ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರಿಕೆಟ್‌

ಇನ್ನು ಮುಂದೆ ದಾಖಲೆಗಳನ್ನು ಬೆನ್ನಟ್ಟುವುದಿಲ್ಲ, ಪ್ರತಿ ಕ್ಷಣವನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೇನೆ; ಪಂದ್ಯದ ಬಳಿಕ ಕೊಹ್ಲಿ ಭಾವುಕ

ಪ್ರತಿ ಕ್ಷಣವನ್ನು ಆನಂದಿಸಲು ಪ್ರಯತ್ನಿಸುತ್ತಿದ್ದೇನೆ; ಕೊಹ್ಲಿ ಭಾವುಕ ನುಡಿ

IPL 2026: ಕಳೆದ ಎರಡು ಪಂದ್ಯಗಳಲ್ಲಿ ಶೂನ್ಯ ಸುತ್ತಿದ್ದ ವಿರಾಟ್‌ ಕೊಹ್ಲಿ ಈ ಪಂದ್ಯದಲ್ಲಿ ಶತಕ ಬಾರಿಸಲೆಂದೇ ಪಣತೊಟ್ಟು ಬಂದಂತಿತ್ತು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್‌ ನಡೆಸಿದ ಕೊಹ್ಲಿ, ಪ್ರತಿ ಹೊಡೆತವನ್ನು ಆನಂದಿಸುತ್ತಲೇ ಇದ್ದರು. 60 ಎಸೆತಗಳಲ್ಲಿ ಅಜೇಯ 105 ರನ್ ಗಳಿಸಿದರು.

Virat Kohli: ಒಂದು ಶತಕ, ಹಲವು ದಾಖಲೆ ಬರೆದ ವಿರಾಟ್‌ ಕೊಹ್ಲಿ

ಒಂದು ಶತಕ, ಹಲವು ದಾಖಲೆ ಬರೆದ ವಿರಾಟ್‌ ಕೊಹ್ಲಿ

IPL 2026: ವಿರಾಟ್ ಕೊಹ್ಲಿ ಅತಿ ಕಡಿಮೆ ಟಿ20 ಮಾದರಿಯಲ್ಲಿ 14000 ರನ್ ಗಳಿಸಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 37 ವರ್ಷ ವಯಸ್ಸಿನ ಅವರು ಈಗಾಗಲೇ 13000 ಕ್ಕೂ ಹೆಚ್ಚು ಟಿ20 ರನ್ ಗಳಿಸಿದ ಏಕೈಕ ಭಾರತೀಯರಾಗಿದ್ದರು. ಪಂದ್ಯದಲ್ಲಿ 78 ರನ್‌ ಪೂರ್ತಿಗೊಳಿಸುತ್ತಿದ್ದಂತೆ ಅವರು ಈ ಮೈಲುಗಲ್ಲು ನೆಟ್ಟರು.

RCB vs KKR: ವಿರಾಟ್‌ ಕೊಹ್ಲಿ ಶತಕದ ಬಲದಿಂದ ಗೆದ್ದು ಅಗ್ರ ಸ್ಥಾನಕ್ಕೆ ಮರಳಿದ ಆರ್‌ಸಿಬಿ!

ವಿರಾಟ್‌ ಕೊಹ್ಲಿ ಶತಕದ ಬಲದಿಂದ ಗೆದ್ದು ಅಗ್ರ ಸ್ಥಾನಕ್ಕೇರಿದ ಆರ್‌ಸಿಬಿ!

