ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಕ್ರಿಕೆಟ್‌

ಚೆನ್ನೈನ ಸೆರ್ಕ್ರೂಟ್‌ನಲ್ಲಿ ಸೂಪರ್‌ ಬೈಕ್‌ ರೈಡ್‌ ಮಾಡಿದ ಎಂಎಸ್‌ ಧೋನಿ!

ಚೆನ್ನೈ ಸರ್ಕ್ಯೂಟ್‌ನಲ್ಲಿ ಸೂಪರ್‌ ಬೈಕ್‌ ರೈಡ್‌ ಮಾಡಿದ ಎಂಎಸ್‌ ಧೋನಿ!

ಭಾರತದ ಮಾಜಿ ನಾಯಕ ಎಂಎಸ್ ಧೋನಿ ಮದ್ರಾಸ್ ಇಂಟರ್‌ನ್ಯಾಷನಲ್ ಸರ್ಕ್ಯೂಟ್‌ನಲ್ಲಿ ಸೂಪರ್‌ಬೈಕ್ ಓಡಿಸಿ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು. ವೇಗದ ಲ್ಯಾಪ್‌ಗಳನ್ನು ಪೂರ್ಣಗೊಳಿಸಿದ ಧೋನಿ, ಟ್ರ್ಯಾಕ್‌ನಿಂದ ಹೊರಬಂದ ಬಳಿಕ ಅಭಿಮಾನಿಗಳತ್ತ ಕೈಬೀಸಿ ಶುಭಾಶಯ ಕೋರಿದರು. ಅವರ ಈ ಬೈಕ್ ರೈಡ್‌ನ ವಿಡಿಯೊ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.

ನಾನು ಅಪರಾಧಿ ಎಂದು ಎಂದಿಗೂ ಭಾವಿಸಿರಲಿಲ್ಲ: ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅಚ್ಚರಿ ಹೇಳಿಕೆ!

ನನ್ನನ್ನು ಅಪರಾಧಿ ಎಂದು ಎಂದಿಗೂ ಭಾವಿಸಿರಲಿಲ್ಲ: ಬ್ರಿಜ್‌ ಭೂಷಣ್‌ ಸಿಂಗ್‌!

ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಯಾದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಭಾರತೀಯ ಕುಸ್ತಿ ಮಂಡಳಿಯ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರು, ತಮ್ಮ ವಿರುದ್ಧ ದೂರು ನೀಡಿದ್ದರನ್ನು ಟೀಕಿಸಿದ್ದಾರೆ. ನಾನು ಎಂದಿಗೂ ಅಪರಾಧಿ ಎಂದು ಭಾವಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಭಾರತ ಪ್ರವಾಸದ ಆಸ್ಟ್ರೇಲಿಯಾ ಅಂಡರ್‌-19 ತಂಡದಲ್ಲಿ ಸ್ಥಾನ ಪಡೆದ ಭಾರತೀಯ ಮೂಲದ ನೀಲ್‌ ಪಟೇಲ್‌!

ಆಸ್ಟ್ರೇಲಿಯಾ ಅಂಡರ್‌-19 ತಂಡದಲ್ಲಿ ಸ್ಥಾನ ಪಡೆದ ನೀಲ್‌ ಪಟೇಲ್‌!

Australia U-19 Squad: ಮುಂದಿನ ತಿಂಗಳ ಭಾರತ ಪ್ರವಾಸದ ಆಸ್ಟ್ರೇಲಿಯಾ ಅಂಡರ್‌-19 ತಂಡವನ್ನು ಆಯ್ಕೆ ಮಾಡಲಾಗಿದ್ದು, ಭಾರತೀಯ ಮೂಲದ ನೀಲ್‌ ಪಟೇಲ್‌ ಅವರಿಗೆ ಈ ತಂಡದಲ್ಲಿ ಅವಕಾಶವನ್ನು ನೀಡಲಾಗಿದೆ. 16 ಸದಸ್ಯರ ತಂಡ ಮೂರು ಏಕದಿನ ಪಂದ್ಯಗಳು ಹಾಗೂ ಎರಡು ನಾಲ್ಕು ದಿನಗಳ ಪಂದ್ಯಗಳನ್ನು ಆಡಲಿದೆ.

