒಪ್ಪಿಗೆಯಿಲ್ಲದೆ ತನ್ನ ಪೋಷಕರ ಮನೆಗೆ ಭೇಟಿ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡುವಂತೆ ಕೇಳುವಾಗ ವಧು ಮದುವೆ ಸಮಾರಂಭದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ.

ನೋಯ್ಡಾ ಕಾಲೇಜಿನಲ್ಲಿ ಜೂನಿಯರ್ ವಿದ್ಯಾರ್ಥಿನಿ ಮೇಲೆ ಹಲ್ಲೆ: ಕಪಾಳಮೋಕ್ಷ ಮಾಡಿ ದೌರ್ಜನ್ಯ!

ನೋಯ್ಡಾದಲ್ಲಿ ಸೀನಿಯರ್ ವಿದ್ಯಾರ್ಥಿಗಳ ರ‍್ಯಾಗಿಂಗ್: ನೆಟ್ಟಿಗರು ಕಿಡಿ

Viral Video: ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯದ ವಿಡಿಯೊವೊಂದು ವೈರಲ್ ಆಗಿದ್ದು ಸೀನಿಯರ್ ವಿದ್ಯಾರ್ಥಿಗಳ ಗುಂಪೊಂದು ಜೂನಿಯರ್ ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ನಡೆಸಿದೆ. ವಿದ್ಯಾರ್ಥಿನಿಯೊಬ್ಬಳು ಜೂನಿಯರ್ ವಿದ್ಯಾರ್ಥಿನಿಗೆ ಸರಿಯಾಗಿ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ‌. ಸದ್ಯ ಈ ವಿಡಿಯೊ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಆತಂಕವನ್ನು ವ್ಯಕ್ತ ಪಡಿಸಿದ್ದಾರೆ..

ದೆಹಲಿಯ‌ ನಡು ರಸ್ತೆಯಲ್ಲೇ ಹುಟ್ಟುಹಬ್ಬ ಆಚರಣೆ: ಸಂಚಾರಕ್ಕೆ ಅಡ್ಡಿಪಡಿಸಿದ ಯುವಕರ ವಿರುದ್ಧ ಕಿಡಿ

ಮಧ್ಯ ರಸ್ತೆಯಲ್ಲೇ ಬರ್ತ್ ಡೇ ಆಚರಿಸಿದ ಯುವಕರು

Viral Video: ದೆಹಲಿಯ ಜನನಿಬಿಡ ರಸ್ತೆಯಲ್ಲಿಯೇ ಯುವಕರ ಗುಂಪೊಂದು ಹುಟ್ಟುಹಬ್ಬ ಆಚರಿಸಿದೆ. ದೆಹಲಿಯ ಬಾಬರ್ ಪುರ ಎಂಬಲ್ಲಿ ಈ ಘಟನೆ ನಡೆದಿದೆ. ಸುತ್ತ-ಮುತ್ತ ವಾಹನಗಳು ಸ್ಥಗಿತಗೊಂಡು ನಿಂತಿದ್ದರೂ ಯುವಕರು ಕ್ಯಾರೇ ಎನ್ನದೇ ಆಚರಣೆಯಲ್ಲಿ ಮುಳುಗಿದ್ದಾರೆ. ಸಾರ್ವಜನಿಕ ರಸ್ತೆಯನ್ನು ಸಂಪೂರ್ಣವಾಗಿ ಬ್ಲಾಕ್ ಮಾಡಲಾಗಿದ್ದು ಇತರ ವಾಹನ ಸವಾರರು ಭಾರಿ ತೊಂದರೆ ಅನುಭವಿಸಿದ್ದಾರೆ.

ರೈಲಿನಲ್ಲಿ ಯುವತಿಯರ ಮೇಲೆ ಹಲ್ಲೆ: ದಿಟ್ಟಿಸಿ ನೋಡಿದ್ದನ್ನು ಪ್ರಶ್ನಿಸಿದ್ದಕ್ಕೆ ಕಪಾಳಮೋಕ್ಷ ಮಾಡಿದ ದುಷ್ಕರ್ಮಿ

ರೈಲಿನಲ್ಲಿ ಕಿರುಕುಳ ನೀಡಿ ಯುವತಿಯ ಕೆನ್ನೆಗೆ ಬಾರಿಸಿದ ದುಷ್ಕರ್ಮಿ

Viral Video: ಚಲಿಸುವ ರೈಲಿನಲ್ಲಿ ಯುವತಿಯರ ಗುಂಪಿನ ಮೇಲೆ ದುಷ್ಕರ್ಮಿಯೊಬ್ಬ ಹಲ್ಲೆ ಎಸಗಿದ್ದಾನೆ. ಯುವತಿಯರ ಗುಂಪು ಮತ್ತು ಪುರುಷ ಪ್ರಯಾಣಿಕನ ನಡುವೆ ವಾಗ್ವಾದ ಉಂಟಾಗಿದ್ದು, ಮಾತಿನ ಚಕಮಕಿಯ ನಂತರ ಅದು ದೈಹಿಕ ಹಿಂಸೆಯಲ್ಲಿ ಕೊನೆಗೊಂಡಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಕಿಡಿಕಾರಿದ್ದಾರೆ.