RCB vs KKR Match Highlights: ವಿರಾಟ್‌ ಕೊಹ್ಲಿ ಶತಕದ ಬಲದಿಂದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಎದುರಾಳಿ ಕೋಲ್ಕತಾ ನೈಟ್‌ ರೈಡರ್ಸ್‌ ಎದುರು 6 ವಿಕೆಟ್‌ಗಳ ಸುಲಭ ಗೆಲುವು ಪಡೆಯಿತು. ಆ ಮೂಲಕ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಪುನಃ ಅಗ್ರ ಸ್ಥಾನಕ್ಕೆ ಮರಳಿತು ಹಾಗೂ ಪ್ಲೇಆಫ್ಸ್‌ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ. ಇನ್ನು ಸೋತ ಕೆಕೆಆರ್‌ಗೆ ನಾಕೌಟ್‌ ಹಾದಿ ಕಠಿಣವಾಗಿದೆ.

Sir M.V. Lawyer's Cup: 12 ತಂಡಗಳ ಭಾಗಿ; ಮೇ 17ರಂದು ಫೈನಲ್ ಪಂದ್ಯ: ಸತ್ಯಸಾಯಿ ಗ್ರಾಮದಲ್ಲಿ ವಕೀಲರ ಸಂಘದ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ

12 ತಂಡಗಳ ಭಾಗಿ; ಮೇ 17ರಂದು ಫೈನಲ್ ಪಂದ್ಯ

ಜಿಲ್ಲಾಧಿಕಾರಿ ಜಿ. ಪ್ರಭು ಮಾತನಾಡಿ, “ಯಾವುದೇ ವೃತ್ತಿಯಲ್ಲಿದ್ದರೂ ಕ್ರೀಡೆಗೆ ಆದ್ಯತೆ ನೀಡಬೇಕು. ಇದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ಕ್ರೀಡೆಗೆ ಮನ್ನಣೆ ನೀಡುವ ದೇಶವು ಆರ್ಥಿಕತೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿ ಸಾಧಿಸುತ್ತದೆ” ಎಂದು ಅಭಿಪ್ರಾಯಪಟ್ಟರು.

RCB vs KKR ಪಂದ್ಯದಲ್ಲಿ ಕಣಕ್ಕೆ ಇಳಿಯುವ ಮೂಲಕ ಎಂಎಸ್‌ ಧೋನಿ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

IPL 2026: ಎಂಎಸ್‌ ಧೋನಿ ದಾಖಲೆ ಮುರಿದ ವಿರಾಟ್‌ ಕೊಹ್ಲಿ!

ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ಆರ್‌ಸಿಬಿ ಪ್ಲೇಯಿಂಗ್‌ XIನಲ್ಲಿ ಕಾಣಿಸಿಕೊಳ್ಳುವ ಮೂಲಕ ವಿರಾಟ್‌ ಕೊಹ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಅವರು ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಳ್ಳುವ ಮೂಲಕ ಎಂಎಸ್‌ ಧೋನಿ ಹಾಗೂ ರೋಹಿತ್‌ ಶರ್ಮಾ ಅವರನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

RCB vs KKR: ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು!

IPL 2026: ಕೆಕೆಆರ್ ಎದುರು ಟಾಸ್‌ ಗೆದ್ದು ಬೌಲಿಂಗ್‌ ಆರಿಸಿಕೊಂಡ ಆರ್‌ಸಿಬಿ!

RCB vs KKR Match Toss, Playing XI: ರಾಯ್ಪುರದ ಶಾಹೀದ್‌ ವೀರ್‌ ನಾರಾಯಣ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 57ನೇ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಕೋಲ್ಕತಾ ನೈಟ್‌ ರೈಡರ್ಸ್‌ ತಂಡಗಳು ಕಾದಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ಬೌಲಿಂಗ್ ಆರಿಸಿಕೊಂಡಿದೆ.

IPL 2026: ಪ್ಲೇಆಫ್ಸ್‌ಗೆ ತಲುಪಲು ಎದುರು ನೋಡುತ್ತಿರುವ ತಂಡಗಳಿಗೆ ಎಚ್ಚರಿಕೆ ನೀಡಿದ ಮೊಹಮ್ಮದ್‌ ಕೈಫ್‌!