ಎಂಎಸ್‌ ಧೋನಿ ಅಲ್ಲವೇ ಅಲ್ಲ; ಭಾರತೀಯ ಕ್ರಿಕೆಟ್‌ ಸ್ಮಾರ್ಟೆಸ್ಟ್‌ ಮೈಂಡ್‌ ಯಾರೆಂದು ಹೆಸರಿಸಿದ ಮೊಯೀನ್‌ ಅಲಿ!

ಭಾರತೀಯ ಕ್ರಿಕೆಟ್‌ನ ಸ್ಮಾರ್ಟೆಸ್ಟ್‌ ಮೈಂಡ್‌ ಹೆಸರಿಸಿದ ಮೊಯೀನ್‌ ಅಲಿ!

ಗುಜರಾತ್‌ ಟೈಟನ್ಸ್‌ ತಂಡದ ಹೆಡ್‌ ಕೋಚ್‌ ಆಶಿಶ್‌ ನೆಹ್ರಾ ಅವರು ಪ್ರಸ್ತುತ ಭಾರತೀಯ ಕ್ರಿಕೆಟ್‌ನ ಅತ್ಯಂತ ಸ್ಮಾರ್ಟೆಸ್ಟ್‌ ಕ್ರಿಕೆಟ್‌ ಮೈಂಡ್‌ ಎಂದು ಇಂಗ್ಲೆಂಡ್‌ ಕ್ರಿಕೆಟ್‌ ತಂಡದ ಆಲ್‌ರೌಂಡರ್‌ ಮೊಯೀನ್‌ ಅಲಿ ಆರಿಸಿದ್ದಾರೆ. ಆದರೆ, ಭಾರತೀಯ ಕ್ರಿಕೆಟ್‌ ಅನ್ನು ಅಗ್ರ ಸ್ಥಾನ ಏರಿಸಿದ್ದ ಎಂಎಸ್‌ ಧೋನಿಯನ್ನು ಕಡೆಗಣಿಸಿದ್ದಾರೆ.

ʻಮಗ ಡಾಕ್ಟರ್‌ ಆಗಬೇಕೆಂದು ಅಪ್ಪ ಕನಸು ಕಂಡಿದ್ದರುʼ: ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಆಯ್ಕೆಯಾದ ಆಕಿಬ್‌ ನಬಿ ಯಾರು?

ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಆಯ್ಕೆಯಾಗಿರುವ ಆಕಿಬ್‌ ನಬಿ ಯಾರು?

ಆಕಿಬ್ ನಬಿ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಮೂಲದವರು. ದೇಶದ ಬಹುತೇಕ ಪ್ರತಿಯೊಬ್ಬ ಕ್ರಿಕೆಟಿಗರ ಕಥೆಯಂತೆ, ಅವರ ಪ್ರಯಾಣವೂ ಹೋರಾಟದಿಂದ ಕೂಡಿದೆ; ಅವರ ತಂದೆ ಗುಲಾಮ್ ನಬಿ ದಾರ್ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ ಮತ್ತು ಅವರ ಮಗ ವೈದ್ಯನಾಗಬೇಕೆಂದು ಬಯಸಿದ್ದರು. ಆದರೆ, ಆಕಿಬ್‌ ನಬಿ ಕ್ರಿಕೆಟ್‌ ಅನ್ನು ವೃತ್ತಿ ಜೀವನವನ್ನಾಗಿ ತೆಗೆದುಕೊಂಡು ಯಶಸ್ವಿಯಾಗಿದ್ದಾರೆ.