ಚಲಿಸುವ ಬೈಕ್‌ನಲ್ಲೇ ಯುವತಿಯ ಕೂದಲು ಎಳೆದು ಹಲ್ಲೆ ನಡೆಸಿದ ಯುವಕ: ವಿಡಿಯೊ ವೈರಲ್

ಯುವತಿಯ ಕೂದಲು ಎಳೆದು ಹಲ್ಲೆ ಎಸಗಿದ ಯುವಕ: ನೆಟ್ಟಿಗರು ಕಿಡಿ

Viral Video: ಒಡಿಶಾದ ಭುವನೇಶ್ವರದದಲ್ಲಿನ ಅಘಾತಕಾರಿ ದೃಶ್ಯವೊಂದು ವೈರಲ್ ಆಗಿದೆ. ವ್ಯಕ್ತಿಯೊಬ್ಬ ಚಲಿಸುವ ಬೈಕ್‌ನಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಇದಾಗಿದೆ. ಒಂದು ಕೈಯಲ್ಲಿ ಬೈಕ್ ಚಲಾಯಿಸುತ್ತ ಮತ್ತೊಂದು ಕೈಯಲ್ಲಿ ಯುವತಿಯ ಕೂದಲನ್ನು ಎಳೆಯುತ್ತಾ ಹಲ್ಲೆ ಮಾಡಿದ್ದಾನೆ‌. ಈ ವಿಡಿಯೊ ನೋಡಿದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾರತದ ಈ ವೈಶಿಷ್ಟ್ಯ ಜಗತ್ತಿಗೇ ಮಾದರಿ: ವಿದೇಶಿ ಮಹಿಳೆಯ ಮೆಚ್ಚುಗೆ

ಭಾರತದ ಸೌಕರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಪೋಲೆಂಡ್ ಮಹಿಳೆ

Viral Video: ಹತ್ತು ವರ್ಷಗಳಿಂದ ಭಾರತದಲ್ಲಿ ಬದುಕು ಕಟ್ಟಿರುವ ಪೋಲೆಂಡ್‌ನ ಮಹಿಳೆಯೊಬ್ಬರು ಇಲ್ಲಿನ ದೈನಂದಿನ ಜೀವನದದ ಸೌಕರ್ಯಗಳ ಬಗ್ಗೆ ವಿಡಿಯೊ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಈ ಅಭ್ಯಾಸವನ್ನು ಇತರ ರಾಷ್ಟ್ರಗಳು ನೋಡಿ ಕಲಿಯಬೇಕು ಎಂದು ಅವರು ಇಲ್ಲಿನ ಹಲವು ವೈಶಿಷ್ಟ್ಯವನ್ನು ತೋರ್ಪಡಿಸಿದ್ದಾರೆ.

ರೈಲಿನ ಸೀಟ್ ಕವರ್ ಕಿತ್ತು ಹಾಕಿ ಪುಂಡಾಟ ಮೆರೆದ ಯುವಕರು; ದಂಡ ವಸೂಲಿ ಮಾಡಿ ಎಂದ ನೆಟ್ಟಿಗರು

ರೈಲಿನ ಸೀಟ್ ಕವರ್ ಕಿತ್ತು ಹಾಕಿ ಹುಚ್ಚಾಟ ಮೆರೆದ ಯುವಕರು

Viral Video: ಇಲ್ಲೊಂದು ಯುವಕರ ಗುಂಪು ವೈರಲ್ ಆಗುವ ಉದ್ದೇಶದಿಂದ ಸಾರ್ವಜನಿಕ ವಸ್ತುವನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಸೀಟು ಹರಿದು ಹಾಕಿ ಹುಚ್ಚಾಟ ಮರೆದಿದೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ನೆಟ್ಟಿಗರು ಯುವಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Health Tips: ಬ್ರೇಕ್‌ಫಾಸ್ಟ್‌ ಸ್ಕಿಪ್‌ ಮಾಡ್ತಿದ್ದೀರಾ? ಈ ಆರೋಗ್ಯ ಸಮಸ್ಯೆ ಕಾಡಬಹುದು ಎಚ್ಚರ!