IPL 2026: ಪ್ಲೇಆಫ್ಸ್‌ ಮೇಲೆ ಕಣ್ಣಿಟ್ಟಿರುವ ತಂಡಗಳಿಗೆ ಕೈಫ್‌ ವಾರ್ನಿಂಗ್‌!

ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದ್ದು, ಎಂಟು ತಂಡಗಳ ನಡುವೆ ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಕೈಫ್‌, ಅಂತಿಮ ನಾಲ್ಕರ ರೇಸ್‌ನಲ್ಲಿರುವ ತಂಡಗಳ ಎಚ್ಚರಿಕೆಯನ್ನು ನೀಡಿದ್ದಾರೆ.

IPL 2026: ವಿರಾಟ್‌ ಕೊಹ್ಲಿ ಅಲ್ಲವೇ ಅಲ್ಲ, ಈ ಸಲ ಆರೆಂಜ್‌ ಕ್ಯಾಪ್‌ ಗೆಲ್ಲಬಲ್ಲ ಬ್ಯಾಟರ್‌ ಆರಿಸಿದ ಗ್ರೇಮ್‌ ಸ್ಮಿತ್‌!

ಆರೆಂಜ್‌ ಕ್ಯಾಪ್‌ ಗೆಲ್ಲಬಲ್ಲ ಆಟಗಾರನನ್ನು ಆರಿಸಿದ ಗ್ರೇಮ್‌ ಸ್ಮಿತ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದೆ. ಇದೀಗ ಎಂಟು ತಂಡಗಳ ನಡುವೆ ಅಗ್ರ ನಾಲ್ಕರ ಸ್ಥಾನಕ್ಕೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಆರೆಂಜ್‌ ಕ್ಯಾಪ್‌ಗೂ ಕೂಡ ಬ್ಯಾಟ್ಸ್‌ಮನ್‌ಗಳ ನಡುವೆ ಫೈಟ್‌ ನಡೆಯುತ್ತಿದೆ. ಅಂದ ಹಾಗೆ ಈ ಬಾರಿ ಆರೆಂಜ್‌ ಕ್ಯಾಪ್‌ ಗೆಲ್ಲಬಲ್ಲ ಬ್ಯಾಟ್ಸ್‌ಮನ್‌ ಯಾರೆಂದು ದಕ್ಷಿಣ ಆಫ್ರಿಕಾ ದಿಗ್ಗಜ ಗ್ರೇಮ್‌ ಸ್ಮಿತ್‌ ಅಭಿಪ್ರಾಯಪಟ್ಟಿದ್ದಾರೆ.

IPL 2026: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದಲ್ಲಿ ಕರ್ನಾಟಕ ಆಲ್‌ರೌಂಡರ್‌ ಮ್ಯಾಕ್ನೀಲ್ ನೊರೊನ್ಹಾಗೆ ಅವಕಾಶ!

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಸೇರ್ಪಡೆಯಾದ ಕನ್ನಡಿಗ ಮ್ಯಾಕ್ನೀಲ್ ನೊರೊನ್ಹಾ!

ಮುಂಬೈ ಇಂಡಿಯನ್ಸ್‌ ವಿರುದ್ಧದ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದ ವೇಳೆ ಗಾಯಕ್ಕೆ ತುತ್ತಾಗಿದ್ದ ರಾಮಕೃಷ್ಣ ಘೋಷ್‌ ಅವರ ಸ್ಥಾನಕ್ಕೆ ಕರ್ನಾಟಕ ಆಲ್‌ರೌಂಡರ್‌ ಮ್ಯಾಕ್ನೀಲ್‌ ನೊರೊನ್ಹಾ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಸಿಎಸ್‌ಕೆ ತಂಡ ತನ್ನ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಪ್ರಕಟಿಸಿದೆ.

RCB vs KKR: ಫಾರ್ಮ್‌ ಕಂಡುಕೊಳ್ಳಲು ಜಿತೇಶ್‌ ಶರ್ಮಾಗೆ ಮಹತ್ವದ ಸಲಹೆ ನೀಡಿದ ಅಂಬಾಟಿ ರಾಯುಡು!