ಭ್ರಷ್ಟಾಚಾರ ವಿರೋಧಿ ಸಂಹಿತೆ ಉಲ್ಲಂಘನೆ: ಅಖಿಲೇಶ್ ರೆಡ್ಡಿಗೆ ಎಂಟು ವರ್ಷಗಳ ನಿಷೇಧ

ಯುಎಇ ಕ್ರಿಕೆಟಿಗ ಅಖಿಲೇಶ್ ರೆಡ್ಡಿಗೆ 8 ವರ್ಷ ನಿಷೇಧ ಶಿಕ್ಷೆ

UAE cricketer Akhilesh Reddy: ಅಖಿಲೇಶ್‌ ನಾಲ್ಕು T20I ಪಂದ್ಯಗಳಲ್ಲಿ USA ತಂಡವನ್ನು ಪ್ರತಿನಿಧಿಸಿದ್ದರು, ಎಲ್ಲವೂ ಏಪ್ರಿಲ್ 2025 ರಲ್ಲಿ ನಡೆದವು. ಈ ವರ್ಷ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಎರಡನೇ USA ಅಂತಾರಾಷ್ಟ್ರೀಯ ಆಟಗಾರ.

ಆಸ್ಟ್ರೇಲಿಯಾದ U19 ತಂಡಕ್ಕೆ ಆಯ್ಕೆಯಾದ ಭಾರತೀಯ ಮೂಲದ ನೀಲ್ ಪಟೇಲ್ ಯಾರು?

ಆಸ್ಟ್ರೇಲಿಯಾದ U19 ತಂಡಕ್ಕೆ ಆಯ್ಕೆಯಾದ ನೀಲ್ ಪಟೇಲ್ ಯಾರು?

Neel Patel: ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯ (UNSW) ಕ್ರಿಕೆಟ್ ಕ್ಲಬ್ ಅನ್ನು ಪ್ರತಿನಿಧಿಸುವ ಪಟೇಲ್, ಕೇವಲ 16 ವರ್ಷ ವಯಸ್ಸಿನಲ್ಲಿ ಒಂದೇ ಕ್ಯಾಲೆಂಡರ್ ವರ್ಷದಲ್ಲಿ 1,000 ಕ್ಕೂ ಹೆಚ್ಚು ರನ್ ಗಳಿಸಿದ ನಂತರ ಸಿಡ್ನಿ ಪ್ರೀಮಿಯರ್ ಕ್ರಿಕೆಟ್ ಪ್ರಥಮ ದರ್ಜೆ ಇತಿಹಾಸದಲ್ಲಿ ಅತ್ಯಂತ ಕಿರಿಯ ಆಟಗಾರನಾಗಿ ಆಡಿದ್ದರು.

ದಿಗ್ಗಜ ಇಮ್ರಾನ್‌ ಖಾನ್‌ ದಾಖಲೆ ಸರಿಗಟ್ಟಿದ ಬಾಬರ್‌ ಅಜಂ

ದಿಗ್ಗಜ ಇಮ್ರಾನ್‌ ಖಾನ್‌ ದಾಖಲೆ ಸರಿಗಟ್ಟಿದ ಬಾಬರ್‌ ಅಜಂ

Babar Azam: 1992 ರ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಪಾಕಿಸ್ತಾನಕ್ಕೆ ತಂದುಕೊಟ್ಟಿದ್ದ ಇಮ್ರಾನ್, ಪಾಕಿಸ್ತಾನವನ್ನು ಅತಿ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಮುನ್ನಡೆಸಿದ ದಾಖಲೆಯನ್ನು ಹೊಂದಿದ್ದಾರೆ. 1982 ಮತ್ತು 1992 ರ ನಡುವೆ ಅವರು 187 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದರು. ಮಿಸ್ಬಾ 2008 ಮತ್ತು 2017 ರ ನಡುವೆ 151 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದರು.