ಬೆಳಗಿನ ಉಪಾಹಾರ ತ್ಯಜಿಸಿದರೆ ಈ ಸಮಸ್ಯೆ ನಿಮ್ಮನ್ನು ಕಾಡಬಹುದು

Skipping Breakfast: ನೀವು ಸೇವಿಸುವ ಆಹಾರ ನಿಮ್ಮ ದೈಹಿಕ ಆರೋಗ್ಯ ಮಾತ್ರವಲ್ಲದೆ ಮನಸ್ಥಿತಿ ಮೇಲೂ ಪರಿಣಾಮ ಬೀರುತ್ತದೆ. ಸಮಯಕ್ಕೆ ಸರಿಯಾಗಿ ಆಹಾರ ಸೇವಿಸದಿರುವುದು ನಿಮ್ಮ ಕೆಲಸದ ಮೇಲೆ ಪರಿಣಾಮ ಬೀರಲಿದ್ದು, ಒತ್ತಡಕ್ಕೂ ಕಾರಣವಾಗುತ್ತದೆ‌. ನಮ್ಮ ಮೆದುಳು ದಿನಕ್ಕೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ಕೇವಲ ಒಂದು ಗ್ಲಾಸ್ ಟಿ ಅಥವಾ ಬಿಸ್ಕೆಟ್‌ ನಮ್ಮ ಮನಸ್ಥಿತಿಯನ್ನು ಕುಗ್ಗಿಸಬಹುದು.

ದಿನ ಭವಿಷ್ಯ, ಮೇ 4, 2026: ಅಭಿವೃದ್ಧಿ ಹೊಂದಲು ಇದು ಉತ್ತಮ ಸಮಯ; ಆರೋಗ್ಯದಲ್ಲೂ ಸುಧಾರಣೆ

ಈ ರಾಶಿಯವರ ಬದುಕು ಇಂದು ಚಿನ್ನದಂತೆ ಹೊಳೆಯಬಹುದು

Horoscope Today May 4: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಕೃಷ್ಣಪಕ್ಷ, ತೃತೀಯ ತಿಥಿ, ಅನುರಾಧ ನಕ್ಷತ್ರದ ಮೇ 4ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿರಲಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಕಲ್ಲಂಗಡಿ ಹಣ್ಣು ವಿಷಕಾರಿಯೆ? ಮುಂಬೈ ಘಟನೆ ಬಳಿಕ ಕೊಳೆತು ಹೋಗಿರುವ ಹಣ್ಣಿನ ವಿಡಿಯೊ ಶೇರ್ ಮಾಡಿದ ನಟ

ಕಲ್ಲಂಗಡಿ ಹಣ್ಣು ವಿಷಕಾರಿಯೇ? ಖ್ಯಾತ ನಟ ವಿಡಿಯೊದಲ್ಲಿ ಹೇಳಿದ್ದೇನು?

Viral Video: ಮುಂಬೈಯಲ್ಲಿ ಅಬ್ದುಲ್ಲ ದಕೋಡಿಯಾ ಕುಟುಂಬ ಇತ್ತೀಚೆಗೆ ತಡರಾತ್ರಿ ಕಲ್ಲಂಗಡಿ ಹಣ್ಣು ತಿಂದು ಸಾವೀಗಿಡಾಗಿತ್ತು. ಇದರ ಬೆನ್ನಲ್ಲೇ ಇದೀಗ ಮರಾಠಿ ನಟ ಶಶಾಂಕ್ ಕೇತ್ಕರ್ ಕಲ್ಲಂಗಡಿ ಹಣ್ಣಿನಿಂದ ನೊರೆ ಹೊರ ಬರುತ್ತಿರುವುದನ್ನು ತೋರಿಸುವ ವಿಡಿಯೊವೊಂದು ಶೇರ್ ಮಾಡಿದ್ದಾರೆ. ಸದ್ಯ ಈ ದೃಶ್ಯ ನೋಡಿದ ಅನೇಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸ್ಮಶಾನದಲ್ಲಿ ನಡೆದ ಮದುವೆಯನ್ನು ಎಂದಾದರೂ ನೋಡಿದ್ದೀರಾ? ಉತ್ತರಾಖಂಡದಲ್ಲಿ ನಡೆದ ವಿಚಿತ್ರ ಆಚರಣೆಗೆ ನೆಟ್ಟಿಗರು ಕಿಡಿ