IPL 2026: ಫಾರ್ಮ್‌ ಕಂಡುಕೊಳ್ಳಲು ಜಿತೇಶ್‌ ಶರ್ಮಾಗೆ ಸಲಹೆ ನೀಡಿದ ರಾಯುಡು!

RCB vs KKR: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾಗೆ ಫಾರ್ಮ್‌ ಕಂಡುಕೊಳ್ಳಲು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರ ಅಂಬಾಟಿ ರಾಯುಡು ಮಹತ್ವದ ಸಲಹೆಯನ್ನು ನೀಡಿದ್ದಾರೆ.

‌IPL 2026: 500 ರನ್‌ಗಳ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಸಾಯಿ ಸುದರ್ಶನ್!

500 ರನ್‌ಗಳ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಸಾಯಿ ಸುದರ್ಶನ್‌!

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 2016ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ಬಳಿಕ ಗುಜರಾತ್‌ ಟೈಟನ್ಸ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಸಾಯಿ ಸುದರ್ಶನ್‌ ಅವರು 500 ರನ್‌ಗಳನ್ನು ಪೂರ್ಣಗೊಳಿಸಿದರು. ಆ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ದಾಖಲೆಯನ್ನು ಮುರಿದಿದ್ದಾರೆ.

PBKS vs MI: ಮುಂಬೈಗೆ ಔಪಚಾರಿಕ, ಪಂಜಾಬ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ

ಮುಂಬೈ-ಪಂಜಾಬ್‌ ಪಂದ್ಯದ ಪ್ಲೇಯಿಂಗ್‌ 11, ಪಿಚ್‌ ರಿಪೋರ್ಟ್‌ ಹೇಗಿದೆ?

IPL 2026: ಮೇ 10 ರಂದು ರಾಯ್‌ಪುರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸೋತ ಮುಂಬೈ ಇಂಡಿಯನ್ಸ್ ತಂಡವು ಎಂಟನೇ ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಇಡೀ ಋತುವಿನಲ್ಲಿ ಅವರ ಪ್ರದರ್ಶನ ಕಳಪೆಯಾಗಿದೆ. 11 ಪಂದ್ಯಗಳಿಂದ ಕೇವಲ ಆರು ಅಂಕಗಳೊಂದಿಗೆ ಅವರು ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ.

Pat Cummins: ಸೋಲಿನ ಮಧ್ಯೆ 12 ಲಕ್ಷ ದಂಡಕ್ಕೆ ಗುರಿಯಾದ ಸನ್‌ರೈಸರ್ಸ್‌ ನಾಯಕ ಪ್ಯಾಟ್‌ ಕಮಿನ್ಸ್‌

12 ಲಕ್ಷ ದಂಡಕ್ಕೆ ಗುರಿಯಾದ ಸನ್‌ರೈಸರ್ಸ್‌ ನಾಯಕ ಪ್ಯಾಟ್‌

IPL 2026: "ಐಪಿಎಲ್ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಅಡಿಯಲ್ಲಿ ಸನ್‌ರೈಸರ್ಸ್‌ ತಂಡ ಈ ಋತುವಿನಲ್ಲಿ ಮಾಡಿದ ಮೊದಲ ಓವರ್-ರೇಟ್ ಅಪರಾಧ ಇದಾಗಿದ್ದು, ಇದು ಕನಿಷ್ಠ ಓವರ್-ರೇಟ್ ಉಲ್ಲಂಘನೆಗಳಿಗೆ ಸಂಬಂಧಿಸಿದೆ ಎಂದು ಲೀಗ್ ಸ್ಪಷ್ಟಪಡಿಸಿದೆ. ಇದರ ಪರಿಣಾಮವಾಗಿ, ನಾಯಕ ಕಮಿನ್ಸ್‌ 12 ಲಕ್ಷ ರೂಪಾಯಿಗಳ ದಂಡವನ್ನು ವಿಧಿಸಲಾಗಿದೆ" ಎಂದು ಐಪಿಎಲ್‌ ತನ್ನ ಹೇಳಿಕೆ ತಿಳಿಸಿದೆ.