ಕೌಂಟಿ ಕ್ರಿಕೆಟ್‌; ಚಾಹಲ್ ಸ್ಪಿನ್‌ ಮೋಡಿಗೆ ಪತರಗುಟ್ಟಿದ ನಾರ್ಥಾಂಪ್ಟನ್‌ಶೈರ್

ಚಾಹಲ್ ಸ್ಪಿನ್‌ ಮೋಡಿಗೆ ಪತರಗುಟ್ಟಿದ ನಾರ್ಥಾಂಪ್ಟನ್‌ಶೈರ್

Yuzvendra Chahal: ಕುಲದೀಪ್ ಯಾದವ್ ವಿಕೆಟ್ ಪಡೆದರು ಆದರೆ ಯಾರ್ಕ್‌ಷೈರ್ ಭಾನುವಾರ ಮಿಡ್ಲ್‌ಸೆಕ್ಸ್ ವಿರುದ್ಧ ಸೋಲನ್ನು ಅನುಭವಿಸಿತು. ಭಾರತದ ಎಡಗೈ ಸ್ಪಿನ್ನರ್ 10 ಓವರ್‌ಗಳಲ್ಲಿ 55 ರನ್‌ಗಳಿಗೆ ಒಂದು ವಿಕೆಟ್ ಪಡೆದರು ಮತ್ತು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಜಾಫರ್ ಗೋಹರ್ ಅವರ ವಿಕೆಟ್‌ ಪಡೆದರು.

'ಭಾರತೀಯ ಕ್ರೀಡೆ ಅತ್ಯುತ್ತಮವಾಗಿದೆ'; ಕಾಮನ್‌ವೆಲ್ತ್‌ ಪ್ರದರ್ಶನ ಶ್ಲಾಘಿಸಿದ ಟಿ20ಐ ನಾಯಕ ಶ್ರೇಯಸ್ ಅಯ್ಯರ್

ಭಾರತದ ಕಾಮನ್‌ವೆಲ್ತ್‌ ಪ್ರದರ್ಶನ ಶ್ಲಾಘಿಸಿದ ಶ್ರೇಯಸ್ ಅಯ್ಯರ್

T20I Captain Shreyas Iyer: 2018 ರ ಗೋಲ್ಡ್ ಕೋಸ್ಟ್ ಆವೃತ್ತಿ, ದೇಶವು ಬಾಕ್ಸಿಂಗ್‌ನಲ್ಲಿ ಮೂರು ಚಿನ್ನ ಸೇರಿದಂತೆ ಏಳು ಪದಕ ಜಯಿಸಿತ್ತು. ಈ ಬಾರಿ ಒಟ್ಟಾರೆಯಾಗಿ, ಭಾರತವು 13 ಚಿನ್ನ, 17 ಬೆಳ್ಳಿ ಮತ್ತು ಒಂಬತ್ತು ಕಂಚಿನ ಪದಕಗಳನ್ನು ಒಳಗೊಂಡಂತೆ 39 ಪದಕಗಳೊಂದಿಗೆ ಕ್ರೀಡಾಕೂಟವನ್ನು ಮುಗಿಸಿತು.

ಶ್ರೀಲಂಕಾ ಟೆಸ್ಟ್ ಸರಣಿ; ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ

ಶ್ರೀಲಂಕಾ ಟೆಸ್ಟ್ ಸರಣಿ; ಜಸ್ಪ್ರೀತ್ ಬುಮ್ರಾ ಬದಲಿಗೆ ಔಕಿಬ್ ನಬಿ ಆಯ್ಕೆ

Auqib Nabi: ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ಸಮಯದಲ್ಲಿ ಫೀಲ್ಡಿಂಗ್ ಮಾಡುವಾಗ ಉಂಟಾದ ಎಡ ಮೊಣಕಾಲಿನ ಗಾಯದಿಂದ ಬುಮ್ರಾ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವಿಫಲರಾಗಿದ್ದಾರೆ. ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಪುನರ್ವಸತಿ ಇದ್ದರೂ ಊತ ಕಡಿಮೆಯಾಗಲು ನಿರೀಕ್ಷೆಗಿಂತ ಹೆಚ್ಚು ಸಮಯ ತೆಗೆದುಕೊಂಡಿದೆ.