ಸ್ಮಶಾನದಲ್ಲಿ ಮದುವೆ: ಧಾರ್ಮಿಕ ಆಚರಣೆಗೆ ದಕ್ಕೆ ಎಂದ ನೆಟ್ಟಿಗರು

Viral Video: ಸ್ಮಶಾನದಲ್ಲಿ ಮದುವೆ ಇಟ್ಟುಕೊಂಡಿರುವುದನ್ನು ನೀವೆಲ್ಲಾದರೂ ಕೇಳಿದ್ದೀರಾ? ನಿಜಕ್ಕೂ ಇದೆಂಥ ವಿಚಿತ್ರ ಮದುವೆ ಎಂದು ನಿಮಗೂ ಅನಿಸಿರಬಹುದು. ಹೌದು, ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದ ಹತ್ತಿರ ಇರುವ ಸ್ಮಶಾನದಲ್ಲಿ ನಡೆದ ವಿವಾಹದ ಸುದ್ದಿಯೊಂದು ಭಾರೀ ವೈರಲ್ ಆಗಿದೆ.

ವಿದ್ಯಾರ್ಥಿಗಳ ಆತ್ಮಹತ್ಯೆ ತಡೆಯಲು ಹಾಸ್ಟೆಲ್ ಫ್ಯಾನ್‌ಗೆ ಕಬ್ಬಿಣದ ಪಂಜರ ಅಳವಡಿಕೆ; ಇದರ ಬದಲು ಎಸಿ ಅಳವಡಿಸಬಹುದಿತ್ತು ಎಂದ ನೆಟ್ಟಿಗರು

ಆತ್ಮಹತ್ಯೆ ತಡೆಗೆ ಫ್ಯಾನ್‌ ಸುತ್ತಲೂ ಕಬ್ಬಿಣ ಪಂಜರ ಅಳವಡಿಕೆ

Viral Video: ರಾಜಸ್ಥಾನದ ಕೋಟಾ ಪ್ರಮುಖ ಶಿಕ್ಷಣ ಕೇಂದ್ರವಾಗಿ ಹೆಸರು ಪಡೆದಿದ್ದರೂ ಇಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿ ನಡೆಯುತ್ತಿದೆ. ಇದನ್ನು ತಡೆಯುವುದಕ್ಕಾಗಿ ಕೋಟಾದ ಹಾಸ್ಟೆಲ್‌ಗಳಲ್ಲಿ ಸೀಲಿಂಗ್ ಫ್ಯಾನ್‌ಗಳ ಸುತ್ತಲೂ ಕಬ್ಬಿಣದ ಪಂಜರ ಅಳವಡಿಸಲಾಗುತ್ತಿದೆ. ಕೋಟಾ ಹಾಸ್ಟೆಲ್‌ ಒಳಗಿನ ವಿಡಿಯೊ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಕಾರಣವಾಗಿದೆ.

ಹರಿದ್ವಾರದ ಗಂಗಾ ನದಿಯಲ್ಲಿ ಶ್ವಾನಕ್ಕೆ ಸ್ನಾನ ಮಾಡಿಸಿದ ಮಹಿಳೆ: ನೆಟ್ಟಿಗರು ಕಿಡಿ

ಸಾಕು ನಾಯಿಗೆ ಹರಿದ್ವಾರದ ಗಂಗಾ ನದಿಯಲ್ಲಿ ಸ್ನಾನ: ಭಕ್ತರ ಆಕ್ರೋಶ

Viral Video: ಮಹಿಳೆಯೊಬ್ಬರು ಸಾಕು ನಾಯಿಗೆ ಗಂಗಾ ನದಿಯಲ್ಲಿ ಸ್ನಾನ ಮಾಡಿಸಿರುವ ಘಟನೆ ನಡೆದಿದೆ. ಈ ದೃಶ್ಯವು ಸ್ಥಳದಲ್ಲಿದ್ದ ಜನರ ಜತೆ ಬಿಸಿ ವಾಗ್ವಾದಕ್ಕೆ ಕಾರಣವಾಯಿತು‌. ಹಲವು ಭಕ್ತರು ಆಕೆಯ ಕೃತ್ಯವನ್ನು ಖಂಡಿಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.