MS Dhoni: ಎಲ್‌ಎಸ್‌ಜಿ ವಿರುದ್ಧದ ಮಸ್ಟ್‌ ವಿನ್‌ ಪಂದ್ಯದಲ್ಲಿ ಧೋನಿ ಆಡುವ ಸಾಧ್ಯತೆ

ಎಲ್‌ಎಸ್‌ಜಿ ವಿರುದ್ಧದ ಮಸ್ಟ್‌ ವಿನ್‌ ಪಂದ್ಯದಲ್ಲಿ ಧೋನಿ ಆಡುವ ಸಾಧ್ಯತೆ

IPL 2026: ಈ ಋತುವಿನ ಉಳಿದ ಭಾಗಗಳಲ್ಲಿ ಧೋನಿ ಒಂದು ಅಥವಾ ಹೆಚ್ಚಿನ ಪಂದ್ಯಗಳನ್ನು ಆಡಬಹುದೆಂಬ ನಿರೀಕ್ಷೆ ಹೆಚ್ಚುತ್ತಿದೆ ಎಂದು ವರದಿ ಹೇಳಿದೆ. ಎಲ್‌ಎಸ್‌ಜಿ ವಿರುದ್ಧದ ಪಂದ್ಯವು ಅದರ ಆರಂಭವಾಗಬಹುದಾದರೂ, ಅವರು ಪ್ರಯಾಣಿಸುವುದು ಖಚಿತವಾಗಿಲ್ಲ, ಏಕೆಂದರೆ ದಂತಕಥೆಯ ಮಾಜಿ ನಾಯಕ ಕೊನೆಯ ಕ್ಷಣದಲ್ಲಿ ತಮ್ಮ ಮನಸ್ಸನ್ನು ಬದಲಾಯಿಸುವ ಸಾಧ್ಯತೆಗೆ ಸಿಎಸ್‌ಕೆ ಮುಕ್ತವಾಗಿದೆ.

IPL 2026: ಬದಲಿ ಆಟಗಾರನಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿದ ಕರ್ನಾಟಕದ ಯುವ ಆಲ್‌ರೌಂಡರ್‌ ಮ್ಯಾಕ್ನೀಲ್ ನೊರೊನ್ಹಾ

ಚೆನ್ನೈ ಸೂಪರ್‌ ಕಿಂಗ್ಸ್‌ ಸೇರಿದ ಕರ್ನಾಟಕದ ಮ್ಯಾಕ್ನೀಲ್ ನೊರೊನ್ಹಾ

Macneil Noronha: ಮೇ 3 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಐಪಿಎಲ್‌ನಲ್ಲಿ ಪಾದದ ಮುರಿತಕ್ಕೆ ಒಳಗಾದ 28 ವರ್ಷದ ಘೋಷ್ ಬದಲಿಗೆ ನೊರೊನ್ಹಾ ಅವರನ್ನು ಆಯ್ಕೆ ಮಾಡಲಾಗಿದೆ. ತಂಡವು ಈಗಾಗಲೇ ಭಾರತದ ಮುಂಚೂಣಿಯ ವೇಗಿ ಖಲೀಲ್ ಅಹ್ಮದ್ ಮತ್ತು ಭರವಸೆಯ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಅವರನ್ನು ಋತುವಿನ ಅಂತ್ಯದ ಗಾಯಗಳಿಂದ ಕಳೆದುಕೊಂಡಿದೆ.

ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಮಹಿಳಾ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

Women’s T20 World Cup: "ದುರಾದೃಷ್ಟವಶಾತ್ ಡಾರ್ಸಿ ಬ್ರೌನ್ ಈ ಅವಕಾಶದಿಂದ ವಂಚಿತರಾದರು, ಆದರೆ ನಾವು ನಿರೀಕ್ಷಿಸುತ್ತಿದ್ದ ಪರಿಸ್ಥಿತಿಗಳು ಮತ್ತು ತಂಡದ ವೈಶಿಷ್ಟ್ಯಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಯಿತು. ಎಡಗೈ ವೇಗಿಯಾಗಿ ವಿಭಿನ್ನವಾದದ್ದನ್ನು ನೀಡುವ ಲೂಸಿ ಹ್ಯಾಮಿಲ್ಟನ್ ಅವರನ್ನು ಆಯ್ಕೆ ಮಾಡಿಕೊಂಡೆವು" ಎಂದು ಫ್ಲೆಗ್ಲರ್ ಹೇಳಿದರು.

RCB vs KKR: ಇಂದಿನ ಆರ್‌ಸಿಬಿ-ಕೆಕೆಆರ್‌ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳು

ಇಂದಿನ ಕೆಕೆಆರ್‌ ಪಂದ್ಯದಲ್ಲಿ ಮಹತ್ವದ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ

IPL 2026: ಆರ್‌ಸಿಬಿ ಮತ್ತು ಕೆಕೆಆರ್ ನಡುವಿನ ಪೈಪೋಟಿಯು ಐಪಿಎಲ್‌ನಲ್ಲಿ ಯಾವಾಗಲೂ ರೋಮಾಂಚಕ ಪಂದ್ಯಗಳಿಗೆ ಕಾರಣವಾಗಿದೆ. ಆರ್‌ಸಿಬಿ 15 ಗೆಲುವುಗಳೊಂದಿಗೆ ಹೋಲಿಸಿದರೆ ಕೆಕೆಆರ್ 20 ಗೆಲುವುಗಳೊಂದಿಗೆ ಐತಿಹಾಸಿಕ ಮುನ್ನಡೆಯನ್ನು ಹೊಂದಿದೆ. ಎರಡೂ ತಂಡಗಳಲ್ಲಿಯೂ ಹಲವಾರು ಜಾಗತಿಕ ಟಿ20 ತಾರೆಯರು ಕಾಣಿಸಿಕೊಂಡಿರುವುದರಿಂದ, ಪಂದ್ಯ ತೀವ್ರ ಪೈಪೋಟಿಯಿಂದ ಕೂಡಿರುವ ನಿರೀಕ್ಷೆಯಿದೆ.

ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ಗುಜರಾತ್‌; ಮೂರನೇ ಸ್ಥಾನಕ್ಕೆ ಕುಸಿದ ಸನ್‌ರೈಸರ್ಸ್‌

ಗುಜರಾತ್‌ ಗೆಲುವಿನಿಂದ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಳೆದುಕೊಂಡ ಆರ್‌ಸಿಬಿ

IPL 2026 Points Table: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಯಾವುದೇ ಪಂದ್ಯ ಆಡದೆ ಒಂದು ಸ್ಥಾನ ಕೆಳಗಿಳಿದು ಎರಡನೇ ಸ್ಥಾನಕ್ಕೆ ಕುಸಿದಿದೆ. ಉಳಿದಂತೆ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಪಂಜಾಬ್ ಕಿಂಗ್ಸ್ 13 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಲಾ 12 ಅಂಕಗಳೊಂದಿಗೆ ನಂತರದ ಸ್ಥಾನದಲ್ಲಿವೆ.

GT vs SRH: ಗುಜರಾತ್‌ ಟೈಟನ್ಸ್‌ ಬೌಲರ್‌ಗಳಿಗೆ ಸುಲಭ ತುತ್ತಾದ ಸನ್‌ರೈಸರ್ಸ್‌ ಹೈದರಾಬಾದ್‌!