ಭಾರತದ ನೂತನ ಫೀಲ್ಡಿಂಗ್‌ ಕೋಚ್‌ ಆಗಿ ಶುಭದೀಪ್ ಘೋಷ್ ನೇಮಕ

ಶುಭದೀಪ್ ಘೋಷ್ ಭಾರತದ ನೂತನ ಫೀಲ್ಡಿಂಗ್‌ ಕೋಚ್‌

India appoint new fielding coach: "ವರ್ಷಗಳಲ್ಲಿ, ಶುಭದೀಪ್ ಘೋಷ್ ವಿವಿಧ ವಯೋಮಾನದ ವಿವಿಧ ಭಾರತೀಯ ತಂಡಗಳೊಂದಿಗೆ ಕೆಲಸ ಮಾಡುವ ಮೂಲಕ ಪ್ರಭಾವಶಾಲಿ ಕೋಚಿಂಗ್ ಪ್ರೊಫೈಲ್ ಅನ್ನು ನಿರ್ಮಿಸಿದ್ದಾರೆ, ಅವರ ಸಮರ್ಪಣೆ ಮತ್ತು ಪರಿಣತಿಗೆ ಮನ್ನಣೆ ಗಳಿಸಿದ್ದಾರೆ" ಎಂದು ಎಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

IND vs SL ಟೆಸ್ಟ್‌ ಸರಣಿಯಲ್ಲಿ ಗಾಯಾಳು ಜಸ್‌ಪ್ರೀತ್‌ ಬುಮ್ರಾ ಸ್ಥಾನಕ್ಕೆ ಆಕಿಬ್‌ ನಬಿಗೆ ಸ್ಥಾನ?

ಶ್ರೀಲಂಕಾ ಟೆಸ್ಟ್‌ ಸರಣಿಯಲ್ಲಿ ಬುಮ್ರಾ ಸ್ಥಾನಕ್ಕೆ ಆಕಿಬ್‌ ನಬಿಗೆ ಸ್ಥಾನ?

ಮೊಣಕಾಲಿನ ಗಾಯದಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಭಾರತದ ವೇಗಿ ಜಸ್‌ಪ್ರೀತ್ ಬುಮ್ರಾ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯಿಂದ ಹೊರಗುಳಿಯುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಯುವ ವೇಗದ ಬೌಲರ್ ಆಕಿಬ್ ನಬಿ ಅವರಿಗೆ ಮೊದಲ ಬಾರಿ ಭಾರತ ತಂಡಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ.

IND vs SL ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಪರ ಕುಲ್ದೀಪ್‌ ಯಾದವ್‌ ಆಡಬೇಕೆಂದ ದೀಪ್‌ ದಾಸ್‌ಗುಪ್ತಾ!

ಶ್ರೀಲಂಕಾ ಟೆಸ್ಟ್‌ ಸರಣಿಯಲ್ಲಿ ಕುಲ್ದೀಪ್‌ ಆಡಬೇಕೆಂದ ದೀಪ್‌ ದಾಸ್‌ಗುಪ್ತಾ!

ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಭಾರತ ತಂಡದ ಪ್ಲೇಯಿಂಗ್‌ Xiನಲ್ಲಿ ಚೈನಾಮನ್‌ ಸ್ಪಿನ್ನರ್‌ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡಬೇಕೆಂದು ಮಾಜಿ ವಿಕೆಟ್‌ ಕೀಪರ್‌ ದೀಪ್‌ ದಾಸ್‌ಗುಪ್ತಾ ಆಗ್ರಹಿಸಿದ್ದಾರೆ. ಏಕೆಂದರೆ ಶ್ರೀಲಂಕಾದಲ್ಲಿನ ಕಂಡೀಷನ್ಸ್‌ಗೆ ಕುಲ್ದೀಪ್‌ ಅವರ ಬೌಲಿಂಗ್‌ಗೆ ಹೊಂದಾಣಿಕೆಯಾಗಲಿದೆ ಎಂದಿದ್ದಾರೆ.

ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಬಗ್ಗೆ ಪ್ರತಿಕ್ರಿಯಿಸಿದ ಭುವನೇಶ್ವರ್‌ ಕುಮಾರ್‌!

ಭಾರತ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವ ಬಗ್ಗೆ ಭುವನೇಶ್ವರ್‌ ಪ್ರತಿಕ್ರಿಯೆ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶನವನ್ನು ತೋರಿದ ಬಳಿಕ ಭುವನೇಶ್ವರ್‌ ಕುಮಾರ್‌ ಅವರ ಭಾರತ ತಂಡದ ಕಮ್‌ಬ್ಯಾಕ್‌ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇದೀಗ ಈ ಬಗ್ಗೆ ಸ್ವತಃ ಭುವನೇಶ್ವರ್‌ ಕುಮಾರ್‌ ಅವರೇ ಪ್ರತಿಕ್ರಿಯೆ ನೀಡಿದ್ದಾರೆ.