ನಗುವಿನ ಕ್ಷಣವಾಗಿ ಬದಲಾದ ಭಾವನಾತ್ಮಕ ವಿದಾಯ: ಬೆಂಗಳೂರು ಉದ್ಯೋಗಿಯ ರಾಜೀನಾಮೆ ಮೇಲ್‌ ಕಂಡು ನಕ್ಕ ಸಹೋದ್ಯೋಗಿ

ಮೀಮ್ ಶೇರ್ ಮಾಡಿ ಕೆಲಸಕ್ಕೆ ವಿದಾಯ ಹೇಳಿದ ಬೆಂಗಳೂರಿನ ಯುವಕ

Viral Video: ಬೆಂಗಳೂರಿನ ಉದ್ಯೋಗಿಯೊಬ್ಬರು ಅಸಾಮಾನ್ಯ ಭಾವನಾತ್ಮಕ ವಿದಾಯ ಸಹೋದ್ಯೋಗಿಗಳನ್ನು ನಗುವಿನ ಅಲೆಯಲ್ಲಿ ತೇಲುವಂತೆ ಮಾಡಿದೆ. ರಾಜೀನಾಮೆ ಪತ್ರವನ್ನು ಅವರು ವಿಭಿನ್ನವಾಗಿ ಮೇಲ್ ಮಾಡಿ ವಿದಾಯ ಹೇಳಿದ್ದಾರೆ. ತಮಾಷೆಯ ಮೀಮ್‌ ಕಳುಹಿಸುವ ಮೂಲಕ ಅವರು ಸಹೋದ್ಯೋಗಿಗಳಿಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಎಸಿ ಸ್ಫೋಟದಿಂದ ದೆಹಲಿಯ ವಸತಿಗೃಹದಲ್ಲಿ ಭೀಕರ ಅಗ್ನಿ ದುರಂತ: 9 ಮಂದಿ ಸಾವು, ಹಲವರಿಗೆ ಗಾಯ

ದೆಹಲಿಯಲ್ಲಿ ಬೆಂಕಿ ಅವಘಡ: 9 ಮಂದಿ ಸಾವು, ಮುಂದುವರಿದ ರಕ್ಷಣಾ ಕಾರ್ಯಾಚರಣೆ

Fire Accident: ದೆಹಲಿಯ ವಿವೇಕ್ ವಿಹಾರ್‌ನ ವಸತಿ ಗೃಹದಲ್ಲಿ ಅಘಾತಕಾರಿ ಘಟನೆ ನಡೆದಿದ್ದು ಭೀಕರ ಅಗ್ನಿ ದುರಂತದಲ್ಲಿ 9 ಜನ ಸಾವನ್ನಪ್ಪಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಎಸಿ ಸ್ಫೋಟದಿಂದ ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ. ಸದ್ಯ ಇದರ ಭಯಾನಕ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

Edible Gold: ಸಿಹಿ ಖಾದ್ಯಗಳಲ್ಲಿ ಚಿನ್ನದ ಜರಿ ಬಳಕೆ; ಇದರಿಂದ ಆರೋಗ್ಯಕ್ಕೆ ದೊರೆಯುವ ಲಾಭವೇನು?

ಖಾದ್ಯಗಳಲ್ಲಿ ಚಿನ್ನದ ಜರಿ ಬಳಕೆ: ಇದರಲ್ಲಿದೆ ಹಲವು ಉತ್ತಮ ಗುಣ

Health Tips: ಕೆಲವು ಸಿಹಿ ಖಾದ್ಯಗಳ ಮೇಲೆ ಬೆಳ್ಳಿಯ ಜರಿಯನ್ನು ಅಂಟಿಸುವುದು ಮಾಮೂಲಿ. ಅಂಥದ್ದನ್ನೇ ನಿಜವಾದ ಚಿನ್ನದಲ್ಲೂ ಮಾಡಿ ಅಂಟಿಸಬಹುದು, ಅದೇ ತಿನ್ನುವ ಚಿನ್ನ. ಅದನ್ನು ಮಾಡುವುದಕ್ಕೆ ಕ್ರಮವೂ ಇದೆ. ಶುದ್ಧ ಚಿನ್ನವನ್ನು 2,000 ಡಿಗ್ರಿ ಫ್ಯಾ.ಗಿಂತಲೂ ಹೆಚ್ಚಿನ ಶಾಖದಲ್ಲಿ ಕರಗಿಸಿ, ಕುದಿಸಿ, ಬಾರ್‌ ರೀತಿಯಲ್ಲಿ ಮಾಡಲಾಗುತ್ತದೆ. ಈ ಬಾರ್‌ ನಿಗದಿತ ಗಾತ್ರಕ್ಕೆ ತಲುಪಿದ ಮೇಲೆ, ಅದನ್ನು ತಟ್ಟಿ, ಕುಟ್ಟಿ 0.0001 ಮಿಲಿ ಮೀ. ಗಾತ್ರಕ್ಕೆ, ಅಂದರೆ ತೆಳ್ಳಾತಿತೆಳ್ಳನೆಯ ಹಾಳೆಯಂತೆ ಮಾಡ ಲಾಗುತ್ತದೆ. ಇದನ್ನೇ ಅಪರೂಪದ ಖಾದ್ಯಗಳಲ್ಲಿ ತಿನ್ನುವ ಚಿನ್ನವಾಗಿ ಬಳಸಲಾಗುತ್ತದೆ. ಚಿನ್ನ ತಿನ್ನುವುದೇನೋ ಸರಿ, ಆದರೆ ಏನಿದರ ಲಾಭಗಳು?