ಗುಜರಾತ್‌ ಟೈಟನ್ಸ್‌ಗೆ ಸುಲಭ ತುತ್ತಾದ ಸನ್‌ರೈಸರ್ಸ್‌ ಹೈದರಾಬಾದ್‌!

GT vs SRH Match Highlights: ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ಅಧಿಕಾರಯುತ ಪ್ರದರ್ಶನವನ್ನು ತೋರಿದ ಗುಜರಾತ್‌ ಟೈಟನ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 82 ರನ್‌ಗಳ ಭಾರಿ ಅಂತರದಲ್ಲಿ ಗೆದ್ದು ಬೀಗಿತು. ಈ ಗೆಲುವಿನ ಬಳಿಕ ಜಿಟಿ ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಅಲಂಕರಿಸಿದೆ.

IPL 2026:  ಸತತ 4 ಪಂದ್ಯ ಗೆದ್ದಿರುವ ಕೆಕೆಆರ್‌ ಬಗ್ಗೆ ಸಂಜಯ್‌ ಬಾಂಗರ್‌ ದೊಡ್ಡ ಹೇಳಿಕೆ!

ಸತತ 4 ಪಂದ್ಯ ಗೆದ್ದಿರುವ ಕೆಕೆಆರ್‌ ಬಗ್ಗೆ ಬಾಂಗರ್‌ ದೊಡ್ಡ ಹೇಳಿಕೆ!

ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯು ನಿರ್ಣಾಯಕ ಹಂತಕ್ಕೆ ತಲುಪಿದ್ದು, ಪ್ಲೇಆಫ್ಸ್‌ಗೆ ಅರ್ಹತೆ ಪಡೆಯಲು ಎಂಟು ತಂಡಗಳ ನಡುವೆ ಭಾರಿ ಪೈಪೋಟಿ ನಡೆಯುತ್ತಿದೆ. ಇದರ ನಡುವೆ ಮಾಜಿ ಕ್ರಿಕೆಟಿಗ ಸಂಜಯ್‌ ಬಾಂಗರ್‌, ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಪಂಜಾಬ್‌ ಕಿಂಗ್ಸ್‌ ತಂಡಗಳ ಬಗ್ಗೆ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

RCB vs KKR ಪಂದ್ಯದಲ್ಲಿ ಫಿಲ್‌ ಸಾಲ್ಟ್‌ ಆಡ್ತಾರಾ? ಸ್ಟಾರ್‌ ಬ್ಯಾಟರ್‌ ಬಗ್ಗೆ ಬಿಗ್‌ ಅಪ್‌ಡೇಟ್‌!

RCB vs KKR ಪಂದ್ಯದಲ್ಲಿ ಫಿಲ್‌ ಸಾಲ್ಟ್‌ ಆಡ್ತಾರಾ? ಇಲ್ಲಿದೆ ಮಾಹಿತಿ..

RCB vs KKR: ಫಿಲ್‌ ಸಾಲ್ಟ್‌ ಅವರ ಅನುಪಸ್ಥಿತಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಬಲವಾಗಿ ಕಾಡುತ್ತಿದೆ. ಗಾಯದಿಂದಾಗಿ ಕಳೆದ ಕೆಲ ಪಂದ್ಯಗಳನ್ನು ಕಳೆದುಕೊಂಡಿದ್ದ ಅವರು, ತವರು ನಾಡಿನಿಂದ ಆರ್‌ಸಿಬಿಗೆ ಕ್ಯಾಂಪ್‌ಗೆ ಮರಳಿದ್ದಾರೆಂದು ಹೇಳಲಾಗುತ್ತಿದೆ. ಮೇ 13 ರಂದು ಕೋಲ್ಕತಾ ನೈಟ್‌ ರೈಡರ್ಸ್ ನಡೆಯುವ ಪಂದ್ಯದಲ್ಲಿ ಅವರು ಆಡುವ ಬಗ್ಗೆ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

RCB vs KKR: ʻವಿರಾಟ್‌ ಕೊಹ್ಲಿಗೆ ಪ್ಲ್ಯಾನ್‌ ರೆಡಿ ಇದೆʼ-ಆರ್‌ಸಿಬಿಗೆ ಶೇನ್‌ ವಾಟ್ಸನ್‌ ವಾರ್ನಿಂಗ್‌!