ಶ್ರೀಲಂಕಾ ಟೆಸ್ಟ್‌ನಿಂದ ಬುಮ್ರಾ ಔಟ್: ಬದಲಿ ಸ್ಥಾನಕ್ಕೆ 3 ವೇಗಿಗಳ ಪೈಪೋಟಿ

ಬುಮ್ರಾ ಸ್ಥಾನಕ್ಕೆ ಬದಲಿ ಆಯ್ಕೆಗೆ ಮೂವರು ವೇಗಿಗಳ ಪೈಪೋಟಿ

India vs Sri Lanka Test series: ಇತ್ತೀಚೆಗೆ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯ ವೇಳೆ ಬೂಮ್ರಾ ಅವರು ಗಾಯಗೊಂಡಿದ್ದರು. ಹಾಗಾಗಿ, ಲಾರ್ಡ್ಸ್‌ನಲ್ಲಿ ನಡೆದಿದ್ದ ಮೂರನೇ ಏಕದಿನ ಪಂದ್ಯದಲ್ಲಿ ಅವರು ಆಡಿರಲಿಲ್ಲ. ದೈಹಿಕ ಕ್ಷಮತೆಗೆ ಒಳಪಟ್ಟು ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ಆಯ್ಕೆ ಮಾಡಲಾಗಿತ್ತು. ಆದರೆ ಸರಿಯಾದ ಸಮಯಕ್ಕೆ ಚೇತರಿಸಿಕೊಳ್ಳಲು ವಿಫಲರಾದ ಕಾರಣ ಅವರು ಹೊರಬಿದ್ದಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ತಿಂಗಳಿಗೆ ಸಿಗುವ ಪೆನ್ಷನ್‌ ಹಣವೆಷ್ಟು?

ಕ್ರಿಕೆಟ್‌ಗೆ ವಿದಾಯ ಹೇಳಿದ ಅಜಿಂಕ್ಯ ರಹಾನೆಗೆ ಸಿಗುವ ಪೆನ್ಷನ್‌ ಹಣವೆಷ್ಟು?

ಭಾರತ ತಂಡದ ಮಾಜಿ ನಾಯಕ ಅಜಿಂಕ್ಯ ರಹಾನೆ ಅವರು ಇತ್ತೀಚೆಗೆ ಎಲ್ಲಾ ಸ್ವರೂಪದ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಆ ಮೂಲಕ ತಮ್ಮ ದೀರ್ಘಾವಧಿ ಕ್ರಿಕೆಟ್‌ ಬದುಕಿಗೆ ಪೂರ್ಣ ವಿರಾಮವನ್ನು ಇಟ್ಟಿದ್ದರು. ಇದೀಗ ಅವರಿಗೆ ಬಿಸಿಸಿಐ ತಿಂಗಳಿಗೆ ಪೆನ್ಷನ್‌ ಹಣವನ್ನು ನೀಡಲಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ವಿವರಿಸಲಾಗಿದೆ.

ʻ25 ಸಿಕ್ಸರ್‌, 13 ಬೌಂಡರಿʼ: 91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸಿದ ಅಭಿಷೇಕ್‌ ಶರ್ಮಾ!

91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸಿದ ಅಭಿಷೇಕ್‌ ಶರ್ಮಾ!

ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ ಇದೀಗ ಪಂಜಾಬ್‌ನ ಸ್ಥಳೀಯ ಪಂದ್ಯವೊಂದರಲ್ಲಿ ದ್ವಿಶತಕ ಸಿಡಿಸಿದ್ದಾರೆ. ಅವರು ಪಂಜಾಬ್‌ನ ಅಂತರ ಜಿಲ್ಲಾ ಪಂದ್ಯದಲ್ಲಿ ಅಭಿಷೇಕ್‌ ಶರ್ಮಾ ಕೇವಲ 91 ಎಸೆತಗಳಲ್ಲಿ 233 ರನ್‌ಗಳನ್ನು ಸಿಡಿಸಿದ್ದಾರೆ. ಇದರಲ್ಲಿ ಅವರು ಬರೋಬ್ಬರಿ 25 ಸಿಕ್ಸರ್‌ ಹಾಗೂ 15 ಬೌಂಡರಿಗಳನ್ನು ಬಾರಿಸಿದ್ದಾರೆ.