ದಿನ ಭವಿಷ್ಯ, ಮೇ 3, 2026: ಇಂದು ಆರ್ಥಿಕ ಲಾಭ, ಕೆಲಸ-ಕಾರ್ಯದಲ್ಲಿ ಮುನ್ನಡೆ

ಇಂದು ಈ ರಾಶಿಯವರು ಮುಟ್ಟಿದ್ದೆಲ್ಲ ಚಿನ್ನ

Horoscope Today May 3: ಪರಾಭವ ಸಂವತ್ಸರ, ಉತ್ತರಾಯಣ, ವಸಂತ ಋತು, ವೈಶಾಖ ಮಾಸ, ಶುಕ್ಲಪಕ್ಷ, ದ್ವಿತೀಯ ತಿಥಿ, ಅನುರಾಧ ನಕ್ಷತ್ರದ ಮೇ 3ನೇ ತಾರೀಕಿನ ಈ ದಿನದ ಭವಿಷ್ಯ ಹೇಗಿದೆ ಎನ್ನುವ ಬಗ್ಗೆ ಜ್ಯೋತಿಷಿ ಮಾತಾ ಪ್ರವ್ರಾಜಿತಾ ಜ್ಯೋತಿಷ್ಮತೀ ವಿವರಿಸಿದ್ದಾರೆ.

ಶ್ರೀಮಂತಿಕೆ ಇದ್ದರೆ ಸಾಲದು ನಾಗರಿಕ ಪ್ರಜ್ಞೆಯೂ ಬೇಕು; ಮನಾಲಿಯ ಚಾರ್ಜಿಂಗ್ ಪಾಯಿಂಟ್ ಕಸದ ಬುಟ್ಟಿಯನ್ನಾಗಿಸಿದ ಪ್ರವಾಸಿಗರು

ಮನಾಲಿಯ ಚಾರ್ಜಿಂಗ್ ಪಾಯಿಂಟ್ ಈಗ ಕಸದ ಬುಟ್ಟಿ!

Viral Video: ಹಿಮಾಚಲ ಪ್ರದೇಶದ ಪ್ರವಾಸಿ ಸ್ಥಳ ಮನಾಲಿಯಲ್ಲಿ ಚಾರ್ಜಿಂಗ್ ಪಾಯಿಂಟ್ ಸ್ಥಳವನ್ನು ಕಸದ ಬುಟ್ಟಿಯಾಗಿ ಜನರು ಬಳಸಿಕೊಂಡಿದ್ದಾರೆ. ಇದರ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ಸ್ಥಳದಲ್ಲಿ ಶಿಸ್ತಿನ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇರಳಂ ದೇವಾಲಯದಲ್ಲಿ ಆನೆಗಳ ಅಟ್ಟಹಾಸ: ಇಬ್ಬರು ಸಾವು, ಅಡ್ಡ ಸಿಕ್ಕಿದ ಕಾರು, ಸ್ಕೂಟರ್‌ ಪುಡಿಪುಡಿ

ಆನೆ ದಾಳಿಗೆ ಕೇರಳಂ ದೇವಸ್ಥಾನ ಉತ್ಸವದ ವೇಳೆ ಇಬ್ಬರು ಬಲಿ

Viral Video: ಕೇರಳಂನ ಎರಡು ದೇವಾಲಯ ಉತ್ಸವಗಳಲ್ಲಿ ಆನೆಯ ದಾಳಿಯಿಂದ ಇಬ್ಬರು ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ. ಎರ್ನಾಕುಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಎರಡು ಪ್ರತ್ಯೇಕ ಘಟನೆಗಳು ನಡೆದಿದ್ದು ಓರ್ವ ಮಾವುತ ಹಾಗೂ ಲಾರಿ ಚಾಲಕ ಮೃತ ಪಟ್ಟಿದ್ದಾರೆ‌. ಆನೆ ಅಟ್ಟಹಾಸ ಮೆರೆಯುತ್ತಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.