ವಿರಾಟ್‌ ಕೊಹ್ಲಿಯನ್ನು ಔಟ್‌ ಮಾಡುತ್ತೇವೆʼ: ಶೇನ್‌ ವಾಟ್ಸನ್‌ ಎಚ್ಚರಿಕೆ!

IPL 2026: ರಾಯ್ಪುರದಲ್ಲಿ ನಡೆಯಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯಕ್ಕೂ ಮುನ್ನ ವಿರಾಟ್‌ ಕೊಹ್ಲಿಯನ್ನು ನಿಯಂತ್ರಿಸಲು ವಿಶೇಷ ಯೋಜನೆ ರೂಪಿಸಲಾಗಿದೆ ಎಂದು ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಸಹಾಯಕ ಕೋಚ್‌ ಶೇನ್‌ ವಾಟ್ಸನ್‌ ತಿಳಿಸಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಕೊಹ್ಲಿ ಸತತವಾಗಿ ಡಕ್‌ಔಟ್‌ ಆಗಿದ್ದರು.

RCB vs KKR ಪಂದ್ಯಕ್ಕೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಬಲಿಷ್ಠ ಪ್ಲೇಯಿಂಗ್‌ XI ವಿವರ!

IPL 2026: KKR ಪಂದ್ಯಕ್ಕೆ RCB ಬಲಿಷ್ಠ ಪ್ಲೇಯಿಂಗ್‌ XI ವಿವರ!

RCBʼs Strongest Playimg XI: ಮುಂಬೈ ಇಂಡಿಯನ್ಸ್‌ ವಿರುದ್ಧ ಕಠಿಣ ಹೋರಾಟ ನಡೆಸಿ ಗೆಲುವು ಪಡೆಯುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪ್ಲೇಆಫ್ಸ್‌ಗೆ ಸನಿಹವಾಗಿದೆ. ಬುಧವಾರ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧ ಆರ್‌ಸಿಬಿ ಅಂತಿಮ ನಾಲ್ಕರಲ್ಲಿ ತನ್ನ ಸ್ಥಾನವನ್ನು ಖಚಿತಪಡಿಸಿಕೊಳ್ಳಲಿದೆ.

IPL 2026: ಮುಂಬೈ ಇಂಡಿಯನ್ಸ್‌ಗೆ ನೂತನ ನಾಯಕನನ್ನು ಸೂಚಿಸಿದ ಸಂಜಯ್‌ ಮಾಂಜ್ರೇಕರ್‌!

ಮುಂಬೈ ಇಂಡಿಯನ್ಸ್‌ಗೆ ನೂತನ ನಾಯಕನನ್ನು ಸೂಚಿಸಿದ ಮಾಂಜ್ರೇಕರ್‌!

2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಸತತ ವೈಫಲ್ಯ ಅನುಭವಿಸುವ ಮೂಲಕ ಪ್ಲೇಆಫ್ಸ್‌ ರೇಸ್‌ನಿಂದ ಹೊರಬಿದ್ದಿದೆ. ಈ ಹಿನ್ನೆಲೆಯಲಿ ಮುಂಬೈ ತಂಡದ ನಾಯಕತ್ವವನ್ನು ಜಸ್‌ಪ್ರೀತ್‌ ಬುಮ್ರಾಗೆ ನೀಡಬೇಕೆಂದು ಮಾಜಿ ಕ್ರಿಕೆಟಿಗ ಸಂಜಯ್‌ ಮಾಂಜ್ರೇಕರ್‌ ಸಲಹೆ ನೀಡಿದ್ದಾರೆ.

Loading...