2026ರ ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ ಪ್ರಕಟ; ಹರ್ಮನ್‌ಪ್ರೀತ್ ಕೌರ್ ನಾಯಕಿ

2026ರ ಏಷ್ಯಾಕಪ್‌ಗೆ ಭಾರತ ಮಹಿಳಾ ತಂಡ ಪ್ರಕಟ

India squad for Asia Cup 2026: ತಂಡದಲ್ಲಿರುವ ಭಾರತದ ನಾಲ್ವರು ಪ್ರಮುಖ ಆಟಗಾರ್ತಿಯರಾದ ಸ್ಮೃತಿ ಮಂಧಾನ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಮತ್ತು ರಿಚಾ ಘೋಷ್ ಪ್ರಸ್ತುತ ಯುಕೆಯಲ್ಲಿ ನಡೆಯುತ್ತಿರುವ ಹಂಡ್ರೆಡ್‌ನಲ್ಲಿ ಆಡುತ್ತಿದ್ದಾರೆ.

ಭಾರತದ ಟಾಪ್‌  5 ಬೌಲರ್‌ಗಳನ್ನು ಆರಿಸಿ ಅಶ್ವಿನ್‌ ಬಳಿ ಕ್ಷಮೆ ಕೇಳಿದ ಅರ್ಷದೀಪ್‌ ಸಿಂಗ್!

ಭಾರತದ ಟಾಪ್‌ 5 ಬೌಲರ್‌ಗಳನ್ನು ಆರಿಸಿದ ಅರ್ಷದೀಪ್‌ ಸಿಂಗ್‌!

ಭಾರತದ ವೇಗದ ಬೌಲರ್ ಅರ್ಷದೀಪ್‌ ಸಿಂಗ್‌ ತಮ್ಮ ನೆಚ್ಚಿನ ಟಾಪ್-5 ಬೌಲರ್‌ಗಳ ಪಟ್ಟಿಯನ್ನು ಪ್ರಕಟಿಸಿದ್ದು, ಅದರಲ್ಲಿ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರಿಗೆ ಐದನೇ ಸ್ಥಾನ ನೀಡಿದ್ದಾರೆ. ಬಳಿಕ ಈ ಕ್ರಮಾಂಕದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಶ್ರೇಯಾಂಕ ನೀಡಿರುವುದಕ್ಕಾಗಿ ಅಶ್ವಿನ್ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.

Duleep Trophy 2026: ದಕ್ಷಿಣ ವಲಯ ತಂಡದಲ್ಲಿ ನಾಲ್ವರು ಕನ್ನಡಿಗರು, ತಿಲಕ್‌ ವರ್ಮಾ ನಾಯಕ!

Duleep Trophy 2026: ದಕ್ಷಿಣ ವಲಯ ತಂಡಕ್ಕೆ ತಿಲಕ್‌ ವರ್ಮಾ ನಾಯಕ!

2026ರ ದುಲೀಪ್ ಟ್ರೋಫಿ ಟೂರ್ನಿಗೆ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ತಿಲಕ್ ವರ್ಮಾ ಅವರಿಗೆ ನಾಯಕತ್ವವನ್ನು ನೀಡಲಾಗಿದೆ. ಕರ್ನಾಟಕದಿಂದ ಒಟ್ಟು ನಾಲ್ವರು ಆಟಗಾರರು ದಕ್ಷಿಣ ವಲಯ ತಂಡಕ್ಕೆ ಆಯ್ಕೆಯಾಗಿದ್ದಾರೆ. ರಿಕಿ ಭುಯಿ ಅವರಿಗೆ ಉಪ ನಾಯಕತ್ವವನ್ನು ನೀಡಲಾಗಿದೆ.