ಜಬಲ್ಪುರ ದೋಣಿ ದುರಂತದ ಕೊನೆ ಕ್ಷಣದ ವಿಡಿಯೊ: ಆಡಳಿತ ಮಂಡಳಿಯ ವೈಫಲ್ಯವೇ ಕಾರಣ?

ಜಬಲ್ಪುರ ಕ್ರೂಸ್ ದುರಂತಕ್ಕೆ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ?

Viral Video: ನದಿಯ ಅಲೆಗಳ ಮೇಲೆ ಸಾಗುತ್ತಿದ್ದ ದೋಣಿಯೇ ಪ್ರಯಾಣಿಕರ ಪಾಲಿಗೆ ಯಮ ನಾಗಬಹುದು ಎನ್ನುವ ಊಹೆಯೂ ಯಾರಿಗೂ ಇರಿಲಲ್ಲ. ಈ ದುರ್ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 28 ಮಂದಿಯನ್ನು ರಕ್ಷಿಸಲಾಗಿದೆ. ಇನ್ನೂ 6 ಮಂದಿ ನಾಪತ್ತೆಯಾಗಿದ್ದಾರೆ. ಈ ಘಟನೆಗೂ ಮೊದಲು ಚಿತ್ರೀಕರಿಸಿದ ವಿಡಿಯೊವೊಂದು ವೈರಲ್ ಆಗಿದ್ದು ಅಲ್ಲಿನ ಸಿಬ್ಬಂದಿಗಳು ಯಾವುದೇ ಸುರಕ್ಷತೆ ಮಾನದಂಡಗಳನ್ನು ಪಾಲಿಸಿಲ್ಲ. ಸದ್ಯ ಪ್ರವಾಸಿಗರ ಜೀವದ ಜೊತೆ ಬೇಜವ್ದಾರಿ ವಹಿಸಿದ ಅಲ್ಲಿನ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಕಾಳಿಂಗ ಸರ್ಪದ ಜೊತೆ ಹುಚ್ಚಾಟ; ಪ್ರಾಣವನ್ನೇ ಕಳೆದುಕೊಂಡ ಉರಗ ತಜ್ಞ, ಭಯಾನಕ ವಿಡಿಯೊ ವೈರಲ್

ಕಾಳಿಂಗ ಸರ್ಪ ಹಿಡಿಯಲು ಹೋಗಿ ಉರಗ ತಜ್ಞ ಸಾವು

Viral Video: ವಿಷಕಾರಿ ಹಾವಿನ ಜೊತೆ ಹುಚ್ಚಾಟ ಮೆರೆಯುವುದು ಅಷ್ಟು ಸುಲಭದ ಮಾತಲ್ಲ.. ನಾಗರ ಹಾವು, ಕಾಳಿಂಗ ಸರ್ಪ ಹೀಗೆ ವಿಷಕಾರಿ ಹಾವನ್ನು ಹಿಡಿಯಲು ಹೋಗಿ ಪ್ರಾಣ ಕಳೆದುಕೊಂಡವರು ಅನೇಕರು ಇದ್ದಾರೆ‌. ಇದಕ್ಕೆ ಸಾಕ್ಷಿ ಎಂಬಂತೆ ಯಾವುದೇ ಸುರಕ್ಷತಾ ಮಾರ್ಗ ಬಳಸದೇ ಉರಗ ತಜ್ಞ ಕಾಳಿಂಗ ಸರ್ಪವನ್ನು ಹಿಡಿಯಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಸದ್ಯ ಈ ಅಘಾತಕಾರಿ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮದುವೆ ಮಂಟಪದಲ್ಲಿ ವರನಿಗೆ ಹಾರ ಹಾಕುವ ಬದಲು ಪ್ರಿಯತಮನಿಗೆ ಹಾರ ಹಾಕಿದ ವಧು: ವಿಡಿಯೊ ವೈರಲ್

ಪ್ರಿಯತಮನಿಗೆ ಹಾರ ಹಾಕಿ ವರನಿಗೆ ಶಾಕ್ ಕೊಟ್ಟ ವಧು: ವಿಡಿಯೊ ಇಲ್ಲಿದೆ!

Viral Video: ಯುವತಿಯೊಬ್ಬಳು ಮದುವೆ ಮಂಟಪದಲ್ಲಿ ವರನಿಗೆ ಹಾರ ಹಾಕುವ ಬದಲು ಮಂಟದ ಕೆಳಗೆ ಓಡೋಡಿ ಬಂದು ಪ್ರಿಯತಮನಿಗೆ ಹಾರ ಹಾಕಿದ ವಿಡಿಯೊ ವೈರಲ್ ಆಗಿದೆ. ಇಂದಿನ ಜಾನಂಗದ ಮದುವೆ ಬಗ್ಗೆ ನೆಟ್ಟಿಗರು ಆತಂಕ ವ್ಯಕ್ತಪಡಿಸಿದ್ದು ಹಲವಾರು ಆಕ್ರೋಶ ಹೊರಹಾಕಿದ್ದಾರೆ.