ವೇಗಿ ಜಸ್‌ಪ್ರೀತ್‌ ಬುಮ್ರಾಗೆ ಮತ್ತೆ ಗಾಯ; ಲಂಕಾ ಟೆಸ್ಟ್‌ ಸರಣಿಯಿಂದ ಔಟ್‌

ಬುಮ್ರಾಗೆ ಮತ್ತೆ ಗಾಯ; ಲಂಕಾ ಟೆಸ್ಟ್‌ ಸರಣಿಯಿಂದ ಔಟ್‌

Jasprit Bumrah: ಭಾರತವು ಈ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಚಕ್ರದಲ್ಲಿ ಫೈನಲ್‌ಗೆ ಪ್ರವೇಶಿಸಲು ಉಳಿದಿರುವ ಒಂಬತ್ತು ಟೆಸ್ಟ್‌ಗಳಲ್ಲಿ ಏಳನ್ನು ಗೆಲ್ಲಬೇಕಾಗಿದೆ. ಬುಮ್ರಾ ಅನುಪಸ್ಥಿತಿ ಈಗಾಗಲೇ ಸರಣಿಯಿಂದ ಹೊರಗುಳಿದಿರುವ ಹರ್ಷಿತ್ ರಾಣಾ ಮತ್ತು ನಿತೀಶ್ ಕುಮಾರ್ ರೆಡ್ಡಿ ಅವರಂತಹ ಆಟಗಾರರ ಸಾಲಿಗೆ ಬುಮ್ರಾ ಸೇರಿಕೊಳ್ಳಲಿದ್ದಾರೆ.

ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯ ನಾಲ್ಕರಿಂದ ಮೂರು ದಿನಕ್ಕೆ ಇಳಿಕೆ

ಭಾರತ-ಶ್ರೀಲಂಕಾ ಅಭ್ಯಾಸ ಪಂದ್ಯ 4ರಿಂದ 3ದಿನಕ್ಕೆ ಇಳಿಕೆ

India vs Sri Lanka Test: ಭಾರತೀಯ ತಂಡ ಆಗಸ್ಟ್ 4 ರಂದು ಶ್ರೀಲಂಕಾ ತಲುಪುವ ನಿರೀಕ್ಷೆಯಿದೆ. ಮೂರು ದಿನಗಳ ಪಂದ್ಯದ ನಂತರ, ತಂಡವು ಗಾಲೆಗೆ ಪ್ರಯಾಣ ಬೆಳೆಸಲಿದ್ದು, ಆಗಸ್ಟ್ 15 ರಿಂದ ಗಾಲೆ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.

ತಿರುಪತಿಗೆ ತಿಮ್ಮಪ್ಪನಿಗೆ ಮುಡಿಕೊಟ್ಟ ಹಾರ್ದಿಕ್‌ ಪಾಂಡ್ಯ

ತಿರುಪತಿಗೆ ತಿಮ್ಮಪ್ಪನಿಗೆ ಮುಡಿಕೊಟ್ಟ ಹಾರ್ದಿಕ್‌ ಪಾಂಡ್ಯ

Hardik Pandya: ದೀರ್ಘಕಾಲದ ಅನುಪಸ್ಥಿತಿಯ ಹೊರತಾಗಿಯೂ, ಪಾಂಡ್ಯ ಭಾರತದ ಅತ್ಯಂತ ಪ್ರಭಾವಶಾಲಿ ವೈಟ್-ಬಾಲ್ ಕ್ರಿಕೆಟಿಗರಲ್ಲಿ ಒಬ್ಬರಾಗಿ ಉಳಿದಿದ್ದಾರೆ, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಪ್ರಭಾವ ಬೀರುವ ಜೊತೆಗೆ ಮೈದಾನದಲ್ಲಿ ನಾಯಕತ್ವವನ್ನು ನಿರ್ವಹಿಸುವ ಸಾಮರ್ಥ್ಯಕ್ಕೆ ಅವರು ಮೌಲ್ಯಯುತರಾಗಿದ್ದಾರೆ.

Loading...