ಕೊಲೆ ಪ್ರಕರಣಕ್ಕೆ ಸಾಕ್ಷಿ ನೀಡಿದ ಸಾಕು ಗಿಳಿ: ಪತಿಯನ್ನು ಕೊಂದ ಪತ್ನಿಯ ಕೃತ್ಯ ಬೆಳಕಿಗೆ ಬಂದಿದ್ದು ಹೇಗೆ?

ಕೊಲೆ ಪ್ರಕರಣವನ್ನು ಭೇದಿಸಲು ಪೊಲೀಸರಿಗೆ ನೆರವಾದ ಸಾಕು ಗಿಣಿ!

Viral News: ಅಮೆರಿಕದ ಮಿಚಿಗನ್ ನಲ್ಲಿ ಸಾಕು ಗಿಣಿಯೊಂದು ಅಪರಾಧಿಯನ್ನು ಪತ್ತೆ ಹಚ್ಚಿದ ಘಟನೆಯೊಂದು ನಡೆದಿದೆ. ಮನೆಯ ಯಜಮಾನನ ಕೊಲೆಯನ್ನು ಕಣ್ಣಾರೆ ಕಂಡ ಗಿಳಿಯೂ ಮಾಲೀಕರ ಸಾವಿಗೆ ಸಂಬಂಧಿಸಿದ ವಾಕ್ಯವನ್ನು ಪದೇ ಪದೇ ಹೇಳುವ ಮೂಲಕ ಕೊಲೆಗೆ ಸಾಕ್ಷಿ ನೀಡಿದೆ. ಸದ್ಯ ಈ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮಲೇರಿಯಾ ಅಥವಾ ಡೆಂಗೆ: ಯಾವುದೆಂದು ಹೇಗೆ ತಿಳಿಯಬೇಕು? ತಡೆಗಟ್ಟುವುದು ಹೇಗೆ?

ಮಲೇರಿಯಾ ಅಥವಾ ಡೆಂಗ್ಯು; ಪತ್ತೆ ಹಚ್ಚುವುದು ಹೇಗೆ?

Health Tips: ಬೇಸಗೆ ರಜೆಯೆಂಬ ನೆವದಲ್ಲಿ ಪ್ರಯಾಣ ಮಾಡುವಾಗ ಸೊಳ್ಳೆಗಳ ಕಾಟವಿರುವ ಊರು ಎದುರಾದರೂ ಆತಂಕವಾಗುತ್ತದೆ. ಪ್ರಯಾಣಿಸುವಾಗ ಸಾಂಕ್ರಾಮಿಕಗಳ ಬಗ್ಗೆಯೂ ಗಮನ ಇರಿಸುವುದು ಅನಿವಾರ್ಯ. ಹಾಗೆಂದು ಸೊಳ್ಳೆಯಿಂದ ಬರುವಂಥ ರೋಗಗಳೆಲ್ಲ ಒಂದೇ ರೀತಿಯವಲ್ಲ. ಪ್ರತಿ ಯೊಂದು ರೋಗಕ್ಕೂ ಅದರದ್ದೇ ಆದ ಭಿನ್ನ ಸ್ವರೂಪವಿದೆ, ಲಕ್ಷಣಗಳಿವೆ, ಹಾಗಾಗಿ ಚಿಕಿತ್ಸೆಯೂ ಬೇರೆ ಆಗಬೇಕು. ಹಾಗಾಗಿ ಈ ಬಗ್ಗೆ ಸರಿಯಾದ ಮಾಹಿತಿಯ ಕೊರತೆಯಿದ್ದರೆ, ಸಮಸ್ಯೆ ಬಿಗಡಾಯಿಸುತ್ತದೆ. ಈ ನಿಟ್ಟಿನಲ್ಲಿ, ಸೊಳ್ಳೆಗಳಿಂದಲೇ ಪ್ರಸರಣವಾಗುವ ಮಲೇರಿಯಾ ಮತ್ತು ಡೆಂಗೆ ರೋಗಗಳಿಗೆ ವ್ಯತ್ಯಾಸವೇನು? ನಿಮ್ಮ ಗೊಂದಲಗಳಿಗೆ ಇಲ್ಲಿದೆ ಉತ್ತರ.

Loading...